*ಸಿದ್ದರಾಮಯ್ಯರನ್ನು ಗೆಲ್ಲಿಸಲು ತೋರಿಸಿದ ತಖ್ವಾ ಸಮುದಾಯವನ್ನು ಗೆಲ್ಲಿಸಲಿಕ್ಕೂ ತೋರಿಸುವ*
*ಸುನ್ನೀಟುಡೇ*
ಇಸ್ಲಾಮಿನಲ್ಲಿ ಬೆದರಿಕೆ, ನಿಂದನೆ, ಹಿಯಾಲಿಸುವಿಕೆ, ಮಾನಛಿದ್ರತೆ, ಅಸಹನೆ, ಕೋಪ, ಮತ್ಸರ ಇಲ್ಲಾ ಎಂದು ಮದ್ರಸದಲ್ಲಿ ಉಸ್ತಾದರು ಹೇಳಿದ್ದ ನೆನಪು. ಇದನ್ನು ಕಳೆದ ಕೆಲವು ದಿನದ ಹಿಂದೆ ಒಬ್ಬರು ವಿದ್ವಾಂಸರಲ್ಲಿ ಹೇಳುತ್ತಾ ಈ ಎಲ್ಲಾ ಸ್ವಭಾವಕ್ಕಿಂತ ಮಿಗಿಲಾಗಿ ಮುಸ್ಲಿಮನಲ್ಲಿ ಏನು ಇರಬೇಕು ಎಂದು ಕೇಳಿದೆ. ವಿದ್ವಾಂಸರು ತುಂಬಾ ಹೊತ್ತು ಆಲೋಚಿಸಿದರು ಅನಂತರ ಹೀಗೆ ಹೇಳಿದರು *'ಇಸ್ಲಾಮಿನಲ್ಲಿ ಉಪದೇಶ, ಸುವಾರ್ತೆ ಮತ್ತು ಎಚ್ಚರಿಕೆ ಇದೆ'.* ಪ್ರವಾದಿ ಮುಹಮ್ಮದ್ ( ಸ) ರು ಎಲ್ಲಾ ಕಠಿಣ ಸನ್ನೀವೇಶದಲ್ಲೂ ಉಪದೇಶಕರಾಗಿದ್ದರು. ಜನರನ್ನು ಸನ್ಮಾರ್ಗಕ್ಕೆ ಮತ್ತು ಸತ್ಕರ್ಮಕ್ಕೆ ಕರೆಯುತ್ತಾ ಅವರು ಸುವಾರ್ತೆಯನ್ನು ಬಿತ್ತರಿಸುತ್ತಿದ್ದರು. ಮನುಷ್ಯನ ಜೀವನದ ಮಹತ್ವ ಮತ್ತು ಬದುಕಿನ ಗುರಿಯ ಕುರಿತು ವಿವರಿಸುತ್ತಾ ಅಲ್ಲಾಹನ ಕುರಿತು ಹಾಗೇ ಪರಲೋಕದ ಕುರಿತು ಎಚ್ಚರಿಸುತ್ತಿದ್ದರು. *ಪ್ರವಾದಿ (ಸ)ರನ್ನು ಅದೇ ರೀತಿಯಲ್ಲಿ ಸಾಕ್ಷಿಯಾಗಿಸಿ ಕ್ಷಮೆ - ಸಹನೆ - ಪ್ರೇಮ - ಪರೋಪಕಾರದ ಆಯುಧವನ್ನು ಉಪಯೋಗಿಸಿ ಭೂಮಿ ಮತ್ತು ಪರಲೋಕದಲ್ಲಿ ನಮಗೆ ಗೆಲ್ಲಬಹುದಾಗಿದೆ.* ಇಲ್ಲವಾದರೆ ಆಪತ್ತುಗಳು ನಮ್ಮನ್ನು ಎರಡು ಲೋಕದಲ್ಲೂ ಭೀಕರ ಅವಮಾನಕ್ಕೆ ತಲ್ಲಬಹುದು.
