ಶುಕ್ರವಾರ, ಡಿಸೆಂಬರ್ 9, 2016

ಪ್ರವಾದಿ ಜೀವನ ಚರಿತ್ರೆಯ ಕಣ್ಣೀರ ಕಥೆ

*ಪ್ರವಾದಿ ಜೀವನ ಚರಿತ್ರೆಯ ಕಣ್ಣೀರ ಕಥೆ ಹೇಳಿದರೆ ಸಾಲದು-: ಅಬುಬಕ್ಕರ್ ಸಿದ್ದೀಕ್ ಜಲಾಲಿ*

🖋ಸುನ್ನೀಟುಡೇ

ಪ್ರವಾದಿ ಮುಹಮ್ಮದ್(ಸ)ರವರ ಜೀವನ ಚರಿತ್ರೆ ಹೇಳಿ ದುಃಖಿಸುವ ಮತ್ತು ಹೆಮ್ಮೆ ಪಡುವುದರ ಜೊತೆಗೆ ಆ ಪ್ರವಾದಿಯ ಜೀವನ ಮಾದರಿ ಅನುಸರಿಸಿ ಪರಿಶುದ್ದ ಮುಸ್ಲಿಮರಾಗಲು ಪ್ರಯತ್ನಿಸೋಣ ಎಂದು ಕೂರ್ನಡ್ಕ ಖತೀಬರಾದ ಅಬುಬಕ್ಕರ್ ಸಿದ್ದೀಕ್ ಜಲಾಲಿ ಇಂದು ತಮ್ಮ ಜುಮ್ಮಾ ಭಾಷಣದಲ್ಲಿ ಸಮುದಾಯಕ್ಕೆ ಕರೆನೀಡಿದರು. *ಪ್ರವಾದಿ ಮುಹಮ್ಮದ್(ಸ)ರವರು ಹಸಿದ ಹೊಟ್ಟೆಗೆ ಕಲ್ಲು ಕಟ್ಟಿದ್ದು, ಅವರನ್ನು ಮಕ್ಕಾದ ಜನರು ಹಿಂಸಿಸಿದ್ದು ಹೇಳಿ ನಾವು ಹೊಟ್ಟೆತುಂಬಾ ಉಂಡು ಬೌತಿಕ ಜಗತ್ತಿನಲ್ಲಿ ದಿಕ್ಕಾರಿಗಳಂತೆ ಬದುಕುವುದು ಮಹಾನ್ ಪ್ರವಾದಿಯ ಧರ್ಮಕ್ಕೆ ಮಾಡುವ ಅವಮಾನವಾಗಿದೆ ಎಂದೂ ಅವರು ಹೇಳಿದರು*.

ಪ್ರವಾದಿ ಜನ್ಮದಿನಾಚರಣೆ ಮತ್ತು ಅವರ ಜೀವನ ಮಾದರಿ ಕುರಿತ ಚರ್ಚೆಗಳು ಬಹಳ ಗಂಭೀರವಾಗಿಯೇ ಮಾಡುತ್ತೇವೆ ಆದರೆ ಅದರ ಅನುಷ್ಠಾನ ಮತ್ತು ಅನುಸರಣೆಯಲ್ಲಿ ನಾವು ತಾತ್ಸಾರ ತೋರುತ್ತೇವೆ. *ನಮಗೆ ಪ್ರವಾದಿಯವರ ಜನ್ಮದಿನವು ಮಹತ್ವ ಎನಿಸಿಕೊಳ್ಳಲು ಈ ತಿಂಗಳು ಒಂದು ಸುನ್ನತ್ತನಾದರೂ ಜೀವನದಲ್ಲಿ ಅಳವಡಿಸುತ್ತೇನೆ ಎಂಬ ಪ್ರತಿಜ್ನೆಯ ಮಾಡುಕೊಳ್ಳಿ* ಎಂದು ಹೇಳಿದ ಅವರು ಪ್ರವಾದಿ ಜನ್ಮದಿನದ ಕುರಿತ ಚರ್ಚೆಯಲ್ಲಿ ನಾವು ರಸೂಲರನ್ನು ಅವಮಾನಿಸುತ್ತಿರುವುದು  ಮತ್ತು ಪ್ರವಾದಿಯ ಸುನ್ನತ್ತನ್ನು ಹಿಯಾಲಿಸುವುದು ಕಾಣುತ್ತಿದ್ದೇವೆ.ಇದು ಇಸ್ಲಾಮಿನ ಆದರ್ಶದ ನಾಶಕ್ಕೆ ಹಾಗೇ ನಮ್ಮನ್ನೇ ನಾವು ಮೂರ್ಖ ಹಿಂಬಾಲಕರು ಎಂದು ನಿರೂಪಿಸುವುದಕ್ಕೆ ಕಾರಣವಾಗುತ್ತಿದೆ.ಈ ಬಗ್ಗೆ ಸಮುದಾಯ ಎಚ್ಚರಿಕೆ ವಹಿಸುವುದರ ಜೊತೆಗೆ ಇಸ್ಲಾಮಿನ ಗೌರವ ಮತ್ತು ಪ್ರವಾದಿ (ಸ) ಉಮ್ಮತುಗಳಾದ ನಮ್ಮ ಘಣತೆಯನ್ನು ಕಾಪಾಡಿಕೊಳ್ಳಿ ಎಂದವರು ಕರೆನೀಡಿದರು.

