ಕುರಾನ್ ಕಲಿಯುತ್ತಿದ್ದ ಆ ನನ್ನ ಬಾಲ್ಯದ ದಿನಗಳಲ್ಲಿ ಮನಸ್ಸು ಪದೆ ಪದೆ ಒಂದೆ ಪ್ರಶ್ನೆಗಳನ್ನು ಕೇಳುತ್ತಿತ್ತು?? ಕುರಾನ್ ಅರಬ್ಬಿ ಭಾಷೆಯಲ್ಲಿ ಆವರ್ತೀಣಗೊಂಡಿದ್ದೇಕೆ? ಕನ್ನಡದಲ್ಲಿ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಎಲ್ಲಾ ಜನಾಂಗಗಳಿಗೂ ಅವರವರ ಭಾಷೆಯಲ್ಲಿ ಇರಬೇಕಿತ್ತಲ್ಲವೆ? ಈ ರೀತಿ ಯೋಚಿಸುವವರು ಹಲವರಿರಬಹುದಲ್ಲವೆ?, ಜೀವಾನೋಪಾಯಕ್ಕಾಗಿ ನಾನು ಕೂಡ ಅರಬ್ ದೇಶಕ್ಕೆ ಹೋಗಬೇಕಾಯಿತು. ವರ್ಷಗಳುರುಳಿದಂತೆ ಇಲ್ಲಿನ ಭಾಷೆ, ಸಂಸ್ಕೃತಿಯ ಬಗ್ಗೆ ಅರಿವು ಮೂಡತೋಡಗಿತು. ಇಲ್ಲಿ ಮೊದಲಬಾರಿ ಜುಮ್ಮ ನಮಾಜ್ಗಾಗಿ ಇಲ್ಲಿನ ಗ್ರಾಂಡ್ ಮಸ್ಜಿದ್ಗೆ ಬಂದಾಗ ಊರಿಗಿಂತ ವೆತ್ಯಸ್ಥ ರೀತಿಯಲ್ಲಿ ಜಗತ್ತಿನ ಬೇರೆ ಬೇರೆ ದೇಶಗಳ ಜನಗರೊಂದಿಗೆ ನಿಂತು ನಿರ್ವಹಿಸುವ ನಮಾಜ್ ನನಗೆ ಹೊಸ ಒಂದು ಅನುಭವವಾಯಿತು. ಇಮಾಮ್ ಪಠಿಸುತ್ತಿದ ಕುರಾನ್ನ ಆ ಇಂಪಾದ ಧ್ವನಿ ಎಲ್ಲಾ ಸಂಗೀತಗಳನ್ನು ಹಿಮ್ಮೆಟ್ಟಿ ಮುಂದೆ ಓಡುತ್ತಿದ್ದಂತೆ ಮನಸ್ಸಿಗೆ ಆಹ್ಲಾದಕರವಾದ ಒಂದು ಸುಖ ಸಿಗುತ್ತಿತ್ತು. ಹೃದಯಕ್ಕ ಹೊಸ ಜೀವಸಿಕ್ಕಿದಂತೆ ಮಿಡಿಯುತ್ತಿತ್ತು, ಆತ್ಮ, ಸಂತೋಷದಿಂದ ಆಕಾಶದಲ್ಲಿ ಹಾರಾಡುವ ಪಕ್ಷಿಯಂತೆ ಮದುರ ಆನಂದವನ್ನು ಅನುಭವಿಸುತ್ತಿತ್ತು. ದೇವನ ಸ್ಮರಣೆಯಲ್ಲಿ ಇಷ್ಟೊಂದು ಸಂತೋಷ ನನ್ನ ಮನಸ್ಸಿಗೆ ಮೊದಲ ಅನುಭವವಾಗಿತ್ತು. ಕುರಾನ್ ಪಠಿಸುವ ರೀತಿಯಲ್ಲಿ ಪಠಿಸಿದರೆ ಅದರಿಂದ ಮನಸ್ಸು ಮತ್ತು ಶರೀರಕ್ಕೆಇಷ್ಟೊಂದು
ಸುಖ ಸಿಗುತ್ತದೆಂದು ಮೊದಲ ಬಾರಿಗೆ ತಿಳಿದೆನು, ಧೀರ್ಘವಾದ ನಮಾಜ್ನಲ್ಲಿ ನನ್ನನ್ನೆ ನಾನು ಮರೆತಿರುವಾಗ ಮನಸ್ಸು ನನ್ನೊಂದಿಗೆ ಏನೊ ಪ್ರಶ್ನೆ ಕೇಳಿದ ಹಾಗಾಯಿತು, ನಾನು ಅತ್ತ ನನ್ನ ಗಮನವನ್ನು ವಹಿಸಿದಾಗ ತಿಳಿಯಿತು ಅದು ಪ್ರಶ್ನೆಯಲ್ಲ ನಾನು ಇಲ್ಲಿಯವರೆಗೆ ನನ್ನ ಮನದಲ್ಲಿ ಕೇಳುತ್ತಿದ್ದ ಪ್ರಶ್ನೆಗೆ ಉತ್ತರವಾಗಿತ್ತು. ನಾನು ಅನಿಸಿದಂತೆ ಕುರಾನ್ ಎಲ್ಲರ ಭಾಷೆಗಣುಗುಣವಾಗಿ ಒಂದೊಂದು ಜನಾಂಗಕ್ಕೆ ಆವರ್ತೀಣ್ಗೊಂಡಿದ್ದರೆ ಜಗತ್ತಿನ ಎಲ್ಲಾ ಜನರು ಸೇರುವ ಸ್ಥಳದಲ್ಲಿ ಯಾವಾ ಭಾಷೆಯಯಿಂದ ಇಮಾಮ್ ಪಠಿಸುತ್ತಿದ್ದರು?, ಎಲ್ಲರೂ ತನ್ನ ಬಾಷೆಯಲ್ಲಿ ಪಠಿಸಿ ಎಂದು ಘರ್ಷಣೆಯುಂಟಾಗುತ್ತಿರಲಿಲ್ಲವೆ? ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿದ ಸಂತೋಷದಿಂದ, ಅಲ್ಲಾಹನಿಗೆ ಎರಡು ರಕಾಅತ್ ನಪೀಲ್ ನಮಾಜ್ ನಿರ್ವಹಿಸಿದೆನು. ಕುರಾನ್ ಅರಬ್ಬಿ ಭಾಷೆಯಲ್ಲಿ ಆವತೀರ್ಣಗೊಳ್ಳಲು ಇನ್ನೆನೆಲ್ಲಾ ಕಾರಣಗಳಿರಬಹುದು ಆ ಬಗ್ಗೆ ಕೂಡ ತಿಳಿಯುವ ಕುತೂಹಲ ಮನಸ್ಸನ್ನು ತುಂಬಿಕೊಂಡಿತ್ತು. ನಂತರದ ದಿನಗಳಲ್ಲಿ ಆ ಬಗ್ಗೆ ಇಲ್ಲಿನ ಕೆಲವು ಪಂಡಿತರೊಂದಿಗೆ ಕೇಳಿದಾಗ ಕುತೂಹಲಕಾರಿಯಾದ ಹಲವು ವಿಷಯಗಳು ತಿಳಿದು ಬಂತು.
ಕುರಾನ್ ಬಗ್ಗೆ ಅವರು ವಿವರಿಸುವ ಮುನ್ನ ಈ ಕೆಲವು ವಿಷಯಗಳನ್ನು ವಿವರಿಸಿದರು, ಈ ವಿಷಯವನ್ನು ವಿಸ್ತರಿಸಿ ಹೇಳಿದರೆ ಮಾತ್ರ ವಿಷಯ ಮನದಟ್ಟಾಗುವುದೆಂದು ತಿಳಿಸಿದರು.
ಕುರಾನ್ ಅರಬ್ಬರಿಗೆ ಮತ್ತು ಮುಸಲ್ಮಾನರಿಗೆ ಮಾತ್ರ ಆಗಿರದೆ ಇದು ಸಕರ ಮಾನವರಿಗಾಗಿದೆ, (ಜನರೇ, ನೀವು ನಿಮ್ಮ ಪಾಲಕ ಪ್ರಭುವನ್ನು ಭಯಪಡಿರಿ, ಅವನು ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದನು, ಅದೇ ಜೀವದಿಂದ ಅದರ ಜೋಡಿಯನ್ನು ಉಂಟುಮಾಡಿದನು ಮತ್ತು ಅವರೆರಡರಿಂದ ಅನೇಕಾನೇಕ ಸ್ತ್ರೀ-ಪುರುಷರನ್ನು ಲೋಕದಲ್ಲಿ ಹಬ್ಬಿಸಿದನು- ಅನ್ನಿಸ 4:1) ಈ ಕುರಾನ್ ಸಂದೇಶವನ್ನೊಮ್ಮೆ ನೋಡಿ ಇಲ್ಲಿ ಮುಸ್ಲಲ್ಮಾನರೆ ಎಂದಿಲ್ಲ, ಬದಲಾಗಿ "ಜನರೆ" ಎಂದಿದೆ. ಇದೆ ರೀತಿ ಕುರಾನ್ನ ಹಲವು ಆಧ್ಯಾಯಗಳಲ್ಲಿ ಕಾಣಬಹುದಾಗಿದೆ. ಶ್ರೀರಾಮ, ಕೃಷ್ಣ, ಹಿಂದುಗಳ ದೇವರ ಹೆಸರುಗಳು, ಏಸು, ಕ್ರಿಶ್ಚನರ ದೇವರ ಹೆಸರು ಇದ್ದಂತೆ, ಅಲ್ಲಾಹು ಮುಸ್ಲಿಮರ ದೇವರ ಹೆಸರು ಎಂದು ಹಲವಾರು ಜನರು ತಪ್ಪು ತಿಳಿದುಕೊಂಡಿದ್ದಾರೆ. ನಾನು ಕೂಡ ಮೊದಲು ಹಾಗೆ ತಿಳಿದುಕೊಂಡಿದ್ದೆನು, ಇಲ್ಲಿಗೆ ಬಂದ ನಂತರ ತಿಳಿಯಿತು "ಅಲ್ಲಾಹ್" ಎಂಬ ಪದ "ದೇವ" ಎಂಬ ಅರ್ಥವನ್ನು ನೀಡುತ್ತದೆ.
