ಮಂಗಳವಾರ, ಏಪ್ರಿಲ್ 18, 2017

KSRTC ಪ್ರವಾಸಿಗರಿಗೆ ವಾಹನ ಬಾಡಿಗೆಗೆ ಇದೆ.

ಪ್ರವಾಸ ಮುಂತಾದವುಗಳಿಗೆ ಹೋಗುವಾಗ ಪ್ರವಾಸಿಗಳ ಸಂಖ್ಯೆಗನುಗುಣವಾಗಿ ವಾಹನಗಳನ್ನು ಬಾಡಿಗೆಗೆ ಪಡೆಯುತ್ತೇವೆ.
ಇಂತಹವುಗಳಿಗಾಗಿ ಖಾಸಗಿ ಟೂರಿಸ್ಟ್ ವ್ಯಾನು, ಬಸ್ಸುಗಳ ಜೊತೆಗೆ ಸರಕಾರಿ ಸ್ವಾಮ್ಯದ KSRTC ಕೂಡ ವಾಹನಗಳನ್ನು ಒದಗಿಸುತ್ತದೆ. ಇಲ್ಲಿ ಖಾಸಗಿಯವರಿಗೂ KSRTC ಯವರಿಗೂ ವ್ಯತ್ಯಾಸವೆಂದರೆ KSRTC ಯವರದ್ದು ಸಂಪೂರ್ಣ ಪಾರದರ್ಶಕ ಹಾಗೂ ಜನಸ್ನೇಹಿ ಮತ್ತು ಒಂದಂಶ ಹಣ ಸರಕಾರಕ್ಕೂ ಸಲ್ಲುತ್ತದೆ ಮತ್ತು ಆ ಮೂಲಕ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲ್ಪಡುತ್ತದೆ.
55 ಜನರು ಪ್ರಯಾಣಿಸಬಹುದಾದ ಕರ್ನಾಟಕ ಸಾರಿಗೆ ಬಸ್ಸಿನ ದರ ಪ್ರತಿ ಕಿಲೋಮೀಟರ್ ಗೆ 32 ರೂಪಾಯಿಗಳು ಮತ್ತು ದಿನವೊಂದಕ್ಕೆ ಕನಿಷ್ಠ 300 ಕಿಲೋಮೀಟರ್ ಗಳು. ಅಂದರೆ ದಿನವೊಂದರಲ್ಲಿ ನೀವು 300 ಕಿ.ಮೀ. ಗಿಂತ ಕಡಿಮೆ ಎಷ್ಟೇ ಪ್ರಯಾಣಿಸಿದರೂ ಪಾವತಿಸಬೇಕಾದ್ದು 9600 ರೂಪೈಗಳು. ಅದಕ್ಕಿಂತ ಹೆಚ್ಚಿನ ಪ್ರತಿ ಕಿ.ಮೀ. ಗಳಿಗೆ ತಲಾ 32 ರೂ. ಗಳಂತೆ ಪಾವತಿಸಬೇಕು. ಉದಾಹರಣೆಗೆ ನೀವು 305 ಕಿ.ಮೀ ಪ್ರಯಾಣಿಸಿದ್ದರೆ 305*32=9760 ರೂ. ಗಳನ್ನು ಪಾವತಿಸಬೇಕು. ನಿಮಗಿಷ್ಟವಾದ ದಾರಿಯಿಂದ ಪ್ರಯಾಣಿಸಬಹುದು. ಅದು ನಿಮ್ಮ ಆಯ್ಕೆ. ಒಂದರ್ಥದಲ್ಲಿ ಪ್ರವಾಸದ ಅಂತ್ಯದ ವರೆಗೂ ಆ ವಾಹನಕ್ಕೆ ನೀವೇ ಮಾಲಕರಾಗಿರುತ್ತೀರಿ..
.
ಚಾಲಕನು ಕೂಡ ಸರಕಾರಿ ಉದ್ಯೋಗಿಯಾಗಿರುವುದರಿಂದ ಸಭ್ಯನಾಗಿರುತ್ತಾನೆ. ಚಾಲಕನಿಗೆ ಯಾವುದೇ ಹೆಚ್ಚುವರಿ TIPS ಕೊಡಬೇಕಾಗಿಲ್ಲ. ನಿಮಗಿಷ್ಟವಿದ್ದರೆ ಕೊಡಬಹುದು ಇಲ್ಲವಾದರೆ ಬೇಡ. ಅವನೆಂದೂ ನಿಮ್ಮಿಂದ ಬಲಾತ್ಕಾರವಾಗಿ TIPS ಕಿತ್ತುಕೊಳ್ಳುವುದಿಲ್ಲ..
.
ಈಗ ಖಾಸಗಿ ಟೂರಿಸ್ಟ್ ವ್ಯಾನ್ ಗಳ ಬಗ್ಗೆ ತಿಳಿದುಕೊಳ್ಳೋಣ.
.