ಗುರುಗಳ ಮಾತು ನನಗೆ ಹಿತ ಎನಿಸಿತು. ಈ ಮಾತನ್ನು ನಾನು ಒಬ್ಬರು ಮುಸ್ಲಿಮ್ ಪತ್ರಕರ್ತರಲ್ಲಿ ಹೇಳಿದೆ. ಅದನ್ನು ಕೇಳುತ್ತಾ ಪತ್ರಕರ್ತ ನನ್ನಲ್ಲಿ ಹೇಳಿದ ಗುರುಗಳು ಸರಿಯಾದ ವಿಚಾರವನ್ನೇ ಹೇಳಿದ್ದಾರೆ. *ಎಲ್ಲಿಯಾದರು ಈಗಿನ ಮುಸ್ಲಿಮರು ರಸೂಲರ ಕಾಲದಲ್ಲಿ ಮದೀನದಲ್ಲಿ ಇರುತ್ತಿದ್ದರೆ ನಮಗೆ ಮಕ್ಕಾದ ವಿಜಯ ಸಾಧ್ಯವಾಗುತ್ತಿರಲಿಲ್ಲ. ಮಕ್ಕಾದಲ್ಲಿ ಮುಸ್ಲಿಮರು ಇರುತ್ತಿರಲಿಲ್ಲ.*
ಪತ್ರಕರ್ತನ ಮಾತು ಸತ್ಯವಾಗಿತ್ತು. ಸಹನೆ - ಕ್ಷಮೆ - ಅನುಸರಣೆ - ತ್ಯಾಗ ನಮ್ಮಲ್ಲಿ ನಾಶವಾಗಿದೆ. ಸಿದ್ದರಾಮಯ್ಯರ ಮೇಲಿನ ಪ್ರೀತಿಗಾಗಿ ಒಟ್ಟು ಸಮುದಾಯವನ್ನು ಹೈಜಾಕ್ ಮಾಡಿಟ್ಟ ಸಮೂಹ, ಅಲ್ಲಾಹನ ಪ್ರೀತಿಗಾಗಿ ಇದನ್ನು ಮಾಡುತ್ತಿದ್ದರೆ ಎಷ್ಟು ಚೆನ್ನಾಗಿತ್ತು ಎಂದೂ ಭಾವಿಸಿದ್ದಿದೆ. ಕಾಂಗ್ರೇಸ್ಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಲೇಖನಿ - ಸಮಯ - ಜ್ಞಾನ - ಹಣ -ಸಂಘಟಿತ ಪ್ರಯತ್ನ- ಚರ್ಚೆ - ತರ್ಕ - ಹಠ ಎಲ್ಲವನ್ನೂ ದಾರೆ ಎರೆದ ಮುಸ್ಲಿಮ್ ಸಮೂಹದ ಇಚ್ಚಾಶಕ್ತಿ, ನಂಡೆ ಪೆಂಙಲ್ ನಂತಹ ಅಭಿಯಾನಕ್ಕೆ ಮುಡಿಪಾಗಿಟ್ಟಿದ್ದರೆ ಇಂದು 30 ಯಾಕೆ 24 ದಾಟಿದ ಯುವತಿಯರು ಈ ಸಮುದಾಯದಲ್ಲಿ ಇರುತ್ತಿರಲಿಲ್ಲ. *ರಾಜಕೀಯ ತಪ್ಪಲ್ಲ, ಆದರೆ ಅದು ನಮ್ಮ ಸಬಲೀಕರಣದ ಉದ್ದೇಶವನ್ನು ಮರೆತು ಇನ್ನೊಂದು ಪಕ್ಷದ ಮೇಲಿನ ಹಗೆ - ದ್ವೇಷ - ಮತ್ಸರಕ್ಕೆ ಉಪಶಮನ ಆಗಬಾರದು.* ಒಬ್ಬ ಬಜರಂಗಿ ಹಿಂದುಗಳನ್ನು ಬಿಜೆಪಿಗೆ ಬಲಾತ್ಕರಿಸುವುದು ಹೇಗೆ ತಪ್ಪೋ ಹಾಗೇ ಒಬ್ಬ ಮುಸ್ಲಿಮ್ ಮುಸ್ಲಿಮರನ್ನು ಕಾಂಗ್ರೇಸ್ಸ್ ಗೆ ಬಲಾತ್ಕರಿಸುವುದು ನನ್ನ ಪ್ರಕಾರ ತಪ್ಪಾಗಿದೆ.
