ಬುಧವಾರ, ಏಪ್ರಿಲ್ 12, 2017

ತಲಾಖ್

ಮಾಧ್ಯಮದವರ ಪ್ರಕಾರ UP ಚುನಾವಣೆಯಲ್ಲಿ 'ಟ್ರಿಪಲ್ ತಲಾಕ್' ಪ್ರಮುಖ ವಿಷಯ ಆಗಿದ್ದರಿಂದ ಮುಸ್ಲಿಂ ಮಹಿಳೆಯರು ಭಾರೀ ಸಂಖ್ಯೆಯಲ್ಲಿ BJPಗೆ ಓಟು ಹಾಕಿದ್ದಾರೆ. ಅದನ್ನು ಸತ್ಯ ಅಂತ ಬಿಂಬಿಸಲು ಯೋಗಿ ಮುಖ್ಯಮಂತ್ರಿ ಆಗಿ ನೇಮಕ ಆದ ಮೇಲೂ 'ಟ್ರಿಪಲ್ ತಲಾಕ್' ಕುರಿತು ಚರ್ಚೆ ಮುಂದುವರೆಸಿವೆ.

ಹೌದು ಮಾರಾಯ್ರೇ... ಎಲ್ಲಿಯಾದರೂ ಬೆರಳಿಣಿಕೆಯಷ್ಟು 'ಟ್ರಿಪಲ್ ತಲಾಕ್' ನಡೆಯುತ್ತದೆ. ಅದನ್ನು ಯೋಗಿ ಮುಖ್ಯಮಂತ್ರಿ ಮಾಡಲು ಧಾರಾಳವಾಗಿ ಬಳಸಿ ಬೇಕಂತಲೇ ಚರ್ಚೆಗೆ ಎಳೆದು ತರಲಾಗಿತ್ತು ಮತ್ತು ಈಗಲೂ ತರಲಾಗುತ್ತಿದೆ. ಭಾರತದ ಒಟ್ಟು ಮುಸ್ಲಿಂ ಜನಸಂಖ್ಯೆ 20-22 ಕೋಟಿಯಲ್ಲಿ ಒಂದು ನಾಲ್ಕೈದು ಜನ ತಲಾಕಿನ ಮೂಲಕ ಬೇರ್ಪಡುತ್ತಿರುವುದು "ರಾಷ್ಟ್ರೀಯ ಆಪತ್ತು" ಎಂಬಂತಿದೆ ಇವರ ನಡೆ.

ಈ ರೀತಿ ನಾಲ್ಕೈದು ಜನ ತಮ್ಮ ವೈವಾಹಿಕ ಜೀವನದಲ್ಲಿ ಸಂತುಷ್ಟರಾಗದೇ ಬೇರ್ಪಡುವುದೇ ಭಾರತದ GDP ಕುಸಿಯಲು ಕಾರಣ, ವಿಕಾಸ ದರ ನಿಂತು ಹೋಗಲು ಕಾರಣ, ಆಮದು ರಫ್ತಿನ ಸಂತುಲನ ಕೆಡಲು ಕಾರಣ, ಡಾಲರ್ ಎದುರು ರೂಪಾಯಿಯ ಮೌಲ್ಯ ಕುಸಿಯಲು ಕಾರಣ, ಅಂತರ್ರಾಷ್ಟ್ರೀಯ ಸ್ತರದಲ್ಲಿ ಭಾರತದ ವಿದೇಶಾಂಗ ನೀತಿಯ ಮೇಲೆ ಪ್ರಭಾವ ಬೀರಲು ಕಾರಣ, SAARCನಿಂದ ಹಿಡಿದು G-20 ಶೃಂಗ ಸಭೆಗಳಲ್ಲಿ ಮುಖ ತೋರಿಸಲು ನಾಚಿಕೆ ಆಗಲು ಕಾರಣ ಆಗಿರುವುರಿಂದ ಇದು ಬಹಳ ಚಿಂತೆಯ ವಿಷಯ ಎಂಬಂತೆ ನಮ್ಮ ದೇಶಭಕ್ತ ಮೀಡಿಯ ಚರ್ಚಿಸುತ್ತಿದೆ. ದೇಶದ ಬಗ್ಗೆ ತನ್ನ ಕರ್ತವ್ಯ ನಿಭಾಯಿಸುತ್ತಿದೆ!

