ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಬಹಳ ಕ್ಷೀಣಿತರಾಗಿದ್ದರು. ಜ್ವರವು ಅವರ ಮೈಯನ್ನು ಬಲವಾಗಿ ಆವರಿಸಿಕೊಂಡಿತ್ತು. ಯಾವ ಪತ್ನಿಯ ಮನೆಯಲ್ಲಾಗಿದೆ ಇವತ್ತು ನನ್ನ ವಾಸವೆಂದು ತಿಳಿಯದ ಅವಸ್ಥೆ.
*"ನಾಳೆ ನಾನು ಎಲ್ಲಿಯಾಗಿರುವೆನು...? ನಾಳೆ ನಾನು ಎಲ್ಲಿಯಾಗಿದೆ ವಾಸಿಸಬೇಕಾದುದು..?* ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಪ್ರಶ್ನೆಯನ್ನು ಅರ್ಥಮಾಡಿಕೊಂಡ ಪತ್ನಿಯರು ಅವರನ್ನು ಆಯೀಶಾ(ರ) ರವರ ಮನೆಯಲ್ಲಿ ವಾಸಿಸಲು ಅನುಮತಿಯನ್ನು ನೀಡಿದರು. ಎರಡು ಸ್ವಹಾಬಿಗಳ ಹೆಗಲಲ್ಲಿ ಕೈ ಹಾಕಿಕೊಂಡು ಕಾಲುಗಳನ್ನು ಎಳೆಯುತ್ತಾ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಆಯೀಶಾ(ರ)ರವರ ಮನೆಯನ್ನು ತಲುಪಿದರು.
ಇದು.... ಈ ದಿನಗಳಲ್ಲಿ, ಅಥವಾ ರಬಿವುಲ್ ಅವ್ವಲ್ ಪ್ರಥಮ ವಾರದಲ್ಲಿ ಅವರು ಕಠಿಣವಾದ ಜ್ವರದಿಂದ ಮಲಗಿದ್ದರು. ಪ್ರೀಯ ಪತ್ನಿ ಆಯೀಶಾ(ರ) ಕುರ್'ಆನ್ ಸೂರಃಗಳನ್ನು ಓದಿ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಕೈಯಲ್ಲಿ ಊದಿ ಕೊಡುತ್ತಾ ಶರೀರವನ್ನು ತಡವುತ್ತಿದ್ದರು.
ಜ್ವರವೂ, ನೋವು ಕಠಿಣವಾಗತೊಡಗಿತು. ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಬೋಧರಹಿತರಾಗುತ್ತಿದ್ದರು. ನಡುನಡುವೆ ನೀರು ತಂದು ಶರೀರವನ್ನು ನೆನೆಸಲು ಅವರು ಹೇಳುತ್ತಿದ್ದರು. ಸ್ವಲ್ಪ ಸಮನ ಉಂಟಾದಾಗ ಮೆಲ್ಲಮೆಲ್ಲನೆ ನಡೆಯುತ್ತಾ ಅವರು ಮಸ್ಜೀದುನ್ ನೆಬಿಯ ಮಿಂಬರನ್ನು ಹತ್ತಿ ಜನರನ್ನುದ್ದೇಶಿಸಿ ಮಾತನಾಡತೊಡಗಿದರು.ಅದಾಗಿತ್ತು ಅಂತಿಮ ಪ್ರವಚನ.
