ಶುಕ್ರವಾರ, ಏಪ್ರಿಲ್ 14, 2017

ಪೋಲೀಸ್ ಇಲಾಖೆ ಸೇರಿ ಫಿಟ್ನೆಸ್ ಮಾಡಿ

ಪೋಲೀಸ್ ಇಲಾಖೆ ಸೇರಿ ಫಿಟ್ನೆಸ್ ಮಾಡಿ.ಬ್ಯಾಟ್ ಹಿಡಿಯುವ ಕೈಯಲ್ಲಿ ಲಾಠಿ ಹಿಡಿಯಿರಿ ಸಂವಿಧಾನದ ಸೇವೆ ಅಲ್ಲಾಹನ ಬಳಿ ಪುಣ್ಯ ಇರುವಂತದ್ದು :-
ಅಜೀಜ್ ದಾರಿಮಿ ಚೊಕ್ಕಬೆಟ್ಟು*

ನಬಿ (ಸ) ರವರ ಹದೀಸೊಂದನ್ನು ಇಬ್ನು ಮಾಜಃ (ರ)1298 ವರದಿ ಮಾಡುತ್ತಾರೆ. ಅನ್ಸಾರಿ ಸಹಾಬಿಯೋರ್ವರು ನಬಿ(ಸ) ಬಳಿ ಬಂದು ಬೇಡುತ್ತಾರೆ.ಆಗ ಪ್ರವಾದಿವರ್ಯರು ನಿನ್ನ ಮನೆಯಲ್ಲಿ ಏನಿದೆ ? ಸ್ವಹಾಬಿವರ್ಯರು ಹೇಳುತ್ತಾರೆ ನಮ್ಮಲ್ಲಿ ಒಂದು ಹೊದಿಕೆ ಇದೆ.ಅದರ ಅರ್ಧ ಭಾಗ ಹಾಸಿದರೆ ಇನ್ನೊಂದು ಭಾಗವನ್ನು ಹೊದ್ದು ಕೊಳ್ಳುತ್ತೇವೆ.
ಮತ್ತೊಂದು ನೀರು ಕುಡಿಯೋ ಪಾತ್ರೆ. ಪ್ರವಾದಿ ಸ ರವರು ಅವೆರಡನ್ನೂ ತರಿಸಿ ಹರಾಜು ಮಾಡುತ್ತಾರೆ. ಎರಡು ದಿರ್ಹಂ ಗೆ ಸ್ವಹಾಬಿಯೋರ್ವರು ಖರೀದಿಸುತ್ತಾರೆ.ಆ ಎರಡು ದಿರ್ಹಮನ್ನು ಅನ್ಸಾರಿಯ ಕೈಗಿತ್ತು ನೀವು ಹೋಗಿ ಕಟ್ಟಿಗೆಯನ್ನು ಕಾಡಿಂದ ತಂದು ವ್ಯಾಪಾರ ಮಾಡಿ, ಹದಿನೈದು ದಿನಗಳ ಕಾಲ ಈ ಕಡೆ ಬರಬಾರದು.ಹದಿನೈದು ದಿನ ಬಿಟ್ಟು ಅವರು ಮರಳುತ್ತಾರೆ ಅವರ ಕೈಯಲ್ಲಿ ಹತ್ತು ದಿರ್ಹಮುಗಳಿರುತ್ತವೆ.ನಬಿ ಸ ಹೇಳುತ್ತಾರೆ. ನಿಮಗೆ ಬೇಕಾದ ಆಹಾರ ಮತ್ತು ಬಟ್ಟೆಯನ್ನು ಖರೀದಿಸಿ.
