ಅಲ್ಲಾಹು ಮುಸ್ಲಿಮರ ದೇವನಲ್ಲ-:ಕೂರ್ನಡ್ಕ ಖತೀಬ್
📝ಸುನ್ನೀಟುಡೇ
ಈ ಜಗತ್ತಿಗೆ ಮುಸ್ಲಿಮರ ಭಯವಿಲ್ಲ ಆದರೆ ಇಸ್ಲಾಮಿನ ಭಯವಿದೆ ಕಾರಣ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಧರ್ಮ ಇಸ್ಲಾಮ್ ಆಗಿದೆ ಎಂದು ಕೂರ್ನಡ್ಕ ಖತೀಬರಾದ ಅಬುಬಕ್ಕರ್ ಸಿದ್ದೀಕ್ ಜಲಾಲಿ ಹೇಳಿದರು ಅವರಿಂದು ಜುಮ್ಮಾ ಭಾಷಣದಲ್ಲಿ ಮಾತನಾಡುತ್ತಾ ಮುಸ್ಲಿಮರು ಇಸ್ಲಾಮಿನ ಆದೇಶ ಮತ್ತು ಜೀವನ ಪದ್ದತಿಯೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಹಾಗಾಗಿ ಜಗತ್ತಿನಲ್ಲಿ ಮುಸ್ಲಿಮರು ನಿಸ್ಸಾಹಾಯಕರಾಗಿದ್ದಾರೆ ಎಂದರು.
ವಿಶ್ವಶಾಂತಿ ಮತ್ತು ಮಾನವ ಮೋಕ್ಷವಿರುವ ಇಸ್ಲಾಮಿನತ್ತ ಜಗತ್ತಿನ ವಿಧ್ಯಾವಂತ ಸಮೂಹ ಆಕರ್ಶಿತರಾಗುತ್ತಿದ್ದಾರೆ.ವಿದ್ವಂಸರು-ನಾಯಕರು-ನಟರು-ಕ್ರೀಡಾಪಟುಗಳು ಇಸ್ಲಾಮ್ ಸ್ವೀಕರಿಸುತ್ತಿದ್ದಾರೆ.ಪ್ರವಾದಿ ಮುಹಮ್ಮದ್(ಸ)ರ ಜೀವನ ಸಂದೇಶ ಓದಿದ ಎಲ್ಲರೂ ಇಸ್ಲಾಮನ್ನು ಇಷ್ಟಪಡುತ್ತಾರೆ.ಹಾಗಾಗಿ ಪವಿತ್ರ ಕುರ್ ಆನ್ ವಚನ ಮತ್ತು ಪ್ರವಾದಿ ಸಂದೇಶವನ್ನು ತಿಳಿದಿರುವ ಭಾಷೆಯಲ್ಲಿ ಅವಕಾಶ ಇರುವ ಮಾಧ್ಯಮದ ಮೂಲಕ ಜನರಿಗೆ ತಲುಪಿಸಿಕೊಡಿ ಎಂದು ಸಮುದಾಯಕ್ಕೆ ಕರೆ ನೀಡಿದ ಖತೀಬರು ಇಸ್ಲಾಮಿನ ಬಗ್ಗೆ ಜಗತ್ತಿಗಿರುವ ತಪ್ಪು ಕಲ್ಪನೆಯನ್ನು ನಿವಾರಿಸಲು ಆಂದೋಲನದ ರೀತಿಯಲ್ಲಿ ಸಜ್ಜಾಗಿರಿ ಎಂದರು.
ಯಾರಿಗೆ ಅಲ್ಲಾಹನನ್ನು ಕಾಣಲು ಬಯಕೆ ಇದೆ.ಯಾರು ಅಲ್ಲಾಹನ ತೃಪ್ತಿ ಪಡಿಸಲು ಅವಕಾಶಕ್ಕಾಗಿ ಕಾಯುತ್ತಿದ್ದೀರಿ ಅವರು ಅಲ್ಲಾಹನ ಧರ್ಮವನ್ನು ಪಾಲಿಸಿ ಅದರ ಪ್ರಚಾರವನ್ನು ಮಾಡಿರಿ.ಅಲ್ಲಾಹನ ಹೆಸರಿನಲ್ಲಿ ಬಡವರಿಗೆ-ನಿರಾಶ್ರಿತರಿಗೆ-ಅನಾಥರಿಗೆ-ವಿಪತ್ತಿನಲ್ಲಿರುವ ಜನರಿಗೆ ನೆರವಾಗಿರಿ ಎಂದ ಖತೀಬರು ನಾವು ಇಸ್ಲಾಮಿನ ಮಾದರಿ ವ್ಯಕ್ತಿತ್ವ ಮತ್ತು ಇಸ್ಲಾಮಿನ ಪ್ರಚಾರಕರು ಆಗುವ ಅನಿವಾರ್ಯತೆ ಇದೆ ಎಂದರು.