ಅಲ್ಲಾಹನನ್ನು ಸ್ತುತ್ತಿಸುತ್ತಾ ಅವರು ಹೇಳಿದರು: *ಜನರೇ ಇಲ್ಲಿ ನನ್ನ ಹತ್ತಿರ ಬನ್ನಿರಿ*
ಅವರೆಲ್ಲರೂ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಸಮೀಪಕ್ಕೆ ಬಂದರು. ಅವರಲ್ಲಿ ಹೇಳತೊಡಗಿದರು. *ಹಿಸ್ರಾಯಿಲರನ್ನೂ, ಕ್ರೈಸ್ತರನ್ನೂ ಅಲ್ಲಾಹನು ಶಪಿಸಲಿ..! ಅವರುಗಳು ಅವರ ಬಳಿ ಬಂದ ಪ್ರವಾದಿಗಳ ಸಮಾಧಿಗಳನ್ನು ಆರಾಧನಾಲಯ ಮಾಡಿದರು. ನನ್ನ ಕಬರನ್ನು ನೀವು ಆರಾಧನಾಲಯವನ್ನಾಗಿ ಮಾಡದಿರಿ..*
*ಆ ನಂತರ ಅವರು ನಾನು ಯಾರದ್ದಾದರೂ ಬೆನ್ನಿಗೆ ಹೊಡೆದಿದ್ದರು ಅವರು ನನ್ನ ಬೆನ್ನಿಗೆ ಹೊಡೆಯಲಿ ನನ್ನ ಬೆನ್ನಿದೊ ಇಲ್ಲಿದೆ..! ಅವರು ನನ್ನಲ್ಲಿ ಪ್ರತಿಕಾರವನ್ನು ಮಾಡಲಿ. ನಾನ್ಯಾರದ್ದಾದರೂ ಅಭಿಮಾನಕ್ಕೆ ದಕ್ಕೆಯನ್ನುಂಟು ಮಾಡಿದ್ದರೆ ಅವರು ನನ್ನ ಅಭಿಮಾನಕ್ಕೆ ದಕ್ಕೆಯನ್ನುಂಟು ಮಾಡಬಹುದು. ನನ್ನ ಅಭಿಮಾನವಿದೋ ನಿಮ್ಮ ಮುಂದಿದೆ.. ನನ್ನಲ್ಲಿ ಅವರಿಗೆ ಪ್ರತಿಕಾರವನ್ನು ಮಾಡಬಹುದು..*
ಳುಹರ್ ನಮಾಜ್ ಕಳೆದ ನಂತರ ಅವರು ಪುನಃ ಮೇಲಿನ ಮಾತನ್ನು ಪುನರಾವರ್ತಿಸಿದರು. ಸ್ವಹಾಬಿಗಳಲ್ಲಿ ಒಬ್ಬರು ಎದ್ದು ನಿಂತು ಹೇಳಿದರು: *"ನನಗೆ ಮೂರು ದಿನಾರ್ ನೀವು ಕೊಡಲಿಕ್ಕಿದೆ"*
ಅದನ್ನು ಮರಳಿಸಲು ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ವ್ಯವಸ್ಥೆ ಮಾಡಿದರು. ಅನ್ಸಾರಿ ಸ್ವಹಾಬಿಗಳ ಕುರಿತು ಸ್ವಲ್ಪ ಮಾತನಾಡಿದ ನಂತರ ಅವರು ಮುಂದುವರಿಸಿದರು;
"ಒಬ್ಬ ದಾಸನಿಗೆ ಇಹಲೋಕ ಸೌಖ್ಯದಲ್ಲಿ ಅವನು ಇಚ್ಚಿಸುವುದ್ಯಾವುದೂ ಅವನಿಗೆ ಆಯ್ಕೆ ಮಾಡಿಕೊಳ್ಳುವ ಅನುಮತಿಯನ್ನು ನೀಡಲಾಗಿದೆ. ಅವನು ಅಲ್ಲಾಹನನ್ನು ಆಯ್ಕೆ ಮಾಡಿಕೊಂಡಿದ್ದಾನೆ."
*ಅಬೂಬಕ್ಕರ್ (ರ.ಅ) ರವರಿಗೆ ಮಾತ್ರವಾಗಿತ್ತು ಆ ಮಾತಿನ ಮರ್ಮವು ಅರ್ಥವಾದದ್ದು. ಲೋಕನಾಯಕ ಸಲ್ಲಲ್ಲಾಹು ಅಲೈವಸಲ್ಲಮರು ಈ ಲೋಕದಿಂದ ವಿರಮಿಸಲಿದ್ದಾರೆಂದು ಅಬೂಬಕ್ಕರ್ (ರ) ರವರು ಅಳತೋಡಗಿದರು.