ರಾಜಕೀಯ ಯಾಗದಲ್ಲಿ ತನು - ಮನ ಕೇಂದ್ರೀಕರಿಸಿ ಭ್ರಮೆಯ ಲೋಕದಲ್ಲಿ ಮಂಕು ಬಡಿದಿದ್ದ ಸಮುದಾಯದ ಕೆಲವು ವರ್ಗವನ್ನು ಬಡಿದೆಬ್ಬಿಸಲು ಸುನ್ನೀಟುಡೇ ಹಲವು ಸಂಚಿಕೆ ಲೇಖನ ಪ್ರಕಟಿಸಿತು. ಎಲ್ಲರೂ ಇದೆಲ್ಲ ಈಗ ಯಾಕೆ ಎಂದು ಕೇಳಿದ್ದರು. ಈಗ ನಮಗೆ ಸಿದ್ದರಾಮಯ್ಯ ಬರಬೇಕು. ಅದು ನಮ್ಮ ಏಕೈಕ ಪ್ರಾರ್ಥನೆ. 'ನೋಂಬು ನೆಕ್ಸ್ಟ್ ವರ್ಷ ಬಂಡ್ ಸಿದ್ದರಾಮಯ್ಯ ಬಂಡಿಲ್ಲ ಎಂದು ಹೇಳಿದ ವ್ಯಕ್ತಿಯೂ ನಮ್ಮ ಮಧ್ಯೆ ಇದ್ದಾರೆ'. *ಸಿದ್ದರಾಮಯ್ಯರನ್ನು ಗೆಲ್ಲಿಸಬೇಕು ಎಂದು ಅವಿರತ ಶ್ರಮಿಸಿದ ನಮಗೆ ಸಮುದಾಯವನ್ನು ಎಲ್ಲಾ ಕ್ಷೇತ್ರದಲ್ಲೂ ಗೆಲ್ಲಿಸಲು ಇದೇ ರೀತಿಯ ಛಲ ಮತ್ತು ಇಚ್ಚಾಶಕ್ತಿ ಇರುತ್ತಿದ್ದರೆ ಫಲಿತಾಂಶ ಅಭಿಮಾನ ತರಿಸುತ್ತಿತ್ತು.* ಅಲ್ಲಾಹನ ಕಲ್ಪನೆಯ ಮುಂದೆ ಎಲ್ಲವೂ ತಲೆ ಕೆಳಗಾಯಿತು. ಅಡಿಗೆ ಬಿದ್ದರೂ ಮೂಗು ಮೇಲೆ ಎನ್ನುವಂತೆ ಈಗ ಡಿಕೆ ಶಿವಕುಮಾರ್ ನಮ್ಮ ಸಮುದಾಯಕ್ಕೆ ನೇದಾವು ಆಗಿದ್ದಾರೆ. ನಮ್ಮೊಳಗಿನ ಹೃದಯ ಎಷ್ಟು ಮತಾಂಧವಾಗಿದೆ ಎನ್ನುವುದಕ್ಕೆ ಇದಕ್ಕಿಂದ ದೊಡ್ಡ ಉದಾಹರಣೆ ಬೇಕಿಲ್ಲ. ಸಂಘಪರಿವಾರವು ಹಿಂದೂಗಳಿಗೆ ಚುಚ್ಚಿದ ಕೋಮುವಾದದ ಇಂಜೆಕ್ಷನ್ ಮುಸ್ಲಿಮರ ಮೇಲೆ ಪ್ರಭಾವ ಬೀರಿದೆ. ಉಪದೇಶ ಮತ್ತು ಸುವಾರ್ತೆ ನೀಡಬೇಕಾದ ಕೌಮ್ ನ ಉಮ್ಮತ್ತುಗಳು ನಿಂಧನೆ - ಮಾನಹಾನಿ - ಹಗೆ -ತಮಾಷೆ- ಹಿಯಾಲಿಸುವಿಕೆಯಲ್ಲಿ ಮೈಮರೆತಿದೆ.
