*"ಮತಿಗೆಟ್ಟವರ ಗತಿಕೇಡು"*
✍🏻 *ಎಂ.ಯು*
( ಹಿನ್ನಲೆ: ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾಂಸಾಹಾರ ಸೇವಿಸಿ ದೇವಸ್ಥಾನ ಪ್ರವೇಶಿಸಿದ್ದರಿಂದ ದೇವಸ್ಥಾನ ಅಪವಿತ್ರವಾಯಿತೆಂಬ ಕೂಗು ಎದ್ದ ವಿಚಾರ ಹಾಗೂ ಅಲ್ಲಿ ಆಡಳಿತಾಧಿಕಾರಿ ಮಾಂಸಾಹಾರ ಸೇವಿಸಿ ದೇವಸ್ಥಾನ ಪ್ರವೇಶಿಸಬಾರದೆಂಬ ನಿಯಮವೇನೂ ಪ್ರಸ್ತುತ ದೇವಸ್ಥಾನದಲ್ಲಿ ಇಲ್ಲ. ಎಂಬ ಸ್ಪಷ್ಟೀಕರಣ ನೀಡಿರುತ್ತಾರೆ.)
ಈ ವಿಚಾರವಾಗಿ ವಿವಾದವೆಬ್ಬಿಸುತ್ತಾ
*ಸಿದ್ಧರಾಮಯ್ಯ* ರವರು ಹಂದಿ ತಿಂದು ಮಸ್ಜಿದ್'ಗೆ ಹೋಗಲಿ. ಎಂದು ಸವಾಲು ಹಾಕುತ್ತಾ ಕೆಲವು ಕೂಪಮಂಡೂಕಗಳು ವಟಗುಟ್ಟುತ್ತಾ ತಾವು ಅಜ್ಞಾನಿಗಳೆಂಬುವುದನ್ನು ಸಾಬೀತು ಪಡಿಸುತ್ತಿರುವುದು ಸಂತಸದ ವಿಚಾರವೇ ಸರಿ.😄
*ಮುಖ್ಯಮಂತ್ರಿ ಸಿದ್ಧರಾಮಯ್ಯ
ಏನುತಿನ್ಬೇಕು ; ಎಲ್ಲಿಗೆ ಹೋಗ್ಬೇಕು ಎಂದು ತೀರ್ಮಾನಿಸಲು ನೀವು ಯಾರು?
*ಈ ವಿಚಾರದಲ್ಲಿ ಇಸ್ಲಾಮನ್ನು ಏಕೆ ನಡುವೆ ಎಳೆದು ತರ್ತೀರಿ?
ಸಿದ್ಧರಾಮಯ್ಯರೂ ಹಿಂದೂ ಧರ್ಮೀಯರೇ ಆಗಿದ್ದಾರೆ ಹಾಗೂ ಅವರು ಮಾಂಸಾಹಾರ ಸೇವಿಸಿ ಪ್ರವೇಶಿಸಿದ ದೇವಾಲಯವೂ ಹಿಂದೂಗಳದ್ದೇ ಆಗಿದೆ. ಇಲ್ಲಿ ಮಸ್ಜಿದ್ ಹಾಗೂ ಹಂದಿ ಯಾಕೆ ಬಂತು? ನಿಮ್ಮ ಧರ್ಮದ ವಿಚಾರದಲ್ಲಿ ಇತರರನ್ನೇಕೆ ಎಳೆದು ತರ್ತಿದ್ದೀರಾ?
ಅಷ್ಟಕ್ಕೂ *"ಗೋಕುಲಾಷ್ಟಮಿಗೂ ಮಕ್ಬೂಲ್ ಸಾಬರಿಗೂ ಏನು ಸಂಬಂಧ?"* ನಿಮ್ಮ ಧರ್ಮದ ನಿಯಮಗಳನ್ನು ಪ್ರತಿಪಾದಿಸಲು ಇಸ್ಲಾಮಿನ ಸಹಾಯವನ್ನು ಪಡೆಯುತ್ತಿದ್ದೀರಲ್ಲಾ.. ಅಷ್ಟಕ್ಕೂ ಆಧಾರಗಳಿಲ್ಲದ ಧರ್ಮ ನಿಮ್ಮದೆಂದು ಸ್ವತಃ ಒಪ್ಪಿಕೊಂಡಂತಲ್ಲವೇ?
