ಮಂಗಳವಾರ, ಆಗಸ್ಟ್ 9, 2016

ಪ್ರವಾಸಿ

ಮಾಪುಲೆ ಸೌದಿಲ್👁👁.

ಊರಲ್ಲಿರುವ ಬಹುತೇಕ ಸಹೋದರಿಯರಿಂದ ಕೇಳಲ್ಪಡುವ ಮಾತು 'ಮಾಪುಲೆ ಸೌದಿಲ್'.

ಬಾಲ್ಯದಲ್ಲಿ ಅಣ್ಣಂದಿರು ಉದ್ಯೋಗವನ್ನರಸಿ, ‘ಹಿತ್ತಲ ಗಿಡ ಮದ್ದಲ್ಲ’ ‘ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’ ಮಾತಿಗಣುಸಾರವಾಗಿ ಕಡಲಾಚೆಗೆ ಪ್ರಯಾಣ ಮಾಡುವಾಗ ಮನದೊಳಗೆ ಏನೇನೋ ಯೋಚಿಸುತ್ತಿದ್ದೆ. ಪರಿಚಯವಿದ್ದ ಒಂದೆ ಊರು ಸೌದಿ. ನೂರಾರು ಕನಸುಗಳನ್ನು ಹೊತ್ತು ನೆಮ್ಮದಿಯ ಜೀವನವನ್ನರಸಿ ಮನೆ ಕುಟುಂಬ ಊರು ಬಂದು ಬಳಗವನ್ನೆಲ್ಲ ಬಿಟ್ಟು ಗಲ್ಫ್ ರಾಷ್ಟ್ರ ಗಳಿಗೆ ಬಂದ ನಮ್ಮ ಸಹೋದರರನ್ನು ಇಲ್ಲಿ ಸ್ವಾಗತಿಸಿದ್ದು ನಾವಂದುಕೊಂಡಿದ್ದ ಸೌದಿ ಅಲ್ಲ...

ಉನ್ನತ ಶಿಕ್ಷಣ, ನಾಡ ಭಾಷೆ, ಅರಬರ ಸಂಸ್ಕೃತಿ, ಮರಳುಗಾಡಿನ ಆಹಾರ, ಜೀವನಶೈಲಿ ಇದ್ಯಾವುದರ ಪರಿಚಯವಿಲ್ಲದೇ ಬಂದು ಇಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲಾಗದೆ ಆದಷ್ಟು ಬೇಗ ತಾಯ್ನಾಡಿಗೆ ಮರಳಬೇಕೆಂದು ಯೋಚಿಸದ ಪ್ರವಾಸಿ ಇರಲಿಕ್ಕಿಲ್ಲ. ತಾನು ಬಂದಿರುವ ಉದ್ದೇಶವನ್ನು ನೆನೆದು ಎಲ್ಲಾ ಸಂಕಷ್ಟಗಳನ್ನು ಸಹಿಸಿ ದಿನದೂಡಿದವರ ವೇದನೆಯನ್ನು ಅರಿಯವಲ್ಲಿ ಊರಲ್ಲಿದ್ದ ಒಡಹುಟ್ಟಿದವರು ಎಡವಿದ್ದರು ಅಂದರೆ ತಪ್ಪಾಗಲಾರದು.

ಇವತ್ತು ಕಾಲ ಬದಲಾಗಿದೆ, ಶೈಕ್ಷಣಿಕ ಸಾಮಾಜಿಕ ಆರ್ಥಿಕವಾಗಿ ಬಹಳಷ್ಟು ಮುಂದುವರಿದು ಸೌದಿ ಜೀವನ ಸುಧಾರಿಸಿದೆಯಾದರೂ ಕೆಲವೊಂದು ವಿಷಯಗಳಲ್ಲಿ ಸೌದಿ ಸೌದಿಯಾಗಿಯೇ ಉಳಿದಿದೆ ಅವೆಲ್ಲವನ್ನು ವಿವರಿಸಲಾಗದು..

ಪ್ರೀತಿಯ ಸಹೋದರಿಯರಲ್ಲಿ ಹೇಳಬಯಸುವುದು… ಮಾಪುಲೆ ಸೌದಿಲ್ ಎನ್ನುವ ನಿನ್ನ ಮಾತಿನಲ್ಲಿ ಅಹಂಕಾರವಿರಬಹುದು ಅಥವಾ ಅಭಿಮಾನವಿರಬಹುದು. ಅಹಂಕಾರವಾಗಿದ್ದರೆ ನಿನಗಿನ್ನೂ ಪಕ್ವತೆ ಬಂದಿಲ್ಲ, ಅಭಿಮಾನವಾಗಿದ್ದಲೆ ನಿನ್ನ ಗಂಡನಿಗಿಂತ ಅದೃಷ್ಟವಂತ ಬೇರೊಬ್ಬನಿಲ್ಲ. ನೀನು ಅರಿಯದ ನಿನ್ನ ಯೋಚನೆಗೆ ನಿಲುಕದ ನಿನ್ನಿಂದ ಅರ್ಥೈಸಿಕೊಳ್ಳಲಾಗದ ಅದೆಷ್ಟೋ ಸಹನೆ ನೋವು ವೇದನೆಗಳಿವೆ ಈ ಸೌದಿಯಲ್ಲಿ. ನಿನ್ನನ್ನು ಬಿಟ್ಟು ಹೆತ್ತವರನ್ನು ಬಿಟ್ಟು ಕಡಲಾಚೆಗಿರುವ ಗಂಡನ ಮನಸ್ಥಿತಿ ಯನ್ನು ಅರ್ಥೈಸಬೇಕು.

ನಿದ್ದೆಯಿಲ್ಲ, ಊಟವಿಲ್ಲ, ವ್ಯವಸ್ಥಿತವಾದ ವಸತಿಯಿಲ್ಲ, ಪರಿಚಾರಕರಿಲ್ಲ.. ಒಬ್ಬಂಟಿಯಾಗಿ ಜೀವವಿದ್ದೂ ಬದುಕಿಲ್ಲದೇ ಜೀವಿಸುವ ನಿನ್ನ ಗಂಡ ಎಲ್ಲವನ್ನೂ ಸಹಿಸುತ್ತಿರುದು ನಿನಗಾಗಿ ನಾಳಿನ ದಿನಗಳಿಗಾಗಿ. ಒಂದಿಲ್ಲೊಂದು ಸಮಸ್ಯೆಗೆ ಸಿಲುಕಿ ತಾನು ಜೀವನಪೂರ್ತಿ ಪ್ರವಾಸಿಯಾಗಿಯೆ ಉಳಿಯುವೆನೆಂದು ಅರಿವಿದ್ದರೂ ಅಸಹಾಯಕನಾಗುತ್ತಾನೆ.

ತನ್ನ ಸುಖ ದುಃಖಗಳನ್ನು, ಸಂತೋಷ ಸಂಕಷ್ಟಗಳನ್ನು ಹಂಚಿಕೊಳ್ಳುವಾಗ ನೀನು ಮುಖ ಊದಿಸಿ ಸೂರ್ಪಣಕಿಯಾಗಬೇಡ. ನಿನ್ನ ಅಸಮಾದಾನಕ್ಕೆ ನೀನಂದುಕೊಳ್ಲುವ ಎಷ್ಟೋ ಕಾರಣಗಳಿದ್ದರೂ ನಿನ್ನ ಗಂಡನ ಒಂದೆರಡು ದಿನಗಳ ತ್ಯಾಗಮಯಿ ಜೀವನದ ಮುಂದೆ ಸಮರ್ತಿಸಲಾಗದು.

ಸಾಧ್ಯವಾದರೆ ಒಂದೆರಡು ಸಾಂತ್ವನದ ಮಾತುಗಳನ್ನಾಡು ಇಲ್ಲವಾದರೆ ಸುಮ್ಮನಿರು. ನಿನ್ನಿಂದ ಗಂಡನಾದವನು ನಿರೀಕ್ಷಿಸುವುದು ಮಾನಸಿಕವಾದ ಬೆಂಬಲವೇ ಹೊರತು ಆರ್ಥಿಕ ಬೆಂಬಲವಲ್ಲ. ಇನ್ನು ಗಂಡನಿಂದ ಸಿಗುವ ಎಲ್ಲಾ ಆರ್ಥಿಕ ಸವಲತ್ತುಗಳನ್ನು ಪಡೆದು ಊರಲ್ಲಿರುವ ಅನ್ಯ ಪುರುಷರೊಂದಿಗೆ ಅನೈಥಿಕ ಸಂಬಂಧವಿರಿಸುವ ಓ ಸಹೋದರೀ… ನಿನ್ನ ಕುರಿತು ನನಗೇನೂ ಬರೆಯಲಿಕ್ಕಿಲ್ಲ.

