5 ರೂಪಾಯಿ ಸಂಬಳದಿಂದ ಶುರುವಾಗಿ ಇಂದು ಅಮೆರಿಕಾದ 3 ಕಂಪನಿಯ ಒಡತಿಯಾದ ಜ್ಯೋತಿ ರೆಡ್ಡಿ
ಜೀವನದ ಯಾವುದೇ ಒಂದು ಅವಸ್ಥೆಯು ಸ್ಥಾಯಿಯಲ್ಲ .. ಇವತ್ತಿನ ಕಷ್ಟಗಳು ಜೀವನದ ಉದ್ದಕ್ಕೂ ಸಾಶ್ವತವಾಗಿ ಇರುವ ವ್ಯವಸ್ಥೆ ಅಲ್ಲ,ಬದಲಾವಣೆ ಇದ್ದೇ ಇರುತ್ತದೆ ಆದರೆ ನಮ್ಮೊಳಗೆ ನಾವು ಬದಲಾವಣೆಯ ಶ್ವಾಸವನ್ನು ಎಳೆಯುವ ತನಕ ಎಂಬುದು ಮಾತ್ರ ಸತ್ಯ..ಹಾಗೆ ನಡೆದ ಒಂದು ಘಟನೆ ನಮ್ಮ ನೆರೆ ರಾಜ್ಯವಾದ ಹಿಂದೆ ಆಂಧ್ರ ಪ್ರದೇಶದಲ್ಲಿ ಗುರುತಿಸಿಕೊಂಡಿದ್ದ ಈಗಿನ ತೆಲಂಗಾಣದ ಜ್ಯೋತಿ ರೆಡ್ಡಿ ಅವರದ್ದು.
ಕಡು ದಾರಿದ್ರ್ಯದಲ್ಲಿ ಹುಟ್ಟಿ ಬೆಳೆದ ಬಾಲ್ಯ ಜೀವನ, ತಂದೆ ಭಾರತೀಯ ಸೇನೆಯನ್ನು ಸೇರಿದರೂ ಕೆಲವೇ ವರ್ಷಗಳಲ್ಲಿ ಮಕ್ಕಳನ್ನೂ,ಮಡದಿಯನ್ನು ಬಿಟ್ಟಿರಲಾಗದೆ ಹಿಂದಿರುಗಿ ಮನೆ ಸೇರಿದ ದಿನವದು, ಸರಕಾರದಿಂದ ಯಾವುದೇ ಸವಲತ್ತು ಸಹ ಸಿಕ್ಕದೆ ಬಡತನದ ಬೇಗೆಯಲ್ಲಿ ಬದುಕುತ್ತಿರುವ ಕುಟುಂಬ..ತನ್ನ ಮಕ್ಕಳಿಗೆ ಆಹಾರ ನೀಡಲು ಸಹ ಆಗದ ಪರಿಸ್ಥಿತಿಗೆ ತಲುಪಿದಾಗ ಕೇವಲ 5 ವರ್ಷ ಇರುವ ಜ್ಯೋತಿ ಎಂಬ ಆ ಪುಟ್ಟ ಮಗುವನ್ನು ಅನಾಥ ಮಂದಿರಕ್ಕೆ ಸೇರಿಸಲು ತಂದೆಯು ನಿರ್ಬಂದಿತನಾಗುತ್ತಾನೆ. ಅದು ತಂದೆ ತಾಯಿ ಇಲ್ಲದೆ ಅನಾಥರಾದವರಿಗಾಗಿರುವ ಮಂದಿರ ಇಲ್ಲಿ ಆ ಪುಟ್ಟ ಮಗು ಜ್ಯೋತಿಯನ್ನು ಸೇರಿಸುವ ಸಲುವಾಗಿ ಅವಳ ತಂದೆಯು ಒಂದು