ಮುಸ್ಲಿಮರು ಅವರ ಧರ್ಮದಲ್ಲಿ ಒಪ್ಪಿಕೊಂಡವುಗಳನ್ನು ನೀವು ಒಪ್ಪಿಕೊಳ್ಳುವಿರಾ?
ನಿಮ್ಮ ಧರ್ಮದ ನಿಯಮಗಳನ್ನು ಪ್ರತಿಪಾದಿಸಲು ನಿಮ್ಮ ಧರ್ಮದ ಆಧಾರ ಗ್ರಂಥಗಳನ್ನು ಬಳಸಿ ಸಮರ್ಥಿಸಿ. ಅದನ್ನ ಬಿಟ್ಟು ಹಂದಿ ತಿಂದರೆ ಅವರು ಒಪ್ಪಿಕೊಳ್ತಾರಾ; ಇವರು ಒಪ್ಪಿಕೊಳ್ತಾರ ಎಂಬ ಉಸಾಬರಿ ನಿಮಗೇಕೆ?
*ಇಸ್ಲಾಮ್ ಹಂದಿ ತಿನ್ನುವುದನ್ನು ನಿಷೇಧಿಸಿದೆ; ಹಂದಿ ತಿನ್ನುವವರನ್ನು ಅಸ್ಪೃಶ್ಯರಂತೆ ಕಂಡು ದೂರವಿಡಬೇಕು. ಅವರು ಮನೆ ಆರಾಧನಾಲಯಗಳಿಗೆ ಬಂದ್ರೆ ಮೈಲಿಗೆಯಾಗುತ್ತದೆ ಎಂದು ಎಲ್ಲೂ ಹೇಳಿಲ್ಲ.
*ಮುಸ್ಲಿಮರ ಧಾರ್ಮಿಕ ಕೇಂದ್ರಗಳಾದ ದರ್ಗಾ,
ಮಸ್ಜಿದ್'ಗಳಿಗೆ ಅದೆಷ್ಟೋ ಮುಸ್ಲಿಮೇತರರು ಬರುತ್ತಾರೆ. ಅಲ್ಲಿ ಬಂದಾಗ ಮನುಷ್ಯನಿಗೆ ಯಾವರೀತಿಯ ಆದರ ಗೌರವಗಳು ಸಲ್ಲಬೇಕೋ ಅವುಗಳನ್ನು ನೀಡಲಾಗುತ್ತದೆ. ಅವರು ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಂಡರೆ ಅವುಗಳ ನಿವಾರಣೆಗಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.
*ಬಂದವರೊಂದಿಗೆ ನೀನು ಹಂದಿ,ಕುರಿ,ದನ,ಕೋಳಿ,ಮೀನು ತಿಂದು ಬಂದಿರುವೆಯಾ? ಎಂದು ಪ್ರಶ್ನಿಸಿ ಪ್ರವೇಶ ನಿರಾಕರಿಸುವುದಿಲ್ಲ.
ಬಂದವರಿಗೆ ಬಾಯಾರಿಕೆ ಹಾಗೂ ಹಸಿದು ಬಂದವರ ಹಸಿವು ತಣಿಸುವ ಕಾರ್ಯ ನಡೆಯುತ್ತದೆ.
ಬಂದ ಅತಿಥಿಗಳೊಂದಿಗೆ ಏನು ತಿಂದು ಬಂದಿರಿ? ಎಂದು ಪ್ರಶ್ನಿಸಿ ನಿರಾಕರಿಸುವುದು ಮಾನವ ಸಂಸ್ಕೃತಿಯಂತೂ ಅಲ್ಲ.
ಬಂದವರನ್ನು ಮಾನವರಾಗಿ ಕಂಡು ಅವರ ದಾಹ ತಣಿಸುವುದು ಹಾಗೂ ಹಸಿದವರ ಆಹಾರ ನೀಡುವುದು ಮಾನವ ಸಂಸ್ಕೃತಿ.
ಏನು ತಿಂದು ಬಂದಿರಿ? ಎಂದು ಕೇಳುವ ಬದಲು ಬಂದವರೊಂದಿಗೆ ಏನು ತಿನ್ನುವಿರಿ? ಎಂದು ಆದರದಿಂದ ಕೇಳುವುದಾಗಿದೆ ಮಾನವೀಯತೆ.
