ಭಾನುವಾರ, ಡಿಸೆಂಬರ್ 11, 2016

ಜ್ವರವಾಗಿತ್ತು ಕಾರಣ

ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಬಹಳ ಕ್ಷೀಣಿತರಾಗಿದ್ದರು. ಜ್ವರವು ಅವರ ಮೈಯನ್ನು ಬಲವಾಗಿ ಆವರಿಸಿಕೊಂಡಿತ್ತು. ಯಾವ ಪತ್ನಿಯ ಮನೆಯಲ್ಲಾಗಿದೆ ಇವತ್ತು ನನ್ನ ವಾಸವೆಂದು ತಿಳಿಯದ ಅವಸ್ಥೆ.

*"ನಾಳೆ ನಾನು ಎಲ್ಲಿಯಾಗಿರುವೆನು...? ನಾಳೆ ನಾನು ಎಲ್ಲಿಯಾಗಿದೆ ವಾಸಿಸಬೇಕಾದುದು..?* ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಪ್ರಶ್ನೆಯನ್ನು ಅರ್ಥಮಾಡಿಕೊಂಡ ಪತ್ನಿಯರು ಅವರನ್ನು ಆಯೀಶಾ(ರ) ರವರ ಮನೆಯಲ್ಲಿ ವಾಸಿಸಲು ಅನುಮತಿಯನ್ನು ನೀಡಿದರು. ಎರಡು ಸ್ವಹಾಬಿಗಳ ಹೆಗಲಲ್ಲಿ ಕೈ ಹಾಕಿಕೊಂಡು ಕಾಲುಗಳನ್ನು ಎಳೆಯುತ್ತಾ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಆಯೀಶಾ(ರ)ರವರ ಮನೆಯನ್ನು ತಲುಪಿದರು.

ಇದು.... ಈ ದಿನಗಳಲ್ಲಿ, ಅಥವಾ ರಬಿವುಲ್ ಅವ್ವಲ್ ಪ್ರಥಮ ವಾರದಲ್ಲಿ ಅವರು ಕಠಿಣವಾದ ಜ್ವರದಿಂದ ಮಲಗಿದ್ದರು. ಪ್ರೀಯ ಪತ್ನಿ ಆಯೀಶಾ(ರ) ಕುರ್'ಆನ್ ಸೂರಃಗಳನ್ನು ಓದಿ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಕೈಯಲ್ಲಿ ಊದಿ ಕೊಡುತ್ತಾ ಶರೀರವನ್ನು ತಡವುತ್ತಿದ್ದರು.

ಜ್ವರವೂ, ನೋವು ಕಠಿಣವಾಗತೊಡಗಿತು. ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಬೋಧರಹಿತರಾಗುತ್ತಿದ್ದರು. ನಡುನಡುವೆ ನೀರು ತಂದು ಶರೀರವನ್ನು ನೆನೆಸಲು ಅವರು ಹೇಳುತ್ತಿದ್ದರು. ಸ್ವಲ್ಪ ಸಮನ ಉಂಟಾದಾಗ ಮೆಲ್ಲಮೆಲ್ಲನೆ ನಡೆಯುತ್ತಾ ಅವರು ಮಸ್ಜೀದುನ್ ನೆಬಿಯ ಮಿಂಬರನ್ನು ಹತ್ತಿ ಜನರನ್ನುದ್ದೇಶಿಸಿ ಮಾತನಾಡತೊಡಗಿದರು.ಅದಾಗಿತ್ತು ಅಂತಿಮ ಪ್ರವಚನ.

ಅಲ್ಲಾಹನನ್ನು ಸ್ತುತ್ತಿಸುತ್ತಾ ಅವರು ಹೇಳಿದರು: *ಜನರೇ ಇಲ್ಲಿ ನನ್ನ ಹತ್ತಿರ ಬನ್ನಿರಿ*

ಅವರೆಲ್ಲರೂ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಸಮೀಪಕ್ಕೆ ಬಂದರು. ಅವರಲ್ಲಿ ಹೇಳತೊಡಗಿದರು. *ಹಿಸ್ರಾಯಿಲರನ್ನೂ, ಕ್ರೈಸ್ತರನ್ನೂ ಅಲ್ಲಾಹನು ಶಪಿಸಲಿ..! ಅವರುಗಳು ಅವರ ಬಳಿ ಬಂದ ಪ್ರವಾದಿಗಳ ಸಮಾಧಿಗಳನ್ನು ಆರಾಧನಾಲಯ ಮಾಡಿದರು. ನನ್ನ ಕಬರನ್ನು ನೀವು ಆರಾಧನಾಲಯವನ್ನಾಗಿ ಮಾಡದಿರಿ..*

*ಆ ನಂತರ ಅವರು ನಾನು ಯಾರದ್ದಾದರೂ ಬೆನ್ನಿಗೆ ಹೊಡೆದಿದ್ದರು ಅವರು ನನ್ನ ಬೆನ್ನಿಗೆ ಹೊಡೆಯಲಿ ನನ್ನ ಬೆನ್ನಿದೊ ಇಲ್ಲಿದೆ..! ಅವರು ನನ್ನಲ್ಲಿ ಪ್ರತಿಕಾರವನ್ನು ಮಾಡಲಿ. ನಾನ್ಯಾರದ್ದಾದರೂ ಅಭಿಮಾನಕ್ಕೆ ದಕ್ಕೆಯನ್ನುಂಟು ಮಾಡಿದ್ದರೆ ಅವರು ನನ್ನ ಅಭಿಮಾನಕ್ಕೆ ದಕ್ಕೆಯನ್ನುಂಟು ಮಾಡಬಹುದು. ನನ್ನ ಅಭಿಮಾನವಿದೋ ನಿಮ್ಮ ಮುಂದಿದೆ.. ನನ್ನಲ್ಲಿ ಅವರಿಗೆ ಪ್ರತಿಕಾರವನ್ನು ಮಾಡಬಹುದು..*

ಳುಹರ್ ನಮಾಜ್ ಕಳೆದ ನಂತರ ಅವರು ಪುನಃ ಮೇಲಿನ ಮಾತನ್ನು ಪುನರಾವರ್ತಿಸಿದರು. ಸ್ವಹಾಬಿಗಳಲ್ಲಿ ಒಬ್ಬರು ಎದ್ದು ನಿಂತು ಹೇಳಿದರು: *"ನನಗೆ ಮೂರು ದಿನಾರ್ ನೀವು ಕೊಡಲಿಕ್ಕಿದೆ"*

ಅದನ್ನು ಮರಳಿಸಲು ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ವ್ಯವಸ್ಥೆ ಮಾಡಿದರು. ಅನ್ಸಾರಿ ಸ್ವಹಾಬಿಗಳ ಕುರಿತು ಸ್ವಲ್ಪ ಮಾತನಾಡಿದ ನಂತರ ಅವರು ಮುಂದುವರಿಸಿದರು;

"ಒಬ್ಬ ದಾಸನಿಗೆ ಇಹಲೋಕ ಸೌಖ್ಯದಲ್ಲಿ ಅವನು ಇಚ್ಚಿಸುವುದ್ಯಾವುದೂ ಅವನಿಗೆ ಆಯ್ಕೆ ಮಾಡಿಕೊಳ್ಳುವ ಅನುಮತಿಯನ್ನು ನೀಡಲಾಗಿದೆ. ಅವನು ಅಲ್ಲಾಹನನ್ನು ಆಯ್ಕೆ ಮಾಡಿಕೊಂಡಿದ್ದಾನೆ."
*ಅಬೂಬಕ್ಕರ್ (ರ.ಅ) ರವರಿಗೆ ಮಾತ್ರವಾಗಿತ್ತು ಆ ಮಾತಿನ ಮರ್ಮವು ಅರ್ಥವಾದದ್ದು. ಲೋಕನಾಯಕ ಸಲ್ಲಲ್ಲಾಹು ಅಲೈವಸಲ್ಲಮರು ಈ ಲೋಕದಿಂದ ವಿರಮಿಸಲಿದ್ದಾರೆಂದು ಅಬೂಬಕ್ಕರ್ (ರ) ರವರು ಅಳತೋಡಗಿದರು.

ನಂತರ ಗುರುವಾರ ಮಗ್ರೀಬ್ ನಮಾಜಿಗೆ ಜ್ಬರ ಬರುತ್ತಿದ್ದರೂ ಅವರು ಮಸೀದಿಗೆ ಬಂದರು. ನಮಾಜಿಗೆ ನೇತೃತ್ವವನ್ನು ನೀಡಿದರು. ಇಶಾ ಸಮಯವಾದಾಗ ಜ್ವರವು ಅಧಿಕವಾಗತೊಡಗಿತು. ಜನರು ನಮಾಜ್ ಮಾಡದೆ ಪ್ರವಾದಿವರ್ಯರು ಬರುವುದನ್ನು ಕಾದು ಕುಳಿತರು. ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರಿಗೆ ಮೆಲೇಳಲಾಗುತ್ತಿಲ್ಲ..!!

