ಶುಕ್ರವಾರ, ಜನವರಿ 27, 2017

ಅಪಘಾತದ ಮರಣ ಆತ್ಮಹತ್ಯೆ ಮತ್ತು ಹತ್ಯೆ

*ಅಪಘಾತದ ಮರಣ ಆತ್ಮಹತ್ಯೆ ಮತ್ತು ಹತ್ಯೆ ಪಾಪವನ್ನೂ ಹೊತ್ತುಕೊಳ್ಳುವ ಸಾಧ್ಯತೆ ಇದೆ: ಅಬುಬಕ್ಕರ್ ಸಿದ್ದೀಕ್ ಜಲಾಲಿ*


*ಸುನ್ನೀಟುಡೇ*

ಸಂಚಾರಿ ಪೋಲೀಸರು ವಿಧಿಸುವ ದಂಡಕ್ಕೆ ಭಯಪಟ್ಟು ನಿಯಮಗಳನ್ನು ಪಾಲಿಸುವ ಅಗತ್ಯವಿಲ್ಲ ಹೊರತಾಗಿ ತಮ್ಮ ಅಮೂಲ್ಯ ಜೀವ ರಕ್ಷಣೆಗಾಗಿ ಸಂಚಾರಿ ನಿಭಂದನೆಗಳನ್ನು ಪಾಲಿಸಿರಿ.ಜಿಲ್ಲೆಯಲ್ಲಿ ನಿರಂತರ ನಡೆಯುತ್ತಿರುವ ಹೆಚ್ಚಿನ ಅಪಘಾತಗಳಿಗೆ ಅಜಾಗರೂಕತೆ ಮತ್ತು ಜಂಭದ ವಾಹನ ಸಂಚಾರವೇ ಕಾರಣ.ವಾಹನದಲ್ಲಿ ಪಾಲಿಸಬೇಕಾದ ಶಿಸ್ತು ಮತ್ತು ಗೌರವ ಪಾಲಿಸಿ ಅಮೂಲ್ಯ ಜೀವ ರಕ್ಷಿಸಿ ಎಂದು ಕೂರ್ನಡ್ಕ ಖತೀಬರಾದ ಅಬುಬಕ್ಕರ್ ಸಿದ್ದೀಕ್ ಜಲಾಲಿ ಜನರಲ್ಲಿ ವಿನಂತಿಸಿದರು. ಅವರಿಂದು ಜುಮ್ಮಾ ಭಾಷಣದಲ್ಲಿ ಮಾತನಾಡುತ್ತಾ ಅತೀ ಹೆಚ್ಚು ಯುವಕರು ಇಂದು ವಾಹನ ಅಪಘಾತದಲ್ಲಿ ಬಲಿಯಾಗುತ್ತಿದ್ದಾರೆ.ಹೆತ್ತವರು ಮತ್ತು ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ. *ಬೈಕ್ ರೈಡ್ ಮಾಡುವಾಗ ಹೆಲ್ಮೆಟ್ಟ್ ಹಾಕುವುದು ಪ್ಯಾಶನ್ ಇಲ್ಲಾ ಎನ್ನುವ ಯುವಕರ ಮಯ್ಯತ್ತ್ ಗಳು ಮುಖ ಮೂತಿ ಜಜ್ಜಿ ವಿಕಾರವಾಗಿ ಹೋಗಿರುತ್ತದೆ.ಪ್ಯಾಶನ್ ಮತ್ತು ಮೋಜಿಗಿಂತ ಮಹತ್ವ ಜೀವಕ್ಕೆ ಇದೆ ಎಂದು ಯುವಕರು ತಿಳಿಯಬೇಕಾಗಿದೆ ಎಂದವರು ಹೇಳಿದರು*.

