ಶನಿವಾರ, ಜುಲೈ 1, 2017

ವಿ.ಟಿ ಅಬ್ದುಲ್ಲಾ ಕೋಯ ತಂಙಲ್ ರವರ ಭಾಷಣದ ಸಾರಾಂಶ.

ಹಬ್ಬ ಆಚರಿಸಲು ಹೋಗುತ್ತಿದ್ದ ಜುನೈದ್ ಎಂಬ ಹುಡುಗನನ್ನು ಬೀದಿ ನಾಯಿಯಂತೆ ಹೊಡೆದು ಕೊಲ್ಲಲಾಯಿತು.
ನಮ್ಮ ದೇಶದಲ್ಲಿ ಮನುಷ್ಯನಿಗಿಂತ ಪಶುವನ್ನು ಮೃಗವನ್ನು ಹೆಚ್ಚು ಪ್ರೀತಿಸಲಾಗುತ್ತಿದೆ. ಅಂತಹವರ ಕೈಯಲ್ಲಿ ಅಧಿಕಾರ ಇದೆ. ಅಂತಹ ಹಲವು ಘಟನೆಗಳು ನಡೆಯತ್ತಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ನಡೆಯುತ್ತಿರುವ ಚರ್ಚೆಗಳು ಆರೋಗ್ಯಕರವಲ್ಲ ಎಂದು ಪರಿಶೀಲನೆ ನಡೆಸಿದಾಗ ಮನವರಿಕೆಯಾಯಿತು.
ಸಮಸ್ಯೆಗಳು ಇಂದು ಪ್ರಾರಂಭವಾದದ್ದೇ?
ಸಂಘಪರಿವಾರವನ್ನು ಸಮರ್ಥಿಸಲು ಆ ಭಾಷೆಯಲ್ಲಿ ಹೇಳುತ್ತಿಲ್ಲ.  ಬಹಳ ಶಾಂತಚಿತ್ತದೊಂದಿಗೆ ನೀವು ಚಿಂತಿಸಲು ಹೇಳುತ್ತಿದ್ದೇನೆ.
ಇದಕ್ಕಿಂತ ದೊಡ್ಡ ದೊಡ್ಡ ಕೋಮುಗಲಭೆಗಳು ಈ ಭಾರತದಲ್ಲಿ ನಡೆದಿಲ್ಲವೇ?  ಭಾರತ ಸ್ವಾತಂತ್ರ್ಯ ಗೊಂಡ ನಂತರ ಕೋಮುಗಲಭೆಯ ಒಂದು ಭೂಪಟವೇ ನಮ್ಮ ಕೈಯಲ್ಲಿದೆ.ಥಾಣೆ, ಪೂನ,ಮುರ್ಷಿದಾಬಾದ್,ಬಾಗಲ್ಪುರ, ಜಮ್ಶೆಡ್ಪುರದ ಕೋಮು ಗಲಭೆಯಲ್ಲಿ ಹೀಗೆ ದೊಡ್ಡ ದೊಡ್ಡ ನರಮೇಧಗಳು ನಡೆದಿವೆ‌. ಒಂದು ಪ್ರದೇಶವನ್ನೇ ಸುಟ್ಟ ಭಸ್ಮಗೊಳಿಸಿ, ಜನರ ಕೊಲೆ ನಡೆಸಿದ ಕೋಮು ಗಲಭೆಯಗಳನ್ನು ನಾವು ಕಂಡಿಲ್ಲವೇ?
ಆಗೆಲ್ಲಾ ನಾವು ಬಹಳ ಸಮಾಧಾನದೊಂದಿಗೆ ನಾವು ಈದ್ ಆಚರಿಸಿದ್ದೇವೆ. ಯಾಕೆಂದರೆ ಅಂದು ಸೋಶಿಯಲ್ ಮಿಡಿಯಾ ಇರಲಿಲ್ಲ.