ಸ್ವಲ್ಪ ನೀರು ತಂದು ಅದರಲ್ಲಿ ಸ್ನಾನ ಮಾಡಿ ನೋಡಿದರು. ಮೆಲೇಳಲು ಪ್ರಯತ್ನಿಸಿದಾಗ ಪ್ರವಾದಿವರ್ಯರು ಬೋಧರಹಿತರಾದರು. ಅಲ್ಪ ಸಮಯದ ನಂತರ ಬೋಧವು ಮರಳಿ ಬಂದಾಗ ಪ್ರವಾದಿವರ್ಯರು ಅನ್ವೇಷಿಸಿದರು; "ಜನರು ನಮಾಜ್ ಮಾಡಿದರಾ..?"

*"ಇಲ್ಲ ಅವರು ನಿಮ್ಮನ್ನು ಕಾಯುತ್ತಿದ್ದಾರೆ."* ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಪುನಃ ಎದ್ದೇಳಲು ಪ್ರಯತ್ನಿಸಿದರು. ಪುನಃ ಬೋಧರಹಿತರಾದರು.

ಇದೇ ರೀತಿ ಮೂರು ಸಲ ಸಂಭವಿಸಿತು. ಮೂರು ಬಾರಿಯು ಬೋದವು ಮರಳಿ ಬಂದಾಗ ಅವರು ಕೇಳಿದ್ದು ಜನರು ನಮಾಜ್ ಮಾಡಿದರಾ.? ಅಂತಿಮವಾಗಿ ಇನ್ನು ನನ್ನಿಂದ ಸಾಧ್ಯವಿಲ್ಲವೆಂದು ತಿಳಿದಾಗ ಅವರು ಹೇಳಿದರು;

*"ಅಬೂಬಕ್ಕರರಲ್ಲಿ ಜನರಿಗೆ ಇಮಾಮ್ ಆಗಿ ನಮಾಜ್ ಮಾಡಲು ಹೇಳಿರಿ.."*

ಆಯೀಶಾ(ರ)ರವರು ಅದನ್ನು ತಡೆಯಲು ಶ್ರಮಿಸಿದರು. ನನ್ನ ತಂದೆ ಅಬೂಬಕ್ಕರ್ ಮೃದು ಹೃದಯದವರಾಗಿದ್ದಾರೆ. ಕುರ್'ಆನ್ ಓದುವಾಗ ಅಳು ಬರಬಹುದು. ಅದುದರಿಂದ ಇನ್ಯಾರಾದರೂ ಇಮಾಮರಾಗಲಿ.....

ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಸಮ್ಮತಿಸಲಿಲ್ಲ. ಆಯೀಶಾ(ರ)ರೊಂದಿಗೆ ತುಸು ಕೊಪದಲ್ಲಿಯೆ ಮಾತನಾಡಿ ಅಬೂಬಕ್ಕರ್ ಇಮಾಮ್ ಆಗಿ ನಿಲ್ಲಲು ಪ್ರವಾದಿವರ್ಯರು ಪುನರಾವರ್ತಿಸುತ್ತಿದ್ದರು.

ಹೀಗೆ ಮೊದಲನೇ ಬಾರಿ ಮಸ್ಜೀದುನ್ ನೆಬಿಯಲ್ಲಿ ನೆಬಿ ಸಲ್ಲಲ್ಲಾಹು ಅಲೈವಸಲ್ಲಮರ ಉಪಸ್ಥಿತಿಯಲ್ಲಿ, ಬೇರೊಬ್ಬರ ಅಡಿಯಲ್ಲಿ ಜಮಾತ್ ನಮಾಜ್ ನಡೆಯಿತು..!!

ಒಂದೆರಡು ದಿನಗಳ ನಂತರ ಸ್ವಲ್ಪ ಚೇತರಿಕೆಯು ಕಂಡಾಗ ಇಬ್ಬರ ಹೆಗಲಿಗೆ ಕೈ ಹಾಕಿಕೊಂಡು ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಮಸೀದಿಯನ್ನು ತಲುಪಿದರು. ಅಬೂಬಕ್ಕರ್(ರ.ಅ)ರವರ ನೇತೃತ್ವದಲ್ಲಿ ಅಲ್ಲಿ ಳುಹರ್ ನಮಾಜ್ ನಡೆಯುತ್ತಿತ್ತು. ಪ್ರವಾದಿವರ್ಯರನ್ನು ಕಂಡ ಅಬೂಬಕ್ಕರ್(ರ.ಅ) ಹಿಂದೆ ಸರಿಯಲು ಅಣಿಯಾದರು.

ಕೈ ಸನ್ನೆಯಿಂದ ಅಲ್ಲಿಯೇ ನಿಲ್ಲಲು ಅವರಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಸೂಚಿಸಿದರು.

*"ನನ್ನನ್ನು ಅಬೂಬಕ್ಕರ್ ರವರ ಸಮೀಪ ಕುಳ್ಳಿರಿಸಿ."* ನಂತರ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ತಕ್ಬೀರ್ ದ್ವನಿ ಕೇಳಿದಾಗ ಅಬೂಬಕ್ಕರ್(ರ.ಅ) ರವರು ಉಚ್ಚಸ್ವರದಲ್ಲಿ ಹೇಳುತ್ತಾ ಅವರು ನಮಾಜನ್ನು ನಿರ್ವಹಿಸಿದರು.

ಮರುದಿನ ಆರೋಗ್ಯವು ಮತ್ತೆ ಹದಗೆಟ್ಟಿತ್ತು. ಪ್ರವಾದಿವರ್ಯರು ತಮ್ಮ ಕೈಯಲ್ಲಿ ಬಾಕಿ ಉಳಿದಿದ್ದ *ಆರು ದಿನಾರ್ ದಾನ ಮಾಡಿದರು* ಆಯುಧಗಳನ್ನು ಮುಸ್ಲೀಮರಿಗೆ ನೀಡಿದರು. ಯುದ್ದವಸ್ತ್ರವು ಒಬ್ಬ ಜೂದ ಕೈಯಲ್ಲಿ ಗಿರವಿಯಲ್ಲಿತ್ತು. ಅವತ್ತು ರಾತ್ರಿ ಬೆಳಕನ್ನು ಹಚ್ಚಲು ಬೇಕಾಗಿರುವ ಸ್ವಲ್ಪ ಎಣ್ಣೆಯನ್ನು ಆಯೀಶಾ(ರ.ಅ) ಪಕ್ಕದ ಮನೆಯಿಂದ ಸಾಲ ಪಡೆದರು.

*ರಬಿವುಲ್ ಅವ್ವಲ್ ಹನ್ನೆರಡು ಸೋಮವಾರ.... ಪ್ರಭಾತದ ಸಮಯ..* ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಆಯೀಶಾ(ರ.ಅ) ರವರ ಮನೆಯ ಪರದೆಯನ್ನು ಸರಿಸಿ ಮಸೀದಿಯತ್ತ ನೋಡಿದರು. ಜನರು ಅಬೂಬಕ್ಕರ್(ರ.ಅ)ರವರ ನೇತೃತ್ವದಲ್ಲಿ ನಮಾಜಿನಲ್ಲಿದ್ದರು.

ಬಾಗಿಲಿನ ಬಳಿ ಪ್ರವಾದಿವರ್ಯರ ಮುಖ ಕಂಡ ಅವೇಶದಲ್ಲಿ ಜನರು ನಮಾಜಿನಿಂದ ತಮ್ಮ ಶ್ರದ್ದೆಯನ್ನು ಕಳೆಯಲಾರಂಬಿಸಿದರು. ತಕ್ಬೀರ್ ಮೊಳಗಿಸಿ ಅವರು ಅಬೂಬಕ್ಕರ್ (ರ.ಅ)ರವರಿಗೆ ವಿವರನ್ನು ನೀಡಲು ಪ್ರಯತ್ನಿಸಿದರು. ಅಬೂಬಕ್ಕರ್ (ರ.ಅ) ಹಿಂದೆ ಸರಿಯಲು ನೋಡಿದರು. ನಮಾಜನ್ನು ಮುಂದುವರಿಸಲು ಕೈಸನ್ನೆ ಮಾಡುತ್ತಾ ಮುಗುಳುನಗುತ್ತಾ ಪ್ರವಾದಿವರ್ಯರ ಆ ಚಂದ್ರ ಮುಖವು ಪರದೆಗಳೆಡೆಯಲ್ಲಿ ಮರೆಯಾಯಿತು.

