ಗುರುವಾರ, ಜೂನ್ 15, 2017

ಮಗ್ರಿಬಿನ ಬಾಂಗ್

ಬಾಪಾ, ನಾಳೆಯಾದ್ರೂ ಶಾಲೆಗೆ ಬರ್ತಿರಾ?" ಮಸೀದಿಯ ಪಕ್ಕದ ಕಚೇರಿಯಲ್ಲಿದ್ದ ಟೆಲಿಫೋನಿಗೆ ಕರೆ ಮಾಡಿದ್ದ ಸಯೀದಾ ಕೇಳುತ್ತಿದ್ದಳು.  ಅದ್ದು ಉಸ್ತಾದ್ ನಿಲ್ಲಲು ಶಕ್ತಿ ಸಾಲದೆ ಕೊಟಡಿಯ ಗೋಡೆಗೆ ಒರಗಿಕೊಂಡರು. ಮಗಳ ಧ್ವನಿಯಲ್ಲಿ ತನ್ನ ಬಗ್ಗೆ ತಾತ್ಸಾರದ ಭಾವವಿದೆಯಾ, ಛೇ ಛೇ ಇರಲಾರದು ಹದಿಮೂರರ ಹರೆಯದಲ್ಲಿಯೇ ಮನೆಯ ಜವಾಬ್ದಾರಿ ವಹಿಸಿಕೊಂಡವಳು ಸಯೀದಾ.

''ಬಾಪಾ.." ಸಯೀದಾ ಇನ್ನೊಮ್ಮೆ ಕರೆದಾಗ ಅದ್ದು ಉಸ್ತಾದ್ ನೆನಪಿನ ಜಂಗುಳಿಯಿಂದ ಹೊರಬಂದರು.
"ಹ್ಞಾ.. ಮೋಳೆ, ನಾಳೆ ಬೆಳಿಗ್ಗೆ ಎಂಟು ಗಂಟೆಯ ಬಸ್ಸಿನಲ್ಲಿ ನಿನ್ನ ಸ್ಕೂಲ್ ಪೀಜನ್ನು ಕಳುಹಿಸುತ್ತೇನೆ, ಆ ಬಸ್ಸಲ್ಲಿ ಕಂಡಕ್ಟರ್ ನನ್ನ ಅಳಿಯ ಅಲ್ವಾ.. ನಿನ್ನ ಸ್ಕೂಲಿಗೇ ತಲುಪಿಸುತ್ತಾನಮ್ಮ", 
"ಆದರೂ ನೀವೊಮ್ಮೆ ಬರಬೇಕೆಂದು ಹೆಡ್ ಮಾಸ್ತರ್ ಹೇಳಿದ್ದಾರೆ ಬಾಪಾ",
"ನಾಳೆ ನಾನು ಬಂದರೆ ಇಲ್ಲಿ ಬಾಂಗ್ ಕೊಡೋದು ಯಾರು ಮೋಳೆ, ನೋಡೋಣ ಈ ಜುಮ್ಮಾ ಕಳೆದ ನಂತರ ಚನಿಯಾಸೆಗಾದ್ರೂ ಬರುತ್ತೇನೆ",
"ಆಯ್ತು ಬಾಪಾ",
"ಉಮಾ ಹೇಗಿದ್ದಾಳೆ ಮೋಳೆ",
"ಇನ್ನೂ ಕೆಮ್ಮು ನಿಂತಿಲ್ಲ ಬಾಪಾ, ಡಾಕ್ಟ್ರು ಕೊಟ್ಟ ಮದ್ದು ಇನ್ನೂ ಇದೆ"

ಅದ್ದು ಉಸ್ತಾದ್ ಪತ್ನಿ ಮದುವೆಯಾಗುವಾಗಲೇ ಅಷ್ಟೇನು ಹುಷಾರಿನವರಾಗಿರಲಿಲ್ಲ, ಆದರೂ ಮದುವೆಯಾಗಿ ಬಂದಂದಿನಿಂದ ಪತಿಯೊಂದಿಗೆ ಎಂದೂ ಕೊಂಕು ಮಾತಾಡಿದವರಲ್ಲ. ಇಲ್ಮು ಕತ್ತಲೆಯನ್ನು ದೂರ ಮಾಡಿ ಬೆಳಕನ್ನು ನೀಡುತ್ತದೆಯೇ ಹೊರತು ಹಸಿವನ್ನು ನೀಗಿಸುವುದಿಲ್ಲ ಎಂದು ಅದ್ದು ಉಸ್ತಾದರ ಗುರುಗಳು ಯಾವಾಗಲೂ ಹೇಳುತ್ತಿದ್ದ ಮಾತು. ಬಡತನ ಅದ್ದು ಉಸ್ತಾದರಿಗೆ ಪಿತ್ರಾರ್ಜಿತ ಬಳುವಳಿ. ಜೊತೆಗೆ ಹೆಂಡತಿಯ ದಮ್ಮು ರೋಗ ಟಿ.ಬಿ ಗೆ ತಿರುಗಿ ಅದ್ದು ಉಸ್ತಾದರ ಜೀವನದ ದಾರಿಯನ್ನೇ ತಿರುಗಿಸಿತ್ತು. ಎಲ್ಲೋ ಬಾಂಗಿನ ಧ್ವನಿ ಕೇಳುತ್ತಿದೆ, ಅರೇ ಫೋನಿನೊಳಗಿಂದಲೇ!? ಅದ್ದು ಉಸ್ತಾದ್ ನೆನಪಿನ ಮೊಟ್ಟೆಯಿಂದ ಹೊರ ಬಂದರು.

" ಅಯ್ಯೋ! ಮಗ್ರೀಬ್ ಮೋಳೆ! ನಮ್ಮ ಹಳೆ ಮಸೀದಿ ಬಾಂಗ್ ಕೇಳ್ತಾ ಇದೆ, ನಾನಿನ್ನು  ಮೇಲೆ ಹೋಗ್ಬೇಕು ಮೋಳೆ, ಪೀಜು ನಾಳೆ ಕಳುಹಿಸುತ್ತೇನೆ" "ಆಯ್ತು ಬಾಪಾ" ಎಂದು ಆಚೆ ಕಡೆಯಿಂದ ಸಯಿದಾ ಹೇಳುತ್ತಿರುವುದನ್ನೂ ಕೇಳದೆ ಅದ್ದು ಉಸ್ತಾದ್ ಫೋನ್ ಕೆಳಗೆ ಇಟ್ಟು ತರಾತುರಿಯಲ್ಲಿ ಮಸೀದಿಯತ್ತ ಓಡಿದರು.

       ಮಸೀದಿಯ ಮೆಟ್ಟಿಲನ್ನು ಹತ್ತಿಕೊಂಡು ವರಾಂಡದ ಮೂಲೆಯಲ್ಲಿರುವ ನೀರಿನ ತೊಟ್ಟಿಯಲ್ಲಿ ಕೈಕಾಲು ತೊಳೆದು ಉಝು ಕರ್ಮಗಳನ್ನು ಮುಗಿಸಿದರು.  ನೈರುತ್ಯ ದಿಕ್ಕಿನಿಂದ ಬೀಸಿದ ಗಾಳಿಗೆ ಮೂತ್ರದ ವಾಸನೆ ಜೋರಾಗಿ ಮೂಗಿಗೆ ಬಡಿಯಿತು.  ನೀರಿನ ತೊಟ್ಟಿಗೆ ತಾಗಿಕೊಂಡೇ ಮದರಸದ ಮಕ್ಕಳು ಮತ್ತು ಮಸೀದಿಗೆ ಬರುವವರ ಉಪಯೋಗಕ್ಕೆಂದು ಕಟ್ಟಿಸಿದ ಮೂತ್ರದೊಡ್ಡಿಗಳಿದ್ದವು.  ಶೌಚಾಲಯದ ಗೋಡೆಯ ಬಲಭಾಗದಲ್ಲಿ ಶೈತಾನನ ವಶವಾಗದಂತೆ ಸರ್ವಶಕ್ತನನ್ನು ಅಭಿವಾದಿಸುವ ಸೂಕ್ತಗಳನ್ನು ಅರೆಬಿಕ್ನಲ್ಲಿ ಬರೆದಿದ್ದರು. ಅದನ್ನೊಮ್ಮೆ ಮನಸ್ಸಿನಲ್ಲಿಯೇ ಪಠಿಸಿದ ಅದ್ದು ಉಸ್ತಾದ್ ಇನ್ನೊಮ್ಮೆ ಮುಖತೊಳೆದುಕೊಂಡು ಬೇಗ ಬೇಗನೇ ಮಸೀದಿಯೊಳಕ್ಕೆ ಧಾವಿಸಿ ಮಗ್ರೀಬಿನ ಬಾಂಗ್ ನೀಡಿದರು. ಕಿಟಕಿಯ ಹೊರಗೆ ಹಕ್ಕಿಗಳು ಜೋರಾಗಿ ಚಿಲಿಪಿಲಿಗುಟ್ಟತೊಡಗಿದವು. ಕುರ್ ಆನ್ ಗ್ರಂಥವನ್ನೊಮ್ಮೆ ಹಣೆಗೊತ್ತಿ , ಚುಂಬಿಸಿದ ಅದ್ದು ಉಸ್ತಾದ್ ಗೋಡೆಯಲ್ಲಿ ಗ್ರಂಥವನ್ನಿಡುವ ಹಲಗೆಯ ಅಡ್ಡದಲ್ಲಿರಿಸಿದರು.
        ಮಕ್ಕಳು ಸಂಜೆಯ ತರಗತಿಗೆ ಮದರಸದೊಳಗೆ ಬರುತ್ತಿದ್ದರು. ಆಫೀಸು ಕೋಣೆಯ ಪಕ್ಕದ ಕೊಟಡಿಯಲ್ಲಿಯೇ ಮದರಸ ನಡೆಸುತ್ತಿದ್ದರು.  ಮಕ್ಕಳ ಮುಖವನ್ನು ನೋಡುತ್ತಿದ್ದಂತೆ ಅದ್ದು ಉಸ್ತಾದರಿಗೆ ಮನೆಯ ನೆನಪಾಯಿತು. ನಾಳೆ ಬೆಳಿಗ್ಗೆ ಎಂಟು ಗಂಟೆಯ ಬಸ್ಸಿಗೆ ಮಗಳ ಸ್ಕೂಲ್ ಪೀಜು ಕಳುಹಿಸಬೇಕು,  ಅಧ್ಯಕ್ಷರು ಸಂಬಳವಿನ್ನೂ ಕೊಟ್ಟಿಲ್ಲ.  ತರಗತಿ ಮುಗಿದ ಕೂಡಲೇ ಅಧ್ಯಕ್ಷರ ಮನೆಗೆ ಹೋಗಬೇಕೆಂದು ಕೊಂಡರು.  ಮಕ್ಕಳೆಲ್ಲಾ ತರಗತಿಯಲ್ಲಿ ಕುಳಿತುಕೊಂಡಾಗಿತ್ತು. ಅದ್ದು ಉಸ್ತಾದ್ ಮಕ್ಕಳಿಗೆ ಅರೆಬಿಕ್ ಪಠ್ಯದ ಎರಡು ತಸ್ಬಿಗಳನ್ನು ಗಟ್ಟಿ ಸ್ವರದಲ್ಲಿ ಕಂಠಪಾಠಮಾಡಲು ಹೇಳಿ ಪುನಃ ನೆನಪಿನ ಕುದುರೆಯ ಬೆನ್ನು ಹತ್ತಿದರು.
        ಮದರಸದ ಕಿಟಕಿಯ ಹೊರಗೆ ಶೆರೀಪಮ್ಮಾ ತನ್ನ ಗುಡಿಸಲಿಗೆ ಮಡಲಿನ ತಟ್ಟಿಯನ್ನು ಭದ್ರಗೊಳಿಸುತ್ತಿದ್ದರು. ಗಾಳಿಗೆ ಮಿಣಿ ಮಿಣಿ ಓಲಾಡುತಿದ್ದ ಚಿಮಿಣಿಯ ಬೆಳಕಿಗೆ ಶೆರೀಪಮ್ಮರ ದೊಡ್ಡ ನೆರಳು ಆಚೆ ಈಚೆ ಓಡುತ್ತಿರುವಂತೆ ಕಾಣುತಿತ್ತು. 