ಅಭಿಮಾನದಿಂದ ಪ್ರೀತಿಯಿಂದ ಗೌರವದಿಂದ ಹೇಳು ಮಾಪುಲ್ ಸೌದಿಲ್ ಅಂಥ, ಅಹಂಕಾರದಿಂದ ಅಲ್ಲ. ನೀನು ಅಹಂಕಾರದಿಂದ ಕಿಬರಿನಿಂದ ನಡೆದಾಡಲು ಅಲ್ಲ ನಿನ್ನ ಗಂಡ ಗುಲಾಮನಂತೆ ಪ್ರವಾಸಿಯಾಗಿ ಬದುಕುತ್ತಿರುವುದು.

ಗೆಳೆಯನೊಬ್ಬ ಹೇಳಿದ ಮಾತು: ನಿಕ್ಕ್ ರಾಯತ್ಲ್ ಆರಗಾಯೆಂಗ್ ಅಡ್ಚಿಟ್ ಪೊಡಿಯಾಕೊನುಂಟು ಪಗೆ ಇನ್ನಂಗ್ ಒರು ವಿಸ ಎಡ್ತ್ ಸೌದಿಗ್ ಕಡ್ತ್ ಮಯ್ಯ್..

ಹಳೆಯ ಹಾಡು ನೆನಪಾಯಿತು:

ಮೈ ಝಿಂದಾ ಹೂಂ ಲೇಕಿನ್ ಕಹಾ ಝಿಂದಗೀ ಹೇ.
ಮೆರೀ ಝಿಂದಗೀ ತೊ ಯಹಾ ಖೋಗಯೀ ಹೇ. 

Pravasi

ಸೋಮವಾರ, ಆಗಸ್ಟ್ 8, 2016

_ಚಾಯ್ ವಾಲಾ ಮಹಮ್ಮದ್ ಕೋಯಾ ಕೋಟ್ಯಾಧಿಪತಿಯಾದ ಕಥೆ._

*"ವಿಕೆಸಿ" ಚಪ್ಪಲಿಯ ಹಿಂದಿನ ರಹಸ್ಯ ನಿಮಗೊತ್ತೇ?*
*******************************

ಮಹಮ್ಮದ್ ಕೋಯಾ. ಕೇರಳದ ಕಲ್ಲಿಕೋಟೆ ನಿವಾಸಿ. ಏಳನೇ ತರಗತಿ ವಿಧ್ಯಾಭ್ಯಾಸ. ಒಂದು ಕಾಲದಲ್ಲಿ ಬೆಂಕಿಪೊಟ್ಟಣ ಕಂಪೆನಿಯಲ್ಲಿ ಕಾರ್ಮಿಕರಾಗಿ ಕಮ್ಯುನಿಸ್ಟ್ ಪಕ್ಷದ ಸಿದ್ದಾಂತದೊಂದಿಗೆ ಕಾರ್ಮಿಕ ಹಕ್ಕುಗಳಿಗಾಗಿ ಹೋರಾಡಿದ ಹಿರಿಯ ಜೀವಿ. ನಂತರ ತಮಿಳ್ನಾಡಿನ ಕನ್ಯಾಕುಮಾರಿಗೆ ತೆರಳಿ ಎಲೆಕ್ಟ್ರಿಸಿಟಿ ಬೋರ್ಡ್ ಕಾರ್ಮಿಕರಾದರು. ಅಲ್ಲಿ ಟೀಶಾಪ್ ನಡೆಸುತ್ತಾ ಚಾಯ್ ವಾಲಾ ಆದರು.

1967 ರಲ್ಲಿ ಪುನಃ ಕೇರಳಕ್ಕೆ ಹಿಂತಿರುಗಿದ ಮಹಮ್ಮದ್ ಕೋಯಾ ಸ್ವಂತದ್ದಾದ ಉದ್ಯಮಕ್ಕೆ ಸ್ಕೆಚ್ ಹಾಕಿದರು. ತನ್ನಿಬ್ಬರು ಸ್ನೇಹಿತರನ್ನು ಪಾಲುದಾರಿಕೆಯಲ್ಲಿ ಸೇರಿಸಿಕೊಂಡು ಬೆಂಕಿಪೊಟ್ಟಣದ ಮೆಟೀರಿಯಲ್ಸ್ ಸಪ್ಲೈ ವ್ಯವಹಾರಕ್ಕೆ ಕೈ ಹಾಕಿದರು. ವಿ. ಮಹಮ್ಮದ್ ಕೋಯಾ, ಕೆ. ಸೈತಲವಿ ಹಾಗೂ ಸಿ. ಸೈದಲಿಕುಟ್ಟಿ ಸೇರಿಕೊಂಡು ಅವರ ಹೆಸರಿನ ಮುಂದಿರುವ ಇನಿಷ್ಯಲ್ ನ "ವಿಕೆಸಿ" ನಾಮಕರಣದೊಂದಿಗೆ ಉದ್ಯಮ ಪ್ರಾರಂಭಿಸಿದರು. ಆ ಉದ್ಯಮವೇ ಇಂದು ಅಂತರಾಷ್ಟ್ರ ಖ್ಯಾತಿಯ ವಿಕೆಸಿ ಬ್ರಾಂಡ್ ಆಗಿ ವಾರ್ಷಿಕ 1,500 ಕೋಟಿ ರೂ. ವಹಿವಾಟು ಮಾಡುತ್ತಿದೆ. ಇದರ ಹಿಂದಿನ ಪ್ರೇರಕ ಶಕ್ತಿಯೇ ಕಮ್ಯುನಿಸ್ಟ್ ಪಕ್ಷದ (ಸಿಪಿಐಎಂ) ನಾಯಕ ಕಂ ಕಲ್ಲಿಕೋಟೆ ಮುನ್ಸಿಪಾಲಿಟಿಯ ನೂತನ ಮೇಯರ್ ಮಹಮ್ಮದ್ ಕೋಯಾ!

