ಗುರುವಾರ, ಜನವರಿ 12, 2017

ಯುವತಿಯರ ಬಾಳಿಗೆ ಬೆಳಕು

*ಕತ್ತಲಲ್ಲಿರುವ ಯುವತಿಯರ ಬಾಳಿಗೆ ಬೆಳಕು ಹಚ್ಚಲು ನಾವೆಷ್ಟು ಚರ್ಚಿಸಿದ್ದೇವೆ ?*

*ಸುನ್ನೀ ಟುಡೇ*

ಸಮುದಾಯದಲ್ಲಿ ಭಿನ್ನತೆ ಮತ್ತು ಸಂಘರ್ಷ ಸೃಷ್ಟಿಸಲು ರಾತ್ರಿ ಹಗಲು ಪ್ರಯತ್ನಿಸುವ ಮತ್ತು ಪರಸ್ಪರ ದ್ವೇಷ ಮತ್ತು ನಿಂದನೆಯನ್ನು ಹೆಚ್ಚಿಸುವಲ್ಲಿ ಅವಿರತ ಪರಿಶ್ರಮಿಸುವ ಜನರ ಮಧ್ಯೆ ಒಳಿತನ್ನು ಹರಡಲು ಸುನ್ನೀಟುಡೇ ಪರಿಶ್ರಮಿಸುತ್ತಿದೆ.

*ಖಾಝಿಯವರು ಭಾಗವಹಿಸಿದ ಪೀಸ್ ಮತ್ತು ಹ್ಯುಮಾನಿಟೀ ಕಾರ್ಯಕ್ರಮದ  ಸಂಫೂರ್ಣ ವಿಡಿಯೋ ನಮ್ಮ ಬಳಿ ಇದೆ.ಈ ವೀಡಿಯೋವನ್ನು ನಾವು ಪ್ರಚಾರ ಪಡಿಸಿ ಸಾಧಿಸುವುದ್ದಾದರೂ ಏನಿದೆ ಎಂದು ಚಿಂತಿಸಿ ಪ್ರಸಾರ ಮಾಡಲಿಲ್ಲ.ಆದರೆ ಸಣ್ಣ ಕ್ಲಿಪ್ಪ್ ಒಂದನ್ನು ಹಾಕಿದ್ದು ಖಾಝಿಯವರು ಸಂಘಪರಿವಾರವನ್ನು ಮೆಚ್ಚಿಸಿದ್ದಾರೆ ಎಂಬುವುದು ಸುಳ್ಳು ಎಂದು ಸಾಬೀತು ಪಡಿಸಲು ಮಾತ್ರ. ದೀಪ ಬೇಳಗಿಸಿದ್ದನ್ನು ಚರ್ಚಿಸಿ ಕತ್ತಲಲ್ಲಿರುವ ನನ್ನ ಸಮುದಾಯಕ್ಕೆ ಬೆಳಕು ನೀಡಲು ನಮ್ಮಿಂದ ಸಾಧ್ಯವಿಲ್ಲ. ದೀಪ ಬೆಳಗಿಸಿದ ಘಟನೆ ನಾವು ಸಮರ್ಥಿಸುವುದೂ ಇಲ್ಲ.ಆದರೆ ಚಿಂತಿಸುವವರಿಗಾಗಿ ಈ ಲೇಖನ ಇರಲಿ*