ವೇದನೆ,
ಅದು ಅತೀಶಕ್ತವಾಗತೊಡಗಿತು. ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ತಮ್ಮ ಮರಣದ ಸೂಚನೆಯನ್ನು ಪ್ರಕಟಿಸತೊಡಗಿದರು. ನೋವನುಭವಿಸುತ್ತಾ ನಡುನಡುವೆ ಭೋದರಹಿತರಾಗುತ್ತಾ ಕಷ್ಟಪಡುತ್ತಿರುವ ತಂದೆಯವರನ್ನು ಕಂಡ ಮಗಳು ಪಾತಿಮಾ(ರ.ಅ) *"ಹೊ..!! ನನ್ನ ತಂದೆಯವರು ಅನುಭವಿಸುತ್ತಿರುವಾ ಕಷ್ಟಗಳೇ!"*

ಅದು ಕೇಳಿದ ಪ್ರವಾದಿವರ್ಯರು ಪ್ರತಿಕರಿಸಿದರು; *"ನಿನ್ನ ತಂದೆಗೆ ಇವತ್ತಿನಿಂದ ಯಾವುದೇ ಕಷ್ಟಗಳನ್ನು ಅನುಭವಿಸಬೇಕಾಗಿ ಬರಲ್ಲ ಮಗಳೇ."*

ಮಗಳು ಪಾತಿಮಾರನ್ನು ಸಮೀಪ ಕುಳ್ಳಿರಿಸಿ ಪ್ರವಾದಿವರ್ಯರು ಒಂದು ಗುಟ್ಟು ಹೇಳಿದರು. ಅದನ್ನು ಕೇಳಿದಾಗ ಪಾತಿಮಾ(ರ.ಅ)ರವರು ಅಳತೊಡಗಿದರು. ಪುನಃ ಮರು ಕಿವಿಯಲ್ಲಿ ಇನ್ನೋಂದು ಗುಟ್ಟನ್ನು ಹೇಳಿದರು. ಅದನ್ನು ಕೇಳಿದ ಮಗಳು ನಗಲಾರಂಬಿಸಿದರು.

ಮೊಮ್ಮಕ್ಕಳಾದ ಹಸನ್, ಹುಸೈನ್ ರನ್ನು ಕರೆಯುತ್ತಾ ಚುಂಬನವನ್ನರ್ಪಿಸಿದರು. ನಲ್ಮೆಯನು ಉಪದೇಶಿಸಿದರು. ಪತ್ನಿಯರಲ್ಲಿ ಒಳ್ಳೆಯ ಕಾರ್ಯಗಳನ್ನು ಉಪದೇಶಿಸಿದರು.

ಅತಿಕಠಿಣವಾದ ನೋವಿನಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ತಮ್ಮ ಪತ್ನಿಯಲ್ಲಿ ಹೇಳಿದರು: *"ಆಯೀಶಾ.... ಅವತ್ತು ಖೈಬರಿನಲ್ಲಿ ನಾನು ಭಕ್ಷಿಸಿದ ವಿಷದ ರುಚಿಯು ಇವತ್ತು ನನಗೆ ಅನುಭವವಾಗುತ್ತಿದೆ."*

ಎಚ್ಚರ ಬರುವಾಗಲೆಲ್ಲಾ ಮುಖದಿಂದ ವಸ್ತ್ರವನ್ನು ಸರಿಸುತ್ತಾ ಅವರು ಹೇಳುತ್ತಿದ್ದರು: *ಜೂದರ ಮತ್ತು ಕ್ರೈಸ್ತರ ಮೇಲೆ ಅಲ್ಲಾಹನ ಶಾಪವಿರಲಿ..!! ಅವರು ಅವರ ಪ್ರವಾದಿಗಳ ಸಮಾಧಿಗಳನ್ನು ಆರಾಧನಾ ಕೇಂದ್ರಗಳನ್ನಾಗಿ ಮಾಡಿದವರಾಗಿದ್ದಾರೆ."*

*ತನ್ನ ನಂತರವಿರುವವರಿಗೆ ಶಕ್ತವಾದ ತಾಕೀತಾಗಿತ್ತು ಪುನರಾವರ್ತಿಸುತ್ತಿದ್ದ ಈ ಮಾತುಗಳು..*

ಅದರೋಂದಿಗೆ ಅವರು ನಡುನಡುವೆ ಉಪದೇಶಿಸುತ್ತಿದ್ದರು;

*ನಮಾಝ್..!! ನಮಾಝ್..!!*
*ನೀವುಗಳು ನಿಮ್ಮ ಅಧೀನದಲ್ಲಿರುವವರು..!!*

ಜನರು
ಪ್ರಾಧನ್ಯವನ್ನು ಮರೆತು ಬಿಡಬಹುದಾದ ಎರಡು ಸಂಭವಗಳು ಕೂಡ..!!

ನೋವಿನಿಂದ ತೀರಾ ಆಸಕ್ತರಾದ ಪ್ರವಾದಿ ಸಲ್ಲಲ್ಲಾಹು ಅಲೈವಸಮ್ಮರನ್ನು ಆಯೀಶಾ(ರ.ಅ) ತಮ್ಮ ಮಡಿಲಲ್ಲಿ ಮಲಗಿಸಿದರು. ಪ್ರವಾದಿವರ್ಯರನ್ನು ಕಾಣಲು ಬಂದ ಸ್ವಹಾಬಿಯೊಬ್ಬರ ಕೈಯಲ್ಲಿದ್ದ ಮಿಸ್ವಾಕಿನತ್ತ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಆಶೆಯಿಂದ ನೋಡುತ್ತಿರುವುದನ್ನು ಕಂಡ ಆಯೀಶಾ(ರ.ಅ)ಕೇಳಿದರು.

*"ನಾನದನ್ನು ನಿಮಗೆ ಕೇಳಿ ಕೊಡಲ..??"*

ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಹೌದೆಂಬಂತೆ ಸನ್ನೆ ಮಾಡಿದರು. ತುಸುಗಟ್ಟಿಯಾಗಿದ್ದ ಮಿಸ್ವಾಕಿನ ತುದಿಯನ್ನು ತಮ್ಮ ಹಲ್ಲಿನಿಂದ ಕಚ್ಚಿ ಮೆದುವಾಗುವಂತೆ ಮಾಡಿದ ಆಯೀಶಾ(ರ.ಅ)ರವರು ಅದರಿಂದ ಪ್ರವಾದಿವರ್ಯರ ದಂತ ಶುದ್ದಿಯನ್ನು ಮಾಡಿದರು. ನಡುನಡುವೆ ಹತ್ತಿರವಿದ್ದ ನೀರಿನ ಪಾತ್ರೆಯಲ್ಲಿ ಕೈ ಹಾಕಿ ಮುಖವನ್ನು ಸವರಿಕೊಡುತ್ತಿದ್ದರು.

ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ನೋವಿನೊಂದಿಗೆ ಹೀಗೆ ಹೇಳುತ್ತಲ್ಲಿದ್ದರು;

*"ಲಾಹಿಲಾಹ ಇಲ್ಲಲ್ಲಾಹ..!! ಸತ್ಯವಾಗಿಯೂ ಮರಣದ ನೋವು ಅದು ಭಯಾನಕವಾಗಿದೆ..!!"*

ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ತಮ್ಮ ಬೆರಳನ್ನು ಆಕಾಶಕ್ಕೆ ಎತ್ತಿ ಕಣ್ಣುಗಳನ್ನು ಮೇಲೆತ್ತಿ ಏನೋ ಪುನಃ ಹೇಳುತ್ತಿದ್ದಾರೆ. ಆಯೀಶಾ(ರ.ಅ) ಆಲಿಸಲಾರಂಬಿಸಿದರು;

*"ನೀನು ಅನುಗ್ರಹಿಸಿದ ಪ್ರವಾದಿಗಳ, ಸತ್ಯವಂತರ, ರಕ್ತಸಾಕ್ಷಿಗಳ, ಸ್ವಾದಾತುಗಳ ಕೂಟದಲ್ಲಿ ನನ್ನನ್ನೂ ಸೇರಿಸು... ಅಲ್ಲಾಹನೇ, ನನಗೆ ನೀನು ಪಾಪವಿಮೋಚನೆಯನ್ನು ನೀಡಿ ನಿನ್ನ ಕಾರುಣ್ಯವನ್ನು ನನ್ನ ಮೇಲೆ ವರ್ಷಿಸುತ್ತಿರು.. ಉನ್ನತನಾದ ಗೆಳೆಯನಾಗಿ ನನ್ನನ್ನು ನೀನು ಸೇರ್ಪಡಿಸು.. ಅಲ್ಲಾಹನೇ ಉನ್ನತನಾದ ಗೆಳೆಯ..!!"*