*ನೀವು ಯಾರೊಂದಿಗೂ ಯಾಚಿಸಬೇಡಿ ಅದು ಅಂತ್ಯ ದಿನದಲ್ಲಿ ನಿಮ್ಮ ಮುಖದ ಕಪ್ಪು ಚುಕ್ಕೆಯಾಗಿರುತ್ತದೆ.*ಈ ಹದೀಸಿನಲ್ಲಿ ಮನವರಿಕೆ ಮಾಡಬೇಕಾದ ವಿಷಯ ಮೊದಲನೆಯದು ನಾವು ಯಾವುದೇ ಸಂಕಷ್ಟಕ್ಕೊಳಗಾದರೂ ದುಡಿದು ತಿನ್ನಬೇಕೆನ್ನುದಾಗಿದೆ. ಇದರಲ್ಲಿ ಅಡಗಿದ ಅದ್ಭುತವಾದ ಇನ್ನೊಂದು ಸಂದೇಶ ನಮ್ಮ ಸಮಸ್ಯೆಗೆ ನಮ್ಮಲ್ಲೇ ಪರಿಹಾರವಿದೆ ಎನ್ನುವುದಾಗಿದೆ.ನಾವು ಹಾಗಲ್ಲ ಒಂದು ಪರಿಹಾರಕ್ಕೆ ಹೋಗಿ ಹತ್ತು ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳುವವರಾಗಿರುತ್ತೇವೆ.ಲೋನ್ ಸಿಗುತ್ತದೆಂದು ಬ್ಯಾಂಕಿಂದ ಸಾಲ ಮಾಡಿ ಮನೆ ಕಟ್ಟಿ ಮನೆ ಮತ್ತು ಇರೋ ಜಾಗ ಕಳಕೊಳ್ಳುತ್ತೇವೆ.ಲೋನಲ್ಲಿ ಕಾರು ತಗೊಂಡು ನಾಲ್ಕು ತಿಂಗಳು ಸುತ್ತಾಡಿ ಕಾರಿನೊಂದಿಗೆ ಸ್ವಂತ ಮನೆ ಕಳಕೊಂಡು ಬಾಡಿಗೆ ಮನೆಯಲ್ಲಿ ಕೂರುವವರು!.ಬಂಗಾರ ಅಡವಿಟ್ಟು ಒಡವೆಯನ್ನೇ ಹಾರಜಿಗಿಡುವವರು!ಆದರೆ ನಾವು ಹಾಗಾಗಬಾರದು ಎರಡು ರುಪಾಯಿಗೆ ಹತ್ತು ರುಪಾಯಿ ಸಂಪಾದನೆ ಮಾಡಬೇಕು.ಇದು ನಬಿ ಸ ಆದರ್ಷ.ನಾನು ಇದನ್ನು ಯಾಕೇ ಹೇಳುತ್ತೇನೆಂದರೆ ನಮಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ.ನಮ್ಮ ಸಮಸ್ಯೆಗೆ ನಮ್ಮಲ್ಲೇ ಪರಿಹಾರ ಕಾಣಬೇಕು ಅದು ಇರೋ ಹೊದಿಕೆ ಮಾರಿಯಾದರೂ ಸರಿ!
ನಾವು ಬುದ್ದಿವಂತಿಕೆ, ತಂತ್ರಗಾರಿಕೆ ,ವಿವೇಕದಿಂದ ವರ್ತಿಸಬೇಕು.

ಅಹ್ಮದ್ ಕುರೇಶಿ ವಿಷಯದಲ್ಲಿ ಏನೆಲ್ಲಾ ಕೋಲಾಹಲ ನಡೆಯಿತು. ಅದರ ಹಿಂದೆ ಅನೇಕ ವಿಷಯಗಳನ್ನು ನಾವು ಮನವರಿಕೆ ಮಾಡಬೇಕು.ಅದೇನೆಂದರೆ ಯಾಕೆ ಈ ರೀತಿ ದೌರ್ಜನ್ನ,ಅನ್ಯಾಯ ಅಕ್ರಮ ನಡೆಯುತ್ತದೆ ನಮಗೆ ಯಾಕೆ ಇದಕ್ಕೆ ಪರಿಹಾರ ಕಾಣಲಾಗುತ್ತಿಲ್ಲ.