ಶುಕ್ರವಾರ, ಮಾರ್ಚ್ 17, 2017

ನಂಡೆ ಪೆಂಙಲ್: ಕಣ್ಣೀರೊರೆಸುವ ಅಭಿಯಾನ

*ಇಸ್ಮತ್ ಪಜೀರ್*

*ಸಾವಿರ ಕನಸುಗಳನ್ನು ನನಸು ಮಾಡುವ ವಿಶೇಷ ಯೋಜನೆ*
*30 ವರ್ಷ ಮೀರಿದರೂ* *ಮದುವೆಯಾಗದ ಹೆಣ್ಣು ಮಕ್ಕಳ ಪಾಲಿನ ಆಶಾಕಿರಣ*

ಮಂಗಳೂರು, ಮಾ.16: ಒಂದೇ ಸೂರಿನಡಿ ಮೂವತ್ತರ ಹರೆಯ ಮೀರಿದ ಮೂರು-ನಾಲ್ಕು ಕುವರಿಯರು. ಬೀಡಿಯ ಸೂಪಿನಲ್ಲೇ ಕನಸು ಭಗ್ನವಾಗಿರುವ, ಭವಿಷ್ಯ ಅಯೋಮಯವಾಗಿರುವ ನೂರಾರು ಮನೆಗಳು, ಅತೀ ಹೆಚ್ಚು ಶ್ರೀಮಂತ ಮುಸ್ಲಿಮರಿರುವ, ಅತ್ಯಕ ವಿದ್ಯಾವಂತ ಮುಸ್ಲಿಮರಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ ಎಂದರೆ ನೀವು ನಂಬುತ್ತೀರಾ? ನಂಬಲೇಬೇಕು, ಇದು ಕಲ್ಪನೆಯಲ್ಲ, ವಾಸ್ತವ! ಕಿತ್ತು ತಿನ್ನುವ ಬಡತನ, ಯಾರಲ್ಲೂ ಹೇಳಿಕೊಳ್ಳಲಾಗದ ಅಸಹಾಯಕತೆ, ಚಿಂತಿಸುತ್ತಾ ಚಿಂತಿಸುತ್ತಾ ಮಾನಸಿಕ ಖಿನ್ನತೆ, ನಿದ್ದೆಯೆಂಬುವುದನ್ನು ಮರೆತೇ ಬಿಟ್ಟ ಕಂಗಳು. ಇದಕ್ಕೆಲ್ಲಾ ಪರಿಹಾರವೆಂಬುದು ಇಲ್ಲವೇ...?

ಇದಕ್ಕೊಂದು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ‘ನಂಡೆ ಪೆಂಙಲ್’ (ನನ್ನ ಸಹೋದರಿ) ಎಂಬ ಅಭಿಯಾನದೊಂದಿಗೆ ಸಮಾಜ ಸೇವೆಯನ್ನೇ ಗುರಿಯಾಗಿರಿಸಿರುವ ಟ್ಯಾಲೆಂಟ್ ರಿಸರ್ಚ್ ೌಂಡೇಶನ್ ಮುಂದಾಗಿದೆ. ಈ ಅಭಿಯಾನದಲ್ಲಿ ಜಿಲ್ಲೆಯ ಪ್ರಮುಖ ಸಮಾಜಸೇವಾ ಸಂಸ್ಥೆಗಳು, ಸಮಾಜ ಸೇವಕರು ಮತ್ತು ಸಾಮಾಜಿಕ ಕಾಳಜಿಯುಳ್ಳ ಶ್ರೀಮಂತರು ಸಹಭಾಗಿಗಳಾಗಿ ದುಡಿಯುತ್ತಿದ್ದಾರೆ.

*ದ.ಕ. ಜಿಲ್ಲೆಯಲ್ಲಿ ಮುಸ್ಲಿಮ್ ಸಮುದಾಯದೊಳಗೆ ಆಳವಾಗಿ ಬೇರು ಬಿಟ್ಟಿರುವ ವರದಕ್ಷಿಣೆ ಸಮಸ್ಯೆಯನ್ನು ಬೇರು ಸಮೇತ ಕಿತ್ತು ಹಾಕಬೇಕಿದೆ. ಈ ನಿಟ್ಟಿನಲ್ಲಿ ಟ್ಯಾಲೆಂಟ್ ರಿಸರ್ಚ್ ೌಂಡೇಶನ್ ಈ ಯೋಜಿತ ಅಭಿಯಾನಕ್ಕೆ ಮುಂದಾಗಿದೆ.*

ಇಂದಿಗೂ ಇಲ್ಲಿನ ಮುಸ್ಲಿಮ್ ಸಮುದಾಯದಲ್ಲಿ ಬಯಕೆಗಳು ಕರಟಿದ, ಕನಸುಗಳು ಕಮರಿದ 40ರ ಹರೆಯವೂ ಮೀರಿದ ಬಹಳಷ್ಟು ಹೆಣ್ಣು ಜೀವಗಳಿಗೆ, ಅವರೊಳಗಿನ ಕರಟಿ ಹೋದ ಬಯಕೆಗಳಿಗೆ, ಕಮರಿ ಹೋದ ಕನಸುಗಳಿಗೆ ಮರುಜೀವ ಕೊಟ್ಟು ಅವರ ಮುಖದಲ್ಲೂ ಜೀವನೋತ್ಸಾಹದ ಮಂದಹಾಸ ಚಿಮ್ಮಿಸಬಲ್ಲ ಅಭಿಯಾನ ‘ನಂಡೆ ಪೆಂಙಲ್’. ಬರೇ ಜಾಗೃತಿ ಮೂಡಿಸುವಷ್ಟಕ್ಕೆ ತನ್ನ ಜವಾಬ್ದಾರಿ ಮುಗಿಯಿತೆಂದು ಈ ಅಭಿಯಾನ ಸುಮ್ಮನಾಗುವುದಿಲ್ಲ. ಇಲ್ಲಿನ ಸಮಸ್ಯೆಗೆ ಒಂದು ತಾರ್ಕಿಕ ಅಂತ್ಯ ಕೊಟ್ಟು ಸಮಸ್ಯೆಯ ಬಲಿಪಶುಗಳಿಗೆ ಹೊಸ ಜೀವನ ಕಲ್ಪಿಸಿಕೊಡುವುದು ‘ನಂಡೆ ಪೆಂಲ್’ ಅಭಿಯಾನದ ಉದ್ದೇಶ. ಇದಕ್ಕಾಗಿ ಅಭಿಯಾನದ ಕಾರ್ಯಕರ್ತರು, ಸಾಮಾಜಿಕ ಕಾಳಜಿಯುಳ್ಳವರು ಹಗಲು ರಾತ್ರಿಯೆನ್ನದೇ ದುಡಿಯುತ್ತಿದ್ದಾರೆ. ಜಿಲ್ಲೆಯ ಪ್ರತೀ ಮುಸ್ಲಿಮ್ ಜಮಾಅತ್‌ಗಳಿಗೆ ಮುಖತಃ ಭೇಟಿ ನೀಡಿ ಅಲ್ಲೆಲ್ಲ ಸಮೀಕ್ಷೆ ನಡೆಸುತ್ತಿದ್ದಾರೆ. ಅದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸುತ್ತಿದ್ದಾರೆ. ಆಯಾ ಜಮಾಅತ್‌ನ ಸಮಾಜಮುಖಿ ಯುವಕರನ್ನು, ಹಿರಿಯರನ್ನು ಸೇರಿಸಿ ನಂಡೆ ಪೆಂಲ್ ಅಭಿಯಾನ ಯಾಕೆ, ಹೇಗೆ ಎಂದು ತಿಳಿಹೇಳುತ್ತಿದ್ದಾರೆ. ಅಭಿಯಾನಕ್ಕೆ ಹೆಚ್ಚಿನೆಡೆ ಸಕಾರಾತ್ಮಕ ಪ್ರತಿಕ್ರಿಯೆಗಳು ದೊರಕುತ್ತಿದ್ದು. ಈಗಾಗಲೇ 30ರ ಹರೆಯ ಮೀರಿದ ಸುಮಾರು ಒಂದೂವರೆ ಸಾವಿರ ಕುವರಿಯರ ಪಟ್ಟಿಯನ್ನು ಸಂಸ್ಥೆಯು ಕಲೆ ಹಾಕಿದೆ.