ಸೂರ್ಯನು, ಭೂಮಿಯ ಹತ್ತು ಲಕ್ಷ ಪಟ್ಟು ದೊಡ್ಡದು, ಭೂಮಿ ಮತು ಇತರ ಗ್ರಹಗಳು ಮತ್ತು ಉಪಗ್ರಹಗಳು, ನಕ್ಷತ್ರಗಳು ಅದರಂತೆ ಮನುಷ್ಯನು ಇನ್ನೂ ಅರಿಯದ ಎಷ್ಟೊ ಗ್ರಹಗಳೂ ಇವೆ, ಇದನೆಲ್ಲಾ ಸೃಷ್ಟಿಸಿದ ದೇವನು ನಮ್ಮಂತೆ ಮನುಷ್ಯನ ರೂಪದಲ್ಲಿರಬಹುದೆಂದು ಜನರು ತಮ್ಮ ಮನಸ್ಸಿಗೆ ತೋಚಿದ ರೀತಿಯಲ್ಲಿ ದೇವನ ಆಕಾರಗಳನ್ನು ಚಿತ್ರಗಳನ್ನು ರಚಿಸಿ, ತಮಗಿಷ್ಟ ಬಂದಂತೆ ಅದನ್ನು ಪೂಜಿಸುತ್ತಾರೆ. ಆದರೆ ದೇವನನ್ನು ಕಂಡವನು ಯಾರು? ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ದೇವನೊಂದಿಗೆ ಸಂಭಾಷಣೆ ಮಾಡುತಿದ್ದ ಪ್ರವಾದಿ ಮೂಸ (ಅ.ಸ) ದೇವನನ್ನು ನೋಡಬೇಕೆಂದು ಕೇಳಿಕೊಂಡಾಗ ನಡೆದ ಘಟನೆ ಕುರಾನ್ನಲ್ಲಿ ಈ ರೀತಿ ಇದೆ. (ಅಲ್ಲಾಹನು ನಿಶ್ಚಯಿಸಿದ ಸಮಯಕ್ಕೆ ಸರಿಯಾಗಿ ಅವರು(ಮೂಸ) ತಲುಪಿ ಅವರ ಪ್ರಭು ಅವರೊಡನೆ ಮಾತಾನಾಡಿದಾಗ ಅವರು "ಓ ಪ್ರಭೂ, ನನಗೆ ನಿನ್ನ ದರ್ಶನಕ್ಕೆ ಬೇಕಾದ ದೃಶ್ವಕ್ತಿ ಪ್ರಧಾನ ಮಾಡು" ಎಂದು ಭಿನ್ನವಿಸಿದಾಗ, "ನೀನು ನನ್ನನ್ನು ನೋಡಲಾರೆ. ಅದೋ ಮುಂದಿರುವ ಪರ್ವತವನ್ನು ನೋಡು. ಅದು ತನ್ನ ಸ್ಥಾನದಲ್ಲಿ ಸ್ಥಿರವಾಗಿ ನಿಂತರೆ ನೀನು ನನ್ನನ್ನು ನೋಡಬಲ್ಲೆ" ಎಂದನು. ಆ ಪ್ರಕಾರ ಅವರ ಪ್ರಭು ಪರ್ವತದ ಮೇಲೆ ದಿವ್ಯ ಪ್ರಕಾಶವನ್ನು ಬೀರಿದಾಗ ಅದು ಪರ್ವತವನ್ನು ನುಚ್ಚು ನೂರುಗೊಳಿಸಿತು. ಮೂಸ ಮೂರ್ಛೆ ತಪ್ಪಿ ಬಿದ್ದರು. ಸ್ಮೃತಿಬಂದಾಗ ಹೀಗೆಂದನು, "ನೀನು ಮಹಾ ಪರಿಶುದ್ದನು. ನಾನು ನಿನ್ನಲ್ಲಿ ಪಶ್ಚಾತಾಪ ಪಡುತ್ತೇನೆ. ಮತ್ತು ಎಲ್ಲರಿಗಿಂತಲೂ ಮೊದಲು ವಿಶ್ವಾಸವಿಡುವವನು ನಾನಾಗಿರುತ್ತೇನೆ." ಕುರಾನ್(7;143) ಸೂರ್ಯನನ್ನು 5 ನಿಮಿಷ ನೋಡಲು ಸಾಧ್ಯವಾಗದ ನಮ್ಮ ಕಣ್ಣು ಅದನ್ನು ಸೃಷ್ಟಿಸಿದ ದೇವನನ್ನು ನೋಡುವಷ್ಟು ಶಕ್ತಿಯನ್ನು ಹೊಂದಿದೆ ಎಂದು ಚಿಂತಿಸುವಷ್ಟು ಬುದ್ದಿ ಮನುಷ್ಯನಿಗೆ ಇಲ್ಲದಾಗಿದೆ.