ನನ್ನ ಸಮುದಾಯದಲ್ಲಿ ನೂರಾರು ಸಮಸ್ಯೆ ಇದೆ.ನೋವಿನ ಕಥೆ ಇದೆ.ಹಸಿವಿನ ಕಣ್ಣುಗಳೊಂದಿಗೆ ತುತ್ತು ಅನ್ನಕ್ಕಾಗಿ ಪರದಾಡುವ ದೃಶ್ಯ  ಇದೆ.ಪತಿಯಿಂದ ನಿರ್ಲಕ್ಷ್ಯಕ್ಕೊಳಗಾದ ಹೆಣ್ಣಿನ ಹತಾಶ ಬದುಕಿನ ವೇದನೆಯಿದೆ.ಮಸೀದಿ ಮತ್ತು ಅಂಗಡಿಗಳ ಮುಂದೆ ಕೈ ಚಾಚುವ ಸಹೋದರಿಯರಿದ್ದಾರೆ.30 ವರ್ಷ ದಾಟಿಯೂ ಮದುವೆಯಾಗದೆ ಉಳಿದಿರುವ ಹೆಣ್ಣು ಮಕ್ಕಳಿದ್ದಾರೆ.ಶೌಚಾಲಯವಿಲ್ಲದ ಅಷ್ಟೇ ಯಾಕೆ ಮುರಿದು ಬೀಳಲು ತಯಾರಾದ ಮಣ್ಣಿನ ಗೊಡೆಯನ್ನು ದಿಟ್ಟಿಸಿ ಭಯದಿಂದ ಬದುಕುವ ಸಂಸಾರಗಳಿವೆ.ಕರಾವಳಿ ಜಿಲ್ಲೆಯ ಮೂಲೆ ಮೂಲೆಯ ಮುಸ್ಲಿಮ್ ಸಮುದಾಯದ ಸಂಸಾರವನ್ನು ಬಹಳ ಹತ್ತಿರದಿಂದ ಕಂಡು ಪರಿಚಯವಿದೆ.ಯಾವ ಸಂಘಪರಿವಾರದ ಬಗ್ಗೆ ನಾವು ದ್ವೇಷ ಸಾಧಿಸುತ್ತಿದ್ದೆವೆಯೋ ಅದೇ ಪರಿವಾರದ ಸಂಘಟನೆಯ ವ್ಯಕ್ತಿಯ ಮನೆಯಲ್ಲಿ ಮೂವರು ಮುಸ್ಲಿಮ್ ಯುವತಿಯರು ತೋಟದ ಕೆಲಸ ಮಾಡಿ  ಮಕ್ಕಳಿಗೆ ಊಟ ಬಡಿಸುತ್ತಾರೆ.ಬೇರೆಲ್ಲೂ ಅಲ್ಲ ಉಪ್ಪಿನಂಗಡೀ ಸಮೀಪ.ಆ ಕುಟುಂಬದಲ್ಲಿ ಆ ಮೂರು ಯುವತಿಯರಿಗೂ ಮದುವೆಯಾಗಿದೆ.ಆದರೆ ಹೃದಯ ಹೀನ ಪತಿಯಂದಿರು ಇವರಿಗೆ ಮಕ್ಕಳನ್ನು ಉಡುಗೊರೆ ನೀಡಿ  ಬೇರೊಂದು ಮದುವೆಯಾಗಿದ್ದಾರೆ.ಅದರಲ್ಲೂ ಹೆಣ್ಣು ಮಕ್ಕಳಿದ್ದಾರೆ . ಈ ಮನೆಯಲ್ಲಿ ಕರೆಂಟ್ ಇಲ್ಲ.ರಾತ್ರಿ ಚಿಮಿಣಿ ದೀಪ ಹೊತ್ತಿಸಲು ಎಣ್ಣೆ ಇದೆಯಾ ಎಂದು ಯಾರೂ ಕೇಳಲಿಲ್ಲ.ಅದರ ಬಗ್ಗೆ ಚರ್ಚಿಸಲಿಲ್ಲ. ಇದು ನನ್ನ ಸಮುದಾಯ.