ಚುನಾವಣೆಯ ಮೊದಲು ಶಾಫಿ ಸಹದಿ - ಎಸ್.ಬೀ. ದಾರಿಮಿ- ಅಜೀಜ್ ದಾರಿಮಿ ಮುಂತಾದ ಉಲೆಮಾಗಳು ಸಿದ್ದರಾಮಯ್ಯರ ಬಳಿ ಹಾಗೇ ಕುಮಾರಸ್ವಾಮಿಯವರ ಬಳಿಗೆ ಹೋಗಿ ಮಾತುಕತೆ ನಡೆಸಿದ್ದರು. ಇದನ್ನು ಪ್ರಶ್ನಿಸಿ ಸುನ್ನೀ ಟುಡೇ ಮೂವರು ಉಲೆಮಾಗಳಲ್ಲೂ ಮಾತುಕತೆ ನಡೆಸಿತ್ತು. *ನೀವೇಕೆ ಯಡಿಯೂರಪ್ಪರ ಬಳಿ ಹೋಗಲಿಲ್ಲ ? ನಾಳೆ ಅವರು ಮುಖ್ಯಮಂತ್ರಿ ಆದರೆ ಏನು ಮಾಡುತ್ತೀರಿ ? ಚುನಾವಣೆಗೆ ಈ ಗಿಮಿಕ್ಕ್ ಯಾತಕ್ಕೆ ? ಸರಕಾರ ಇರುವಾಗ ಈ ಮೀಟಿಂಗ್ ಮಾಡದೆ ನಾಳೆ ಯಾರು ಅಧಿಕಾರಕ್ಕೆ ಬರುತ್ತಾರೆ ಎಂದು ಗೊತ್ತಿಲ್ಲದೆ ಈ ಮೀಟಿಂಗ್ ನ ಅಗತ್ಯ ಇದೆಯಾ ? ಎಂದು ಕೇಳಿದ್ದೆ.* ಸಮುದಾಯದ ಹಿತಕ್ಕಾಗಿ ಇಚ್ಚಾಶಕ್ತಿಯಿಂದ ಪ್ರಯತ್ನಿಸುವ ಈ ಮೂವರೂ ನಮಗೆ ಅತ್ಯುತ್ತಮ ಮಾಹಿತಿ ನೀಡಿದ್ದರು.
ಈ ಸಂದರ್ಭ ಶಾಫಿ ಸಹದಿಯವರು ನನ್ನಲ್ಲಿ ಸುದೀರ್ಘವಾದ ಮಾತುಕತೆ ನಡಿಸಿದರು. ಸರಕಾರ ಯಾರದ್ದು ಬೇಕಿದ್ದರೂ ಬರಲಿ, ಮುಸ್ಲಿಮರ ಸಮಗ್ರ ಕಲ್ಯಾಣ- ಅಭಿವೃದ್ದಿ - ಭದ್ರತೆ ಮತ್ತು ನ್ಯಾಯದ ರಕ್ಷಣೆಯನ್ನು ವೀಕ್ಷಿಸುವ ಸಮಿತಿಯನ್ನು ಅಸ್ತಿತ್ವಕ್ಕೆ ತರುತ್ತೇವೆ ಎಂದು ಅವರು ಹೇಳಿದರು. ಮಾತಿನ ಕೊನೆಯಲ್ಲಿ ಯಾವ ಸರಕಾರ ಬರುವ ನಿರೀಕ್ಷೆ ಇದೆ ಎಂದು ಕೇಳಿದ್ದೆ. *ಅದಕ್ಕೆ ಉತ್ತರಿಸಿದ ಶಾಫಿ ಸಹದಿಯವರು ಸಮ್ಮಿಶ್ರ ಸರಕಾರ ಬರುವ ಸಾಧ್ಯತೆ ಇದೆ. ಹಾಗೇನಾದರು ಆದರೆ ಕುಮಾರಸ್ವಾಮಿ ಮುಖ್ಯಮಂತ್ರಿ, ಜಿ.ಪರಮೇಶ್ವರ್ ಉಪ ಮುಖ್ಯಮಂತ್ರಿ ಆಗುವ ಸಾಧ್ಯತೆ ಇದೆ ಎಂದರು.* ಅದು ಅವರು, ಅರಿತ ಹಾಗೇ ಬೆರೆತ ರಾಜಕೀಯ ವಲಯದ ಅಭಿಪ್ರಾಯವಾಗಿತ್ತು. ಸಾಧ್ಯತೆಗಳು ನಿಜವಾಗುವ ಸಂಭವಗಳ ಬಗ್ಗೆ ಆಳವಾಗಿ ಅವರು ನಮಗೆ ವಿವರಿಸಿದರು. ಅವರ ಅಭಿಪ್ರಾಯವನ್ನು ನಾನು ಯಥಾವತ್ ನ್ಯೂಸ್ ಕನ್ನಡದಲ್ಲಿ ಪ್ರಕಟಿಸಿದ್ದೆ.
