ಮೀಸಲಾತಿ ಅನ್ನೋ ವಿಚಾರ ಕೇಳಿದೊಡನೆ ಅಂಡುಸುಟ್ಟ ಬೆಂಕಿನಂತಾಡೋ RSS ಛಡ್ಡಿಗಳಿಗೆ ನನ್ನ ಪ್ರಶ್ನೆ ............
1) ಮೀಸಲಾತಿಯು ಸಂವಿಧಾನದಲ್ಲಿ ಮೂಲಭೂತ ಹಕ್ಕು. ಇದರ ಮಾಹಿತಿ ನಿಮಗಿದಿಯಾ....?
2) ಮೀಸಲಾತಿಯಲ್ಲಿ ಶಿಕ್ಷಣ ಮತ್ತು ಉದ್ಯೋಗದ ಮೀಸಲಾತಿಗೆ ಕಾಲಮಿತಿ ಎಲ್ಲಿದೆ.....?
3) ರಾಜಕೀಯ ಮೀಸಲಾತಿಯನ್ನು ಅಂಬೇಡ್ಕರ್ ರವರು ಕೇವಲ 10ವರ್ಷಕ್ಕೆ ಮಾತ್ರವೇ ಮಿತಿಗೊಳಿಸಿದ್ದರು. ಅದನ್ನು ಇಂದಿಗೂ ಮುಂದುವರೆಸುತ್ತಿರುವರಲ್ಲಾ ಯಾಕೆ .......?
4) RSS ಒಂದು ಅಖಿಲ ಭಾರತ ಸಂಘಟನೆ ಎಂದು ಬೊಬ್ಬರಿಯುವ ತಮಗೆ ಮೀಸಲಾತಿಯ ಫಲಾನುಭವಿಗಳಾದ, ಕುರುಬರು, ಕುಂಬಾರರು, ಒಕ್ಕಲಿಗರು, ಬಣಜಿಗರು, ಲಿಂಗಾಯತರು, ನಾಯಕರು, ಹೊಲೆಯರು, ಮಾದಿಗರು, ಉಪ್ಪಾರರು, ಶೆಟ್ಟರು, ನಾಮದಾರಿಗಳು ಇತ್ಯಾದಿ... ತಳ ಸಮುದಾಯಗಳು ಹಿಂದುಗಳಲ್ಲವೇ......?
5) ಪ್ರವರ್ಗ-| ಕ್ಕೆ 4% ಮೀಸಲಾತಿ ಇದೆ (95ಜಾತಿಗಳಿವೆ).
ಪ್ರವರ್ಗ -||A 15%ಮಿಸಲಾತಿ ಇದೆ(102 ಜಾತಿಗಳಿವೆ).
ಪ್ರವರ್ಗ-||B 4%ಮೀಸಲಾತಿ ಇದೆ(ಮುಸ್ಲಿಂ ಗಳು).
ಪ್ರವರ್ಗ -|||A ಕ್ಕೆ 4% ಮೀಸಲಾತಿ ಇದೆ (ಒಕ್ಕಲಿಗ ಮತ್ತು ಬಲಿಜರು).
ಪ್ರವರ್ಗ-|||B ಕ್ಕೆ 5%ಮೀಸಲಾತಿ ಇದೆ (ಲಿಂಗಾಯತರು ಇತರೆ 5ಜಾತಿಗಳಿವೆ).
ಪ.ಜಾತಿ ಗೆ 15% ಮೀಸಲಾತಿ ಇದೆ (101 ಜಾತಿಗಳಿವೆ).
ಪ.ಪಂಗಡಕ್ಕೆ 3% ಮೀಸಲಾತಿಯು ಇದೆ (50ಜಾತಿಗಳಿವೆ).
ಇವರ ಜನಸಂಖ್ಯೆಯು ಶೇಕಡ 85% ಇದೆ ಈ ಹಂಚಿಕೆಯ ಬಗ್ಗೆ ನಿಮಗೆ ತಳ ಬುಡ ಇದೀಯಾ....?
6) ಇವರೆಲ್ಲ ಹಿಂದುಗಳಲ್ಲವೇ.......?
7) ನಿಗದಿಯಾದ ಒಟ್ಟು ಮೀಸಲಾತಿಯ ಪ್ರಮಾಣ 50%.
ಅದರಲ್ಲಿ 90% ಜನರು ನಿಮ್ ಲೆಕ್ಕಕ್ಕೆ ಹಿಂದುಗಳು ತಾನೇ ....?
ಹಾಗಿದ್ದರೆ ನಿಮ್ಮ ಹೋರಾಟವೇಕೆ ಈ ಮುಗ್ದ ಸಮುದಾಯಗಳ ವಿರುದ್ಧವಾಗಿದೆ.......?
8) ಈ ಸತ್ಯವನ್ನು ಆದಷ್ಟು ಬೇಗ ನಮ್ಮ ಸಹೋದರರಾದ ಸವರ್ಣೀಯ ಜನಾಂಗಗಳು ಮತ್ತು ಅಸ್ಪೃಶ್ಯರು ಅರಿತುಕೊಳ್ಳಬೆಕಾದ ಅನಿವಾರ್ಯತೆ ಇಂದು ಎದುರಾಗಿದೆ.