*ಈವರೆಗೂ ಹಲವಾರು ರಾಜಕಾರಣಿಗಳು ಮಸೀದಿ, ದರ್ಗಾಗಳಿಗೆ ಭೇಟಿ ನೀಡಿದಾಗ ಯಾರಲ್ಲೂ *ನೀವು ಹಂದಿ ತಿಂದು ಬಂದಿರಾ? ಎಂದು ಪ್ರಶ್ನಿಸಿ ಪ್ರವೇಶ ನಿರಾಕರಿಸಿದ ಒಂದೇ ಒಂದು ನಿದರ್ಶನ ತೋರಿಸಲು ನಿಮಗೆ ಸಾಧ್ಯವಿಲ್ಲ.*
ಎಲ್ಲದಕ್ಕೂ ಇಸ್ಲಾಮನ್ನು ಎಳೆದು ತರ್ತೀರಲ್ಲಾ? ನಿಮಗೊಂದು ಸವಾಲು.
*ನಾವು ದರ್ಗಾ,ಮಸ್ಜಿದ್'ಗಳಿಗೆ ಮುಸ್ಲಿಮೇತರರು ಭೇಟಿ ಕೊಟ್ಟರೆ (ಅವರು ಹಂದಿ ತಿಂದು ಬಂದಿದ್ದರೂ) ಅವರಿಗೆ ಪ್ರವೇಶ ನಿರಾಕರಿಸಲ್ಲ.
ನಾವು ಅವರೇನು ತಿಂದು ಬಂದಿದ್ದಾರೆ ಎಂದು ಪ್ರಶ್ನಿಸುವುದೇ ಇಲ್ಲ.ಇನ್ನು ಪ್ರವೇಶ ನಿರಾಕರಣೆಯ ವಿಚಾರ ಅಲ್ಲಿ ಇಲ್ಲವೇ ಇಲ್ಲ. ಅವರಿಗೆ ಮಾನವನಿಗೆ ಸಲ್ಲಬೇಕಾದ ಗೌರವಾದರಗಳು ನೀಡುತ್ತೇವೆ. ಹಂದಿ ತಿನ್ನುವವರು ಎಂಬ ಕಾರಣಕ್ಕೆ ಮೈಲಿಗೆಯಾಗುತ್ತದೆಂದು ಪ್ರವೇಶ ನಿರಾಕರಿಸಲ್ಲ. ಕುರ್-ಆನ್ ನಮಗೆ *"ಮನುಕುಲವನ್ನು ಗೌರವಿಸಿ."* ಎಂದು ಕಲಿಸಿದ್ದನ್ನು ನಾವು ಪಾಲಿಸ್ತೇವೆ. ನೀವು ಇತರ ಧರ್ಮೀರಿಗೆ ದೇವಾಲಯಗಳಲ್ಲಿ ಹಾಗೆ ಪ್ರವೇಶ ನೀಡಲು ಸಿದ್ಧರಿದ್ದೀರಾ?
ಇತರ ಧರ್ಮೀಯರು ಬಿಡಿ; ನೀವು *ನಾವೆಲ್ಲಾ ಹಿಂದೂ- ನಾವೆಲ್ಲ ಒಂದು* ಎಂದು ಘೋಷಿಸಿರುವ ವ್ಯಾಪ್ತಿಯೊಳಗೆ ಬರುವ ಹಿಂದುಳಿದವರು, ದಲಿತರು, ನೀವು ಅಸ್ಪೃಶ್ಯರೆಂದು ಪರಿಗಣಿಸಿದ ಹಿಂದೂಗಳಿಗಾದ್ರೂ ಮುಕ್ತ ಅವಕಾಶ ನೀಡಲು ಸಿದ್ಧರಿದ್ದೀರಾ?
ಇವರಿಗೆಲ್ಲಾ ಕೊನೆಯ ಪಕ್ಷ ಮಾನವನಿಗೆ ಸಲ್ಲಬೇಕಾದ ಆದರವನ್ನಾದರೂ ನೀಡ್ತೀರಾ? ಹೀಗೆ ಮಾಡುವ ಮೂಲಕ *"ವಸುದೈವ ಕುಟುಂಬಕಂ."* ಎಂಬುವುದನ್ನು ಪಾಲಿಸಲು ಸಿದ್ಧರಿದ್ದೀರಾ?
