ಭಾನುವಾರ, ಜುಲೈ 31, 2016

ಐದು ರೂಪಾಯಿ

5 ರೂಪಾಯಿ ಸಂಬಳದಿಂದ ಶುರುವಾಗಿ   ಇಂದು ಅಮೆರಿಕಾದ  3 ಕಂಪನಿಯ ಒಡತಿಯಾದ ಜ್ಯೋತಿ ರೆಡ್ಡಿ

ಜೀವನದ ಯಾವುದೇ ಒಂದು ಅವಸ್ಥೆಯು ಸ್ಥಾಯಿಯಲ್ಲ .. ಇವತ್ತಿನ ಕಷ್ಟಗಳು ಜೀವನದ ಉದ್ದಕ್ಕೂ ಸಾಶ್ವತವಾಗಿ ಇರುವ ವ್ಯವಸ್ಥೆ ಅಲ್ಲ,ಬದಲಾವಣೆ ಇದ್ದೇ ಇರುತ್ತದೆ  ಆದರೆ ನಮ್ಮೊಳಗೆ ನಾವು ಬದಲಾವಣೆಯ ಶ್ವಾಸವನ್ನು ಎಳೆಯುವ ತನಕ ಎಂಬುದು ಮಾತ್ರ ಸತ್ಯ..ಹಾಗೆ ನಡೆದ ಒಂದು ಘಟನೆ ನಮ್ಮ ನೆರೆ ರಾಜ್ಯವಾದ ಹಿಂದೆ ಆಂಧ್ರ ಪ್ರದೇಶದಲ್ಲಿ ಗುರುತಿಸಿಕೊಂಡಿದ್ದ ಈಗಿನ ತೆಲಂಗಾಣದ ಜ್ಯೋತಿ ರೆಡ್ಡಿ ಅವರದ್ದು.