1980 ರ ದಶಕದಲ್ಲಿ ತಾವು ಸ್ಥಾಪಿಸಿದ ಬೆಂಕಿಪೊಟ್ಟಣ ಮೆಟೀರಿಯಲ್ ಉದ್ಯಮ ಕ್ಷೀಣಿಸಿದಾಗ ಧೃತಿಗೆಡದ ಕೋಯಾ ತನ್ನ ವ್ಯವಹಾರದ ಸ್ಥಳದಲ್ಲಿ ಹವಾಯಿ ಶೀಟ್ಸ್ ತಯಾರಿಸಲು ತೀರ್ಮಾನಿಸಿದರು. ನಂತರದ ದಿನಗಳಲ್ಲಿ ಕಲ್ಲಿಕೋಟೆಯ ನಲ್ಲಂ ಎಂಬ ಬೆಂಕಿಪೊಟ್ಟಣ ಮೆಟೀರಿಯಲ್ಸ್ ತಯಾರಿಸುತ್ತಿದ್ದ ಅದೇ ಸ್ಥಳದಲ್ಲಿ ಇಬ್ಬರು ಸ್ನೇಹಿತರ ಜೊತೆಗೂಡಿ ವಿಕೆಸಿ ಫೂಟ್ ವೇರ್ ಕಂಪೆನಿಗೆ ಅಡಿಪಾಯ ಹಾಕುತ್ತಾರೆ. ಪ್ರಾರಂಭದಲ್ಲಿ ಬ್ಯಾಂಕ್ ಲೋನ್ ಮತ್ತು ಚಿಟ್ ಫಂಡ್ ಹಣ ಪಡೆದು 30 ಲಕ್ಷದ ಬಂಡವಾಳದೊಂದಿಗೆ 20 ಸಿಬ್ಬಂದಿಗಳನ್ನು ಇಟ್ಟುಕೊಂಡು ವಿಕೆಸಿ ಫೂಟ್ ವೇರ್ ಕಂಪೆನಿಯ ಜರ್ನಿ ಪ್ರಾರಂಭ ಆಗುತ್ತದೆ. 1985 ರಲ್ಲಿ ಸ್ವಂತದ್ದಾದ ಹವಾಯಿ ಚಪ್ಪಲಿ ವಿಕೆಸಿ ಬ್ರಾಂಡ್ ನೊಂದಿಗೆ ಮಾರುಕಟ್ಟೆಗೆ ಇಳಿಯುತ್ತದೆ. ಕಡಿಮೆ ಬೆಲೆಗೆ ಉತ್ತಮ ದರ್ಜೆಯ ಹವಾಯಿ ಚಪ್ಪಲಿ ತಯಾರಿಸಿದ ಹೆಗ್ಗಳಿಕೆ ವಿಕೆಸಿ ಗೆ ಸಲ್ಲುತ್ತದೆ. ಪ್ರಾರಂಭದಲ್ಲಿ ಕೇರಳದಲ್ಲಿ ಮಾತ್ರ ಇದ್ದ ಹವಾಯಿ ಕ್ರಮೇಣ ಕಂಪೆನಿಯಲ್ಲಿದ್ದ ತಮಿಳ್ನಾಡು ಕಾರ್ಮಿಕರ ಮೂಲಕ ಆ ರಾಜ್ಯಕ್ಕೂ ಕಾಲಿಡುತ್ತದೆ. ಇಂದು ಕರ್ನಾಟಕ, ಕೇರಳ, ತಮಿಳ್ನಾಡು, ಆಂಧ್ರಪ್ರದೇಶ, ಗುಜರಾತ್, ಪಶ್ಚಿಮ ಬಂಗಾಳದಲ್ಲಿ ತನ್ನ ತಯಾರಿಕಾ ಘಟಕಗಳನ್ನು ವಿಕೆಸಿ ಹೊಂದಿದೆ. ಕೇರಳವೊಂದರಲ್ಲೇ ನಾಲ್ಕು ಘಟಕಗಳಿವೆ. ಯೂರೋಪ್ ನ ಲೇಟೆಸ್ಟ್ ಮೆಶಿನ್ ಆಮದು ಮಾಡಿ ಚಪ್ಪಲಿ ತಯಾರಿಕೆ ವೇಗಗತಿಯಲ್ಲಿ ಸಾಗುತ್ತದೆ. ಏತನ್ಮಧ್ಯೆ 1990 ರಲ್ಲಿ ವಿಕೆಸಿ ಗೆ ಸಡ್ಡು ಹೊಡೆಯಲು "ಪಿವಿಸಿ" ಹೆಸರಲ್ಲಿ ತೈವಾನ್ ಮತ್ತು ಥೈಲಾಂಡ್ ಚಪ್ಪಲ್ ಭಾರತಕ್ಕೆ ಕಾಲಿಡುತ್ತದೆ. ಅದನ್ನು ಸವಾಲಾಗಿ ಸ್ವೀಕರಿಸಿದ ವಿಕೆಸಿ ಸಮರ್ಥವಾಗಿ ಪೈಪೋಟಿ ನೀಡಿ ಮತ್ತೆ ಜೈಸುತ್ತದೆ. ಪಿವಿಸಿ ಮುಗ್ಗರಿಸುತ್ತದೆ.

ಕೋಯಾ ಪಕ್ಕಾ ಕ್ಯಾಲ್ಕುಲೇಶನ್ ಮನುಷ್ಯ. ತನ್ನಿಬ್ಬರು ಗಂಡು ಮಕ್ಕಳನ್ನು ಕಂಪೆನಿಗಾಗಿಯೇ ತಯಾರು ಮಾಡುತ್ತಾರೆ. ದೊಡ್ಡಮಗ ರಝಾಕ್ ಗೆ ಎಂಬಿಎ ವಿಧ್ಯಾಭ್ಯಾಸ ಮಾಡಿಸ್ತಾರೆ. ಸಣ್ಣವ ನೌಶಾದ್ ಪಾಲಿಮರ್ ಸೈನ್ಸ್ ಮತ್ತು ರಬ್ಬರ್ ಟೆಕ್ನಾಲಜಿಯಲ್ಲಿ ಎಂಟೆಕ್ ಮಾಡ್ತಾರೆ. ಅವರಿಬ್ಬರನ್ನು ಸೇರಿಸಿಕೊಂಡು ವಿಕೆಸಿ ಯನ್ನು ಇನ್ನಷ್ಟು ಪ್ರೊಫೆಶನಲ್ ಗೊಳಿಸ್ತಾರೆ. ರಝಾಕ್ ಇತ್ತೀಚೆಗೆ ಡಿಸೈನಿಂಗ್ ಫೂಟ್ ವೇರ್ ಪ್ರಾರಂಭಿಸಿದ್ದಾರೆ. ಪ್ರಸ್ತುತ ವಿಕೆಸಿ 17 ಪ್ರೈವೇಟ್ ಲಿಮಿಟೆಡ್ ಕಂಪೆನಿಯನ್ನು ಹೊಂದಿದ್ದು, 30 ನಿರ್ದೇಶಕರಿದ್ದಾರೆ. ಮಹಮ್ಮದ್ ಕೋಯಾ ಅವರು ಇಂದು ಕೇವಲ ಫೂಟ್ ವೇರ್ ಉದ್ಯಮ ಒಂದಕ್ಕೇ ಹೊಂದಿಕೊಳ್ಳದೆ ಕರ್ಮಭೂಮಿ ಕಲ್ಲಿಕೋಟೆಯಲ್ಲಿ ಟೈಲ್ಸ್, ಟಿಂಬರ್ ವ್ಯವಹಾರದಲ್ಲೂ ಕೈಯ್ಯಾಡಿಸಿದ್ದಾರೆ.

ವಿಕೆಸಿ ಕಂಪೆನಿಯಲ್ಲೀಗ 10,000 ಕ್ಕೂ ಅಧಿಕ ನೌಕರರಿದ್ದಾರೆ. 150 ಕ್ಕೂ ಅಧಿಕ ಚಪ್ಪಲ್ ಮಾಡೆಲ್ ಗಳು ಮಾರುಕಟ್ಟೆಗಿಳಿದಿವೆ. ಇಷ್ಟಕ್ಕೇ ಸುಮ್ಮನಾಗದ ಮಹಮ್ಮದ್ ಕೋಯಾ ಫೂಟ್ ವೇರ್ ಡಿಸೈನ್ ಇಂಡಸ್ಟ್ರೀಸ್ ಪ್ರಾರಂಭಿಸಿ ಆ ಮೂಲಕ "ಫೂಟ್ ವೇರ್ ವಿಲೇಜ್" ಎಂಬ ಕಾನ್ಸೆಪ್ಟ್ ಇಟ್ಟುಕೊಂಡು 1,600 ಗೃಹಿಣಿಯರಿಗೆ ಫೂಟ್ ವೇರ್ ತಯಾರಿಕೆಯ ಕುರಿತು ತರಬೇತು ನೀಡಿದ್ದಾರೆ. ಈಗ ಮನೆಯಲ್ಲೇ ಕುಳಿತು ಗೃಹಿಣಿಯರು ಚಪ್ಪಲಿ ತಯಾರಿಸಿ ಹಣ ಸಂಪಾದಿಸುತ್ತಿದ್ದಾರೆ. ವಿಕೆಸಿ ಮೆಟೀರಿಯಲ್ಸ್ ಮನೆಮನೆಗೆ ತಲುಪಿಸುವ ಸಂವಿಧಾನ ಪ್ರಾರಂಭವಾಗಿದೆ. ಘಟಕಗಳು ಮಾತ್ರವಲ್ಲದೆ ಮನೆ ಮನೆಯಲ್ಲಿ ಕೂಡಾ ವಿಕೆಸಿಗೆ ರೂಪ ಸಿಗುತ್ತಿದೆ.

ವಿಕೆಸಿ ತಾನು ಬೆಳೆಯುವುದಲ್ಲದೆ ತನ್ನ ಕಾರ್ಮಿಕರನ್ನು ಕೂಡಾ ಬೆಳೆಸುತ್ತಿದೆ. ಅವರಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತಿದೆ. ಮಲಪ್ಪುರಂ ಮತ್ತು ವಯನಾಡ್ ನಲ್ಲಿ ತನ್ನ ಸಿಬ್ಬಂದಿಗಳಿಗಾಗಿ ಉದಾರವಾಗಿ ಫ್ಲಾಟ್ ನಿರ್ಮಿಸಿಕೊಟ್ಟಿದೆ. ತನ್ನ ಸಿಬ್ಬಂದಿಗಳಿಗೆ ಪ್ರಾಥಮಿಕ ಇಂಗ್ಲಿಷ್ ಜ್ಞಾನದ ಶಿಕ್ಷಣ, ಅವರ ಮಕ್ಕಳಿಗೆ ಮತ್ತು ಆ ಪ್ರದೇಶದಲ್ಲಿ ಸ್ಕಾಲರ್ ಶಿಪ್ ನೀಡುತ್ತಿದೆ. ವಿಕೆಸಿ ಚಾರಿಟೇಬಲ್ ಟ್ರಸ್ಟ್ ಮತ್ತು ಬೈಪೊರೆ ಡೆವಲಪ್ ಮೆಂಟ್ ಮಿಷನ್ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಹಲವು ಶಾಲೆಗಳ ದತ್ತು, ಆಸ್ಪತ್ರೆಗಳಲ್ಲಿ ಬ್ಲಾಕ್ ಕಟ್ಟಡ ರಚನೆ, ಡಯಾಲಿಸಿಸ್ ಮೆಶಿನ್ ಸ್ಥಾಪನೆ ಮೊದಲಾದ ಸಾಮಾಜಿಕ ಕಾರ್ಯವನ್ನು ಮಾಡುತ್ತಿದೆ. ಮಹಮ್ಮದ್ ಕೋಯಾ ಪ್ರಥಮವಾಗಿ ಮಾರ್ಕಿಸ್ಟ್ ಸಿದ್ದಾಂತದವರು. ನಂತರ ಇಂಡಸ್ಟ್ರಿಯಲಿಸ್ಟ್ ಆದ ಕಾರಣ ತನ್ನ ಕಾರುಣ್ಯದ ಹಸ್ತ ಎಲ್ಲೆಡೆ ಚಾಚುತ್ತಿದ್ದಾರೆ. ಕೋಯಾ ಪ್ರಸ್ತುತ ಕಲ್ಲಿಕೋಟೆ ನಗರದ ಮೇಯರ್ ಆದರೂ ಈ ಹಿಂದೆ ಅವರು 2001 ರಿಂದ 2006 ರ ತನಕ ಬೈಪೊರೆ ಕ್ಷೇತ್ರದ ಶಾಸಕರಾಗಿದ್ದರು.

ವಿಕೆಸಿ ಚಪ್ಪಲ್ ಇಂದು ಭಾರತವಲ್ಲದೆ ಸಿಂಗಾಪುರ, ಮಲೇಶ್ಯಾ ಮತ್ತು ಗಲ್ಫ್ ದೇಶಗಳಲ್ಲಿ ಪ್ರಸಿದ್ಧಿ ಪಡೆದಿದೆ. ಮುಂದಿನ ದಿನಗಳಲ್ಲಿ ಇತರ ದೇಶಗಳಿಗೆ ವಿಶೇಷವಾಗಿ ಯೂರೋಪ್ ಖಂಡಕ್ಕೆ ಕಾಲಿಡಲಿದೆ. ಪ್ರಸ್ತುತ ಮೇಯರ್ ಆಗಿರುವ ವಿಕೆಸಿ ಜನಕ ಮಹಮ್ಮದ್ ಕೋಯಾ ಕಲ್ಲಿಕೋಟೆ ನಗರದ ಬಗ್ಗೆ ತುಂಬಾ ಕನಸು ಇಟ್ಟುಕೊಂಡಿದ್ದಾರೆ. ಟ್ರಾಫಿಕ್ ಸಿಸ್ಟಮ್, ವೇಸ್ಟ್ ಮೇನೇಜ್ ಮೆಂಟ್, ಬೀದಿ ದೀಪದ ದುರಸ್ತಿಗೆ ಕಾಯಕಲ್ಪ ನೀಡುವುದು ಕೋಯಾ ಕನಸು. ಸರಕಾರಿ ಕಛೇರಿಗಳ ಕೆಲಸ ಕ್ಷಿಪ್ರಗೊಳಿಸಿ ಬಡ/ಅಶಕ್ತರ ಸಮಸ್ಯೆಗೆ ಪರಿಹಾರ ಹುಡುಕಲು ಮೇಯರ್ ಮಹಮ್ಮದ್ ಕೋಯಾ ಸಜ್ಜಾಗಿದ್ದಾರೆ. ಅವರಿಗೆ ಶುಭವಾಗಲಿ.

*_-ರಶೀದ್ ವಿಟ್ಲ._*

ಭಾನುವಾರ, ಆಗಸ್ಟ್ 7, 2016

ಎಲ್ಲಿ ಕ್ಲಾಸ್ ಲೀಡರ್ ??

ಎಲ್ಲಿ ಕ್ಲಾಸ್ ಲೀಡರ್ ??
ನನಗೆ ಸ್ಟಾಫ್ ರೂಮಲ್ಲಿ ತುರ್ತು ಕೆಲಸವಿದೆ.ನೀನು ಕ್ಲಾಸಲ್ಲಿ ಮಾತನಾಡುವವರ, ಗದ್ದಲವುಂಟುಮಾಡುವವರ ಹೆಸರು ಬರೆದು ಕೊಡ್ಬೇಕು ...
ಹತ್ತು ಹೆಸರು ಭರ್ತಿಯಾದಾಗ ಸ್ಟಾಫ್ ರೂಮಿಗೆ ಬಂದು ತೋರಿಸ್ಬೇಕು
.
.
ಡಯಲಾಗ್ ಡೆಲಿವರಿಯ ನಂತರ ಟೀಚರ್ ತರಗತಿಯಿಂದ ಹೋದರು.
ಲೀಡರ್ ಹುಡುಗ ಬಹಳ ಗಂಭೀರತೆಯಿಂದ ಮುಂದೆ ಬಂದು ನಿಲ್ತಾನೆ ಮತ್ತೆ ,
ಗಡಿಯಲ್ಲಿ ನುಸುಳುಕೋರರನ್ನು ಸದೆಬಡಿಯಲು ಕಾಯೋ ಯೋಧನಂತೆ ಆತನ ಹಾವಭಾವ.
ಅಷ್ಟರ ತನಕ  ಮಾತುಗಳ ಗೌಜಿಯಿದ್ದ ತರಗತಿಯಲ್ಲಿ ಈಗ ಸ್ಮಶಾನ ಮೌನ ವಾತಾವರಣ..