*ಟಾಲೆಂಟ್ ರಿಸರ್ಚ್ ಪೌಂಡೇಶನ್ ಬಲು ದೊಡ್ಡ ಪ್ರಯತ್ನದೊಂದಿಗೆ ಯೋಜನೆಯನ್ನು ರೂಪಿಸಿದೆ.ಅದು ಮೂವತ್ತು ವರ್ಷ ದಾಟಿದ ಹೆಣ್ಣುಮಕ್ಕಳ ಅಂಕಿ ಅಂಶ ಮತ್ತು ಸಮುದಾಯದ ನೆರವಿನೊಂದಿಗೆ ಅವರಿಗೆ ವಿವಾಹ ಭಾಗ್ಯ. ನಿನ್ನೆಯ ಒಂದು ದಿನದಲ್ಲಿ 60 ಕ್ಕಿಂತಲೂ ಹೆಚ್ಚು ಇಂತಹ ಯುವತಿಯರ ಮಾಹಿತಿ ಸಂಸ್ಥೆಗೆ ತಲುಪಿತು.ಅದರಲ್ಲಿ ಒಂದೇ ಸಂಸಾರದ ನಾಲ್ಕು ಯುವತಿಯರು ಮದುವೆ ಪ್ರಾಯ ದಾಟಿ ಮನೆಯ ಕತ್ತಲಲ್ಲೇ ಇದ್ದಾರೆ ಎಂದು ಮಾಹಿತಿ ಸಿಕ್ಕಿತು.ಇದುವರೆಗೂ ಆ ಯುವತಿಯರ ಕತ್ತಲ ಬದುಕಿಗೆ ದೀಪ ಹಚ್ಚಲು ಯಾರೂ ಚರ್ಚಿಸಿಲ್ಲ ಹಾಗೇ ಪ್ರಯತ್ನಿಸಿಲ್ಲ.ಇನ್ನು ಈ ಕ್ಯಾಂಪೇನನ್ನು ಯಶಸ್ವಿಗೊಳಿಸಲು ನಾವೂ ಕೂಡ ಜೊತೆಯಾಗೋಣ ಹಾಗೇ ಅಂಕಿ ಅಂಶ ಸಂಗ್ರಹಿಸಿ ಸಂಸ್ಥೆಗೆ ತಲುಪಿಸೋಣ ಎಂದು ಯಾರೂ ಮುಂದೆ ಬಂದಿಲ್ಲ. ಸಂಘಪರಿವಾರದ ಮೇಲಿನ ದ್ವೇಷದಿಂದ ಟಿಪ್ಪು ಸುಲ್ತಾನ್ ಬಗ್ಗೆ ಆವೇಶ ಪಡುವ ನಾವು ಇಂತಹ ಮಹತ್ವದ ಯೋಜನೆಗೆ ಆವೇಶದಿಂದ ಹೋರಾಟ ಮಾಡಲು ಪ್ರಯತ್ನಿಸದ್ದು ನಮ್ಮ ಸಮುದಾಯ ಸ್ನೇಹ ಸುಳ್ಳು ಎಂಬುವುದಕ್ಕೆ ಸಾಕ್ಷಿ*