ಖಾಸಗಿ ಟೂರಿಸ್ಟ್ ವ್ಯಾನ್ ಗಳ ಆಸನ ಸಾಮರ್ಥ್ಯ 21 ಸೀಟುಗಳ. ಇದು ಮೇಲೆ ಹೇಳಿದ 55 ಸೀಟುಗಳ KSRTC ಬಸ್ಸುಗಳಿಗಿಂತ ಅರ್ಧಕ್ಕಿಂತಲೂ ಕಡಿಮೆ. ಇವುಗಳ ದರ ಪ್ರವಾಸಕ್ಕೆ ಮೊದಲು ಪ್ರತೀ ಕಿ.ಮೀ. ಗೆ 20 ರೂ. ಗಳು. ಆದರೆ ಅರ್ಧ ದಾರಿ ಕ್ರಮಿಸುತ್ತಲೇ ಚಾಲಕನು ರೌಡಿಸಂ ಪ್ರಾರಂಭಿಸುತ್ತಾನೆ. ನಾವು ಕಿ.ಮೀ. ಲೆಕ್ಕದಲ್ಲಿ ಬರುವುದೇ ಇಲ್ಲ. ಒಟ್ಟು ಪ್ರವಾಸಕ್ಕೆ ಇಷ್ಟು ಅಂತ ನಿಗದಿಪಡಿಸಿಕೊಂಡು ಹೋಗುವುದು ಅಂತಾನೆ. ಅರ್ಧಕ್ಕೆ ಬಂದಾಗಿದೆ. ಇನ್ನು ಜಗಳ ಬೇಡ ಎಂಬ ಕಾರಣಕ್ಕೆ ನೀವು ಒಪ್ಪಿಕೊಳ್ಳುತ್ತೀರಿ..
ಇನ್ನೂ ಮುಂದೆ ಹೋಗುತ್ತಲೇ, ರಸ್ತೆ ಚೆನ್ನಾಗಿಲ್ಲ, ರೇಟು ಜಾಸ್ತಿಯಾಗುತ್ತದೆ ಎನ್ನುತ್ತಾನೆ. 200 ಕಿ.ಮೀ. ಕ್ರಮಿಸುತ್ತಲೇ ನಿಮ್ಮದು 350 ಕಿ.ಮೀ  ಮುಗಿಯಿತು. ಇನ್ನು EXTRA CHARGE ಅಂತಾನೆ. ಅಂತಿಮವಾಗಿ ನಿಮ್ಮ 300 ಕಿ.ಮೀ ಗಳ ಪ್ರವಾಸವು ಅವನ ಲೆಕ್ಕದಲ್ಲಿ 500 ಕಿ.ಮೀ. ದಾಟಿರುತ್ತದೆ. ಜೊತೆಗೆ ಬಲಾತ್ಕಾರದಿಂದ TIPS ವಸೂಲಿ ಮಾಡುತ್ತಾನೆ.
ನಿಮ್ನ ಪ್ರವಾಸ ಕೊನೆಯಾಗುವ ಹೊತ್ತಿಗೆ ನೀವು 21 ಆಸನಗಳ ಟೂರಿಸ್ಟ್ ವ್ಯಾನುಗಳಿಗೆ 55 ಆಸನಗಳ KSRTC ಬಸ್ಸುಗಳಿಗಿಂತಲೂ ಜಾಸ್ತಿ ಕೊಟ್ಟಿರುತ್ತೀರಿ. ಅದರ ಜೊತೆಗೆ ಮನಸ್ಸಿನ ತುಂಬಾ ಕಹಿ ಪ್ರವಾಸದ ಸಿಹಿಯನ್ನೆಲ್ಲಾ ನುಂಗಿ ಬಿಡುತ್ತದೆ.
.
ಒಳ್ಳೆಯವರು ಇಲ್ಲ ಅಂತ ಹೇಳ್ತಾ ಇಲ್ಲ. ಆದರೆ ಅಂತಹವರನ್ನು ಗುರುತಿಸುವುದು ಕಷ್ಟ. ಮೊದಲ ನೋಟಕ್ಕೆ ಎಲ್ಲರೂ ಒಳ್ಳೆಯವರಂತೆಯೇ ಕಾಣುತ್ತಾರೆ. ಆದರೆ ನಿಜಬಣ್ಣ ತಿಳಿಯುವುದು ಅರ್ಧದಾರಿಯನ್ನು ಕ್ರಮಿಸಿದ ಮೇಲೆ. ಅಷ್ಟೊತ್ತಿಗೆ ನೀವು ಅಸಹಾಯಕರಾಗಿರುತ್ತೀರಿ...
.
ಅದೇನೇ ಇರಲಿ, ನಿಮ್ಮ ಪ್ರಥಮ ಪ್ರಾಶಸ್ತ್ಯ KSRTC ಗೆ ಇರಲಿ. ಯಾಕೆಂದರೆ ಇಲ್ಲಿ ಯಾವುದೇ ಮುಚ್ಚುಮರೆಯಿರುವುದಿಲ್ಲ. ಹಗಲು ದರೂಡೆ ಇಲ್ಲ. ನಿಮ್ಮ ಹಣದ ಒಂದಂಶ ಸರಕಾರಕ್ಕೂ ಸಲ್ಲುತ್ತದೆ. ಚಾಲಕನು ತೆರಿಗೆ ಕಟ್ಟುತ್ತಾನೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರವಾಸದ ಸಿಹಿ ಹಾಗೇ ಇರುತ್ತದೆ....