ಒಬ್ಬ ವ್ಯಕ್ತಿ ಹೇಳಿದ ಕಾರಣಕ್ಕೋ ಅಥವಾ ಒಬ್ಬ ವ್ಯಕ್ತಿ ಬರೆದ ಕಾರಣಕ್ಕೋ ಇಲ್ಲಿ ಯಾರು ಸಿ.ಎಂ ಅಥವಾ ಡಿಸಿಎಂ ಆಗುವುದಿಲ್ಲ. ಕಾಕತಾಳೀಯವಾಗಿ ಬರೆದದ್ದು ನಿಜವಾದರೆ ಅದು ವಿಶೇಷ ಮಾನ್ಯತೆ ಪಡೆಯುವ ಸಂಭವವೂ ಅಲ್ಲ. ಉಲೆಮಾಗಳು ರಾಜಕೀಯ ಪಾಂಡಿತ್ಯ ಹೊಂದುವುದು ಮಹಾ ಅಪರಾಧವೂ ಅಲ್ಲ. *ವಿಚಾರಗಳು ಮತ್ತು ಅಭಿಪ್ರಾಯಗಳು ಇದೇ ಆಗಿರಬೇಕು ಎಂದು ಒತ್ತಡ ಹಾಕುವುದು ಮತ್ತು ಭಾರತದಲ್ಲಿ ಇಂತಹುದೇ ಆಹಾರ ಸೇವಿಸಬೇಕು ಎಂದು ಬೆದರಿಕೆ ಹಾಕುವುದು ಎರಡೂ ಒಂದೇ ರೀತಿಯ ಸ್ವಭಾವ ಆಗಿದೆ.*
ಉಪದೇಶ - ಸುವಾರ್ತೆ - ಎಚ್ಚರಿಕೆ ಕೊಡಬೇಕಾದ ಕೌಮಿನ ಉಮ್ಮತ್ತುಗಳು ಸಿದ್ದರಾಮಯ್ಯರ ಮೇಲಿದ್ದ ಅಭಿಮಾನದಿಂದ ಅಂಧವಾಗಿ ನಮ್ಮ ಮೇಲೆ ಮುಗಿ ಬಿದ್ದಿತು. ಶಾಫಿ ಸಹದಿಯವರನ್ನು ಮಾನಸಿಕವಾಗಿ ಹಾಗೇ ನೈತಿಕವಾಗಿ ಕುಗ್ಗಿಸಿ ಹೇಳಿಕೆಯನ್ನೂ ಬರೆಯಿಸಿತು. ಕೇಸರೀ ಶಾಲು ಹಾಕಿದ್ದಕ್ಕೆ ಹಾಗೇ ಕಾಂಗ್ರೇಸ್ಸ್ ಗೆ ಹಿಂದುಗಳನ್ನು ಕರೆಯುವುದನ್ನು ವಿರೋಧಿಸಿ ಮತಾಂದ ಯುವಕನೊಬ್ಬ ಹರಡಿದ ಆಡಿಯೋವನ್ನು ಮಹಾ ಅಕ್ರಮ ಎಂದು ಪ್ರಚಾರ ಮಾಡಿದ್ದ ಸಮುದಾಯ, ಕಾಂಗ್ರೆಸ್ಸ್ ನ ವಿರುದ್ದ ಮಾತನಾಡುವ ಮುಸ್ಲಿಮರನ್ನು ಭಯಪಡಿಸಿದ್ದು ಮತ್ತು ಅವಮಾನಿಸಿದ ಜಾತ್ಯಾತೀತವನ್ನು ಒಪ್ಪುವಂತದ್ದಲ್ಲ.