ಮನುಷ್ಯನನ್ನು ಸೃಷ್ಟಿಸಿದ ದೇವನು ಅವನಿಗೆ ವಸ್ತುಸ್ಥಿತಿಗಳನ್ನೂ ಮತ್ತು ಮಾರ್ಗದರ್ಶನಗಳನ್ನೂ ಸನ್ಮಾರ್ಗಗಳನ್ನೂ ನೀಡಲು 1 ಲಕ್ಷ 24 ಸಾವಿರ ಪ್ರವಾದಿಗಳನ್ನು ಲೋಕದ ಎಲ್ಲಾ ಜನಾಂಗಗಳಿಗೆ ಒಬ್ಬರ ನಂತರ ಒಬ್ಬರಂತೆ ಕಳುಹಿಸಿದನು, ಆದಮ್(ಅ.ಸ) ಮೊದಲ ಪ್ರವಾದಿಯಾಗಿದ್ದರೆ ಅಂತ್ಯ ಪ್ರವಾದಿ ಮುಹಮ್ಮದ್(ಸ.ಅ) ಆಗಿದ್ದಾರೆ. ಹಲವು ಪ್ರವಾದಿಗಳಿಗೆ ಅವರವರ ಭಾಷೆಗಳಲ್ಲಿ ಗ್ರಂಥಗಳನ್ನು ನೀಡಲಾಗಿತ್ತು. (ಕುರಾನ್ನಲ್ಲಿ 25 ಪ್ರವಾದಿ ಮತ್ತು 4 ಗ್ರಂಥಗಳನ್ನು ಮಾತ್ರ ಹೆಸರಿಸಲಾಗಿದೆ) ಅದರಲ್ಲಿ ಪ್ರವಾದಿ ಮುಹಮ್ಮದ್(ಸ.ಅ)ರ ಮೂಲಕ ಆವರ್ತೀಣಗೊಳಿಸಲಾದ ಕುರಾನ್ ಅರಬ್ಬಿ ಬಾಷೆಯಲ್ಲಿದೆ. ಆ ಭಾಷೆಯನ್ನು ಇಂದು ಜಗತ್ತಿನ ಸುಮಾರು 150 ಮಿಲಿಯನ್ ಜನರು ಮಾತನಾಡುವ ಜೀವಂತ ಭಾಷೆಯಾಗಿದೆ. ಸಂಸ್ಕೃತ, ಹಿಬ್ರು, ಅರಾಮಿಕ್ ಸತ್ತುಹೋದ ಭಾಷೆಗಳಾಗಿವೆ. ಆ ಭಾಷೆಯಲ್ಲಿರುವ ಹಳೆಯ ಗ್ರಂಥಗಳಲ್ಲಿ ಯಾವೂದಾದರೂ ಬದಲಾವಣೆ ಮಾಡಿದರೆ ಆ ಬಗ್ಗೆ ಓದುವ ಹೆಚ್ಚಿನವರಿಗೆ ತಿಳಿಯುವುದಿಲ್ಲ. ಆದರೆ ಕುರಾನ್ ಜೀವಂತ ಭಾಷೆಯಾಗಿರುವುದರಿಂದ ಅದರಲ್ಲಿ ಒಂದು ಸಣ್ಣ ವೆತ್ಯಾಸವಾದರೂ ಮಾಡಿದರೆ ಜನರಿಗೆ ತಿಳಿದುಹೋಗುತ್ತೆ. ಇಂದು ಜಗತ್ತಿನ ಮೂಲೆ ಮೂಲೆಗಳಲ್ಲಿ ಲಕ್ಷಾಂತರ ಜನರು ಸಂಪೂರ್ಣ ಕುರಾನನ್ನು ಕಂಠಪಾಟ ಮಾಡಿದವರಿದ್ದಾರೆ ಈ ರೀತಿ ಬೇರೆ ಯಾವೂದೆ ಗ್ರಂಥಗಳನ್ನು ಜನರಿಗೆ ಕಂಠಪಾಠಮಾಡಲು ಸಾಧ್ಯವಾಗಲಿಲ್ಲ. ಎಕೆಂದರೆ ದೇವನಿಂದ ಕುರಾನನ್ನು ಆ ರೀತಿ ರಚಿಸಲಾಗಿದೆ, ಅದನ್ನು ಸಂಗೀತದಂತೆ ಪಠಿಸಲು ಸಾಧ್ಯವಾಗುತ್ತದೆ. ಅರಬ್ಬಿ ಭಾಷಾ ಸೌಂದರ್ಯ ಅಪಾರವಾದದ್ದು. ಭಾಷೆಯ ಶ್ರಿಮಂತಿಕೆಯಲ್ಲಿ ಅರಬ್ಬಿಯಷ್ಟು ಬೇರೆ ಯಾವ ಭಾಷೆಯಲ್ಲೂ ಇಲ್ಲ ಎಂದು ಅದರ ಪಂಡಿತರು ಹೇಳುತ್ತಾರೆ. ಅದರ ಪ್ರತಿ ಪದಗಳಲ್ಲೂ ಆಳವಾದ ಅರ್ಥಗಳಿವೆ. ಕುರಾನನ್ನು ಅರಬ್ಬಿ ಭಾಷೆಯಲ್ಲಿ ವಿವರಣೆ ನೀಡಿದಾಗ ಅದರಲ್ಲಿ ಸಿಗುವ ಅರ್ಥ ಮನಮುಟ್ಟುತ್ತದೆ, ಎಂತಹಾ ಕಲ್ಲು ಹೃದಯಗಳನ್ನು ಕೂಡ ಮೃದುವಾಗಿಸಿ, ಕಂಪಿಸುವ ಶಕ್ತಿ ಅದರಲ್ಲಿ ಅಡಗಿದೆ. ಮತ್ತು ಅದು ಮನಸ್ಸಿನ ಅಂತರಾಳಕ್ಕೆ ಸರಿಯಾಗಿ ನಾಟುತ್ತದೆ. ಬೇರೆ ಯಾವ ಭಾಷೆಗೂ ಕುರಾನನ್ನು ಭಾಷಾಂತರಗೊಳಿಸಿದರೂ ಅರಬ್ಬಿಯಲ್ಲಿ ವರ್ಣಿಸಿದಂತೆ ಮನಮ್ಮುಟ್ಟುವ ಶೈಲಿ ಮತ್ತು ಪದಗಳಿಲ್ಲವಂತೆ. ಚಿಕ್ಕದಾಗಿ ಚೊಕ್ಕವಾಗಿ ಒಂದೆ ವಾಕ್ಯದಲ್ಲಿ ಹಲವೆಡೆ ಹಲವು ರೀತಿಗಳಲ್ಲಿ ಮನಮುಟ್ಟಿಸುವ ಅಧ್ಬುತ ಪವಾಡ ಕುರಾನ್ನ ಅರಬ್ಬಿ ಭಾಷೆಯಲ್ಲಿದೆ.