*ಅಂತಿಮ ವಾಕ್ಯವನ್ನು ಅವರು ಮೂರು ಸಲ ಪುನರಾವರ್ತಿಸಿದರು. ಈ ಮಧ್ಯೆ ಮೇಲೆತ್ತಿದ್ದ ಅವರು ಕೈ ಕೆಳಜಾರಿತು.*

*"ಅತ್ತ್ಯುನ್ನತನಾದ ಗೆಳೆಯನಾಗಿ ಪ್ರಪಂಚದ ಅತ್ತ್ಯುನ್ನತ ಮನುಷ್ಯನು ವಿರಮಿಸಿದ ಸಮಯ..!!"*

*ಇನ್ನಾ ಲಿಲ್ಲಾಹಿ ವ ಇನ್ನಾ ಇಲಹೀ ರಾಜೀವೂನ್..!*

*ಇದು ಹಿಜ್ರಾಃ ಹನ್ನೋಂದನೇ ವರುಷ ರಬಿವುಲ್ ಅವ್ವಲ್ ಹನ್ನೆರಡು ಸೋಮವಾರ ಮಧ್ಯಾಹ್ನದ ಸಮಯವಾಗಿತ್ತು. ಅವತ್ತಿನ ದಿವಸ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರಿಗೆ ಅರುವತ್ತಮೂರು ವಯಸ್ಸು ಪ್ರಾಯವಾಗಿತ್ತು!!*

✍🏼 *ಹಸ್ನಾಮೋಳ್.ಕೆ.ಸಿ.ನಗರ.*

ಪೆಟ್ರೋಲ್ ಬಂಕ್ ನಲ್ಲಿ ಮೋಸ

ಪೆಟ್ರೋಲ್ ಬಂಕ್ ನಲ್ಲಿ ಮೋಸ
ಹೋಗದಿರಿ ಹುಷಾರ್!!!!

ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸಿಕೊಳ್ಳೋದು
ಸರ್ವೇ ಸಾಮಾನ್ಯ, ಒಂದು ವರದಿಯ ಪ್ರಕಾರ ಪ್ರತಿ
ತಿಂಗಳು ಕೋಟ್ಯಾಂತರ ರೂಪಾಯಿಗಳಷ್ಟು
ಮೋಸದಿಂದಲೇ ಸೋರಿಹೊಗುತ್ತದೆ ಎಂದು
ನಮಗೆ ತಿಳಿದು ಬಂದಿದೆ. ಗ್ರಾಹಕರು ಮೈಯೆಲ್ಲಾ
ಕಣ್ಣಾಗಿದ್ದು ಎಚ್ಚರದಿಂದ ಇದ್ದರೆ ಖಂಡಿತವಾಗಿಯೂ ಈ
ಒಂದು ಮೋಸವನ್ನು ತಡೆಗಟ್ಟಬಹುದು..
ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುವವರು ನಾನಾ
ತಂತ್ರಗಳಿಂದ ನಿಮ್ಮನ್ನು ಮೋಸಗೊಳಿಸಬಹುದು,
ಅವರು ಉಪಯೋಗಿಸುವ ಕೆಲವು ತಂತ್ರಗಳು ಮತ್ತು
ಅದರಿಂದ ಹೇಗೆ ಬಚಾವ್ ಆಗಬಹುದು ಎಂದು ಇಲ್ಲಿ
ತಿಳಿಸಿ ಕೊಡುವ ಸಣ್ಣ ಪ್ರಯತ್ನ…
ಉದ್ದದ ಪೈಪ್:
ಇದು ವಾಸ್ತವವಾಗಿ ಪೆಟ್ರೋಲ್ ಹಾಕುವ ಪೈಪ್ನ
ವಿನ್ಯಾಸದ ದೋಷ. ಇದನ್ನೇ ಪೆಟ್ರೋಲ್ ಹಾಕುವ
ಹುಡುಗರು ತಮ್ಮ ಬಂಡವಾಳವಾಗಿ
ಮಾಡಿಕೊಳ್ಳುತ್ತಾರೆ. ಆವಶ್ಯಕತೆಗಿಂತ ಹೆಚ್ಚು ಉದ್ದ
ಇರುವ ಈ ಪೈಪ್ನಲ್ಲಿ ಹೆಚ್ಚುವರಿ ಪೆಟ್ರೋಲ್
ಹಾಗೆಯೇ ನಿಂತಿರುತ್ತದೆ. ಆದರೆ ಮೀಟರ್ ಸರಿಯಾಗಿ
ಓಡಿದ್ದರಿಂದ ನಮಗೆ ಅನುಮಾನ ಬರುವುದಿಲ್ಲ.
ಕನಿಷ್ಠವೆಂದರೂ 100 ಮಿಲಿ ಲೀಟರ್ನಷ್ಟು ಪೆಟ್ರೋಲ್
ಪಂಪ್ ಮಾಲೀಕನಿಗೆ ಲಾಭವಾಗುತ್ತದೆ. ಆದ್ದರಿಂದ
ಸಂಪೂರ್ಣ ಪೆಟ್ರೋಲ್ ಟ್ಯಾಂಕ್ಗೆ
ಬಿದ್ದಿರುವುದನ್ನು ಖಾತರಿ ಮಾಡಿಕೊಳ್ಳಬೇಕು.
ಚಿಲ್ಲರೆ ವಂಚನೆ:
ಇದು ನಮ್ಮ ಆತುರದ ಲಾಭ ಪಡೆದುಕೊಳ್ಳುವ
ತಂತ್ರ. ಸಾಮಾನ್ಯ ಚಿಕ್ಕ ಮೊತ್ತಕ್ಕೆ ಪೆಟ್ರೋಲ್
ಹಾಕಿಸಿಕೊಂಡು, ಸಾವಿರ ಅಥವಾ ಐನೂರು ರೂ.
ನೋಟು ನೀಡುವವರಿಗೆ ವಂಚನೆ ಮಾಡಲಾಗುತ್ತದೆ.
ನಮ್ಮದೆರು ಚಿಲ್ಲರೆಯನ್ನು ಸರಿಯಾಗಿ ಲೆಕ್ಕ ಹಾಕಿ
ಕೊಡುವಾಗ ಮಾತ್ರ 100, 50 ರೂ. ಕಡಿಮೆ
ನೀಡುತ್ತಾರೆ. ಆತುರದಲ್ಲಿರುವಾಗ ಅದರತ್ತ ಗಮನ
ನೀಡದೆ ಚಿಲ್ಲರೆಯನ್ನು ಎಣಿಸದೆಯೇ ಜೇಬಿಗೆ
ತುಂಬಿಕೊಂಡರೆ ಕಥೆ ಮುಗಿಯಿತು ಎಂದೇ ಅರ್ಥ.
ಗಮನ ತಪ್ಪಿಸುವುದು:
ಇಲ್ಲಿ ಇಬ್ಬರು ಒಟ್ಟು ಸೇರಿ ವಂಚಿಸುತ್ತಾರೆ. ನಾವು
ಪೆಟ್ರೋಲ್ ಮೀಟರ್ ನೋಡುತ್ತಿರುವಾಗ
ಮತ್ತೊಬ್ಬ ನಮ್ಮ ಗಮನ ಬೇರೆಡೆಗೆ ಸೆಳೆಯುತ್ತಾನೆ. ಆಗ
ಪೆಟ್ರೋಲ್ ಹಾಕುವುದನ್ನು ನಿಲ್ಲಿಸಲಾಗುತ್ತದೆ. ಆಗ
ಸಾವಿರ ರೂ. ಬದಲು 950 ರೂ. ಮೌಲ್ಯದ ಪೆಟ್ರೋಲ್
ಮಾತ್ರ ಹಾಕಿರುತ್ತಾರೆ. ಇದು ಸಾಮಾನ್ಯವಾಗಿ
ಹಳೆಯ ಪೆಟ್ರೋಲ್ ಪಂಪ್ಗಳಲ್ಲಿ ನಡೆಯುತ್ತದೆ.
ತಡೆಯುವ ಟ್ರಿಕ್:
ಕೆಲವೊಮ್ಮೆ ಪೆಟ್ರೋಲ್ ಹಾಕುವವರು ಆಗಾಗ
ನಿಲ್ಲಿಸಿ, ಮತ್ತೆ ಆರಂಭ ಮಾಡುವುದು ಕಾಣುತ್ತೇವೆ.
ಇದರಿಂದ ಏರ್ ಲಾಕ್ ಆಗಿ ಒಂದಿಷ್ಟು ಪೆಟ್ರೋಲ್
ಉಳಿಯುತ್ತದೆ. ಆದರೆ ಆಗಲೇ ಅದರ ಮೀಟರ್ ಓಡಿರುತ್ತದೆ.
ಹೀಗೆ ಮಾಡುವುದರಿಂದ 10 ಲೀಟರ್
ಪೆಟ್ರೋಲ್ನಲ್ಲಿ 150ರಿಂದ 200 ಮಿ.ಲೀ. ಪೆಟ್ರೋಲ್
ಪಂಪ್ನವರಿಗೆ ಉಳಿಯುತ್ತದೆ.
ಡಿಜಿಟಲ್ ವಂಚನೆ:
ಇತ್ತೀಚೆಗೆ ಡಿಜಿಟಲ್ ಎಲೆಕ್ಟ್ರಾನಿಕ್ ಡಿವೈಸ್
ಬಂದಿರುವುದರಿಂದ ವಂಚನೆ ಕಡಿಮೆಯಾಗಿದೆ ನಿಜ. ಆದರೆ
ದೇಶದ ಕೆಲವು ಭಾಗದಲ್ಲಿ ಅದರಲ್ಲೂ ಪಂಜಾಬ್ನಲ್ಲಿ
ಡಿಜಿಟಲ್ ಮೀಟರ್ನ್ನು ಟ್ಯಾಂಪರ್ ಮಾಡುವ
ಜಾಲವೊಂದು ಪತ್ತೆಯಾಗಿದೆ. ಮೀಟರ್ನ್ನು
ವಿರೂಪಗೊಳಿಸುವ ಮೂಲಕ ಅಲ್ಲಿ ತೋರಿಸಿದ
ಸಂಖ್ಯೆಗಿಂತಲೂ ಕಡಿಮೆ ಪೆಟ್ರೋಲ್ ಟ್ಯಾಂಕ್ಗೆ
ಬೀಳುವಂತೆ ಮಾಡಲಾಗುತ್ತದೆ.