"ಅಬ್ಬಾ ಈ ಸರ್ತಿಯಾದರೂ ಮನೆಗೆ ಮರದ ಬಾಗಿಲು ಮಾಡಿಸ್ಬೇಕು" ಸಯೀದಾ ಹೇಳುತ್ತಿದ್ದಳು.
" ಕತ್ತಲಾಗುವಾಗ ಯಾರೋ ಬಂದು ಜಗಲಿಯಲ್ಲಿ ಕುಳಿತ ಹಾಗೆ ಆಗುತ್ತೆ ಅಬ್ಬಾ"
ಅದ್ದು ಉಸ್ತಾದ್ "ಅದು ಮಲಕುಗಳಮ್ಮಾ , ಸಂಜೆ ಹೊತ್ತು ರಹಮತ್ತುಗಳನ್ನು ಹೊತ್ತ ತರುತ್ತಾರೆ ನಮ್ಮ ಮನೆಗೆ"

ಮಕ್ಕಳಿಗೆ ಪಾಠ ಮಾಡುವ ಅಭ್ಯಾಸದಲ್ಲಿ ಹೇಳಿದ ಅದ್ದು ಉಸ್ತಾದ್ ರ ಮಾತುಗಳು ಗಂಟಲಲ್ಲಿಯೇ ಬಾಕಿಯಾದವು. ಮಗಳು ದೊಡ್ಡವಳಾಗುತ್ತಿದ್ದಾಳೆ. ಅದ್ದು ಉಸ್ತಾದರ ಎದೆ ಭಾರವಾದಂತೆ ಅನಿಸುತಿತ್ತು. ಏನೇನೋ ಭಾವನೆಗಳು ಮನಸ್ಸಿಗೆ ಬಂದು ಚುಚ್ಚ ತೊಡಗಿದವು. ಕೆಮ್ಮುತ್ತಲೇ ಇದ್ದ ಹೆಂಡತಿ "ಇಕೊಳ್ಳಿ, ಅದು ಒಮ್ಮೆ ಅವನಿಗೆ ಕಾಗದ ಬರೆಯಬಹುದಲ್ವಾ" ಎಂದರು.
ಅದ್ದು ಉಸ್ತಾದ್ ಪತ್ನಿಯ ಮುಖವನೊಮ್ಮೆ ನೋಡಿದರು, ರೋಗಗ್ರಸ್ತಳಾಗುವ ವಯಸ್ಸೇ ಅಲ್ಲ ಅಮಿನಾರದ್ದು. ಇನ್ನೂ ನಲವತ್ತೈದು ಕೂಡಾ ಆಗಿರಲಿಕ್ಕಿಲ್ಲ ಆಗಲೇ ಈ ಹಾಳಾದ ಅಸ್ತಮಾ ರೋಗ ಅಮಿನಾಬಿಯನ್ನು ಹಣ್ಣುಗಾಯಿ ಮಾಡಿಹಾಕಿತ್ತು.
"ಅದನ್ನು ನನ್ನ ಕಬರಿನಲ್ಲಿಯೂ ಯೋಚನೆ ಮಾಡಲಾರೆ ಅಮಿನಾ" ಅದ್ದು ಉಸ್ತಾದ್ ಅಸಹನೆಯಿಂದ ನುಡಿದರು.
ಅದ್ದು ಉಸ್ತಾದರ ದೊಡ್ಡ ಮಗ ಪೇಟೆಯಲ್ಲಿ ಮಾವನ ಮನೆಯಲ್ಲಿ ಬೆಳೆದವನು ಹತ್ತನೆ ತರಗತಿಯವರೆಗೆ ಅಲ್ಲಿಯೇ ಕಲಿತಿದ್ದ. ಇನ್ನಾದರೂ ಕೇರಳದ ಯಾವುದಾದರೂ ಅರೆಬಿಕ್ ಶಾಲೆಯಲ್ಲಿ ಸ್ವಲ್ಪ ಧಾರ್ಮಿಕ ಶಿಕ್ಷಣ ಕಲಿಯಲಿ ಎಂದು ಅದ್ದು ಉಸ್ತಾದರ ಮನಸ್ಸಾಗಿತ್ತು. ಆದರೆ ಹುಡುಗ ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಇಲ್ಲಿಯೇ ಕಲಿತು ಸೌದಿಯಾಕ್ಕೆ ಹೋಗುತ್ತೇನೆ ಎಂದೇ ಪಟ್ಟು ಹಿಡಿದು ಕುಳಿತ. ಕೊನೆಗೊಮ್ಮೆ ಹನ್ನೆರಡನೇ ತರಗತಿ ಮುಗಿಸಿದವನಿಗೆ ಮಾವನೇ ವೀಸಾವನ್ನೂ ತರಿಸಿಕೊಟ್ಟಿದ್ದ.

     ಸೌದಿಗೆ ಹೊರಡುವುದಕೆ ವಾರದ ಮೊದಲೇ ಸತ್ತಾರ್ ಮನೆಗೆ ಬಂದಿದ್ದ. ಅಮಿನಾಭಿಯ ದಮ್ಮು ಈಗದಷ್ಟು ಜೋರು ಇರಲಿಲ್ಲವಾದರೂ ಕೆಮ್ಮುವುದಂತೂ ಇದ್ದೇ ಇತ್ತು.
     ಆಗೆಲ್ಲಾ ಸತ್ತಾರ್ ಸುತ್ತ ಮುತ್ತ ಇರುವ ಹಲವು ಮಸೀದಿಗಳು ಮತ್ತು ದರ್ಗಾಗಳಿಗೆ ಬೇಟಿಯನ್ನೂ ನೀಡಿದ್ದ. " ಉಮ್ಮಾ ಮೇಲಿನ ಮಸೀದಿಗೆ ಸೌದಿಯಿಂದ ಬಂದ ನಂತರ ಶೋ ಬಲ್ಬು ನೀಡುತ್ತೇನೆ ಎಂದು ಹರಕೆ ಇಟ್ಟಿದ್ದೇನೆ ಉಮ್ಮಾ" ಎನ್ನುತ್ತಿದ್ದ.  ಬೊಂಬಾಯಿಗೆ ಬಸ್ಸು ಹತ್ತುವವರೆಗೆ ಅದ್ದು ಉಸ್ತಾದರು ಕೂಡಾ ಕಾಲಿಗೆ ಚಕ್ರ ಕಟ್ಟಿದವರಂತೆ ಓಡಾಡುತಿದ್ದರು. ಅಮಿನಾಬಿಯ ಕಣ್ಣು ಸದಾ ತುಂಬಿದ ಕೊಡದಂತೆ ಕಾಣುತಿತ್ತು. ಯಾವ ಕ್ಷಣಕ್ಕಾದರೂ ಅದು ಹೊರಚೆಲ್ಲಿ ಬಿಡಬಹುದಿತ್ತು.
 
        ಕೊನೆಗೊಮ್ಮೆ ಆ ದಿನವು ಬಂದೇ ಬಿಟ್ಟಿತ್ತು. ಅದ್ದು ಉಸ್ತಾದರ ಮನೆಯಲ್ಲಿ ನಡೆದ ಮೌಲೂದು ಪಾರಾಯಣಕ್ಕೆ ಕೇರಳದಿಂದ ಆಗ ತಾನೇ ಕಲಿತು ಬಂದಿದ್ದ ಉಸ್ತಾದರಿಬ್ಬರನ್ನು ಕರೆಸಿದ್ದರು ಅದ್ದು ಉಸ್ತಾದ್. ಪಾರಾಯಣದ ಮಧುರ ಸ್ವರಗಳು ಇನ್ನೂ ಕಿವಿಯಲ್ಲಿ ಧ್ವನಿಸುತ್ತಿರುವಾಗಲೇ ಸತ್ತಾರ್ ಸೌದಿಗೆಂದು ಮುಂಬಯಿಯ ಬಸ್ಸು ಹತ್ತಿದ್ದ. ಸಣ್ಣವಳಾದ ಸಯೀದಾ ಅಳುತಿದ್ದಳು. ಅಮೀನಾಬಿಯ ಕೆಮ್ಮು ದಮ್ಮು ರೋಗವಾಗಿ ಮಾತು ಬಾರದೆ ಸೆರಗನ್ನು ಬಾಯಿಗೊತ್ತಿಕೊಂಡು ಕಟ್ಟೆಯೊಡೆದು ಹರಿಯುತ್ತಿರುವ ಕಣ್ಣೀರಿನ ಕಣ್ಣುಗಳಿಂದ ಮಗನನ್ನು ನೋಡುತ್ತಿದ್ದರು.  " ಮೋನೆ ನಿನ್ನ ಕೆಲಸವಲ್ಲದೆ, ಬೇರೆ ಯಾರ ಕೂಡ ಸೇರಿಕೊಳ್ಬೇಡಪ್ಪಾ. ಅಲ್ಲಿ ಹೊಸ ಹೊಸ ಜನರು ಮತ್ತು ಊರಿನವರು ಸೇರಿಕೊಂಡು ಏನೇನೊ ನೂತನಗಳ ಬಗ್ಗೆ ಮಾತನಾಡುತ್ತಾರಂತೆ" ಎಂದು ಮಗನ ಬಳಿ ಆಗಾಗ ಹೇಳುತ್ತಿದ್ದರು ಅಮಿನಾಬಿ. ಇಂದು ಮಾತೇ ಹೊರಡುತ್ತಿರಲಿಲ್ಲ. ಆದರೂ ಬಸ್ಸು ಹೊರಟಿತು.
    