ಕುರೇಶಿ ವಿಚಾರ ಮಾತ್ರವಲ್ಲ ಮೊನ್ನೆ ಬಿಡುಗಡೆಯಾದ ಭಟ್ಕಳದ ಶಬೀರ್ ಮೌಲವೀ ಬಗ್ಗೆ ಯಾರಿಗೂ ಗೊತ್ತಿಲ್ಲ.ಒಂಬತ್ತು ವರ್ಷ ಹಿಂದೆ ಪೂನಾದ ಮಸೀದಿಯಲ್ಲಿ ಇಮಾಮ್ ಆಗಿ ಕೆಲಸ ಮಾಡುತ್ತಿದ್ದ ಮೌಲವೀಯನ್ನು ಟೆರರಿಸ್ಟ್ ಎಂಬ ಕಾರಣ ಹೇಳಿ ಬಂಧಿಸಿ ಇನ್ನಿಲ್ಲದ ಹಿಂಸೆ ನೀಡಿ ನಿರಪರಾಧಿ ಎಂದು ಬಿಡುಗಡೆಯಾಗಿ ಬಂದದ್ದು  ಪತ್ರಿಕೆಯಲ್ಲಿ ಒಂದು ಚಿಕ್ಕ ವರದಿ ಮಾತ್ರವಾಗಿತ್ತು.ಎಲ್ಲಿ ನಾವು ಎಡವುತ್ತಿದ್ದೇವೆ? ಎಲ್ಲಿ ಸೋಲುತ್ತಿದ್ದೇವೆ?ಪೋಲೀಸರಿಂದ ಅನ್ಯಾಯವಾದರೆ ಇಡೀ ಪೋಲೀಸ್ ವ್ವವಸ್ಥೆಯನ್ನೂ ಅಪರಾಧಿಯಾಗಿಸಬಾರದು.ಅದು ದೊಡ್ಡ ಅನಾಹುತವಾದಿತು.ಕಾರಣ ನಮ್ಮಲ್ಲಿ ಕಾನೂನು ಸುವ್ಯವಸ್ಥೆ ಇರೋದ್ರಿಂದ ಕೊರಳಿಗೆ ಕೈಗೆ ಇಡೀ ದೇಹಕ್ಕೆ  ಕಿಲೋ ಲೆಕ್ಕ ಒಡವೆ ಹಾಕಿ ನಮ್ಮ ಅಕ್ಕ ತಂಗಿಯರು ನಡೆದಾಡುತ್ತಾರೆ.ಕೋಟಿಗಟ್ಟಲೆ ವ್ಯಾಪಾರ ವಹಿವಾಟು ವಸ್ತು ಬಝಾರಲ್ಲಿ ಹಾಕಿ ಬೀಗ ಹಾಕಿ ಮನೆಯಲ್ಲಿ ಆರಾಮವಾಗಿರುತ್ತೇವೆ.ನಮ್ಮ ಮನೆಯಲ್ಲಿ ಮಡದಿ ಮಕ್ಕಳನ್ನು ಬಿಟ್ಟು  ಗಲ್ಪ್ ಗೆ ಹೋಗಿ ದುಡಿಯುತ್ತೇವೆ. ಇದು ಸುಖಾಸುಮ್ಮನೆ ಲಭಿಸೋದಲ್ಲ ಸುವ್ಯವಸ್ಥೆ ಕಾಪಾಡೋ ಪೋಲಿಸರ ಕಾರಣದಿಂದ ಮಾತ್ರ ಸಾಧ್ಯವಾಗುತ್ತದೆ. ಆ ಇಲಾಖೆಯನ್ನು ದೂರಕೂಡದು. ಯಾರು ಅನ್ಯಾಯ ಮಾಡುತ್ತಾರೋ ಅವರನ್ನು ಮಾತ್ರ ಕಾನೂನಿನ ಕೈಗೆ ಒಪ್ಪಿಸಬೇಕು. ಅದಕ್ಕಾಗಿ ಕಾನೂನಿನ ಬಲದೊಂದಿಗೆ ಹೋರಾಡಬೇಕು.

law and order ದೊಡ್ಡ ವಿಚಾರ!
ನಮ್ಮ ಊರಲ್ಲಿ ಶಾಂತಿ ಸಮಧಾನ ತರಲು ಸಾಧ್ಯವಿರುವ ಇಲಾಖೆ  ಪೋಲೀಸ್ ಇಲಾಖೆ ಎಲ್ಲ ಅನೈತಿಕ ಚಟುವಟಿಕೆಗಳನ್ನು ಮಟ್ಟ ಹಾಕಲು ಇರುವ ಇಲಾಖೆ ಅದು.ಗಾಂಜಾ ಅಮಲು ಪದಾರ್ಥ ದಂಧೆಗೆ ಕಡಿವಾಣ ಹೇರಲು ಅದಕ್ಕೆ ಸಾಧ್ಯ.
