ಶುಕ್ರವಾರ, ಏಪ್ರಿಲ್ 14, 2017

ಮುಸ್ಲಿಮರು ಜಗತ್ತಿನಾಧ್ಯಂತ ಬೀದಿಯಲ್ಲೇ ಇದ್ದಾರೆ.

ಮುಸ್ಲಿಮರು ಜಗತ್ತಿನಾಧ್ಯಂತ ಬೀದಿಯಲ್ಲೇ ಇದ್ದಾರೆ.ಬೀದಿಯಿಂದ ಎತ್ತುವ ಕಾರ್ಯ ಆಗಬೇಕು:- ಸಿದ್ದೀಕ್ ಜಲಾಲಿ*

ರಾಜಕಾರಣಿಗಳ ಮತ್ತು ಪ್ರತಿಭಟನೆಗಳ ಹಿಂದೆ ಹಾಕಿದ ಹೆಜ್ಜೆ ಮತ್ತು ವ್ಯಯಿಸಿದ ಹಣ ಹಾಗೂ ಸಮಯವನ್ನು ಸಮುದಾಯದ ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಗಾಗಿ ಖರ್ಚುಮಾಡಿದ್ದರೆ ನಮ್ಮ ಸಮುದಾಯ ಇಂದು ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ದಿಯ ಹಂತದಲ್ಲಿರುತ್ತಿತ್ತು ಎಂದು ಕೂರ್ನಡ್ಕ ಖತೀಬರಾದ ಅಬುಬಕ್ಕರ್ ಸಿದ್ದೀಕ್ ಜಲಾಲಿ ಹೇಳಿದರು ಅವರಿಂದು ಜುಮ್ಮಾ ಭಾಷಣದಲ್ಲಿ ಮಾತನಾಡುತ್ತಾ ಕೆಲವರು ದ್ವೇಷ ಮತ್ತು ಹತಾಶೆಯ ಹೋರಾಟಗಳಿಗೆ ಧರ್ಮ ಮತ್ತು ಇಸ್ಲಾಮಿನ ಬ್ರಾಂಡ್ ಹಾಕುತ್ತಾರೆ.ಇಸ್ಲಾಮಿನಲ್ಲಿ ಮಹತ್ವ ಇರುವುದು ಅಲ್ಲಾಹನ ಮಾರ್ಗದಲ್ಲಿ ಮಾನವ ಕಲ್ಯಾಣ ಮತ್ತು ಜಗತ್ತಿನ ಶಾಂತಿಸ್ಥಾಪನೆಗೆ ಇರುವ ಹೋರಾಟಕ್ಕೆ ಎಂದವರು ಹೇಳಿದರು.

ಒಂದು ಕಾಲದಲ್ಲಿ ಮಸೀದಿಗಳನ್ನು ಕಾಣುವಾಗ ಅನ್ಯ ಧರ್ಮೀಯರು  ದೂರದಲ್ಲಿ ಭಕ್ತಿಯಿಂದ ಚುಂಬಿಸುತ್ತಿದ್ದರು ಇಂದು ಅದು ಮಾಯವಾಗಿದೆ. ಇದಕ್ಕೆ ಕಾರಣ ಮಸೀದಿಯಲ್ಲ ಹೊರತಾಗಿ ಆ ಮಸೀದಿಗೆ ಸೂಟು ಮತ್ತು ಪೈಜಾಮು ಹಾಕಿ ಬರುವ ಜನರಲ್ಲಿ ನಶಿಸಿ ಹೋಗುತ್ತಿರುವ ತಖ್ವಾ ಆಗಿದೆ. *ಇತ್ತೀಚೆಗೆ ಒಬ್ಬರು ಹೇಳಿಕೆ ಕೊಟ್ಟರು, ಮುಸ್ಲಿಮರು ಜನಾಂದೋಲನಕ್ಕಾಗಿ ಬೀದಿಗೆ ಬರಬೇಕು ಎಂದು.