ಕಡು ದಾರಿದ್ರ್ಯದಲ್ಲಿ ಹುಟ್ಟಿ ಬೆಳೆದ ಬಾಲ್ಯ ಜೀವನ, ತಂದೆ ಭಾರತೀಯ ಸೇನೆಯನ್ನು ಸೇರಿದರೂ ಕೆಲವೇ ವರ್ಷಗಳಲ್ಲಿ ಮಕ್ಕಳನ್ನೂ,ಮಡದಿಯನ್ನು ಬಿಟ್ಟಿರಲಾಗದೆ ಹಿಂದಿರುಗಿ ಮನೆ ಸೇರಿದ ದಿನವದು, ಸರಕಾರದಿಂದ ಯಾವುದೇ ಸವಲತ್ತು ಸಹ ಸಿಕ್ಕದೆ ಬಡತನದ ಬೇಗೆಯಲ್ಲಿ ಬದುಕುತ್ತಿರುವ ಕುಟುಂಬ..ತನ್ನ ಮಕ್ಕಳಿಗೆ ಆಹಾರ ನೀಡಲು ಸಹ ಆಗದ ಪರಿಸ್ಥಿತಿಗೆ ತಲುಪಿದಾಗ ಕೇವಲ 5 ವರ್ಷ ಇರುವ ಜ್ಯೋತಿ ಎಂಬ ಆ ಪುಟ್ಟ ಮಗುವನ್ನು ಅನಾಥ ಮಂದಿರಕ್ಕೆ ಸೇರಿಸಲು ತಂದೆಯು ನಿರ್ಬಂದಿತನಾಗುತ್ತಾನೆ. ಅದು ತಂದೆ ತಾಯಿ ಇಲ್ಲದೆ ಅನಾಥರಾದವರಿಗಾಗಿರುವ ಮಂದಿರ ಇಲ್ಲಿ ಆ ಪುಟ್ಟ ಮಗು ಜ್ಯೋತಿಯನ್ನು ಸೇರಿಸುವ ಸಲುವಾಗಿ ಅವಳ ತಂದೆಯು ಒಂದು ದೊಡ್ಡ ಸುಳ್ಳನ್ನೇ ಹೇಳಬೇಕಾಯಿತು, ಈ ಮಗುವಿನ ತಾಯಿಯು ಕೆಲದಿನಗಳ ಹಿಂದೆ ತೀರಿ ಹೋದರು ಎಂದು..!!! ಕಾರಣ ತಂದೆ ತಾಯಿ ಇರುವವರನ್ನು ಆ ಮಂದಿರದಲ್ಲಿ ಸೇರಿಸಲಾಗುತ್ತಿರಲಿಲ್ಲ.. ಬಡತನದ ಆ ಕಷ್ಟದ ಪರಿಸ್ಥಿತಿಯು  ತಂದೆ  ಆ ರೀತಿಯ ದೊಡ್ಡ ಸುಳ್ಳನ್ನು ಹೇಳಬೇಕಾಯಿತು. ಹಾಗೆ ಅನಾಥ ಮಂದಿರದೊಳಗೆ ಬದುಕತೊಡಗಿದಳು ಜ್ಯೋತಿ ರೆಡ್ಡಿ. ಆ ಕಾಲದಲ್ಲಿ ಚಳಿಯನ್ನು ಸಹಿಸಲಾಗದೆ  ಜ್ಯೋತಿ ರೆಡ್ಡಿ ಎಂಬ ಬಾಲಕಿಗೆ ಇದ್ದ ಅತೀ ದೊಡ್ಡ ಆಶೆಯಂದರೆ ಯಾರಾದರೊಬ್ಬರು ನನಗೆ ಮೈಗೆ ಹಾಸಲು ಕಂಬಳಿ ಹೊದಿಕೆಯನ್ನು ತಂದುಕೊಟ್ಟಿದ್ದರೆ ಎಂದಾಗಿತ್ತು, ಕಾರಣ ಯಾರೂ ಇಲ್ಲದ ಆ  ಪರಿಸ್ಥಿತಿಯು ಹಾಗಿತ್ತು..   ಯಾರಾದರೂ ನನ್ನ ಮನೆಯಿಂದ ಬರುವರೋ ಎಂದು ಅಲ್ಲಲ್ಲಿ ಹರಿದ ಒಂದು ಚಿಕ್ಕ ಬ್ಯಾಗ್ ಅನ್ನು ಹಿಡಿದು ದಿನಾ ಅನಾಥ ಮಂದಿರದ ದಾರಿಯನ್ನು ನೋಡುತ್ತಾ ಕಾಯುತ್ತಿದ್ದಳು., ಆದರೆ ಬೆಳಕು ಸರಿದು ಕಡು ಕಪ್ಪು ಆವರಿಸುವಾಗ ಇಂದೂ ಯಾರು ಬಂದಿಲ್ಲ ಎಂದು ಕಣ್ಣೇರು ಹಾಕುತ್ತಾ ಅನಾಥ ಮಂದಿರದ ಒಂದು ಮೂಲೆಯಲ್ಲಿ ಹೋಗಿ ತುಂಬಿದ ಕಣ್ಣುಗಳೊಂದಿಗೆ ನಿದ್ರೆಗೆ ಜಾರುತ್ತಿದ್ದಳು ಜ್ಯೋತಿ ರೆಡ್ಡಿ, ಬಿಡುವಿನ ಎಲ್ಲಾ ಸಮಯದಲ್ಲೂ ಅನಾಥ ಮಂದಿರದ ಮೇಲ್ವಿಚಾರಕರನ ಮನೆಯಲ್ಲಿ 5Rs ಸಂಬಳಕ್ಕಾಗಿ  ಕೂಲಿ ಕೆಲಸ ಮಾಡುತ್ತಿದ್ದಳು ಜ್ಯೋತಿ ರೆಡ್ಡಿ..
ಹಾಗೆ 10 ನೇ ತರಗತಿ ಉತ್ತೀರ್ಣಳಾದಾಗ ತಂದೆಯು ಮತ್ತೆ ಅಲ್ಲಿ ಮುಂದುವರಿಸಲು ಬಯಸದೆ, ಅವಳ ಶಿಕ್ಷಣವನ್ನು ಅಲ್ಲಿಗೆ ಮೊಟಕುಗೊಳಿಸಿ  ಜ್ಯೋತಿ ರೆಡ್ಡಿ ಯ ಮದುವೆಯನ್ನು ಗೊತ್ತು ಮಾಡಿದನು. ಅವಳಿಗಿಂತ ಅದೆಷ್ಟೋ ಹೆಚ್ಚು ಪ್ರಾಯ ಇರುವವನೊಂದಿಗೆ ಮದುವೆಯು ಸಹ ನಡೆಯಿತು. ಗಂಡನೋ ತುಂಬು ಮದ್ಯಪಾನಿ, ಗಂಡನ ಮನೆಯವರು ಅದಕ್ಕಿಂತಲೂ ಕೆಟ್ಟ ಸ್ವಭಾವವನ್ನು ಹೊಂದಿದವರು ಇದೆಲ್ಲಾ ಅನುಭವಿಸುವ ಜ್ಯೋತಿ ರೆಡ್ಡಿ ಯ ಬಾಳು ನರಕದ ಕೂಪವಾಗಿತ್ತು ಅದಾಗಲೇ ಆ ಚಿಕ್ಕ ಪ್ರಾಯದಲ್ಲಿ 2 ಮಕ್ಕಳ ತಾಯಿಯು ಸಹ  ಆದಳು, ಇಷ್ಟೆಲ್ಲಾ ಆದರೂ ಜ್ಯೋತಿ ರೆಡ್ಡಿಯು ಜೀವನದಲ್ಲಿ ಜಿಗುಪ್ಸೆ ಗೊಳ್ಳಲಿಲ್ಲ, ಅವಳು ಚಿಂತಿಸಿದಳು ಹೇಗಾದರೂ ಮಾಡಿ ಈ ಬದುಕನ್ನು ಬದಲಾವಣೆ ಮಾಡಲೇಬೇಕು, ಅದಕ್ಕಾಗಿ ಹೊಸ ದಾರಿಗಳನ್ನು ಹುಡುಕತೊಡಗಿದಳು.. ಮುಂದುವರಿದಂತೆ ಜ್ಯೋತಿ ರೆಡ್ಡಿ ಯು ಒಂದು ಚಿಕ್ಕ ಸಾಕ್ಷರತಾ ತರಗತಿಯನ್ನು ಶುರುಮಾಡಲು ಪಣ ತೊಟ್ಟಳು.. ಆ ಕುಗ್ರಾಮದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆದವರು ಅಂತ ಯಾರು ಇಲ್ಲದನ್ನು ಸರಿಯಾಗಿ ಅರ್ಥಮಾಡಿಕೊಂಡು ಚಿಕ್ಕ ಮಟ್ಟಿನಲ್ಲಿ ತರಗತಿಯನ್ನು ಶುರುಮಾಡಿದಳು ಜೊತೆಗೆ ಅವಳು ಕಲಿಯ ತೊಡಗಿದಳು ಮುಂದೆ ತನ್ನ 25 ನೇ ವಯ್ಯಸ್ಸಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಯೂನಿವರ್ಸಿಟಿ ಯಿಂದ ಡಿಗ್ರಿಯನ್ನು ಸಹ ಪಾಸು ಮಾಡಿದಳು ಮುಂದೆ ಟೀಚರ್ ಆಗಿ ಸೇರಲು ಹಲವಡೆ ಪ್ರಯತ್ನಿಸಿದಳು ಬಹುತೇಕ ವಿದ್ಯಾಸಂಸ್ಥೆಗಳು ಅವಳಿಗೆ  ಕೆಲಸ ನೀಡಲು ನಿರಾಕರಿಸಿದವು ಕೊನೆಗೆ ಮುಂದುವರಿದ ಪ್ರಯತ್ನದ ಫಲವಾಗಿ  ಒಂದು ಸರಕಾರೀ ಶಾಲೆಯಲ್ಲಿ 380Rs ಸಂಬಳದೊಂದಿಗೆ ಒಂದು ಕಡೆ ಕೆಲಸವೂ ಸಿಕ್ಕಿತು ಆದರೆ 4 ಘಂಟೆಗಳ ಪಯಣವು ದಿನಾ ಹೋಗಬೇಕಿತ್ತು ಆದರೆ ಸಿಕ್ಕುವ ಸಂಬಳದ 90 ಶೇಕಡಾ ಸಹ ಹೋಗಿ ಬರುದಕ್ಕಾಗಿ ವಾಹನಕ್ಕೆ ನೀಡಬೇಕಿತ್ತು,ಇದೆಲ್ಲವನ್ನೂ ಅರಿತು ಜ್ಯೋತಿ ರೆಡ್ಡಿ ಆ ಕೆಲಸಕ್ಕೆ ಸೇರಲು ತೀರ್ಮಾನಿಸಿದ್ದು ಇದುವರೆಗೆ ನನ್ನನ್ನು ಸಮೂಹ ಕೂಲಿ ಕೆಲಸದವಳಾಗಿ ಕಾಣುದರಲ್ಲಿನ ಬದಲಾವಣೆ ಬೇಕಿತ್ತು. ಸಿಗುವ ಸಂಬಳಕ್ಕಿಂತ ಖರ್ಚು ಹೆಚ್ಚಾದಾಗ ಹಣಕ್ಕಾಗಿ ಶಾಲೆಗೆ ಹೋಗಿ ಬರುವ ಮಧ್ಯೆ ಸಾರಿ ಯನ್ನು ಮಾರಿ ಹಣವನ್ನು ಹೊಂದಿಸತೊಡಗಿದಳು, ಮುಂದೆ ಹಲವು ತಿಂಗಳ ನಂತರ  ಅವಳ ಊರಿಗೆ ಹತ್ತಿರ ಇರುವ ಶಾಲೆಯಲ್ಲಿ ಕೆಲಸವೂ ಸಿಕ್ಕಿತು. ಸಿಕ್ಕಿದ ಹಣದಲ್ಲಿ ಉಳಿತಾಯ ಮಾಡಿ ಕಂಪ್ಯೂಟರ್ ಶಿಕ್ಷಣವನ್ನು ಸಹ ಕಲಿತಳು ಆ ಸಮಯಕ್ಕಾಗಿತ್ತು ಒಂದು ದಿನಾ ಅಮೇರಿಕಾದಿಂದ ಬಂದ ದಂಪತಿಯೊಬ್ಬರ ಜೀವನವನ್ನು ನೋಡಿ ತನ್ನ ಮಕ್ಕಳಿಗೆ ಉನ್ನತ ಶಿಕ್ಷಣ ಸಿಗಬೇಕು, ಅವರ ಜೀವನ ಉತ್ತಮವಾಗಿರಬೇಕು ಎಂದು ತೀರ್ಮಾನಿಸಿ ತಾನು ಅಮೇರಿಕಾ ಗೆ ಹೋಗಬೇಕು ಎಂದು ಬಯಸಿದಳು, ಮುಂದಿನ ಹಣದ ಉಳಿತಾಯ ಸಹ ಅಮೆರಿಕಾವನ್ನು ಲಕ್ಷ್ಯವಿಟ್ಟುಕೊಂಡಾಗಿತ್ತು, ಕೊನೆಗೆ ಅವಳ ತೀರ್ಮಾನದಂತೆ ಎಲ್ಲಾ ಹಣವನ್ನು ಒಟ್ಟುಮಾಡಿ ವಿಸಿಟಿಂಗ್ ವೀಸಾದಲ್ಲಿ ಅಮೆರಿಕಾವನ್ನು ತಲುಪಿಯೇ ಬಿಟ್ಟಳು, ಇಂಗ್ಲೀಷ್ ಬಾಷೆಯಲ್ಲಿ ಅಷ್ಟೇನೂ ಜ್ಞಾನ ಇಲ್ಲದೆ ಇದ್ದರು ಆರಂಭದಲ್ಲಿ ತುಂಬಾ ಕಷ್ಟಪಟ್ಟು ಕೊನೆಯಲ್ಲಿ ಒಂದು ಶಾಪ್ ಅಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸಕ್ಕೆ ಸೇರಿದಳು, ಇದರ ನಡುವೆ ಒಂದು recruitment  ಕಂಪನಿ ಯಲ್ಲಿ ಕೆಲಸಕ್ಕೆ ಕರೆ ಬಂದಾಗ ಇಂಟರ್ವ್ಯೂ ಅಲ್ಲಿ ಇಂಗ್ಲೀಷ್ ಬಾರದೆ ಇದ್ದುದರಿಂದ ಅವಮಾನಕ್ಕೆ ಸಹ ಒಳಗಾಗಬೇಕಾಯಿತು, ಮುಂದೆ ಇಂಗ್ಲೀಷ್ ಶಬ್ದ ಕೋಶವನ್ನು ಪಡೆದು ಇಂಗ್ಲೀಷ್ ಭಾಷೆ ಕಲಿಯತೊಡಗಿದಳು. ಮುಂದೆ ಬೇರೆ ಒಂದು ಕಡೆ ಕೆಲಸದ ಅವಕಾಶ  ಸಿಕ್ಕಿದರೂ ಪೆರ್ಮೆನೆಂಟ್ ವೀಸಾ ಇಲ್ಲದ ಕಾರಣ ಕೆಲಸವನ್ನು ಕಳೆದುಕೊಳ್ಳಬೇಕಾಯಿತು.. ತಾನು ಪೆರ್ಮೆನೆಂಟ್ ವೀಸಾ ಪಡೆಯಲು ತುಂಬಾ ಶ್ರಮಿಸಿದಾಗ ಒಂದು ವಿಷಯವನ್ನು ಜ್ಯೋತಿ ರೆಡ್ಡಿ ಅರಿತುಕೊಂಡಳು ತುಂಬಾ ಜನರು ವೀಸಾ ಪಡೆಯಲು ಅದರ ಬಗೆಗಿನ ಮಾಹಿತಿ ಇಲ್ಲದೆ  ಕಷ್ಟಪಡುತ್ತಿರುವುದು , ಆಗಲೇ ಮನಸಲ್ಲಿ ತೀರ್ಮಾನಿಸಿದಳು ವೀಸಾ ಸರಿಪಡಿಸುವ ಒಂದು ಚಿಕ್ಕ ಸಂಸ್ಥೆಯನ್ನು ಹುಟ್ಟು ಹಾಕುದು. ಹಾಗೆ ಒಂದು ಅಮೇರಿಕಾ ತಲುಪಿದ ಒಂದು ವರ್ಷದ ಒಳಗೆ 2001 ರಲ್ಲಿ ಸಂಸ್ಥೆಯನ್ನು ಹುಟ್ಟುಹಾಕಿದಳು. ಮುಂದೆ ಸ್ವಲ್ಪ ಸ್ವಲ್ಪವಾಗಿ ಯಶಸ್ಸನ್ನು ಕಾಣುತ್ತ ಹಲವಾರು ಸ್ಥರದಲ್ಲಿ ತನ್ನ ಉದ್ಯಮವನ್ನು ಬೆಳೆಸತೊಡಗಿದಳು. ಇಂದು key software sollution  ಸೇರಿದಂತೆ 3 ಕಂಪನಿಗಳ CEO  ಆಗಿ ಬಹು ಕೋಟಿಯ ವ್ಯಾಪಾರವನ್ನು ಮಾಡುತ್ತಾ ಜಗತ್ತಿನಲ್ಲೇ ಗುರುತಿಸುವಂತಾದಳು ಜ್ಯೋತಿ ರೆಡ್ಡಿ.ಕೇವಲ 5 ರೂಪಾಯಿಗಾಗಿ ದುಡಿದ ಜ್ಯೋತಿ ರೆಡ್ಡಿ ಇಂದು 3 ಕಂಪನಯಗಳ ಸಿಇಓ ಆಗಿದ್ದು ಅವಳ ನಿರಂತರ ಪರಿಶ್ರಮದಿಂದ ಮಾತ್ರವಾಗಿದೆ
ಯಾವಾಗ ಮನಸ್ಸು ತೀಕ್ಷ್ಮವಾಗಿ ಸ್ವಯಂ ಬದಲಾವಣೆ ಬಯಸಿ ಅದಕ್ಕಾಗಿ ಎಲ್ಲಾ ವಿಧದಲ್ಲೂ ಕಾರ್ಯಪ್ರಾಪ್ತವಾಗತೊಡಗುತ್ತದೆ ಎಂದಾದರೆ ಅವರು ಜೀವನದಲ್ಲಿ ಉನ್ನತ ವಿಜಯವನ್ನು ಅಲಂಕರಿಸಿಯೇ ತೀರುತ್ತಾರೆ.
                                         -ದೀನಾರ್

ಭಾನುವಾರ, ಜುಲೈ 24, 2016

ಅನಾಮಿಕ

ಅವಳು ಬೆ೦ಗಳೂರಿನಲ್ಲಿ MBBS ಕಲಿಯುತ್ತಿದ್ದಳು. ಗೆಳೆಯನ ಲೇಟ್ ನೈಟ್ ಬ್ಯಾಚುಲರ್ ಪಾರ್ಟಿಯಲ್ಲಿ ಮಧ್ಯದ ಲಹರಿಯಲ್ಲಿ ಪರಿಸರವನ್ನು ಮರೆತು ತೂರಾಡುತ್ತಾ ಪ್ರೀಯತಮನೋ೦ದಿಗೆ ಹಾಸಿಗಯನ್ನು ಹ೦ಚಿಕೊ೦ಡಾಗ ಮಾಮೂಲಿನ೦ತೆ ಸುರಕ್ಷಾ ಮಾರ್ಗವನ್ನು ಉಪಯೋಗಿಸಲು ಅವರು ಮರೆತಿದ್ದರು. ಪ್ರೀಯಕರ ಬಹುಮಾನವಾಗಿ ಕಿಬ್ಬೋಟ್ಟೆಯಲ್ಲಿ ಮಾ೦ಸ ಪಿ೦ಡವಾಗಿ ರೂಪಗೊಳ್ಳತೋಡಗಿತು. ಅವಳು ತಿಳಿದ್ದದ್ದು ಬಹಳ ತಡವಾಗಿಯಾಗಿತ್ತು.