ಕರಾವಳಿ ಹಿಂದುಳಿದ ತಾಲೂಕಿನ ಒಂದು ಗ್ರಾಮಕ್ಕೆ ಮಂಗಳೂರಿನ ಸೇವಾ ಕಾರ್ಯಕರ್ತರು ರಂಜಾನ್ ನಲ್ಲಿ ಬೇಟಿ ಕೊಟ್ಟರು ಆ ಊರಿನಲ್ಲಿ ಅವರು ಕಂಡ ಮೂರು ಸಂಸಾರದ ಸ್ಥಿತಿಗೆ ನಾನಂತು ಬೆಚ್ಚ್ಚಿಬಿದ್ದೆ. ಒಂದು ಮನೆಯಯಲ್ಲಿ ಸ್ಪುರದ್ರೂಪಿ 24 ವರ್ಷ ಪ್ರಾಯದ ಯುವತಿ ಹಾಸಿಗೆ ಹಿಡಿದಿದ್ದಾಳೆ.ಅವಳಿಗೆ ಮಾನಸಿಕ ರೋಗ ಎಂದು ಮನೆಯವರು ಹೇಳಿದರು.ಆಕೆಯ ಕಾಲು ಹುಣ್ಣಾಗಿ ಕೊಳೆತ ಸ್ಥಿತಿಯಲ್ಲಿತ್ತು. ಅವಳ ಸ್ಥಿತಿಗೆ ಕಾರಣ ನಾನಂತೂ ಇಲ್ಲಿ ವಿವರಿಸಲಾರೆ.ಅತ್ಯಾಚಾರಕ್ಕೆ ಒಳಗಾಗಿ ಆಕೆ ಆ ಸ್ಥಿತಿಗೆ ತಲುಪಿದ್ದು ಎಂದು ಮಾತ್ರ ಹೇಳಬಲ್ಲೆ.ಆ ಯುವತಿಗೆ ರಂಜಾನ್ ಹಬ್ಬದ ವಸ್ತ್ರ ಕೊಡಲು ಹೋದ ಸೇವಾ ಸಂಸ್ಥೆಯ ಸದಸ್ಯರು ಕೇಳಿಸಿಕೊಂಡದ್ದು ಅವಳು ಎರಡು ದಿನದ ಹಿಂದೆ ಮರಣಹೊಂದಿದಳು ಎಂದಾಗಿತ್ತು.ಅವಳ ಸ್ಥಿತಿಗೆ ಕಾರಣ ನನ್ನ ಸಮುದಾಯದ ವ್ಯಕ್ತಿ. ಮದುವೆಯ ಕನಸು ಕಾಣದಿದ್ದರೂ ಪರವಾಗಿಲ್ಲ ಇಜ್ಜತ್ತನ್ನು ಉಳಿಸಿಕೊಂಡು ಬದುಕಳು ಬಿಡದ ನನ್ನ ಸಮುದಾಯದ ಜನರ ಮೃಗೀಯತೆಯನ್ನು ಪ್ರಶ್ನಿಸುವವರು ಯಾರೂ ಇಲ್ಲ. ಹೇಳಲು ಜಮಾತ್ ಇದೆ. ನೂರಾರು ಸಂಘಟನೆ ಇದೆ.ಇಸ್ಲಾಮ್ ದೀನಿನೆ ತೊಟ್ಟು ಕಲಿಚ್ಚಾಲ್ ಎಲ್ಲುಮ್ ಮುಲ್ಲುಮ್ ಪೊಡಿಯಾವು ಎಂಬ ಸ್ಲೋಗೋನ್ ಗಳಿದೆ. ಆದರೆ ಇಸ್ಲಾಮ್ ದೀನನ್ನೇ ನಾವು ಮುಕ್ಕಿ ತಿಂದು.ಮುಸ್ಲಿಮರನ್ನು ಕುಕ್ಕಿ ನಾಶಮಾಡಿದ ನಂತರ ತೊಟ್ಟು ಕಲಿಕ್ಕಾನ್ ದೀನ್ ಇರುವುದಾದರೂ ಎಲ್ಲಿಂದ.

*ಎಂಥಹ ವಿಪರ್ಯಾಸ ? ಎಂಥಹ ದ್ವಂಧ್ವ? ಎಂಥಹ ಸಮುದಾಯ ಸ್ನೇಹ? ಎಲ್ಲಿಯ ಕಬರ್ ? ಎಲ್ಲಿಯ ಮಹ್ ಷರ ? ಯಾರಿಗೆ ಸ್ವರ್ಗ ?ಯಾಕಾಗಿ ಸ್ವರ್ಗ ? ವೈಯುಕ್ತಿಕವಾಗಿ ಅನಾಚಾರಗಳನ್ನು ಮೆತ್ತಿಕೊಂಡು ಭೌತಿಕ ಸುಖಕ್ಕಾಗಿ ತನ್ನ ಸಂಪತ್ತು-ದೇಹ- ಸಂತಾನವನ್ನು ನಾವು ನಾಶದ ವ್ಯಾಪಾರಕ್ಕೆ ಬಲಿಕೊಟ್ಟಾಗಿದೆ.ಅದು ಅವರವರ ವೈಯುಕ್ತಿಕ.ಆದರೆ ಇಸ್ಲಾಮ್ ದೀನ್ ಎಂದು. ಸಮುದಾಯವೆಂದು.ಅಲ್ಲಾಹ್ ಮತ್ತು ಪ್ರವಾದಿ ಎಂದು ಹೃದಯದಲ್ಲಿ ಅಭಿಮಾನ ಪಡುವ ನಾವು ಸಮುದಾಯದ ಬಡ -ಅಸಾಹಯಕ ಮತ್ತು ಅಬಲೆಯರನ್ನು ಶೋಷಣೆ ಮಾಡುವುದು ಯಾವುದೇ ಕಾರಣಕ್ಕೂ ಸಹಿಸುವಂತದ್ದಲ್ಲ.ಖಾಝಿಯ ಪ್ರಕರಣದಲ್ಲಿ ರಾತ್ರಿ ಹಗಲು ಚರ್ಚಿಸುವ ನಾವು ಸಮುದಾಯದ ಇಂಥಹ ಸಮಸ್ಯೆಗಳ ಬಗ್ಗೆ ಎಷ್ಟು ಚರ್ಚಿಸಿದ್ದೇವೆ.ಕೂರ್ನಡ್ಕ ಖತೀಬ್ ಹೇಳಿದಂತೆ ನಾವು ಪ್ರವಾದಿ ಮುಹಮ್ಮದ್ (ಸ)ರು ಕಾಲಿ ಹೊಟ್ಟೆಯಲ್ಲಿ ಕಳೆದ ಘಟನೆಯನ್ನು ಮನೋಹರವಾಗಿ ವಿವರಿಸುತ್ತೇವೆ ಮತ್ತು ನಾವು ಮನಸೋ ಇಚ್ವೆ ಮನೋರಂಜನೆಯಲ್ಲಿದ್ದೇವೆ*