ದೊಡ್ಡ ಸುಳ್ಳನ್ನೇ ಹೇಳಬೇಕಾಯಿತು, ಈ ಮಗುವಿನ ತಾಯಿಯು ಕೆಲದಿನಗಳ ಹಿಂದೆ ತೀರಿ ಹೋದರು ಎಂದು..!!! ಕಾರಣ ತಂದೆ ತಾಯಿ ಇರುವವರನ್ನು ಆ ಮಂದಿರದಲ್ಲಿ ಸೇರಿಸಲಾಗುತ್ತಿರಲಿಲ್ಲ.. ಬಡತನದ ಆ ಕಷ್ಟದ ಪರಿಸ್ಥಿತಿಯು ತಂದೆ ಆ ರೀತಿಯ ದೊಡ್ಡ ಸುಳ್ಳನ್ನು ಹೇಳಬೇಕಾಯಿತು. ಹಾಗೆ ಅನಾಥ ಮಂದಿರದೊಳಗೆ ಬದುಕತೊಡಗಿದಳು ಜ್ಯೋತಿ ರೆಡ್ಡಿ. ಆ ಕಾಲದಲ್ಲಿ ಚಳಿಯನ್ನು ಸಹಿಸಲಾಗದೆ ಜ್ಯೋತಿ ರೆಡ್ಡಿ ಎಂಬ ಬಾಲಕಿಗೆ ಇದ್ದ ಅತೀ ದೊಡ್ಡ ಆಶೆಯಂದರೆ ಯಾರಾದರೊಬ್ಬರು ನನಗೆ ಮೈಗೆ ಹಾಸಲು ಕಂಬಳಿ ಹೊದಿಕೆಯನ್ನು ತಂದುಕೊಟ್ಟಿದ್ದರೆ ಎಂದಾಗಿತ್ತು, ಕಾರಣ ಯಾರೂ ಇಲ್ಲದ ಆ ಪರಿಸ್ಥಿತಿಯು ಹಾಗಿತ್ತು.. ಯಾರಾದರೂ ನನ್ನ ಮನೆಯಿಂದ ಬರುವರೋ ಎಂದು ಅಲ್ಲಲ್ಲಿ ಹರಿದ ಒಂದು ಚಿಕ್ಕ ಬ್ಯಾಗ್ ಅನ್ನು ಹಿಡಿದು ದಿನಾ ಅನಾಥ ಮಂದಿರದ ದಾರಿಯನ್ನು ನೋಡುತ್ತಾ ಕಾಯುತ್ತಿದ್ದಳು., ಆದರೆ ಬೆಳಕು ಸರಿದು ಕಡು ಕಪ್ಪು ಆವರಿಸುವಾಗ ಇಂದೂ ಯಾರು ಬಂದಿಲ್ಲ ಎಂದು ಕಣ್ಣೇರು ಹಾಕುತ್ತಾ ಅನಾಥ ಮಂದಿರದ ಒಂದು ಮೂಲೆಯಲ್ಲಿ ಹೋಗಿ ತುಂಬಿದ ಕಣ್ಣುಗಳೊಂದಿಗೆ ನಿದ್ರೆಗೆ ಜಾರುತ್ತಿದ್ದಳು ಜ್ಯೋತಿ ರೆಡ್ಡಿ, ಬಿಡುವಿನ ಎಲ್ಲಾ ಸಮಯದಲ್ಲೂ ಅನಾಥ ಮಂದಿರದ ಮೇಲ್ವಿಚಾರಕರನ ಮನೆಯಲ್ಲಿ 5Rs ಸಂಬಳಕ್ಕಾಗಿ ಕೂಲಿ ಕೆಲಸ ಮಾಡುತ್ತಿದ್ದಳು ಜ್ಯೋತಿ ರೆಡ್ಡಿ..