ನಾನು ಹೇಳುತ್ತೇನೆ  ಮುಸ್ಲಿಮರು ಈಗಾಗಲೇ ಬೀದಿಯಲ್ಲೇ ಇದ್ದಾರೆ ಎಂದು.ಉತ್ತರ ಭಾರತದಲ್ಲಿ ಅದೆಷ್ಟೋ ನಾಡುಗಳಿಂದ ಮುಸ್ಲಿಮರು ಬೀದಿಗೆ ಬಂದಿದ್ದಾರೆ.ಕರ್ನಾಟಕದ ಬಿಜಾಪುರ ಹಾಗೂ ಇನ್ನಿತರ ಸ್ಲಂಗಳಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಸ್ಥಾನವಿಲ್ಲದೆ ಮುಸ್ಲಿಮರ ಭವಿಷ್ಯ ಬೀದಿಯಲ್ಲಿದೆ.ನಮ್ಮ ಕರಾವಳಿಯಲ್ಲಿ ಮೂವತ್ತು ವರ್ಷ ದಾಟಿಯೂ ಮದುವೆಯಾಗದೆ ಉಳಿದಿರುವ ಹೆಣ್ಣು ಮಕ್ಕಳು ಇದ್ದಾರೆ ಎನ್ನುವುದು ಸಮುದಾಯದ ಪ್ರತಿಷ್ಟಿತರ ಮಾನವನ್ನೂ ಬೀದಿಪಾಲಾಗಿಸಿದೆ ಎಂದ ಅವರು ನಾವು ಬೀದಿಯಿಂದ ಮೇಲೆದ್ದು ಬರಬೇಕು.*ಅದಕ್ಕೆ ಬೇಕಾಗಿರುವುದು ಸಮುದಾಯ ಎಂಬ ಆತ್ಮಾಭಿಮಾನ ಹಾಗೂ ಅಲ್ಲಾಹನ ಮೇಲೆ ತವಕ್ಕುಲ್ ಮಾಡಿದ ಬಲವಾದ ಇಮಾನ್ ಆಗಿದೆ ಎಂದರು.

ಒಂದು ಯುದ್ದದಲ್ಲಿ  ಹಝ್ರತ್ ಅಲೀ
ರವರು ಒಬ್ಬ ಮುಶ್ರಿಕನನ್ನು ನೆಲಕ್ಕೆ ತಳ್ಳಿ ಆತನ ಎದೆಗೆ ಚುಚ್ಚಲು ಖಡ್ಗವನ್ನು ಎತ್ತಿದರು.ಆ ಕ್ಷಣ ಆ ಮುಶ್ರಿಕ್ ಅಲೀ ರವರ ಮುಖಕ್ಕೆ ಕ್ಯಾಕರಿಸಿ ಉಗಿದನು.ತಕ್ಷಣ ಅಲೀ ತಲ್ವಾರನ್ನು ಹಿಂದಕ್ಕೆ ಎಳೆದರು ಮತ್ತು ಆ ವ್ಯಕ್ತಿಯನ್ನು ಕೊಲ್ಲದೇ ಬಿಟ್ಟರು.ಆಗ ಉಳಿದ ಸಹಾಬಿಗಳು ಕೇಳಿದರು.ಅಮೀರುಲ್ ಮುಹ್ಮಿನೀನ್ ಯಾಕೆ ಹಾಗೆ ಮಾಡಿದಿರಿ ಎಂದು.ಅದಕ್ಕೆ
