ಸೋಮವಾರ, ಮಾರ್ಚ್ 13, 2017

ಇರೋಮ್ ಶರ್ಮಿಲಾ

*ನಾನಿನ್ನು ಚುಣಾವಣಾ ಅಭ್ಯರ್ಥಿಯಾಗಿ ಸ್ಪರ್ದಿಸಲಾರೆ......*

ಹದಿನಾರು ವರ್ಷ ನಿಸ್ವಾರ್ಥವಾಗಿ ಜನರಿಗೋಸ್ಕರ ಉಪವಾಸ ಹಿಡಿದ ಇರೋಮ್ ಶರ್ಮಿಲಾ 90 ಮತ ಪಡೆದ ನಂತರ ನಾನಿನ್ನು ಚುಣಾವಣಾ ಅಭ್ಯರ್ಥಿಯಾಗಿ ಸ್ಪರ್ಧಿಸಲಾರೆ ಎಂದು ಗದ್ಗದಿತವಾಗಿ ಹೇಳಬೇಕಾದರೆ ಸಾಮಾಜಿಕ ಹೋರಾಟ ಮತ್ತು ಮತ್ತು ರಾಜಕೀಯ ಮುತ್ಸದ್ದಿತನದ ನಡುವಿನ ಅಂತರ ಹಾಗೆಯೇ ಮತಗಳು ಯಾವ ರೂಪದಲ್ಲಿ ಚಲಾವಣೆಗೊಳ್ಳುತ್ತಿದೆ ಎಂದು ಅರ್ಥೈಸಿಕೊಳ್ಳಬೇಕಾದ ಅಗತ್ಯವಿದೆ.

ಸಾಮಾಜಿಕ ಚಟುವಟಿಕೆಯಲ್ಲಿ ನಿರಂತರವಾಗಿ ತೊಡಗಿ ರಾಜಕೀಯದಲ್ಲಿ ಮೂಲೆಗುಂಪಾದ ವ್ಯಕ್ತಿತ್ವಗಳಲ್ಲಿ ಇರೋಮ್ ಶರ್ಮಿಲಾ ಮೊದಲೇನಲ್ಲಾ ಆದರೆ ಇರೋಮ್ ಶರ್ಮಿಲಾರ ಸುಧೀರ್ಘ ಹೋರಾಟ ಮತ್ತವರು ಪಡೆದ 90 ಮತಗಳು ಈ ದೇಶದ ರಾಜಕೀಯ ಹಿತಾಶಕ್ತಿಯನ್ನು ಬಹಳ ಚೆನ್ನಗಿ ವಿವರಿಸಿದೆ. ಇರೋಮ್ ಶರ್ಮಿಲಾ ಜಗತ್ತಿನಲ್ಲಿ ಅತಿ ಹೆಚ್ಚು ಸಮಯ ಉಪವಾಸ ಸತ್ಯಾಗ್ರಹ ನಡೆಸಿದವರು ಎಂದು ಖ್ಯಾತಿ ಹೊಂದಿದವರು, 02 ನವೆಂಬರ್ 2000 ದಿಂದ ಆರಂಭಿಸಿ 09 ಆಗಸ್ಟ್  2016 ರವರೆಗೆ ಸುದೀರ್ಘ 16 ವರ್ಷ ಜನರಿಗಾಗಿ ಉಪವಾಸ ಆಚರಿಸಿ ಕೊನೆಗೊಮ್ಮೆ ರಾಜಕೀಯಕ್ಕೆ ಧುಮುಕಿದರು ಆ ರಾಜಕೀಯ 90 ಮತಗಳಲ್ಲಿ ಸುದೀರ್ಘ ಹೋರಾಟವನ್ನೇ ಹಿಯಾಳಿಸಿತು.