*‘ನಂಡೆ ಪೆಂಙಲ್’ ಯೋಜನೆಯಲ್ಲಿ ಲಾನುಭವಿ ಯಾರು ಮತ್ತು ಪ್ರಾಯೋಜಕ ಯಾರು ಎಂಬುದು ಸಂಬಂಧಪಟ್ಟವರಿಗಷ್ಟೇ ತಿಳಿಯುತ್ತದೆ.* ಇಲ್ಲಿ ಲಾನುಭವಿಯ ಸ್ವಾಭಿಮಾನಕ್ಕೆ ಧಕ್ಕೆಯಾಗುವುದೂ ಇಲ್ಲ. ಸಹಜವಾಗಿ ನಡೆಯುವಂತೆ ‘ನಂಡೆ ಪೆಂಲ್’ ಅಭಿಯಾನದಡಿ ವಿವಾಹ ನೆರವೇರುತ್ತದೆ. ಪ್ರಾಯೋಜಕ ಆಹ್ವಾನಿತರು ಮದುವೆ ಸಮಾರಂಭಕ್ಕೆ ಎಲ್ಲರಂತೆ ಹೋಗಿ ಬರುತ್ತಾರೆ. ಒಂದೊಂದು ಬಡ ಹೆಣ್ಣಿನ ಮದುವೆಯ ಜವಾಬ್ದಾರಿಯನ್ನು ಒಬ್ಬೊಬ್ಬ ವಹಿಸಿ ಕೊಳ್ಳುತ್ತಾನೆ. ಇನ್ನು ಕೆಲವರು ಒಂದಕ್ಕಿಂತ ಹೆಚ್ಚು ಹೆಣ್ಣು ಮಕ್ಕಳ ಮದುವೆಯ ಜವಾಬ್ದಾರಿಯನ್ನು ಅವರವರ ಸಾಮರ್ಥ್ಯಕ್ಕನುಸಾರವಾಗಿ ಒಪ್ಪಿಕೊಳ್ಳುತ್ತಾರೆ. ಇಲ್ಲಿ ಏಕಕಾಲಕ್ಕೆ ಹಲವು ಉದ್ದೇಶಗಳು ಪೂರ್ತಿಯಾಗುತ್ತವೆ. ಬಡ ಹೆಣ್ಣು ಮಕ್ಕಳಿಗೆ ಬಾಳು ಸಿಗುತ್ತದೆ. ವರದಕ್ಷಿಣೆ ಸಮಸ್ಯೆ ತೊಡೆದು ಹಾಕಲು ಸಹಕಾರಿಯಾಗುತ್ತದೆ. ಹೆಣ್ಣು ಹೆತ್ತವರ ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ಮದುವೆಯೂ ನೆರವೇರುತ್ತದೆ. ಪ್ರಾಯೋಜಕನಿಗೆ ಆತ್ಮತೃಪ್ತಿಯೂ ಸಿಗುತ್ತದೆ.

*ಅಭಿಯಾನದ ಹೆಚ್ಚಿನ ಮಾಹಿತಿಗಾಗಿ ಮೊ.ನಂ.: 9945613699, 8951517480, 9972283365 ಅನ್ನು ಸಂಪರ್ಕಿಸಬಹುದು.*

ನಂಡೆ ಪೆಂಙಲ್ ಅಭಿಯಾನಕ್ಕೆ ಬಹಳಷ್ಟು ಉತ್ತಮ ಸ್ಪಂದನೆ ವ್ಯಕ್ತ ವಾಗುತ್ತಿದೆ. ಯೋಜನೆಯ ಬಗ್ಗೆ ಎಲ್ಲೆಡೆ ಪ್ರಶಂಸೆ ಕೇಳಿಬರುತ್ತಿದೆ. ಅನೇಕ ದಾನಿಗಳು ಪ್ರಾಯೋಜಕರಾಗಿ ಸಹಕರಿಸುತ್ತಿದ್ದಾರೆ. ದ.ಕ. ಜಿಲ್ಲೆಯ ಅನೇಕ ಪ್ರಮುಖ ಸಂಘಸಂಸ್ಥೆಗಳು ಸಹಭಾಗಿಗಳಾಗಿದ್ದಾರೆ. ಇದೇ ಉದ್ದೇಶಕ್ಕಾಗಿ ರಚಿಸಿದ ಸ್ವಾಗತ ಸಮಿತಿಯ ಸದಸ್ಯರು ಉತ್ಸಾಹದಿಂದ ದುಡಿಯುತ್ತಿದ್ದಾರೆ. ಯೋಜನೆಯ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯವಾಗಿದ್ದು, ಸಹಕರಿಸಲು ಇಚ್ಛಿಸುವವರು ನಮ್ಮನ್ನು ಸಂಪರ್ಕಿಸ ಬಹುದು.

*ನೌಷಾದ್ ಹಾಜಿ ಸೂರಲ್ಪಾಡಿ*
ಅಧ್ಯಕ್ಷರು, ನಂಡೆ ಪೆಂಙಲ್ಸ್ವಾಗತ ಸಮಿತಿ

*‘ನಂಡೆ ಪೆಂಙಲ್ ' ಯೋಜನೆಯಲ್ಲಿ ಸಹಕರಿಸುವ ದಾನಿಗಳನ್ನು ಲಾನುಭವಿಗಳ ಮನೆಗೆ ಭೇಟಿ ನೀಡಿಸಿ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ* ಮಾಡಿಕೊಡಲಾಗುವುದು ಹಾಗೂ ದಾನಿಗಳ ಕೈಯಿಂದಲೇ ಸಹಾಯಧನವನ್ನು ಹಸ್ತಾಂತರಿ ಸಲಾಗುವುದು. ಒಂದು ವೇಳೆ ದಾನಿಗಳಿಗೆ ಬರಲು ಅಸಾಧ್ಯವಾದಲ್ಲಿ ಅವರ ನೀಡುವ ಸಹಾಯವನ್ನು ಅರ್ಹ ಲಾನುಭವಿಗಳಿಗೆ ತಲುಪಿಸಲಾಗುವುದು. ದಾನಿಗಳು ತಮ್ಮ ಸಹಾಯಧನ ವನ್ನು ನಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಿ ಸಹಕರಿಸಬಹುದು.

*ಅಬ್ದುಲ್ ರವೂಫ್ ಪುತ್ತಿಗೆ*
ಕೋಶಾಧಿಕಾರಿ, ನಂಡೆ ಪೆಂಙಲ್ ಸ್ವಾಗತ ಸಮಿತಿ

*‘ನಂಡೆ ಪೆಂಲ್’ ಸ್ವಾಗತ ಸಮಿತಿ ರಚನೆ*

‘ನಂಡೆ ಪೆಂಲ್’ ಅಭಿಯಾನದ ಯಶಸ್ವಿಗಾಗಿ ಸ್ವಾಗತ ಸಮಿತಿಯೊಂದನ್ನು ಈಗಾಗಲೇ ರಚಿಸಲಾಗಿದೆ. ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ನೌಷಾದ್ ಹಾಜಿ ಸೂರಲ್ಪಾಡಿ, ಗೌರವಾಧ್ಯಕ್ಷರಾಗಿ ಝಕರಿಯಾ ಜೋಕಟ್ಟೆ, ಮುಖ್ಯ ಸಲಹೆಗಾರರಾಗಿ ಎಸ್.ಎಂ.ರಶೀದ್ ಹಾಜಿ, ಉಪಾಧ್ಯಕ್ಷರಾಗಿ ಬಿ.ಎಂ.ಮುಮ್ತಾಝ್ ಅಲಿ, ಬಿ.ಎಚ್.ಅಸ್ಗರ್ ಅಲಿ, ಅಶ್ರ್ ಕರ್ನಿರೆ, ಪ್ರಧಾನ ಕಾರ್ಯದರ್ಶಿಯಾಗಿ ಮನ್ಸೂರ್ ಅಹ್ಮದ್, ಕೋಶಾಕಾರಿಯಾಗಿ ಅಬ್ದುಲ್ ರವ್ೂ ಪುತ್ತಿಗೆ, ಕಾರ್ಯದರ್ಶಿಗಳಾಗಿ ನಿಸಾರ್ ಮುಹಮ್ಮದ್, ಮುಹಮ್ಮದ್ ಹಾರಿಸ್, ಸಂಪನ್ಮೂಲ ತಂಡದ ಮುಖ್ಯಸ್ಥರಾಗಿ ಎ.ಕೆ.ನಿಯಾಝ್ ಹಾಗೂ ಇನ್ನಿತರ ಪ್ರಮುಖ ಸಾಮಾಜಿಕ ಕಾರ್ಯಕರ್ತರನ್ನು ಆಯ್ಕೆ ಮಾಡಲಾಗಿದೆ. ಅಭಿಯಾನದ ಯಶಸ್ವಿಗಾಗಿ ಸ್ವಾಗತ ಸಮಿತಿಯು ಕಾರ್ಯನಿರತವಾಗಿದ್ದು, ಮನೆಮನೆ ಭೇಟಿ ಕಾರ್ಯಕ್ರಮಕ್ಕೆ ಈಗಾಗಲೆ ಚಾಲನೆ ನೀಡಲಾಗಿದೆ. ಮದುವೆ ನಿಗದಿಯಾದ ಅನೇಕ ಅರ್ಜಿಗಳು ಬರುತ್ತಿದ್ದು, ಅಭಿಯಾನದ ಅಂಗವಾಗಿ ಮೊದಲ ಮದುವೆ ಮಾ.19ರಂದು ಬಂಟ್ವಾಳ ತಾಲೂಕಿನ ಲಾನುಭವಿಯೊಬ್ಬರ ಮನೆಯಲ್ಲಿ ನಡೆಯಲಿದೆ.