ಹೀಗೆ ಹೇಳಿದರು. *ನಾನು ಹಝ್ರತ್ ಅಲೀ, ಅದುವರೆಗೂ ಅಲ್ಲಾಹನ ಧರ್ಮಕ್ಕಾಗಿ ರಹ್ಮಾನಿನ ತೃಪ್ತಿಯನ್ನು ಸಂಪಾದಿಸಲು ಯುದ್ದ ಮಾಡಿದ್ದೆ.ಆದರೆ ಆ ವ್ಯಕ್ತಿ ನನ್ನ ಮುಖಕ್ಕೆ ಉಗಿದ ನಂತರ ನಾನು ಆ ವ್ಯಕ್ತಿಯನ್ನು ಕೊಂದರೆ ಅದು ನಾನು ಆ ವ್ಯಕ್ತಿ ಉಗಿದ ಕಾರಣಕ್ಕೆ ದ್ವೇಷದಿಂದ ಕೊಂದೆ ಎಂಬ ಅಪವಾದ ಸೃಷ್ಟಿಸಬಹುದು ಅಥವಾ ನನ್ನ ಆತ್ಮವು ನನ್ನಲ್ಲಿ ಅದನ್ನು ಮತ್ತೇ ಮತ್ತೇ ಕೇಳಬಹುದು ಎಂದರು.* ಅದೇ ರೀತಿ ಇನ್ನೊಂದು ಯುದ್ದದಲ್ಲಿ ಸಹಾಬತ್ತ್ ಒಬ್ಬರು ಕೋಪದಿಂದ ತನ್ನ ಕೈಯನ್ನೇ ಕಡಿದರು ಮತ್ತು ಆವೇಶದಿಂದ ಶತ್ರುಗಳೊಂದಿಗೆ ಹೋರಾಡಿದರು .ಇದನ್ನು ಕಂಡು ಪ್ರವಾದಿ (ಸ) ಹೇಳಿದರು ಆ ವ್ಯಕ್ತಿ ನರಕವನ್ನು ಸೇರುವನು ಎಂದು.ಸಹಾಬತ್ತ್ ಗೆ ಆಶ್ಚರ್ಯವಾಯಿತು ಯಾಕಾಗಿ ಎಂದು ಅವರು ನಬಿಯವರಲ್ಲಿ ಪ್ರಶ್ನಿಸಿದರು ಅದಕ್ಕೆ ಪ್ರವಾದಿ ಹೇಳಿದರು ಆ ವ್ಯಕ್ತಿ ತನ್ನ ಶಕ್ತಿ ಮತ್ತು ಶೌರ್ಯದ ಬಗ್ಗೆ ಅಭಿಮಾನ ಪಡುತ್ತಿದ್ದಾನೆ.ಅವನು ಅಹಂಕಾರವನ್ನು ಹೃದಯ ತುಂಬಿಸಿದ್ದಾನೆ.ಅವನ ಹೋರಾಟವು ಅಲ್ಲಾಹನಿಗೆ ಬೇಕಾಗಿಲ್ಲ.ಅಲ್ಲಾಹನಿಗೆ ಬೇಕಾಗಿರುವುದು ತಖ್ವಾ ಇರುವ ನಿಷ್ಕಲ್ಮಶ ಹೋರಾಟವಾಗಿದೆ ಎಂದು ಖತೀಬರು ಚರಿತ್ರೆಯನ್ನು ಉಲ್ಲೇಖಿಸಿ ಹೇಳಿದರು.

*ನಮ್ಮ ನಂತರದ ತಲೆಮಾರು ಕೇಳಬಹುದು ನಮ್ಮ ಪೂರ್ವಜರ ಇತಿಹಾಸವೇನು ?  ಅವರ ಸಾಧನೆಗಳೇನು ? ಆಗ ನಾವು ಅದೇ ಟಿಪ್ಪುಸುಲ್ತಾನ್,ಮೌಲಾನ ಅಜಾದ್,ಅಬ್ದುಲ್ ಕಾಲಾಂ ರ ಹೆಸರನ್ನೂ ಹಾಗೇ ಚಾರಿತ್ರಿಕ ಮಿನಾರ್ ಮತ್ತು ಗುಂಬಝ್ ಗಳನ್ನು ತೋರಿಸುವುದಲ್ಲ.ಅದಕ್ಕಾಗಿ ನಮ್ಮಲ್ಲಿ ಚರಿತ್ರೆಗಳನ್ನು ನಿರ್ಮಿಸುವ ಒಂದು ಬೃಹತ್ತ್ ಜನಕೂಟ ಇರಬೇಕು.