ಎಲ್ಲಾ ವಿವಾಹಿತರು, ಅವಿವಾಹಿತರು ಓದಲೇ ಬೇಕಾದ ಸಂದೇಶವಿದು.
ಒಬ್ಬ ಯುವಕ ಸುಂದರವಾದ ಯುವತಿಯೋರ್ವಳನ್ನು ಮೆಚ್ಚಿ ಮದುವೆಯಾದ. ಸೌಂದರ್ಯದ ಆರಾಧಕನಾದ ಅವನು ಅವಳನ್ನು ತುಂಬಾ ಪ್ರೀತಿಸುತಿದ್ದ. ಹೂವಿನಂತೆ ನೋಡಿಕೊಳ್ಳುತಿದ್ದ.ಕೆಲವು ವರ್ಷಗಳ ನಂತರ ಅವಳ ಸೌಂದರ್ಯ ಕುಂದಲಾರಂಭಿಸಿತು. ಗಂಡ ಎಲ್ಲಿ ತನ್ನಿಂದ ದೂರಾಗುವನೊ ಎಂದು ಹೆದರಿದ ಆತನ ಪತ್ನಿ, ಹೆಚ್ಚು ಹೆಚ್ಚು ಬ್ಯುಟಿ ಪಾರ್ಲರಗಳ ಮೊರೆ ಹೋಗತೊಡಗಿದಳು. ಕ್ರಮೇಣ ಅವಳನ್ನು ಚರ್ಮರೋಗ ಕಾಡತೊಡಗಿತು. ಖಿನ್ನತೆಗೆ ಒಳಗಾಗತೊಡಗಿದಳು. ಒಮ್ಮೆ ಅವಳನ್ನು ಬಿಟ್ಟು ಪ್ರವಾಸಕ್ಕೆ ತೆರಳಿದ ಗಂಡ ಆಕ್ಸಿಡೆಂಟ್ವೊಂದರಲ್ಲಿ ಕಣ್ಣು ಕಳೆದುಕೊಂಡ. ಆದಾಗ್ಯೂ ಅವರ ವೈವಾಹಿಕ ಜೀವನ ಮೊದಲಿನಂತೆ ಸಂತೃಪ್ತಿಯಿಂದ ಮುಂದುವರೆದಿತ್ತು. ಪತ್ನಿ ಅವನನ್ನು ಮಗುವಿನಂತೆ ನೋಡಿಕೊಳ್ಳುತಿದ್ದಳು. ಆದರೆ ಅವಳು ದಿನೆ ದಿನೆ ವಿರೂಪಳಾಗುತ್ತ ನಡೆದಳು. ಪತಿಗೆ ಇದಾವುದೂ ತಿಳಿಯಲೆ ಇಲ್ಲ. ಇಬ್ಬರ ನಡುವಿನ ಪ್ರೀತಿ ಕಡಿಮೆಯಾಗಲಿಲ್ಲ. ಒಂದು ದಿನ ಅವಳು ತೀರಿಕೊಂಡಳು. ಅತೀ ದುಖಿತನಾದ ಪತಿ ಎಲ್ಲ ಕಾರ್ಯಗಳನ್ನು ಮುಗಿಸಿದ. ಆ ಊರನ್ನೆ ಬಿಟ್ಟು ಹೊರಟ. ಅವನನ್ನು ಹಿಂದಿನಿಂದ ಕೂಗಿ ಕರೆದ ಆತನ ಸ್ನೇಹಿತನೊಬ್ಬ ಬಳಿಗೆ ಬಂದು ಕೇಳಿದ. ‘ಇಷ್ಟು ದಿನ ನಿನ್ನ ಹೆಂಡತಿ ನಿನ್ನನ್ನು ಮಗುವಿನಂತೆ ನೋಡಿಕೊಂಡಳು. ನಿನಗೆ ಕಣ್ಣೂ ಕಾಣಿಸದು ಅವಳಿಲ್ಲದೆ ಹೇಗೆ ಬದುಕುವೆ "ಎಂದು ಕೇಳಿದ. ಆಗ ಆತ ನೋವಿನಿಂದ ನುಡಿದ. ನಾನು ಕುರುಡನಲ್ಲ. ಹಾಗೆ ನಟಿಸುತ್ತಿದ್ದೆ. ನನ್ನ ಪತ್ನಿ ಚರ್ಮರೋಗದಿಂದ ಬಳಲುತಿದ್ದಳು. ಅವಳು ಕುರೂಪಿಯಾಗಿದ್ದಳು. ಅವಳಿಗೆ ನಾನು ಅವಳನ್ನು ಮೊದಲಿನಂತೆ ಪ್ರೀತಿಸಲಾರೆ ಎನ್ನುವ ನೋವು, ಅವಳ ಕಾಯಿಲೆಗಿಂತ ಹೆಚ್ಚು ಬಳಲಿಸುತಿತ್ತು. ನನಗೆ ಅದನ್ನು ಸಹಿಸಲು ಸಾಧ್ಯವಿರಲಿಲ್ಲ. ಅವಳು ಯಾವಾಗಲೂ ಸಂತೋಷದಿಂದ ಇರಬೇಕೆನ್ನುವುದೆ ನನ್ನ ಆಸೆಯಾಗಿತ್ತು. ನನ್ನ ತೋಳಿನಲ್ಲಿ ಅವಳು ಅದೆ ಪ್ರೀತಿಯೊಂದಿಗೆ ಸಾಯಬೇಕೆಂದು ಬಯಸಿದೆ. ಹೆಚ್ಚು ಹೆಚ್ಚು ಅವಳನ್ನು ಪ್ರೀತಿಸಿದೆ.
ನೀತಿ: ಗಂಡಸರೆಲ್ಲ ಕೆಟ್ಟವರೆ ಅಲ್ಲ. ಅನೇಕ ಬಾರಿ ಪತಿ ಪತ್ನಿ ಪರಸ್ಪರರ ಕುಂದು ಕೊರತೆ ದೌರ್ಬಲ್ಯಗಳನ್ನು ಬದಿಗಿರಿಸಿ ಸುಂದರವಾದ ಬದುಕನ್ನು ತಮ್ಮದಾಗಿಸಿಕೊಳ್ಳಬೇಕು. ಕೇವಲ ಸುಂದರವಾದ ಮನೆ ಕಟ್ಟಿದರಷ್ಚೆ ಸಾಲದು, ಆ ಸುಂದರ ಮನೆಯಲ್ಲಿ ಸುಂದರವಾಗಿ ಬಾಳುವುದ ಕಲಿಯಬೇಕು .ಹೌದು ತಾನೆ ಒಪ್ಪುತ್ತಿರಲ್ಲವೆ ?
ಅನಾಮಿಕ