: ಕೂರ್ನಡ್ಕ ಖತೀಬ್
📝
ಸುನ್ನೀಟುಡೇ
ಅಲ್ಲಾಹನು ಪರಿಶುದ್ದನಾಗಿದ್ದಾನೆ ಹಾಗಾಗಿ ಅವನ ಭಾಗದಲ್ಲಿ ಮಾಡುವ ಕರ್ಮಗಳೆಲ್ಲವೂ ಪರಿಶುದ್ದವಾಗಿರಲಿ ಎಂದು ಕೂರ್ನಡ್ಕ ಖತೀಬರಾದ ಅಬುಬಕ್ಕರ್ ಸಿದ್ದೀಕ್ ಜಲಾಲಿ ಹೇಳಿದರು. ಅವರಿಂದು ಜುಮ್ಮಾ ಭಾಷಣದಲ್ಲಿ ಮಾತನಾಡುತ್ತಾ ಅಶುದ್ದರಿಂದ ಶುದ್ದರನ್ನು ಆಯ್ಕೆ ಮಾಡಲು ಅಲ್ಲಾಹನು ಭೂಮಿಯಲ್ಲಿ ನಮ್ಮನ್ನು ಬೆಳೆಸುತ್ತಿದ್ದಾನೆ.ಈ ಭೂಮಿಯ ಬದುಕಿನ ಉದ್ದೇಶ ಪರಲೋಕವಾಗಿದೆ ಹಾಗಾಗಿ ಪ್ರತೀಕ್ಷಣವು ನಾವು ಅದಕ್ಕಾಗಿ ತಯಾರಿ ನಡೆಸಬೇಕು. ಪರಲೋಕದಲ್ಲಿ ಸೋತರೆ ಎರಡನೇ ಅವಕಾಶವಿಲ್ಲ ಎಂದರು.
ಕಲಿಕೆ-ಉದ್ಯೋಗ-ವಿವಾಹ-ಕುಟುಂಬ ಜೀವನ ಹಾಗೇ ಬದುಕಿನ ಸೌಲಭ್ಯಗಳ ಸಂಗ್ರಹ ಎಲ್ಲವೂ ನಮ್ಮ ಬದುಕಿನ ಭಾಗವಾಗಿದೆ.ಭೂಮಿಯಲ್ಲಿ ಸಾದಿಸಿದ್ದು ಮತ್ತು ಸಂಪಾದಿಸಿದ್ದು ಮಣ್ಣಾಗಲಿದೆ. ಕಟ್ಟಡಗಳು-ಮನೆಗಳು-ವಾಹನಗಳು-ಉದ್ಯಾನವನಗಳು -ಚಿನ್ನ-ಹಣ-ಜಮೀನು-ದೇಹ ಸೌಂದರ್ಯ ಎಲ್ಲವೂ ಮಣ್ಣು ಸೇರಲಿದೆ. ಅನಂತರ ಅಲ್ಲಾಹನು ಎರಡನೇ ಬಾರೀ ಜೀವ ನೀಡಿದಾಗ ನಾವು ಏಳುವುದು ನಮ್ಮ ಸತ್ಕರ್ಮಗಳ ಜೊತೆಯಾಗಿದೆ.ಅಂದು ನಮ್ಮ ಕುಟುಂಬ-ಹೆತ್ತವರು- ಮಕ್ಕಳು-ಸಹೋದರರು ಯಾರೂ ನಮಗೆ ಸಹಾಯಕ್ಕೆ ಬರಲಾರರು. ಅಲ್ಲಾಹನು ಅನುಮತಿಸದೆ ಯಾರೂ ನಮಗೆ ಶಿಫಾರಸು ಮಾಡಲಾರರು ಎಂದ ಖತೀಬರು ಆ ದಿನ ಭಯಾನಕವಾಗಿದೆ...ಆ ದಿನ ಭಯಾನಕವಾಗಿದೆ. ಆ ಪ್ರತಿಫಲ ದಿನದ ಬಗ್ಗೆ ಸದಾ ಚಿಂತಿಸೋಣ ಅದಕ್ಕಾಗಿ ಪರಿಶ್ರಮಿಸೋಣ ಎಂದರು
ಭೂಮಿಯ ವ್ಯಾಪಾರ ಮತ್ತು ಲಾಭ ನಷ್ಟದ ಬಗ್ಗೆ ಲೆಕ್ಕ ಹಾಕುತ್ತೇವೆ ಮತ್ತು ಹೆಚ್ಚು ಸಂಪಾದಿಸುವ ಎಲ್ಲಾ ಅವಕಾಶವನ್ನೂ ಬಳಸುತ್ತೇವೆ ಅದೇ ರೀತಿ ಪರಲೋಕದ ಲಾಭಕ್ಕೂ ಸಂಪಾದಿಸಿರಿ ಎಂದ ಖತೀಬರು ಹೊಟ್ಟೆ ಪಾಡಿಗಾಗಿ ಮತ್ತು ಭವಿಷ್ಯದ ಬಗ್ಗೆ ಆಲೋಚಿಸುತ್ತೀರಿ ಹಾಗೇ ಆತ್ಮೀಯವಾಗಿ ಪರಲೋಕದ ಬಗ್ಗೆ ಆಲೋಚಿಸಿದ್ದೀರಾ ಹಾಗೇ ಭಯ-ಭಕ್ತಿಯಿಂದ ಕಣ್ಣೀರಿಟ್ಟಿದ್ದೀರಾ ಎಂದು ಪ್ರಶ್ನಿಸಿದರು.
ನಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುತ್ತೇವೆ ಅವರ ಶಿಕ್ಷಣ-ಉಧ್ಯೋಗ ಮತ್ತು ವಿವಾಹದ ಬಗ್ಗೆ ಯೋಜನೆ ಹಾಕುತ್ತೇವೆ ಆದರೆ ಅವರ ಮತ್ತು ನಮ್ಮ ಪರಲೋಕದ ವಿಜಯಕ್ಕಿರುವ ಯೋಜನೆಗಳಿಲ್ಲದೆ ನಾವು ಅಲ್ಲಾಹನಿಗೆ ಕೃತಘ್ನರಾಗಿದ್ದೇವೆ ಎಂದ ಅವರು ಪರಲೋಕದಲ್ಲಿ ಏಕಾಂತವಾಗಿ ನಿಲ್ಲಬೇಕು ಮತ್ತು ತಪ್ಪಿಸಿ ಹೋಗುವ ಯಾವುದೇ ಅವಕಾಶವಿಲ್ಲದೆ ತನ್ನ ಪಾಲಿನ ವಿಧಿಯನ್ನು ಅನುಭವಿಸಬೇಕು. ಖಂಡಿತವಾಗಿಯೂ ನರಕ ಭಯಾನಕವಾಗಿದೆ ಎಂದರು.
ಅವನ ಈಮಾನ್ ಸರಿ ಇಲ್ಲ. ಇವನ ಇಕ್ಲಾಸ್ ಸರಿ ಇಲ್ಲ. ಅವನು ನಿಯ್ಯತ್ ಇಲ್ಲದವನು. ಈ ರೀತಿಯಾಗಿ ಇನ್ನೊಬ್ಬರನ್ನು ತೂಗುವ ಮತ್ತು ತೀರ್ಮಾಣಿಸುವ ಜನರ ಸಂಖ್ಯೆ ಹೆಚ್ಚಾಗಿದೆ. ಯಾರೂ ಯಾರ ಹೃದಯವನ್ನು ಬಗೆದು ನೋಡಲಿಲ್ಲ ಮತ್ತು ನೋಡಲಿಕ್ಕೆ ಆಗುವುದೂ ಇಲ್ಲ. ಇನ್ನೊಬ್ಬರ ಕರ್ಮಗಳನ್ನು ಅಳೆಯುವ ಕರ್ತವ್ಯ ನಮಗೆ ನೀಡಿದವರು ಯಾರು ಎಂದು ಪ್ರಶ್ನಿಸಿದ ಖತೀಬರು ಕರ್ಮಗಳನ್ನು ಬರೆದಿಡಲು ಎರಡು ಮಲಕುಗಳು ನಮ್ಮ ಬಲ ಮತ್ತು ಎಡದಲ್ಲಿದ್ದಾರೆ. ಅವರು ಆ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಾರೆ ನಾವು ಸ್ವಥಹ ಪ್ರಾಮಾಣಿಕರಾಗಿ ಬದುಕೋಣ ಹಾಗೂ ಪರಲೋಕದಲ್ಲಿ ತೆರೆಯಲ್ಪಡುವ ನಮ್ಮ ಕರ್ಮಗ್ರಂಥದ ಬಗ್ಗೆ ಚಿಂತಿಸೋಣ.ಇನ್ನೊಬ್ಬರ ಈಮಾನ್ ಮತ್ತು ನಿಯ್ಯತನ್ನು ಪ್ರಶ್ನಿಸುವವನು ನರಕದವನಾಗಿದ್ದಾನೆ ಎಂದು ಖತೀಬರು ಹೇಳಿದರು.
ಭೂಮಿಯಲ್ಲಿ ನಮ್ಮ ತಪ್ಪುಗಳಿಗೆ ಕಾರಣಗಳಿದೆ. ಸಮಸ್ಯೆಗಳಿಗೆ ಪರಿಹಾರವಿದೆ, ಬದಲಾಗಲು ಅವಕಾಶವಿದೆ, ಎದುರಿಸಲು ಶಕ್ತಿ ಮತ್ತು ಜನಬೆಂಬಲವಿದೆ. ಆದರೆ ಪರಲೋಕದಲ್ಲಿ ಬದಲಾಗುವ ಅವಕಾಶವಿಲ್ಲ. ಕಾರಣಗಳು ಉಪಯೋಗಕ್ಕೆ ಬಾರದು. ಉಪಾಯಗಳು ಪಲಿಸದು ಯಾವುದೇ ಪ್ರಾಯಶ್ಚಿತವೂ ಸ್ವೀಕರಿಸಲಾಗದು. ಏಕಾಂಗಿಯಾಗಿ, ಮಾಡಿದ ಕರ್ಮವನ್ನು ಅನುಭವಿಸಲೇ ಬೇಕು. ಅಲ್ಲಾಹನ ವಾಗ್ದಾನಗಳು ಅಲ್ಲಿ ಪೂರ್ತಿಗಿಳ್ಳಲಿದೆ. ನಮ್ಮ ಪ್ರಭು ನಮ್ಮ ಮೇಲೆ ಮಾಡಿದ ವಾಗ್ದಾನಗಳು ಯಾವುದು ಎಂದು ತಿಳಿದವರಲ್ಲಿ ಕೇಳಿ ಕಲಿಯಿರಿ ಎಂದು ಖತೀಬರು ಹೇಳಿದರು.
📝
ಸುನ್ನೀಟುಡೇ