ನಂತರ ಗುರುವಾರ ಮಗ್ರೀಬ್ ನಮಾಜಿಗೆ ಜ್ಬರ ಬರುತ್ತಿದ್ದರೂ ಅವರು ಮಸೀದಿಗೆ ಬಂದರು. ನಮಾಜಿಗೆ ನೇತೃತ್ವವನ್ನು ನೀಡಿದರು. ಇಶಾ ಸಮಯವಾದಾಗ ಜ್ವರವು ಅಧಿಕವಾಗತೊಡಗಿತು. ಜನರು ನಮಾಜ್ ಮಾಡದೆ ಪ್ರವಾದಿವರ್ಯರು ಬರುವುದನ್ನು ಕಾದು ಕುಳಿತರು. ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರಿಗೆ ಮೆಲೇಳಲಾಗುತ್ತಿಲ್ಲ..!!
ಸ್ವಲ್ಪ ನೀರು ತಂದು ಅದರಲ್ಲಿ ಸ್ನಾನ ಮಾಡಿ ನೋಡಿದರು. ಮೆಲೇಳಲು ಪ್ರಯತ್ನಿಸಿದಾಗ ಪ್ರವಾದಿವರ್ಯರು ಬೋಧರಹಿತರಾದರು. ಅಲ್ಪ ಸಮಯದ ನಂತರ ಬೋಧವು ಮರಳಿ ಬಂದಾಗ ಪ್ರವಾದಿವರ್ಯರು ಅನ್ವೇಷಿಸಿದರು; "ಜನರು ನಮಾಜ್ ಮಾಡಿದರಾ..?"
*"ಇಲ್ಲ ಅವರು ನಿಮ್ಮನ್ನು ಕಾಯುತ್ತಿದ್ದಾರೆ."* ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಪುನಃ ಎದ್ದೇಳಲು ಪ್ರಯತ್ನಿಸಿದರು. ಪುನಃ ಬೋಧರಹಿತರಾದರು.
ಇದೇ ರೀತಿ ಮೂರು ಸಲ ಸಂಭವಿಸಿತು. ಮೂರು ಬಾರಿಯು ಬೋದವು ಮರಳಿ ಬಂದಾಗ ಅವರು ಕೇಳಿದ್ದು ಜನರು ನಮಾಜ್ ಮಾಡಿದರಾ.? ಅಂತಿಮವಾಗಿ ಇನ್ನು ನನ್ನಿಂದ ಸಾಧ್ಯವಿಲ್ಲವೆಂದು ತಿಳಿದಾಗ ಅವರು ಹೇಳಿದರು;
*"ಅಬೂಬಕ್ಕರರಲ್ಲಿ ಜನರಿಗೆ ಇಮಾಮ್ ಆಗಿ ನಮಾಜ್ ಮಾಡಲು ಹೇಳಿರಿ.."*
ಆಯೀಶಾ(ರ)ರವರು ಅದನ್ನು ತಡೆಯಲು ಶ್ರಮಿಸಿದರು. ನನ್ನ ತಂದೆ ಅಬೂಬಕ್ಕರ್ ಮೃದು ಹೃದಯದವರಾಗಿದ್ದಾರೆ. ಕುರ್'ಆನ್ ಓದುವಾಗ ಅಳು ಬರಬಹುದು. ಅದುದರಿಂದ ಇನ್ಯಾರಾದರೂ ಇಮಾಮರಾಗಲಿ.....
ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಸಮ್ಮತಿಸಲಿಲ್ಲ. ಆಯೀಶಾ(ರ)ರೊಂದಿಗೆ ತುಸು ಕೊಪದಲ್ಲಿಯೆ ಮಾತನಾಡಿ ಅಬೂಬಕ್ಕರ್ ಇಮಾಮ್ ಆಗಿ ನಿಲ್ಲಲು ಪ್ರವಾದಿವರ್ಯರು ಪುನರಾವರ್ತಿಸುತ್ತಿದ್ದರು.