ಯುಕ್ತಿಯ ಮಹತ್ವವನ್ನು ನಾವು ಅರಿತಿಲ್ಲ. ಇಂತಹ ಘಟನೆಗಳನ್ನು ಎದುರಿಸುವುದು ನಾವು ಸಂಘ ಪರಿವಾರದ ಅಜೆಂಡಾಗಳಿಗೆ ಜಯ, ಯಶಸ್ಸು ನೀಡಿ ಅಲ್ಲ.
ಹಿಂದೂ ಮುಸ್ಲಿಂ ಪರಸ್ಪರ ಬೇರ್ಪಟ್ಟು ನಿಲ್ಲಬೇಕು ಎಂಬುದು ಅವರ ಉದ್ದೇಶ. ಈಗ ನಮ್ಮ ಜೀವನ ಹಿಂದೂ ಮುಸ್ಲಿಂ ಪರಸ್ಪರ ಬೇರ್ಪಟ್ಟು ಈಗ ಜೀವಿಸುತ್ತಿಲ್ಲ. ಕೋಮುವಾದಿಗಳು ಅಲ್ಪ ಪ್ರಮಾಣದಲ್ಲಿ ಇದ್ದಾರೆ. ಕೇವಲ ೩೩ ಶೇಕಡಾ ಮತ ಅವರಿಗೆ ಲಭಿಸಿದೆ. ಬಾಕಿ ಅವರಿಗೆ ವಿರುದ್ಧ ಮತಗಳು ಹರಿಹಂಚಾಗಿ ಹೋದ ಕಾರಣ ಅವರಿಗೆ ಶಕ್ತಿ ಲಭಿಸಿತು. ಅಂದರೆ  ಇತರರ ಒಡಕು ಅವರ ಶಕ್ತಿಯಾಗಿದೆ. ನಮ್ಮ ದೌರ್ಬಲ್ಯ ಅವರ ಶಕ್ತಿ ಎಂಬುದು ನಾವು ಅರಿಯಬೇಕು.
ಸೋಶಿಯಲ್ ಮಿಡಿಯಾದಲ್ಲಿ ಇಂತಹ ಅಂಶಗಳನ್ನು ನಾವು ಪಸರಿಸಿ ಭಯ ಉತ್ಪಾದಿಸಿ, ಇಂತಹ ಅಂಶಗಳನ್ನು ಹೆಚ್ಚು ಹೆಚ್ಚು ಪಸ್ತಾಪಿಸಿ, ಇಲ್ಲಿ ಮುಸ್ಲಿಮರು ಸುರಕ್ಷಿತರಾಗಬೇಕಾದರೆ ಮುಸ್ಲಿಮರು ಮುಸ್ಲಿಮರ ವಿಷಯಗಳನ್ನು ಮಾತ್ರ ನೋಡಿಕೊಳ್ಳಬೇಕು ಎಂಬ ಚಿಂತನೆ ನಾವು ಪಸರಿಸಿದರೆ, ಸಾಮುದಾಯಿಕವಾಗಿ ಹೀಗೆ ಮಾಡಿದರೆ ಹಿಂದೂ ಮುಸ್ಲಿಂ ಧ್ರುವೀಕರಣ ಎಂಬ ಸಂಘಪರಿವಾರದ ಅಜೆಂಡಾವನ್ನು ನಾವೇ ಕಾರ್ಯಗತಗೊಳಿಸುತ್ತಿದ್ದೇವೆ ಎಂಬುದು ಅದರ ಪರಿಣಾಮವಾಗಿದೆ. ಅದರಿಂದ ನಮಗೆ ಪ್ರಯೋಜನಕ್ಕಿಂತ ಅಪಾಯ ಹೆಚ್ಚು.  ಈ ದೇಶದ ಜಾತ್ಯತೀತ ಮನಸ್ಸಿನವರೂ ನಮಗೆ ವಿರೋಧಿಗಳಾದರೆ ನಂತರ ಅವಸ್ಥೆ ಏನಾಗಬಹುದು.