*ನಾನು ಪ್ರಶ್ನೆ ಮಾಡತ್ತೇನೆ ಯಾಕೆ ನಮಗೆ ಆ ಇಲಾಖೆಯಲ್ಲಿ ಸೇವೆ ಸಲ್ಲಿಸಬಾರದು.?ದೊಡ್ಡ ಸಂಖ್ಯೆಯಲ್ಲಿ ಯಾಕೆ ಸೇರಬಾರದು?*
*ಲಾಠಿಯಿಂದ ಪೆಟ್ಟು ತಿನ್ನುವವರು ಯಾಕೆ ಲಾಠಿ ಹಿಡಿಯಬಾರದು?ಕೆಲವರು ಹೇಳ್ತಾರೆ ನಮಗೆ ಅಲ್ಲಿ ಕೆಲಸ ಸಿಗಲ್ಲ ಅಂತ. ನಮ್ಮ ಹೋರಾಟ ಅಲ್ಲಿ ನಡೆಯಬೇಕು ಮುಸ್ಲಿಮರಿಗೆ ಸಿಗಬೇಕಾದ ಅರ್ಹವಾದ ಸ್ಥಾನಮಾನ, ಪ್ರಾತಿನಿಧ್ಯ ಕ್ಕಾಗಿ ಹೋರಾಡಬೇಕು.*ಪೋಲೀಸ್ ಇಲಾಖೆಯಲ್ಲ್ಲಿ ಮುಸ್ಲಿಮರ ಸಂಖ್ಯೆ ಎಷ್ಟಿದೆ? ನಮ್ಮ ದೇಶದಲ್ಲಿ ಸುಮಾರು ಹದಿನೇಳು ಲಕ್ಷ ಪೋಲೀಸರಿದ್ದರೆ,ಒಂದು ಲಕ್ಷ ಮಂದಿಗೆ  137 ರಷ್ಟು ಪೋಲೀಸರಿದ್ದಾರೆ.2015 ರ ಲೆಕ್ಕ ಪ್ರಕಾರ 17,31537 ಪೋಲೀಸರಲ್ಲಿ ಮುಸ್ಲಿಮರು 1,08,602. 2005 ರಲ್ಲಿ 13 ಲಕ್ಷ ಪೋಲೀಸರಲ್ಲಿ ಮುಸ್ಲಿಮರಿದ್ದುದು 1,00,634?
ಕರ್ನಾಟಕದಲ್ಲಿ  74,699 ಪೋಲೀಸರಲ್ಲಿ ಮುಸ್ಲಿಮರ ಪ್ರಾತಿನಿಧ್ಯ 4766 ಶೇಕಡಾ 6.04%.ಕರ್ನಾಟಕದಲ್ಲಿ ಈಗ ಕಾರ್ಯಾಚರಿಸುವ IAS.  ಅಧಿಕಾರಿಗಳು ಕೇವಲ ಹದಿಮೂರು.
ಶಮೀಮ್ ಬಾನು,ಮುಹಮ್ಮದ್ ಸನಾವುಲ್ಲಾ,ಜವಾದ್ ಅಕ್ತರ್,ಝಮೀರ್ ಪಾಶ,ಎಲ್ ಕೆ ಅತಿಕ್ರಮಣ,ಏ ಸಾದಿಲ್ವಾರು,ಅಂಜುಮ್ ಫರ್ವೀಝ್ ಎಮ್ ಮುಹ್ಸಿನ್,ಅಬ್ದುಲ್ ಕಲಾಂ,ಸಲ್ಮಾ,ಸಯ್ಯಿದ್ ಸಲೀಂ,ಅನ್ವರ್ ಪಾಶಾ, ಜಾಫರ್ ಪಿ ಸಿ.IPS ಅಧಿಕಾರಿಗಳು ಕೇವಲ ಎಂಟು ಮಾತ್ರ? ಏ ಆರ್ ,ಇನ್ಫೆಂಟ್,ಜಿ ಎಂ ಹಯಾತ್,ಹಫೀಝ್,ನಿಸಾರ್ ಅಹ್ಮದ್,ಮುಹಮ್ಮದ್ ಎಸ್,ವಾಝಿರ್ ಅಹ್ಮದ್, ಅಬ್ದುಲ್ಲಾ ಸಲೀಂ, ಉಲ್ಫತ್ ಹುಸೇನ್?