ಶುಕ್ರವಾರ, ಡಿಸೆಂಬರ್ 9, 2016

ನೀರು ಕುಡಿಯೋಣ

ನೀರು ಕುಡಿಯೋಣ
------------------
ಈ ಲೇಖನದ ಶೀರ್ಷಿಕೆ ಓದಿ ಗಲಿಬಿಲಿ ಆಗದಿರಿ. ಸರಿಯಾಗಿಯೇ ಇದೆ. ಒಮ್ಮೆ ನಮ್ಮ ಇಡೀ ದಿನವನ್ನು ಕಣ್ಮುಂದೆ ತಂದು ಕೊಳ್ಳಿ ಮತ್ತು ಯೋಚಿಸಿ ಹೇಳಿ. ನಾವು ಒಂದು ದಿನದಲ್ಲಿ ಹೆಚ್ಚು ತಿನ್ನುತ್ತೇವಾ? ಹೆಚ್ಚು ನೀರನ್ನು ಕುಡಿಯುತ್ತೇವಾ? ತಿನ್ನುತ್ತೇವೆ ಎಂದಾದಲ್ಲಿ ಎಷ್ಟು ತಿನ್ನುತ್ತೇವೆ? ಹಸಿವು ನೀಗಿಸಿ ಕೊಳ್ಳಲು ತಿನ್ನುತ್ತೇವಾ? ಬಾಯಿ ಚಪಲಕ್ಕಾಗಿ ತಿನ್ನುತ್ತೇವಾ? ಎಂಬ ಅನೇಕ ಪ್ರಶ್ನೆಗಳು ಹುಟ್ಟಿ ಕೊಳ್ಳುತ್ತವೆ. ಮಕ್ಕಳಾದಿಯಾಗಿ ಬಹುಪಾಲು ಜನರು ಹೆಚ್ಚೆಚ್ಚು ತಿನ್ನುವ ಅಭ್ಯಾಸದಿಂದಾಗಿ ಅನಾರೋಗ್ಯಕ್ಕೆ ಈಡಾಗುತಿದ್ದೇವೆ ಎಂಬುದನ್ನು ತಿಳಿದೋ -ತಿಳಿಯದೋ ತಿನ್ನುವ ಕೆಲಸದಲ್ಲಿ ತೊಡಗಿಸಿ ಕೊಳ್ಳುತ್ತಾರೆ.

ಆದರೆ ಹೆಚ್ಚು ನೀರನ್ನು ಕುಡಿಯುತ್ತೇವೆ ಎಂದಾದಲ್ಲಿ ನೀವು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದೀರಿ ಎಂದರ್ಥ. ನಾವು ಆಹಾರವನ್ನು ಎಷ್ಟು ಪ್ರೀತಿಯಿಂದ ಸ್ವಾಹಾ ಮಾಡುತ್ತೇವೆಯೋ ಅಷ್ಟೇ ಆಸ್ಥೆಯಿಂದ ನೀರನ್ನು ಕುಡಿಯುತ್ತಾ ಇದ್ದಲ್ಲಿ ಏನೆಲ್ಲ ಪ್ರಯೋಜನಗಳು ನಮಗೆ ಲಭಿಸ ಬಹುದು ಎಂಬುದನ್ನು ಮನದಟ್ಟು ಮಾಡಲು ಅರಿವು ನೀಡಲು ಲೇಖನಕ್ಕೆ ಈ ರೀತಿಯ ಶಿರೋನಾಮೆ.

ಮಾತುಗಳಲ್ಲಿಯೇ ಮತ್ತೊಬ್ಬರಿಗೆ ನೀರು ಕುಡಿಸೋ, ನೀರು ಇಳಿಸೋ ಕಲೆ ಗೊತ್ತಿರುವ ಪ್ರಚಂಡ ಕಲಾವಿದರು ನಮ್ಮಲಿದ್ದಾರೆ.
ಆ ವಿಚಾರವಿಲ್ಲಿ ಅಪ್ರಸ್ತುತ. ಆದರೆ ಪ್ರತಿದಿನ ಕೇವಲ ನೀರನ್ನು ಕುಡಿಯುವುದರಿಂದ ಏನೆಲ್ಲಾ ರೋಗಗಳು ವಾಸಿಯಾಗುತ್ತವೆ ಎಂಬುದನ್ನು ತಿಳಿದು ಕೊಂಡಾಗ ನಂಬಲು ಕೊಂಚ ಕಷ್ಟವೆನಿಸುತ್ತದೆ.

ಬೆಳ್ಳಂಬೆಳಗ್ಗೆ ಎದ್ದ ತಕ್ಷಣ, ಹಾಳು ಮುಖ ತೊಳೆಯದೇ, ಹಲ್ಲುಜ್ಜುದೆ, ಕುಳಿತು ಕೊಂಡೇ ನೀರನ್ನು ಗುಟುಕು ಗುಟುಕಾಗಿ ಅಭ್ಯಾಸವನ್ನು ನಮ್ಮ ಪೂರ್ವಿಕರು ರೂಢಿಸಿ ಕೊಂಡಿದ್ದರು. ನೀರು ಗಂಟಲಲ್ಲಿ 'ಗುಟುಕ್... ಗುಟುಕ್... ಎಂದು ಶಬ್ದ ಮಾಡುತ್ತಾ ಸಾಗುವುದರಿಂದ ಗುಟುಕು ಶಬ್ದ ಹುಟ್ಟಿರ ಬಹುದು. ಬೆಳಿಗ್ಗೆ ನೀರು ಕುಡಿಯುವ ಸದಾಭ್ಯಾಸಕ್ಕೆ ನಮ್ಮವರು ಉಷಃಪಾನ ಎಂದರೆ ಜಪಾನೀಯರು ಹೈಡ್ರೋಥೆರಪಿ ಎಂದು ಹೆಸರಿಟ್ಟರು. ತಾಮ್ರದ ಚೊಂಬಿನಲ್ಲಿ ತುಂಬಿಟ್ಟ ನೀರನ್ನು ಬೆಳಗ್ಗೆ ನಸುಕಿನಲ್ಲಿ ಕುಳಿತು ಕುಡಿದು ನಂತರ ಸ್ವಲ್ಪ ನಡೆದಾಡುವುದರಿಂದ ವಾಸಿಯಾಗುವ ರೋಗಗಳ ಒಂದು ಸಣ್ಣ ಪಟ್ಟಿ ಇಲ್ಲಿದೆ.