      ಸೌದಿಯಿಂದ ಮೊದಲ ಪತ್ರ ಬರುವಾಗ ಮೂರು ತಿಂಗಳೇ ಕಳೆದಿತ್ತು. ಆ ಪತ್ರವನ್ನು ಅದ್ದು ಉಸ್ತಾದರು ಅಮಿನಾಬಿಗೆ ಓದಿ ಹೇಳಿದ್ದಕ್ಕೆ ಲೆಕ್ಕವಿಲ್ಲ. ಅದು ಒಂದು ಪತ್ರದಂತೆಯೇ ಇರಲಿಲ್ಲ, ತಾನು ಮೊತ್ತ ಮೊದಲು ಹತ್ತಿದ್ದ ವಿಮಾನದ  ಮತ್ತು ಪ್ರಯಾಣದ   ಬಗ್ಗೆಯೇ ಬರೆದಿದ್ದ ಸತ್ತಾರ್. ವಿಮಾನ ನಿಲ್ದಾಣದಿಂದ ಅಲ್ಲಾಡುತ್ತಲೇ ಬಹು ದೂರ ಓಡಿದ ವಿಮಾನ ಒಮ್ಮೆಲೆ ಮೇಲಕ್ಕೆ ಹಾರಿ ಒಳಗಿದ್ದವರೆಲ್ಲಾ ಹತ್ತಿಗಿಂತ ಹಗುರವಾದಂತಹ ಅನುಭವವಾದದ್ದೂ,  ಕೆಳಗಡೆ ಜೋರಾಗಿ ಕೇಳುತ್ತಿದ್ದ ವಿಮಾನದ ಸದ್ದು ಮೇಲೆ ಏರಿದಂತೆ ಕಡಿಮಯಾದದ್ದು. ಸೌದಿ ಏರ್ ಪೋರ್ಟಿನಲ್ಲಿ ಕಂಪೆನಿಯ ಏಜೆಂಟ್ ನನ್ನು ಹುಡುಕಲು ಕಷ್ಟವಾದದ್ದು,  ಹೀಗೆ ಸತ್ತಾರ್ ಹೆಜ್ಜೆ ಹೆಜ್ಜೆಗಳನ್ನೂ ವಿವರಿಸುತ್ತಿದ್ದ. ಅಮಿನಾಬಿ ಪ್ರತಿಯೊಂದು ವಾಕ್ಯಗಳನ್ನು ಕೇಳುವಾಗಲೂ "ಯಾ ಅಲ್ಲಾಹ್" ಎಂದು ಕಣ್ಣು ಮುಚ್ಚುತ್ತಿದ್ದರು. ಮಗನನ್ನು ಕ್ಷೇಮವಾಗಿ ತಲುಪಿಸಿ ಕಾಗದ ಬರೆಸುವಂತೆ ಮಾಡಿದ ಅಲ್ಲಾಹನನ್ನು ಎಷ್ಟು ಸಲ ಸ್ಮರಿಸಿ ಕೃತಜ್ಞತೆಯನ್ನು ಹೇಳಿದರೂ ಅಮಿನಾಭಿಗೆ ತೃಪ್ತಿಯಿಲ್ಲ. 

     ಆದರೆ ಕಾಲವೆಂಬುದು ಅದ್ದು ಉಸ್ತಾದರಿಗೆ ಮಣಿದಿರಲಿಲ್ಲ. ಸತ್ತಾರ್ ಕಳುಹಿಸಿದ ಆರನೆ ಪತ್ರ, ಎಂದರೆ ಒಂದು ವರ್ಷದ ನಂತರ ಬಂದ ಪತ್ರವೊಂದು ಸ್ವಲ್ಪ ಬದಲಾಗಿತ್ತು. ಯಾವಾಗಲೂ ಗಟ್ಟಿಯಾಗಿ ಓದುತಿದ್ದ ಅದ್ದು ಉಸ್ತಾದ್ ಒಮ್ಮೆಲೇ ಓದುವುದನ್ನು ನಿಲ್ಲಿಸಿದರು.   
"ಅಬ್ಬಾ ನೀವು ಮೌಲೂದು ಮಾಡಲು ಮನೆ ಮನೆಗೆ ಹೋಗುವುದು ನನಗಿಷ್ಟವಿಲ್ಲ,  ಬೇಕಾದರೆ ನಾನು ಇನ್ನೂರು ರುಪಾಯಿ ಜಾಸ್ತಿಯೇ ಕಳುಹಿಸುತ್ತೇನೆ, ತಂಗಿಯ ಮದುವೆ ಮಾಡುವ ಜವಾಬ್ದಾರಿ ನನ್ನದು. ನೀವು ತಲೆಬಿಸಿ ಮಾಡಬೇಡಿ", ಇನ್ನೂ ಏನೇನೋ ವಿಷಯಗಳು, ಧರ್ಮದ ಬಗೆಗಿನ ಉಪದೇಶಗಳು, ಸತ್ತಾರ್ ಎಲ್ಲವನ್ನೂ ಬಿಡಿಸಿ ಬಿಡಿಸಿ ಬರೆಯುತ್ತಿದ್ದ. ತಂದೆ ತಾಯಿ ಸಂಬಂಧಗಳಿಗೇ ಬೆಲೆಯಿಲ್ಲವೋ ಎಂಬಂತೆ, ಕರ್ಮಶಾಸ್ತ್ರಗಳ ಕಟ್ಟು ನಿಟ್ಟುಗಳನ್ನು ಭೋದಿಸಲು ಶುರು ಹಚ್ಚಿದ್ದ.

"ಮೊಯಿಲಾರೇ ಮೊಯಿಲಾರೇ !" , ಹುಡುಗನೊಬ್ಬನ ಕೂಗಿಗೆ ಅದ್ದು ಉಸ್ತಾದ್ ಹೊರ ಜಗತ್ತಿಗೆ ಬಂದರು, ಮಕ್ಕಳು ತರಗತಿಯಲ್ಲಿ ತೂಕಡಿಸುತ್ತಿದ್ದರು, ಕರೆಂಟು ಹೋಗಿತ್ತು, ಬಾಗಿಲ ಬದಿಯಲ್ಲಿ ತೂಗುತಿದ್ದ ಲಾಂಟಾರ್ನು ತನ್ನ ಕೆಂಪನೆಯ ನಾಲಗೆಯನ್ನು ತೋರಿಸಿ ಎಣ್ಣೆ ಖಾಲಿಯಾಗಿದೆ ಎಂದು ತೋರಿಸುತಿತ್ತು.  ಮಕ್ಕಳು ತಸ್ಬಿಯನ್ನು ಕಂಠ ಪಾಠ ಮಾಡಿದ್ದರು.
ಎಲ್ಲರೂ ಸತ್ತಾರನಂತೆ ಕಂಡು ಬಂದು ಅದ್ದು ಉಸ್ತಾದರಿಗೆ ಶಕ್ತಿಗುಂದಿದ ಅನುಭವವಾಯಿತು. ಮನಸ್ಸು ಭಾರವಾಗಿ, ಸ್ವರ ಗದ್ಗದಿತವಾಯಿತು.
"ಮಕ್ಕಳೇ , ನಮ್ಮ ಪ್ರೀತಿಯ  ಪ್ರವಾದಿವರ್ಯರ ಬಗ್ಗೆ ಎಂದಿಗೂ ಅಪಸ್ವರವೆತ್ತ ಬೇಡಿರಿ, ಅಂತಹವರಿಂದ ದೂರವಿರಿ", ಅದ್ದು ಉಸ್ತಾದರ ಕಣ್ಣುಗಳು ಹನಿಗೂಡಿದ್ದವು. ಬೋರ್ಡಿನ ಕಡೆಗೆ ತಿರುಗಿ ಅದ್ದು ಉಸ್ತಾದ್ ಕಣ್ಣೊರೆಸಿಕೊಂಡರು. 
"ಅವನಿಗೆ ಪಶ್ಚಿಮದ ಗಾಳಿ ತಾಗಿದೆ, ಇದು ನನ್ನ ಪ್ರವಾದಿಯವರ ನಾಡಿನದ್ದಂತೂ ಅಲ್ಲವೇ ಅಲ್ಲ",  ದಿನಕ್ಕೆ ಹತ್ತು ಸಾರಿಯಾದರೂ ಅದ್ದು ಉಸ್ತಾದ್ ಅವರಷ್ಟಕ್ಕೇ ಹೇಳುತ್ತಿದ್ದರು.
ಬರಬರುತ್ತಾ ಸತ್ತಾರನ ಪತ್ರಗಳು ನಿಧಾನವಾಗ ತೊಡಗಿದವು, ಒಕ್ಕಣೆಯು ಚೊಕ್ಕ ವಾಗಿತ್ತು, ಅಕ್ಷರಗಳು ಭಾರವಾಗಿ ತೊನೆಯುತ್ತಿದ್ದವು.
"ನೀವು ಇಸ್ಲಾಮಿನ ಕರ್ಮಶಾಸ್ತ್ರಗಳ ಬಗ್ಗೆ ತಿಳಿದಿಲ್ಲ" ಎನ್ನುವಷ್ಟರ ಮಟ್ಟಿಗೆ ಬರೆಯುತ್ತಿದ್ದ.

   ಅದ್ದು ಉಸ್ತಾದರಿಗೆ ಪಾಪ ಪ್ರಜ್ಞೆಯೊಂದು ಕಾಡುತಿತ್ತು. ಇವನನ್ನು ಪೇಟೆ ಶಾಲೆಗೆ ಕಳುಹಿಸಿದ್ದೇ ತಪ್ಪಾಯಿತೇ, ನನ್ನ ಬಡತನವೇ ಇದಕ್ಕೆ ಕಾರಣವೇ?  ಅದಾಗಿರಲಾರದು, ಸೌದಿಗೆ ಹೋಗುವ ಮುನ್ನ ಆತ ಸರಿಯಿದ್ದನಲ್ಲ?, ಇತ್ತೀಚೆಗೆ ಮಸೀದಿಯ ಅಧ್ಯಕ್ಷರು ಕೂಡಾ ಇದನ್ನೇ ಹೇಳುತಿದ್ದರು. ಕೆಲವು ಪೇಟೆಯಿಂದ ಹುಡುಗರು ಮಾಡುತ್ತಿರುವ ವಿಚಿತ್ರ ವಾದ ಸರಣಿಯ ಬಗ್ಗೆ. ಆಗೆಲ್ಲಾ ಅಧ್ಯಕ್ಷರ ಬಿ.ಪಿ ಏರುತಿತ್ತು.
"ಅಲ್ಲ, ಅಪ್ಪ ಅಮ್ಮನೇ ಇಲ್ಲದೆ ಮಕ್ಕಳು ಆಗುವುದು ಹೇಗೇ? , ಈ ಪುಣ್ಯ ಪುರುಷರ ಬಗ್ಗೆ ಸಸಾರವಾಗಿ ಮಾತನಾಡ್ಲಿಕ್ಕೆ ಎಷ್ಟು ಧೈರ್ಯ ಅವುಗಳಿಗೆ", ಅದ್ದು ಉಸ್ತಾದರು ಮೌನವಾಗುತ್ತಿದ್ದರು.
"ಆ ಪೆನುಗೊಂಡದ ಬಾಬ , ಆ ಮಹಾ ಪುರುಷ, ನಮ್ಮ ತಾತ ಮುತ್ತಾಂದಿರ ಕಣ್ಣೀರೊರೆಸದಿದ್ದರೆ ನಾವೆಲ್ಲಾ ಈ ಪವಿತ್ರ ಇಸ್ಲಾಮನ್ನು ಪಡೆದು ಕೊಳ್ಳುತಿದ್ದೆವೇ?",
    ಅದ್ದು ಉಸ್ತಾದರಿಗೆ ಕಾಲ ಕೆಳಗಿನ ನೆಲವೇ ಸರಿದು ಹೋಗುತಿರುವಂತೆ ಅನಿಸುತಿತ್ತು. ಮನಸ್ಸು ಕದಡಿಹೋಗಿ ಬಾಂಗ್ ನೀಡುವಾಗ ಧ್ವನಿಯು ಉಡುಗಿಹೋಗುತಿತ್ತು.
"ಅಝಬ್ ನಹೀ ಕೆ ಖುದಾ ತಕ್ ತೇರಿ ರಸಾಯಿ ಹೋ
ತೇರಿ ನಿಗಾಹ್ ಸೆ ಹೈ ಪೋಶಿದಾ ಆದ್ಮಿ ಕಾ ಮಖಾಮ್
ತೇರಿ ನಮಾಝ್ ಮೇ ಬಾಕಿ ಜಲಾಲ್ ಹೈ,  ನ ಜಮಾಲ್
ತೇರಿ ಆಝಾನ್ ಮೆ ನಹೀ ಹೈ ಮೇರಿ ಸೆಹರ್ ಕಾ ಪಯಾಮ್"!!
ಎಂಬ ಅಲ್ಲಾಮ ಇಕ್ಬಾಲರ ನುಡಿಯು ತನ್ನನ್ನೇ ಅಣಕಿಸುತ್ತಿದೆಯೇ ಅನಿಸುತಿತ್ತು.