ಆಸ್ಪತ್ರೆಯತ್ತ ಆಪರೇಷನ್ ಮಾಡಿಸಿಕೊಳ್ಳಲು ತಲುಪಿದ ಅವಳನ್ನು ಡಾಕ್ಟರ್ ಅದರಿ೦ದ ತಡೆದರು. ಕಾರಣ ದುರ್ಬಲವಾದ ಅವಳ ಶರೀರ ಪ್ರಕೃತಿಯಾಗಿತ್ತು.  ಅಪರೇಷನ್ ನಡೆಸಿದರೆ ಜೀವಹಾನಿ ಸ೦ಭವಿಸಬಹುದು ಎ೦ದು ಡಾಕ್ಟರ್ ಹೇಳಿದಾಗ ಮಗುವಿಗೆ ಜನ್ಮ ನೀಡುವುದಲ್ಲದೆ ಅವಳ ಮು೦ದೆ ಬೇರೆ ಮಾರ್ಗವಿರಲಿಲ್ಲ.ತ೦ದೆ ತಾಯಿಯ೦ದಿರು ವಿದೇಶದಲ್ಲಿದ್ದ ಒ೦ದು ಗೆಳೆತಿಯ ಮನೆಯಲ್ಲಿ ಅವಳು ಮಗುವಿಗೆ ಜನ್ಮ ನೀಡಿದಳು. ನೆತ್ತಿಯ ಬಲಭಾಗದಲ್ಲಿ ಒ೦ದು ಕಪ್ಪು ಚುಕ್ಕೆಯಿರುವ ಒಬ್ಬ ಸು೦ದರನನ್ನು. ಮಗುವಿಗೆ ಮೊಲೆಹಾಲುಣಿಸಲಾಗಲಿ, ಒ೦ದು ಲಾಲಿಸಲಾಗಲಿ ಅವಳು ತಯಾರಾಗಲಿಲ್ಲ. ನನ್ನ ಜೀವನವನ್ನು ಹಾಳುಮಾಡಿದ ಶೈತಾನನ ಮಗು ಎ೦ದು ಹೇಳಿ ದೂರ ಮಾಡಿದಳು. ಹೆತ್ತ ನೋವು ವಾಸಿಯಾಗುವ ಮೊದಲೇ ಆ ಹಸಿಗೂಸನ್ನು ಕೈಯಲ್ಲಿ ಎತ್ತಿಕೊ೦ಡು ಗೆಳೆತಿಯ ಕಾರಲ್ಲಿ ಅವರು ನಗರವನ್ನು ಬಿಟ್ಟರು.

ಆ ಹಸುಗೂಸನ್ನು ಉಪೇಕ್ಷಿಸಲು ಒ೦ದು ಸ್ಥಳದ ಹುಡುಕಾಟದಲ್ಲಿದ್ದರು ಅವರು. ಅವಸಾನವಾಗಿ ಒ೦ದು ಅನಾಥಾಲಯದ ಮು೦ದೆ ಆ ಮಗುವನ್ನು ಅವರು ಉಪೇಕ್ಷಿಸಿದರು. ಜನವರಿಯ ಆ ಮರಗಟ್ಟುವ ಚಳಿಯಲ್ಲಿ ಆ ಮಗು ಹಸಿವಿನಿ೦ದ ಅತ್ತಾಗ ಒ೦ದು ತಿರುಗಿ ನೋಡಲು ಕೂಡ ಅವಳು ತಯಾರಾಗಲಿಲ್ಲ.

ಕೋರ್ಸ್ ಮುಗಿಸಿದ ಅವಳು ತನ್ನ ಊರಿನ ಆಸ್ಪತ್ರೆಯಲ್ಲಿ ಪ್ರಾಕ್ಟೀಸ್ ಆರ೦ಭಿಸಿದಳು. ಅವತ್ತು ಆ ಅನಾಥಾಲಯದ ಮು೦ದೆ ತೊರೆದ ತನ್ನ ಮಗುವಿಗೆ ಅದೇನು ಸ೦ಭವಿಸಿರಬಹುದು ಎ೦ದು ಕೂಡ ಅವಳು ಯೋಚಿಸಿ ಕಣ್ಣೀರಾಗಲಿಲ್ಲ. ಬದಲಿಗೆ ಆ ಹೆರಿಗೆಯಿ೦ದ ನಷ್ಟಪಟ್ಟ ತನ್ನ ಸೌ೦ಧರ್ಯದ ಕುರಿತಾಗಿತ್ತು ಅವಳು ಆತ೦ಕಪಟ್ಟದ್ದು.

ಮನೆಯವರು ಹುಡುಕಿದ ಮತ್ತೋಬ್ಬ ಡಾಕ್ಟರನ ಮು೦ದೆ ಯಾವುದೇ ಪಶ್ಚಾತ್ತಾಪವಿಲ್ಲದೆ ಅವಳು ತನ್ನ ಕತ್ತನ್ನು ಚಾಚಿದಳು. ಅವನು ಒಳ್ಳೆಯವನಾಗಿದ್ದ. ಎಲ್ಲವನ್ನೂ ಮರೆತು ಅವನು ಅವಳನ್ನು ಪ್ರೀತಿಸತೊಡಗಿದ. ಅವಳು ಕೂಡ. ಒಮ್ಮೆಯೂ ಹಳೇ ನೆನಪು ಅವಳನ್ನು ಕಾಡಲಿಲ್ಲ. ಆ ದಾ೦ಪತ್ಯದಲ್ಲಿ ಮೂರು ಮಕ್ಕಳು ಜನಿಸಿದರು. *ಎರಡು ಗ೦ಡು ಒ೦ದು ಹೆಣ್ಣು* ಡಾಕ್ಟರಾದ ತ೦ದೆ ಮತ್ತು ಡಾಕ್ಟರಾದ ತಾಯಿಯ ಮುತ್ತಿನ ಮಕ್ಕಳಾಗಿ ಆ ಮಕ್ಕಳು ಬೆಳೆಯತೊಡಗಿದರು. ಕಾಲಚಕ್ರವೂ ಅತೀವೇಗದಲ್ಲಿ ಚಲಿಸಲಾರ೦ಭಿಸಿತು. ಯೌವನದಿ೦ದ ವೃಧಾಪ್ಯದತ್ತ ಅವಳು ಬ೦ದು ನಿ೦ತಳು. ಮೂರು ಮಕ್ಕಳೆ೦ಬ ಲೆಕ್ಕ ಹೇಳಿದ ಡಾಕ್ಟರ್ ಅಮ್ಮ ಅವಳಾದಳು. ಮೂವರ ಮದುವೆಯು ಮುಗಿಯಿತು. ಇಬ್ನರು ಡಾಕ್ಟರ್ ಸೋಸೆಯ೦ದಿರು ಕೂಡ ಆ ಮನೆಯತ್ತ ಅತಿಥಿಗಳಾಗಿ ಬ೦ದರು. ಸ೦ತೋಷಕರವಾದ ದಿವಸಗಳು................

*ಆದರೆ*
ಆಕಾಶದಲ್ಲಿ ಕಾರ್ಮೋಡವು ಗೋಚರವಾಗತೊಡಗಿದ್ದು ಅನಿರೀಕ್ಷಿತವಾಗಿಯಾಗಿತ್ತು. ಬೇರ್ಪಡುವಿಕೆ ಪ್ರಕೃತಿಯ ವಿಧಿ ನಿಯಮವೆ೦ಬ೦ತೆ ಅವಳನ್ನು ಬ೦ದು ತಲುಪಿತ್ತು. ಗ೦ಡನೊ೦ದಿಗೆ ಡ್ಯೂಟಿ ಮುಗಿಸಿಕೊ೦ಡು ಮನೆಯತ್ತ ಬರುತ್ತಿದ್ದ ಅವರ ಕಾರಿಗೆ ಎದುರಿನಿ೦ದ ಬರುತ್ತಿದ್ದ ಸೂಪರ್ ಪಾಸ್ಟ್ ಎಕ್ಸ್ ಪ್ರೇಸ್ ಅಪ್ಪಳಿಸಿದಾಗ ಒಮ್ಮೆ ಅಲುಗಾಡಲೂ ಕೂಡ ಸಾಧ್ಯವಾಗದೆ ವಿಧದಲ್ಲಿ ಅವಳ ತೋಡೆಯೆಲ್ಲಾ ನುಜ್ಜುಗುಜ್ಜಾಯಿತು. ಆದರೆ ಅವಳನ್ನು ವೇದನಿಪಿಸಿದ್ದು ಗ೦ಡನ್ನ ಮರಣವಾಗಿತ್ತು. ಬೇರೆಯವರ ಸಹಾಯವಿಲ್ಲದೆ ಒ೦ದು ಹೆಜ್ಜೆ ಕೂಡ ಮು೦ದಡಿಯಿಡಲಾರದ ಅವಳು ಕತ್ತಲಿನ ಕೋಣೆಯಲ್ಲಿ ಬ೦ದಿಯಾದಳು.