1) ಮಲಬದ್ಧತೆ
2) ಭೇದಿ
3) ಮಧುಮೇಹ
4) ಮೂತ್ರಾಂಗದ ತೊಂದರೆ
5) ಅಸಿಡಿಟಿ
6) ಅತಿಭಾರ
7) ಸೈನಸ್
8) ಸ್ತ್ರೀಯರ ಮಾಸಿಕ ಸಮಸ್ಯೆ
9) ಕಣ್ಣಿನ ದೋಷಗಳು
10) ಉಸಿರಾಟದ ತೊಂದರೆ                                                         11 ) ಸ್ನಾಯು ನೋವು
12) ರಕ್ತದ ಒತ್ತಡ
13) ತಲೆ ನೋವು
14) ಕೆಮ್ಮು
15) ಕ್ಷಯ
16) ಜಠರ ಸಮಸ್ಯೆಗಳು
17) ಸ್ತನ ಕ್ಯಾನ್ಸರ್
18) ಸಾಮಾನ್ಯ ಪಾರ್ಶವಾಯು
19) ಹುಳಿ ತೇಗು
20) ಮೆದುಳು ದೋಷಗಳು
21) ಅಸ್ತಮಾ
22) ರಕ್ತದ ಕ್ಯಾನ್ಸರ್
23) ರಕ್ತಹೀನತೆ
24) ಒಳಕುರು
25) ಧ್ವನಿಪೆಟ್ಟಿಗೆ ಸಮಸ್ಯೆ
26) ಶ್ವಾಸಕೋಶದ ತೊಂದರೆಗಳು ಇತ್ಯಾದಿ.

ಇಷ್ಟೆಲ್ಲಾ ಸಮಸ್ಯೆಗಳ ಪರಿಹಾರವು ಕೇವಲ ದಿನವಿಡಿ ಆಗಾಗ ನೀರು ಕುಡಿಯುವುದರಿಂದ ಆಗುತ್ತದೆ. ಆದ್ದರಿಂದ ಇಲ್ಲಿ ನೀರೇ ದಿವ್ಯೌಷಧಿಯಾಗಿ ಕಾರ್ಯ ನಿರ್ವಹಿಸುತ್ತದೆ. ಅನವಶ್ಯಕವಾಗಿ ಔಷಧಿಗಳ ಸೇವನೆ, ಮಾತ್ರೆ, ಇಂಜೆಕ್ಷನ್ ಹೀಗೆ ಏನೂ ಖರ್ಚಿಲ್ಲದೇ ಕಾಯಿಲೆಗಳ ನಿವಾರಣೆ, ನಿಯಂತ್ರಣವು ನೀರು ಕುಡಿಯೋ ಅಭ್ಯಾಸದಿಂದ ಸಾಧ್ಯ ಎಂಬುದನ್ನು ಜಪಾನಿಯರು ಸಂಶೋಧನೆಗಳ ಮೂಲಕ ಕಂಡು ಕೊಂಡಿದ್ದಾರೆ.
u
ಪ್ರಾತಃ ಕಾಲದಲ್ಲಿ ಎದ್ದ ತಕ್ಷಣ ನೀರನ್ನು ಕುಡಿಯುವುದು ಪ್ರಾರಂಭದಲ್ಲಿ ಸ್ವಲ್ಪ ಕಷ್ಟಕರವೆನಿಸಿದರೂ ದಿನಂಪ್ರತಿ ಅಭ್ಯಾಸ ಬಲದಿಂದ ಒಂದೇ ಸಾರಿಗೆ 1 ರಿಂದ 1.25ಲೀ ನೀರು ಕುಡಿಯಲು ಸಾಧ್ಯವಾಗುತ್ತದೆ. ದಿನದ ಆರಂಭಕ್ಕೆ ಇದು ಉತ್ತಮ ತಳಹದಿ.  ನೀರಿನ ಸೇವನೆಯಿಂದ ಶರೀರ ಶುದ್ಧಿಯ ಜೊತೆಯಲ್ಲಿ ಹೊಸ ರಕ್ತವನ್ನು ಸೃಷ್ಟಿಸಿ ಪಚನಾಂಗಗಳನ್ನು ಬಲಗೊಳಿಸುತ್ತದೆ. ಕರುಳಿನ ಮ್ಯುಕೋಸೆಲ್ ಪದರಗಳು ಚುರುಕುಗೊಳ್ಳುತ್ತದೆ. ಕರುಳಿನ ಮ್ಯೂಕೋಸೆಲ್ ಪದರಗಳು ಜೀರ್ಣವಾದ ಆಹಾರವನ್ನು ಹೀರಿ ಕೊಂಡಾಗ ಅದು ರಕ್ತವಾಗಿ ಮಾರ್ಪಾಡುತ್ತದೆ. ಹೀಗೆ ತಯಾರಾಗುವ ಹೊಸ ರಕ್ತವು ರೋಗಗಳನ್ನು ನಿವಾರಣೆ ಮಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಕುಡಿದ ನೀರು ಕರುಳಿನಲ್ಲಿ ತುಂಬಿ ಕೊಂಡು ರಕ್ತ ಶುದ್ಧಿಗೊಳಿಸುವ ಜೊತೆಗೆ ಹೊಸ ರಕ್ತದ ಉತ್ಪಾದನೆಗೆ ಸಹಕಾರಿ ಆಗುತ್ತದೆ. ಆರೋಗ್ಯವಂತ ಮಾನವರು ದಿನದಲ್ಲಿ ಕನಿಷ್ಠ 3 ರಿಂದ 5 ಲೀ ನೀರು ಕುಡಿಯ ಬಹುದಾಗಿದೆ. ಗಂಟೆಗೊಂದು ಲೋಟ ನೀರು ಕುಡಿಯುವ ಹವ್ಯಾಸ ಒಳ್ಳೆಯದು.

ನೀರಿನ ಸೇವನೆಯಿಂದ ಆಗ ಬಹುದಾದ ಪರಿಣಾಮಗಳ ಬಗೆಗಿನ ಸಂಶೋಧನೆಗಳು ಈ ಕೆಳ ಕಂಡ ರೋಗಗಳು ಗುಣವಾಗಲು ತೆಗೆದು ಕೊಳ್ಳುವ ಕಾಲಾವಧಿಯನ್ನು ಆವರಣದಲ್ಲಿ ಸೂಚಿಸಿದೆ.

೧. ಮಲಬದ್ಧತೆ (2 ದಿನ)
೨. ಹುಳಿತೇಗು (4 ದಿನ)
೩. ಸಿಹಿಮೂತ್ರ ರೋಗ (10 ದಿನ)
೪.ರಕ್ತದ ಒತ್ತಡ (30 ದಿನ)
೫. ಗ್ಯಾಸ್ಟ್ರಿಕ್ (8 ದಿನ)
೬. ಕೀಲು ನೋವು (21 ದಿನ) ನೀರಿನ ಸೇವನೆಯ ಕುರಿತು ಕೆಲ ಸಂಗತಿಗಳ ಬಗ್ಗೆ ಗಮನ ಹರಿಸಿ.

1. ಊಟದ ಮಧ್ಯೆ ಮಧ್ಯೆ ನೀರನ್ನು ಕುಡಿಯ ಬಾರದು. ಊಟದ 40 ನಿಮಿಷ ಮೊದಲು ಮತ್ತು 90 ನಿಮಿಷದ ನಂತರ ನೀರನ್ನು ಕುಡಿಯ ಬೇಕು. ಊಟದ ಜೊತೆಯಲ್ಲಿ ಕುಡಿಯುವ ನೀರು ಜೀರ್ಣಾಗ್ನಿಯನ್ನು ನಂದಿಸಿ, ಜೀರ್ಣ ಕ್ರಿಯೆಯನ್ನು ನಿಧಾನಗೊಳಿಸುತ್ತದೆ.

2. ನೀರನ್ನು ಕುಡಿಯುವಾಗ ಸಾಧ್ಯವಾದಷ್ಟು ಕುಳಿತು ಕೊಂಡೇ ಕುಡಿಯ ಬೇಕು.

3. ನೀರನ್ನು ಗುಟುಕು -ಗುಟುಕಾಗಿ ಕುಡಿಯ ಬೇಕೆ ವಿನಃ ಗಟ-ಗಟ ಕುಡಿಯ ಬಾರದು

4. ಊಟದ ನಂತರ ಮಜ್ಜಿಗೆ, ಹಣ್ಣಿನ ರಸ, ಹಾಲು ಕುಡಿಯ ಬಹುದು.

5. ರಾತ್ರಿ ಮಲಗುವ ಮುನ್ನ ನೀರನ್ನು ಕುಡಿಯಲೇ ಬೇಕು.

6. ರೆಫ್ರಿಜರೇಟರ್ (ಫ್ರಿಜ್ ) ನೀರನ್ನು ಕುಡಿಯುವುದು ಹಿತಕರವಲ್ಲ.