ಹಾಗೆ 10 ನೇ ತರಗತಿ ಉತ್ತೀರ್ಣಳಾದಾಗ ತಂದೆಯು ಮತ್ತೆ ಅಲ್ಲಿ ಮುಂದುವರಿಸಲು ಬಯಸದೆ, ಅವಳ ಶಿಕ್ಷಣವನ್ನು ಅಲ್ಲಿಗೆ ಮೊಟಕುಗೊಳಿಸಿ ಜ್ಯೋತಿ ರೆಡ್ಡಿ ಯ ಮದುವೆಯನ್ನು ಗೊತ್ತು ಮಾಡಿದನು. ಅವಳಿಗಿಂತ ಅದೆಷ್ಟೋ ಹೆಚ್ಚು ಪ್ರಾಯ ಇರುವವನೊಂದಿಗೆ ಮದುವೆಯು ಸಹ ನಡೆಯಿತು. ಗಂಡನೋ ತುಂಬು ಮದ್ಯಪಾನಿ, ಗಂಡನ ಮನೆಯವರು ಅದಕ್ಕಿಂತಲೂ ಕೆಟ್ಟ ಸ್ವಭಾವವನ್ನು ಹೊಂದಿದವರು ಇದೆಲ್ಲಾ ಅನುಭವಿಸುವ ಜ್ಯೋತಿ ರೆಡ್ಡಿ ಯ ಬಾಳು ನರಕದ ಕೂಪವಾಗಿತ್ತು ಅದಾಗಲೇ ಆ ಚಿಕ್ಕ ಪ್ರಾಯದಲ್ಲಿ 2 ಮಕ್ಕಳ ತಾಯಿಯು ಸಹ ಆದಳು, ಇಷ್ಟೆಲ್ಲಾ ಆದರೂ ಜ್ಯೋತಿ ರೆಡ್ಡಿಯು ಜೀವನದಲ್ಲಿ ಜಿಗುಪ್ಸೆ ಗೊಳ್ಳಲಿಲ್ಲ, ಅವಳು ಚಿಂತಿಸಿದಳು ಹೇಗಾದರೂ ಮಾಡಿ ಈ ಬದುಕನ್ನು ಬದಲಾವಣೆ ಮಾಡಲೇಬೇಕು, ಅದಕ್ಕಾಗಿ ಹೊಸ ದಾರಿಗಳನ್ನು ಹುಡುಕತೊಡಗಿದಳು.. ಮುಂದುವರಿದಂತೆ ಜ್ಯೋತಿ ರೆಡ್ಡಿ ಯು ಒಂದು ಚಿಕ್ಕ ಸಾಕ್ಷರತಾ ತರಗತಿಯನ್ನು ಶುರುಮಾಡಲು ಪಣ ತೊಟ್ಟಳು.. ಆ ಕುಗ್ರಾಮದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆದವರು ಅಂತ ಯಾರು ಇಲ್ಲದನ್ನು ಸರಿಯಾಗಿ ಅರ್ಥಮಾಡಿಕೊಂಡು ಚಿಕ್ಕ ಮಟ್ಟಿನಲ್ಲಿ ತರಗತಿಯನ್ನು ಶುರುಮಾಡಿದಳು ಜೊತೆಗೆ ಅವಳು ಕಲಿಯ ತೊಡಗಿದಳು ಮುಂದೆ ತನ್ನ 25 ನೇ ವಯ್ಯಸ್ಸಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಯೂನಿವರ್ಸಿಟಿ ಯಿಂದ ಡಿಗ್ರಿಯನ್ನು ಸಹ ಪಾಸು ಮಾಡಿದಳು ಮುಂದೆ ಟೀಚರ್ ಆಗಿ ಸೇರಲು ಹಲವಡೆ ಪ್ರಯತ್ನಿಸಿದಳು ಬಹುತೇಕ ವಿದ್ಯಾಸಂಸ್ಥೆಗಳು ಅವಳಿಗೆ ಕೆಲಸ ನೀಡಲು ನಿರಾಕರಿಸಿದವು ಕೊನೆಗೆ ಮುಂದುವರಿದ ಪ್ರಯತ್ನದ ಫಲವಾಗಿ ಒಂದು ಸರಕಾರೀ ಶಾಲೆಯಲ್ಲಿ 380Rs ಸಂಬಳದೊಂದಿಗೆ ಒಂದು ಕಡೆ ಕೆಲಸವೂ ಸಿಕ್ಕಿತು ಆದರೆ 4 ಘಂಟೆಗಳ ಪಯಣವು ದಿನಾ ಹೋಗಬೇಕಿತ್ತು ಆದರೆ ಸಿಕ್ಕುವ ಸಂಬಳದ 90 ಶೇಕಡಾ ಸಹ ಹೋಗಿ ಬರುದಕ್ಕಾಗಿ ವಾಹನಕ್ಕೆ ನೀಡಬೇಕಿತ್ತು,ಇದೆಲ್ಲವನ್ನೂ ಅರಿತು ಜ್ಯೋತಿ ರೆಡ್ಡಿ ಆ ಕೆಲಸಕ್ಕೆ ಸೇರಲು ತೀರ್ಮಾನಿಸಿದ್ದು ಇದುವರೆಗೆ ನನ್ನನ್ನು ಸಮೂಹ ಕೂಲಿ ಕೆಲಸದವಳಾಗಿ ಕಾಣುದರಲ್ಲಿನ ಬದಲಾವಣೆ ಬೇಕಿತ್ತು. ಸಿಗುವ ಸಂಬಳಕ್ಕಿಂತ ಖರ್ಚು ಹೆಚ್ಚಾದಾಗ ಹಣಕ್ಕಾಗಿ ಶಾಲೆಗೆ ಹೋಗಿ ಬರುವ ಮಧ್ಯೆ ಸಾರಿ ಯನ್ನು ಮಾರಿ ಹಣವನ್ನು ಹೊಂದಿಸತೊಡಗಿದಳು, ಮುಂದೆ ಹಲವು ತಿಂಗಳ ನಂತರ ಅವಳ ಊರಿಗೆ ಹತ್ತಿರ ಇರುವ ಶಾಲೆಯಲ್ಲಿ ಕೆಲಸವೂ ಸಿಕ್ಕಿತು. ಸಿಕ್ಕಿದ ಹಣದಲ್ಲಿ ಉಳಿತಾಯ ಮಾಡಿ ಕಂಪ್ಯೂಟರ್ ಶಿಕ್ಷಣವನ್ನು ಸಹ ಕಲಿತಳು ಆ ಸಮಯಕ್ಕಾಗಿತ್ತು ಒಂದು ದಿನಾ ಅಮೇರಿಕಾದಿಂದ ಬಂದ ದಂಪತಿಯೊಬ್ಬರ ಜೀವನವನ್ನು ನೋಡಿ ತನ್ನ ಮಕ್ಕಳಿಗೆ ಉನ್ನತ ಶಿಕ್ಷಣ ಸಿಗಬೇಕು, ಅವರ ಜೀವನ ಉತ್ತಮವಾಗಿರಬೇಕು ಎಂದು ತೀರ್ಮಾನಿಸಿ ತಾನು ಅಮೇರಿಕಾ ಗೆ ಹೋಗಬೇಕು ಎಂದು ಬಯಸಿದಳು, ಮುಂದಿನ ಹಣದ ಉಳಿತಾಯ ಸಹ ಅಮೆರಿಕಾವನ್ನು ಲಕ್ಷ್ಯವಿಟ್ಟುಕೊಂಡಾಗಿತ್ತು, ಕೊನೆಗೆ ಅವಳ ತೀರ್ಮಾನದಂತೆ ಎಲ್ಲಾ ಹಣವನ್ನು ಒಟ್ಟುಮಾಡಿ ವಿಸಿಟಿಂಗ್ ವೀಸಾದಲ್ಲಿ ಅಮೆರಿಕಾವನ್ನು ತಲುಪಿಯೇ ಬಿಟ್ಟಳು, ಇಂಗ್ಲೀಷ್ ಬಾಷೆಯಲ್ಲಿ ಅಷ್ಟೇನೂ ಜ್ಞಾನ ಇಲ್ಲದೆ ಇದ್ದರು ಆರಂಭದಲ್ಲಿ ತುಂಬಾ ಕಷ್ಟಪಟ್ಟು ಕೊನೆಯಲ್ಲಿ ಒಂದು ಶಾಪ್ ಅಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸಕ್ಕೆ ಸೇರಿದಳು, ಇದರ ನಡುವೆ ಒಂದು recruitment