ಸಂಘರ್ಷಭರಿತ ಸನ್ನಿವೇಶ..
ದೇಹದಾರ್ಢ್ಯ ಸ್ಪರ್ದಾಳುಗಳಂತೆ ಎದೆಯುಬ್ಬಿಸಿ ಕುದಿಯುತ್ತಾ ಕೂತಿರುವ ಹುಡುಗರು..
ತುಟಿಯಲ್ಲಾಡಿಸಿದರೂ ಲೀಡರ್ ಲಿಸ್ಟಿಗೆ🗒🖊 ತಮ್ಮ ಹೆಸರು ಲಿಫ್ಟಾಗಬಹುದೆಂಬ ಭಯದಲ್ಲಿ ಬಾಯ್ಮುಚ್ಚಿ ಕೂತಿರುವ ಹುಡುಗಿಯರು😁😁
ಕಲಿಯುವ ವಿಧ್ಯಾರ್ಥಿಗಳು ಪುಸ್ತಕ ನೋಡುತ್ತಿದ್ದಾರೆ..ಉಳಿದವರು ಬಲೆಗೆ ಸಿಲುಕಿದ ಮೀನಿನಂತೆ ವಿಲವಿಲ ಒದ್ದಾಡ್ತಿದ್ದಾರೆ,ಕುಳಿತಲ್ಲೇ ಕೊಸರಾಡ್ತಿದ್ದಾರೆ😏😒
ಲಿಸ್ಟಲ್ಲಿ ಮೊದಲಿಗನಾಗಿ ಹೆಸರು entry ಆದವನೊಂದಿಗೆ ಎಲ್ಲರಿಗೂ ಅನುಕಂಪ😔🙁
ಬಹಳ ವಿನಯದೊಂದಿಗೆ ಲೀಡರ್'ನೊಂದಿಗೆ ಅಪೇಕ್ಷೆ..
ಲಿಸ್ಟಿನಿಂದ ಹೆಸರು ತೆಗೆಯಲಿಕ್ಕೆ..
ಹುಂ .. ಸಾಧ್ಯವಿಲ್ಲ
ಲೀಡರ್'ನಿಂದ ಖಡಕ್ ಉತ್ತರ😡😟
ಒಮ್ಮೆ ಹೋಗು ಮಾರಾಯಾ😏ಇದೆಲ್ಲಾ ತುಂಬಾನೇ ನೋಡಿದ್ದೇವೆ🤒 ಎನ್ನುತ್ತಾ ಲೀಡರಿನ ಮುಖಕ್ಕೆ ವ್ಯಂಗ್ಯ ಮಿಶ್ರಿತ ತಿರಸ್ಕಾರ ನೋಟ ಬೀರಿ  ಹಳೆಯ ಲಯಕ್ಕೆ ಮರಳಿದ ಆತ😏😃
ಗೆಳೆಯ ಕೊಟ್ಟ ಹುಂಬ ಧೈರ್ಯದಲ್ಲಿ ಮತ್ತೆ ಕೆಲವರಿಂದಲೂ ಹರಟೆ ಶುರು..
ನಡು ನಡುವೆ ಲೀಡರ್ ವಿರುದ್ಧ ಕೆಲ ಡಯಲಾಗ್'ಗಳು🤒😏
ಅಂತೂ ಹತ್ತು ಹೆಸರು ಭರ್ತಿಯಾದಾಗ ಟೀಚರ್'ಗೆ ಹೆಸರು ತೋರಿಸುವ ತವಕದಲ್ಲಿ ಲೀಡರ್'ನ ಓಟ ಸ್ಟಾಫ್ ರೂಂ ಕಡೆಗೆ🏃..
ನಾಗರ ಬೆತ್ತ ಹಿಡಿದು ತರಗತಿಯೆಡೆಗೆ ಧಾವಿಸುತ್ತಿರುವ ಟೀಚರ್'ನ ಮುಖಭಾವ ಕಂಡಾಗ ಎಲ್ಲರ ಎದೆಬಡಿತಕ್ಕೂ ಉಸೇನ್ ಬೋಲ್ಟಿನ ಓಟದ ವೇಗ🙄😞😟
ಮತ್ತೆ ಎಲ್ಲವೂ ಶರವೇಗದಲ್ಲಿ..
ಲಿಸ್ಟಲ್ಲಿ ಸ್ಥಾನ ಭಧ್ರಪಡಿಸಿದವರು ಸಾಲು ಸಾಲಾಗಿ ನಿಲ್ಲುತ್ತಿದ್ದಾರೆ..
ಕೈ ತೋರಿಸಿ..ಪೆಟ್ಟು ತಿಂದು ಏನೋ ಮಹಾಕಾರ್ಯ ಸಾಧಿಸಿದ ಧನ್ಯತಾ ಭಾವದೊಂದಿಗೆ ಜಾಗಕ್ಕೆ ಮರಳುತ್ತಿದ್ದಾರೆ ಜೊತೆಗೆ ಲೀಡರೆಡೆಗೆ ಸಿಡುಕಿನ ನೋಟ...
ಮಧ್ಯೆ ಕೆಲವರಿಂದ
ಟೀಚರ್" ನಾನು ಮಾತನಾಡಿದ್ದಲ್ಲ ನೋಟ್ ಬುಕ್ ಕೇಳಿದ್ದು,ಪೆನ್ ಕೇಳಿದ್ದು ಎಂಬ ಬೆತ್ತದೇಟು ತಿನ್ನುವ ಭಯದಲ್ಲಿ ಮೊಳಗುವ ಸಬೂಬುಗಳ😨😰 ಶಬ್ದ ಟೀಚರ ಕೈ ತೋರಿಸ್ತೀಯೋ ಇಲ್ವೋ😡😡? ಎಂಬ ಸಿಂಹಗರ್ಜನೆಯ ಮುಂದೆ ಸೋಲೊಪ್ಪಿಕೊಳ್ಳುತ್ತಿದೆ.
ಪೆಟ್ಟು ತಿನ್ನುವುದು ಮತ್ತೊಬ್ಬನಾದರೂ ನೋವಿನ ಛಾಯೆ ಪ್ರೇಕ್ಷಕರ ಮುಖದಲ್ಲೂ ಪ್ರಕಟಗೊಳ್ಳುತ್ತಿದೆ.
ಪೆಟ್ಟಿನ ಕಾರ್ಯಕ್ರಮ ಮುಕ್ತಾಯವಾಯಿತು,ಟೀಚರ್ ಕ್ಲಾಸಿನಿಂದ ಹೋಗಿದ್ದೂ ಆಯ್ತು.ಇನ್ನು ಲೀಡರ್ ವಿರುದ್ಧ ಡಿಕ್ಷನರಿಯಲ್ಲಿಲ್ಲದ ಪದಗಳಿಂದ ಬೈಗುಳಗಳ ಸುರಿಮಳೆ..ಅದಕ್ಕಾಗಿ ಪೆಟ್ಟು ತಿಂದವರಿಂದ ನಾಮುಂದು ತಾಮುಂದೆಂಬ ಹೋರಾಟ.
ಪೆಟ್ಟು ತಿಂದು ಅಳುತ್ತಿರುವವರೊಂದಿಗೆ ಅನುಕಂಪವೂ,ಪೆಟ್ಟು ತಿಂದರೂ ಇದೆಲ್ಲಾ ಪೆಟ್ಟೇ ಎಂಬ ಭಾವ ಬರಿಸಿ ಏನೂ ಆಗದ ರೀತಿಯಲ್ಲಿ ಕುಳಿತಿರುವವರಲ್ಲಿ ಅಭಿಮಾನವೂ ಅನಾವರಣಗೊಳ್ಳುತ್ತಿದೆ.
ಪೆಟ್ಟು ತಿಂದವರಲ್ಲಿ ಇನ್ನು ಮಾತನಾಡಲು ಲೈಸನ್ಸ್ ಸಿಕ್ಕಿತೆಂಬ ವಿಶ್ವಾ‌ಸ,ಬಾಕಿಯುಳಿದವರ ಮುಖದಲ್ಲಿ ಕೊಂದರೂ ಬಾಯಿ ತೆರೆಯಲಾರೆ ಎಂಬ ಭಾವ..
ನಂತರದ ರೌಂಡಲ್ಲೂ ಲೀಡರಿನ 👁👁 ಹದ್ದುಗಣ್ಣುಗಳು ಬೇಟೆಗಾಗಿ ತರಗತಿಯಲ್ಲಿ ಸುತ್ತುತ್ತಲೇ ಇದೆ ಜೊತೆಗೆ ಸಹಪಾಠಿಗಳ ವರ್ತನೆಯೂ ನಯಾ ಬದಲಾವಣೆಯಿಲ್ಲದೆ ಪುನರಾವರ್ತನೆಗೊಳ್ಳುತ್ತಲೂ ಇದೆ..

