ಗುರುವಾರ, ಜೂನ್ 30, 2016

ಭಾರತದ ಉತ್ತಮ ದಿನಗಳಲ್ಲಿ ಮುಸ್ಲಿಮರ ಕೊಡುಗೆ ಹೆಚ್ಚು ಕಾಣಬೇಕು

ಭಾರತದ ಉತ್ತಮ ದಿನಗಳಲ್ಲಿ ಮುಸ್ಲಿಮರ ಕೊಡುಗೆ ಹೆಚ್ಚು ಕಾಣಬೇಕು-: ಝಕರಿಯಾ ಜೋಕಟ್ಟೆ

ಭಾರತಕ್ಕೆ ಮುಸ್ಲಿಮರು ನೀಡಿದ ಕೊಡುಗೆಗಳು ಅನನ್ಯ. ದೇಶದ ಒಂದು ಭಾಗವಾಗಿರುವ ಮುಸ್ಲಿಮ್ ಸಮುದಾಯ ಈ ದೇಶದ ಎಲ್ಲಾ ವರ್ಗದಿಂದ ಪ್ರಶಂಶಿಸಲ್ಪಡುವ ಸಾದನೆಗಳನ್ನು ಮಾಡಬೇಕು ಎಂದು ಹಿದಾಯ ಪೌಂಡೇಶನ್ ಇದರ ಸಂಚಾಲಕರಾದ ಝಕರಿಯಾ ಜೋಕಟ್ಟೆ ರಂಜಾನ್ ಸಂದೇಶದಲ್ಲಿ ತಿಳಿಸಿದ್ದಾರೆ. ಇಸ್ಲಾಮಿನ ಅನುಯಾಯಿಗಳು ಲೋಕ ಕಲ್ಯಾಣಕ್ಕೆ ಇರುವವರು. ದೇವನ ಸಂಪ್ರೀತಿಗಾಗಿ ಅವರು ಬದುಕುವವರು. ಲೋಕ ಎಂದರೆ ಅದು ಕೇವಲ ಮುಸ್ಲಿಮ್ ಸಮುದಾಯವಲ್ಲ. ಜಗತ್ತಿನಲ್ಲಿರುವ ಎಲ್ಲಾ ಜನರು ಈ ಕಲ್ಯಾಣ ಯೋಜನೆಗಳ ಫಲಾನಿಭವಿಗಳಾಗಬೇಕು ಎಂದರು.

ಭಾರತವು ಉತ್ತಮ ದಿನಗಳ  ನಿರೀಕ್ಷೆಯಲ್ಲಿದೆ. ಯುವಕರು ಹಾಗೂ ವಿಧ್ಯಾವಂತ ಸಮಾಜವು ದೇಶದ ಅಭಿವೃದ್ದಿಯ ಕನಸು ಕಾಣುತ್ತಿದ್ದಾರೆ. ಮುಸ್ಲಿಮ್ ಯುವಕರಲ್ಲಿ ಅತೀ ಹೆಚ್ಚು ಸಾಮಾಜಿಕ ಸ್ಪಂದನ ಕಾಣುತ್ತಿದ್ದೇವೆ.  ಮುಸ್ಲಿಮ್ ಯುವಕರು ಮತ್ತು ಯುವ ಉಧ್ಯಮಿಗಳು ನನ್ನ ಸಮುದಾಯ ಮತ್ತು ನನ್ನ ದೇಶ ಎಂದು ಜನ ಕಲ್ಯಾಣ ಕಾರ್ಯದಲ್ಲಿ ತೊಡಗಿರುವುದನ್ನು ಕಾಣುವಾಗ ಹೆಮ್ಮೆ ಎನಿಸುತ್ತದೆ. ಭಾರತಕ್ಕೆ ಅತ್ಯುತ್ತಮ ಮಾದರಿ ಮುಸ್ಲಿಮರನ್ನು ಕೊಡುಗೆಯಾಗಿ ನೀಡುವ ಎಲ್ಲರ ಪ್ರಯತ್ನವೂ ಶ್ಲಾಘನೀಯವಾಗಿದೆ. ಉತ್ತಮ ಸಮಾಜದ ನಿರ್ಮಾಣದಿಂದಲೇ ಉತ್ತಮ ದಿನಗಳು ನಮಗೆ ಸಿಗಬಹುದು ಅದಕ್ಕೆ ಸಮಾಜದ ಎಲ್ಲಾ ವರ್ಗದ ಜನರ ಹೃದಯ ಜೋಡಿಸುವ ಮತ್ತು ಬದುಕು ಕಟ್ಟುವ ಕೆಲಸ ನಮ್ಮಿಂದ ಆಗಬೇಕು ಎಂದ ಝಕರಿಯಾ ಹಾಜಿ  ಮೌಲ್ಯಾಧಾರಿತ ಮತ್ತು ಕರುಣೆಯ ಹೃದಯಗಳನ್ನು ಸೃಷ್ಟಿಸುವ ಕೆಲಸ ಅತೀ ಅವಶ್ಯಕವಾಗಿ ಆಗ ಬೇಕು ಎಂದರು.