ಆರು ಕೋಟಿ ಕನ್ನಡಿಗರಗಲ್ಲಿ ಶೇಕಾಡಾ %13 ರಷ್ಟು ಮುಸ್ಲಿಮರಿಗಾಗಿ ಇರುವ ಪ್ರಾತಿನಿಧ್ಯ? ನಾವು ಆಲೋಚಿಸುತ್ತಿಲ್ಲ!74,699 ಪೋಲೀಸರಲ್ಲಿ ಮುಸ್ಲಿಮರು 4796?

2001ರಲ್ಲಿ ನಮ್ಮ ಜನಸಂಖ್ಯೆ 13 ಕೋಟಿ 81 ಲಕ್ಷ?
2011ರಲ್ಲಿ 17 ಕೋಟಿ 22 ಲಕ್ಷ?
2006 IPS ಅಧಿಕಾರಿಗಳು 3209 ,ಮುಸ್ಲಿಂ IPS ಕೇವಲ 125.
2016 IPS ಅಧಿಕಾರಿಗಳು  3754 ಮುಸ್ಲಿಂ IPS ಕೇವಲ. 120
ಹತ್ತು ವರ್ಷದಲ್ಲಿ  5 ಕಮ್ಮಿ!
2006 ರಲ್ಲಿ IAS ಅಧಿಕಾರಿಗಳು 4790 .ಮುಸ್ಲಿಂ IAS ಕೇವಲ 142 .
2016 ರಲ್ಲಿ IAS ಅಧಿಕಾರಿಗಳು 4926 .ಮುಸ್ಲಿಂ IAS 164.ಮಾತ್ರ
ಇದೆಲ್ಲಾ ಸಾಚಾರ್ ವರದಿ!
ಟೋಟಲಿ ಇಂಡಿಯನ್ ಮುಸ್ಲಿಂ ಒಬ್ಬನಿಗೆ 1000 ರೂಪಾಯಿ ಖರ್ಚು ಮಾಡುವ ತಾಕತ್ತು ಇಲ್ಲ.ದೊಡ್ಡ ಅಹಂ ನಲ್ಲಿದ್ದೇವೆ. sc/st ಗಿಂತ ಕೆಲವರ್ಗದಲ್ಲಿದ್ದೇವೆ.ಹಿಂದುಳಿದಿದ್ದೇವೆ ಎಂದು ಅರ್ಥ. ಸಾಚಾರ್ ವರದಿ ಬಳಿಕವೂ ನಾವು ಬದಲಾಗಲಿಲ್ಲ.
the Indian times ಹೇಳುತ್ತದೆ (26/12/2016) ten years after sacha report.
ಗೌಜಿ ಗಮ್ಮತ್ತಿನಲ್ಲೇ ಇದ್ದೇವೆ.ನಮ್ಮ ಹೆಂಗಸರಿಗೆ ಮನೆಯಲ್ಲಿ ಸೀರೆ ಇಡಲು ಜಾಗ ಇಲ್ಲ. ಉಡಲು ಹೊಸ ಸಾರಿ ಇಲ್ಲ.!ಕಾಸರಗೋಡು, ದ.ಕ ಜಿಲ್ಲೆಯ ಹೆಂಗಸರಲ್ಲಿರುವ ಒಂದೊಂದು ಲಕ್ಷದ ಸಾರಿ ಒಮ್ಮೆ ಉಟ್ಟದ್ದು ಒಂದರ ಮೇಲೊಂದರಂತೆ ಇಟ್ಟರೆ ಹಿಮಾಲಯ ಮುಟ್ಟಬಹುದು.ಉದ್ದಕ್ಕಿಟ್ಟರೆ ಕನ್ಯಾಕುಮಾರಿಯವರೆಗೂ ತಲುಪಬಹುದು. ಒಡವೆ ಬಂಗಾರದಿಂದ ಬೆಂಗಳೂರಿನ ನಗರದ ಮೇಲೆ ಓವರ್ ಫ್ಲೋ ಬೆಳ್ಳಿ ಬ್ರಿಡ್ಜ್ ನಿರ್ಮಿಸಬಹುದೇನೋ?
ಆದರೆ ಸಂಪತ್ತಿನ ಸದುಪಯೋಗ ಇಲ್ಲ.