ಉದಾಹರಣೆಗೆ:- (ಅಧ್ಯಾಯ 107 ಅಲ್-ಮಾಊನ್, 7ನೆ ಸೂಕ್ತದ ಬಗ್ಗೆ ಒಂದಿಷ್ಟು ನೋಡೊಣ:-, "ಜನರು ಸಾಮಾನ್ಯ ಅವಶ್ಯಕ ವಸ್ತುಗಳನ್ನು ನೀಡಲು ಹಿಂಜರಿಯುತ್ತಾರೆ") ಇಲ್ಲಿ ಅವಶ್ಯಕ ವಸ್ತುಗಳಾದ ಪಿಕ್ಕಾಸಿ,ಗುದ್ದಲಿ,ಗರಗಸ,ಕತ್ತಿ,ಸುತ್ತಿಗೆ,ಪೆನ್ನ್,ಕಾಗದ ಇತ್ಯಾದಿ ಇದಕ್ಕೆಲ್ಲಾ ಅರಭ್ಭಿ ಪದವಾದ "ಮಾಊನ್" ಎಂಬ ಮೂರಕ್ಷರಗಳನ್ನು ಉಪಯೋಗಿಸಲಾಗಿದೆ. ಈಗ ನೀವೆ ಹೇಳಿ ಯಾವ ಭಾಷೆಯಲ್ಲಿ ಇಷ್ಟು ಅರ್ಥಗರ್ಭಿತವಾದ ಪದಗಿಳಿವೆ? ಒಂದು ಸಣ್ಣ ವಾಕ್ಯ ಕೂಡ ದೊಡ್ಡ ಅರ್ಥವನ್ನು ಹೊರಚೆಲ್ಲುತೆ. ಇಂಗ್ಲೀಷ್ನಲ್ಲಿ ಬರೆಯುವ Mohammed ಏಂಬ ಪದವನ್ನು ಅರಬಿಯಲ್ಲಿمحمدಎಂದು ಸಣ್ಣದಾಗಿ ಬರೆಯಬಹುದು. ಇಂಗ್ಲೀಷ್ನಲ್ಲಿ ಬರೆದ 100 ಪುಟಗಳ ಒಂದು ಪುಸ್ತಕವನ್ನು ಅರಬ್ಬಿಯಲ್ಲಿ ಬರೆಯುವುದಾದರೆ ಸುಮಾರು 75 ಪುಟಗಳಲ್ಲಿ ಬರೆಯಬಹುದು,. ನಿಜಕ್ಕೂ ಇದು ಅಧ್ಬುತವಲ್ಲವೆ? ಅದರಿಂದಾಗಿ ಸಮಯ, ಹಣ, ಶಕ್ತಿ, ಶಾಯಿ, ಕಾಗದ ಎಲ್ಲಾ ಕಡಿಮೆ ಸಾಕಗುತ್ತದೆ. ಕುರಾನ್ ಅರಬ್ಬಿ ಭಾಷೆಯಲ್ಲಿ ಓದಲು ತಿಳಿಯದವರಿಗಾಗಿ ಇತರ ಭಾಷೆಗಳಾದ ರಷ್ಯನ್,ಜರ್ಮನ್,ಇಟಾಲಿಯನ್,ಚೈನಿಸ್,ಪಿಲಿಪೈನ್,ಮಲೈ,ಭಾರತಿಯ ಹೆಚ್ಚು ಕಮ್ಮಿ ಎಲ್ಲಾ ಭಾಷೆಗಳಲ್ಲೂ ಭಾಷಾಂತರ ಲಭ್ಯವಿದೆ. ಆದರೆ ಅರಬ್ಬಿ ಭಾಷೆಯಲ್ಲಿ ವರ್ಣಿಸಿದ ಹಾಗೆ ಸಿಗುವಷ್ಟು ಮನಮುಟ್ಟುವ ಸುಂದರ ಅರ್ಥಗಳು ಮಾತ್ರ ಸಿಗಲಾರದು. ಮೂಲ ಸುಂಗಂದ ದ್ರವ್ಯದ ಸುವಾಸನೆ ಮಿಶ್ರಿತ ಸುಗಂದದಲ್ಲಿ ಸಿಗುವುದೆ?
ಸೂರ ಅಲ್ ಹಿಜ್ರ್ 15:9 ("ಈ ಕುರಾನನ್ನು ನಿಶ್ಚಯವಾಗಿಯೂ ನಾವು ಅವತೀರ್ಣಗೊಳಿಸಿರುತ್ತೇವೆ. ಮತ್ತು ಸ್ವತಹ ನಾವೇ ಅದರ ರಕ್ಷಕರೂ ಆಗಿರುತ್ತೇವೆ.)