ತಾಯಿಯ ಸ೦ಪಾದನೆಯೂ ಇಲ್ಲವಾದಾಗ ಮಕ್ಕಳು ಬದಲಾದರು. ತಾಯಿಯ ಪ್ರಾಥಮಿಕ ಕಾರ್ಯಗಳನ್ನು ನೋಡಲು ನಮಗಾಗಲ್ಲವೆ೦ದು ಸೋಸೆಯ೦ದಿರು ಪಟ್ಟು ಹಿಡಿದರು. ಗ೦ಡ೦ದಿರು ಕೆಲಸಕ್ಕೆ ತೆರಳಿದಾಗ ತಮ್ಮ ರಹಸ್ಯ ಕಾಮುಕರೊ೦ದಿಗೆ ಪ್ರಣಯ ಸಲ್ಲಾಪ ನಡೆಸಲು ಆ ತಾಯಿಯು ಒ೦ದು ತಡೆಗೋಡೆಯಾದಳು. ಮಡದಿ೦ಯ೦ದಿರ ಗುಲಾಮರಾದ ಆ ಮಕ್ಕಳು ತಾಯಿಯನ್ನು ಉಪೇಕ್ಷಿಸಲು ತೀರ್ಮಾನಿಸಿದರು. ರಾತ್ರಿಯ ಆಹಾರದಲ್ಲಿ ಅಮಿತವಾಗಿ ಸೇರಿಸಿದ ನಿದ್ರೆ ಮಾತ್ರೆ ಆ ತಾಯಿಯನ್ನು ಗಾಡವಾದ ನಿದ್ರೆಯತ್ತ ಕೊ೦ಡೊಯ್ಯಿದಾಗ ದೂರ ಯಾವುದೋ ಒ೦ದು ಬಸ್ ಸ್ಟಾ೦ಡಿನ ಬೆ೦ಚಿನಲ್ಲಿ ತಾಯಿಯನ್ನು ಮಲಗಿಸಿ ಮಕ್ಕಳು ಸ್ಥಳ ಬಿಟ್ಟರು.

ಕಾಲಿನ ನೋವು ಮತ್ತು ಹೊಟ್ಟೆ ಹಸಿವಿನ ಕಾರಣ ಕಣ್ಣು ತೆರೆದಾಗ ಆ ತಾಯಿ ಬೆಚ್ಚಿಬಿದ್ದರು. ನಾನು ಮನೆಯಲಲ್ಲ ಮಲಗಿರುವುದು ಎ೦ದು ತಿಳಿದಾಗ ಅವಳಿಗೆ ವೇದನೆಯಾಯಿತು. ಸೋಳ್ಳೆಗಳು ಹರಡಿರುವ ಬಿಸಾಡಿದ ಆಹಾರಗಳಲ್ಲಿ ಮುಳುಗಿರುವ ಬೀದಿನಾಯಿಗಳ ನೋಟ ತನ್ನ ನೇರಕ್ಕಾಗಿದೆ ಎ೦ದು ಪಾಪ ನನಡುಕದೊ೦ದಿಗೆ ಅವಳು ತಿಳಿದುಕೊ೦ಡಳು. *ಪ್ರಪ್ರಥಮವಾಗಿ ಅವಳು ತನ್ನ ಮೊದಲ ಮಗನ ಕುರಿತು ಯೋಚಿಸತೊಡಗಿದಳು.*
____________________

ಅವತ್ತು ನಾನು ಅವನನ್ನು ಅನಾಥಾಲಯದ ಮು೦ದೆ ಉಪೇಕ್ಷಿಸಿದಾಗ ಇದೇ ರೀತಿಯಲ್ಲಾಗಿತ್ತು ಬೀದಿನಾಯಿಗಳು ಅವನನ್ನು ಸುತ್ತುವರಿದಿರಬಹುದು. ನನ್ನ೦ತೆ ಹಸಿವಿನಿ೦ದ ಕೂಗಿದ್ದಾಗಿರಬಹುದು. ಇದೇ ನೋವನ್ನು ಅವನು ಅನುಭವಿಸಿರಬಹುದು...... ಓ ದೇವರೇ ನನ್ನ ಮಗನನ್ನು ಅವನೆಲ್ಲಿದ್ದರೂ ನೀನು ಕಾಪಾಡು.
____________________________

ತನ್ನ ಜೀವನದಲ್ಲಿ ಪ್ರಪ್ರಥಮವಾಗಿ ಅವಳು ಅವನಿಗಾಗಿ ಪ್ರಾರ್ಥಿಸಿದಳು. ಮಕ್ಕಳ ಅವಗಣನೆಯಲ್ಲಿ ಮನನೊ೦ದ ಮೇಲಾಗಿತ್ತು ಪಾಪ ಅವಳಿಗೆ ನಷ್ಟಪಟ್ಟ ತನ್ನ ಬೋಧವು ತಿಳಿಯಾಗುತ್ತಿರುವಾಗ ಅಧ್ಯಾರೋ ಓಡಿ ಬರುತ್ತಿರಿರುವುದು ತನ್ನನ್ನು ಆ ಬೆ೦ಚಿನಿ೦ದ ಎದ್ದೇಳಿಸುತ್ತಿರುವುದೂ ಕಾರಿನಲ್ಲಿ ಹಾಕಿಕೊ೦ಡು ಕರೆದೊಯ್ಯುತ್ತಿರುವುದನ್ನೂ ಅರಿಯುತ್ತಿದ್ದಳು.

ಕಣ್ಣು ತೆರೆದು ನೋಡುವಾಗ ಮೇಲೆ ಬಲವಾಗಿ ಗಾಳಿಯನ್ನು ಬೀಸುತ್ತಿರುವ ಪ್ಯಾನ್. ಸುತ್ತಲೂ ತನ್ನ ಪ್ರಾಯದವರ೦ತೆ ಕಾಣುವ ಕೆಲವು ಮಾತೆಯರು ತನ್ನನ್ನೇ ದಿಟ್ಟಿಸುತ್ತಿರುವ೦ತೆ ಕಾಣುತ್ತಿದೆ. ಮೆಲ್ಲನೇ ಅವಳಿಗೆ ವಿಷಯಗಳ ಅರಿವಾಯಿತು ನಾನು ಯಾವುದೋ ವೃದ್ದಾಶ್ರಮದಲ್ಲಿರುವುದಾಗಿ. ಎಲ್ಲರೂ ಎನೇಲ್ಲಾ ಕೇಳುತ್ತಿದ್ದಾರೆ. ಆದರೆ ಅವಳು ಯಾವುದನ್ನೂ ಕೇಳುತ್ತಿಲ್ಲ. ಎಲ್ಲರೂ ಇದ್ದ ನಾನು ಅದೆಷ್ಟು ಬೇಗವಾಗಿತ್ತು ಅನಾಥಳಾದದ್ದು. *ಹರಿ ಬ೦ದ* ಎ೦ದು ಯಾರೋ ಹೇಳಿದಾಗ ಎಲ್ಲರೂ ಬಾಗಿಲಿನತ್ತ ಓಡುತ್ತಿರುವುದನ್ನು ಅವಳು ಕ೦ಡಳು. ಆಯಾಶದಿ೦ದ ತಲೆ ಎತ್ತಿ ನೋಡಿದಾಗ ಒಬ್ಬ ಸು೦ದರ ಯುವಕನು ಅವಳ ಪ್ರಾಯದ ಆ ತಾಯಿಯ೦ದಿರನ್ನೇಲ್ಲಾ ಆಲಿ೦ಗನಗೈಯುತ್ತಿದ್ದಾನೆ. ಮುತ್ತಿನ ಮಳೆಗೈಯುತ್ತಿದ್ದಾರೆ. ಎಲ್ಲಾ ಮಮಾತೆಯ೦ದಿರು ಅವನನ್ನು ಪ್ರೀತಿಸಲು ಪೈಪೋಟಿಯನ್ನು ನಡೆಸುತ್ತಿದ್ದಾರೆ. ಅವನ ಶರಟಿನ ಕೈಯನ್ನು ಒಬ್ಬರು ಸರಿಪಡಿಸಿದರೆ ಮತ್ತೋಬ್ಬರು ಕೂದಲಿನಲ್ಲಿ ಕೈಯಾಡಿಸುತ್ತಾ ಪ್ರೀತಿಸುತ್ತಿದ್ದಾರೆ. ಹೀಗೇ ಹಲವು.........

ಎಲ್ಲಿ ನನ್ನ ಹೊಸಾ ಅಮ್ಮ ಎ೦ದು ಕೇಳುತ್ತಾ ಅವನು ಅವಳ ಸಮೀಪ ಬ೦ದಾಗ ಎದ್ದೇಳಲು ಶ್ರಮಪಡುತ್ತಿರುವ ಅವಳ ತಲೆಯಲ್ಲಿ ಕೈ ಇಟ್ಟಾಗ ಅವಳಲ್ಲಿಯೇ ಮಲಗಿದಳು. ಡಾಕ್ಟರ್ ಅಲ್ವೇ ಎ೦ದು ಕೇಳಿದಾಗ ಹೌದೆ೦ಬ ಅರ್ಥದಲ್ಲಿ ತಲೆಯಾಡಿಸಿದಳು.. ಡಾಕ್ಟರ್ ಅಮ್ಮ ಹೆದರದಿರಿ ಇದು ನಿಮ್ಮ ಮನೆಯಾಗಿದೆ. ಕಾಲು ಗುಣವಾದರೆ ಪುನಃ ನೀವು ಸ್ಟೇತೊಷ್ಕೋಪ್ ಹಿಡಿಯಬೇಕು ತಿಳಿಯಿತಾ......... ಈ ಬಡಪಾಯಿಗಳಿಗೆಲ್ಲಾ ಚಿಕಿತ್ಸೆಯನ್ನು ನೀಡಬೇಕು.  ಅಮ್ಮ ನಿಮಗೆ ಗೊತ್ತಾ ನನಗೂ ಇದ್ದಾರೆ ಒಬ್ಬಳು ತಾಯಿ. ಆದರೆ ಎಲ್ಲವಳು ಎ೦ದು ನಾನರಿಯೇ. ಮಗುವಾಗಿದ್ದಾಗ ನನ್ನನ್ನು ಉಪೇಕ್ಷಿಸಿದಳು ಅವಳು.
__________________________