ಸಂಜೀವಿನಿಯಂತೆ ಕೆಲಸ ಮಾಡುವ ನೀರು ಪಂಚಭೂತಗಳಲ್ಲಿ ಒಂದು. ಭೂಮಿಯ ಮತ್ತು ನಮ್ಮ ಶರೀರದ ಶೇ.70 ಪ್ರತಿಶತ ನೀರಿನಿಂದ ಆವೃತವಾಗಿದೆ. ತಿನ್ನುವ ಆಹಾರಕ್ಕಿಂತ ಕುಡಿಯುವ ನೀರಿಗೆ ಹೆಚ್ಚಿನ ಮಹತ್ವ ನೀಡಿದಲ್ಲಿ ಎಲ್ಲರೂ ಶತಾಯುಷಿಗಳಾಗಿ ಬಾಳಲು ಸಾಧ್ಯವಾದೀತು. ಹಾಗಾಗಿ  ನೀರನ್ನು ಚೆನ್ನಾಗಿ ಕುಡಿಯಿರಿ! ಮತ್ತು ಆಹಾರವನ್ನು ಅವಶ್ಯಕತೆ ಇರುವಷ್ಟೇ ತಿನ್ನಿರಿ.
🌷 ಸರ್ವೇ ಜನಾ ಸುಖಿನೋ ಭವಂತು 🌷
llಯೇೂಗಃ ಚಿತ್ತ  ವೃತ್ತಿ  ನಿರೋಧಃll

ಪ್ರವಾದಿ ಜೀವನ ಚರಿತ್ರೆಯ ಕಣ್ಣೀರ ಕಥೆ

*ಪ್ರವಾದಿ ಜೀವನ ಚರಿತ್ರೆಯ ಕಣ್ಣೀರ ಕಥೆ ಹೇಳಿದರೆ ಸಾಲದು-: ಅಬುಬಕ್ಕರ್ ಸಿದ್ದೀಕ್ ಜಲಾಲಿ*

🖋ಸುನ್ನೀಟುಡೇ

ಪ್ರವಾದಿ ಮುಹಮ್ಮದ್(ಸ)ರವರ ಜೀವನ ಚರಿತ್ರೆ ಹೇಳಿ ದುಃಖಿಸುವ ಮತ್ತು ಹೆಮ್ಮೆ ಪಡುವುದರ ಜೊತೆಗೆ ಆ ಪ್ರವಾದಿಯ ಜೀವನ ಮಾದರಿ ಅನುಸರಿಸಿ ಪರಿಶುದ್ದ ಮುಸ್ಲಿಮರಾಗಲು ಪ್ರಯತ್ನಿಸೋಣ ಎಂದು ಕೂರ್ನಡ್ಕ ಖತೀಬರಾದ ಅಬುಬಕ್ಕರ್ ಸಿದ್ದೀಕ್ ಜಲಾಲಿ ಇಂದು ತಮ್ಮ ಜುಮ್ಮಾ ಭಾಷಣದಲ್ಲಿ ಸಮುದಾಯಕ್ಕೆ ಕರೆನೀಡಿದರು. *ಪ್ರವಾದಿ ಮುಹಮ್ಮದ್(ಸ)ರವರು ಹಸಿದ ಹೊಟ್ಟೆಗೆ ಕಲ್ಲು ಕಟ್ಟಿದ್ದು, ಅವರನ್ನು ಮಕ್ಕಾದ ಜನರು ಹಿಂಸಿಸಿದ್ದು ಹೇಳಿ ನಾವು ಹೊಟ್ಟೆತುಂಬಾ ಉಂಡು ಬೌತಿಕ ಜಗತ್ತಿನಲ್ಲಿ ದಿಕ್ಕಾರಿಗಳಂತೆ ಬದುಕುವುದು ಮಹಾನ್ ಪ್ರವಾದಿಯ ಧರ್ಮಕ್ಕೆ ಮಾಡುವ ಅವಮಾನವಾಗಿದೆ ಎಂದೂ ಅವರು ಹೇಳಿದರು*.

ಪ್ರವಾದಿ ಜನ್ಮದಿನಾಚರಣೆ ಮತ್ತು ಅವರ ಜೀವನ ಮಾದರಿ ಕುರಿತ ಚರ್ಚೆಗಳು ಬಹಳ ಗಂಭೀರವಾಗಿಯೇ ಮಾಡುತ್ತೇವೆ ಆದರೆ ಅದರ ಅನುಷ್ಠಾನ ಮತ್ತು ಅನುಸರಣೆಯಲ್ಲಿ ನಾವು ತಾತ್ಸಾರ ತೋರುತ್ತೇವೆ. *ನಮಗೆ ಪ್ರವಾದಿಯವರ ಜನ್ಮದಿನವು ಮಹತ್ವ ಎನಿಸಿಕೊಳ್ಳಲು ಈ ತಿಂಗಳು ಒಂದು ಸುನ್ನತ್ತನಾದರೂ ಜೀವನದಲ್ಲಿ ಅಳವಡಿಸುತ್ತೇನೆ ಎಂಬ ಪ್ರತಿಜ್ನೆಯ ಮಾಡುಕೊಳ್ಳಿ* ಎಂದು ಹೇಳಿದ ಅವರು ಪ್ರವಾದಿ ಜನ್ಮದಿನದ ಕುರಿತ ಚರ್ಚೆಯಲ್ಲಿ ನಾವು ರಸೂಲರನ್ನು ಅವಮಾನಿಸುತ್ತಿರುವುದು  ಮತ್ತು ಪ್ರವಾದಿಯ ಸುನ್ನತ್ತನ್ನು ಹಿಯಾಲಿಸುವುದು ಕಾಣುತ್ತಿದ್ದೇವೆ.ಇದು ಇಸ್ಲಾಮಿನ ಆದರ್ಶದ ನಾಶಕ್ಕೆ ಹಾಗೇ ನಮ್ಮನ್ನೇ ನಾವು ಮೂರ್ಖ ಹಿಂಬಾಲಕರು ಎಂದು ನಿರೂಪಿಸುವುದಕ್ಕೆ ಕಾರಣವಾಗುತ್ತಿದೆ.ಈ ಬಗ್ಗೆ ಸಮುದಾಯ ಎಚ್ಚರಿಕೆ ವಹಿಸುವುದರ ಜೊತೆಗೆ ಇಸ್ಲಾಮಿನ ಗೌರವ ಮತ್ತು ಪ್ರವಾದಿ (ಸ) ಉಮ್ಮತುಗಳಾದ ನಮ್ಮ ಘಣತೆಯನ್ನು ಕಾಪಾಡಿಕೊಳ್ಳಿ ಎಂದವರು ಕರೆನೀಡಿದರು.

*ಇಂದಿನ ಅಬುಬಕ್ಕರ್, ಫಾರೂಕ್ , ಫಾತಿಮಾಳು ಹೆಸರಿನಲ್ಲಿ ಮುಸ್ಲಿಮ್ ಆಗಿರಬಹುದು ಆದರೆ ಸ್ವಭಾವ ಮತ್ತು ಆದರ್ಶದಲ್ಲಿ ಮುಸ್ಲಿಮರಾಗದೇ ಇದ್ದರೆ ಇಹಲೋಕ ಅವಮಾನವು ಪರಲೋಕ ನಷ್ಟವೂ ಆಗಬಹುದು ಹಾಗಾಗಿ ನಾವು ಪ್ರವಾದಿ ಮುಹಮ್ಮದ್(ಸ)ರ ಸ್ವರ್ಗದ ಸಂಗಾತಿಗಳಾದ ಅಬುಬಕ್ಕರ್ ಸಿದ್ದೀಕ್(ರ) ಹಾಗೂ ಉಮ್ಮರ್ (ರ) ಫಾತಿಮಾ (ರ)ರಂತಹ ಅನುಯಾಯಿಗಳಾಗಬೇಕು* ಎಂದ ಖತೀಬರು ಪ್ರವಾದಿ ಮುಹಮ್ಮದ್ (ಸ) ರು ಮರಣದವರೆಗೂ ಉಮ್ಮತ್ತುಗಳ ಕುರಿತು ಚಿಂತಿತರಾಗಿದ್ದರೂ ನಾವು ಮಾತ್ರ ಭಯ ಮತ್ತು ಭಕ್ತಿ ಇಲ್ಲದೆ ಬದುಕುತ್ತಿರುವುದು ಖೇದಕರ ಎಂದರು