ಅದೊಂದು ದಿನ ,  ಸಂಜೆ ಮಸೀದಿಯ ಕಚೇರಿಯಿಂದ ಹುಡುಗನೊಬ್ಬ ಕೂಗಿ ಹೇಳಿದ "ಮೊಯಿಲಾರೇ ನಿಮಗೆ ಫೋನಿದೆ".
ಅದ್ದು ಉಸ್ತಾದ್ ಪೋನ್ ಮಾಡುವವಳು ತನ್ನ ಮಗಳೇ ಎಂದು ಗೊತ್ತಿದ್ದರೂ  "ಯಾರದಂತೆ" ಎಂದು ಕೇಳುತ್ತಲೇ ಮಸೀದಿಯ ಕೋಣೆಯಿಂದ ಹೊರಗೆ ಇಳಿದು ಬಂದು ಕಚೇರಿಯ ಒಳಗೆ ಬಂದರು. ಜಮಾತಿನ ಕಾರ್ಯದರ್ಶಿ ತಲೆ ಬಗ್ಗಿಸಿಕೊಂಡು ಲೆಕ್ಕ ಪುಸ್ತಕದಲ್ಲಿ ಬಾಡಿಗೆ ರಶೀದಿ ಬರೆಯುತ್ತಿದ್ದವರು ತಲೆ ಎತ್ತಿ ನೋಡಿ ಪುನಃ ಪುಸ್ತಕದಲ್ಲಿ ಲೀನವಾದರು.
ಪೋನು ಕೈಗೆತ್ತಿಕೊಂಡ ಅದ್ದು ಉಸ್ತಾದರು " ಏನು ಮೋಳೆ " ಎಂದಾಗ ಆ ಕಡೆಯಿಂದ ಕೇಳಿದ್ದು ಒಂದು ಗಂಡು ಧ್ವನಿ.
"ಅಸ್ಸಲಾಮು ಅಲೈಕುಮುಂ ಅದ್ದಾಕ"
"ಹ್ಞಾಂ , ಯಾರು ? ವಾಲೈಕುಂಸ್ಸಲಾಮು ರಹಮತುಲ್ಲಾ ಬರಕಾತು"
ಅದ್ದು ಉಸ್ತಾದರಿಗೆ ತಕ್ಷಣ ಯಾರೆಂದು ಗೊತ್ತಾಗಲಿಲ್ಲ,
"ನಾನು ಅದ್ದಾಕ, ಪಾತುಂಮ್ಮನ ಮಗ ಬಷೀರು, ..ಅದೇ.." 
" ಹ್ಞಾಂ !  ಬಷೀರಾ!,  ಹ್ಞಾಂ .. ಏನು ಮೋನೆ, ನಾನು ಸಯೀದಾ ಅಂದ್ಕೊಂಡೆ,  ಏನಾಯ್ತು ಮೋನೆ?",     
ಪಾತುಮ್ಮಳ ಮಗ ಬಷೀರು ಸ್ವಲ್ಪ ಪೆದ್ದು ಪೆದ್ದಾದ ಹುಡುಗ, ಕಷ್ಟ ಪಟ್ಟು ಐದನೆ ತರಗತಿ ಮುಗಿಸಿದವನಿಗೆ ಮತ್ತೆ ಶಾಲೆಯ ದಾರಿ ರುಚಿಸಲೇ ಇಲ್ಲ. ಅಲ್ಲಿ ಇಲ್ಲಿ ಕೆಲಸ ಮಾಡಿ  ನೆರೆಹೊರೆಯವರಿಗೆ ಅಂಗಡಿಯಿಂದ ಸಾಮಾನು ತಂದು ಕೊಡುವುದು ಮಾಡುತಿದ್ದ. ದಿನಕ್ಕೆ ಎರಡು ಮೂರು ಸಲವಾದರೂ ಅದ್ದು ಉಸ್ತಾದರ ಮನೆಗೆ ಹೋಗಿ ಬರುವವ. ಆದರೂ ಪಾತುಮ್ಮ ಆ ಹುಡುಗನನ್ನು ಗಿಣಿಯ ಹಾಗೆ ಸಾಕುತ್ತಿದ್ದಳು. 
"ಅದ್ದಾಕ ಅದೇ ಉಮ್ಮ ಪೋನು ಮಾಡ್ಲಿಕೆ ಹೇಳಿತು, ನಿಮ್ಮ ಹೆಂಗಸಿಗೆ ದಮ್ಮು ಜೋರಾಗಿ ಡಾಕ್ಟ್ರನ್ನು ನಾನೆ ಕರ್ಕೊಂಡು ಬಂದೆ, ಡಾಕ್ಟ್ರು ಬರೋವಷ್ಟರಲ್ಲಿ ಅವರು ಸತ್ತೋದರಂತೆ ಅದ್ದಾಕ, ಡಾಕ್ಟ್ರನ್ನು ಅಂಗಡಿವರೆಗೆ ಬಿಟ್ಟು ಅಲ್ಲಿಂದಲೇ ಪೋನು ಮಾಡ್ತಾ ಇದ್ದೇನೆ ಅದ್ದಾಕ.."

ಅದ್ದು ಉಸ್ತಾದರಿಗೆ ಕ್ಷಣಕಾಲ ಅರ್ಥವಾಗಲಿಲ್ಲ,  ಏನೋ ಕೇಳಲು ಬಾಯಿ ತೆರೆಯಿತು, ಗಂಟಲಲ್ಲಿ ಪಸೆಯೇ ಆರಿಹೋಗಿತ್ತು, ಯಾರೋ ಗಂಟಲನ್ನು ಗಟ್ಟಿಯಾಗಿ ಒತ್ತಿ ಹಿಡಿದಿರುವಂತೆ ಅನಿಸ ತೊಡಗಿ ಅದ್ದು ಉಸ್ತಾದ್  ಗಂಟಲಿಗೆ ಕೈ ಹಿಡಿದು ಕೊಂಡರು ಬಲಕೈ ಬಲಹೀನವಾಗಿ ಕೈಯಲ್ಲಿದ್ದ ಪೋನು ಬೀಳುವುದೋ ಎಂಬಂತಾಯಿತು,
"ಅದ್ದಾಕ ಅದ್ದಾಕ..." ಬಷೀರು ಆ ಕಡೆಯಿಂದ ಕರೆಯುತ್ತಿದ್ದ, ಪೋನಿನೊಳಗಿಂದ ಅಲ್ಲೇ ಅಂಗಡಿ ಪಕ್ಕದಲ್ಲಿದ್ದ ಹಳೇ ಮಸೀದಿಯಿಂದ ಮಗ್ರೀಬಿನ ಆಝಾನ್ ಕೇಳತೊಡಗಿತು. ಅದ್ದು ಉಸ್ತಾದ್ ಪೋನನ್ನು ಕೆಳಗಿಟ್ಟು  ನಿತ್ರಾಣವಾದಂತಾಗಿ ಎರಡೂ ಕೈಗಳಿಂದ ಮೇಜನ್ನು ಹಿಡಿದು ಕೊಂಡರು. ಕಾರ್ಯದರ್ಶಿ ಮತ್ತೊಮ್ಮೆ ತಲೆ ಎತ್ತಿ ಅದ್ದು ಉಸ್ತಾದರನ್ನೊಮ್ಮೆ ನೋಡಿ ಇನ್ನೊಮ್ಮೆ ಗೋಡೆಯ ಗಡಿಯಾರವನ್ನು ನೋಡಿದ, 
"ಏನಾಯಿತು ಉಸ್ತಾದರೇ? ಯಾರ ಪೋನು,  ಮಗ್ರೀಬಿಗೆ ಸಮಯವಾಯಿತಲ್ಲ?",  ಅದ್ದು ಉಸ್ತಾದ್ ಮಾತನಾಡಲಿಲ್ಲ.

         ಕಾಲುಗಳು ಅದ್ದು ಉಸ್ತಾದರನ್ನು ಎಳೆದುಕೊಂಡು ಮಸೀದಿಯತ್ತ ಸಾಗಿದವು. ಎರಡನೇ ಮೆಟ್ಟಿಲಿನಿಂದ ಮೂರನೇ ಮೆಟ್ಟಿಲಿಗೆ ಇಟ್ಟ ಬಲಕಾಲು ಪುಸಕ್ಕೆಂದು ಜಾರಿ ಎರಡನೇ ಮೆಟ್ಟಿಲಿಗಿಳಿಯಿತು. "ಯಾ ಅಲ್ಲಾ!"  ಅದ್ದು ಉಸ್ತಾದ್ ಹಠಾತ್ತನೆ ಬಾಗಿ ಎರಡೂ ಕೈಗಳಿಂದ ಮೂರನೇ ಮೆಟ್ಟಲನ್ನು ಹಿಡಿದು ಸಾವರಿಸಿಕೊಂಡು ನಿಂತರು, ಸೊಂಟ ಪಳಕ್ಕೆಂದು ಉಳುಕಿದ ಸದ್ದು ಕೇಳಿತು, ನಡುಗುತ್ತಿದ್ದ ಇಡೀ ದೇಹವನ್ನು ನಿಯಂತ್ರಿಸಲು ಹೆಣಗಾಡಿದರು.  ಮಗ್ರೀಬಿಗೆ ಸಮಯ ಮೀರುತಿತ್ತು, ಸೀದಾ ನೀರಿನ ತೊಟ್ಟಿಯ ಬಳಿ ಹೋದವರೇ, ಉಝು ಮಾಡಿದರು.
"ಕಣ್ಣುಗಳೇ ಸ್ವಲ್ಪ ಹೊತ್ತು ತಡೆಯಿರಿ, ನನ್ನ ಈಮಾನನ್ನು ಪರೀಕ್ಷಿಸದಿರಿ! ಯಾ ಅಲ್ಲಾಹ್ ! ನನಗೆ ಶಕ್ತಿ ಕೊಡು"
ಅದ್ದು ಉಸ್ತಾದ್ ಮೈಕಿನ ಗುಂಡಿ ಅದುಮಿ  ಸೂರಾಹ್ ಗಳನ್ನೊಮ್ಮೆ ಉಚ್ಚರಿಸಿ ಗಟ್ಟಿಯಾಗಿ ಆಝಾನ್ ಶುರು ಮಾಡಿದರು.
ಹೃದಯ ವಿದ್ರಾವಕವಾಗಿ ಹೊರಹೊಮ್ಮಿದ ಆ ಧ್ವನಿ ಹಿಂದೆಂದಿಗಿಂತಲೂ ಮಧುರವಾಗಿತ್ತು, ಮಸೀದಿ ಪಕ್ಕದ ಮರದಿಂದ ಹಕ್ಕಿಗಳು ಚಿಲಿಪಿಲಿಗುಟ್ಟತೊಡಗಿದವು, ಸಿಮೆಂಟಿನ ಜಾಲಿಗಳ ತೂತುಗಳಿಂದ ಕಂಬಿಗಳಂತೆ ಕಾಣುತ್ತಿದ್ದ ಅಸ್ತಮಾನದ ಬಿಸಿಲು ನಿಧಾನವಾಗಿ ಮರೆಯಾಗುತ್ತಾ ಕತ್ತಲಾಯಿತು.