ಆದರೆ ನನಗ್ಯಾವ ದ್ವೇಷವೂ ಇಲ್ಲ. ನನ್ನ ಮೇಲಿರುವ ದ್ವೇಷವೆಲ್ಲ ಮುಗಿದು ಪಾಪ ಅವಳು ನನ್ನನ್ನು ಹುಡುಕುತ್ತಿರಬಹುದು. ಮಕ್ಕಳನ್ನು ಅವರ ಹೆತ್ತವರು ಲಾಲಿಸುತ್ತಿರುವುದನ್ನು ಕಾಣುವಾಗ ಹಲವು ಮನೆಗಳ ಗೇಟಿನ ಮು೦ದೆ ಕಣ್ಣೀರಿನೋ೦ದಿಗೆ ನಾನು ನಿ೦ತದಿದ್ದೆ ಡಾಕ್ಟರ್ ಅಮ್ಮ...........
ನನಗೆ ನನ್ನ ತಾಯಿಯನ್ನು ಒ೦ದು ನೋಟ ನೋಡಬೇಕು. ಪ್ರತೀಕಾರಕ್ಕಾಗಿಯಲ್ಲಮ್ಮ. ಅಮ್ಮಾ ಎ೦ದೊಮ್ಮೆ ಕೂಗಲು ಆ ಮಡಿಲಲ್ಲಿ ತಲೆಹಣಿಸಿ ಮಲಗಲು......ಆ ಗಲ್ಲದಲ್ಲೊ೦ದು ಚು೦ಬನವನ್ನು ನೀಡಲು..... ಆಸೆಯಾಗುತ್ತಿದೆ ಡಾಕ್ಟರ್ ಅಮ್ಮ.... ನಾನೂ ಒಬ್ಬ ಮಗನಲ್ಲವಾ....... ಅವನ ಗಲ್ಲದಲ್ಲಿ ಕಣ್ಣೀರು ಹರಿಯತೋಡಗಿತ್ತು. ಕಣ್ಣೀರನ್ನು ಒರೆಸುತ್ತಾ ಅವನು ಮು೦ದುವರಿಸಿದ..... ನನಗೆ ಸ೦ಕಟವೇನೂ ಇಲ್ಲ ಅಮ್ಮ..... ಹಲವಾರು ಮಕ್ಕಳನ್ನು ಹೆತ್ತ ತಾಯಿಗೆ ಅವರೆಲ್ಲರ ಪ್ರೀತಿಯನ್ನು ಒಬ್ಬ೦ಟಿಯಾಗಿ ಅನುಭವಿಸಬಹುದು.

ಆದರೆ...................
ಯಾವುದಾದರೂ ಒಬ್ಬ ಮಗನಿಗೆ ಹಲವಾರು ತಾಯಿಯ೦ದಿರ ಸ್ನೇಹವನ್ನು ಅನುಭವಿಸಲು ಸಾಧ್ಯವಾದದ್ದಿದೆಯಾ??????????? ಇಲ್ಲವೆ೦ದಾದರೆ ನನಗದು ಸಾಧ್ಯವಾಗಿದೆ. ಈ ತಾಯಿಯ೦ದಿರ ಎಲ್ಲಾ ಸ್ನೇಹವು ನನಗೆ ಮಾತ್ರವಾಗಿದೆ...... ನೊ೦ದು ಹೆತ್ತ ಮಕ್ಕಳಿಗೆ ಇವರು ಒ೦ದು ಬಾರವಾಗಿ ಇವರನ್ನು ಬೀದಿಯಲ್ಲಿ ಬಿಟ್ಟಾಗ ಇವರನ್ನು ನಾನು ಕರೆದುಕೊ೦ಡು ಬ೦ದದ್ದು ಆ ಸ್ನೇಹವನ್ನು ಅನುಭವಿಸಲಿಕ್ಕಾಗಿಯಾಗಿ ಮಾತ್ರವಾಗಿದೆ. ನಾನೊ೦ದು ಮದುವೆಯನ್ನೂ ಕೂಡ ಆಗದಿರುವುದು ಇವರಲ್ಲಿರುವ ನನ್ನ ಪ್ರೀತಿಯು ಕಡಿಮೆಯಾಗಬಹುದೊ ಎ೦ಬ ಭೀತಿಯಿ೦ದಾಗಿದೆ.

ಡಾಕ್ಟರ್ ಅಮ್ಮ ಇದು ನೋಡಿದ್ದೀರಾ.....ತನ್ನ ಶರಟನ್ನು ಎತ್ತಿ ತೋರಿಸಿದ,,,,,,, ಎಡ ಭಾಗದ ಎದೆಯ ಮಾ೦ಸ ನಷ್ಟಪಟ್ಟು ಎದೆಯ ಮುಳ್ಳುಗಳು ಹೊರ ಕಾಣುತ್ತಿವೆ..... ಅವತ್ತು ನನ್ನ ತಾಯಿ ನನ್ನನ್ನು ಉಪೇಕ್ಷಿಸಿದಾಗ ಬೀದಿನಾಯಿಗಳು ಬಾಕಿ ಇಟ್ಟು ಹೊದದ್ದಾಗಿದೆ.......

ನಾನೇನು ತಪ್ಪು ಮಾಡಿದ್ದೆ ಅಮ್ಮ. ಯಾತಕ್ಕಾಗಿ ಅವಳು ನನ್ನನ್ನು ಉಪೇಕ್ಷಿಸಿದ್ದು...... ಬಿಕ್ಕಿಬಿಕ್ಕಿ ಅಳುತ್ತಾ ಅವನು ಅವಳಲ್ಲಿ ಕೇಳಿದಾಗ ಅವಳಿಗೆ ಉತ್ತರವಿರಲಿಲ್ಲ. ಕಣ್ಣೀರಿನಿ೦ದ ಮಲಗಿದ್ದ ಅವಳ ತಲೆಕೂದಲು ಸ್ನಾನವನ್ನು ಮಾಡಿದರಾದರೂ. ಅವ್ಯಕ್ತವಾಗಿ ಕ೦ಡರು...... ಅವನ ನೆತ್ತಿಯ ಬಲಭಾಗದಲ್ಲಿ ಅದೋ ಕಾಣುತ್ತಿದೆ ಆ ಕಪ್ಪು ಮಚ್ಚೆ.....

ನನ್ನ ಮಗನು.......

ಇವತ್ತು ಯಾವನೋ ಒಬ್ಬ.......

✍🏻 ಅನಾಮಿಕ🍫

ಶುಕ್ರವಾರ, ಜುಲೈ 22, 2016

ಇಸ್ಲಾಮ್ ...!

ಇಸ್ಲಾಮ್ ...!
...................ನಿನ್ನಲ್ಲಿ ಅದೆಂತಹಾ ಆಕರ್ಷಣೆ ..!!

ಲೋಕ ಇಸ್ಲಾಮನ್ನು ಏಕೆ ಬಯಸುವುದಿಲ್ಲ
ಮನ ಬಂದಂತೆ ಜೀವಿಸಲು ಅದು ಬಿಡುವುದಿಲ್ಲ !!

ಏಕ ದೇವ ನಂಬಿಕೆಯಲ್ಲಿ ನಿಷ್ಠೆ  ಬೇಕಲ್ಲಿ
ದೇವಾದೇಶಗಳ ಪಾಲಿಸುವುದು ಕಡ್ಡಾಯವಿಲ್ಲಿ !!

ಜೀವಂತ ಹೆಣ್ಣನ್ನು ಹೂಳುವಂತಿಲ್ಲ
ಭ್ರೂಣ ಹತ್ಯೆಯ ಹೆಸರಲ್ಲೂಕೊಲ್ಲುವಂತಿಲ್ಲವಿಲ್ಲಿ !!

ಬಡ್ಡಿ ವ್ಯವಹಾರವನ್ನು ಕಿತ್ತೆಸೆದು
ಬಡವರ ದೋಚುವ ಪರವಾನಗಿರಿ ಇಲ್ಲವಿಲ್ಲಿ !!

ದಾನ ಧರ್ಮ ಝಕಾತ್  ಕಡ್ಡಾಯ
ಧನಿಕರ ಮೇಲೆ, ಪೋಷಿಸಲು ಬಡವರನ್ನಿಲ್ಲಿ !!

ದಿನಕೈದು ಕಡ್ಡಾಯ ನಮಾಜ್ಹ್
ಕೆಡುಕಿನಿಂದ ಅಶ್ಲೀಲತೆಯಿಂದ  ರಕ್ಷಿಸುವುದಿಲ್ಲಿ !!

ಅತ್ಯಾಚಾರ ಬಲಾತ್ಕಾರ ಶಿಕ್ಷಾರ್ಹ
ಲೈಂಗಿಕ ಅರಾಜಕತೆ ನಡೆಸುವಂತಿಲ್ಲವಿಲ್ಲಿ..!!

ಹಕ್ಕು ಭಾದ್ಯತೆಗಳನ್ನೆಲ್ಲ ಅರಿತು
ಜೀವನವನ್ನು ನಡೆಸಬೇಕಾಗಿಹುದಿಲ್ಲಿ ..!!

ಕೊಲೆ ಮಹಾ ಪಾಪ ಕೊಲೆಗೆ
ಕೊಲೆಯೇ ಶಿಕ್ಷೆ. ಧೈರ್ಯ ಮಾಡುವಂತಿಲ್ಲವಿಲ್ಲಿ  !!

ಒಬ್ಬನಿಗೆ ಶಿಕ್ಷೆ ಇತರರಿಗೆ ಪಾಠ
ಎಂತಹ ಉತ್ತಮ ಸಮಾಜ ಬೆಳೆದುಬರುವುದಿಲ್ಲಿ !!

ಪಾಪಿಗಳಿಗೆ ದೌರ್ಜನ್ಯ ವೆಸಗಲು
ಮೋಜು ಮಸ್ತಿ ಅನೈತಿಕ ಜೀವನಕ್ಕೆ ಎಡೆ ಇಲ್ಲವಿಲ್ಲಿ !!

ಬಡವರನ್ನು ತುಳಿದು ಹೊಡೆದು ಬಡಿದು
ಅಹಂಕಾರದಿಂದ ಜೀವನ ನಡೆಸುವಂತಿಲ್ಲವಿಲ್ಲಿ !!

ಎಲ್ಲರೂ ಸಮಾನರು ದೇವ ದ್ರಷ್ಟಿಯಲ್ಲಿ
ಉತ್ತಮನವನೇ ಅತೀ ಹೆಚ್ಚು ದೇವನಿಷ್ಠೆಯುಳ್ಳವನಿಲ್ಲಿ !!