ಬಹುಷಃ ಎಲ್ಲರ ಶಾಲಾ ಲೈಫಲ್ಲೂ ಒಂದು ಸಲವಾದರೂ ಈ ಸನ್ನಿವೇಶ ಉಂಟಾಗಿರಬಹುದಲ್ಲವೇ?😍😍😉😉

ಗುರುವಾರ, ಆಗಸ್ಟ್ 4, 2016

ಮೂರು ಅಕ್ಷರ

*ಬದುಕಿನಲ್ಲಿ ಮೂರಕ್ಷರದ ಮಹತ್ವ*
******** ******** *****

ಮಗು *"ಜನನ"* ಎ೦ಬ ಮೂರಕ್ಷರದಿ೦ದ ಬಾಹ್ಯ *"ಪ್ರಪ೦ಚ"* ಎ೦ಬ ಮೂರಕ್ಷರಕ್ಕೆ ಕಾಲಿಡುತ್ತಾನೆ. ಅಲ್ಲಿ ತಾಯಿಯ *"ಅರೈಕೆ"* ಎ೦ಬ ಮೂರಕ್ಷರದಿ೦ದ ಆರು ವರ್ಷಗಳನ್ನು ಕಳೆದು *"ಕಲಿಕೆ"* ಎ೦ಬ ಮೂರಕ್ಷರ ಕಲಿಯಲು ಶಾಲೆಯ ಮೆಟ್ಟಿಲೇರುತ್ತಾನೆ. ಅಲ್ಲಿ *"ಶಿಕ್ಷಕ"* ಮೂರಕ್ಷರದವ *"ಬೋಧನೆ"* ಎ೦ಬ ಮೂರಕ್ಷರ ಮಾಡಿ *"ವಿನಯ"* ಎ೦ಬ ಮೂರಕ್ಷರ ಕಲಿಸುತ್ತಾನೆ, ನ೦ತರ *"ವ್ಯಾಸ೦ಗ"* ಎ೦ಬ ಮೂರಕ್ಷರವನ್ನು ಮು೦ದುವರೆಸಿ *"ಸಾಧನೆ"* ಎ೦ಬ ಮೂರಕ್ಷರವನ್ನು ಮನದಲ್ಲಿಟ್ಟುಕೊ೦ಡು, *"ಶೋಧನೆ"* ಎ೦ಬ ಮೂರಕ್ಷರದಿ೦ದ *"ಸಹನೆ"* ಎ೦ಬ ಮೂರಕ್ಷರದ ಸಹಯೋಗದೊ೦ದಿಗೆ *"ನೌಕರಿ"* ಎ೦ಬ ಮೂರಕ್ಷರವನ್ನು ತನ್ನ ಮೂರಕ್ಷರದ ಅದೃಷ್ಟದಿ೦ದ ಪಡೆಯುತ್ತಾನೆ. ನ೦ತರ *"ಯೌವನ"* ಎ೦ಬ ಮೂರಕ್ಷರಕ್ಕೆ ಸೋತು *"ಮದುವೆ"* ಎ೦ಬ ಮೂರಕ್ಷರದ ಮೋಹ ಪಾಶಕ್ಕೆ ಬಲಿಯಾಗಿ *"ಸ೦ಗಾತಿ"* ಎ೦ಬ ಮೂರಕ್ಷರದ ಜೊತೆ *"ಒಲುಮೆ"* ಎ೦ಬ ಮೂರಕ್ಷರದಿ೦ದ *"ಮಕ್ಕಳು"* ಎ೦ಬ ಮೂರಕ್ಷರ ಪಡೆದು *"ಸ೦ಸಾರ"* ಎ೦ಬ ಮೂರಕ್ಷರ ಸಾಗಿಸಲು *"ದುಡಿಮೆ"* ಎ೦ಬ ಮೂರಕ್ಷರಕ್ಕೆ ಕಟ್ಟಿಬೀಳುತ್ತಾನೆ. ನ೦ತರ *"ಜೀವನ"* ಎ೦ಬ ಮೂರಕ್ಷರದ ಪಯಣ ಸಾಗುತ್ತಾ ಸಾಗುತ್ತಾ *"ವೃಧ್ಯಾಪ್ಯ"* ಎ೦ಬ ಮೂರಕ್ಷರವು ಆವರಿಸಿದಾಗ *"ಖಾಯಿಲೆ"* ಎ೦ಬ ಮೂರಕ್ಷರದಿ೦ದ *"ಆರೋಗ್ಯ"* ಎ೦ಬ ಮೂರಕ್ಷರ ಕು೦ಠಿತವಾಗಿ *"ನೆಮ್ಮದಿ"* ಎ೦ಬ ಮೂರಕ್ಷರವನ್ನು ಕಳೆದುಕೊ೦ಡು ಕೊನೆಗೊ೦ದು ದಿನ *"ಮರಣ"* ಎ೦ಬ ಮೂರಕ್ಷರದಿ೦ದ ಮೋಕ್ಷಗೊಳ್ಳುತ್ತಾನೆ.😰

ಆರ್ಡರ್

ಇತ್ತೀಚೆಗೆ ಮನೆಯಲ್ಲಿ ಕುಳಿತು ಮೊಬೈಲ್ನಲ್ಲಿ ಏನನ್ನು ಬೇಕಾದ್ರೂ ಆರ್ಡರ್ ಮಾಡಿ ಕೊಳ್ಳಬಹುದು.

ನಾನು ಆರ್ಯಭವನ್ ಸ್ವೀಟ್ ಸ್ಟಾಲ್ಗೆ  ಫೋನ್ ಮಾಡಿದೆ.  ಟ್ರಿಂಗ ಟ್ರಿಂಗ.....

ಆರ್ಯಭವನಕ್ಕೆ ನಿಮಗೆ ಸ್ವಾಗತ.. ಹೇಳಿ, ಏನು ಬೇಕಾಗಿತ್ತು??

ನನಗೆ ಯಾವುದಾದರೂ ಸಿಹಿ ತಿಂಡಿ ಬೇಕಿತ್ತು

ಲಾಡೂ ಬೇಕಾದರೆ ಒಂದನ್ನು ಒತ್ತಿ, ಹಲ್ವ ಬೇಕಾದರೆ ಎರಡನ್ನು ಒತ್ತಿ, ಒಬ್ಬಟ್ಟು ಬೇಕಾದರೆ ಮೂರನ್ನು ಒತ್ತಿ...

ನಾನು ಒಂದನ್ನು ಒತ್ತಿದೆ

ಬೂ0ದಿ ಲಾಡೂಗಾಗಿ ಒಂದನ್ನು ಒತ್ತಿ, ಡ್ರೈ ಫ್ರುಟ್ ಲಾಡೂ ಬೇಕಾದರೆ ಎರಡನ್ನು ಒತ್ತಿ, ಬೇಸನ್ ಲಾಡೂ ಬೇಕಾದರೆ ಮೂರನ್ನು ಒತ್ತಿ...

ನಾನು ಒಂದನ್ನು ಒತ್ತಿದೆ

ಕಾಲು ಕೆಜಿ ಗಾಗಿ ಒಂದನ್ನು ಒತ್ತಿ, ಒಂದು ಕೆಜಿ ಬೇಕಾದರೆ ಎರಡನ್ನು ಒತ್ತಿ, ಒಂದು  ಕ್ವಿಂಟಲ್  ಬೇಕಾದರೆ ಮೂರನ್ನು ಒತ್ತಿ...

ಅಚಾತುರ್ಯದಿಂದ ನಾನು ಮೂರನ್ನು ಒತ್ತಿಬಿಟ್ಟೆ 😮
ಹೆದರಿ ಕಾಲ್ ಕಟ್ ಮಾಡಿ ಬಿಟ್ಟೆ.

ಮುಂದಿನ ಮೂರು ನಿಮಿಷದಲ್ಲಿ ಆರ್ಯಭವನ್ ದಿಂದ ನನಗೆ ಫೋನ್ ಕಾಲ್!!!😱

ನಿಮ್ಮ ಕಡೆಯಿಂದ ನಮಗೆ ಒಂದು ಕ್ವಿಂಟಲ್ ಬೂ0ದಿ ಲಾಡೂಗಾಗಿ ಆರ್ಡರ್ ಬಂದಿದೆ.  ನಿಮ್ಮ ಮನೆಯ ವಿಳಾಸ ತಿಳಿಸಿ.

ನಾನಂದೆ ... ನಾನು ಫೋನ್ ಮಾಡಿಲ್ಲವಲ್ಲ

ಹಾಗಾದರೆ ನಿಮ್ಮ ತಮ್ಮ ಕಾಲ್ ಮಾಡಿರಬಹುದು, ಇದೇ ನಂಬರ್ ನಿಂದಲೇ ಕಾಲ್ ಬಂದಿದ್ದು.  ನಿಮ್ಮ ತಮ್ಮನಿಗೆ ಫೋನ್ ಕೊಡಿ..