ಅಪಘಾಯಕ್ಕೀಡಾದ ಯುವಕರ ದೇಹವನ್ನು ಸಾಗಿಸುವ ವ್ಯಕ್ತಿಗೆ ಅದು ತನ್ನ ಮಕ್ಕಳ ಜೀವ ಎಂದು ತಿಳಿಯದಷ್ಟು ಭೀಕರ ಅಪಘಾತಗಳು.ಕಾರಿನ ಸವಾರ ಮಡಿಲಲ್ಲಿ ಕುಳ್ಳಿರಿಸಿ ಮೋಜು ತೋರಿಸುವ ಸಾಹಸಕ್ಕೆ ಮಗು ಬಲಿಯಾದ ಘಟನೆ.ವೇಗದ ಮಿತಿ ಇರುವ ಪಟ್ಟಣ ಪ್ರದೇಶ ಮತ್ತು ಸರ್ಕಲ್ಲ್ ಗಳಲ್ಲಿ ಯುವಕರು ಬೈಕ್ ಅಪಘಾತಕ್ಕೆ ಬಲಿಯಾದ ವರದಿ ಕೇಳುವಾಗ ದುಃಖವಾಗುತ್ತಿದೆ ಎಂದ ಖತೀಬರು ಪವಿತ್ರ ಕುರ್ ಅನ್ ನಲ್ಲಿ ಅಲ್ಲಾಹನು ಹೇಳುತ್ತಾನೆ *ನಿಮ್ಮ ಕೈಗಳನ್ನು ನೀವೇ ವಿನಾಶದೆಡೆಗೆ ತಳ್ಳದಿರಿ ಎಂದು(2-195)*.ವಾಹನವು ಅಲ್ಲಾಹನ ಅನುಗ್ರಹವಾಗಿದೆ.ಅದನ್ನು ನಾವು ದುಡುಕು ಮತ್ತು ಅತಿರೇಕದ ಸವಾರಿ ಮೂಲಕ ನಮ್ಮ ವಿನಾಶಕ್ಕೆ ಬಳಸಿದರೆ ಆತ್ಮಹತ್ಯೆಯ ಪಾಪವಿದೆ ಎಂದು ಖತೀಬರು ಹೇಳಿದರು.

*ಅಲ್ಲಾಹನು ನಮ್ಮನ್ನು ಪರೀಕ್ಷಿಸಬಹುದು ಆದರೆ ಅಲ್ಲಾಹನ ವಿಧಿಯನ್ನು ನಾವು ಪರೀಕ್ಷಿಸುವಂತಿಲ್ಲ*.ಅಪಘಾತಗಳು ಕೆಲವೊಮ್ಮೆ ಅನಿರೀಕ್ಷಿತವಾಗಿ ನಡೆಯುತ್ತದೆ ಅದು ಅಲ್ಲಾಹನ ತೀರ್ಮಾಣವಾಗಿದೆ.ಆದರೆ ನಾವೇ ಬೇಕಾಬಿಟ್ಟಿ ವಾಹನದಲ್ಲಿ ಸರ್ಕಸ್ಸ್ ಮಾಡಿ ಸಂಭವಿಸುವ ಅಪಘಾತಗಳ ಮರಣದಿಂದ ನಮಗೆ ಹತ್ಯೆಯ ಪಾಪ ತಟ್ಟಬಹುದು.ಕೆಲವೊಂದು ಬೈಕ್ ಸವಾರರನ್ನು ಕಾಣುವಾಗ ಅವರಿಗೆ ಸಿಗುವ ಶುಭ ಹಾರೈಕೆ ಏನಂದರೆ *ಎಂದ್ ವಡುಕತ್ತೆ ಪೋಕು ಎಂದಾಗಿದೆ*. ಇನ್ನು ಕೆಲವರು ಕಾರಿನಲ್ಲಿ ಪ್ರತಿಷ್ಟೆ ಮತ್ತು ಮೋಜಿಗಾಗಿ ಕುಟುಂಬವನ್ನೇ ತುಂಬಿಸಿ ಹೊರಡುವುದಿದೆ. ಒಂದು ಸ್ಕೂಟಿಯಲ್ಲಿ ತನ್ನ ಸಂಸಾರವನ್ನೆಲ್ಲಾ ಹೊತ್ತೊಯ್ಯುವ ಸಾಹಸ ಮಾಡುವರು.ಮಕ್ಕಳ ಕೈಯಲ್ಲಿ ದ್ವಿಚಕ್ರ ವಾಹನ ಕೊಡುವವರೂ ತಮ್ಮ ಮೇಲೆ ಅಪಾಯವನ್ನು ಎಳೆದು ಹಾಕುತ್ತಾರೆ.ವಾಹನದ ಮಿತಿ ಮತ್ತು ಸಂಚಾರಿ ನೀತಿ ಪಾಲಿಸದ ನಮ್ಮ ತೀರ್ಮಾಣಗಳು ನಮಗೇ ಮಾರಕವಾಗುತ್ತದೆ.ಅನಂತರ ದುಃಖಿಸಿ ಫಲವಿಲ್ಲ.ಯುವಕರ ಮರಣವು ಅಲ್ಲಾಹನ ರಹಮ್ ಆಗಲಾರದು.ಅದು ನಮ್ಮ ಅಜಾಗರೂಕತೆ ಮತ್ತು ಅಕ್ರಮದ ಫಲವೂ ಅಗಿರಬಹುದು ಎಂದು ಖತೀಬರು ಹೇಳಿದರು.