ಸಾಚಾರ್ ಕಮಿಟಿಯು 2006ರಲ್ಲಿ ಮುಸ್ಲಿಮರ ಸ್ಥಿತಿಗತಿ ಅಧ್ಯಯನ ಮಾಡಿ ಮುಸ್ಲಿಮರು ದೇಶದಲ್ಲಿ ಹಿಂದುಳಿದ ವರ್ಗಕ್ಕಿಂತ ತಲಸ್ಥರದಲ್ಲಿದ್ದಾರೆ ಎಂದು ವರದಿ ಮಾಡಿತು. ಈ ವರದಿಯ ಸತ್ಯಾಸತ್ಯತೆತನ್ನು ಹಿದಾಯ ಪೌಂಡೇಶನ್ ಕರಾವಳಿಯ ಜನರಿಗೆ ವಿವರಿಸಿ ಕೊಟ್ಟಿತು. ಗ್ರಾಮೀಣ ಭಾಗದಲ್ಲಿರುವ ಮುಸ್ಲಿಮರ ಸ್ಥಿತಿಗಳನ್ನು ಬದಲಾಯಿಸಲು ಎಲ್ಲಾ ಸಂಘ ಸಂಸ್ಥೆಗಳ ಸಹಯೋಗ ಪಡೆಯಿತು. ಈ ಮೂಲಕ ಕರಾವಳಿ ಜಿಲ್ಲೆಯ ಮುಸ್ಲಿಮರನ್ನು ಹಸಿವು ಮುಕ್ತ ಹಾಗೂ ಬಡತನ ಮುಕ್ತರನ್ನಾಗಿಸಲು ಪ್ರಯತ್ನಿಸಿತು. ಹಿದಾಯ ಪೌಂಡೇಶನ್ ಯಾವ ಉದ್ದೇಶದಿಂದ ತನ್ನ ಕಾರ್ಯಕ್ರಮ ಅನುಷ್ಟಾಗೊಳಿಸಿತೋ ಅದು ಇಂದು ಸಮರೋಪಾದಿಯಲ್ಲಿ ನಡೆಯುತ್ತಿದೆ. ಎಲ್ಲಾ ಸಂಘಸಂಸ್ಥೆ ಮತ್ತು ನಿಸ್ವಾರ್ಥ ಮನೋಭಾವದ ಯುವ ಉಧ್ಯಮಿಗಳು ಹಾಗೂ ಸಾಮಾನ್ಯ ಸೇವಕರು ಹಳ್ಳಿ-ಗ್ರಾಮಗಳಲ್ಲಿ ಆಹಾರ ವಿತರಣೆ -ಮನೆನಿರ್ಮಾಣ- ಶೌಚಾಲಯ ನಿರ್ಮಾಣ-ಪ್ರಾಯದ ಹೆಣ್ಣುಮಕ್ಕಳ ಮದುವೆ- ಸಾಮೂಹಿಕ ವಿವಾಹ-ಚಿಕಿತ್ಸಾ ನೆರವು-ಸಂತ್ರಸ್ತರ ಕಲ್ಯಾಣ-ಇಸ್ಲಾಮೀ ಜೀವನ ಮೌಲ್ಯ ಪ್ರಚಾರ ಸೇರಿದಂತೆ ಶಿಕ್ಷಣ ನೆರವು-ಉನ್ನತ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತಾ ಕಲ್ಯಾಣ ಸಮಾಜದ ನಿರ್ಮಾಣದ ರುವಾರಿಗಳಾಗುತ್ತಿದ್ದಾರೆ. ಉಲಮಾಗಳು ಮತ್ತು ಯುವಕರು ಹೆಚ್ಚು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.ಬೃಹತ್ತ್ ಸಮುದಾಯ ಮತ್ತು ಸಮಾಜ ಸೇವಾ ಕೇಂದ್ರಗಳು, ಶಿಕ್ಷಣ ಕೇಂದ್ರಗಳು ನಿರ್ಮಾಣವಾಗುತ್ತಿದೆ. ಇದು ಒಂದು ಸಂಸ್ಥೆ ಅಥವಾ ವ್ಯಕ್ತಿಯ ಸಾದನೆಯಲ್ಲ. ಪ್ರತೀಯೊಬ್ಬರು ಇದರ ಪಾಲುದಾರರು. ಸಂಘಟಿತ ಪ್ರಯತ್ನ ಮತ್ತು ಸಮುದಾಯ ಸ್ನೇಹಕ್ಕೆ ಇದು ಖಂಡಿತಾ ಉದಾಹರಣೆಯಾಗಬಲ್ಲುದು.ಪ್ರತೀಯೊಬ್ಬರಿಗೂ ಈ ಸಂಧರ್ಭದಲ್ಲಿ ನಾನು ಪ್ರಾರ್ಥಿಸುತ್ತೇನೆ.