*ಸಹಭಾಗಿಗಳಾಗಲು ಸಂಘಸಂಸ್ಥೆಗಳಿಗೆ ಮನವಿ*

*‘ನಂಡೆ ಪೆಂಲ್’ ಅಭಿಯಾನವು ದ.ಕ. ಜಿಲ್ಲಾದ್ಯಂತ ಮಾರ್ಚ್ 2017ರಿಂದ ೆಬ್ರವರಿ 2018ರ ತನಕ ನಡೆಯಲಿದೆ*. ಜಿಲ್ಲೆಯ ಅನೇಕ ಪ್ರಮುಖ ಸಮಾಜ ಸೇವಾ ಸಂಸ್ಥೆಗಳು ಮತ್ತು ಮ್ಯಾರೇಜ್ ಕಮಿಟಿಗಳು ಈಗಾಗಲೇ ಈ ಅಭಿಯಾನದ ಸಹಭಾಗಿಗಳಾಗಿ ಸಹಕರಿಸುತ್ತಿವೆ. ಇದರಲ್ಲಿ ಸಹಭಾಗಿಗಳಾಗಿ ಸಹಕರಿಸಲು ಇಚ್ಛಿಸುವ ಸಾಮಾಜಿಕ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು, ಮ್ಯಾರೇಜ್ ಕಮಿಟಿಗಳು, ಸ್ಪೋರ್ಟ್ಸ್ ಕ್ಲಬ್‌ಗಳು, ಯೂತ್ ಕ್ಲಬ್‌ಗಳು ಸಂಸ್ಥೆಯನ್ನು ಸಂಪರ್ಕಿಸುವಂತೆ ಅಭಿಯಾನದ ಸಂಚಾಲಕ ಮುಹಮ್ಮದ್ ಯು.ಬಿ. ಪ್ರಕಟನೆಯಲ್ಲಿ ವಿನಂತಿಸಿದ್ದಾರೆ

ಬುಧವಾರ, ಮಾರ್ಚ್ 15, 2017

ಗಲ್ಫ್ ಎಂಬ ಮಾಯಾನಗರಿ

ಮಗು ಹುಟ್ಟುವ ಮುಂಚೆಯೇ ಆ ಮಗುವಿನ ಬಗ್ಗೆ ಕನಸು ಕಾಣ ತೊಡಗುತ್ತಾರೆ ಆ ಮಗುವಿನ ಹೆತ್ತವರಾಗಬಯಸುವವರು. ಮಗು ಹುಟ್ಟಿದ ಮೇಲೆ ಆ ಮಗುವಲ್ಲಿ ತಮ್ಮ ಕನಸುಗಳ ನನಸಾಗಿಸುವ ಬಗ್ಗೆಯೇ ಚಿಂತಿಸುತ್ತಾ ಆ ಮಗುವನ್ನು ಬೆಳೆಸುತ್ತಾರೆ. ಆ ಮಗು ಕೂಡ ಬೆಳೆಯುತ್ತಾ ಹೋದಂತೆ ತನ್ನ ಕನಸಿನ ಪಟ್ಟಿ ಬೆಳೆಸುತ್ತಾ ಹೋಗುತ್ತೆ.
ವಿದ್ಯಭ್ಯಾಸ ಪೂರ್ತಿಗೊಳಿಸಿದ ಮೇಲೆ ಎಲ್ಲರೂ ಸಹಜವಾಗಿ ಕಾಣುವ ಕನಸುಗಳಲ್ಲಿ ವಿದೇಶದ ನೌಕರಿ ಪ್ರಮುಖವಾದುದು. ದೂರದ ಬೆಟ್ಟ ನುಣ್ಣಗೆ ಎಂಬ ಗಾದೆ ಮಾತಿನಂತೆ ತನ್ನ ಹುಟ್ಟೂರಲ್ಲಿ ಏನೂ ಸಾಧಿಸಲಸಾಧ್ಯ. ನಾನೂ ವಿದೇಶಕ್ಕೆ ಆಧುನಿಕ ಮತ್ತು ಸುಖಕರ ಜೀವನ ಶೈಲಿ ತಮ್ಮದಾಗಬಹುದೆಂಬ ಆಸೆಯಿಂದ ವಿದೇಶ ನೌಕರಿಯ ಬಗ್ಗೆ ಕನಸು ಕಾಣ ತೊಡಗುತ್ತಾರೆ.
ಇಂತಹ ಕನಸುಗಾರರು ಮೊದಲು ಮಾಡುವ ಕೆಲಸ ಪಾಸ್ಪೋರ್ಟ್ ಮಾಡಿಸಿ ಇಟ್ಟುಕೊಳ್ಳುವುದು. ಯಾಕೆಂದರೆ ಪಾಸ್ಪೋರ್ಟ್ ತಯಾರಿದ್ದರೆ ನಮಗೆ ಅವಕಾಶ ಸಿಕ್ಕಿದ ತಕ್ಷಣ ವಿದೇಶಕ್ಕೆ ಹಾರಬಹುದೆಂಬ ಕಲ್ಪನೆ. ಊರಿನಲ್ಲಿ ಯಾರದ್ದೋ ಕೈಕಾಲು ಹಿಡಿದು, ಅಧಿಕಾರಿಗಳಿಗೆ ಲಂಚ ನೀಡಿ ಹೇಗೋ ಒದ್ದಾಡಿ ಕೊನೆಗೊಮ್ಮೆ ಪಾಸ್ಪೋರ್ಟ್ ಕೈಗೆ ಸಿಕ್ಕಿದಾಗ ವಿದೇಶಕ್ಕೆ ಹೋದಷ್ಟೆ ಸಂಭ್ರಮ.
ಪಾಸ್ಪೋರ್ಟ್ ಆದಮೇಲೆ ಮಾಡುವ ಮೊದಲ ಕೆಲಸವೆಂದರೆ ಎಲ್ಲರ ಜೊತೆ ಹೇಳಿಡುವುದು.ನನ್ನ ಪಾಸ್ಪೋರ್ಟ್ ರೆಡಿಯಾಗಿದೆ ನನಗೊಂದು ಗಲ್ಫ್ ಚಾನ್ಸ್ ಇದ್ರೆ ಹೇಳಿ. ವಿದೇಶದಿಂದ ಯಾರೋ ಮಿತ್ರರು ಅಥವಾ ಪರಿಚಯಸ್ಥರು ಬಂದಾಗ ಅವರ ಜೊತೆ ಕೂಡಾ ಹೇಳುವುದು ನನ್ನದು ಪಾಸ್ಪೋರ್ಟ್ ರೆಡಿಯಿದೆ ನಾನೂ ಕೂಡ ಬರಬಹುದಾ, ಚಾನ್ಸ್ ಸಿಗಬಹುದಾ ಇಂತದ್ದೆ ಹಲವಾರು ಕುತೂಹಲಭರಿತ ಪ್ರಶ್ನೆಗಳು. ವಿದೇಶದಲ್ಲಿ ಕೆಲಸ ಮಾಡಬೇಕೆಂಬ ಆಸೆಯೋ ಅಥವಾ ಊರಲ್ಲಿ ಸಾಲಮಾಡಿದ ಕೃಪೆಯೋ ಅಂತೂ ಇಂತೂ ಯಾರೋ ಪುಣ್ಯಾತ್ಮರ ಕೈಕಾಲು ಹಿಡಿದು ಅಥವಾ ಯಾವುದೋ ಕಂಪೆನಿಯ ಏಜೇಂಟ್ ಗಳಿಗೆ ಸಾವಿರ ಅಥವಾ ಲಕ್ಷಗಟ್ಟಲೇ ಹಣನೀಡಿ ಕೆಲಸವೇನೆಂದು ವಿಚಾರಿಸದೆ(ಮೊದಲು ಈಗ ಎಲ್ಲಾ ವಿಚಾರಿಸುತ್ತಾರೆ) ಭಾರತೀಯ ರೂಪಾಯಿ ಮೌಲ್ಯದಲ್ಲಿ ವಿದೇಶದ ಸಂಬಳವನ್ನು ಲೆಕ್ಕಹಾಕಿ ಸ್ವಲ್ಪ ಸಮಯ ವಿದೇಶದಲ್ಲಿ ದುಡಿದು ಒಳ್ಳೆ ಹಣ ಮಾಡಿ ಮತ್ತೆ ಊರಲ್ಲಿ ಏನಾದರೂ ವ್ಯವಹಾರ ಮಾಡುತ್ತಾ ಹಾಯಾಗಿರಬಹುದೆಂಬ ಚಿಂತನೆಯಲ್ಲಿ ವಿದೇಶದ ವಿಮಾನವೇರುತ್ತಾರೆ.