ಕಾಲ ಮತ್ತು ವಿಚಾರದೊಂದಿಗೆ ಇಸ್ಲಾಮನ್ನು ಪ್ರಚಾರ ಮಾಡಬಹುದು. ಸ್ವಚ್ಚ ಭಾರತ್ ಅಭಿಯಾನ ಮಾಡಿದಾಗ ಅದು ದೊಡ್ಡ ಸಂಭವವಾಯಿತು. ಕೇವಲ ಪೋಟೋ ಗಳಿಗೆ ಸೀಮಿತವಾದ ಅಭಿಯಾನ ಅಷ್ಟು ಮಹತ್ವ ಪಡೆದಿದ್ದರೆ ಸ್ವಚ್ಚತೆಯನ್ನು ಇಮಾನಿನ ಭಾಗವಾಗಿದೆ ಎಂಬ ಸಂಕಲ್ಪ ಕಲಿಸಿದ ಇಸ್ಲಾಮಿನ ವಿಚಾರ ಇನ್ನೆಷ್ಟು ಮಹತ್ವ ಪಡೆಯಬಹುದಾಗಿತ್ತು ಎಂದ ಖತೀಬರು ಬಿಹಾರದಲ್ಲಿ ಮಧ್ಯಪಾನ ನಿಷೇಧ ಮಾಡಿದಾಗ ಅದು ದೊಡ್ಡ ಸಾದನೆಯಾಯಿತು ಇಸ್ಲಾಮ್ ಮಧ್ಯಪಾನವನ್ನು 1400 ವರ್ಷದ ಮೊದಲೇ ನಿಷೇಧಿಸಿದೆ ಎಂಬ ಸತ್ಯ ನೀವು ಸೋಸಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಿರಿ ಎಂದು ಖತೀಬರು ಸಲಹೆ ನೀಡಿದರು.
ಹೆಣ್ಣು ಬ್ರೂಣ ಹತ್ಯೆ ದೇಶದಲ್ಲಿ ಬಹು ಚರ್ಚಿತ ವಿಚಾರ. ಹೆಣ್ಣು ಬ್ರೂಣ ಹತ್ಯೆ ಮಹಾಪಾಪ ಎಂಬ ವಚನವನ್ನು ಕುರ್ ಆನ್ ಮೂಲಕ ಮದರಸ ಶಿಕ್ಷಣದಲ್ಲೇ ಕಲಿಸಲಾಗುತ್ತಿದೆ.
ನಮ್ಮ ಮಕ್ಕಳಿಂದ ಈ ದೇಶದ ಜನರು ಕಲಿಯಲು ಬಹಳಷ್ಟಿದೆ ಎಂದ ಖತೀಬರು ಪವಿತ್ರ ಕುರಾನಲ್ಲಿ ಅಲ್ಲಾಹನು ಹೇಳುತ್ತಾನೆ ಒಬ್ಬ ಅಮಾಯಕ ಮನುಷ್ಯನನ್ನು ಕೊಂದರೆ ಇಡೀ ಮನುಷ್ಯ ಕುಲವನ್ನು ಕೊಂದ ಪಾಪ ಹಾಗೇ ಒಬ್ಬನ ಜೀವ ಉಳಿಸಿದರೆ ಇಡೀ ಮಾನವ ಕುಲಕ್ಕೆ ಜೀವದಾನ ಮಾಡಿದ ಪ್ರತಿಫಲ ಎಂದು. ಇಂಥಹ ಮಾನವ ಮೌಲ್ಯ ಬೋದಿಸಿ ಕೊಡುವ ಧರ್ಮ ಇದ್ದರೆ ಅದು ಇಸ್ಲಾಮ್ ಮಾತ್ರ ಎಂದು ಖತೀಬರು ಹೇಳಿದರು.
ಇಸ್ಲಾಮ್ 1400 ವರ್ಷದ ಇತಿಹಾಸ ಇರುವ ಧರ್ಮವಲ್ಲ. ಅದು ಜಗತ್ತಿನ ಮೊದಲ ಮಾನವನೊಂದಿಗೆ ಭೂಮಿಗೆ ಇಳಿದು ಬಂದ ಧರ್ಮ.ಅದರ ಮೂಲ ಆಶಯ ಏಕದೇವ ಆರಾಧನೆ. ಪರೋಕ್ಷದಲ್ಲಿ ವಿಶ್ವಾಸ. ದೇವನನ್ನು ಕಾಣದೆಯೇ ಆತ್ಮಾರ್ಥವಾಗಿ ಅನುಸರಿಸುವುದು.ಇದು ಆದಿಯಿಂದಲೂ ಇದ್ದ ಧರ್ಮ ಮತ್ತು ವಿಶ್ವಾಸ.ಅದೇ ರೀತಿ ಅಲ್ಲಾಹು ಮುಸ್ಲಿಮರಿಗೆ ಮಾತ್ರ ದೇವನಲ್ಲ ಅಲ್ಲಾಹು ಎಲ್ಲಾ ಮನುಷ್ಯರ ದೇವನಾಗಿದ್ದಾನೆ. ಸರ್ವಸೃಷ್ಟಿಗಳ ದೇವನಾಗಿದ್ದಾನೆ.ಇದನ್ನೇ ಕುರ್ ಆನ್ ವಚನಗಳು ಸಮರ್ಥಿಸುತ್ತದೆ. ಪ್ರತೀಯೊಬ್ಬರು ಅವರಿಗೆ ತಿಳಿದ ಭಾಷೆಯಲ್ಲಿ ಕುರ್ ಅನ್ ಅರ್ಥ ಸಹಿತ ಓದಿರಿ.ಪ್ರವಾದಿ ಸಂದೇಶವನ್ನು ಓದಿರಿ ಮತ್ತು ಅನುಸರಿಸಿರಿ ಅದುವೇ ನಮಗೆ ವಿಜಯಕ್ಕಿರುವ ದಾರಿ ಎಂದು ಖತೀಬರು ಹೇಳಿದರು.
SunniToday📝