ಮಹಾತ್ಮರಾದ ಮಾಲಿಕುದಿನಾರ್ ಕಾಲದಲ್ಲಿ ನಮ್ಮಂತಹ ಮುಸ್ಲಿಮರು ಇರುತ್ತಿದ್ದರೆ ನಮ್ಮ ಸ್ಥಿತಿ ಏನಾಗುತ್ತಿತ್ತು ? ನಾವು ಸೋಶಿಯಲ್ ಮೀಡಿಯಾ ಹಾಗೇ ವಾಟ್ಸಾಪ್ ಗಳಲ್ಲಿ ಹರಡುತ್ತಿರುವುದು ಏನನ್ನು ? ಮೋದಿಯನ್ನು ಹಾಗೇ ಬಿಜೆಪಿಗರನ್ನು ಎದುರಿಸುವುದು ಮತ್ತು ಹಿಯಾಲಿಸುವುದಕ್ಕೆ ನಾವು ಹುಟ್ಟಿದವರಾ ? ಹೀಗೇ ಹಿಯಾಲಿಸಿ - ನಿಂಧಿಸಿ - ಬೆದರಿಸಿ ಕರಾವಳಿಯಲ್ಲಿ ಮುಸ್ಲಿಮರ ಪರಮ ಪ್ರೀತಿಯ ನಾಯಕ
ಸಿದ್ದರಾಮಯ್ಯರ ಪಕ್ಷದ ನಾಮಾಶೇಷ ಅಗಿರುವುದು ನಮ್ಮಿಂದಲೇ ಎಂದು ನಾನು ಹೇಳಿದರೆ ನೀವು ನನ್ನ ಮೈಮೇಲೆ ಬೀಳುತ್ತೀರಾ ? ಕಾಂಗ್ರೇಸ್ಸ್ ಪಕ್ಷದ ಐಟೀ ಸೆಲ್ ಆಗಿ ಕಾರ್ಯಾಚರಿಸುವ ನಮಗೆ ಯಾವ ಲಾಭ ಸಿಗುತ್ತಿದೆ ? ತಮಾಷೆ - ಹಾಸ್ಯ - ಅವಮಾನ ಮಾಡಿ ನಾವು ಒಂದು ಭೃಹತ್ತ್ ಸಮೂಹದ ಹೃದಯದಲ್ಲಿ ಹಗೆ ಬಿತ್ತುತ್ತಿದ್ದೇವೆ. *ಪ್ರೀತಿ -ಪ್ರೇಮ - ಅನುಕಂಪ ಹರಡಬೇಕಾದ ನಾವು ಯಾವ ಲಾಭಕ್ಕಾಗಿ ಹೀಗೇ ಆಗಿದ್ದೇವೆ ?* ಕಾಂಗ್ರೇಸ್ಸ್ ಮತ್ತು ಜೆಡಿಎಸ್ಸ್ ಒಂದಾದರೆ ನಮಗೆ ಭೂಮಿಯಲ್ಲಿ ಗೌರವ ಸಿಗುವುದೇ ? ನಮಗೆ ಸ್ವರ್ಗ ಸ್ಥಿರವಾಯಿತೇ ? ಸಮುದಾಯದ ಒಳಗೆ ಸಾವಿರಾರು ಸಮಸ್ಯೆ ಇದೆ. ಇದರ ನಿವಾರಣೆಗೆ ಸಂಘಟಿತರಾಗ ಬಹುದೇ? ಸಂಘಟಿತರಾಗಲು ಬೆದರಿಸ ಬಹುದೇ ? ಪ್ರಾರ್ಥಿಸಬಹುದೇ ? ಲೇಖನ ಬರೆಯ ಬಹುದೇ ? ವಾಟ್ಸಾಪ್ ಗೂಪುಗಳನ್ನು ಮಾಡಿ ಚರ್ಚಿಸಿ ಪ್ರಾಯೋಗಿಕ ಪ್ರಯತ್ನಕ್ಕೆ ಮುನ್ನಡೆ ಇಡಬಹುದೇ ? ಹಾಗದರೆ ಕೇಳಿ ಮೂರು ಪ್ರಮುಖ ಸಮಸ್ಯೆಗಳನ್ನು ಹೇಳುತ್ತೇನೆ.