ನಾವು ಆರು ಜನ ಅಣ್ಣ ತಮ್ಮಂದಿರಿದ್ದೆವೆ.  ಮೊದಲನೆಯವರಿಗಾಗಿ ಒಂದನ್ನು ಒತ್ತಿ,  ಎರಡನೇಯವರಿಗಾಗಿ ಎರಡನ್ನು ಒತ್ತಿ,  ಮೂರನೇ ಯವರಿಗಾಗಿ  ಮೂರನ್ನು ಒತ್ತಿ...

ಎದುರಿನ ಫೋನ್ ಕಾಲ್ ಕಟ್ ಆಗಿ ಹೋಯ್ತು 😅
😂😬😂😬😂😬😂
🙏🙏🙏🙏🙏

ಕೆಟ್ಟುಹೋ(ಗ)ದ ಕಾಲ!!?

ಹುಟ್ಟುತ್ತಲೇ ನಮಗೆ 'ದೊಡ್ಡವರಾಗುವ' ಕನಸು
'ದೊಡ್ಡವರಾಗಲು' ಏನೂ ಮಾಡುವ ಮನಸು
ಎಲ್ಲರಂತೆ ನಮಗೊಂದು ಭವ್ಯ ಬಂಗಲೆ ಕನಸು
ಮೂರ್ನಾಕು ಕಾರು ಬೇಕು,ಟೂ ವೀಲರ್ರೂ ಬೇಕು!
ಸರ್ಕಾರಿ ಕೆಲಸ ಬೇಕು,ಗಿಂಬಳ ಕೊಡಲೇಬೇಕು!
ಕೋಟಿಗಟ್ಟಲೆ ಹಣಕೆ ಟ್ಯಾಕ್ಸು ತಪ್ಪಿಸಬೇಕು!

ಅಂದದ ನಾಲ್ಕೈದು ಗರ್ಲ್-ಫ್ರೆಂಡ್ಸ್ ಬೇಕು
ಊರಿನ ಹುಡುಗೀರಿಗೆ ಕಮೆಂಟು ಮಾಡಲೇಬೇಕು
ತಾಳಿಕಟ್ಟಿದ್ದು ಬೇಕು,'ಹೋಗಿ ಬರೋದೂ' ಬೇಕು!
ಮೊಬೈಲು ತುಂಬಾ ಹೊಸದು MMS ಬೇಕು.
ಉಳಿದವರ ಮಾನ ಮಾರಿ ಸಂಪಾದಿಸಬೇಕು
ಊರೇನೇ ಆದರೂ ನನ್ನ ಮಗಳು ಸೇಫಿರಬೇಕು!

ಸಮಾದಲ್ಲಿಷ್ಟು ಸ್ಟೇಟಸು ಬೇಕು
ಕಾನ್ವೆಂಟ್ಸ್ಕೂಲು ಬೇಕು,ಟ್ಯೂಷನ್ ಬೇಕೇ ಬೇಕು
ಗಾಂಜಾ ಅಫೀಮು ನಮಗೆ ಬ್ಲ್ಯಾಕಲ್ಲಾದರೂ ಬೇಕು
ಕುಡಿಯಲೇ ಬೇಕು,ಆರೋಗ್ಯ ಚೆನ್ನಾಗಿರಬೇಕು!
ರೋಗ-ರುಜಿನ,ಕಷ್ಟ-ಕಾರ್ಪಣ್ಯ ದೂರವಿರಬೇಕು.
ಇತರರಿಗೆ ಬಂದರೆ,ನಮಗಿಲ್ಲ ತೊಂದರೆ!

ನೆರೆಹೊರೆಯಲಿ ಹೆಚ್ಚು ಮಾತಿರಬಾರದು
ಕಾರಣವಿಲ್ಲದೆ ಮುಗುಳುನಗೆ 'ಬಾರದು'!
ಅಪರಿಚಿತರಲಿ ಮಾತಿಗಿಳಿಯಬಾರದು.
ಲಾಭವಿಲ್ಲದೆ ನಮಗೆ ನಗ(ಗು)ಬಾರದು!
ಶಾಪಿಂಗ್ ಮಾಲೂ,ಸಿನಿಮಾ ಹಾಲೂ ನಮಗಿದೆ
ಪ್ರಾಯದವರಿಗೇನು? ಅವರಿಗೆ ಆಶ್ರಮವಿದೆ!

ನಮ್ಮ ಧರ್ಮ ಸರ್ವವ್ಯಾಪಿಯಾಗಬೇಕು
ಉಳಿದವರದು ನಶಿಸಿಹೋಗಬೇಕು.
ಕೋಮುಗಲಾಟೆಯಲಿ ಮೂರಂಗಡಿ ಸುಡಬೇಕು
ನಾವು ಜಗಳ ಕಾಯ್ದರೂ ಅವರು ಸುಮ್ನಿರಬೇಕು!
ನಮ್ಮ ಶತ್ರುಗಳು ಸೋಲಬೇಕು,ಸಾಯಬೇಕು!
ಅವರಿವರು ಸೋಲೋದೇ ನಮ್ಮ ಗೆಲುವು!

ನಗರೀಕರಣ,ಕೈಗಾರಿಕೀಕರಣದ ಪರ ನಿಲ್ಲುವಾತ
ಗ್ಲೋಬಲ್ ವಾರ್ಮಿಂಗ್ ಬಗ್ಗೆ ತಲೆ ಕೆಡಿಸುವಾತ!
ಬರಗಾಲ,ಬಿರುಗಾಳಿಯ ಭಯದಿ ಗೋಳಿಡುವಾತ!
ಸುನಾಮಿ,ಚಂಡಮಾರುತವ ಹೆದರುವಾತ!
ಬುದ್ಧಿವಂತರು ನಾವು,ಬುದ್ಧಿಹೀನರೂ ನಾವು!
'ಎಂದೂ ಮುಗಿಯದ ಆಸೆಗಳ ಒಡೆಯರು ನಾವು'!