ಬದಲಾಗಲೇ ಬೇಕಾದ ಅನಿವಾರ್ಯತೆ ಇದೆ.ಮರಣ ನಮ್ಮ ಸಮೀಪದಲ್ಲೇ ಇದೆ.ಅಧಿಕಾರ-ಸಂಪತ್ತು-ಜನಬಲ-ಅಡ್ವಾಂನ್ಸ್ ಆಗಿರುವ ವೈಧ್ಯಶಾಸ್ತ್ರಕ್ಕೂ ಮರಣದಿಂದ ಮನುಷ್ಯನನ್ನು ರಕ್ಷಿಸಲು ಸಾಧ್ಯವಿಲ್ಲ.ಎಲ್ಲಾ ಜೀವಿಗಲೂ ಅಂತಿಮವಾಗಿ ಈ ಭೂಮಿ ಆಕಾಶವೂ ನಾಶವಗಲೇ ಬೇಕು ಅನಂತರ ಅದು ಮರಳಿ ಸ್ಥಾಪಿಸಲ್ಪಡುತ್ತದೆ ನಾವೂ ಮರಳಿ ಎಬ್ಬಿಸಲ್ಪಡುತ್ತೇವೆ.ಆ ಮೊದಲು ಬದಲಾಗಬೇಕು. *ಪರಲೋಕ ಪ್ರಜ್ನೆ ಮತ್ತು ಭಯ ನಮ್ಮಲ್ಲಿ ಸದಾ ಜಾಗೃತವಾಗಿರಬೇಕು* ಎಂದ ಖತೀಬರು ಪ್ರವಾದಿ ಮುಹಮ್ಮದ್(ಸ)ರ ಅನುಸರಣೆ ಮತ್ತು  ಸುನ್ನತ್ತನ್ನು ಮರಣದವರೆಗೆ ಪಾಲಿಸುವ ಪ್ರತಿಜ್ನೆಯನ್ನು ಮಾಡಿ ಮಿಲಾದನ್ನು ಶಿಸ್ತು ಮತ್ತು ಸರಳವಾಗಿ  ಆಚರಿಸಿ ಎಂದು ಸಮುದಾಯಕ್ಕೆ ಕರೆನೀಡಿದರು
🖋
*ಸುನ್ನೀಟುಡೇ*

ಶುಕ್ರವಾರ, ಡಿಸೆಂಬರ್ 2, 2016

ಕೋಪ

ನಾನು ಕೋಪದಿಂದ ಮನೆ ಬಿಟ್ಟು ಬಂದೆ. ಎಷ್ಟು ಕೋಪ ಬಂದಿತ್ತೆಂದರೆ ಅಪ್ಪನ ಶೂ ಹಾಕ್ಕೊಂಡು ಬಂದಿರುವುದು ಕೂಡ ಗೊತ್ತಾಗಲಿಲ್ಲ. ಮಗನಿಗೆ ಒಂದು ಬೈಕ್ ಕೊಡಿಸಲಾಗದವರು ಇಂಜಿನಿಯರ್ ಆಗಬೇಕು ಎಂದು ಕನಸು ಕಾಣುವುದು ಯಾಕೆ....?

ನಾನು ದೊಡ್ಡ ವ್ಯಕ್ತಿಯಾಗುವವರೆಗೂ ಮತ್ತೆ ಮನೆ ಹೋಗುವುದಿಲ್ಲ....
ನನಗೆ ಎಷ್ಟು ಕೋಪ ಬಂದಿದೆಯೆಂದರೆ ಎಂದೂ ಮುಟ್ಟದ  ಅಪ್ಪನ ಪಾರ್ಸ್'ನ್ನು ತಗೊಂಡುಬಂದೆ. ಅಮ್ಮನಿಗೆ ಕೂಡ ಗೊತ್ತಿಲ್ಲದ ಲೆಕ್ಕಗಳೆಲ್ಲ ಅದರಲ್ಲಿ ಇವೆ. ಇಂದು ಅವೆಲ್ಲವೂ ನನಗೆ ಗೊತ್ತಾಯಿತು.

ನಡೆಯುತ್ತಿದ್ದರೆ ಬೂಟ್'ಗಳಲ್ಲಿ ಏನೋ ಚುಚ್ಚಿದ ಹಾಗೆ ಆಗುತ್ತಿದೆ. ಅದರೂ ನನ್ನ ಕೋಪ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಬೂಟ್'ಗಳ ಒಳಗೆ ಒದ್ದೆಯಾಗ ಅನುಭವವಾಯಿತು. ಎತ್ತಿ ನೋಡಿದೆ ಬೂಟ್'ಗಳ ತಳದಲ್ಲಿ ರಂಧ್ರಗಳಾಗಿವೆ. ಹಾಗೆ ಕುಂಟುತ್ತ ಬಸ್ ನಿಲ್ದಾಣಕ್ಕೆ ಬಂದೆ.

ಒಂದು ಗಂಟೆ ತನಕ ಯಾವುದೇ ಬಸ್ಸು ಇಲ್ಲ ಎಂದು ತಿಳಿಯಿತು. ಸರಿ ಏನು ಮಾಡುವುದು. ಅಪ್ಪನ ಪಾರ್ಸ್'ನಲ್ಲಿ ಏನೇನು ಇದೆ ನೋಡೋಣ ಎಂದು ತೆಗೆದೆ. ಆಫೀಸಿನಲ್ಲಿ 40,000 ಸಾಲ ತೆಗೆದುಕೊಂಡ ರಶೀದಿ, Laptop ಬಿಲ್ಲು. ಆ Laptop ನನ್ನ ಟೇಬಲ್ ಮೇಲಿದೆ. ಅಂದರೆ ನನಗಾಗಿ ಕೊಡಿಸಿದ್ದು.

ಮತ್ತೆ ಅದರಲ್ಲಿ ಆಫೀಸ್'ಗೆ ಒಳ್ಳೆಯ ಬೂಟ್'ಗಳನ್ನು ಹಾಕಿಕೊಂಡು ಬರುವಂತೆ ಮೇನೇಜರ್ ಕೊಟ್ಟ ನೋಟೀಸ್ ಲೇಟರ್. ಹೌದು ಅಮ್ಮ ನಾಲ್ಕು ತಿಂಗಳಿಂದ ಹೇಳುತ್ತಿದ್ದರು ಹೊಸ ಶೂ ತೆಗೆದುಕೊಳ್ಳಿ ಎಂದು. ಅಪ್ಪ ಇನ್ನೂ ಆರು ತಿಂಗಳು ಬರುತ್ತವೆ ಎನ್ನುತ್ತಿದ್ದ.

'ನಮ್ಮ ಈ Exchange ಮೇಳದಲ್ಲಿ ಹಳೆಯ ಸ್ಕೂಟರ್ ಕೊಟ್ಟು ಹೊಸ ಬೈಕ್ ಪಡೆಯಿರಿ' ಎಂಬ ಭಿತ್ತಿಪತ್ರ ಕಾಣಿಸಿತ್ತು.

ಹೌದು! ನಾನು ಮನೆ ಬಿಟ್ಟು ಬರುವಾಗ ಅಪ್ಪನ ಸ್ಕೂಟಾರ್ ಕಾಣಿಸುತ್ತಿಲ್ಲವಲ್ಲ....?

ನನ್ನ ಕಣ್ಣುಗಳು ಒದ್ದೆಯಾದವು. ತಕ್ಷಣವೇ ಮನೆ ಕಡೆ ಓಡತೊಡಗಿದೆ.....

ಈಗ ಬೂಟ್'ಗಳಿಂದ ನೋವಾಗುತ್ತಿಲ್ಲ....

ಮನೆಯಲ್ಲಿ ಅಪ್ಪ ಇಲ್ಲ... ಸ್ಕೂಟರ್ ಇಲ್ಲ... ನನಗೆ ಅರ್ಥವಾಯಿತು. ತಕ್ಷಣ Exchange ಆಪರ್ ನೀಡುವ ಸ್ಥಳಕ್ಕೆ ಓಡಿಬಂದೆ. ಅಪ್ಪ ಅಲ್ಲಿದ್ದಾರೆ....!

ದುಃಖವನ್ನು ತಡೆದುಕೊಳ್ಳಲಾಗಲಿಲ್ಲ. ಅಪ್ಪನನ್ನು ಗಟ್ಟಿಯಾಗಿ ತಬ್ಬಿಕೊಂಡು ಜೋರಾಗಿ ಅಳಲು ಆರಂಭಿಸಿದೆ....!

" ಬೇಡ ಅಪ್ಪ...! ನನಗೆ ಬೈಕ್ ಬೇಡ....!!ಅಂದೆ

ಆವಾಗ್ಲೆ ಗೊತ್ತಾಗಿದ್ದು  ಹೆತ್ತವರ ನೋವು,ಕಷ್ಟ,ಪ್ರೀತಿ ಎಂತದ್ದು ಅಂತ.

ನಾವು ಪ್ರೀತಿಸಬೇಕಾಗಿದ್ದು ಇಷ್ಟ ಪಡಬೇಕಾಗಿದ್ದು ಶೋಕಿ ತರುವಂತ ವಸ್ತುಗಳನ್ನಲ್ಲ
ನಮ್ಮ ಜೀವನವನ್ನ ಶೋಬಿಸುವ ಹೆತ್ತವರನ್ನ.

ಇದ್ದಾಗ ಕಡೆಗಣಿಸಿ ಸತ್ತಾಗ ಅತ್ತರೆ ಮತ್ತೆ ಹುಟ್ಟಿ ಬರುವವರೇ ಹೆತ್ತವರು.
ಯೋಚನೆ ಮಾಡಿ.