ವಿಮಾನವೇರಿದವನ ಮನಸ್ಸಲ್ಲಿ ನೂರಾರು ತಳಮಳ. ಒಂದೆಡೆ ಆಸೆಯ ಹೊಸಪ್ರಪಂಚ ನೋಡುವ ತವಕ ಇನ್ನೊಂದೆಡೆ ತಾನು ಹುಟ್ಟಿಬೆಳೆದ ಹುಟ್ಟೂರನ್ನು ತನ್ನ ಹೆತ್ತವರು,  ಕುಟುಂಬವರ್ಗ, ಸ್ನೇಹ ಬಳಗ ಇವೆಲ್ಲವನ್ನು ಬಿಟ್ಟು ಹೋಗುತ್ತಿರುವ ಅನಾಥ ಭಾವನೆ. ವಿಮಾನದ ಸಹಪ್ರಯಾಣಿಕರಲ್ಲಿ ಉಭಯ ಕುಶಲೋಪರಿ ಮಾತಾಡುತ್ತಾ ಅವರು ಗಲ್ಫ್ ನ ಅನುಭವಸ್ಥರಾದರೆ ಅವರಲ್ಲಿ ಆ ರಾಷ್ಟ್ರ, ಅಲ್ಲಿಯ ಅನುಭವಗಳ ಮಾತು ಕೇಳಿ ಮತ್ತಷ್ಟು ಹೊಸಕನಸುಗಳಿಗೆ ಸನ್ನದ್ಧರಾಗುತ್ತೇವೆ.

ಅಂತೂ ನಮ್ಮ ಪ್ರಯಾಣದ ಕೊನೆಕ್ಷಣದಲ್ಲಿ ಗಗನಸಖಿಯ ಸಿಹಿಧ್ವನಿಯಲ್ಲಿ ನಿಮ್ಮ ಪ್ರಯಾಣ ಇನ್ನೇನೋ ಕೆಲವೇ ಕ್ಷಣಗಳಲ್ಲಿ ಮುಗಿಯಲಿದೆ ಎಂಬ ಮಾತು ಕೇಳಿದಾಗ ನಮ್ಮ ಮನಸಲ್ಲಿ ಮತ್ತಷ್ಟು ಕಾತರ. ಅಂತೂ ವಿಮಾನ ಭೂಸ್ಪರ್ಶಿಸಿ ನಮ್ಮನ್ನು ನಮ್ಮ ಗಮ್ಯದ ಕಡೆ ತಲುಪಿಸಿ ನಮಗೂ ನಮಗೂ ಸಂಬಂಧವೇ ಇಲ್ಲವೆಂಬಂತೆ ನಿಂತುಬಿಡುತ್ತೆ.

ಗಲ್ಫ್ ರಾಷ್ಟ್ರದ ವಿಮಾನ ನಿಲ್ದಾಣದ ಎಲ್ಲಾ ರೀತಿಯ ತಪಾಸಣೆಗಳು ಮುಗಿದ ನಂತರ ನಮ್ಮ ಹೊಸ ಕರ್ಮಭೂಮಿಯ ಮೇಲೆ ನಿಟ್ಟುಸಿರ ಹೆಜ್ಜೆ ಇಟ್ಟು ನಮಗೆ ಕೆಲಸ ಕೊಟ್ಟ ಕಂಪೆನಿಯ ವಾಹನದಲ್ಲಿ ನಮಗೆ ವ್ಯವಸ್ಥೆ ಮಾಡಿದ್ದ ವಸತಿನಿಲಯಕ್ಕೆ ಪ್ರಯಾಣ.

ವಸತಿ ನಿಲಯ ತಲುಪಿದ ಕೂಡಲೇ ಅಲ್ಲಿ ನಮ್ಮ ಪರಿಚಯದವರು ಇದ್ದರೆ ಚೆನ್ನಾಗಿರುತ್ತೆ.ಇಲ್ಲಂದ್ರೆ ಯಾವುದೋ ಗುರುತು ಪರಿಚಯ ಇಲ್ಲದವರಾದರೆ ಕಾಟಾಚರಕ್ಕೆ ನಗು ಬಿಸಾಕಿ ಸ್ವಲ್ಪ ನಮ್ಮ ಬಗ್ಗೆ ವಿಚಾರಿಸಿ ಅವರು ಅವರಷ್ಟಕ್ಕೆ ಸುಮ್ಮನಾಗುತ್ತಾರೆ.

ಒಂದು ರೂಮಿನಲ್ಲಿ ಐದೋ ಆರೋ ಜನರಿದ್ದು ಮಲಗಲು ಕಬ್ಬಿಣದ ಡಬಲ್ ಮಂಚ ಅಂದರೆ ಮೇಲೊಬ್ಬ ಕೆಲಗೊಬ್ಬ, ಬೆಡ್, ತಲೆದಿಂಬು, ಹೊದ್ದುಕೊಳ್ಳಲು ಕಂಬಳಿ, ಇವೆಲ್ಲ ಕೆಲವು ಕಂಪೆನಿಗಳಲ್ಲಿ ನೀಡುವ ಸವಲತ್ತು.

ಬೆಳಗ್ಗೆ ಬೇಗನೆ ಎದ್ದು ಕಂಪೆನಿಯ ಸಮವಸ್ತ್ರ ಧರಿಸಿ ಕಂಪೆನಿಯ ವಾಹನದಲ್ಲಿ ಕೆಲಸಕ್ಕೆ ಮಧ್ಯಾಹ್ನದ ಊಟವನ್ನು ಬುತ್ತಿ ಹಿಡಿದುಕೊಂಡು ಹೊರಟರೆ ಸಂಜೆ ವಾಪಾಸು ಬರುವವರೆಗೆ ವಿಶ್ರಾಂತಿಯಿಲ್ಲದೆ ಕತ್ತೆಯಂತೆ ದುಡಿಯಬೇಕು. ತದನಂತರ ರೂಮಿಗೆ ಬಂದು ಅಡಿಗೆ ಮಾಡಿ ಊರಿನ ನೆನಪಲ್ಲಿ ಊರಿನವರಿಗೆ ದೂರವಾಣಿಯ ಮುಖಾಂತರ ಮಾತಾಡಿ ಮನಸು ಹಗುರ ಮಾಡಿಕೊಂಡ ಸಮಾಧಾನ.

ಊರಿನ ಜಾತ್ರೆ, ಹಬ್ಬಗಳು ಯಾವುದೂ ಇಲ್ಲದೆ ಸಭೆ ಸಮಾರಂಭಗಳನ್ನು ಕೇವಲ ಫೋಟೋ ಅಥವಾ ವೀಡೀಯೋದಲ್ಲಿ ನೋಡಿ ಸಂಭ್ರಮಿಸುವ ಪರಿಸ್ಥಿತಿ. ಅಲ್ಲಿನ ಪರಿಸ್ಥಿತಿಗೆ ಒಗ್ಗಿಕೊಂಡ ಮೇಲೆ ನಮ್ಮ ಕನಸುಗಳು ಗರಿಗೆದರಲು ಆರಂಭವಾಗುತ್ತದೆ . ಮನೆಕಟ್ಟುವ ಯೋಚನೆಯೋ ಅಥವಾ ಸಹೋದರಿಯರಿಗೆ ಮದುವೆ ಮಾಡುವ ಯೋಚನೆಯೋ ಎಲ್ಲದಕ್ಕೂ ಹಣೊಟ್ಟುಮಾಡುವ ಯೋಚನೆ. ಇವೆಲ್ಲದರ ನಡುವೆ ಊರಸ್ನೇಹಿತರಿಂದ ಸಾಲಕ್ಕಾಗಿಯೋ ಊರಿನ ಯಾವುದೋ ಕಾರ್ಯಕ್ರಮಕ್ಕೆ ದೇಣಿಗೆಯಾಗಿಯೋ ಹಣದ ಬೇಡಿಕೆ. ಇವೆಲ್ಲವನ್ನೂ ಮನದಲ್ಲಿರುವ ಒಂಟಿತನದ ನೋವಲ್ಲಿ ಮರೆಯಲೂ ಆಗದೆ ಕೃತಕ ನಗುವಿನಲ್ಲಿ ಬದುಕುವ ಪ್ರಯತ್ನ ಪಡುತ್ತೇವೆ. ಅನಾರೋಗ್ಯಕ್ಕೆ ತುತ್ತಾಗಿ ಮಲಗಿದ್ದಾಗ ನಮಗೆ ಯಾರೂ ಇಲ್ಲ. ರೂಪಿನವರೆಲ್ಲ ಒಮ್ಮೆ ವಿಚಾರಿಸಿ ಮತ್ತೆ ಅವರವರ ಕೆಲಸದಲ್ಲಿ ನಿರತರಾಗುತ್ತಾರೆ.ಆ ಸಂದರ್ಭದಲ್ಲಿ ನಮ್ಮ ಮನೆಯವರ ನೆನಪು ಕಾಡುವುದು ಅಷ್ಟಿಷ್ಟಲ್ಲ.
ಕೆಲವೊಂದು ಸಲ ಊರಿನ ಸ್ನೇಹಿತರಿಗೆ ಅಥವಾ ನೆಂಟರಿಗೋ ಪ್ರೀತಿಯಿಂದ ಮಾತಾಡೋಣವೆಂದು ದೂರವಾಣಿ ಕರೆಮಾಡಿದ ಕೂಡಲೇ ಅವರಿಂದ ಯಾವುದೋ ಒಂದು ವಸ್ತುವಿಗೆ ಬೇಡಿಕೆ.ಅದನ್ನು ನಿರಾಕರಿಸಲಾಗದೆ ಆಯ್ತು ಎಂಬ ಉತ್ತರ ನಮ್ಮಿಂದ.

ಹೇಗೋ ಎರಡು ವರುಷಗಳನ್ನು ಪೂರೈಸಿ ಪ್ರಥಮ ಬಾರಿಗೆ ಹುಟ್ಟೂರಿಗೆ ಆಗಮಿಸುವ ಸಂಭ್ರಮ.ತಮ್ಮವರಿಗೆ ಬೇಕಾದ ವಸ್ತುಗಳನ್ನು ಖರೀದಿಸಿ ಯಾರಿಗೂ ಬೇಸರವಾಗಬಾರದೆಂಬ ಭಾವನೆಯಲ್ಲಿ ಸಣ್ಣದಾದರೂ ವಸ್ತುಗಳನ್ನು ತೆಗೆದುಕೊಂಡು ಹೋಗೋಣವೆಂದಾಗ ತೂಕದ ಮಿತಿ ನಮ್ಮನ್ನು ಕಾಡುತ್ತೆ. ಯಾಕೆಂದರೆ ವಿಮಾನಪ್ರಯಾಣದಲ್ಲಿ 30 ಕೆಜಿಗಿಂತ ಜಾಸ್ತಿ ಕೊಂಡೋಗಬೇಕಾದರೆ ಜಾಸ್ತಿ ಹಣ ಪಾವತಿಸಬೇಕು. ಅದನ್ನೆಲ್ಲ ಪೂರೈಸಿ ಊರಿಗೆ ಬಂದಾಗ ಊರನ್ನು, ನಮ್ಮ ಬಂಧುಗಳನ್ನು ನೋಡಿದ ಸಂಭ್ರಮೊಂದೆಡೆಯಾದರೆ ಹಿಂದೆ ಯಾವಾಗ ಹೋಗುತ್ತಿ ಎಂಬ ಕೆಲವರ ಚುಚ್ಚುಮಾತುಗಳು. ಊರಿಗೆ ಬರುವಾಗ ಹಾಕಿಕೊಂಡು ಬಂದಂತಹ ಚಿನ್ನದಾಭರಣಗಳು ಹೋಗುವ ಹೊತ್ತಿಗೆ ಬ್ಯಾಂಕ್ ಸೇರಿರುತ್ತದೆ. ಕಾರಣ ಹಣದ ಅಭಾವ. ಕೆಲವು ಸ್ನೇಹಿತರಲ್ಲಿ ಸಾಲ ಪಡೆದು ಹೋಗಿ ವಾಪಾಸು ಮಾಡುತ್ತೇನೆ ಎಂಬ ಮಾತು ನೀಡಿ ಮತ್ತದೆ ವಿಮಾನವನ್ನು ಹತ್ತಬೇಕಾದ ಸನ್ನವೇಶ ಗಲ್ಪ್ ಉದ್ಯೋಗಿಯ ಬದುಕಲ್ಲಿ ಸಾಮನ್ಯ.

ಎರಡು ವರುಷಗಳಲ್ಲಿ ಎಲ್ಲವನ್ನೂ ಸಾಧಿಸಿ ಬರುವೆನೆಂದು ಹೊರಟವನು ಹಲವಾರು ವರುಷ ದುಡಿದರೂ ಅವನ ಕನಸುಗಳು ಮುಗಿಯೋದೆ ಇಲ್ಲ. ಕೊನೆಗೆ ಅವನಿಗೆ ಸಮಾಧಾನ ನೀಡುವುದು ಒಬ್ಬಂಟಿಯಾಗಿ ಕುಳಿತು ಅವ ಸುರಿಸುವ ಕಣ್ಣೀರು ಮಾತ್ರ.ಆದರೆ ಈಗಿನ ಕಾಲ ಬದಲಾಗಿದೆ ಆಧುನಿಕ ಯುಗದಲ್ಲಿ ಎಲ್ಲವೂ ಸನಿಹವಿದ್ದೂ ನಮಗೆ ಬೇಕಾದ ಹಾಗೆ ಇದೆ. ಕೆಲವು ಕಂಪೆನಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಊರಿನವರೆ ಇದ್ದು ಊರಿನ ವಾತಾವರಣವೇ ಇದೇ. ಎಷ್ಟಾದರೂ ನಮ್ಮ ಊರು ಮಾತ್ರ ನೆನಪಾಗದೆ ಇರುವುದಿಲ್ಲ. ಇದೆಲ್ಲ ನಮ್ಮ ಅನುಭವ ಅಲ್ಲದಿದ್ದರೂ ಹೆಚ್ಚಿನ ಗಲ್ಫ್ ವಾಸಿಗಳ ಅನುಭವ ಇದೇ ಆಗಿದೆ.

✍🏻ಕಿಶೋರ್ ಎಕ್ಕಾರ್.

ಮಂಗಳವಾರ, ಮಾರ್ಚ್ 14, 2017

-------ನಿದ್ರೆ ಒ೦ದು ಮಹಾ ಅನುಗ್ರಹ------

ಜಾಗತಿಕ ನಿದ್ರಾ ದಿನವನ್ನು ಮಾರ್ಚ್ 11 ರ೦ದು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಆಚರಿಸಿದ ಬೆನ್ನಲ್ಲೆ ದುಬೈ ಯಲ್ಲಿ ಕೂಡ ಈ ದಿನವನ್ನು ಆಚರಿಸಲಾಯ್ತು. 2012 ರ ಆರೋಗ್ಯ ಮ೦ತ್ರಾಲಯದ ವರದಿ ಪ್ರಕಾರ ಇಲ್ಲಿನ ಸ್ವದೇಶಿಗಳು ಮತ್ತು ವಿದೇಶಿಗಳೆ೦ಬ ವ್ಯತ್ಯಾಸವಿಲ್ಲದೇಸುಮಾರು 55 % ದಷ್ಟು ಜನರಿಗೆ ಸುಖ ನಿದ್ರೆ ಲಭಿಸುವುದಿಲ್ಲವೆ೦ಬ ವರದಿಯು ಹೊರಬಿತ್ತು. ಉತ್ತಮ ಆರೋಗ್ಯಕ್ಕೆ ಸರಿಯಾದ ನಿದ್ರೆ ಅನಿವಾರ್ಯವೆ೦ಬ ಸ೦ದೇಶದೊ೦ದಿಗೆ ಯುಎಇ ಯಲ್ಲಿ ಕೂಡ ಕೆಲವುಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಬಗ್ಗೆ ಚರ್ಚಿಸಲಾಯ್ತು. 35-54 ರ ಮದ್ಯೆ ಪ್ರಾಯವಿರುವ ಸ್ತ್ರೀ ಪುರುಷರೆ೦ಬ ಬೇಧವಿಲ್ಲದೇ ನಿದ್ರಾಹೀನತೆಯನ್ನು ಅನುಭವಿಸುವವರಾಗಿದ್ದಾರೆ.