ಇಲ್ಲದ ನೆಪ ಹುಡುಕಿ ಪರಾಂಬರಿಸಬೇಡಿ!
ಖಂಡಿತಾ ಕಾಲ ಕೆಡಲಿಲ್ಲ.,ಕೆಡಿಸಿದೆವು

~~~>ಹಾರೀಸ್ ಅಹ್ಮದ್ ಪರಪ್ಪು
https://m.facebook/harisahmedparappu

ಮೊಬೈಲ್ ಪುರಾಣ

1997-98 ರ ಸಮಯ. ಮಂಗಳೂರಿನ ಕೆಲವು ಪ್ರಮುಖ ಸ್ಥಳಗಳಲ್ಲಿ ಏರ್ ಟೆಲ್ ಮೊಬೈಲ್ ನೆಟ್ ವರ್ಕ್ ಸಿಗ್ತಾ ಇತ್ತು. ಅದಕ್ಕೂ ಮೊದಲು ಪೇಜರ್ ಪ್ಯಾಂಟ್ ಬೆಲ್ಟ್ ನ್ನು ಅಲಂಕರಿಸಿತ್ತು. ಮಂಗಳೂರಲ್ಲಿ ಮೊಬೈಲ್ ಸಿಗುತ್ತೆ ಅಂತ ತಿಳಿದದ್ದೇ ತಡ ದುಬೈ ನಲ್ಲಿದ್ದ ಅಣ್ಣನಿಗೆ ದಂಬಾಲು ಬಿದ್ದಿದ್ದೆ. ಆತ ಅಲ್ಲಿಂದ 30,000/- ರೂ. ದುಬಾರಿ ಬೆಲೆತೆತ್ತು ಸಣ್ಣ ಆಂಟೆನಾ ಇರುವ ದೊಡ್ಡ ಸೆಟ್ ಕಳುಹಿಸಿದ್ದ. ಆವಾಗ ಬೇರೆಲ್ಲೂ ನೆಟ್ ವರ್ಕ್ ಇಲ್ಲ. ಮೊಬೈಲಲ್ಲೇ ಮಾತಾಡ್ಬೇಕಾದ್ರೆ ಒಂದಾ ಮಂಗ್ಳೂರು ಅಥವಾ ವೀರಕಂಭ ಮೈಕ್ರೋಸ್ಟೇಶನ್ ತುದಿಗೆ ಹತ್ತಬೇಕಾಗಿತ್ತು. ಆವಾಗ ಈಗಿನಂತೆ ಚಿಲ್ಲರೆ ಪೈಸೆಗೆ ಫೋನ್ ಹೋಗ್ತಾ ಇರ್ಲಿಲ್ಲ. ಅಲ್ಲದೆ ಪ್ರಿಪೇಯ್ಡ್ ಸಿಮ್ ಕೂಡಾ ಇರ್ಲಿಲ್ಲ. ತಿಂಗಳಿಗೊಮ್ಮೆ ಪ್ರತ್ಯೇಕ ಬಾಡಿಗೆ ಸೇರಿ ಏರ್ ಟೆಲ್ ಬಿಲ್ ಬರ್ತಿತ್ತು. ನಾನು ಮೊಬೈಲ್ ಹಿಡಿಯುವ ಸಮಯ ಲೋಕಲ್ ಕಾಲ್ ನಿಮಿಷಕ್ಕೆ ಔಟ್ ಗೋಯಿಂಗ್ 14/- ರೂ. ಇನ್ ಕಮಿಂಗ್ ಗೆ 7/- ರೂ. ನಾನಾವಾಗ ಸಣ್ಣ ಪ್ರಾಯ. ಮಂಗ್ಳೂರು ಹೋಗುವಾಗ ಸ್ನೇಹಿತರಲ್ಲಿ ಮೊಬೈಲ್ ಗೆ ಫೋನ್ ಮಾಡಿ ಅಂತ ವಿನಂತಿಸುತ್ತಿದ್ದೆ. ಮೊಬೈಲ್ ರಿಂಗಣಿಸಿ ನಾನು ಮಾತಾಡುವಾಗ ಎಲ್ಲರೂ ನನ್ನ ಮುಖಾನೆ ತದೇಕಚಿತ್ತದಿಂದ ನೋಡುತ್ತಿದ್ದರು. ಅಂದಿನ ಮೊಬೈಲ್ ದೊಡ್ಡ ಗಾತ್ರವಾದುದರಿಂದ ಸೊಂಟ ಬೆಲ್ಟ್ ನಲ್ಲಿ ಸಿಕ್ಕಿಸುವ ಸಂವಿಧಾನವಿತ್ತು. ಅದು ಕೂಡಾ ಒಂದು ಶೋ ನೆ.

ಕ್ರಮೇಣ ಮೊಬೈಲ್ ಮೋಡೆಲ್ ಸಣ್ಣದಾಗುತ್ತಾ ಬರುತ್ತಿದ್ದಂತೆ ನೆಟ್ ವರ್ಕ್ ನಲ್ಲೂ ಕೆಲವೊಂದು ಬದಲಾವಣೆಗಳಾದವು. ಆವಾಗ ರೈಸಿದ ಮೋಡೆಲ್ ಅಂದ್ರೆ ನೋಕಿಯಾ 3310 ಮತ್ತು 1100. ಪ್ರಾರಂಭದಲ್ಲಿ ಏರ್ಟೆಲ್ ನೆಟ್ ವರ್ಕ್ ಇತ್ತಾದರೂ ಕ್ರಮೇಣ ಬಿಎಸ್ಸೆನ್ನೆಲ್ ಸೆಲ್ ವನ್, ಸ್ಪೈಸ್ ಮತ್ತಿತರ ನೆಟ್ ವರ್ಕ್ ಗಳು ಮಾರುಕಟ್ಟೆಗೆ ಕಾಲಿಡಲಾರಂಭಿಸಿತು. ಪ್ರಿಪೇಯ್ಡ್ ಸಿಮ್ ಪೋಸ್ಟ್ ಪೇಯ್ಡ್ ಆಯಿತು. ಔಟ್ ಲೆಟ್ ಗೆ ತೆರಳಿ ಮೊಬೈಲ್ ಸೆಟ್ ಕೊಟ್ಟು ಕೇಬಲ್ ಮೂಲಕ ಕರೆನ್ಸಿ ತುಂಬಿಸುವ ಸಂವಿಧಾನ ಬಂತು. ಒಂದು ಮೊಬೈಲ್ ಗೆ ಕರೆನ್ಸಿ ಹಾಕಬೇಕಾದರೆ 20 ರಿಂದ 30 ನಿಮಿಷ ಅಂಗಡಿ ಜಗುಲಿಯಲ್ಲಿ ಕಾದದ್ದಿದೆ. ನಂತರದ ದಿನಗಳಲ್ಲಿ ಅದುಹೋಗಿ ರಿಚಾರ್ಜ್ ಗೆ ನಂಬ್ರ ಕೊಡುವ ಸಿಸ್ಟಮ್ ಬಂತು. ಮತ್ತೆ ಸ್ಕ್ರಾಚ್ ಕಾರ್ಡು ಬಳಿಕ ಇ ರಿಚಾರ್ಜ್ ನ ಜಮಾನ. ಈಗ ಇಂಟರ್ ನೆಟ್ ಯುಗವಾದುದರಿಂದ ಮೊಬೈಲ್ ನಲ್ಲೇ ರಿಚಾರ್ಜ್ ಅಪ್ಲಿಕೇಶನ್ ಅಳವಡಿಸಿ ಬೇಕೆಂದಾಗ ಕರೆನ್ಸಿ ತುಂಬಬಹುದು. ಅಂದಿನಿಂದ ಇಂದಿನ ತನಕ ಮೊಬೈಲ್ ಯುಗ ಎಷ್ಟು ಬದಲಾವಣೆ ಕಂಡಿತು ನೋಡಿ. ಇದು ನನ್ನ 19 ವರ್ಷದ ಮೊಬೈಲ್ ಬಳಕೆಯ ಅನುಭವದ ಸಂಕ್ಷಿಪ್ತ ನೋಟವಷ್ಟೆ. ಪ್ರಾರಂಭದಲ್ಲಿ ಬೆರಳೆಣಿಕೆಯ ಜನರ ಕೈಯ್ಯಲ್ಲಿದ್ದ ಮೊಬೈಲ್ ಇಂದು ಎಲ್ಲರ ಬೆರಳ ತುದಿಯಲ್ಲೂ ಇದೆ. ಒಂದು ಕಾಲದಲ್ಲಿ ಪ್ರಿಪೇಯ್ಡ್ ಸಿಮ್ ಸಿಗದೆ ಸಂಸದರ, ಶಾಸಕರ ಶಿಫಾರಸ್ಸಿನಲ್ಲಿ ಪಡೆದದ್ದೂ ಇದೆ. ಅಧಿಕ ಹಣಕೊಟ್ಟು ಖರೀದಿಸಿದ್ದೂ ಇದೆ. ಇಂದು ಸಿಮ್ ಧರ್ಮಕ್ಕೆ ಸಿಕ್ಕರೂ ನೋಡೋರಿಲ್ಲ. ವಿಟ್ಲದಂತಹ ಪ್ರದೇಶಕ್ಕೆ ಬಿಎಸ್ಸೆನ್ನೆಲ್ ಸೆಲ್ ವನ್ ಮೊಬೈಲ್ ಟವರ್ ಅಳವಡಿಕೆಯಾದಾಗ ಅದನ್ನು ಕಣ್ತುಂಬಿಸಿಕೊಳ್ಳಲು ಎಷ್ಟು ಜನ. ನೆಟ್ ವರ್ಕ್ ಕಾರ್ಯಾರಂಭಿಸಿದಾಗ ಬಿಎಸ್ಸೆನ್ನೆಲ್ ಸಿಮ್ ನ್ನು ಕ್ಯೂ ನಲ್ಲಿ ಪಡೆಯಲು ಕಛೇರಿ ಮುಂದೆ ರಾತ್ರಿಯಿಡೀ ಜಾಗರಣೆ ಮಾಡಿದವರೂ ನಮ್ಮಲ್ಲಿದ್ದಾರೆ. ಇಂದು ಮೊಬೈಲ್ ಒಂದು ಕಿರಿಕಿರಿ ವಸ್ತುವಾಗಿದೆ. ಅದಿಲ್ಲದೆ ದಿನವೂ ಹೋಗದು ಎಂಬ ಪರಿಸ್ಥಿತಿ ತಲೆದೋರಿದೆ. ಸರಿ ತಾನೇ?

-ರಶೀದ್ ವಿಟ್ಲ.