         ಅದ್ದು ಉಸ್ತಾದ್ ಮೊಣಕಾಲೂರಿ ಕುಳಿತಿದ್ದವರು ಅಡ್ಡಬಿದ್ದು ಆ ಪವಿತ್ರ ಸ್ಥಳವನ್ನು ಚುಂಬಿಸಿದರು. ಚಾದರವು ಕಣ್ಣೀರಿನಿಂದ ತೊಯ್ದು ಹೋಯಿತು. ಮಗ್ರೀಬಿನ ಸೂರ್ಯ ಪಶ್ಚಿಮದಲ್ಲಿ ಅಸ್ತಮಿಸಿದ.

Puneeth Appu

ಶುಕ್ರವಾರ, ಜೂನ್ 9, 2017

ಮಂಗಳೂರಿನ ನಾಟೆಕಲ್ ನಲ್ಲಿರುವ ಸರಕಾರಿ ಮುಸ್ಲಿಂ ವಸತಿ


*ನಾನು ಕಲಿತಿದ್ದ ಹಾಗೂ ಪ್ರಸ್ತುತ ಮಂಗಳೂರಿನ ನಾಟೆಕಲ್ ನಲ್ಲಿರುವ ಸರಕಾರಿ ಮುಸ್ಲಿಂ ವಸತಿ ಶಾಲೆಯ ಬಗ್ಗೆ ಈ ಹಿಂದೆ ಒಮ್ಮೆ ಬರೆದಿದ್ದೆ‌‌. ಮುಚ್ಚುವ ಹಂತದಲ್ಲಿದ್ದ ವಸತಿ ಶಾಲೆಗೆ ಮತ್ತೆ ಹಳೆಯ ಮೆರುಗು ಬಂದಿದೆ. 100 ದಾಟದಿದ್ದ ದಾಖಲಾತಿ ಸಂಖ್ಯೆ ಈ ವರ್ಷ ಅಲ್ ಹಮ್ದುಲಿಲ್ಲಾಹ್ 140+ ಆಗಿದೆ.*

*ಮುಸ್ಲಿಂ ಸಮುದಾಯದ ಮಂದಿಯಲ್ಲಿ ಜಾಗೃತಿ ಮೂಡಿದ ಪರಿಣಾಮ ಈ ಫಲಿತಾಂಶ ಬಂದಿದೆ. ಇದಕ್ಕೆ ಒಂದು ಕಾರಣ ಹಳೆಯ ವಿದ್ಯಾರ್ಥಿಗಳ ಶ್ರಮ.*

*ಹಾಸ್ಟೆಲ್ ನ ಪರಿಸ್ಥಿತಿಯ  ಬಗ್ಗೆ ಅರಿತ ಹಳೆಯ ವಿದ್ಯಾರ್ಥಿಗಳು ಒಂದು ಬಾರಿ ಹಾಸ್ಟೆಲ್ ನಲ್ಲಿ ಸಭೆ ಸೇರಿ, ಹಳೆಯ ವಿದ್ಯಾರ್ಥಿಗಳ ಸಂಘ ರಚಿಸಿದ್ದರು. ಇದರ ಅಧ್ಯಕ್ಷರಾಗಿ ಮೊದಲ ಬ್ಯಾಚ್ ನ ವಿದ್ಯಾರ್ಥಿ ಹಾಗೂ ಪ್ರಸ್ತುತ ಯೆನೆಪೋಯ ಮೆಡಿಕಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಅನ್ವರ್ ಅಮೆಮ್ಮಾರ್ ಹಾಗೂ ಕಾರ್ಯದರ್ಶಿಯಾಗಿ ನನ್ನ ಬ್ಯಾಚ್ ನ ಗೆಳೆಯ ಹಾಗೂ ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಸಿರಾಜ್ ಕಿನ್ಯ ಆಯ್ಕೆಯಾಗಿದ್ದರು.*

*ಹಳೆ ವಿದ್ಯಾರ್ಥಿಗಳು, ಅಧ್ಯಾಪಕರು &  ಹಲವಾರು ಸಂಘ ಸಂಸ್ಥೆಗಳ ಸಹಕಾರದಿಂದ ಈ ಯಶಸ್ಸು ದೊರೆತಿದೆ. ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಹಾಗೂ ಅಲ್ಲಾಹನು ಎಲ್ಲರ ಸೇವೆಯನ್ನು ಸ್ವೀಕರಿಸಿ, ಅನುಗ್ರಹಿಸಲಿ.....ಆಮೀನ್.*

*ಶಿಕ್ಷಣ ಪ್ರೇಮಿಗಳು/ದಾನಿಗಳು/ಹಳೆಯ ವಿದ್ಯಾರ್ಥಿ ಗಳಿಂದ ಬೇಕಿದೆ ನೆರವು:*

ನಮ್ಮೆಲ್ಲರ ಪ್ರಯತ್ನ ಫಲಪ್ರದವಾಗಿದೆ ಏನೋ ನಿಜ. ಹಳೆಯ ವಿದ್ಯಾರ್ಥಿಗಳ ಸಂಘವು ಈಗಿರುವ ಹಾಸ್ಟೆಲ್ ನ ವಿದ್ಯಾರ್ಥಿಗಳಿಗೆ ಇನ್ನಷ್ಟು ಉತ್ತಮ ವಾತಾವರಣ ನಿರ್ಮಿಸಲು ಪ್ರಯತ್ನ ಮಾಡುತ್ತಿದೆ. ಜೊತೆಗೆ ಮದರಸಾ ಅಧ್ಯಾಪಕರಿಗೆ ಆರ್ಥಿಕ ವ್ಯವಸ್ಥೆ ಮಾಡಲು ಶ್ರಮಿಸುತ್ತಿದೆ. ಈಗಾಗಲೇ ಸಂಸ್ಥೆಯ ಮೇಲೆ ಪ್ರೀತಿ ಇಟ್ಟಿರುವ, ದೇಶವಿದೇಶಗಳಲ್ಲಿ ನೆಲೆಸಿರುವ ಹಲವು ಮಂದಿ ಹಳೆಯ ವಿದ್ಯಾರ್ಥಿಗಳು ತಮ್ಮ ಕೈಲಾದ ಮಟ್ಟಿಗೆ *ಆರ್ಥಿಕ ನೆರವು* ನೀಡುತ್ತಿದ್ದಾರೆ.

*ಈ ಹಾಸ್ಟೆಲ್ ನಲ್ಲಿ ಕಲಿತ ಅದೆಷ್ಟೋ ಮಂದಿ ವಿದ್ಯಾರ್ಥಿಗಳು ಇಂದು ಹಲವಾರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಎಲ್ಲರನ್ನೂ ಸಂಪರ್ಕ ಮಾಡಲು ನಮಗೆ ಸಾಧ್ಯವಾಗಿಲ್ಲ. ಪ್ರಯತ್ನ ಮುಂದುವರಿದಿದೆ. ಇದರ ಜೊತೆಗೆ ದಾನಿಗಳು, ಶಿಕ್ಷಣ ಪ್ರೇಮಿಗಳು ಈ ಸಂಸ್ಥೆಗೆ ಆರ್ಥಿಕ ನೆರವು ಅಥವಾ ಇಫ್ತಾರ್ ಕೂಟ ಆಯೋಜಿಸಲು ಸಹಕರಿಸಬಹುದು.*

*ಬಡ ಹಾಗೂ ಮಧ್ಯಮ ವರ್ಗದ ಜನರ ಮಕ್ಕಳ ಪ್ರಾರ್ಥನೆ ಸೃಷ್ಟಿಕರ್ತ ಸ್ವೀಕರಿಸಿ, ಅನುಗ್ರಹಿಸಲಿ. ಆಮೀನ್.*

*ಹನಿ ಹನಿಗೂಡಿದರೆ ಹಳ್ಳ* ಎಂಬಂತೆ ಆಸಕ್ತರು, ಸಂಘ ಸಂಸ್ಥೆಗಳ ಯಾರಾದರೂ ಇದ್ದರೆ ನಮ್ಮ ಹಳೆಯ ವಿದ್ಯಾರ್ಥಿಗಳನ್ನು ಸಂಪರ್ಕ ಮಾಡಬಹುದು ಅಥವಾ ನೇರವಾಗಿ ಜಂಟಿ ಖಾತೆಗೆ ಹಣವನ್ನು ವರ್ಗಾವಣೆ ಮಾಡಬಹುದು.

Contact:

Anwar Amemmar : 9008385666

Siraj Kinya: 9880130994

ಖಾತೆಯ ವಿವರ:

Old Students Association, Government Muslim Residential School, Natekal, Mangaluru

Bank Account Details

Name Of the Bank: Karnataka Bank

Account Type: Current Account

Name In Account: Anwar A.S & Siraj
Joint Account

Account Number: 9432000100005501

Branch: Belma, Deralakatte

IFSC Code: KARB0000943

MICR Code: 575052034

ಪ್ರೀತಿಯಿಂದ
✍🏽 *ಇರ್ಷಾದ್ ವೇಣೂರ್*😍
ಹಳೆ ವಿದ್ಯಾರ್ಥಿ
ಸರಕಾರಿ ಮುಸ್ಲಿಂ ವಸತಿ ಶಾಲೆ

ಮಾಧ್ಯಮ ಪಿನ್ನೆ ಬ್ಯಾರಿ ಸಮುದಾಯ


📝ಉಮರ್ ಯು. ಹೆಚ್.

“1947ಲ್ ವಾಟ್ಸಾಪ್ ಇಲ್ಲಾಂತ್. ಇದ್ ನಲ್ಲೆದ್‍ಗೆ. ಇನ್ನ್ ರೆಂಗ್ ಸ್ವಾತಂತ್ರ್ಯ ಹೋರಾಟತ್ತ್ ಗ್ ಆರುಂ ಬೀದಿಗ್ ಬರಲಾಂತ್. ಎಲ್ಲಾರುಂ ಔತುಲು ದಿಚ್ಚಿತ್ತ್  ‘ಈ ಸಂದೇಶ ಬ್ರಿಟಿಷ್‍ರಂಕ್ ಎತ್ತುಂ ತೋಲೊ ಫೋರ್ವಾರ್ಡ್ ಆಕೊರು’ ಚೆಂತ್ ಮೆಸೇಜ್ ಕಡ್ತಿಯೋಂಟಿಕ್ಕಾತಾರ್.” ಇದ್ ಇಪರತ್ತ್‍ಗ್ ವಾಟ್ಸಾಪ್‍ಲು ವೈರಲ್ ಆಯೋ ಒರು ಜೋಕು.