9) RSS.....ಒಂದು ಅಖಿಲ ಭಾರತದ ಹಿಂದುಗಳ ಪರವಾದ ಸಂಘಟನೆಯಾಗಿದ್ದರೆ, ಅದು ಈ ಮೇಲಿನ ಎಲ್ಲಾ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಪೂರಕವಾದ ಮೀಸಲಾತಿಯ ಪರ ತನ್ನ ನಿಲುವನ್ನು ವ್ಯಕ್ತಪಡಿಸಬೇಕಿತ್ತು ಅಲ್ಲವೇ......?
10) ಪರವಾದ ನಿಲುವು ಒತ್ತೊಟ್ಟಿಗಿರಲಿ, ಅದನ್ನ ವಿರೋಧಿಸುವ ಮಟ್ಟಕ್ಕೆ ಇಳಿದಿದ್ದೀರಾ....ಎಂದರೆ ನಿಮ್ಮ ಹೋರಾಟ ಯಾರ ಪರವಾಗಿದೆ ...?
11) ಹಿಂದುಗಳು ಹಿಂದುಗಳು ಎಂದು ಮುಗ್ಧ ಸಮುದಾಯಕ್ಕೆ ಮತೀಯ ವ್ಯಾಮೋಹವನ್ನು ತುಂಬಿ, ಆ ಜನರ ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳ ಮುಂದಿನ ಭವಿಷ್ಯದ ಗತಿ ಏನು ಎಂಬುದರ ಅರಿವಿದೀಯಾ ನಿಮಗೆ.....?
12) ಕುಂಬಾರನ ಮಗ ಕೇವಲ ಮಡಿಕೆ ಕೆಲಸ ಮಾಡಿ ಹೇಗೋ ತನ್ನ ಪಾಡಿಗೆ ತಾನು ಕಾಯಕ ಮಾಡಬೇಕೆ......? ಆ ಕುಂಬಾರನ ಮಗ IAS, KAS, ರಾಷ್ಟ್ರಮಟ್ಟದ ಉನ್ನತ ಸಂಸ್ಥೆಗಳಾದ DRDO, AIIMS, AJMS ಗಳಲ್ಲಿ ಅವಕಾಶ ಪಡೆದು ಉನ್ನತ ಸ್ಥಾನಕ್ಕೆ ಏರಬಾರದೇ....?
13) ಇವರ ಮನೆಯ ದೇವರುಗಳ ಫೋಟೋ ಮೇಲೆ ಹೂ ಇಡುತ್ತಾರೋ ಇಲ್ಲವೋ. ಅದರೆ, ಇವರ ಮನೆಯ ಹೆಂಡತಿ ಮಕ್ಕಳ ಮೊಮ್ಮಕ್ಕಳ ಮಲಹೊರುವ ಪೌರಕಾರ್ಮಿಕರಂತು ಸರಿಯಾದ ಸಮಯಕ್ಕೆ ಹಾಜರಿರಬೇಕು. ಇಂತಹ ಜನರ ಮಕ್ಕಳು ವೈದ್ಯಕೀಯ ಇಲಾಖೆಯಲ್ಲಿ ದೊಡ್ಡ ಡಾಕ್ಟರ್ ಆಗಬಾರದೆ...?
14) ಕಾಡಿನಲ್ಲಿ ಗೆಡ್ಡೆ ಗೆಣಸು ತಿಂದು ಮಾನವೀಯ ಅನುಕಂಪವೂ ಇಲ್ಲದೆ ಬದುಕುತ್ತಿರುವ ಜೇನು ಕುರುಬ, ಕಾಡು ಕುರುಬರನ್ನು ಕೇವಲ ನಿಮಗೆ ಸಿಹಿಯಾದ ಜೇನುತುಪ್ಪಕ್ಕಾಗಿ ದುಡಿಸಿಕೊಳ್ಳುತ್ತೀರಿ... ಆದರೆ ಅವರ ಬದುಕಿಗೊಂದು ಊರುಗೋಲು ಈ ಮೀಸಲಾತಿ. ಇದರ ತಿಳಿವಳಿಕೆ ನಿಮಗಿದಿಯಾ...?
15) ನಿಮ್ಮ ಸಂಘಟನೆ ಖಂಡಿತವಾಗಿಯು ಈ ನೆಲದ ಮೂಲನಿವಾಸಿಗಳ ಪರವಾಗಿಲ್ಲ....ಬದಲಿಗೆ ಅವರ ವಿರುದ್ಧವಾಗಿದ್ದೀರಿ...
ನನಗೆ ಒಂದು ಗುಮಾನಿ ಇದೆ. ನಿಮ್ಮಗಳ ಮೇಲೆ ನಮ್ಮ ತಾತಾ ಬಾಬಾ ಸಾಹೇಬರು ಒಂದು ಘಟನೆಯನ್ನು ತಿಳಿ ಹೇಳಿದ್ದರು ಅದು ಏನು ಗೊತ್ತೇ....?