ನಮ್ಮ ಹುಡುಗರು ಗ್ರೌಂಡಲ್ಲಿದ್ದಾರೆ ಫಿಟ್ನೆಸ್ಗಾಗಿ ಜಿಮ್ಮಿಗೆ ಹೋಗ್ತಾರೆ.ಹಣ. ಸಾವಿರಾರು ಫೋಲ್ ಮಾಡ್ತಾರೆ. ಆದರೆ ಪೋಲೀಸ್ ಇಲಾಖೆಗೆ ಸೇರಿದರೆ ಪಿಟ್ನೆಸ್ ಬರುತ್ತದೆ ಸಂಬಳ,ಫುಡ್,ಉದ್ಯೋಗ ಸಿಗುತ್ತದೆ.ಕೆಲಸವಿಲ್ಲದೇ ಬರೀ ರೋಡ್ ರೋಮಿಯೋ ಆಗಿ ಹೆಣ್ಮಕ್ಕಳನ್ನು ಚುಡಾಯಿಸೋದಕ್ಕಿಂತ ಪೋಲಿಸ್ ಅಧಿಕಾರಿಯಾಗಿ ನಿರುದ್ದೋಗಿ ಯುವಕರನ್ನು ಲಾಠಿ ಹಿಡಿದು ಸರಿ ದಾರಿಗೆ ತರಬಹುದು.ನಮ್ಮ ಬೆವರು ,ಶಕ್ತಿ,ಕರೇಜ್ ವೇಸ್ಟಾಗಬಾರದು.ಪೋಲೀಸ್ ಇಲಾಖೆ ಪುಣ್ಯಕಾರ್ಯ ಎಂದು ತಿಳಿಯಬೇಕು.

Responsible for the prevention and deduction  Of crime and the maintenance of public order. ಕಾನೂನು ಸುವ್ಯವಸ್ಥೆ ಯನ್ನು ಕಾಪಾಡುವದಾಗಿದೆ ಅಪರಾಧ ವನ್ನು ನಿಗ್ರಹಿಸೋದಾಗಿದೆ ಅದು ಧರ್ಮ ಕಾರ್ಯ.ಪೋಲೀಸ್ power
Obedient
Liberty
Intelligent
Courageous
Efficient
ಆಗಿದೆ.ಏನಾದರೂ ಎಡವಟ್ಟಾದರೆ ಕಾನೂನಾತ್ಮಕವಾಗಿ ನ್ಯಾಯ ಕೇಳಬೇಕು.ಅದಕ್ಕೆ ನಮ್ಮಲ್ಲಿ ಹೆಚ್ಚು ಅಧಿಕಾರಿಗಳು ಬೇಕು.ನಾವು ಇಂಗ್ಲಿಷ್ ಕಂಪನಿ,ಇಂಗ್ಲೆಂಡ್ ಕಂಪನಿಯನ್ನು ಹುಡುಕುತ್ತೇವೆ?ಎರಡು ಲಕ್ಷ ಸಂಬಳ ಬರಬೇಕು?
ಡಾಕ್ಟರ್ ಆಗಿ ಇಂಜಿನಿಯರ್ ಆಗಿ ಕೋಟಿ ಸಂಪಾದನೆ ಮಾಡಿ ಮನೆ ,ಬಂಗಲೆಕಟ್ಟಬಹುದು ಆದರೆ ಕಾನೂನು ಸುವ್ಯವಸ್ಥೆ ಕಾಪಡಲು ಪೋಲಿಸ್ ಬೇಕು.ಇಲ್ಲವಾದರೆ ಕಿಲೋ ಬಂಗಾರ ಹಾಕ್ಕೊಂಡು ಹೇಗೆ ದಾರಿಯಲ್ಲಿ ನಡೆಯಬಹುದು?
ಆದ್ದರಿಂದ ಬೀದಿ ಪೆಟ್ಟಿಗಿಂತ ಲಾಠಿ ಹಿಡಿದು ನ್ಯಾಯ ವನ್ನು ಕಾಪಾಡಬೇಕು.ನಮ್ಮಪ್ರಾತಿನಿದ್ಯ ಅಲ್ಲಿ ಅನಿವಾರ್ಯ.ನಮ್ಮ ಚಿಂತನೆ ಬದಲಾಗಬೇಕು.ಎರಡು ರುಪಾಯಿಗೆ ಹತ್ತು ರೂ ಸಂಪಾದಿಸಬೇಕು.
ಗೋಣಿಯಲ್ಲಿ ಭತ್ತ ತುಂಬಲು ಸುಲಭ ಆದರೆ ಭತ್ತ ಬೆಳೆವವರಾಗಬೇಕು.