ಬ್ಯಾರಿ ಸಮುದಾಯತ್ತ್‍ಲ್ ಪ್ರತಿಭಾವಂತ, ಸೃಜನಶೀಲ ಎಲ್ತ್ ಗಾರ್ ಚಮ್ಮೆ ಉಲ್ಲಾರ್. ಆಯೆಂಗಾ ಒರ್ಕೊರ್ಕ ಅಙ ಎಲ್ದ್ ರೊ ಎಲ್ತ್ ಙ ನೋಕುಂಬೊ ನಿರಾಸೆ ಆವುರು. ದಿಕ್ಕ್ ದೆಸೆ ಇಲ್ಲಾಮಾರ್ ಮನಸ್ಸ್ ಗ್ ಬನ್ನೆದೆಲ್ಲಾ ಎಲ್ದಿತ್ತ್ ವಾಟ್ಸಾಪ್‍ಲು ಕಡ್ತ್‍ರೊ ಒರು ಹಾದತ್ತ್ ನಙಲೊ ಕೊರಿಯ ಬಾಲಕ್ಕಾರ್‍ಗ್ ಉಂಡು. ಆರಾ ಕಡ್ತಿಯೊ ಮೆಸೇಜ್‍ರೊ ಸಮಾ ಓದಾಮಾರ್, ಅದ್ ನೇರಾ ಕಲವಾ ಚೆಂತ್ ನೋಕಾಮಾರ್, ಅದ್ ಕಡ್ತಿಯೆದ್ಲ್ ನಕ್ಕಾವಟ್ಟ್, ನಂಡೊ ಸಮುದಾಯತ್ತ್ ಗಾವಟ್ಟ್ ಎಂದೆಂಗುಂ ಕೊನ ಉಂಡಾ ಚೆಲ್ರೊ ವಿಮರ್ಶೆ ಆಕ್ಯಾಮಾರ್....ಬ್ಯಾರೆ ಆಲ್‍ಗಾ ಅಲ್ಲೆಂಗ್ ಗ್ರೂಪುಗಾ ಅಙನೆಮೆ ಕಡ್ತಿಕೊಡುಕೊರು ಚಮ್ಮೆ ಆಲ್ಮಾರ್ ಸಮುದಾಯತ್ತ್ ಲ್ ಉಲ್ಲಾರ್.  

ಪೊರ್ರಾಯತುಲ್ಲೊ ಬಾಲಕ್ಕಾರ್ ಈ ಬಿಸಯತ್ತ್ ಲ್ ತೆಲ್ಲ್ ಮುನ್ನೊಲೆ. ಗಲ್ಫ್‌ ಲುಲ್ಲೊ ಬ್ಯಾರಿಂಕ್ ಸ್ವಾಭಾವಿಕಮಾಯಿಟ್ಟ್ ತಂಡೊ ರಾಯ ಪಿನ್ನೆ ಊಡ್ತೊ ಆಲ್ಮಾರೊಟ್ಟುಗು ಭಾವನಾತ್ಮಕ ಸಂಬಂಧ ಉಂಡು. ರಾಯತ್ತ್ ನಡಕ್‍ರೊ ಒರು ಚೆರಿಯೊ ಘಟನೆಂ ಅಙಲೊ ಬೇಗ ಸ್ಪಂದನೆ ಆಕೊಗು, ಅಙಲೊ ಭಾವನೆರೊ ಕೆರಳಿಸೊಗು ಈ ಸಂಬಂಧ ಪ್ರೇರಣೆ ಆಕ್ರೆದ್ ಸಹಜ. ಆಯೆಂಗಾ ರಾಯತ್ತ್ ನಡನ್ನೊ ಏದೆಂಗುಂ ಘಟನೆರೊ ವಾಸ್ತವಾಂಶ ತೆರಿಯಾಮಾರ್ ಅರ್ಸತ್ತೊ ಸಿಪ್ಪತ್ತ್ ಲ್ ಎಂದೆಂಗುಂ ಎಲ್ದಿಯೆಂಗ್ ಅದ್‍ಲ್ ಲಾಬತ್ತೊ ಕಾನ ಯಾರ ನಷ್ಟಮೇ ಆವುರೊ.”ಮಾಧ್ಯಮ ಪಿನ್ನೆ ಬ್ಯಾರಿ ಸಮುದಾಯ” ಚೆಲ್ರೆ ತಲೆ ಕೆಟ್ಟ್ ಗ್ ಈ ಪೀಠಿಕೆ ಎಂದಿಗ್ ಚೆನ್ನೆಂಗ್, ಇಂಡ್ ಮಾಧ್ಯಮ ಚೆಲ್ರೆದ್ ಪೇಪರ್ ಪಿನ್ನೆ ಟಿವಿ ಮಾತ್ರ ಅಲ್ಲ. ಸಾಮಾಜಿಕ ಜಾಲತಾಣ ಆಯೊ ವೆಬ್ ಪೋರ್ಟಲ್, ಫೇಸ್ಬುಕ್, ಟ್ವೀಟರ್, ವಾಟ್ಸಾಪ್.... ಎಲ್ಲೊಂ ಸಂವಹನ ಮಾಧ್ಯಮತ್ತ್ ಗ್ ಸೇರಿಯೊಂಡ್ರು.

*ಪೇಪರ್ ಪಿನ್ನೆ ಟಿವಿ:* ಒರು ಪ್ರಜಾಪ್ರಭುತ್ವ ದೇಶತ್ತೊ ನಡಪಾಟ್‍ರೊ ಮೂನು ಅಂಗಮಾಯೊ ನ್ಯಾಯಾಂಗ, ಕಾರ್ಯಾಂಗ ಪಿನ್ನೆ ಶಾಸಕಾಂಗ ಇನ್ನೊ ಪೋಲೆ ‘ಮಾಧ್ಯಮ’ ಅದ್ರೊ ನಾಲಮತ್ತೊ ಅಂಗ ಚೆಲ್ಡಾರ್. ಮಾಧ್ಯಮ ಚೆಲ್ಡೆದ್ ನ್ಯಾಯಾಂಗ, ಕಾರ್ಯಾಂಗ ಪಿನ್ನೆ ಶಾಸಕಾಂಗ ತಪ್ಪು ಆಕಾತೊ ಪೋಲೆ ಕಾಕ್‍ರೊ ‘ವಾಚ್ ಡಾಗ್’ ಅಲ್ಲೆಂಗ್ ಕಾವಲು ನಾಯಿಂಟುಂ ಚೆಲ್ಡಾರ್. ಮಾಧ್ಯಮ ನಿಶ್ಪಕ್ಷಪಾತ ಧೋರಣೆ ಎಡ್ಕೊನೂಂಟುಂ ಚೆಲ್ಡಾರ್. ಏದೆಂಗುಂ ಮಾಧ್ಯಮತ್ತ್‍ಗ್ ನಿಶ್ಪಕ್ಷಪಾತ ಧೋರಣೆ ಎಡ್ಕೊಗಾವುಲ್ಲೆ, ಅದ್‍ಲಾಯಿಟ್ಟ್ ಪಾವತ್ತಙಲೊ, ಗತಿ ಇಲ್ಲಾತಙಲೊ, ಅನ್ಯಾಯ, ಶೋಷಣೆ, ದಬ್ಬಾಳಿಕೆ, ಅವಮಾನ, ದೌರ್ಜನ್ಯತ್ತ್ ಗ್ ಒಳಗಾಯಙಲೊ ಪರಮೈತ್ ನಿಕ್ಕ್ ರೊ ‘ಪಕ್ಷಪಾತಿ’ ಆವುನೂಂಟು ಚೆಲ್ಡೆಙೊಂ ಉಲ್ಲಾರ್.

ಮಾಧ್ಯಮ ಚೆಲ್ಡೆದ್ ಒರು ಸಮಾಜತ್ತೊ ಮೇಲ್ ನೇರ ಪರಿಣಾಮ ಬೀರೊಕಾವುರೊ ಅದ್‍ರೊಟ್ಟುಗು ಜನಾಭಿಪ್ರಾಯ ಉಂಡಾಕೊಗಾವುರೊ ಒರು ಕ್ಷೇತ್ರ. ಅದ್‍ಲಾಯಿಟ್ಟೆ ಇಂಡ್ ಮಾಧ್ಯಮ ಬಂಡವಾಳಶಾಹಿಮಾರ್, ರಾಜಕೀಯ ಪಕ್ಷಙ, ಬೇರೆ ಬೇರೆ ಧರ್ಮ, ಜಾತಿ, ಸಿದ್ಧಾಂತತ್ತೊ ಆಲ್ಮಾರ್ ಅಙಲೊ ಹಿತಾಶಕ್ತಿರೊ ಒಲ್ಚೊಲೊಗು/ಪ್ರಚಾರ ಆಕೊಗು ಪೇಪರ್ ಅಲ್ಲೆಂಗ್ ಟಿವಿ ಚಾನಲ್ ತೊಡಙಿರಾರ್. ಕೊರಿಯ ಆಲ್ಮಾರ್ ಕಾಸಾಕೊಗಾವುರೊ ಒರು ಕಚ್ಚೋಡ ಚೆಲ್ರೆ ನೆಲೆಲುಂ ಎನಿ ಕೊರಿಯ ಆಲ್ಮಾರ್ ಒರು ಸೇವಾಕ್ಷೇತ್ರ ಚೆಲ್ರೆ ನಲೆಲುಂ ಮಾಧ್ಯಮರಂಗತ್ತ್‍ಗ್ ಪ್ರವೇಶ ಆಯಿರಾರ್.

ಅದ್‍ಲಾಯಿಟ್ಟೆ ಬ್ಯಾರಿ ಸಮುದಾಯತ್ತೊ ಚಮ್ಮೆ ಆಲ್ಮಾರ್ ಎಪ್ಪೋಲೊಂ ದೂರಿಯೋಂಟಿಕ್ಕ್ ರೊ ಇದ್ರೊಮೇ. “ಆ ಟಿವಿ ಸಮ ಇಲ್ಲೆ, ಈ ಪೇಪರ್ ಸಮ ಇಲ್ಲೆ”. ತಾರ್ಕಿಕಮಾಯಿಟ್ಟ್ ಇದ್ರೊ ಒಪ್ಪಿಯೊಲ. ಅಪೆಂಗ್ ಇದ್ರೊ ಸಮ ಆಕ್ರೊ ಆರ್? ಆಯಾ ಪೇಪರ್ ಪಿನೆ ಟಿವಿರಙಮಾ ಅಲ್ಲ ಸರಕಾರಮಾ? ಸರಕಾರ ಸಮ ಆಕ್ರೊ ಎಙನೆ? ವಾಟ್ಸಾಪ್‍ಲು ಒರು ಸಂದೇಶ ಎಲ್ದಿತ್ತ್ ಬ್ಯಾರೆ ಬ್ಯಾರೆ ಗ್ರೂಪುಗು ಕಡ್ತಿಕೊಡ್ಕುರೆಮಾ? ಅಲ್ಲ ಸರಕಾರತ್ತೊ ಗಮನತ್ತ್ ಗ್ ಇದ್ರೊ ಕೊಂಬಂಡೆಮಾ? ಸರಕಾರ ಚೆನ್ನೆಂಗ್ ಪಾರ್ಲಿಮೆಂಟ್ ಪಿನ್ನೆ ವಿಧಾನಸೌಧತ್ತೊ ಮದ್ಲ್ ಅಲ್ಲಲ್ಲೆ? ಸರಕಾರ ಚೆನ್ನೆಂಗ್ ಅದ್ರೊ ಬ್ಯಾರೆ ಬ್ಯಾರೆ ಇಲಾಖೆಙ ಪಿನ್ನೆ ಅದ್‍ಲುಲ್ಲೊ ಅಧಿಕಾರಿಮಾರ್.