ಹೀಗೆ ಮೊದಲನೇ ಬಾರಿ ಮಸ್ಜೀದುನ್ ನೆಬಿಯಲ್ಲಿ ನೆಬಿ ಸಲ್ಲಲ್ಲಾಹು ಅಲೈವಸಲ್ಲಮರ ಉಪಸ್ಥಿತಿಯಲ್ಲಿ, ಬೇರೊಬ್ಬರ ಅಡಿಯಲ್ಲಿ ಜಮಾತ್ ನಮಾಜ್ ನಡೆಯಿತು..!!
ಒಂದೆರಡು ದಿನಗಳ ನಂತರ ಸ್ವಲ್ಪ ಚೇತರಿಕೆಯು ಕಂಡಾಗ ಇಬ್ಬರ ಹೆಗಲಿಗೆ ಕೈ ಹಾಕಿಕೊಂಡು ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಮಸೀದಿಯನ್ನು ತಲುಪಿದರು. ಅಬೂಬಕ್ಕರ್(ರ.ಅ)ರವರ ನೇತೃತ್ವದಲ್ಲಿ ಅಲ್ಲಿ ಳುಹರ್ ನಮಾಜ್ ನಡೆಯುತ್ತಿತ್ತು. ಪ್ರವಾದಿವರ್ಯರನ್ನು ಕಂಡ ಅಬೂಬಕ್ಕರ್(ರ.ಅ) ಹಿಂದೆ ಸರಿಯಲು ಅಣಿಯಾದರು.
ಕೈ ಸನ್ನೆಯಿಂದ ಅಲ್ಲಿಯೇ ನಿಲ್ಲಲು ಅವರಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಸೂಚಿಸಿದರು.
*"ನನ್ನನ್ನು ಅಬೂಬಕ್ಕರ್ ರವರ ಸಮೀಪ ಕುಳ್ಳಿರಿಸಿ."* ನಂತರ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ತಕ್ಬೀರ್ ದ್ವನಿ ಕೇಳಿದಾಗ ಅಬೂಬಕ್ಕರ್(ರ.ಅ) ರವರು ಉಚ್ಚಸ್ವರದಲ್ಲಿ ಹೇಳುತ್ತಾ ಅವರು ನಮಾಜನ್ನು ನಿರ್ವಹಿಸಿದರು.
ಮರುದಿನ ಆರೋಗ್ಯವು ಮತ್ತೆ ಹದಗೆಟ್ಟಿತ್ತು. ಪ್ರವಾದಿವರ್ಯರು ತಮ್ಮ ಕೈಯಲ್ಲಿ ಬಾಕಿ ಉಳಿದಿದ್ದ *ಆರು ದಿನಾರ್ ದಾನ ಮಾಡಿದರು* ಆಯುಧಗಳನ್ನು ಮುಸ್ಲೀಮರಿಗೆ ನೀಡಿದರು. ಯುದ್ದವಸ್ತ್ರವು ಒಬ್ಬ ಜೂದ ಕೈಯಲ್ಲಿ ಗಿರವಿಯಲ್ಲಿತ್ತು. ಅವತ್ತು ರಾತ್ರಿ ಬೆಳಕನ್ನು ಹಚ್ಚಲು ಬೇಕಾಗಿರುವ ಸ್ವಲ್ಪ ಎಣ್ಣೆಯನ್ನು ಆಯೀಶಾ(ರ.ಅ) ಪಕ್ಕದ ಮನೆಯಿಂದ ಸಾಲ ಪಡೆದರು.
*ರಬಿವುಲ್ ಅವ್ವಲ್ ಹನ್ನೆರಡು ಸೋಮವಾರ.... ಪ್ರಭಾತದ ಸಮಯ..* ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಆಯೀಶಾ(ರ.ಅ) ರವರ ಮನೆಯ ಪರದೆಯನ್ನು ಸರಿಸಿ ಮಸೀದಿಯತ್ತ ನೋಡಿದರು. ಜನರು ಅಬೂಬಕ್ಕರ್(ರ.ಅ)ರವರ ನೇತೃತ್ವದಲ್ಲಿ ನಮಾಜಿನಲ್ಲಿದ್ದರು.