ಮೊಟ್ಡೆಯ ಒಳಗಿಂದ ಒಂದು ಜೀವ ವನ್ನು ತರಲೂ ಸಾದ್ಯವಿದೆ‌.ಅದು ಬುಧ್ದಿವಂತಿಕೆಯಿಂದ. ಅನ್ಯಾಯಕ್ಕೆ ನ್ಯಾಯ ಒದಗಿಸಲು ಪೋಲಿಸ್ ಇಲಾಖೆ ಸೂಕ್ತ ಪರಿಹಾರ. ಶಬೀರ್ ಮೌಲ್ವಿ ಮಾತ್ರವಲ್ಲ ಅಮೀರ್ ಖಾನ್ ಬಗ್ಗೆ ಗೊತ್ತಿದೆಯಾ?
ನಮಗೆ ಗೊತ್ತು ರೀಲ್ ಅಮೀರ್ ಮಾತ್ರ ರಿಯಲ್ ಅಮೀರ್ ಯಾರು? Hindustan times ಬರೆದಿದೆ. (27/01/2016) my fourteen years struggle to prove my innocence
ಹದಿನಾಲ್ಕು ವರ್ಷ ತನ್ನ ನಿರಪರಾಧಿತ್ವ ವನ್ನು ಸ್ತಾಪಿಸಲು ಹೋರಾಡಿದ ಅಮೀರ್
1998 ರಲ್ಲಿ ಬಂದಿಯಾದ ಅಮಾಯಕ?
ತಂದೆಯ ಸಾವಿಗೂ ಬರಲಿಲ್ಲ.
ತಾಯಿಯ ಕಷ್ಟಕ್ಕೂ ಬರಲಾಗಲಿಲ್ಲ.
ಅವಾಗಲೆಲ್ಲಾ ಗಾಝಿಯಾಬಾದ್,ತಿಹಾರ್ ಜೈಲಲ್ಲಿ
ಕೀಳಲ್ಪಟ್ಟ ಉಗುರಿನ ನೋವನ್ನು ಅನಭವಿಸುತ್ತಿದ್ದ.
ರಾಷ್ಟ್ರೀಯ ಮಾನವ ಹಕ್ಕು ಐದು ಲಕ್ಷ ಪರಿಹಾರ ಕೊಡಿಸಿತು‌ ಆದರೆ ಕಳೆದು ಹೋದ ಯವ್ವನ ,ಶಿಕ್ಷಣ, ಮಾನ ಮರ್ಯಾದಿ ಎಲ್ಲಿ ಸಿಗುತ್ತೆ?ಮರ್ಮಾಂಗಕ್ಕೆ ಕೊಟ್ಟ ಶಾಕ್ ಅದಕ್ಕೇನಿದೆ ಪರಿಹಾರ?
ಇಂತಹಾ ನೂರಾರು ಕಥೆಗಳು ವ್ಯಥೆಯಾಗಿ ದಾರಿ ತಪ್ಪದಿರಲು ನಾವು ಎಚ್ಚರಿಕೆ ವಹಿಸಬೇಕು.ಪ್ರತಿಭಟನೆ ಕಾನೂನಾತ್ಮಕ ವಾಗಿರಬೇಕು.
ಇಲ್ಲವಾದರೆ ಎನ್ಕೌಂಟರ್ ಕಸ್ಟಡಿ ಸಾವು ಸಹಜವಾಗಬಹುದು!
ಬುದ್ಧಿವಂತಿಕೆ, ಎಚ್ಚರಿಕೆಯಿಂದ ಇರಬೇಕು.ಹೆಚ್ಚುಹೆಚ್ಚು ಯುವಕರು
ಪೋಲಿಸ್ ಇಲಾಖೆ ಸೇರಿ ರಾಷ್ಟ್ರೀಯ ಸೇವೆಯಲ್ಲಿ ನಿರತರಾಗಬೇಕು.ಅದಕ್ಕಾಗಿ ಹೋರಾಡೋಣ.

*ಪ್ರವಾದಿ ಹೇಳಿದರು ಮುಸಲ್ಮಾನನಿಗೆ ಒಂದು ಹುತ್ತದಲ್ಲಿ ಎರಡು ಸಲ ಹಾವು ಕಚ್ಚದು!*
🖋
Sunnitoday