ಎಲ್ಲಿ ಯಾರಾದರೂ ಬೇರ್ಪಟ್ಟರೆ ರಾಷ್ಟ್ರೀಯ ಆಪತ್ತು ಎಂಬಂತೆ ಬಿಂಬಿಸಲಾಗುತ್ತಿದೆ. ಸ್ವಲ್ಪ  ನಮ್ಮ ಮೀಡಿಯದ ಹೆಡಿಂಗುಗಳನ್ನು ಅವಲೋಕಿಸಿ :
"ಫೋನಿನಲ್ಲಿ ಪತ್ನಿಗೆ ತಲಾಕ್ ಕೊಡಲಾಯಿತು"
"ಪತ್ರದ ಮೂಲಕ ತಲಾಕ್ ಕೊಡಲಾಯಿತು"
"SMS ಮೂಲಕ ತಲಾಕ್ ಕೊಡಲಾಯಿತು, ಪತ್ನಿ ರೈಲು ಹಳಿಯ ಮೇಲೆ ಮಲಗಿದಳು"
"Facebookನ ಮೂಲಕ ತಲಾಕ್ ಕೊಡಲಾಯಿತು"
"Twitterನ ಮೂಲಕ ತಲಾಕ್ ಕೊಡಲಾಯಿತು, ಪತ್ನಿಯಿಂದ ತನ್ನ ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನ". ಎಲ್ಲವುದಕ್ಕೂ ಒಂದು ಮಿತಿ ಇದೆ ಮಾರಾಯ್ರೇ!

ಯಾರಿಗಾದರೂ ತನ್ನ ವೈವಾಹಿಕ ಜೀವನವನ್ನು ಸಮಾಪ್ತಿಗೊಳಿಸಲು ತನ್ನ ಪತ್ನಿಯೊಂದಿಗೆ  ತಲಾಕ್ ಹೇಳುವುದು/ಕೊಡುವುದು ಒಂದು ಸಂದೇಶ ಮಾತ್ರ ಆಗಿದೆ ಮತ್ತು ಅದಕ್ಕಾಗಿ ಪ್ರಪಂಚದ ಬದಲಾಗುತ್ತಿರುವ ಮಾಧ್ಯಮಗಳ ಮುಖಾಂತರ ಆ ಸಂದೇಶ ಕಳುಹಿಸಿದರೂ ಇವರಿಗೆ ಅದರಿಂದ ಆಪತ್ತಿ ಇದೆ ಮತ್ತು ಅದರ ಮೇಲೆ ಇನ್ನೊಂದು ಆರೋಪವನ್ನೂ ಜಡೆದು ಬಿಡುತ್ತಾರೆ ಏನೆಂದರೆ ಮುಸ್ಲಿಮರು ಕಾಲಕ್ಕೆ ತಕ್ಕಂತೆ ತನ್ನ ಧರ್ಮದಲ್ಲಿ ಯಾವ ಬದಲಾವಣೆಯನ್ನೂ ಮಾಡಿಕೊಳ್ಳುತ್ತಿಲ್ಲ! ಇಸ್ಲಾಮಿನಲ್ಲಿ ನಿಕಾಹ್ ಇರಲಿ ತಲಾಕ್, ಎರಡೂ ಕೇವಲ ಒಪ್ಪಿಗೆ(ಕಬೂಲ್) ಕೊಡುವುದು ಮತ್ತು ಸಂದೇಶ ಕೊಡುವ ಮುಖಾಂತರವೇ ನಡೆಯುತ್ತದೆ.

22 ಕೋಟಿ ಜನಸಂಖ್ಯೆಯಲ್ಲಿ ಯಾರಾದರೂ 4-5 ಜನ ತಲಾಕಿನ ವ್ಯವಸ್ಥೆಯ ದುರುಪಯೋಗ ಮಾಡಿಕೊಂಡಿದ್ದನ್ನೇ ಹಿಡಿದುಕೊಂಡು, ಮೀಡಿಯಾ ತಲಾಕಿನ ಹೊರತು ಈ ದೇಶದಲ್ಲಿ ಬೇರೆ ಯಾವುದೇ ಸಮಸ್ಯೆ ಇಲ್ಲ ಎಂಬಂತೆ ವರ್ತಿಸುತ್ತಿದೆ. ಆ 4-5 ಜನರ ಹೊರತು ಉಳಿದ 22 ಕೋಟಿ ಜನರು ಅದೇ ಇಸ್ಲಾಮಿಕ್ ವ್ಯವಸ್ಥೆಯಲ್ಲಿ ಸಫಲ ವೈವಾಹಿಕ ಜೀವನ ಕಳೆಯುತ್ತಿರುವ ಕುರಿತು ಕಣ್ಣಿಗೆ ಬಟ್ಟಿ ಕಟ್ಟಿಕೊಳ್ಳುತ್ತದೆ.