ಬಾಗಿಲಿನ ಬಳಿ ಪ್ರವಾದಿವರ್ಯರ ಮುಖ ಕಂಡ ಅವೇಶದಲ್ಲಿ ಜನರು ನಮಾಜಿನಿಂದ ತಮ್ಮ ಶ್ರದ್ದೆಯನ್ನು ಕಳೆಯಲಾರಂಬಿಸಿದರು. ತಕ್ಬೀರ್ ಮೊಳಗಿಸಿ ಅವರು ಅಬೂಬಕ್ಕರ್ (ರ.ಅ)ರವರಿಗೆ ವಿವರನ್ನು ನೀಡಲು ಪ್ರಯತ್ನಿಸಿದರು. ಅಬೂಬಕ್ಕರ್ (ರ.ಅ) ಹಿಂದೆ ಸರಿಯಲು ನೋಡಿದರು. ನಮಾಜನ್ನು ಮುಂದುವರಿಸಲು ಕೈಸನ್ನೆ ಮಾಡುತ್ತಾ ಮುಗುಳುನಗುತ್ತಾ ಪ್ರವಾದಿವರ್ಯರ ಆ ಚಂದ್ರ ಮುಖವು ಪರದೆಗಳೆಡೆಯಲ್ಲಿ ಮರೆಯಾಯಿತು.
ವೇದನೆ,
ಅದು ಅತೀಶಕ್ತವಾಗತೊಡಗಿತು. ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ತಮ್ಮ ಮರಣದ ಸೂಚನೆಯನ್ನು ಪ್ರಕಟಿಸತೊಡಗಿದರು. ನೋವನುಭವಿಸುತ್ತಾ ನಡುನಡುವೆ ಭೋದರಹಿತರಾಗುತ್ತಾ ಕಷ್ಟಪಡುತ್ತಿರುವ ತಂದೆಯವರನ್ನು ಕಂಡ ಮಗಳು ಪಾತಿಮಾ(ರ.ಅ) *"ಹೊ..!! ನನ್ನ ತಂದೆಯವರು ಅನುಭವಿಸುತ್ತಿರುವಾ ಕಷ್ಟಗಳೇ!"*
ಅದು ಕೇಳಿದ ಪ್ರವಾದಿವರ್ಯರು ಪ್ರತಿಕರಿಸಿದರು; *"ನಿನ್ನ ತಂದೆಗೆ ಇವತ್ತಿನಿಂದ ಯಾವುದೇ ಕಷ್ಟಗಳನ್ನು ಅನುಭವಿಸಬೇಕಾಗಿ ಬರಲ್ಲ ಮಗಳೇ."*
ಮಗಳು ಪಾತಿಮಾರನ್ನು ಸಮೀಪ ಕುಳ್ಳಿರಿಸಿ ಪ್ರವಾದಿವರ್ಯರು ಒಂದು ಗುಟ್ಟು ಹೇಳಿದರು. ಅದನ್ನು ಕೇಳಿದಾಗ ಪಾತಿಮಾ(ರ.ಅ)ರವರು ಅಳತೊಡಗಿದರು. ಪುನಃ ಮರು ಕಿವಿಯಲ್ಲಿ ಇನ್ನೋಂದು ಗುಟ್ಟನ್ನು ಹೇಳಿದರು. ಅದನ್ನು ಕೇಳಿದ ಮಗಳು ನಗಲಾರಂಬಿಸಿದರು.
ಮೊಮ್ಮಕ್ಕಳಾದ ಹಸನ್, ಹುಸೈನ್ ರನ್ನು ಕರೆಯುತ್ತಾ ಚುಂಬನವನ್ನರ್ಪಿಸಿದರು. ನಲ್ಮೆಯನು ಉಪದೇಶಿಸಿದರು. ಪತ್ನಿಯರಲ್ಲಿ ಒಳ್ಳೆಯ ಕಾರ್ಯಗಳನ್ನು ಉಪದೇಶಿಸಿದರು.