ನಮ್ಮ ಮುಂದೆ ಎರಡು ದೌತ್ಯಗಳಿವೆ.
1. ನಿಜವಾಗಿ ಮುಸ್ಲಿಮರನ್ನು ನೈಜ ಮುಸ್ಲಿಮರಾಗಿ ಮಾಡಬೇಕು. ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ  ನೀವು ನೋಡಬೇಕು. ಉತ್ತರ ಭಾರತದಲ್ಲಿ ಅವರು ಅಲ್ಲಾಹ್ ರಸೂಲರು ಹೇಳಿದಂತೆ ಜೀವನ ನಡೆಸುತ್ತಿದ್ದಾರೆಯೇ ಎಂದು ನೋಡಬೇಕು. ಆದ್ದರಿಂದ ಅವರನ್ನು ಈಮಾನ್ ಉಳ್ಳವರಾಗಿ ಪರಿವರ್ತನೆ ಮಾಡಬೇಕು. ಅದು ಅಲ್ಲಾಹನ ವಾಗ್ದಾನ ಆಗಿದೆ. ಗೌರವದ ವಾಗ್ದಾನ ಅದಾಗಿದೆ.
ಪ್ರವಾದಿಗಳು ಇಸ್ಲಾಮೀ ಸಂದೇಶದೊಂದಿಗೆ ಮುಂದೆ ಬಂದಾಗ ಶತ್ರುಗಳು ಅವರನ್ನು ಮೂಲೋತ್ಪಾಟನೆ ಮಾಡಲು ಹೊರಟಾಗ ಅವರು ಹೇಳಿದ ಮಾತು " ನೀವು ಈ ಪ್ರದೇಶ ಬಿಟ್ಟು ಹೋಗಬೇಕು ಇಲ್ಲವೇ ನಮ್ಮ ಧರ್ಮಕ್ಕೆ ಮರಳಿ ಬರಬೇಕು " (ಈಗ ನಮ್ಮೊಂದಿಗೆ ಹೇಳಿದಂತೆ). ನಿಮಗೆ ಸಂಶಯ ಇದ್ದರೆ ಇಬ್ರಾಹೀಮ್ ಅ ರವರ ಚರಿತ್ರೆಯನ್ನು ಮನೆಯಲ್ಲಿರುವ ಕುರಾನ್ ತೆಗೆದು ಅರ್ಥ ಸಹಿತ ಓದಿ ನೋಡಿ. ಆಗ ಅಲ್ಲಾಹನ ವಾಗ್ದಾನ. ನಿಮ್ಮನ್ನು ನಾವು ರಕ್ಷಿಸುತ್ತೇವೆ ಎಂಬುದು ಅಲ್ಲಾಹನ ಆಫರ್.  ಈ ಗೌರವ ಅಲ್ಲಾಹನು ಹೇಳಿದಂತೆ ಜೀವಿಸುವವರಿಗೆ ಮಾತ್ರ.  ಆದ್ದರಿಂದ ನಮ್ಮ ಮೊದಲ ಅಜೆಂಡಾ ಈ ಸಮುದಾಯದ ಪ್ರಜ್ಞೆ ಆ ನಿಟ್ಟಿನಲ್ಲಿ ಬೆಳೆಸಬೇಕು.
ಅವರನ್ನು ಸೈದ್ದಾಂತಿಕ ಚಾರಿತ್ಯದ ಮೂಲಕ ಮಾದರಿಗೊಳಿಸಬೇಕು. ಆದ್ದರಿಂದ ಇದು ಸಾಮುದಾಯಿಕ ಭಾವನೆಗಳನ್ನು ಕೆರಳಿಸುವ ಸಮಯವಲ್ಲ ಎಂಬುದು ನಾವು ಚಿಂತಿಸಬೇಕು.