ಯುವ ಉಧ್ಯಮಿಗಳು ಹಾಗೂ ವೃತ್ತಿಪರರು ಸಮುದಾಯ ಮತ್ತು ದೇಶದ ಅಭಿವೃದ್ದಿಯ ಕಾರ್ಯದಲ್ಲಿ ನಿರಂತರ ಶ್ರಮಿಸಬೇಕು. ಭವಿಷ್ಯದ ತಲೆಮಾರಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಹಾಗೂ ಧಾರ್ಮಿಕ ಕಲ್ಯಾಣಕ್ಕೆ ಪ್ರಯೋಜನವಾಗುವ ಬೃಹತ್ತ್ ಯೋಜನೆಗಳನ್ನು ನಿರ್ಮಿಸಬೇಕು. ದೇಶದ ಎಲ್ಲಾ ವರ್ಗದ ಜನರು ಅದರ ಫಲಾನುಭವಿಗಳಾಗಬೇಕು. ಹಿದಾಯ ಪೌಂಡೇಶನ್ ಮುಂದಿನ ದಿನಗಳಲ್ಲಿ ಬೃಹತ್ತ್ ಸಮಾಜಸೇವಾ ಯೋಜನೆಗಳ ತಯಾರಿಯಲ್ಲಿದೆ. ಎಲ್ಲಾ ಜನರ ಪ್ರೋತ್ಸಾಹ ಹಾಗೂ ಸಹಕಾರ ಇದಕ್ಕೆ ಅತ್ಯಗತ್ಯ. ನಮಗಾಗಿ ಪ್ರಾರ್ಥಿಸಿ ಮತ್ತು ಕೈಜೋಡಿಸಿ...ಎಲ್ಲರಿಗೂ ರಂಜಾನ್ ಅನುಗ್ರಹ ಮತ್ತು ಪ್ರತಿಫಲ ದಿನದ ಉತ್ತಮ ಸತ್ಕರ್ಮವಾಗಲಿ ಆಮೀನ್.

ಝಕರಿಯಾ ಜೋಕಟ್ಟೆ
ಸಂಚಾಲಕರು
ಹಿದಾಯ ಪೌಂಡೇಶನ್