ಮಂಗಳೂರಿನ ಪ್ರತಿಷ್ಟಿತ ಮನೆಯ ಹೆಣ್ಣು ಮಗಳು ತಾಯಿಯ ಕೊನೆಯ ಮಾತಿನವರೆಗೂ ಪ್ರೀತಿಯಿಂದ ಕುರುಡಾಗಿದ್ದಳು.ಅವಳು ಪ್ರೀತಿಸಿದ ಕ್ರಿಸ್ಚಿಯನ್ ಹುಡುಗನನ್ನು ಮದುವೆಯಾಗುವುದಾಗಿ ಹಠ ಹಿಡಿದಳು.ಕೊನೆಗೆ ತಾಯಿಗಾಗಿ ಮದುವೆಯೇ ಆಗುವುದಿಲ್ಲ ಎಂದು ಕುಳಿತಿದ್ದಾಳೆ.ಎಂಥಹ ಸಂದಿಗ್ದತೆ.ಕೆಲವರ್ಗದ ಕಥೆ ವ್ಯಥೆಯಾದರೆ ಮೇಲ್ವರ್ಗದ ಸ್ಥಿತಿ ವಿಪರ್ಯಾಸ ಎಂಬಂತಿದೆ.ಎಲ್ಲಿದೆ ದೀನ್ ? ಎಲ್ಲಿದೆ ಇಸ್ಲಾಮ್ ? ಬೌತಿಕ ಜಗತ್ತಿಗಾಗಿ ನಾವು ಅದನ್ನು ಮಾರಾಟ ಮಾಡಿದ್ದೇವೆ.ನರಕಕ್ಕೆ ಮೊದಲು ಹೋಗುವುದು ಆಲಿoಗಳು ಎಂದು ಆಲಿoಗಳೇ ಹೇಳುತ್ತಾರೆ ಹಾಗೇ ಅದೇ ಆಲಿoಗಳು ಪರಸ್ಪರ ಕಚ್ಚಾಟ-ಫಿತ್ನ-ಧ್ವೇಷ- ಅಸೂಯೆ ಹರಡುತ್ತಾರೆ.ಖಾಝಿ ಪ್ರಕರಣ ಸಾಮಾನ್ಯರಿಗೆ ದೊಡ್ಡ ಘಟನೆಯಾಗಲಿಲ್ಲ. ಆದರೆ ಆಲಿಮಿಗಳ ಮಧ್ಯೆ ಇದು ಜಿದ್ದು ಮತ್ತು ಪ್ರತಿಕಾರದ ಹೋರಾಟವಾಗಿದೆ.ಇದೇ ಜಿದ್ದು ಅವರು ಸಮುದಾಯದ ಕಲ್ಯಾಣ ಮತ್ತು ಅಭಿವೃದ್ದಿಗಾಗಿ ಮೀಸಲಿಟ್ಟಿದ್ದರೆ ಇಲ್ಲಿ ಕ್ಷಿಪ್ರ ಬದಲಾವಣೆ ಆಗುತಿತ್ತು ಕಾರಣ ಆಲಿಮಿಗಳು ಈ ಸಮುದಾಯದ ಆಸ್ತಿ ಮತ್ತು ಮಾರ್ಗದರ್ಶಕರಾಗಿದ್ದಾರೆ.
🖋
*ಸುನ್ನೀಟುಡೇ*