ಅಲ್ಲಾಹನ ಕರುಣೆ ಮತ್ತು ಕೃಪೆ ನಮ್ಮ ಮೇಲಿರಲಿ.ಈ ವಾಹನವನ್ನು ನಮಗೆ ವಿಧೇಯವಾಗಿಸಿದವನು.ಸಂಚಾರಕ್ಕೆ ಯೋಗ್ಯವಾಗಿಸಿದವನು.ಇದರ ಆರಂಭ ಮತ್ತು ಗುರಿಯ ಬಗ್ಗೆ ಸರಿಯಾದ ಜ್ನಾನ ಇರುವ ಅಲ್ಲಾಹನಿಗೆ ಸರ್ವಸ್ತುತಿ.ಈ ವಾಹನವನ್ನು ನಮ್ಮ ಪಾಲಿಗೆ ಕೊಡುಗೆ ಮತ್ತು ಗುರಿ ತಲುಪುವ ಸಾಧನವನ್ನಾಗಿಸು ಎಂದು ಅಲ್ಲಾಹನಲ್ಲಿ ಪ್ರಾರ್ಥಿಸಿ ವಾಹನ ಚಲಾಯಿಸಬೇಕು. *ವಾಹನದ ಪ್ರಯಾಣದಲ್ಲಿ ಝಿಕ್ರ್ ಹೇಳಬೇಕು.ನೂಹ್ ನಭಿಯವರು ಹಡಗನ್ನು ಹತ್ತುವಾಗ ಮತ್ತು ಅನಂತರ ಪ್ರಯಾಣದುದ್ದಕ್ಕೂ ಅಲ್ಲಾಹನಲ್ಲಿ ಪ್ರಾರ್ಥಿಸುತ್ತಲೇ ಇದ್ದರು.ನಾವು ಸಂಗೀತ ಮತ್ತು ವಿನೋದವನ್ನು ಸಂಚಾರದ ಭಾಗವಾಗಿಸಿದ್ದೇವೆ.ಸಂಗೀತ ಕೇಳುತ್ತಾ ಮರಣ ಹೊಂದಿದರೆ ಈಮಾನ್ ಸುರಕ್ಷಿತವಾಗಿರಲು ಸಾಧ್ಯವಿಲ್ಲ*ಎಂದ ಖತೀಬರು ಕೆಲವೊಮ್ಮೆ ಅಪಘಾತ ಸಂಭವಿಸಿದ ಕಡೆ ಹೇಳುವ ಐದು ನಿಮಿಷ ತಡವಾಗಿದ್ದರೆ ಬದುಕುತ್ತಿರಲಿಲ್ಲ ಮತ್ತು ಐದು ನಿಮಿಷ ಬೇಗ ಆಸ್ಪತ್ರೆ ತಲುಪಿಸುತ್ತಿದ್ದರೆ ಬದುಕುತ್ತಿದ್ದ ಎಂಬ ಅವಿಶ್ವಾಸಿಗಳ ಅಭಿಪ್ರಾಯ ಹೇಳುವುದನ್ನು ನಿಲ್ಲಿಸಿ.ಅಲ್ಲಾಹನು ವಿಧಿಸಿದ ನಿರ್ಣಯಕ್ಕೆ ನಾವು ನಿಮಿತ್ತ ಮಾತ್ರ.ಅವನ ಅಪ್ಪಣೆಯಂತೆ ಜಗತ್ತು ಮತ್ತು ಘಟನೆಗಳು ನಡೆಯುತ್ತದೆ.ನಾವು ನಾವಾಗಿಯೇ ವಿಪತ್ತನ್ನು ಎಳೆದುಕೊಳ್ಳದೆ ಸುರಕ್ಷಿತ ಮತ್ತು ಜಾಗರೂಕರಾಗಿ ಬದುಕಿದರೆ ಅದುವೇ ಸರ್ವಶ್ರೇಷ್ಟ ಎಂದು ಖತೀಬರು ಹೇಳುತ್ತಾ ಅಪಘಾತದಲ್ಲಿ ಮರಣ ಹೊಂದಿದ ಎಲ್ಲರಿಗೂ ಪ್ರಾರ್ಥಿಸಿದರು.

*ಹನೀಫ್ ಪುತ್ತೂರ್*
   *ಸುನ್ನೀಟುಡೇ*