೨.ಎರಡನೇದು ಈಗಾಗಲೇ ಹೇಳಿದ್ದು, ನಾವು ಸೋಶಿಯಲ್ ಮೀಡಿಯಾಗಳ ಮೂಲಕ ಹಲವನ್ನು ಬಡಿಸಲು ಹೊರಟರೆ ಸಂಘಪರಿವಾರದ ಅಜೆಂಡಾ ಸುಲಭ ಆಗುತ್ತದೆ. ಇದರಿಂದ ಶತ್ರುಗಳ ಸಂಖ್ಯೆ ಹೆಚ್ಚಾಗುತ್ತದೆ.
ಪ್ರವಾದಿ ಸ ಮುಂದೆ ಮೂರು ರೀತಿಯ ಜನತೆ ಇತ್ತು.
ಒಂದು ಕಠಿಣ ವಿರೋಧಿಗಳು, ಎರಡನೇಯದು ಪ್ರವಾದಿಯೊಂದಿಗೆ ತಪ್ಪು ಕಲ್ಪನೆ ಇದ್ದವರು ಆದರೆ ಅಷ್ಟೊಂದು ಕಠಿಣರಲ್ಲ. ಮೂರನೇಯವರು ನಿಷ್ಪಕ್ಷಪಾತಿಗಳು.
ಪ್ರವಾದಿ ಸ ನಿಷ್ಪಕ್ಷಪಾತಿಗಳನ್ನು ಶತ್ರುಗಳ ಪಕ್ಷಕ್ಕೆ ಸೇರಿದಂತೆ ಜಾಗ್ರತೆವಹಿಸಿದರು. ತಪ್ಪು ಕಲ್ಪನೆ ಇರುವವರ ತಪ್ಪು ಕಲ್ಪನೆ ದೂರ ಮಾಡಿದರು. ವೈರಿಗಳನ್ನು ಬೇರೆಯೇ ರೀತಿಯಲ್ಲಿ ಯುಕ್ತಿಯಿಂದ ನೋಡಿಕೊಂಡರು. ಆದ್ದರಿಂದ ಶತ್ರುಗಳ ಸಂಖ್ಯೆ ಹೆಚ್ಚಿಸಿ ದ್ವೇಷದ ಮೂಲಕ ಅವರ ಅಜೆಂಡಾಗಳನ್ನು ನಾವು ಈಡೇರಿಸುತ್ತಿದ್ದೇವೆ ಎಂಬುದು ಪ್ರಜ್ಞಾಪೂರ್ವಕ ಅರಿಯಬೇಕು.
ಆದ್ದರಿಂದ ಸಾಮುದಾಯಿಕ ಭ್ರಾಂತಿಯಿಂದ ಭಾರತದಲ್ಲಿ ವಿಭಜನೆ ಈಗಾಗಲೇ ನಡೆದಿದೆ. ಅದಕ್ಕೆ ಮುಸ್ಲಿಮರು ಕಾರಣ ಅಲ್ಲದಿದ್ದರೂ ಅದರಲ್ಲಿ ಸಾಮುದಾಯಿಕ ಭ್ರಾಂತಿಯ ದೊಡ್ಡ ಪಾತ್ರ ಇದೆ. ಆದ್ದರಿಂದ ಆ ಮಾರ್ಗವನ್ನು ಅನುಸರಿಸದೆ ಮಾನವ ಪ್ರೇಮದ ವಕ್ತಾರರಾಗಬೇಕು. ಆದ್ದರಿಂದ ನಿಷ್ಪಕ್ಷಪಾತಿ ಜನ ಸಮೂಹವನ್ನು ನಾವು ಕಳೆಯಬಾರದು. ಅವರ ಸುಖದುಖಗಳಲ್ಲಿ ಪಾಲ್ಗೊಳ್ಳಬೇಕು. ಅವರೊಂದಿಗೆ ಮಾನವ ಸಂಬಂಧವನ್ನು ಬಲಪಡಿಸಬೇಕು. ನೀವು ಅವರ ಭರವಸೆಯಾದರೆ ಅವರೂ ನಿಮ್ಮ ಭರವಸೆಯಾಗುತ್ತಾರೆ‌ ಪರಸ್ಪರ ನಂಬಿಕೆ ವಿಶ್ವಾಸ ಬಲಗೊಳ್ಳುತ್ತದೆ. ಆದ್ದರಿಂದ ಆಗ ಯಾವ ಕೋಮುವಾದಿ ಅಜೆಂಡಾವು ವಿಜಯಗಳಿಸುವುದಿಲ್ಲ.