ಮಿಲಿಟರಿ ವಿಭಾಗಕ್ಕೆ ನೀಡಲ್ಪಟ್ಟ ವಿಶೇಷ ಅಧಿಕಾರ ಮನಿಪುರದಿಂದ ಕಿತ್ತೊಗೆಯ್ಯಬೇಕು ಎನ್ನುವುದು ಇರೋಮ್ ಶರ್ಮಿಲಾ ರ ಬೇಡಿಕೆಯಾಗಿತ್ತು ಆ ಹಾದಿಯ ಉಪವಾಸ ಸತ್ಯಾಗ್ರಹ ಹೋರಾಟ ಅವರು ಆತ್ಮಹತ್ಯೆಗೆ ಯತ್ನಿಸಿದರು ಎಂದು ಪರಿಗಣಿಸಿ ಬಂಧನ, ಕೋರ್ಟು, ಕೇಸು ಎಂದು ಮುಂದುವರೆಯಿತು. ಆದರೆ 16 ವರ್ಷಗಳ ನಂತರ ಅವರ ಹೋರಾಟದ ವಿಚಾರಧಾರೆ ಜನರು ಮರೆತಿದ್ದರು, ಜನರ ಮರೆವಿಗೆ ಹಲವು ಕಾರಣವಿರಬಹುದು ಜನರ ನಡುವೆ ಸಾಗದ ಅವರ ಹೋರಾಟ ಜನರನ್ನು ಮರೆತಿಸಿರಬಹುದು, ಸಾಂಕೇತಿಕ ಹೋರಾಟ ಸುಧೀರ್ಘವಾದಾಗ ಜನರನ್ನು ಮರೆತಿಸಿರಬಹುದು, ರಾಜಕೀಯ ಹಿತಾಸಕ್ತಿ ಎಂದು ತಿಳಿದು 16 ವರ್ಷದ ಹೋರಾಟವನ್ನು ಕಡೆಗಣಿಸಿರಬಹುದು ಹೀಗೆ ಹತ್ತು ಹಲವು ಕಾರಣ 90 ಮತಗಳನ್ನು ಪಡೆಯಲು ಸಾಧ್ಯವಾಗಿಸಿರಬಹುದು.

ಮತದಾರರು ಇಂದಿಗೂ ಸಾಮಾಜಿಕ ಹೋರಾಟಗಾರರು ಸಾಮಾಜಿಕ ಬದ್ದತೆ ಹೊಂದಿದರೆ ಸಾಕು ರಾಜಕೀಯ ಜೀವನ ಅಗತ್ಯವಿಲ್ಲ ಎಂದೇ ಪರಿಗಣಿಸಿದ್ದಾರೆ ಹಾಗಾಗಿ ಸಾಮಾಜಿಕತೆಯ ಖ್ಯಾತಿ ಹೊಂದಿದವರು ರಾಜಕೀಯದಲ್ಲಿ ಮುನ್ನಡೆದಿರುವುದು ಕಡಿಮೆ. ಸಾಮಾಜಿಕ ಬದ್ದತೆ ಮತವಾಗಿ ಪರಿವರ್ತಿಸಬೇಕಾದ ಆಗತ್ಯ ಸಧ್ಯದ ದೇಶದ ರಾಜಕೀಯ ವ್ಯವಸ್ಥೆಗೆ ಅತ್ಯಗತ್ಯ, ಸಾಮಾಜಿಕ ಬದ್ದತೆಯುಲ್ಲ ರಾಜಕೀಯ ಪ್ರಭುತ್ವ ಬೆಳೆದುಬರಬೇಕಾಗಿದೆ ಹಾಗಾದಲ್ಲಿ ಮಾತ್ರ ಇರೋಮ್ ಶರ್ಮಿಲಾ ರ 90 ಮತಗಳು ಸಾವಿರದ ರೂಪದಲ್ಲಿ ಹೊರ ಬಿದ್ದು ಕೊನೆಗೊಮ್ಮೆ ಗೆದ್ದು ರಾಜಕೀಯ ಪರಿವರ್ತನೆಯಾಗಿ ಹೊಸ ರಾಜಕೀಯ ವ್ಯವಸ್ಥೆಯ ಅಡಿಗಲ್ಲು ಬೀಳಲು ಸಾಧ್ಯ.

Musthafa Iruvailu