ಪೇಪರ್ ಪಿನ್ನೆ ಟಿವಿ ಚೆನ್ನೆಂಗುಂ ಅದ್‍ಲುಲ್ಲೊ ಆಲ್‍ಮಾರೆ. ಈ ದೇಶತ್ತ್ ಲ್ ಮಾತ್ರ ಅಲ್ಲ ನಙಲೊ ರಾಯತ್ತ್‍ಲುಂ ಪತ್ರಿಕಾಧರ್ಮತ್ತೊ ಪಾಲನೆ ಆಕ್ರೊ ಅಲ್ಲೆಂಗ್ ಅದ್ರೊ ಪಾಲನೆ ಆಕೊಗು ಒದ್ದಾಡ್‍ರೊ ಚೆಮ್ಮೆ ನಲ್ಲೊ ಪತ್ರಕರ್ತಮಾರ್, ಅಂಕಣಕಾರ್, ಕಾರ್ಟೂನಿಸ್ಟ್, ಫೊಟೋ ಜರ್ನಲಿಸ್ಟ್, ಪೇಪರ್, ಟಿವಿರಙ ಉಲ್ಲಾರ್. ಅದ್ ಚೆಮ್ಮೆ ಆಲ್ಮಾರ್ಗ್ ಪಿಡಿಲ್ಲೆ. ಅದ್‍ಲಾಯಿಟ್ಟ್ ಎಲ್ಲ ಪೇಪರ್, ಟಿವಿ, ಪತ್ರಕರ್ತಮಾರೊ ಒರೇ ತಿರಾಸ್‍ಲ್ ಇಟ್ಟ್ ತ್ತ್ ತೂಕುರೆದ್ ನಿಪ್ಪಾಟೊನು. ಈ ಬಿಸಯತ್ತ್ ಲ್ ಬ್ಯಾರಿ ಸಮುದಾಯತ್ತ್ ಲ್ ಒರು ಜನಜಾಗೃತಿರೊ ಅಗತ್ಯ ಉಂಡೂಂಟು ಕಾಂಡ್.

ಪೇಪರ್ ಪಿನ್ನೆ ಟಿವಿ ಚಾನಲ್‍ಲ್ ಮುಸ್ಲಿಮ್ ವಿರೋಧಿ, ಇಸ್ಲಾಮ್ ವಿರೋಧಿ, ಜನವಿರೋಧಿ ಸುದ್ಧಿ ಇಲ್ಲೆಂಗ್ ಲೇಖನ ಪ್ರಕಟ ಆಯೋಂಟಿಕ್ಕ್ ರೆದ್ ನೇರೆ. ಅದ್ ಪ್ರಕಟ ಆಯೆಪ್ಪ ಸುರೂಕು ಆಕೊನಾಯೊ ಪನಿ ಆಯಾ ಪೇಪರ್, ಟಿವಿರೊ ಸಂಪಾದಕ ಅಲ್ಲೆಂಗ್ ಸಂಬಂಧಪಟ್ಟೊ ಆಲ್ಮಾರೊ ಗಮನತ್ತ್ ಗ್ ಆ ಬಿಸಯ ಕೊಂಬರೊನು. ಅದ್ ಫೋನ್ ಆಕಿತ್ತ್ ಆಯಿಟಿಕ್ಕ ಅಲ್ಲೆಂಗ್ ಅಙಲೊ ಆಫೀಸ್‍ಗ್ ಸಮುದಾಯತ್ತೊ ಜವಾಬ್ಧಾರಿಯುತ ಆಲ್ಮಾರೊ ನಿಯೋಗ ಭೇಟಿ ಕೊಡ್ಕುರೆದ್ ಆಯಿಟಿಕ್ಕ. ಬ್ಯಾರಿ ಸಮುದಾಯ ಮಾಧ್ಯಮತೊಟ್ಟುಗು ಇಙನೆ ನಿರಂತರ ಸಂಪರ್ಕತ್ತ್ ಲ್ ಇನ್ನೆಂಗ್ ತಪ್ಪುಙ ತಿದ್ದ್ ರೊ, ಮನ್ನೊಲ್ಗು ಅಙಂತೊ ತಪ್ಪು ಆವಾತೊ ಪೋಲೆ ನೋಕ್ಯೊಲುರೊ ಅದ್‍ರೊಟ್ಟುಗು ಇಸ್ಲಾಮ್ ಪಿನ್ನೆ ಮುಸ್ಲಿಮಿಞಲ್ಲೊ ಮೇಲ್‍ಲ್ಲೊ ಚಮ್ಮೆ ತಪ್ಪುಕಲ್ಪನೆಙ ದೂರ ಆವುರೊ ಸಾಧ್ಯತೆ ಉಂಡು.

ಎಲ್ಲ ಪೇಪರ್‍ಲ್ ಸಂಪಾದಕರಿಗೆ ಪತ್ರ ಚೆಲ್ಡೊ ಒರು ಕಾಲಂ ಉಂಡು. ಅದ್ ಉಲ್ಲೊ ಪೇಪರ್ ಓದುರಙಲೊ ಅಭಿಪ್ರಾಯ ಚೆಲ್ಲೊಗು. ವಾಟ್ಸಾಪ್, ಫೇಸ್ಬುಕ್‍ಲು ಗೀಚ್‍ರೊ ಬದಲ್ಗ್ ನಙಲೊ ಬಾಲಕ್ಕಾರ್ ಪೇಪರ್ ಪಿನ್ನೆ ಟಿವಿರೊ ಸಂಪಾದಕ ಮಾರ್ಗ್ ಕಡ್ಲಾಸ್ ಎಲ್ದ್ ರೊ ಹಾದತ್ತ್ ಉಂಡಾಕೊನು. ಒರು ಬಿಸಯತ್ತ್ ಲ್ ಒನ್ನುರೊ ಕಾನ ಯಾರ ಕಡ್ಲಾಸ್ ಒರು ಪೇಪರ್ರೊ ಆಫೀಸ್‍ಗ್ ಪೋಯೆಂಗ್ ಆ ಪೇಪರ್‍ರೊ ಸಂಪಾದಕೀಯ ಮಂಡಳಿರೊ ಮೀಟಿಂಗ್ ಆವುರು. ಎಂದಿಗ್ ಚೆನ್ನೆಂಗ್ ಪೇಪರ್ ಓದುರಙ ಅದ್ರೊ ಗ್ರಾಹಕಮಾರ್. ಓದುರಙಲೊ ಅಭಿಪ್ರಾಯತ್ತ್ ಗ್ ಅತ್ತೆರ್ ಮಹತ್ವ ಉಂಡು.

ಜಂಡಾಮತ್ತೊ ಆಯ್ಕೆ ಉಲ್ಲೊ ಪೊಲೀಸ್ ಇಲಾಖೆಗ್ ದೂರು ಕೊಡ್ಕುರೊ, ಕೇಸ್ ದಾಖಲ್ ಆಕ್ರೊ. ಪೇಪರ್, ಟಿವಿರಙಲೊ ನ್ಯಾಯಾಲಯತ್ತ್ ಗ್ ಬಿಲಿಪಾಟ್ರೊ. ಮೂನಾಮತ್ತೊ ಆಯ್ಕೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾತ್ತ್ ಗ್ ದೂರು ಕೊಡ್ಕುರೊ. ಒರು ಸಮುದಾಯ ಚೆಲ್ಡೊ ನೆಲೆಲ್ ಆದ್ಯತೆರೊ ಪಿನ್ನೆ ಮಹತ್ವ ಕೊಡ್ಕೊನಾಯೊ ಆಯ್ಕೆ ಮಾಧ್ಯಮ ರಂಗತ್ತ್ ಗ್ ಪ್ರವೇಶ ಆವುರೊ. ಸೃಜನಶೀಲ ಬಾಲಕ್ಕಾರ್ ಪತ್ರಿಕೋಧ್ಯಮ ಪಡ್ಚಿತ್ತ್ ಪೇಪರ್ ಪಿನ್ನೆ ಟಿವಿ ಚಾನೆಲ್‍ಗ್ ಸೇರ್‍ರೊ. ಪ್ರಕಟ ಆವಟ್ಟ್ ಆವಾಟಿಕ್ಕಟ್ಟ್ ಬ್ಯಾರೆ ಬ್ಯಾರೆ ಪೇಪರ್‍ಗ್ ಲೇಖನ, ಕವನ. ಕತೆ ಎಲ್ದ್ರೊ. ನಙಲೆದೇ ಆಯೊ ಪೇಪರ್, ಟಿವಿ ಚಾನೆಲ್, ವೆಬ್ ಪೋರ್ಟಲ್ ತೊಡಂಞïರೊ. ಉಲ್ಲೊ ಪೇಪರ್, ಚಾನೆಲ್, ಪೋರ್ಟಲ್, ಎಲ್ತ್ ಗಾರ್ ಗ್ ಪ್ರೋತ್ಸಾಹ ಆಕ್ರೊ.

*ಎಲ್ತ್ ಗಾರ್‍ಗ್ ಸೂಚನೆ:* ಯಾರಮೈತ್ ಬ್ಯಾರಿಙ ಎಲ್ದ್ ರೊ ದೀನ್‍ರೊ ಬಗ್ಗೆ. ದೀನ್‍ರೊ ಬಿಸಯ ಎಲ್ದೊನೆ. ಅದ್‍ರೊಟ್ಟುಗು ಫಿರ್ಕ, ಗ್ರೂಪಿಸಂ, ನಿಸ್ಸಾರಮಾಯೊ ಭಿನ್ನಾಭಿಪ್ರಾಯತ್ತೊ ಬಿಸಯ ಎಲ್ದ್ ರೊ ಅಗತ್ಯ ಉಂಡಾ ಚೆಂತ್ ನಙಲೊ ಎಲ್ತ್ ಗಾರ್ ಆತ್ಮಾವಲೋಕನ ಆಕ್ರೊ ಅಗತ್ಯ ಉಂಡು. ಜೀವಂತ ಸಮುದಾಯತ್ತ್ ಲ್ ಎಪ್ಪೊಂ ಭಿನ್ನಾಭಿಪ್ರಾಯ ಇಕ್ಕ್ ರ್, ಇಕ್ಕೊನೆ. ನಙ ಎಂದ್ ಪ್ರಯತ್ನ ಆಕಿಯೆಂಗುಂ, ಎತ್ತರೆ ಎಲ್ದಿಯೆಂಗುಂ ದೀನ್‍ರೊ ಕೊರಿಯ ಬಿಸಯತ್ತ್ ಲ್ ಏಕಾಭಿಪ್ರಾಯತ್ತ್ ಗ್ ಬರೊಗು ಕಯಾಮನ್ನಾಲ್ ತೋಲೊ ಸಾಧ್ಯಮೇ ಇಲ್ಲೆ ಚೆಲ್ರೆದ್ ನಂಕ್ ಪಿಡಿಕ್ಕೊನು.
ನಙಲೊ ಸಂಘಟನೆ, ನೇದಾವುರೊ ಎತ್ತರೆ ಬೇನೆಂಗುಂ ಪೊಗಲ, ಸಮರ್ಥನೆ ಆಕ. ಅದ್‍ಗ್ ಇನೊರು ಸಂಘಟನೆ, ಅದ್ರೊ ನಾಯಕರೊ ಅವಮಾನ, ತಮಾಷೆ ಆಕ್ರೊ ಅಗತ್ಯ ಉಂಡಾ ಚೆಲ್ರೊ ಚಿಂತನೆ ಆಕೊನು. ಸಮುದಾಯತ್ತೊ ಒತ್ತೊರುಮೆಪ್ಪಾಡ್‍ಗ್ ನಷ್ಟ ಆವುಂಪೋಲ್ತೊ ಎಂದುಂ ಎಲ್ತ್ ಲ್ ಬರಾತೊ ಪೋಲೆ ಜಾಗೃತೆ ಆಕೊನು.