ಕಂಪನಿ ಯಲ್ಲಿ ಕೆಲಸಕ್ಕೆ ಕರೆ ಬಂದಾಗ ಇಂಟರ್ವ್ಯೂ ಅಲ್ಲಿ ಇಂಗ್ಲೀಷ್ ಬಾರದೆ ಇದ್ದುದರಿಂದ ಅವಮಾನಕ್ಕೆ ಸಹ ಒಳಗಾಗಬೇಕಾಯಿತು, ಮುಂದೆ ಇಂಗ್ಲೀಷ್ ಶಬ್ದ ಕೋಶವನ್ನು ಪಡೆದು ಇಂಗ್ಲೀಷ್ ಭಾಷೆ ಕಲಿಯತೊಡಗಿದಳು. ಮುಂದೆ ಬೇರೆ ಒಂದು ಕಡೆ ಕೆಲಸದ ಅವಕಾಶ ಸಿಕ್ಕಿದರೂ ಪೆರ್ಮೆನೆಂಟ್ ವೀಸಾ ಇಲ್ಲದ ಕಾರಣ ಕೆಲಸವನ್ನು ಕಳೆದುಕೊಳ್ಳಬೇಕಾಯಿತು.. ತಾನು ಪೆರ್ಮೆನೆಂಟ್ ವೀಸಾ ಪಡೆಯಲು ತುಂಬಾ ಶ್ರಮಿಸಿದಾಗ ಒಂದು ವಿಷಯವನ್ನು ಜ್ಯೋತಿ ರೆಡ್ಡಿ ಅರಿತುಕೊಂಡಳು ತುಂಬಾ ಜನರು ವೀಸಾ ಪಡೆಯಲು ಅದರ ಬಗೆಗಿನ ಮಾಹಿತಿ ಇಲ್ಲದೆ ಕಷ್ಟಪಡುತ್ತಿರುವುದು , ಆಗಲೇ ಮನಸಲ್ಲಿ ತೀರ್ಮಾನಿಸಿದಳು ವೀಸಾ ಸರಿಪಡಿಸುವ ಒಂದು ಚಿಕ್ಕ ಸಂಸ್ಥೆಯನ್ನು ಹುಟ್ಟು ಹಾಕುದು. ಹಾಗೆ ಒಂದು ಅಮೇರಿಕಾ ತಲುಪಿದ ಒಂದು ವರ್ಷದ ಒಳಗೆ 2001 ರಲ್ಲಿ ಸಂಸ್ಥೆಯನ್ನು ಹುಟ್ಟುಹಾಕಿದಳು. ಮುಂದೆ ಸ್ವಲ್ಪ ಸ್ವಲ್ಪವಾಗಿ ಯಶಸ್ಸನ್ನು ಕಾಣುತ್ತ ಹಲವಾರು ಸ್ಥರದಲ್ಲಿ ತನ್ನ ಉದ್ಯಮವನ್ನು ಬೆಳೆಸತೊಡಗಿದಳು. ಇಂದು key software sollution ಸೇರಿದಂತೆ 3 ಕಂಪನಿಗಳ CEO ಆಗಿ ಬಹು ಕೋಟಿಯ ವ್ಯಾಪಾರವನ್ನು ಮಾಡುತ್ತಾ ಜಗತ್ತಿನಲ್ಲೇ ಗುರುತಿಸುವಂತಾದಳು ಜ್ಯೋತಿ ರೆಡ್ಡಿ.ಕೇವಲ 5 ರೂಪಾಯಿಗಾಗಿ ದುಡಿದ ಜ್ಯೋತಿ ರೆಡ್ಡಿ ಇಂದು 3 ಕಂಪನಯಗಳ ಸಿಇಓ ಆಗಿದ್ದು ಅವಳ ನಿರಂತರ ಪರಿಶ್ರಮದಿಂದ ಮಾತ್ರವಾಗಿದೆ
ಯಾವಾಗ ಮನಸ್ಸು ತೀಕ್ಷ್ಮವಾಗಿ ಸ್ವಯಂ ಬದಲಾವಣೆ ಬಯಸಿ ಅದಕ್ಕಾಗಿ ಎಲ್ಲಾ ವಿಧದಲ್ಲೂ ಕಾರ್ಯಪ್ರಾಪ್ತವಾಗತೊಡಗುತ್ತದೆ ಎಂದಾದರೆ ಅವರು ಜೀವನದಲ್ಲಿ ಉನ್ನತ ವಿಜಯವನ್ನು ಅಲಂಕರಿಸಿಯೇ ತೀರುತ್ತಾರೆ.
-ದೀನಾರ್