ಇಸ್ಲಾಮಿನಲ್ಲಿ ಪರಲೋಕ ಪ್ರಾಮುಖ್ಯ
ಸತ್ಯ ನಂಬಿಕೆ ಸತ್ಕರ್ಮದ ಮೇಲೆ ಸ್ವರ್ಗ ಲಭಿಸುವುದಲ್ಲಿ !!

ಆ ಸ್ವರ್ಗದ ಬಯಕೆ ನರಕದ ಭಯ
ನ್ಯಾಯ ನಿಷ್ಠೆಯ ಜೀವನಕ್ಕಾಗಿ ಸಹಕಾರಿ ಯಾಗುವುದಿಲ್ಲಿ !!

ಈ ಸತ್ಯನಂಬಿಕೆ ಜೀವನಕ್ಕೊಂದು
ಬಂಧನ ವಾಗಿಸುವುದೆಂದು ಯಾಕೆ ಭಾವಿಸುವರೋ ಇಲ್ಲಿ !!

ಹಾಗಿರಲು ಜೀವನ ಬರೇ ಆನಂದಿಸಲು
ಎನ್ನುವವರು ಹೇಗೆ ಈ  ಇಸ್ಲಾಮನ್ನು ಬಯಸಬಹುದಿಲ್ಲಿ !!

ಹೀಗೆಂದುಇಸ್ಲಾಮನ್ನ ಅಳಿಸಲು
ಅದೆಷ್ಟು ಪ್ರಯತ್ನ ಅದೆಷ್ಟು ಕೋಟಿ ಕೋಟಿ ಕೊಲೆ ಇಲ್ಲಿ !!

ಇಷ್ಟೆಲ್ಲಾ ಕೊಂದ ಮೇಲೂ
ಹೇಗೆ ವೃದ್ಧಿಯಾಗುತ್ತಿರುವರು ಮುಸ್ಲಿಂ ಕೋಟಿಗಟ್ಟಲೆಯಲ್ಲಿ !!

ಅದಲ್ಲದೆ  ಲೋಕದಾದ್ಯಂತ ಇಂದು
ಜನ ಇಸ್ಲಾಮ್ ಸ್ವೀಕರಿಸುತ್ತಿರುವರು ಲಕ್ಷಗಟ್ಟಲೆಯಲ್ಲಿಲ್ಲಿ !!

ಇದೆಂತಹ ಆಕರ್ಷಣೆ ಗೆಳೆಯರೇ
ಇದನ್ನು ದೇವಾನುಗ್ರಹವಲ್ಲದೆ ಬೇರೇನು ಹೇಳಲಿ ನಾನಿಲ್ಲಿ !!

ಮತ್ತೇನು ಹೇಳಬಹುದು ಗೆಳೆಯರೇ
ಕೃತಜ್ಞತೆ ಆ ಸ್ರಷ್ಟಿಕರ್ತನಿಗೆ ಸಲ್ಲಿಸಲೇ ಬೇಕಾಗಿದೆ ಇಲ್ಲಿ !!

ಅಬುಲ್ ಅಸ್ರಾ

ಮಕ್ಕಳನ್ನು ಬೆಳೆಸುವ ರೀತಿ

ಮಕ್ಕಳು ಅಲ್ಲಾಹನು ನಮಗೆ ದಯಪಾಲಿಸಿದ ಅನುಗ್ರಹವಾಗಿದೆ.ಅದನ್ನು ಬೇಕಾದ ರೀತಿಯಲ್ಲಿ ಬೆಳೆಸುವುದು ಎಲ್ಲಾ ತಂದೆ ತಾಯಿಯರ ಕರ್ತವ್ಯವಾಗಿದೆ.
ನಿಮ್ಮ ಮಕ್ಕಳು ನಿಮ್ಮ ಮಕ್ಕಳಾಗಿಯೇ ಉಳಿಯಬೇಕಾದಲ್ಲಿ ಈ ಕೆಳಗಿನ 100 ಉಪದೇಶಗಳನ್ನು ಓದಿ ,ಪ್ರಯೋಗಿಸಿ ನೋಡಿ.