ಎಂದು ಕುರಾನ್ನ ರಕ್ಷಣೆಯ ಬಗ್ಗೆಯೂ ಬರೆಯಲಾಗಿದೆ. ಮುಸ್ಲಿಮರಾಗಿ ಹುಟ್ಟಿ Phd ಯಂತಹಾ ಡಿಗ್ರಿಗಳನ್ನು ಪಡೆದೂ, ವರ್ಷಗಟ್ಟಲೆ ಹಲವಾರು ಪುಸ್ತಕ ಮತ್ತು ಕೃತಿಗಳು, ಕಾದಂಬರಿಗಳನ್ನು ಓದಿ ಮುಗಿಸುವ ಹಲವಾರು ಮುಸ್ಲಿಮರಿಗೆ ಕುರಾನ್ನ್ನ ಬಗ್ಗೆ ಏನೂ ತಿಳಿದಿಲ್ಲ ಅಂದರೆ ಅವರಿಗಿಂತ ದೊಡ್ಡ ನಿರ್ಲಕ್ಷ್ಯವಹಿಸುವ ಅಥವಾ ಭಾಗ್ಯಹೀನರು ಇದ್ದಾರೆಯೆ? ನಿಮಗೆ ಅರ್ಥವಾಗುವ ಕುರಾನ್ನ ಪ್ರತಿಯನ್ನು ಇಂದೆ ಪಡೆಯಿರಿ, ಅದನ್ನು ನಿಮ್ಮ ಮೇಜಿನ ಮೇಲೆ ಕಣ್ಣಮುಂದೆ ಕಾಣುವಂತೆ ಇಡಿರಿ. ಕಡಿಮೆ ಪಕ್ಷ ದಿನಕ್ಕೆ ಒಂದು ಪುಟವನ್ನಾದರೂ ಅರ್ಥಸಹಿತ ಓದಿ, ಅದನ್ನು ಜೀವನದಲ್ಲಿ ಆಳವಡಿಸಲು ಪ್ರಯತ್ನಿಸತೊಡಗಿದರೆ ಮಾತ್ರ ಯಶಸ್ಸು ನಿಮ್ಮ ಕಡೆಗೆ ಬರುತ್ತದೆ. ಕುರಾನ್ನನ್ನು ಅನುಸರಿಸುವವರಿಗೆ ಅದರಿಂದಾಗುವ ಇಹ-ಪರ ಲಾಭಗಳು ತುಂಬಾ ಇದೆ.
ಉದಾಹರಣೆಗೆ ಬಡ್ಡಿಯ ವ್ಯವಹಾರವನ್ನು ಇಸ್ಲಾಂ ನಿಷೇದಿಸಿದೆ, ಅಧ್ಯಾಯ ಅಲ್ ಬಕರ, "ನೀವು ಬಡ್ಡಿಯ ವ್ಯವಹಾರ ತ್ಯಜಿಸದಿದ್ದರೆ ಅಲ್ಲಾಹ್ ಮತ್ತು ಅವನ ಸಂದೇಶವಾಹಕರ ಕಡೆಯಿಂದ ನಿಮ್ಮ ವಿರುದ್ದ ಯುದ್ದ ಘೋಷಣೆಯಿದೆಯೆಂದು ತಿಳಿದಿರಲಿ"(2:279), ಹೆಚ್ಚಿನಂಶ ಮುಸ್ಲಿಮರು ಇಂದು ಬಡ್ಡಿ ವ್ಯವಹಾರದಲ್ಲಿ ಮುಳುಗಿಹೋಗಿದ್ದಾರೆ, ಅವರು ಖರೀದಿಸುವ, ಮನೆ, ವಾಹನಗಳು, ಆಭರಣ, ಭೂಮಿ, ವ್ಯಾಪಾರ ಇತರ ಎಲ್ಲಾ ಬಡ್ಡಿಯ ಹಣದಿಂದಾಗಿದೆ. ವಿಸಾ ಕಾರ್ಡ್ನಿಂದ ಆಹಾರ ಪಧಾರ್ಥಗಳು, ಮೊಬೈಲ್, ಎಲೆಕ್ಟ್ರಾನಿಕ್ನ ಎಲ್ಲಾ ವಸ್ತುಗಳು ಕೊಂಡುಕೊಳ್ಳುತ್ತಾರೆ, ಮೊದಲು ಒಂದು ವಸ್ತು ಪಡೆಯುವಾಗ ಅದರ ಬಡ್ಡಿ ಲೆಕ್ಕ ಹಾಕಿ, ಇದು ಸಣ್ಣ ಬಡ್ಡಿಯಲ್ಲವೆ ಬೇಗನೆ ಕಟ್ಟಿ ಮುಗಿಸುವ ಎಂದು ಯೋಚಿಸುತ್ತಾರೆ, ಮನೆ, ಕಾರು, ಇತರ ಎಲ್ಲಾ ವಸ್ತುಗಳು ಸೇರುವಾಗ ನಮಗೆ ತಿಳಿಯದಂತೆ ಲಕ್ಷಾಂತರ ರೂಪಾಯಿ ಬಡ್ಡಿಯ ಮೊತ್ತವಾಗುತ್ತದೆ, ಮತ್ತು ಜೀವನ ಪರ್ಯಂತ ಬ್ಯಾಂಕ್ಗೆ ಹಣ ಕಟ್ಟಿ, ಕಟ್ಟಿ ನಾವೆ ಮುಗಿಯಬೇಕೆ ಹೊರತು ಬಡ್ಡಿಯ ಹಣ ಮುಗಿಯುವುದಿಲ್ಲ, ಅದೊಂದು ದರೀದ್ರ ಹೀಡಿದ ಹಾಗೆ, ಏಕೆಂದರೆ ಮುಸ್ಲಿಮರು ಬಡ್ಡಿಯ ವ್ಯವಹಾರಕ್ಕೆ ಕೈ ಹಾಕಿ, ಅಲ್ಲಾಹನ ಮಾತನ್ನು ಕಡೆಗಣಿಸಿ ಅಲ್ಲಾಹನು ಮತ್ತು ಅಲ್ಲಾಹನ ಪ್ರವಾದಿಯೊಂದಿಗೆ ಯುದ್ದಕ್ಕೆ ನಿಂತಿರುತ್ತಾನೆ, ನೀವೆ ಹೇಳಿ ಯಾವ ಆಯುಧ ಬಳಸಿ ನೀವು ಅಲ್ಲಾಹ್ ಮತ್ತು ಅವನ ಪ್ರವಾದಿಯೊಂದಿಗೆ ಯುದ್ದದಲ್ಲಿ ಗೆಲ್ಲುವಿರಿ? ನೀವು ಬಡ್ಡಿಯ ವ್ಯವಹಾರ ತ್ಯಜಿಸದಿದ್ದರೆ ಅಲ್ಲಾಹು ನಿಮಗೆ ಮಳೆಯಂತೆ ಕಷ್ಟದ ಮೇಲೆ ಕಷ್ಟವನ್ನು ನೀಡುವನು, ನೀವು ಆ ಕಷ್ಟದಿಂದ ಹೊರಬರಲು ಸಾಧ್ಯವಿಲ್ಲ. ಹಾಸಿಗೆ ಇದ್ದಷ್ಟು ಕಾಲು ಚಾಚಲು ಕಲಿಯಬೇಕು, ಶ್ರೀಮಂತರು ಕಾರು ಖರೀದಿಸಿದರೆ ನಮಗೆ ಕೂಡ ಅವರು ಮಾಡಿದಂತೆ ಮಾಡಬೇಕೆಂಬ ಈ ನಿಲುವನ್ನು ಬದಲಾಯಿಸಬೇಕು, ಸರಳ ಜೀವನವನ್ನು ನಡೆಸಲು ಕಲಿಯಬೇಕು, ಹಣವಿದ್ದವನು ಮಾಡಲಿ ಆದರೆ ಇಲ್ಲದವನು ಬಡ್ಡಿಯ ಹಣದಿಂದ ಇದೆಲ್ಲಾ ಮಾಡುವುದು ಬೇಡ. ಅಲ್ಲಾಹನ ಅನುಗ್ರಹದಿಂದ ನೀವು ಕೂಡ ಹಣವಂತರಾದರೆ ಆಗ ನೀವು ಕೂಡ ಹಾಗೆ ಮಾಡಿದರೆ ತೊಂದರೆ ಇಲ್ಲ. ಇನ್ನು ಹಣದ ಅಗತ್ಯ ಬಿದ್ದರೆ ಮನಸ್ಸನ್ನು ಬ್ಯಾಂಕ್, ಬಡ್ಡಿ ಅಥವಾ ವಿಸಾಕಾರ್ಡ್ನ ಕಡೆಗೆ ತಿರುಗಿಸಬಾರದು, ಬಡ್ಡಿಯ ಹಣ ನನ್ನ ಜೀವ ಹೋದರೂ ನಾನು ಮುಟ್ಟಲಾರೆ ಎಂದು ಶಪಥ ಮಾಡಿದರೆ ಆಗ ನಮ್ಮ ಮನಸ್ಸು ಹಣ ಮಾಡಲು ಬೇರೆ ದಾರಿಯನ್ನು ಚಿಂತಿಸುತ್ತದೆ, ಮತ್ತು ಅಲ್ಲಾಹು ನಮಗೆ ಆ ದಾರಿಯನ್ನು ಸುಲಭಮಾಡಿ ಕೊಡುತ್ತಾನೆ, ಇಲ್ಲಿ ಒಂದು ಉದಾಹರಣೆಯನ್ನು ನೋಡಿರಿ. ನನ್ನ ಸೇಹಿತನೊಬ್ಬ ಮನೆ ಕಟ್ಟಲು ಜಾಗ ಖರೀದಿಸಿದ್ದನು, ಮನೆಕಟ್ಟಲು ಕೈಯಲ್ಲಿ ಹತ್ತು ಲಕ್ಷ ಹಣ ಮಾತ್ರ ನಗದು ಇತ್ತು. ಆದರೆ ಆ ಹಣ ಮನೆಕಟ್ಟಲು ಸಾಕಗುತ್ತಿರಲಿಲ್ಲ, ಬ್ಯಾಂಕ್ ಲೋನ್ ಮಾಡಲೆಂದು ಪ್ಲಾನ್ ಮಾಡಿ ಅದಕ್ಕೆ ಬೇಕಾದ ತಯಾರಿಯಲ್ಲಿದ್ದನು. ಆದರೆ ಅವನ ಇನ್ನೊಂದು ಸ್ನೇಹಿತನು ಬಡ್ಡಿ ಇಸ್ಲಾಂನಲ್ಲಿ ನಿಷೇದ ಮತ್ತು