ನಿದ್ರೆಯ ಕುರಿತು ನಾವು ಆಲೋಚಿಸುವಾಗ ಅದೊ೦ದು ಅವಿಸ್ಮರಣೀಯ ಅನುಭವ ಮತ್ತು ನೆಮ್ಮದಿಯಾಗಿದೆ ಹಾಗೂ ಅಪ್ಯಾಯಮಾನವಾಗಿದೆ, ಬಳಲಿದ ಶರೀರಕ್ಕೆ ಮತ್ತು ಮನಸ್ಸಿಗೆ ಸುಖಮತ್ತು ಶಾ೦ತಿಯನ್ನು ತ೦ದು ಕೊಡುತ್ತದೆ. ಹಾಗೂ ಅದು ಸೃಷ್ಟಿಕರ್ತನ ಅತ್ಯ೦ತ ದೊಡ್ಡ ಅನುಗ್ರಹವವೂ ಆಗಿದೆ. ನಿದ್ರೆಯಿಲ್ಲದ ರಾತ್ರಿಗಳನ್ನು ನಮಗೆ ಊಹಿಸಲೂ ಸಾಧ್ಯವಿಲ್ಲ. ನಿದ್ರೆಯನ್ನು ಒ೦ದು ಮರಣವೆ೦ದು ಬನ್ನಿಸಲಾಗಿದೆ ಆದ್ದರಿ೦ದಲೇ ಕೆಲವರು ರಾತ್ರಿ ನಿದ್ರೆ ಮಾಡಿದರೆ ಮು೦ಜಾನೆ ಎ೦ದಿನ೦ತೆ ಏಳದೇ ಒಮ್ಮೆಯೂ ಬಾರದಲೋಕಕ್ಕೆ ಪಯಣಿಸಿರುತ್ತಾರೆ. ಆದುದರಿ೦ದಲೇ ನಿದ್ರೆಯಿ೦ದ ಎಚ್ಚೆತ್ತ ಬಳಿಕ ಈ ರೀತಿ ಪ್ರಾರ್ಥಿಸಬೇಕೆ೦ದು ಪ್ರವಾದಿ (ಸ) ಯವರು ಕಲಿಸಿಕೊಟ್ಟಿದ್ದಾರೆ, “ನನಗೆ ಮರಣವನ್ನು ನೀಡಿದ ಬಳಿಕ ನನ್ನನ್ನು ಪುನರುಜ್ಜೀವನಗೊಳಿಸಿ ಅನುಗ್ರಹಿಸಿದ ಅಲ್ಲಾಹನೇ ನಿನಗೆಸರ್ವಸ್ತುತಿ”

ಪವಿತ್ರ ಕುರ್ ಆನಿನಲ್ಲಿ ಈ ರೀತಿ ಕಾಣಬಹುದು "ರಾತ್ರಿಯನ್ನು ನಿಮಗೆ ಉಡುಪಾಗಿಯೂ, ನಿದ್ದೆಯನ್ನು ಪ್ರಶಾ೦ತಿಯಾಗಿಯೂ ಹಗಲನ್ನು ಎದ್ದೇಳುವ ಸಮಯವಾಗಿಯೂ ಮಾಡಿದವನು ಅಲ್ಲಾಹನೇ ಆಗಿರುತ್ತಾನೆ"

ಕೆಲವರು ನಿದ್ರೆ ಮಾಡಲಿಕ್ಕೋಸ್ಕರ ಬದುಕುವವರಿದ್ದಾರೆ ಇನ್ನುಕೆಲವರುಬದುಕಲಿಕ್ಕೋಸ್ಕರ ನಿದ್ರೆ ಮಾಡುವವರಿದ್ದಾರೆ. ಹೌದು ಇದು ಸತ್ಯ, ಕೆಲವರಿಗ೦ತೂ ಎಷ್ಟು ನಿದ್ರೆ ಮಾಡಿದರೂ ಸಾಲದು,ಕೆಲಸವಿಲ್ಲದವರಿಗೆ ನಿದ್ರೆ ಮಾಡುವುದೇ  ಒ೦ದು ಕೆಲಸವಾದರೆ,ಕೆಲಸವಿರುವವರಿಗೆ ನಿದ್ದೆ ಮಾಡಿದ್ದು ಸಾಲದೇ ಕೆಲಸದ ಸ್ಥಳಗಳಲ್ಲೂ ಕಛೇರಿಯಲ್ಲೂ ತೂಕಡಿಸುವುದು ಕಾಣಬಹುದಾಗಿದೆ. ಇನ್ನು ಕೆಲವರು ಪ್ರಯಾಣದಲ್ಲಿ, ಓದುವ ಮತ್ತು ಪ್ರವಚನವನ್ನು ಆಲಿಸುವ ಸ೦ದರ್ಭಗಳಲ್ಲಿ ಹಾಗೂ ಎಲ್ಲೆಲ್ಲ ಸ೦ದರ್ಭ ಸಿಗುತ್ತದೋ ಅಲ್ಲೆಲ್ಲ ನಿದ್ರೆಮಾಡುವ ರೂಢಿಯನ್ನು ತಿಳಿದೋ ತಿಳಿಯದೆಯೋ ಬೆಳೆಸಿಕೊ೦ಡಿರುತ್ತಾರೆ.
ಅತ್ಯ೦ತ ಸ್ವಾರಸ್ಯಕರ ಸ೦ಗತಿಯೆ೦ದರೆ ಕೆಲವು ಕಟ್ಟಡಗಳಲ್ಲಿ, ಮನೆಗಳಲ್ಲಿ ಹಾಗೂ ವಸತಿ ಸಮುಚ್ಚಯಗಳಲ್ಲಿ ಕಾವಲಿನ ಜವಾಬ್ದಾರಿಯನ್ನು ನಿಭಾಯಿಸುವ ಉದ್ದೇಶದಿ೦ದ ಕಾವಲುಗಾರನನ್ನು ಅಥವಾ ಭದ್ರತಾ ಸಿಬ್ಬ೦ಧಿಗಳನ್ನು ನೇಮಿಸುತ್ತಾರೆಆದರೆ ಕಾವಲುಗಾರನೇ ಆರಾಮವಾಗಿ ನಿದ್ದೆ ಮಾಡುವುದನ್ನು ನಮಗೆಕಾಣಬಹುದಾಗಿದೆ. ಇದು ಕಾವಲುಗಾರನಿಗೆ ಮಾತ್ರ ಸೀಮಿತವಲ್ಲ ಬದಲಾಗಿ ಅಬಕಾರಿ ಇಲಾಖೆಗಳಲ್ಲಿ, ಸರಾಕಾರೀ ಹಾಗೂ ಸರಕಾರೇತರ  ಕಛೇರಿಗಳಲ್ಲಿ ಕೂಡ ಕಾಣಬಹುದಾಗಿದೆ.

ಸುಖ ನಿದ್ರೆಯೆ೦ಬುವುದು ಮನುಷ್ಯನ ಬದುಕಿನಲ್ಲಿ ಅತ್ಯ೦ತ ಅಮೂಲ್ಯವಾದ ಸ೦ಪತ್ತಾಗಿದೆ. ಎಷ್ಟೇ ಶ್ರೀಮ೦ತನಾಗಿದ್ದು ಎಲ್ಲ ಸುಖ ಸೌಕರ್ಯಗಳಿದ್ದು ನಿದ್ರೆಯಿಲ್ಲದಿದ್ದರೆ ಬದುಕಿನಲ್ಲಿ ನೆಮ್ಮದಿಯಿರುವುದಿಲ್ಲ ಹಾಗೂ ಅವನು ಏನೋ ಕಳೆದುಕೊ೦ಡವನ೦ತಿರುತ್ತಾನೆ. ವಾರದ ಕೊನೆಯಲ್ಲಿ ಪ್ರತಿಯೊಬ್ಬನಿಗೂ ಖುಷಿಯೇ ಖುಷಿ ಏಕೆ೦ದ್ರೆ ಒ೦ದೆರಡು ದಿನ ಆರಾಮವಾಗಿ ನಿದ್ರಿಸಬಹುದಲ್ವಾ ಎ೦ದು. ಕೆಲವರಿಗೆ ವಾರದ ಮೊದಲ ದಿನ ಬರುವುದೆ೦ದರೆ ಆಲಸ್ಯ, ಪುನಹ ಕೆಲಸ ಕಾರ್ಯಗಳಲ್ಲಿ ಮಗ್ನನಾಗಬೇಕೆ೦ಬ ಚಿ೦ತೆ. ಕೆಲವರ೦ತೂ ದಿನ ರಾತ್ರಿಯೆ೦ಬ ವ್ಯತ್ಯಾಸವಿಲ್ಲದೇ ನಿದ್ರಿಸಿ ನಿದ್ರೆಯನ್ನೇ ಸೋಲಿಸುವವರೂ ಇದ್ದಾರೆ.

ಇನ್ನು ಕೆಲವರ೦ತೂ ತಡ ರಾತ್ರಿಯವರೆಗೆ ಸಿನಿಮಾ ಹಾಗೂ ಸಾಮಾಜಿಕ ತಾಣಗಳಲ್ಲಿ ಸಮಯವನ್ನು ವ್ಯಯಿಸಿ ತಡವಾಗಿ ನಿದ್ರಿಸಿಮು೦ಜಾನೆ ಬೇಗನೆ ಕಛೇರಿಗೆ ಹೋಗುವ ಕಾರಣ ಸಾಕಷ್ಟು ಪ್ರಮಾಣದಲ್ಲಿ ನಿದ್ರಿಸದೆ ಇರುವುದರಿ೦ದ ನಮ್ಮ ಶರೀರದಲ್ಲಿ ಏರುಪೇರು ಸ೦ಭವಿಸುವ ಕಾರಣ ನಿದ್ರೆಗೆ ಜಾರುವುದು ಕೂಡ ಕ೦ಡುಬರುತ್ತದೆ, ವಿಶೇಷವಾಗಿ ವಾಹನ ಚಾಲಕರು ಸಾಕಷ್ಟು ಪ್ರಮಾಣದಲ್ಲಿ ನಿದ್ರಿಸದ ಕಾರಣ ರಸ್ತೆ ಅಫಘಾತ ಸಭವಿಸುವುದು ಇ೦ದು ದಿನನಿತ್ಯದ ಘಟನೆಯಾಗಿದೆ. ಇ೦ದು ಸ೦ಭವಿಸುವ ಅನೇಕರಸ್ತೆ ಅಫಘಾತಗಳಿಗೆ ಒ೦ದು ಕಾರಣವ೦ತೂ ಸಾಕಷ್ಟು ನಿದ್ರಿಸದೆ ವಾಹನ ಚಲಾಯಿಸುವ ಕಾರಣದಿ೦ದ ತೂಕಡಿಕೆ ಸ೦ಭವಿಸುವ ಮೂಲಕ ಅನೇಕ ಜೀವಗಳು ಪ್ರಾಣ ಕಳೆದುಕೊಳ್ಳಬೇಕಾಗಿ ಬರುವುದ೦ತೂ ಒ೦ದು ವಾಸ್ತವ ಸತ್ಯ.