ಉದಯೋನ್ಮುಖ ಬ್ಯಾರಿ ಎಲ್ತ್ ಗಾರೊ ಲೇಖನ, ಕವನ, ಕತೆ ಓದುಂಬೊ ಅಂಕ್ ತರಬೇತಿರೊ ಕೊರತೆ ಉಲ್ಲೊ ಪೋಲೆ ಕಾಂಡ್. ಅಙ ಓದುರೊ ಕೊರೋಡಿಯುಂ ಎಲ್ದ್ವರೊ ಯಾರ ಪೋಲೆ ಕಾಂಡ್. ಎಲ್ತ್ ಲ್ ಸೃಜನಶೀಲತೆ ಬರೊನು, ನಙಲೊ ಎಲ್ತ್ ಓದುರಙಲೊ ಕಲ್ಬುಗು ತಟ್ಟೊನೂಂಟಾಯೆಂಗ್ ಚಮ್ಮೆ ಓದೊನು, ಪಡಿಕೊನು, ಅಧ್ಯಯನ ಆಕೊನು. ಕೊರೋಡಿ ಎಲ್ದೊನು. “ನಂಡೊ ಲೇಖನ ಆ ಪೇಪರ್‍ಗ್ ಕಡ್ತಿರೆ, ಅಙ ಪ್ರಕಟ ಆಕಿತಿಲ್ಲೆ. ಅದ್ ಇಪ್ಪ ಚೆಡ್ಡಿ ಪೇಪರ್ ಐರ್! ನಿಂಕ್ ತೆಲ್ಲ್ ಕೇಕೊಗಾವುಲ್ಲೆ” ಚೆಂತ್ ದೂರು ಚೆಲ್ರೊ ಕೊರಿಯ ಎಲ್ತ್ ಗಾರ್ ಉಲ್ಲಾರ್. ಅಂಕೆಲ್ಲಾ ನಂಡೊ ಜವಾಬು ಇದ್. “ನಂಕ್ ಕುರ್‍ಆನ್, ಹದೀಸ್ ಚೆಲ್ಲಾಮಾರ್ ಲೇಖನ ಎಲ್ದೊಗು ಆವುಲ್ಲೆ. ಸಮಮಾ ತಪ್ಪಾ ಎಲ್ಲ ಪೇಪರ್‍ಗ್ ಅಙಲೆದೇ ಆಯೊ ಒರು ಸ್ಟಾಂಡರ್ಡ್ ಉಂಡು. ನಙಲೊ ಲೇಖನ ಆ ಮಟ್ಟತ್ತ್ ಲ್ ಇಲ್ಲೆಂಗ್ ಅಙ ಅದ್ರೊ ಪ್ರಕಟ ಆಕೊಗಾವುರಾ?”

ಸಾಮಾಜಿಕ ಸಮಸ್ಯೆರೊ ಬಿಸಯತ್ತ್ ಲ್, ಸಮಾಜತ್ತೊ ಎಲ್ಲ ವರ್ಗ, ಜಾತಿ, ಜನಾಂಗತ್ತೊ ಮೇಲ್ ಆಯೋಂಟುಲ್ಲೊ ದಬ್ಬಾಳಿಕೆ, ದೌರ್ಜನ್ಯ, ಶೋಷಣೆರೊ ವಿರುದ್ಧ ಬ್ಯಾರಿ ಎಲ್ತ್ ಗಾರ್ ಪೆನ್ನ್ ಉಪಯೋಗ ಆಕೊನು. ಕನಿಷ್ಠ ನಙಲೊ ಔತುರೊ ಮುಟ್ಟ ಮೋರಿ ಸಮ ಇಲ್ಲೆ, ರೋಡ್ ಸಮ ಇಲ್ಲೆ...ಚೆಲ್ರೊ ಸಂಪಾದಕರಿಗೆ ಪತ್ರ ಎಲ್ದೊಗು ಸುರಾಕೊನು. ಈ ಅವಕಾಶ ಎಲ್ಲ ಮಾಧ್ಯಮತ್ತ್ ಲ್ ಇಂಡುಂ ಉಂಡು. ಅದ್ರೊ ಸದುಪಯೋಗ ಆಕೊನು.

*ವಾಟ್ಸಾಪ್, ಫೇಸ್ಬುಕ್....:*
ಬ್ಯಾರಿ ಬಾಲಕ್ಕಾರ್ ವಾಟ್ಸಾಪ್, ಫೇಸ್ಬುಕ್ ಪಿನ್ನೆ ವೆಬ್ ಪೋರ್ಟಲ್‍ಲ್ ಯಾರ ಎಲ್ದಿಯೋಂಟಿಕ್ಕ್ ರಾರ್. ಇದ್ ನಲ್ಲೊ ಬಿಸಯಮೇ. ಆಯೆಂಗಾ ನಙ ಏದೆಂಗುಂ ಬಿಸಯತ್ತ್ ಲ್ ತಕ್ಷಣತ್ತೊ ಪ್ರತಿಕ್ರಿಯೆ ಕೊಡ್ಕುಂಬೊ ನಙಲೊ ಎಲ್ತ್ ಅಲ್ಲೆಂಗ್ ಅಭಿಪ್ರಾಯತ್ತ್ ಲ್  ತಪ್ಪು ಆವುರೊ ಸಾಧ್ಯತೆ ಉಂಡು. ಅದ್ ಆವಾತೊ ಪೋಲೆ ಜಾಗ್ರತೆ ಆಕೊನು. ಎಲ್ತ್ ಲ್ ಬಳಸ್‍ರೊ ಪ್ರತಿಯೊರು ಶಬ್ಧಂ ಇಂಡ್ ಚೆಮ್ಮೆ ಖಯಾಲ್ ಆಕಿತ್ತೇ ಎಲ್ದೊನಾವುರು. ನಾನ್ ಚೆಲ್ರೊ ಅಭಿಪ್ರಾಯ ಅದ್ ನಂಡೆ ವೈಯಕ್ತಿಕ ಅಭಿಪ್ರಾಯ ಮಾತ್ರ ಚೆಲ್ರೊ ಕಾಲ ಇದಲ್ಲ. ಅದ್ ನಂಡೊ ಸಮುದಾಯತ್ತೊ ಒಟ್ಟು ಅಭಿಪ್ರಾಯಟುಂ, ಇಸ್ಲಾಮ್ ದೀನೇ ಅಙನೇಂಟುಂ ತೀರ್ಮಾನತ್ತ್ ಗ್ ಬಂಡೊ ಸಹೋದರ ಧರ್ಮತ್ತೊ ಓದುರಙ ಉಲ್ಲಾರ್.
ನಙಲೊ ಭಾವನೆರೊ ಕೆರಳಿಸ್‍ತ್ತ್, ಅರ್ಸ ಬರ್ಪಾಟಿತ್ತ್ ರಾಜಕೀಯ ಲಾಭ ಎಡ್ಕ್‍ರೊ ಷಢ್ಯಂತ್ರ ನಡನೋಂಟುಂಡು. ನಙ ಅದ್‍ಗ್ ಬಲಿ ಆವೊಗು ತೀರ. ನಙಲೊ ಶತ್ರು ಆರ್ ಮಿತ್ರ ಆರ್ ಚೆಲ್ರೊ ಫರಕ್ ನಂಕ್ ಪಿಡಿಕ್ಕೊನು. ಶತ್ರುಮಾರ್ ನಂಕ್ ತಂಡೊ ಅಜೆಂಡಾತ್‍ಗ್ ನಙ ಪ್ರತಿಕ್ರಿಯೆ, ಪ್ರತಿಭಟನೆ ಆಕ್ರೆದ್ ನಿಪ್ಪಾಟೊನು. ಅಜೆಂಡಾ ನಙ ತಯಾರ್ ಆಕೊನು. ನಙಲೊ ವಿರೋಧಿಮಾರ್ ಅದ್‍ಗ್ ಜವಾಬ್ ತಂಡೊ ಪೊಲ್ತೊ ವಾತಾವರಣ ನಿರ್ಮಾಣ ಆವೊನು.

ಏದ್ ಸಂದರ್ಭತ್ತ್ ಲುಂ ನಂಕ್ ಅರ್ಸ ಬರಾತೊ ಪೋಲೆ, ಬಾಲಕ್ಕಾರ್ ಉದ್ರೇಕ ಆವಾತೊ ಪೋಲೆ ನೋಕ್ಯೊಲೊನು. ಸಬುರು ನಂಕಿಕ್ಕೊನು. ವಿಮರ್ಶೆ, ದೂರದೃಷ್ಠಿ ಚಿಂತನೆ, ಸಮುದಾಯತ್ತೊ ಅಭಿವೃದ್ದಿಗ್ ಸಲಹೆಙ ನಙಲೊ ಎಲ್ತ್ ಲ್ ಬರೊನು. ಏ ಕಾರಣತ್ತ್ ಗುಂ ಆರೊ ಮನಸ್ಸ್ ಗುಂ ನೊಂಬಲ ಆವಾತೊ ಪೋಲೆ ಜಾಗ್ರತೆ ಆಕೊನು. ಪೆನಙಿಟ್ಟ್, ಅವಮಾನ ಆಕಿಟ್ಟ್ ಆರೊ ಮನಸುಂ ಗೆಂದೊಗು ಸಾಧ್ಯ ಇಲ್ಲೆ, ಸಮಾಜ ಸುಧಾರಣೆ ಆಕೊಗುಂ ಆವಲೆ ಚೆಲ್ರೆದ್ ನಂಕ್ ಪಿಡಿ ಇಕ್ಕೊನು. ಪಿರ್ಸಮೇ ನಙಲೊ ಎಲ್ತ್ ಗಾರೊ ಅಸ್ತ್ರ ಆವೊನು. ನಙಲೊ ದೀನ್ ನಂಕ್ ಪಡಿಪಾಟಿರೊಂ ಅದುವೇ.