1) ಕರಾವಳಿಯ ಮುಸ್ಲಿಮರಲ್ಲಿ 20 ಮದುವೆಗಳಲ್ಲಿ ಸುಮಾರು 14 ಮದುವೆ ಸಂಬಂಧಗಳು ಬಿರುಕು ಬೀಳುತ್ತಿದೆ. ಡೈವೊರ್ಸ್ ಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಿಧ್ಯಾ ಸಂಪನ್ನ ಯುವತಿಯರೇ ಮೇಲುಗೈ, ಕುಟುಂಬ ವ್ಯವಸ್ಥೆ ನಾಶವಾದರೆ ಇಸ್ಲಾಮ್ ಅಸ್ತಿತ್ವ ಆತಂಕಿತ.
2) ಮುಸ್ಲಿಮ್ ಯುವಕರು ಹತ್ತನೇ ತರಗತಿಯಲ್ಲಿ ಡ್ರಾಪ್ ಔಟ್ ಆಗುತ್ತಿದ್ದಾರೆ. ಯುವತಿಯರ ಶಿಕ್ಷಣ ಮಟ್ಟ ಹೆಚ್ಚುತ್ತಿದೆ. ಮದುವೆ ಸಂಬಂಧಗಳು ಮತ್ತು ಇಂಕಂ ಸೋರ್ಸ್ ಬಗ್ಗೆ ಅಸಮಾನತೆ ಇದೆ. ಯುವತಿ ದುಡಿಯಲು ಹೆಚ್ಚು ಆಸಕ್ತಳಾಗಿದ್ದಾಳೆ. ಅದಕ್ಕೆ ಕಾರಣ ಬೌತಿಕ ಆಯ್ಕೆಗಳು ಎಂಬುವುದು ವಿಷಾಧನೀಯ.
3) ಮುಸ್ಲಿಮ್ ಶಾಲಾ ಕಾಲೇಜು ವಿಧ್ಯಾರ್ಥಿಗಳಲ್ಲಿ ಅಮಲು ಪದಾರ್ಥದ ಚಟ ಹೆಚ್ಚುತ್ತಿದೆ. ಹೆತ್ತವರ ಹಿಡಿತ ತಪ್ಪಿ ಹೋಗಿರುವ 70% ಯುವಕರ ಭವಿಷ್ಯವನ್ನು ಒಮ್ಮೆ ಕಲ್ಪಿಸಿ ನೋಡಿ.
ಎಡಬದಿಯಲ್ಲಿ ಸೀನಿದರೆ ಹರಾಮ್ ಎಂದು ಅದಕ್ಕೆ ಹದೀಸ್ ಹುಡುಕುವ ಜನರಿಗೆ , ಬಿಜೆಪಿ ಬಂದರೆ ಅಪಾಯ ಎಂದು ಅದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಅಕ್ಷರ ಸಮರ ನಡೆಸುವವರಿಗೆ, ಎಂ.ಆರ್.ಎಂ ಗಳನ್ನೂ , ಧರ್ಮ ಭ್ರಷ್ಟರನ್ನೂ, ಸಮುದಾಯ ಸ್ನೇಹಿಗಳನ್ನು ಹುಡುಕುವ ದುರ್ಭಿನಿಗಳಿಗೆ ಈ ಮೇಲೆ ಹೇಳಿದ ಮೂರು ದುರಂತದಿಂದ ಸಮುದಾಯವನ್ನು ಸರಿದಾರಿಗೆ ತರಲು ಸಾಧ್ಯವಿದ್ದರೆ ಹೇಳಿ....
🏹
*ಸುನ್ನೀಟುಡೇ*