ಯಾವಾಗಲಾದರೂ ಒಮ್ಮೆ ಯಾವುದಾದರೂ 'ಮಂಗಲಿಕ್' ಹೆಣ್ಣು ಮಕ್ಕಳ ನೋವನ್ನೂ ಸ್ವಲ್ಪ  ಕೇಳಿ ನೋಡಿ. ಖಂಡಿತ ಕಣ್ಣು ತೇವಗೊಳ್ಳುವುದು. ಇದು ತಲಾಕಿನಿಗಿಂತ ಭೀಬತ್ಸ ಸ್ಥಿತಿ ಆಗಿದೆ.

ವೈವಾಹಿಕ ಜೀವನವನ್ನು ಸಫಲಗೊಳಿಸುವ ಜವಾಬ್ದಾರಿ ಕೇವಲ ಪುರುಷರದ್ದು ಮಾತ್ರ ಆಗಿರದೇ ಅದು ಅಷ್ಟೇ ಪ್ರಮಾಣದಲ್ಲಿ ಮಹಿಳೆಯರದ್ದೂ ಆಗಿದೆ. ಯಾರೂ ಬೇಕಂತಲೇ ತನ್ನ ವೈವಾಹಿಕ ಜೀವನ ಕೊನೆಗೊಳಿಸ ಬಯಸುವುದಿಲ್ಲ. ಏಕೆಂದರೆ ಇದು ಮಾನಸಿಕವಾಗಿ ಬಹಳಷ್ಟು ಹಿಂಸೆ ಕೊಡುತ್ತದೆ. ಒಂದುವೇಳೆ ವೈವಾಹಿಕ ಜೀವನವು ಈ ಮಾನಸಿಕ ಹಿಂಸೆಗಿಂತಲೂ ಅಧಿಕ ತ್ರಾಸದಾಯಕ ಅನಿಸಿದರೆ ಬೇರ್ಪಡುವುದೇ ಅಂತಿಮ ವಿಕಲ್ಪ ಅಂತಾದಾಗ ಮಾತ್ರ, ಇಸ್ಲಾಮಿನಲ್ಲಿ ಅದಕ್ಕೆ ಅತ್ಯಂತ ಸರಳ ಪ್ರಕ್ರಿಯೆ ತಲಾಕ್ ಇದೆ. ಈ ಕಾರಣದಿಂದಾಗಿಯೇ ಮುಸ್ಲಿಮರಲ್ಲಿ ಸೊಸೆಯನ್ನು ಸುಡುವ, ಸೊಸೆಯ ಆತ್ಮಹತ್ಯೆಯಂತಹ ಉಧಾಹರಣೆಗಳು ಭಾರೀ ವಿರಳ ಅನಿಸಿವೆ.

ಇಸ್ಲಾಮಿಕ್ ವ್ಯವಸ್ಥೆಯಲ್ಲಿ ಪತಿ ಮತ್ತು ಪತ್ನಿ ಮಧ್ಯೆ ಸಂತುಷ್ಟಿ ಇಲ್ಲದಾಗಿನ ಒಂದು ಸರಳ ಪ್ರಕ್ರಿಯೆ ಆದ 'ತಲಾಕ್' ಮತ್ತು 'ಖುಲಾ'ಗಳ ಮುಖಾಂತರ ಬೇರ್ಪಟ್ಟು ಹೊಸದಾಗಿ ವಿವಾಹ ಆಗಬಹುದಾಗಿದೆ ಮತ್ತು 99.5% ಪ್ರಕರಣಗಳಲ್ಲಿ ಹೀಗೆಯೇ ಸಂಭವಿಸುತ್ತದೆ.

ವೈವಾಹಿಕ ಸ್ತಂಭ ಮುರಿದು ಬೀಳಲಿಕ್ಕೆ ಕೇವಲ ಪುರುಷನೇ ಕಾರಣೀಕರ್ತ ಆಗಿರದೇ ಮಹಿಳೆಯರೂ ಆಗಿರುತ್ತಾರೆ. ಒಂದುವೇಳೆ ಮಹಿಳೆ ಪುರುಷನ ಇಚ್ಛೆಯ ಅನುಸಾರ ಇರದಿದ್ದರೆ ಅದು ಆ ಮಹಿಳೆಯದ್ದೇ ದೋಷ ಮತ್ತು ಅದೇ ರೀತಿ ಒಂದುವೇಳೆ ಪುರುಷನೂ ತನ್ನ ಪತ್ನಿಯ ಇಚ್ಛೆಯ ವಿರುದ್ಧ ಹೋದರೆ ಪುರುಷನ ದೋಷ. ಇಬ್ಬರಲ್ಲಿ ಯಾರಾದರು ಒಬ್ಬರೂ ಅಸಂತುಷ್ಟರಾಗುವುದೇ ಬೇರ್ಪಡುವ ಪ್ರಕ್ರಿಯೆಗೆ ಜನ್ಮ ಕೊಡುತ್ತದೆ.