ವಿಜ್ನಾನ,ರಾಷ್ಟ್ರೀಯ ಸುರಕ್ಷೆ,ರಾಷ್ಟ್ರೀಯ ನಾಗರಿಕ ಸೇವೆಯಲ್ಲಿ ತೊಡಗಿಸಿ ದೇಶದ ಹೆಸರನ್ನು ಜಗತ್ತಿನಲ್ಲಿ ಬೆಳಗಿಸುವ ಪ್ರತಿಭೆಗಳು ಬೇಕು.ಅವರಿಗೆ ಬೇಕಾದ ಸೌಲಭ್ಯ ಮತ್ತು ಸಾಧನಾನುಕೂಲತೆಯನ್ನು ನಾವು ಮಾಡಬೇಕು.* ನಮಗೆ ಬೇಕಾಗಿರುವುದು ಇನ್ ಪ್ಲ್ಯುಯೆಂನ್ಸ್ ಮಾಡುವ ನಾಯಕರಲ್ಲ ಹೊರತಾಗಿ ಇಚ್ಚಾಶಕ್ತಿಯಿಂದ ಸಮುದಾಯವನ್ನು ಎಲ್ಲಾ ಕ್ಷೇತ್ರದಲ್ಲಿ ಪ್ರಬಲರನ್ನಾಗಿ ಮಾಡುವ ಸೌಲಭ್ಯ ಕಲ್ಪಿಸುವ ನಾಯಕರಾಗಿದ್ದಾರೆ.ನಮ್ಮ ಇಮಾನ್ ರಾಷ್ಟ್ರೀಯ ಪಕ್ಷದ ಮೇಲೆ ಮತ್ತು ಭರವಸೆ ಪಕ್ಷದ ನಾಯಕನ ಮೇಲೆ ಇರುವುದು ನಾವು ಕಾಣುತ್ತೇವೆ.ಇದು ನಮ್ಮ ಈಮಾನ್ ಕಲುಷಿತಗೊಳಿಸಬಹುದು ಮತ್ತು ನಮ್ಮನ್ನು ದುರ್ಬಲರನ್ನಾಗಿಸಬಹುದು ಎಂದ ಖತೀಬರು ನಮ್ಮೊಂದಿಗೆ ಅಲ್ಲಾಹನಿದ್ದಾನೆ.ಆತ್ಮರಕ್ಷಣೆ ತಿರುಗೇಟನ್ನು ನಮ್ಮ ದೇಶದ ಸಂವಿಧಾನ ಮತ್ತು ಇಸ್ಲಾಮ್ ಕೂಡ ಅಂಗೀಕರಿಸುತ್ತದೆ.ತನ್ನ ಮರಿಗಳ ಮೇಲೆ ದಾಳಿ ಮಾಡಿದಾಗ ಕೋಳಿಯು ಪ್ರತಿಕ್ರಿಯಿಸುತ್ತದೆ.ಇದನ್ನೆ ಕುರ್ ಆನ್ ಹೇಳುತ್ತದೆ.ನಿಮ್ಮ ಮೇಲೆ ಆಕ್ರಮಣ ಮಾಡುವ ಮತ್ತು ಮನೆಯಿಂದ ಹೊರಗೆ ಹಾಕುವ ಜನರೊಂದಿಗೆ ಹೋರಾಟ ಮಾಡಿ ಎಂದು.ಹಾಗಾಗಿ ನಾವು ಜನರಿಗೆ ಶಾಂತಿ ಮತ್ತು ಸಮಾಧಾನವನ್ನು ಭೋದಿಸಿ ನಮ್ಮ ಸ್ವಭಾವವನ್ನು ಉತ್ತಮಗೊಳಿಸಿ ಬದುಕೋನ.ನಮ್ಮ ಜೀವ,ಸಂಸಾರ,ಸೊತ್ತು ಮತ್ತು ಅಸ್ಥಿತ್ವದ ವಿರುದ್ದ ಬರುವ ಎಲ್ಲಾ ಆತಂಕವನ್ನು ಅಲ್ಲಾಹನ ಮೇಲೆ ಭರವಸೆ ಇಟ್ಟು ನಿವಾರಿಸುವ ಎಂದು ಖತೀಬರು ಹೇಳಿದರು.
🖋
*ಹನೀಫ್ ಪುತ್ತೂರು*
   *ಸುನ್ನೀಟುಡೇ*