*ಇಂದಿನ ಅಬುಬಕ್ಕರ್, ಫಾರೂಕ್ , ಫಾತಿಮಾಳು ಹೆಸರಿನಲ್ಲಿ ಮುಸ್ಲಿಮ್ ಆಗಿರಬಹುದು ಆದರೆ ಸ್ವಭಾವ ಮತ್ತು ಆದರ್ಶದಲ್ಲಿ ಮುಸ್ಲಿಮರಾಗದೇ ಇದ್ದರೆ ಇಹಲೋಕ ಅವಮಾನವು ಪರಲೋಕ ನಷ್ಟವೂ ಆಗಬಹುದು ಹಾಗಾಗಿ ನಾವು ಪ್ರವಾದಿ ಮುಹಮ್ಮದ್(ಸ)ರ ಸ್ವರ್ಗದ ಸಂಗಾತಿಗಳಾದ ಅಬುಬಕ್ಕರ್ ಸಿದ್ದೀಕ್(ರ) ಹಾಗೂ ಉಮ್ಮರ್ (ರ) ಫಾತಿಮಾ (ರ)ರಂತಹ ಅನುಯಾಯಿಗಳಾಗಬೇಕು* ಎಂದ ಖತೀಬರು ಪ್ರವಾದಿ ಮುಹಮ್ಮದ್ (ಸ) ರು ಮರಣದವರೆಗೂ ಉಮ್ಮತ್ತುಗಳ ಕುರಿತು ಚಿಂತಿತರಾಗಿದ್ದರೂ ನಾವು ಮಾತ್ರ ಭಯ ಮತ್ತು ಭಕ್ತಿ ಇಲ್ಲದೆ ಬದುಕುತ್ತಿರುವುದು ಖೇದಕರ ಎಂದರು

ಬದಲಾಗಲೇ ಬೇಕಾದ ಅನಿವಾರ್ಯತೆ ಇದೆ.ಮರಣ ನಮ್ಮ ಸಮೀಪದಲ್ಲೇ ಇದೆ.ಅಧಿಕಾರ-ಸಂಪತ್ತು-ಜನಬಲ-ಅಡ್ವಾಂನ್ಸ್ ಆಗಿರುವ ವೈಧ್ಯಶಾಸ್ತ್ರಕ್ಕೂ ಮರಣದಿಂದ ಮನುಷ್ಯನನ್ನು ರಕ್ಷಿಸಲು ಸಾಧ್ಯವಿಲ್ಲ.ಎಲ್ಲಾ ಜೀವಿಗಲೂ ಅಂತಿಮವಾಗಿ ಈ ಭೂಮಿ ಆಕಾಶವೂ ನಾಶವಗಲೇ ಬೇಕು ಅನಂತರ ಅದು ಮರಳಿ ಸ್ಥಾಪಿಸಲ್ಪಡುತ್ತದೆ ನಾವೂ ಮರಳಿ ಎಬ್ಬಿಸಲ್ಪಡುತ್ತೇವೆ.ಆ ಮೊದಲು ಬದಲಾಗಬೇಕು. *ಪರಲೋಕ ಪ್ರಜ್ನೆ ಮತ್ತು ಭಯ ನಮ್ಮಲ್ಲಿ ಸದಾ ಜಾಗೃತವಾಗಿರಬೇಕು* ಎಂದ ಖತೀಬರು ಪ್ರವಾದಿ ಮುಹಮ್ಮದ್(ಸ)ರ ಅನುಸರಣೆ ಮತ್ತು  ಸುನ್ನತ್ತನ್ನು ಮರಣದವರೆಗೆ ಪಾಲಿಸುವ ಪ್ರತಿಜ್ನೆಯನ್ನು ಮಾಡಿ ಮಿಲಾದನ್ನು ಶಿಸ್ತು ಮತ್ತು ಸರಳವಾಗಿ  ಆಚರಿಸಿ ಎಂದು ಸಮುದಾಯಕ್ಕೆ ಕರೆನೀಡಿದರು
🖋
*ಸುನ್ನೀಟುಡೇ*