ಅತಿಕಠಿಣವಾದ ನೋವಿನಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ತಮ್ಮ ಪತ್ನಿಯಲ್ಲಿ ಹೇಳಿದರು: *"ಆಯೀಶಾ.... ಅವತ್ತು ಖೈಬರಿನಲ್ಲಿ ನಾನು ಭಕ್ಷಿಸಿದ ವಿಷದ ರುಚಿಯು ಇವತ್ತು ನನಗೆ ಅನುಭವವಾಗುತ್ತಿದೆ."*
ಎಚ್ಚರ ಬರುವಾಗಲೆಲ್ಲಾ ಮುಖದಿಂದ ವಸ್ತ್ರವನ್ನು ಸರಿಸುತ್ತಾ ಅವರು ಹೇಳುತ್ತಿದ್ದರು: *ಜೂದರ ಮತ್ತು ಕ್ರೈಸ್ತರ ಮೇಲೆ ಅಲ್ಲಾಹನ ಶಾಪವಿರಲಿ..!! ಅವರು ಅವರ ಪ್ರವಾದಿಗಳ ಸಮಾಧಿಗಳನ್ನು ಆರಾಧನಾ ಕೇಂದ್ರಗಳನ್ನಾಗಿ ಮಾಡಿದವರಾಗಿದ್ದಾರೆ."*
*ತನ್ನ ನಂತರವಿರುವವರಿಗೆ ಶಕ್ತವಾದ ತಾಕೀತಾಗಿತ್ತು ಪುನರಾವರ್ತಿಸುತ್ತಿದ್ದ ಈ ಮಾತುಗಳು..*
ಅದರೋಂದಿಗೆ ಅವರು ನಡುನಡುವೆ ಉಪದೇಶಿಸುತ್ತಿದ್ದರು;
*ನಮಾಝ್..!! ನಮಾಝ್..!!*
*ನೀವುಗಳು ನಿಮ್ಮ ಅಧೀನದಲ್ಲಿರುವವರು..!!*
ಜನರು
ಪ್ರಾಧನ್ಯವನ್ನು ಮರೆತು ಬಿಡಬಹುದಾದ ಎರಡು ಸಂಭವಗಳು ಕೂಡ..!!
ನೋವಿನಿಂದ ತೀರಾ ಆಸಕ್ತರಾದ ಪ್ರವಾದಿ ಸಲ್ಲಲ್ಲಾಹು ಅಲೈವಸಮ್ಮರನ್ನು ಆಯೀಶಾ(ರ.ಅ) ತಮ್ಮ ಮಡಿಲಲ್ಲಿ ಮಲಗಿಸಿದರು. ಪ್ರವಾದಿವರ್ಯರನ್ನು ಕಾಣಲು ಬಂದ ಸ್ವಹಾಬಿಯೊಬ್ಬರ ಕೈಯಲ್ಲಿದ್ದ ಮಿಸ್ವಾಕಿನತ್ತ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಆಶೆಯಿಂದ ನೋಡುತ್ತಿರುವುದನ್ನು ಕಂಡ ಆಯೀಶಾ(ರ.ಅ)ಕೇಳಿದರು.
*"ನಾನದನ್ನು ನಿಮಗೆ ಕೇಳಿ ಕೊಡಲ..??"*
ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಹೌದೆಂಬಂತೆ ಸನ್ನೆ ಮಾಡಿದರು. ತುಸುಗಟ್ಟಿಯಾಗಿದ್ದ ಮಿಸ್ವಾಕಿನ ತುದಿಯನ್ನು ತಮ್ಮ ಹಲ್ಲಿನಿಂದ ಕಚ್ಚಿ ಮೆದುವಾಗುವಂತೆ ಮಾಡಿದ ಆಯೀಶಾ(ರ.ಅ)ರವರು ಅದರಿಂದ ಪ್ರವಾದಿವರ್ಯರ ದಂತ ಶುದ್ದಿಯನ್ನು ಮಾಡಿದರು. ನಡುನಡುವೆ ಹತ್ತಿರವಿದ್ದ ನೀರಿನ ಪಾತ್ರೆಯಲ್ಲಿ ಕೈ ಹಾಕಿ ಮುಖವನ್ನು ಸವರಿಕೊಡುತ್ತಿದ್ದರು.
ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ನೋವಿನೊಂದಿಗೆ ಹೀಗೆ ಹೇಳುತ್ತಲ್ಲಿದ್ದರು;
*"ಲಾಹಿಲಾಹ ಇಲ್ಲಲ್ಲಾಹ..!! ಸತ್ಯವಾಗಿಯೂ ಮರಣದ ನೋವು ಅದು ಭಯಾನಕವಾಗಿದೆ..!!"*
ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ತಮ್ಮ ಬೆರಳನ್ನು ಆಕಾಶಕ್ಕೆ ಎತ್ತಿ ಕಣ್ಣುಗಳನ್ನು ಮೇಲೆತ್ತಿ ಏನೋ ಪುನಃ ಹೇಳುತ್ತಿದ್ದಾರೆ. ಆಯೀಶಾ(ರ.ಅ) ಆಲಿಸಲಾರಂಬಿಸಿದರು;
*"ನೀನು ಅನುಗ್ರಹಿಸಿದ ಪ್ರವಾದಿಗಳ, ಸತ್ಯವಂತರ, ರಕ್ತಸಾಕ್ಷಿಗಳ, ಸ್ವಾದಾತುಗಳ ಕೂಟದಲ್ಲಿ ನನ್ನನ್ನೂ ಸೇರಿಸು... ಅಲ್ಲಾಹನೇ, ನನಗೆ ನೀನು ಪಾಪವಿಮೋಚನೆಯನ್ನು ನೀಡಿ ನಿನ್ನ ಕಾರುಣ್ಯವನ್ನು ನನ್ನ ಮೇಲೆ ವರ್ಷಿಸುತ್ತಿರು.. ಉನ್ನತನಾದ ಗೆಳೆಯನಾಗಿ ನನ್ನನ್ನು ನೀನು ಸೇರ್ಪಡಿಸು.. ಅಲ್ಲಾಹನೇ ಉನ್ನತನಾದ ಗೆಳೆಯ..!!"*
*ಅಂತಿಮ ವಾಕ್ಯವನ್ನು ಅವರು ಮೂರು ಸಲ ಪುನರಾವರ್ತಿಸಿದರು. ಈ ಮಧ್ಯೆ ಮೇಲೆತ್ತಿದ್ದ ಅವರು ಕೈ ಕೆಳಜಾರಿತು.*
*"ಅತ್ತ್ಯುನ್ನತನಾದ ಗೆಳೆಯನಾಗಿ ಪ್ರಪಂಚದ ಅತ್ತ್ಯುನ್ನತ ಮನುಷ್ಯನು ವಿರಮಿಸಿದ ಸಮಯ..!!"*
*ಇನ್ನಾ ಲಿಲ್ಲಾಹಿ ವ ಇನ್ನಾ ಇಲಹೀ ರಾಜೀವೂನ್..!*
*ಇದು ಹಿಜ್ರಾಃ ಹನ್ನೋಂದನೇ ವರುಷ ರಬಿವುಲ್ ಅವ್ವಲ್ ಹನ್ನೆರಡು ಸೋಮವಾರ ಮಧ್ಯಾಹ್ನದ ಸಮಯವಾಗಿತ್ತು. ಅವತ್ತಿನ ದಿವಸ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರಿಗೆ ಅರುವತ್ತಮೂರು ವಯಸ್ಸು ಪ್ರಾಯವಾಗಿತ್ತು!!*
✍🏼 *ಹಸ್ನಾಮೋಳ್.ಕೆ.ಸಿ.ನಗರ.*