ಅದರ ಬಗ್ಗೆ ಸವಿಸ್ತಾರವಾದ ಎಲ್ಲಾ ವಿವರಣೆ ನೀಡಿ, ನೀನು ಕೈಯಲ್ಲಿರುವ ಹಣದಿಂದ ಇನ್ನೊಂದು ಜಾಗ ಖರೀದಿಸುವಂತೆ ಸಲಹೆ ಮಾಡಿದನು, ಅದರಂತೆ ಅವನು ಇನೊಂದು ಜಾಗ ಖರೀದಿಸಿದನು, ಆದರೆ ಅವನ ಮನೆಯವರಿಗೆ ಮನೆಕಟ್ಟುವ ಆತುರವಿತ್ತು, ಲೋನ್ ಆದರೂ ಅವರಿಗೆ ಆಗಬಹುದಿತ್ತು. ಇವನು ಬ್ಯಾಂಕ್ ಲೋನ್ ಮಾಡುವ ನಿರ್ಧಾರವನ್ನು ಕೈಬಿಟ್ಟನು. ಜಾಗ ಖರೀದಿಯ ನಂತರ ಗಲ್ಪ್ಗೆ ಹಿಂದುರಿಗಿ ಹೋದನು, 6 ವರ್ಷಕಳೆದನಂತರ ಅವನು 10 ಲಕ್ಷಕ್ಕೆ ಖರೀದಿಸಿದ ಆ ಜಾಗಕ್ಕೆ 40 ಲಕ್ಷ ಬೆಲೆಯಾಗಿತ್ತು, ಬಾರಿ ಸಂತೋಷದಿಂದ ಅವನು 40 ಲಕ್ಷಕ್ಕೆ ಆ ಜಾಗ ಮಾರಿ, ಸುಂದರವಾದ ಒಂದು ಮನೆಯನ್ನು ಕಟ್ಟಿದನು, ಕೆಲವೊಮ್ಮೆ ಅವನು ಲೋನ್ ಮಾಡಿ ಮನೆ ಕಟ್ಟಿದ್ದರೆ ಇನ್ನೂ ಹತ್ತು ವರ್ಷಕ್ಕೆ ಅವನ ಸಾಲ ಮುಗಿಯುತ್ತಿರಲಿಲ್ಲ. ನೋಡಿದಿರಾ ಅಲ್ಲಾಹ್ ಒಳ್ಳೆಯ ನಿರ್ಥಾರ ಮಾಡಿದವನೀಗೆ ಎಷ್ಟು ಒಳ್ಳೆಯ ಬರ್ಕತ್ ನೀಡಿದನು. ನಮ್ಮಲ್ಲಿ ವಿಶ್ವಾಸ, ಸಹನೆ ಇದ್ದು, ಹಣಗಳಿಸಲು ಇತರ ಉತ್ತಮ ಮಾರ್ಗಗಳನ್ನು ಹುಡುಕಿದರೆ ಅಲ್ಲಾಹು ತನ್ನ ದಾಸನನ್ನು ಖಂಡಿತಾ ನಿರಾಶೆಗೊಳಿಸನು. ಇದೆ ರೀತಿ ಇಸ್ಲಾಮಿನ ಎಲ್ಲಾ ಆಶಯಗಳು ಉತ್ತಮವಾದದ್ದು. ಇದನ್ನು ಅರ್ಥಮಾಡಲು ನಾವು ಕುರಾನನು ನಮಗೆ ಅರ್ಥವಾಗುವ ಭಾಷೆಯಲ್ಲಿ ಕಲಿತು ಅದನ್ನು ಜೀವನದಲ್ಲಿ ಕಾರ್ಯಗತಗೊಳಿಸಿದರೆ ನಿಸ್ಸಂದೇಹವಾಗಿಯೂ ಯಶಸ್ಸು ನಿಮ್ಮ ಕಡೆಗೆ ಬರುತ್ತದೆ. ಈ ಮಾತುಗಳನ್ನು ನಿಮ್ಮ ಬಂಧು ಸ್ನೇಹಿತರೀಗೂ ತಿಳಿಸಿ ಅವರೂ ಕೂಡ ಅವರ ಜೀವನದಲ್ಲಿ ಯಶಸ್ಸನ್ನು ಕಾಣಲಿ.
"ಕುರ್ಆನ್ನಲ್ಲಿ ವಿವರಿಸಲ್ಪಡುತ್ತಿರುವುದೆಲ್ಲ ಕೃತಕ ವಿಷಯಗಳಲ್ಲ. ಪರಂತು ಇದಕ್ಕಿಂತ ಮುಂಚೆ ಬಂದಿರುವ ಗ್ರಂಥಗಳ ದೃಢಿಕರಣವೂ ಪ್ರತಿಯೊಂದು ವಿಷಯದ ವಿವರಣೆಯೂ, ಸತ್ಯವಿಶ್ವಾಸವನ್ನು ಸ್ವೀಕರಿಸಿಕೊಳ್ಳುವವರಿಗೆ ಸನ್ಮಾರ್ಗದರ್ಶನವೂ ಅನುಗ್ರಹವೂ ಆಗಿರುತ್ತದೆ". (ಸೂರ ಯೂಸುಪ್:111)
ಅಬ್ದುಲ್ ಅಜೀಜ್ ಕೂರ್ಗ್