ಇವತ್ತೇನು ತಾವು ಹಿಂದುಗಳು ಎನ್ನುತ್ತಿರುವಿರೋ ತಾವುಗಳು ಈ ನೆಲದ ಮೂಲನಿವಾಸಿಗಳಲ್ಲ..... ಮಧ್ಯ ಏಷಿಯಾದಿಂದ ದನ ಮೇಯಿಸಿಕೊಂಡು ಖೈಬರ್ ಕಣಿವೆಗಳ ಮೂಲಕ ಭಾರತಕ್ಕೆ ಕ್ರಿ.ಪೂ 1800ರಲ್ಲಿ ಕಾಲಿಟ್ಟ ಅನಾಗರಿಕ ಆರ್ಯರು...... ನೀವಲ್ಲವೇ....? ನಿಮಗೆ ನಿಲ್ಲಲು ನೆಲೆ ಇಲ್ಲದಿದ್ದಾಗ ಅಲೆಮಾರಿಗಳಾಗಿ
ನೆಲೆ ನಿಂತಾಗ, ಪುರೋಹಿತರಾಗಿ, ಇಲ್ಲಿನ ಮುಗ್ಧ ಸಮುದಾಯಕ್ಕೆ ದೇವರು, ದೆವ್ವವನ್ನು ಪರಿಚಯಿಸಿ ಬ್ರಾಹ್ಮಣರಾದವರು ಇದೇ ಬಿಳಿತೊನ್ನಿನ ಆರ್ಯರಲ್ಲವೇ ನೀವು .....? ನಿಮಗೇ ಸಹಜವಾಗಿಯೇ ಇಲ್ಲಿನ ಮೂಲನಿವಾಸಿಗಳನ್ನು ಉದ್ದಾರ ಮಾಡುವ ಅಜೇಂಡಾ ಯಾಕ್ ಬರುತ್ತದೆ ಹೇಳಿ .?
ಖಂಡಿತವಾಗಿಯೂ ಈ ಮೀಸಲಾತಿಯ ಹಿಂದಿರುವ ನಿಮ್ಮ ಹುನ್ನಾರ ಇಷ್ಟೇ ವಿದೇಶಿಗರಾದ ತಮಗೆ ಇಲ್ಲಿನ ಮೂಲನಿವಾಸಿ ಬಹುಸಂಖ್ಯಾತ, ಸಮುದಾಯಗಳನ್ನು ದಿಕ್ಕುತಪ್ಪಿಸಿ, ಜಾತಿ ಆಧಾರಿತ ಕುಲಕಸುಬನ್ನೇ ಖಾಯಂಗೊಳಿಸಿ ಈ ದೇಶವನ್ನು ತಮ್ಮ ತೆಕ್ಕೆಯಲ್ಲೇ ಇಟ್ಟುಕೊಳ್ಳುವ ಹುನ್ನಾರವಲ್ಲದೇ ಮತ್ತೇನು ಇಲ್ಲಾ....
ನಿಮಗೆ ಏನಾದರೂ ಈ ಹಿಂದು ಸಮುದಾಯಗಳನ್ನು ಉದ್ದಾರ ಮಾಡಬೇಕೆನಿಸಿದರೇ ನಿಮ್ಮದೇ ಸರ್ಕಾರ ಕೇಂದ್ರದಲ್ಲಿ ಇದೇ.... ಈ ದೇಶದ ಶೆಕಡಾ 71%ಭೂ ಸಂಪತ್ತು ಕೇವಲ 24% ಇರೋ ರೈತರಲ್ಲದ ಭೂಮಾಲಿಕರ ಹತ್ತಿರ ಇದೆ. ಇದನ್ನು ಮತ್ತು ಬಂಡವಾಳವನ್ನು "ರಾಷ್ಟ್ರೀಕರಣ" ಮಾಡಿ ಎಲ್ಲರಿಗೂ ಸಮನಾಗಿ ಹಂಚಿ, ತಮ್ಮ ಸೋದರ ಸಂಬಂಧಿಗಳಾದ ಕಾಂಗ್ರೆಸ್ ನವರು 1992ರಲ್ಲಿ ಜಾರಿಗೆ ತಂದ ಖಾಸಗೀಕರಣದಿಂದಾಗಿ ಸರ್ಕಾರ ಹುದ್ದೆಗಳ ಸಂಖ್ಯೆಯು ಕಡಿಮೆಯಾಗಿದೆ. ಹೀಗಾಗಿ ತಮಗೆ ಹಿಂದುಗಳ ಮೇಲೆ ಅತೀವವಾದ ಕಾಳಜಿ ಇದೆ ಎನ್ನುವುದಾದರೆ, ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ಜಾರಿಗೆ ತನ್ನಿ......... ನಿಜವಾಗಿಯೂ
ಇದು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಗೆ ಸಂವಾದಿಯಾದೀತು.....
------ಹನುಮಂತ ಇಟಗಿ