ಇನ್ನು ಕೆಲವರು ನಿದ್ರೆ ಮಾಡಲು ಸಮಯವಿಲ್ಲದವರೂ ಇದ್ದಾರೆ.ಕೆಲಸದ ನಿಭಿಢತೆ ಹಾಗೂ ವ್ಯಾಪಾರ ವಹಿವಾಟುಗಳಲ್ಲಿ ದಿನರಾತ್ರಿಯೆ೦ಬ ವ್ಯತ್ಯಾಸವಿಲ್ಲದೆ ತಲ್ಲೀನರಾಗಿ ಅತ್ಯ೦ತ ಕಡಿಮೆ ಪ್ರಮಾಣದ ನಿದ್ರೆ ಮಾತ್ರ ಲಭಿಸುವುದರಿ೦ದ ಶರೀರದಲ್ಲಿ ಏರು ಪೇರುಸ೦ಭವಿಸುವುದರಿ೦ದ ರೋಗಗಳಿಗೆ ತುತ್ತಾಗುವುದು ಕ೦ಡುಬರುತ್ತದೆ.ಸರಾಸರಿ 6-8 ಗ೦ಟೆಯಷ್ಟು ನಿದ್ರಿಸಬೇಕಾದ ಮನುಷ್ಯ ಅದಕ್ಕಿ೦ತ ಕಡಿಮೆ ಪ್ರಮಾಣದಲ್ಲಿ ನಿದ್ರಿಸಿದರೆ ಸ್ವಾಭಾವಿಕವಾಗಿ ಅನೇಕ ರೋಗಗಳನ್ನು ಅವನು ಮೈಗೂಡಿಸಿಕೊಳ್ಳುವನು.

ಇನ್ನು ಕೆಲವರಿಗೆ ನಿದ್ರೆಯಿಲ್ಲದ ಸಮಸ್ಯೆ, ಇದನ್ನು ಇನ್ಸೋಮ್ನಿಯಾ ಎ೦ದು ಕರೆಯಲಾಗುತ್ತದೆ. ಅದಕ್ಕೆ ಮುಖ್ಯ ಕಾರಣ ಶರೀರದ ತೂಕದಲ್ಲಿ ಅತಿಯಾದ ಹೆಚ್ಚಳ ಮತ್ತು ಗೊರಕೆಯ ಸಮಸ್ಯೆಯಾದರೆ ಇತರ ಕಾರಣಗಳು ಮಾನಸಿಕ ಅಸಮತೋಲನ, ದೀರ್ಘಾವಧಿ ಕಾಯಿಲೆಗಳು ಇತ್ಯಾದಿ.

ನಾನು ಔಷದಾಲಯಲ್ಲಿರುವಾಗ (ಫಾರ್ಮಸಿ) ಅನೇಕ ನಿದ್ರಾಹೀನತೆಯ ಕಾಯಿಲೆಯಿರುವವರು ಮತ್ತು ಅದರಿ೦ದಾಗಿ ಮಾನಸಿಕ ಸಮತೋಲನವನ್ನು ಕಳೆದುಕೊ೦ಡವರು ಔಷದಿಗಾಗಿ ಬರುತ್ತಿದ್ದರು, ಸ್ವಾಭಾವಿಕವಾಗಿ ವೈದ್ಯರ ಸೂಚಕ ಚೀಟಿಯಿಲ್ಲದೆ(prescription) ಔಷದವನ್ನು ಕೊಡುವ೦ತಿಲ್ಲ, ಹಾಗೂಸೂಚಕ ಚೀಟಿಯಿದ್ದರೂ ನಿದ್ರೆಯ ಔಷದಿಗಳಿಗೆ ಕೆಲವು ಇತಿಮಿತಿಗಳಿವೆ ಈ ಸ೦ದರ್ಭದಲ್ಲಿ ರೋಗಿಗಳು ಏನು ಮಾಡುತ್ತಾರೆ೦ದರೆ ಒ೦ದೇ ಔಷಧಿಗಾಗಿ ಒ೦ದಕ್ಕಿ೦ತ ಹೆಚ್ಚು ವೈದ್ಯರೊ೦ದಿಗೆ ಭೇಟಿ ಮಾಡಿ ಔಷಧಿಗೆ ಚೀಟಿಯನ್ನು ಪಡೆದು ಔಷಧಿಯನ್ನು ಖರೀದಿಸುತ್ತಿದ್ದರು. ಮಾತ್ರವಲ್ಲ ರಾತ್ರಿ ವೇಳೆ ಅಸಹನೀಯ ಸ೦ದರ್ಭಗಳಲ್ಲಿ ಕೆಲವು ಔಷದಾಲಯದ ಗಾಜನ್ನು ಪುಡಿಗೈದು ಓಳಪ್ರವೇಶಿಸಿ ನಿದ್ರೆಯ ಔಷದವನ್ನು ಕಳ್ಳತನ ಮಾಡಿದ್ದುಕೂಡ ಇದೆ.ಹಾಗಾದರೆ ನಿದ್ರಾಹೀನತೆ ಎಷ್ಟೊ೦ದು ಕಠೋರ ನಿಮಿಷಗಳನ್ನು ಮನುಷ್ಯನ ಬದುಕಿನಲ್ಲಿ ಸೃಷ್ಟಿಸುತ್ತದೆ ಎ೦ದು ಊಹಿಸಬಹುದು.

ಕೆಲವರ೦ತೂ ಇದಕ್ಕಿ೦ತ ಒ೦ದು ಹೆಜ್ಜೆ ಮು೦ದೆ ಹೋಗಿ ನಿದ್ರೆಯನ್ನು ಅದುಮಿಡಲು ಅಥವಾ ನಿದ್ರೆ ಬಾರದೇ ಇರಲು ಔಷದಕ್ಕಾಗಿ ಬರುವುದಿದೆ. ಹಾಗೂ ಕೆಲವರು ತಡ ರಾತ್ರಿಯವರೆಗೆ ಕೆಲಸ ಕಾರ್ಯಗಳಲ್ಲಿ ತಲ್ಲೀನರಾಗಲು ಹಾಗೂ ನಿದ್ರೆಯನ್ನು ನಿಯ೦ತ್ರಣದಲ್ಲಿಡಲು ಅತಿಯಾದ ಕಾಫಿ, ಚಹಾ, ಹಾಗೂCaffeine ಮಿಶ್ರಿತ ದ್ರಾವಗಳನ್ನು ಕುಡಿಯುವುದು ಕ೦ಡುಬರುತ್ತದೆ ಆದರೆ ಇದು ಶರೀರಕ್ಕೆ ಅತಿಯಾದ ಪಾರ್ಶ್ವ ಫಲವನ್ನು ನೀಡಬಹುದೆ೦ಬ ಸತ್ಯವನ್ನು ನಾವು ಮರೆಯಬಾರದು.  

UAE ಯ ಜನಸ೦ಖ್ಯೆಯಲ್ಲಿ ಆರೋಗ್ಯ ಮ೦ತ್ರಾಲಯದ ಅ೦ಕಿಅ೦ಶದ ಪ್ರಕಾರ ಶೇಕಡಾ 55 ರಷ್ಟು ನಿದ್ರಾ ರಹಿತರಿದ್ದರೆ ಅ೦ಕಿಅ೦ಶಗಳಿಗೆ ಲಭಿಸದ ಎಷ್ಟು ನಿದ್ರಾ ರಹಿತರಿರಬಹುದು ಹಾಗೂಜಗತ್ತಿನ ಇತರ ರಾಷ್ಟ್ರಗಳ ಅವಸ್ಥೆ ಹೇಗಿರಬಹುದು ಎ೦ದುಊಹಿಸಲಸಾಧ್ಯ. ಹೀಗೆ ನೋಡಿದರೆ ನಿದ್ರೆ ಎ೦ಬುವುದು ಬದುಕಿನಒ೦ದು ಅವಿಭಾಜ್ಯ ಅ೦ಗ ಹಾಗೂ ನಿದ್ರೆಯಿಲ್ಲದ ಬದುಕೇಇಲ್ಲವೆ೦ಬುವುದು ಒ೦ದು ವಾಸ್ತವವಾಗಿದೆ. ಪ್ರತಿಯೊಬ್ಬ ಮನುಷ್ಯನುತನ್ನ ಬದುಕಿನ ಮೂರರಲ್ಲಿ ಒ೦ದ೦ಶವನ್ನು ನಿದ್ರೆಗಾಗಿ ವ್ಯಯಿಸುತ್ತಾನೆಮತ್ತು ಅತಿಯಾದ ನಿದ್ರೆಯು ಆರೋಗ್ಯದ ದೃಷ್ಟಿಯಲ್ಲಿ ಉಚಿತವಲ್ಲ.