1.ಮಗುವಿಗೆ ಇಹ ಮತ್ತು ಪರ ದಲ್ಲಿ ಪ್ರಯೋಜನವಾಗುವ ಉಪದೇಶಗಳನ್ನು ನೀಡುವುದು.
2.ಅಲ್ಲಾಹನಿಗೆ ಮತ್ತು ಮಾತಾ ಪಿತರಿಗೆ ಕೃತಞ್ಞತೆ ಖಡ್ಡಾಯವೆಂದು ಕಲಿಸಿ ಕೊಡುವುದು.
3.ಸತ್ಯ ವಿಶ್ವಾಸಿಗಳ ಮಾರ್ಗ ಅವಲಂಬನೆಗೆ ಪ್ರಚೋದಿಸುವುದು.
4.ನೂತನ ವಾದಿಗಳ ಮಾರ್ಗ ಅನುಸರಿಸದಂತೆ ಜಾಗ್ರತೆ ವಹಿಸುವುದು.
5.ಬಾಹ್ಯ ಮತ್ತು ಗೌಪ್ಯತೆ  ಅಲ್ಲಾಹನ ನಿರೀಕ್ಷಣೆಯಲ್ಲಿ ಎಂಬ ನೆನಪು ಮಾಡಿಕೊಡುವುದು.
6.ಅತೀ ಪುಟ್ಟ ಒಳಿತಾದರೂ ಕೆಡುಕಾದರೂ ಅದರ ಬಗ್ಗೆ ವಿವರಿಸಿ ಕೊಡುವುದು.
7.ನಮಾಝ್ ನ ಶರ್ತ್, ಫರ್ಲ್ , ಸುನ್ನತ್ , ಕರಾಹತ್ ಗಳ ಬಗ್ಗೆ ಮನದಟ್ಟು ಮಾಡಿಕೊಡುವುದು.
8.ಒಳಿತನ್ನು ಬೋಧಿಸುವುದು ಮತ್ತು ಕೇಡುಕನ್ನು ವಿರೋಧಿಸುವುದು.
9.ಕಷ್ಟ ಸಂದರ್ಭಗಳಲ್ಲಿ ಸಹನೆ ಕಳೆದು ಕೊಳ್ಳದೆ ಸಹನೆಯಿಂದಿರಲು ಉಪದೇಶಿಸುವುದು.
10.ನಡತೆಯಲ್ಲಿ ಅಹಂಕಾರ ಪ್ರದರ್ಶಿಸದಿರುವುದು.
11.ನಡೆಯುವಾಗ ಸಮಾದಾನದಿಂದ ನಡೆಯುವಂತೆ ಕಲಿಸಿ ಕೊಡುವುದು.
12.ಅಗತ್ಯ ಕ್ಕಿಂತ ಹೆಚ್ಚು ಶಬ್ಧದಲ್ಲಿ ಮಾತನಾಡುವುದನ್ನು ವಿರೋಧಿಸುವುದು.
13.ಎಲ್ಲಾ ಕೆಲಸಗಳಲ್ಲಿ ಪೂರ್ಣತೆ ಆಗುವಂತೆ ನೋಡಿಕೊಳ್ಳುವುದು.
14.ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಮೇಲಿನ ಪ್ರೀತಿ ಕಲಿಸಿ ಕೊಡುವುದು.
15.ಆರೋಗ್ಯ ಸಂದರ್ಭದಲ್ಲಿ ಅಲ್ಲಾಹನನ್ನು ಅನುಸರಿಸಿದರೆ ಅನಾರೋಗ್ಯ ವೇಳೆ ಅಲ್ಲಾಹನು  ಕಾಪಾಡುವನು ಎಂದು ಹೇಳಿಕೊಡುವುದು.
16.ಯಾವಾಗಲೂ ಚಿಂತಿತರಾಗದೇ ಸಂತೋಷದಿಂದಿರಲು  ಕಲಿಸಿ ಕೊಡುವುದು.
17.ಒಂದು ದುಖಃ ಉಂಟಾದಲ್ಲಿ ಅದರ ಬೆನ್ನಿಗೇ ಸುಖಃವು ಲಬಿಸುವುದೆಂಬ ಪ್ರವಾದಿ ವಚನ ಹೇಳಿ ಕೊಡುವುದು.
18.ಎಲ್ಲರಿಗೂ ಒಂದೊಂದು ರೀತಿಯಲ್ಲಿ ಜವಬ್ದಾರಿಯಿದೆ ಎಂಬುವುದನ್ನು ಮನವರಿಕೆ ಮಾಡಿ ಕೊಡುವುದು.
19.ಎಲ್ಲಾ ಮಕ್ಕಳನ್ನು ಒಂದೇ ರೀತಿಯಲ್ಲಿ ಪ್ರೀತಿಸುವುದು.
20.ಮಕ್ಕಳಿಗೆ ಎಳೆಯ ಪ್ರಾಯದಲ್ಲೇ "ಲಾಇಲಾಹ ಇಲ್ಲಲ್ಲಾಹ್ ಮುಹಮ್ಮದುರ್ರಸೂಲುಲ್ಲಾಹ್" ಎಂಬುವುದನ್ನು ಕಲಿಸಿ ಕೊಡುವುದು.
21.ಇಸ್ಲಾಮ್ ನಿಂದ ಹೊರ ಹೋಗುವುದರ ಕುರಿತು ಮತ್ತು ಅದರಿಂದುಂಟಾಗುವ ವಿಪತ್ತುಗಳ ಬಗ್ಗೆ ವಿವರಿಸಿ ಕೊಡುವುದು.
22.ಮದ್ಯಪಾನ ಮತ್ತು ಲಹರಿ ಇಸ್ಪೀಟ್ ಗಳ ಬಗ್ಗೆ ಎಚ್ಚರವಹಿಸುವುದು.
23.ಅದರ ಭವಿಷ್ಯತ್ ಗಳ ಬಗ್ಗೆ ಖುರ್ ಆನ್ , ಹದೀಸ್ ವಚನ ವಿವರಿಸುವುದು.
24.ನಗ್ನ ಚಿತ್ರ ಗಳ ವಿಕ್ಷಣೆಯ ಬಗ್ಗೆ ಜಾಗ್ರತೆ ವಹಿಸುವುದು.
25.ಬೀಡಿ ಸಿಗರೇಟ್ ಗಳ ಸೇವನೆಯ ಜಾಗ್ರತೆ ವಹಿಸಿವುದು.
26.ಸತ್ಯ ಮಾತ್ರ  ಹೇಳುವುದನ್ನು ಕಲಿಸಿ ಕೊಡುವುದು.
27.ಅನ್ಯರ ಸೊತ್ತು ತಿನ್ನುವುದನ್ನು ತಡೆಯುವುದು.
28.ಮಕ್ಕಳಿಗೆ ನಾಶ ಬರುವಂತೆ ಪ್ರಾರ್ಥಿಸದಿರುವುದು.
29.7 ನೇ ಪ್ರಾಯದಲ್ಲಿ ನಮಾಝ್ ಮತ್ತು ಅದಕ್ಕೆ  ಸಂಬಂದಪಟ್ಟ ವಿಷಯಗಳನ್ನು  ಕಲ್ಪಿಸುವುದು.
30.10 ನೇ ಪ್ರಾಯವಾದಲ್ಲಿ ನಮಾಝ್ ತ್ಯಜಿಸಿದರೆ ಸಣ್ಣ ಪ್ರಮಾಣದಲ್ಲಿ ಶಿಕ್ಷಿಸುವುದು.
31.10 ನೇ ವಯಸ್ಸಿನಲ್ಲಿ ತಾಯಿ,ಸಹೋದರಿ ಮತ್ತಿತರ ಸ್ತ್ರೀಯರೊಂದಿಗೆ ಮಲಗದಂತೆ ಎಚ್ಚರವಹಿಸುವುದು.
32.ಸಣ್ಣ ವಯಸ್ಸಿನಲ್ಲೇ ಚಿಕ್ಕ ಪುಟ್ಟ  ಖುರ್ ಆನ್ ಸೂರತ್ ಗಳನ್ನು ಕಲಿಸಿ ಕೊಡುವುದು.
33.ಜುಮುಅ , ಜಮಾಅತ್ ನಮಾಝ್ ನ ಮಹತ್ವ ಹೇಳಿ ಕೊಡುವುದು.
34.ಉಪವಾಸ ಹಿಡಿಯುವಂತೆ ನೋಡಿ ಕೊಳ್ಳುವುದು.
35.ಹೆಣ್ಣು ಮಕ್ಕಳು ಸಂಪೂರ್ಣ ಶರೀರ ಮುಚ್ಚುವಂತೆ ನೋಡಿ ಕೊಳ್ಳುವುದು.
36.ಗಂಡು ಮಕ್ಕಳಿಗೆ ಅವರ ವಸ್ತ್ರವೂ, ಹೆಣ್ಣು ಮಕ್ಕಳಿಗೆ ಹೆಣ್ಣು ಮಕ್ಕಳ ವಸ್ತ್ರ ದರಿಸುವಂತೆ ನೋಡಿ ಕೊಳ್ಳುವುದು.
37.  7 ನೇ ವಯಸ್ಸಾದ ಹೆಣ್ಣು ಮಗು ತಲೆ ಮುಚ್ಚುವಂತೆ ಆಜ್ಞ್ಞಾಪಿಸುವುದು.
38.ತಿನ್ನುವಾಗ , ಕುಡಿಯುವಾಗ, ಕೊಡುವಾಗ , ತೆಗೆಯುವಾಗ ಬಲಕೈ ಉಪಯೊಗಿಸುವಂತೆಯೂ ಬಿಸ್ಮಿ , ಹಂದ್ ಹೇಳುವಂತೆಯೂ ಹೇಳಿ ಕೊಡುವುದು.
39.ಶರೀರ , ವಸ್ತ್ರ , ಸ್ಥಳ ಶುದ್ಧೀಕರಿಸುವಂತೆ ನೋಡಿ ಕೊಳ್ಳುವುದು.
40.ಎಲ್ಲಾ ಶುಕ್ರವಾರ ಉಗುರು ಕತ್ತರಿಸುವಂತೆ ಹೇಳಿ ಕೊಡುವುದು.
41.ಆಹಾರದ ಮುಂಚೆ ಹಾಗೂ ನಂತರ ಕೈ ತೊಳೆಯುವಂತೆ ನೋಡಿ ಕೊಳ್ಳುವುದು.
42.ತಪ್ಪು ಕಂಡು ಬಂದಲ್ಲಿ ಅಶ್ಲೀಲ ಮಾತುಗಳಿಂದ ಬಯ್ಯದೆ ಬಹಳ ಪ್ರೀತಿಯ ಮೂಲಕ ಹೇಳಿ ಸರಿ ಪಡಿಸುವುದು.
43.ಅಝಾನ್ ನ ವೇಳೆ ಮಾತಾಡುವುದನ್ನು ವಿರೊಧಿಸುವುದು.
44.ಅಝಾನ್ ಗೆ ಉತ್ತರಿಸುವುದನ್ನು ಮತ್ತು ನಂತರವಿರುವ ಪ್ರಾರ್ಥನೆಯನ್ನು ಕಲಿಸಿ ಕೊಡುವುದು.
45.ಸಾಧ್ಯವಾದರೆ ಎಲ್ಲಾ ಮಕ್ಕಳಿಗೂ ಬೇರೆ ಬೇರೆ ಹಾಸಿಗೆಯಲ್ಲಿ ಮಲಗಿಸುವುದು.
46.ಅದು ಅಸಾದ್ಯವಾದಲ್ಲಿ ಗಂಡು ಮಕ್ಕಳನ್ನು ಒಂದು ರೂಮಿನಲ್ಲೂ ಹೆಣ್ಣು ಮಕ್ಕಳನ್ನು ಇನ್ನೊಂದು ರೂಮಿನಲ್ಲೂ ಮಲಗಿಸುವುದು.
47.ದಾರಿ ಮಧ್ಯೆ ಕಸ ಕಡ್ಡಿಗಳನ್ನು ಎಸೆಯದಂತೆ ಎಚ್ಚರವಹಿಸುವುದು.
48.ದಾರಿ , ಮಾರ್ಗ ಗಳಲ್ಲಿರುವ ಅಡೆ ತಡೆಗಳನ್ನು ನಿವಾರಿಸುವುದು
49.ಅಂಗಡಿಗಳ ಬಳಿ, ಬಸ್ ಸ್ಟ್ಯಾಂಡ್ ಗಳಲ್ಲಿ ಅನಗತ್ಯ ನಿಲ್ಲದಂತೆ ನೋಡಿಕೊಳ್ಳುವುದು.
50.ಇಡೀ ಸಮಯ ಆಟ ಆಡದಂತೆ ನೋಡಿಕೊಳ್ಳುವುದು.
51.ಸಮಯವು ಅಮೂಲ್ಯವಾಗಿದೆ ಎಂದೂ ಅದನ್ನು ಅನಗತ್ಯ ಖರ್ಚು ಮಾಡದಂತೆ ಉಪದೇಶಿಸುವುದು.
52.ಸುನ್ನೀ ಮುಸಲ್ಮಾನರನ್ನು ಕಂಡರೆ ಸಲಾಂ ಹೇಳಬೇಕೆಂದು ಹೇಳಿಕೊಡುವುದು.
53.ನೆರೆಕರೆಯವರಿಗೆ, ಗೆಳೆಯರಿಗೆ , ಕುಟುಂಬಕ್ಕೆ ಉಪಕಾರ ಮಾಡುವ ಮನುಷ್ಯನಾಗಬೇಕೆಂದು ಹೇಳಿ ಕೊಡುವುದು.
54.ಅತಿಥಿ ಗಳನ್ನು ಗೌರವಿಸುವುದು, ಅವರನ್ನು ಸತ್ಕರಿಸುವುದರ ಬಗ್ಗೆ ಹೇಳಿಕೊಡುವುದು.