ಹೇಳುವ ತಾತ್ಪರ್ಯ ಏನೆಂದರೆ ಒಂದು ಸರಳ ಪ್ರಕ್ರಿಯೆಯ ಮುಖಾಂತರ ಬೇರ್ಪಡುವ ಜವಾಬ್ದಾರಿ ಪತಿ ಮತ್ತು ಪತ್ನಿ ಇಬ್ಬರಿಗೂ ಇರುತ್ತದೆ. ಆದರೆ ಇಂದು ಅದೃಷ್ಟವಶಾತ್ ಮಹಿಳೆಯು ಒಂದು ಮನೋವೈಜ್ಞಾನಿಕ ಕರುಣೆಯ ಕೋನ ಹೊಂದಿರುವುದರಿಂದ, ಅವಳ ದೋಷ ಅಡಗಿಕೊಂಡು ಪುರುಷನೇ ಎಲ್ಲವುದಕ್ಕೂ ಕಾರಣೀಕರ್ತ ಎನಿಸಿಕೊಳ್ಳುತ್ತಾನೆ.

ಅಂತಿಮವಾಗಿ ತೀರ್ಮಾನಿಸಿ ನೋಡಿ, ಯಾವ ತಲಾಕ್ ಅಥವ ಬೇರ್ಪಡಲು ಮಹಿಳೆಯೂ ಅರ್ಧಾಂಶ ಕರಣೀಕರ್ತಳಾಗಿದ್ದೂ "ತಲಾಕ್" ಅನ್ನುವುದು ರಾಷ್ಟ್ರೀಯ ವಿವಾದ ಅನಿಸಿಕೊಂಡಿದೆ ಮತ್ತು ಜನ್ಮ ಪಡೆಯುವ ಸಮಯ ಗೃಹ / ನಕ್ಷತ್ರಗಳ ಆಧಾರದ ಮೇಲೆ ಪಂಡಿತರ ಮುಖಾಂತರ ಮಾಡಲ್ಪಡುವ ಕುಂಡಲಿಯ ಆಧಾರದ ಮೇಲೆ ಒಂದು ಹೆಣ್ಣು ಮಗಳಿಗೆ 'ಮಾಂಗಲಿಕ' ಅಂತ ಕರೆದು ತನ್ನ ಇಚ್ಛೆಯ ವರನನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗುತ್ತದೆ. ಅಂತಹವಳು ತನ್ನ ಮನಃದಿಚ್ಛೆಯನ್ನು ಅದುಮಿ ತನ್ನ ಮಟ್ಟದಿಂದ ಅತೀ ಕೆಳಮಟ್ಟದವರನ್ನು ವಿವಾಹ ಮಾಡಿಕೊಳ್ಳಬೇಕಾಗುತ್ತದೆ. ಅದರಲ್ಲೂ ಅಂತಹವರ ವಿವಾಹ ಎಲ್ಲ ಅಡಚಣೆಗಳನ್ನು ಬಗೆ ಹರಿಸಿ ಬಹಳ ಸಮಯದ ಮೇಲೆ ನೆರವೇರುತ್ತದೆ. ಗಮನಿಸಬೇಕಾದ ಅಂಶ ಎಂದರೆ ಇವೆಲ್ಲವುದರಲ್ಲಿ ಅವಳ ಯಾವ ತಪ್ಪೂ ಇರುವುದಿಲ್ಲ. ಇಂತಹದ್ದು ರಾಷ್ಟ್ರೀಯ ಆಪತ್ತಿ ಅನಿಸಿಕೊಳ್ಳುವುದು ಬಿಡಿ ಚರ್ಚೆಗೂ ಯೋಗ್ಯ ಅನಿಸಿಕೊಳ್ಳುವುದಿಲ್ಲ ಅಂದರೆ ?!

*ಸಹಾಬುದ್ದೀನ್ ಸುಹೈಲ್* FB post