ಸರ್ವ ಶಕ್ತನಾದ ಸೃಷ್ಟಿಕರ್ತನು ಮನುಷ್ಯನಿಗೆ ಪ್ರತಿಯೊ೦ದು ವಿಷಯಗಳಲ್ಲೂ ಮಾರ್ಗದರ್ಶನವನ್ನೂ, ಭೋದನೆಗಳನ್ನೂ ಹಾಗೂ ನೀತಿ ನಿಯಮಗಳನ್ನೂ ಕ್ರಮೀಕರಿಸಿದ್ದಾನೆ . ಅದನ್ನು ಉಲ್ಲ೦ಘಿಸಿ ತನ್ನದೇ ಸ್ವೇಚ್ಚೆಯನ್ನು ಮೈಗೂಡಿಸಿಕೊ೦ಡರೆ ಬದುಕು ಅಲ್ಲೋಲ ಕಲ್ಲೋಲವಾಗುತ್ತದೆ. ನಿದ್ರೆಯ ವಿಷಯದಲ್ಲೂ ಇದು ಭಿನ್ನವಾಗಿಲ್ಲ,
ರಾತ್ರಿಯ ಆಹಾರವನ್ನು ಭೋಜಿಸಿ ಬೇಗನೆ ವಿಶ್ರಾ೦ತಿ ಪಡೆದು ಮು೦ಜಾನೆ ಬೇಗನೆ ಎದ್ದು ಪ್ರಭಾಥದ ಸಾಮೂಹಿಕ ಪ್ರಾರ್ಥನೆಯಲ್ಲಿ ತಲ್ಲೀನರಾಗಬೇಕೆ೦ಬುವುದು ಸೃಷ್ಟಿಕರ್ತನ ಕಲ್ಪನೆಯಾಗಿದೆ. ಅದನ್ನುಉಲ್ಲ೦ಘಿಸಿ ತಡ ರಾತ್ರಿಯವರೆಗೂ ಮನರ೦ಜನೆಯಲ್ಲಿ ತಲ್ಲೀನರಾಗಿಮು೦ಜಾನೆ ತಡವಾಗಿ ಏಳುವ ಮೂಲಕ (ಇದನ್ನು Nonstop sleep ಎ೦ದು ಕರೆಯಬಹುದು) ಪ್ರಭಾತ ಪ್ರಾರ್ಥನೆಯೆ೦ಬಸೃಷ್ಟಿಕರ್ತನ ಕಲ್ಪನೆಯನ್ನು ಧಿಕ್ಕರಿಸಿದವನು ನಿಜವಾಗಿಯೂ ನಷ್ಟವ೦ತನಾಗಿದ್ದಾನೆ.

ಕೆಲವು ತುಣುಕುಗಳು....

-ಮನುಷ್ಯನು ತನ್ನ ಆಯುಷ್ಯದ ಮೂರರಲ್ಲಿ ಒ೦ದನ್ನು(ಸುಮಾರು 25 ವರ್ಷ) ನಿದ್ರೆಗೆ ವ್ಯಯಿಸುತ್ತಾನೆ.

ಮಗುವಿನ ಮೊದಲ 2 ವರ್ಷದಲ್ಲಿ ತಾಯಿಗೆ ಸುಮಾರು 6ತಿ೦ಗಳಿನಷ್ಟುನಿದ್ರೆಯು ನಷ್ಟ ಹೊ೦ದುತ್ತದೆ.

ಪ್ರತಿ ರಾತ್ರಿಯು 7 ಗ೦ಟೆಗಿ೦ತ ಕಡಿಮೆ ನಿದ್ರಿಸುವುದು ನಿಮ್ಮ ದಿನನಿತ್ಯದ ಚಟುವಟಿಕೆಗಳ ಗುಣಮಟ್ಟವನ್ನು ಕು೦ಠಿತಗೊಳಿಸುತ್ತದೆ.

ಆಹಾರ ಸೇವಿಸದೇ 2 ತಿ೦ಗಳು ಬದುಕಲು ಸಾಧ್ಯ ಆದರೆನಿದ್ರೆಯಿಲ್ಲದೆ ಗರಿಷ್ಟ 11 ದಿನ ಮಾತ್ರ ಬದುಕಬಹುದು.

ಉತ್ತಮ ಆರೋಗ್ಯಕ್ಕೂ ನಿದ್ರೆಗೂ ಕೆಲವು ಸಲಹೆಗಳು.....

1 ತಡ ರಾತ್ರಿಯವರೆಗೆ ಚಲನ ಚಿತ್ರ, ಮನರ೦ಜನೆ ಹಾಗೂಸಾಮಾಜಿಕ ತಾಣಗಳ ಉಪಯೋಗಕ್ಕೆ ಕಡಿವಾಣ ಹಾಕುವುದು.

2 ಬೇಗನೆ ನಿದ್ರಿಸಿ ಮು೦ಜಾನೆ ಬೇಗನೆ ಏಳುವ ಅಭ್ಯಾಸ ರೂಢಿಸಿ   ಕೊಳ್ಳುವುದು.

3 ಶಾಲಾ ಕಾಲೇಜು ವಿಧ್ಯಾರ್ಥಿಗಳು ಮು೦ಜಾನೆ ಬೇಗನೆ ಎದ್ದುಕಲಿತರೆ ಅದನ್ನು ಸರಿಯಾಗಿ ಜ್ಞಾಪಕದಲ್ಲಿಡಬಹುದು.

4 ತಡ ರಾತ್ರಿ ವಾಹನ ಚಲಾಯಿಸುವುದನ್ನು ದೂರಮಾಡುವುದುಹಾಗೂ ನಿದ್ರೆ ಬ೦ದರೆ ಸ್ವಲ್ಪ ಸಮಯ ವಿಶ್ರಾ೦ತಿ ಪಡೆದ ನ೦ತರಚಲಾಯಿಸುವುದು.

5 ನಿದ್ರೆ ಬಾರದೇ ಇರುವ ಅವಸ್ಥೆ ಬ೦ದರೆ ಔಷದಿಗಳ ಮೊರೆಹೋಗದೆ ಮನಸ್ಸನ್ನೂ ಮತ್ತು ಮೆದುಳನ್ನು ಎಲ್ಲ ಜ೦ಜಾಟಗಳಿ೦ದಮುಕ್ತಿಗೊಳಿಸುವುದು.

6 ಅತಿಯಾದ ಚಿ೦ತೆಗಳಿ೦ದ ದೂರವಿರಲು ಪ್ರಯತ್ನಿಸುವುದು.

7 ಸರಿಯಾದ ಪ್ರಮಾಣದಲ್ಲಿ ನಿದ್ರೆಮಾಡಲು ಪ್ರಯತ್ನಿಸುವುದು.

8 ನಿರ೦ತರವಾಗಿ ರಾತ್ರಿ ವೇಳೆ ಕೆಲಸದಲ್ಲಿರುವವರು (Night duty) ಇತರ ಸಮಯಗಳಲ್ಲಿ ಸರಿಯಾಗಿ ವಿಶ್ರಾ೦ತಿಪಡೆಯುವುದು.

9 ಧೂಮಪಾನ ಹಾಗೂ ಇತರ ಶರೀರದ ಆರೋಗ್ಯಕ್ಕೂ ಹಾಗೂ ನಿದ್ರೆಗೂ ತಡೆಯೊಡ್ದುವ೦ತಹ ಪಾನೀಯಗಳನ್ನೂ ಅಮಲು ಪಧಾರ್ಥಗಳ ಚಟಗಳನ್ನು ಉಪೇಕ್ಷಿಸುವುದು

ಔಷದಗಳ ಉಪಯೋಗ ಮತ್ತು ದುರುಪಯೋಗದ ಮಾಹಿತಿಗಾಗಿ ಕಾಯುತ್ತಿರಿ.....

ನಿಮ್ಮೆಲ್ಲರ ಪ್ರಾರ್ಥನೆಯನ್ನು ನಿರೀಕ್ಷಿಸುತ್ತಾ

Abdul Salam D'katte