ಕೊನೆಗೆ ಅಲ್ಲಾಹನ ಮೇಲೆ ಭರವಸೆ ನಷ್ಟ ಹೊಂದ ಬಾರದು. ನಮ್ಮ ಭರವಸೆ ಕೋಮುವಾದದ ಭರವಸೆ ಆಗಬಾರದು. ಹೇಳುವುದನ್ನು ಪ್ರತಿಭಟಿಸುವುದನ್ನು ನಿಲ್ಲಿಸಬೇಕು ಎಂದಲ್ಲ. ಬದಲಾಗಿ ಅದರ ರೀತಿ ನೀತಿಗಳನ್ನು ಯುಕ್ತಿಯನ್ನು ನಾವು ಅರಿಯಬೇಕು.
ಅಲ್ಲಾಹ್ ನಮ್ಮ ರಕ್ಷಕ ಆಗಿರುವಾಗ ಭಯ ಪಡಬೇಕಾದ ಅವಶ್ಯಕತೆ ಇಲ್ಲ. ನಾವು ಅವನಿಗೆ ಸಹಾಯ ಮಾಡಿದರೆ ಅವನು ನಮಗೆ ಸಹಾಯ ಮಾಡುತ್ತಾನೆ. ನಮ್ಮ ಪಾದಗಳಿಗೆ ಸ್ಥೈರ್ಯ ನೀಡುತ್ತಾನೆ. ಆದ್ದರಿಂದ ಶತ್ರುಗಳ ಕುತಂತ್ರಕ್ಕೆ ಬಲಿಯಾಗಬಾರದು. ನಾವು ನಿರಾಶರೂ ಆಗಬಾರದು. ಸೂರ ನೂರ್ ನಲ್ಲಿ ಅಲ್ಲಾಹನು ವಾಗ್ದಾನ ನೀಡುತ್ತಾನೆ. ಇಂದಿನ ಪರಿಸ್ಥಿತಿ ಹೋಗಿ ಒಂದು ಉತ್ತಮ ನಾಳೆ ಬರಲಿದೆ. ಅಲ್ಲಿ ಹೊಸ ಸಮಾಜ ಉಂಟಾಗುತ್ತದೆ. ಅದು ಉತ್ತಮ ದಿನವಾಗಿರುತ್ತದೆ. ಆ ಧೈರ್ಯ ಸ್ಥೈರ್ಯ ವಿಶ್ವಾಸ ನಮಗಿರಬೇಕು. ನಾವು ವಾಮ ಮಾರ್ಗ ಅನುಸರಿಸಿದರೆ ಅಪಾಯ ಇದೆ. ಅದಕ್ಕೆ ದೊಡ್ಡ ಬೆಲೆ ತೆರಬೇಕಾಗಬಹುದು. ಆ ನಾಶದಿಂದ ನಮಗೆ ಹಿಂದಿರುಗಲು ಸಾಧ್ಯವಾಗದು. ಈ ಬಗ್ಗೆ ಶಾಂತವಾಗಿ ಚಿಂತಿಸಬೇಕು‌. ನಮ್ಮ ಪ್ರತಿರೋಧ ಹೇಗಿರಬೇಕು ಎಂಬ ಬಗ್ಗೆ ಚಿಂತಿಸಿ. ಅಲ್ಲಾಹನು ನಮಗೆ ಮಾರ್ಗದರ್ಶನ ಮಾಡಲಿ ಆಮೀನ್.