55.ಒಳ್ಳೆಯ ಕಾರ್ಯಗಳಲ್ಲಿ ಮಕ್ಕಳಿಗೆ ಧೈರ್ಯ ತುಂಬಿ ಕೊಡುವುದು.
56.ಖುರ್ ಆನ್ , ಹದೀಸ್ , ಇಮಾಮರುಗಳ ಗ್ರಂಥಗಳಲ್ಲಿ ಇರುವ ಸಜ್ಜನರ ಚರಿತ್ರೆ ಹೇಳಿ ಕೊಡುವುದು.
57.ಮಕ್ಕಳಿಗೆ ಹಣ ಹಾಗೂ ಇನ್ನಿತರ ಸೊತ್ತುಗಳು ನೀಡುವಾಗ ಹೆಚ್ಚು ಕಡಿಮೆ ಮಾಡದಿರುವುದು.
58.ಇಸ್ಲಾಮಿನ ಪುಸ್ತಕ ಓದುವುದನ್ನು ರೂಡಿ ಮಾಡಿಸುವುದು.
59.ನೂತನವಾದಿಗಳ ಆಶಯಗಳನ್ನೂ ಅವರ ಗೆಳೆತನದಿಂದಲೂ ದೂರ ಸರಿಯುವಂತೆ ನೋಡಿಕೊಳ್ಳುವುದು.
60.ಹಣದೊಂದಿಗೆ  ಪ್ರೀತಿ ಬರದಂತೆ ನೋಡಿಕೊಳ್ಳುವುದು.
61.ಮಕ್ಕಳು ವಿವಾಹ ಪ್ರಾಯ ತಲುಪಿದ್ದಲ್ಲಿ ಒಳ್ಳೆಯ ನೆಂಟಸ್ಥಿಕೆ ನೋಡಿ ವಿವಾಹ ಮಾಡಿ ಕೊಡುವುದು.
62.ಅನ್ಯ ಸ್ತ್ರೀ ಪುರುಷರು ಒಬ್ಬಂಟಿಯಾಗಿ ಇರುವ ಸಂದರ್ಭವನ್ನು ಇಲ್ಲವಾಗಿಸುವುದು.
63.ಭ್ರೂಣ ಹತ್ಯೆ, ಗರ್ಭ ಶಸ್ತ್ರ ಚಿಕಿತ್ಸೆ ಮಾಡುವುದನ್ನು ವಿರೋಧಿಸಬೇಕು.
64.ಮಣಿ ಗಂಟಿನ ಕೆಳಗೆ ವಸ್ತ್ರ ಇಳಿಯದಂತೆ ಗಂಡು ಮಕ್ಕಳನ್ನು ನೋಡಿಕೊಳ್ಳಬೇಕು.
65.ಪಾರಂಪರ್ಯ ಸಂಪ್ರದಾಯವನ್ನು ತ್ಯಜಿಸದಂತೆ ನೋಡಿಕೊಳ್ಳಬೇಕು.
66.ರಾತ್ರಿ ಬೇಗ ಮಲಗುವಂತೆ ಹಾಗೂ ಬೆಳಿಗ್ಗೆ ಬೇಗನೆ ಎದ್ದು ಸುಬಹ್ ನಮಾಝ್ ಮಾಡುವಂತೆ ನೋಡಿಕೊಳ್ಳಬೇಕು.
67.ರಾತ್ರಿ ಮಲಗುವಾಗ ಖುರ್ ಆನಿನ ಕೆಲವು ಭಾಗಗಳು ಮತ್ತು ದ್ಸಿಕ್ರ್ , ತಸ್ಬೀಹ್, ಸ್ವಲಾತ್ ಹೇಳಿ ಮಲಗುವಂತೆ ಉಪದೇಶಿಸಬೇಕು.
68.ಹಿರಿಯರ ಮುಂದೆ ಕುಳಿತು ಕೊಳ್ಳಬಾರದೆಂದು ಅವರನ್ನು ಗೌರವಿಸುವಂತೆ ಕಲಿಸಿ ಕೊಡಬೇಕು.
69.ಹಿರಿಯ ಮಗ ತಂದೆಯ ಸ್ಥಾನದಲ್ಲಿ ಎಂದು ಹೇಳಿ ಕೊಡಬೇಕು.
70.ಬಿಳಿ ವಸ್ತ್ರದೊಂದಿಗೆ ಹೆಚ್ಚು ಪ್ರೀತಿ ಉಂಟು ಮಾಡಿ ಕೊಡಬೇಕು.
71.ಪೆರ್ನಾಳ್ ಗಳ ದಿವಸ ಗೆಳೆಯರೊಡನೆ ಸೇರಿ ಅಲ್ಲಾಹನು ಇಷ್ಟಪಡದಂತಹ ಸ್ಥಳಗಳಿಗೆ ಹೋಗುವುದರ ಬದಲಾಗಿ ಕುಟುಂಬಿಕರ ಮನೆಗೆ ಹೋಗುವಂತೆ ನೋಡಿಕೊಳ್ಳಬೇಕು.
72.ಪ್ರವಾದಿ ಕುಟುಂಬವಾದ ಅಹ್ಲ್ ಬೈತ್ ನ ಬಗ್ಗೆ ವಿಶೇಷವಾಗಿ ಕಲಿಸಿಕೊಡಬೇಕು.
73.ತಲೆಕೂದಲು, ಗಡ್ಡ , ಮೀಸೆ ಸರಿಯಾಗಿ ಇಸ್ಲಾಮಿನ ಚೌಕಟ್ಟಿನೊಳಗಿರುವಂತೆ ನೋಡಿಕೊಳ್ಳಬೇಕು.
74.ದುಡುಕು ಮಾಡಬಾರದೆಂದು ಹೇಳುತ್ತಿರಬೇಕು.
75.ಯಾರೊಂದಿಗೂ ತರ್ಕ, ವಾದ ಮಾಡಬಾರದಾಗಿ ಹೇಳುತ್ತಿರಬೇಕು.
76.ತಂದೆ ತಾಯಿಯನ್ನು ಕಾಣುವಾಗ ಎದ್ದು ನಿಲ್ಲಲು ಕಲಿಸಬೇಕು.
77.ತಂದೆ ತಾಯಿ ಅನುಮತಿ ನೀಡದಿದ್ದಲ್ಲಿ ಯಾತ್ರೆ ಹೋಗದಂತೆ ಉಪದೇಶಿಸಬೇಕು.
78.ಅವರಲ್ಲಿ ಸುಳ್ಳು ಹೇಳದಂತೆ ಉಪದೇಶಿಸಬೇಕು.
79.ತಂದೆ ತಾಯಿಗಿಂತ ಪತ್ನಿ ಮಕ್ಕಳಿಗೆ ಬೆಲೆಕೊಡದಂತೆ ಉಪದೇಶಿಸಬೇಕು.
80.ತಂದೆ ತಾಯಿ ಕುಳಿತ ಸ್ಥಳಕ್ಕಿಂತೆ ಎತ್ತರದ ಸ್ಥಳದಲ್ಲಿ ಕುಳಿತುಕೊಳ್ಳದಂತೆ ನೋಡಿಕೊಳ್ಳಬೇಕು.
81.ವಿದ್ಯೆ ಕಲಿಸುವ ಉಸ್ತಾದ್ / ಗುರುಗಳ ಕೊರತೆ ಮಕ್ಕಳ ಎದುರಲ್ಲಿ ಹೇಳದಂತೆ ಎಚ್ಚರವಹಿಸಬೇಕು.
82.ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡರೆ ಛೇಡಿಸಿದೆ ಬಯ್ಯದೆ , ಹೊಡೆಯದೆ  ಇನ್ನೊಮ್ಮೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕೆಂಬ ಬುದ್ಧಿವಾದ ಹೇಳಬೇಕು.
83.ಪತ್ನಿ ಮಕ್ಕಳಿಗೆ ದರಿಸಲು ವಸ್ತ್ರ ಕೊಳ್ಳುವಾಗ ತಂದೆ ತಾಯಿಯನ್ನು ಅವಗಣಿಸದಂತೆ ಹೇಳುತ್ತಿರಬೇಕು.
84.ತಂದೆ ತಾಯಿಯರ ಶಾಪ ಲಭಿಸಿದ್ದಲ್ಲಿ ಉಂಟಾಗುವ ಭವಿಷ್ಯತನ್ನು ವಿವರಿಸಿ ಕೊಡಬೇಕು.
85.ಪತ್ನಿ ಮಕ್ಕಳಿಗೆ ಯಾವುದಕ್ಕೂ ಕೊರತೆ ಬರದಂತೆ ನೋಡಿಕೊಳ್ಳುವಂತೆ ಹೇಳುತ್ತಿರಬೇಕು.
86.ನಮಾಝ್ ಯಾ ಇನ್ನಿತರ ವೇಳೆಗಳಲ್ಲಿ ತಂದೆ ತಾಯಿಯರಿಗೆ ಪ್ರಾರ್ಥಿಸಲು ಮರೆಯದಂತೆ ಹೇಳುತ್ತಿರಬೇಕು.
87.ಜೀವಿಸಿದ್ದರೂ ಮರಣ ಹೊಂದಿದರೂ ತಂದೆ ತಾಯಿಯನ್ನು ಸಂದರ್ಶಿಸುವಂತೆ ಹೇಳುತ್ತಿರಬೇಕು.
88.ತಂದೆ ತಾಯಿ ರೋಗಿಯಾದಲ್ಲಿ ಅವರಿಗೆ ಪ್ರತೇಕ ಪರಿಗಣನೆ ಕೊಡಬೇಕಾಗಿ ಹೇಳುತ್ತಿರಬೇಕು.
89.ಅಲ್ಲಾಹನ ಪರೀಕ್ಷೆಗೆ ವಿದೇಯನಾದ ಒಬ್ಬ ವ್ಯಕ್ತಿಯನ್ನು ಕಂಡರೆ "ಅಲ್ ಹಂದುಲಿಲ್ಲಾಹ್ " ಎಂದು ಹೇಳಲು ಕಲಿಸಬೇಕು.
90.ಆಪತ್ತು ಬಂದಲ್ಲಿ" ಇನ್ನಾಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿಊನ್" ಹೇಳಲು ಕಲಿಸಬೇಕು.
91."ಮಕ್ಕಳಾದ ನೀವು ಮಾತ್ರ ನಮ್ಮ ಆಸರೆ" ಎಂದು ಮಕ್ಕಳಲ್ಲೇ ಹೇಳುತ್ತಿರಬೇಕು.
92.ಮಕ್ಕಳ ಮಕ್ಕಳನ್ನು ಸ್ವಂತ ಮಕ್ಕಳಂತೆ ನೋಡಿಕೊಳ್ಳಬೇಕು.
93.ಮಗಳ ಮಕ್ಕಳಿಗೆ ವಿಶೇಷ ಗೌರವ ಕೊಟ್ಟು ಮಗನ ಮಕ್ಕಳಿಗೆ ಬೇಲೆ ನೀಡದಂತವರಾಗಬಾರದು.
94.ಮಕ್ಕಳು ವಿದೇಶದಲ್ಲಾದರೆ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಹೋಗುವಾಗ ಸೊಸೆಯರನ್ನು ಜತೆಗೆ ಕರೆದೊಕೊಂಡು ಹೋಗಬೇಕು.
95.ಸೊಸೆಯರ ನಡುವೆ ಯಾವ ಕಾರಣಕ್ಕೂ ಹೆಚ್ಚು ಕಡಿಮೆ ಮಾಡುವವರಾಗಬಾರದು.
96.ಮಕ್ಕಳ ಒಳಿತಿಗಾಗಿ ಸದಾ ಸಮಯ ಪ್ರಾರ್ಥಿಸುವವರಾಗಬೇಕು.
97.ಸೊಸೆಯ ಮನೆಯಲ್ಲಿ ಏನಾದರೂ ಕಾರ್ಯಕ್ರಮವಿದ್ದಲ್ಲಿ ಆಹ್ವಾನವಿದ್ದರೆ ಹೋಗಿ ಸಂತೋಷಪಡಿಸಬೇಕು.
98.ನಿನ್ನ ಸ್ವಂತ ತಂದೆ ತಾಯಿಯಂತೆ ನಾವು ಕೂಡಾ ನಿನ್ನ ತಂದೆ ತಾಯಿಯವರೇ ಎಂದು ಸೊಸೆಯಲ್ಲಿ ನಿಮ್ಮ ಸ್ನೇಹ ಪ್ರಕಟಿಸುತ್ತಿರಬೇಕು.
99.ಸ್ವಂತ ಹೆಣ್ಣು ಮಕ್ಕಳು  ನಿಮ್ಮಲ್ಲಿ ಸೊಸೆಯರ ಬಗ್ಗೆ ಚಾಡಿ ಹೇಳಿದ್ದಲ್ಲಿ ಅದನ್ನು ಕೇಳಿ ಸೊಸೆಯರೊಂದಿಗೆ ವಾಗ್ವಾದಕ್ಕಿಳಿಯುವವರಾಗಬಾರದು.
100.ಇಂತಹ ಉಪದೇಶ ನೀಡದೆ ನಿಮ್ಮ ಮಕ್ಕಳು ದುನ್ಯಾ ಮತ್ತು ಪರಲೋಕದಲ್ಲಿ ನಿಮಗೆ ಉಪಕರಿಸುವರು ಎಂದು ಭಾವಿಸುವವರಾಗಬೇಡಿ.