ಎಲ್ಲಕ್ಕೂ ಇಸ್ಲಾಮಿನ ವಿಧಿ-ವಿಧಾನಗಳನ್ನು ಎಳೆದು ತಂದು ಅವುಗಳನ್ನು ದುರ್ವ್ಯಾಖ್ಯಾನ ಮಾಡಿ ರಾಡಿಯೆಬ್ಬಿಸ್ತೀರಲ್ಲ??
*ಮುಸ್ಲಿಮರು ತಮ್ಮ ಧಾರ್ಮಿಕ ಕೇಂದ್ರಗಳಾದ ದರ್ಗಾ, ಮಸ್ಜಿದ್'ಗಳಲ್ಲಿ ಇಸ್ಲಾಮ್ ಅನುವದನೀಯಗೊಳಿಸಿದ ಪ್ರಾಣಿಗಳ ಮಾಂಸದೂಟದ ಪ್ರಸಾದವನ್ನು ನೀಡ್ತಾರೆ.
ನಿಮ್ಮ ದೇವಾಲಯಗಳಲ್ಲಿ ನಿಮಗೆ ತಿನ್ನಲು ಅನುವದನೀಯವಾದ ಪ್ರಾಣಿಗಳ ಮಾಂಸದೂಟವನ್ನು ಪ್ರಸಾದವಾಗಿ ನೀಡಲು ಸಿದ್ಧರಿದ್ದೀರಾ??
#ನಮ್ಮ ಧಾರ್ಮಿಕ ಕೇಂದ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ಎಲ್ಲರೂ *ಒಂದೇ ಲೋಟದಲ್ಲಿ ತುಟಿಹಚ್ಚಿ* ನೀರು ಕುಡಿಯುತ್ತೇವೆ.
ನಿಮ್ಮ ದೇವಾಲಯಗಳಲ್ಲಿ ಎಲ್ಲಾ ಜಾತಿಯ ಹಿಂದೂಗಳು ಕೂಡಾ ಒಂದೇ ಲೋಟದಲ್ಲಿ ತುಟಿಹಚ್ಚಿ ನೀರು ಕುಡಿಯುವ ವ್ಯವಸ್ಥೆಯನ್ನು ಒಪ್ಪಿಕೊಳ್ಳುವಿರಾ?
#ನಮ್ಮ ಮಸ್ಜಿದ್'ಗಳಲ್ಲಿ ಮುಸ್ಲಿಮರು ಬಡವ-ಶ್ರೀಮಂತ ಕರಿಯ-ಬಿಳಿಯ ಹಾಗೂ ವೃತ್ತಿಯಾಧಾರಿತ ಯಾವುದೇ ತಾರತಮ್ಯವಿಲ್ಲದೆ ಭುಜಕ್ಕೆ ಭುಜ ಸೇರಿಸಿ ಸಾಲಾಗಿ ನಿಂತು ಪ್ರಾರ್ಥನೆ ಮಾಡ್ತೇವೆ.
ಪ್ರಾರ್ಥನೆಯಲ್ಲಿ ನಿರ್ದಿಷ್ಟ ವರ್ಗದವರಿಗೆ ವಿಶೇಷ ಪರಿಗಣನೆಯೆಂಬುವುದಿಲ್ಲ. ಒಬ್ಬ ಕೂಲಿಕೆಲಸದವ ಮೊದಲು ಬಂದಿದ್ದರೆ ಅವನು ಪ್ರಾರ್ಥನೆಗೆ ಮೊದಲ ಸಾಲಲ್ಲಿ ನಿಂತದ್ರೂ ಮೊದಲ ಸಾಲು ಪೂರ್ಣಗೊಂಡ ಬಳಿಕ ಎಷ್ಟೇ ದೊಡ್ಡ ಗಣ್ಯ, ಮಂತ್ರಿ ಬಂದರೂ ಅವನು ಹಿಂದೇನೇ ನಿಲ್ಲಬೇಕು.
ನಿಮ್ಮ ದೇವಾಲಯಗಳ ಪ್ರಾರ್ಥನೆಯಲ್ಲಿ ಎಲ್ಲ ಜಾತಿಯವರಿಗೂ ಈರೀತಿಯ ಸಮಾನ ಅವಕಾಶ ನೀಡುವಿರಾ?
ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ *"ಇಲ್ಲ".* ಎಂದಾಗಿದ್ದರೆ; ನಿಮ್ಮ ಧರ್ಮದ ಸಮಸ್ಯೆಗಳಿಗೆ ಇತರ ಧರ್ಮಗಳ ಕಡೆ ಕೈತೋರಿಸಿ ವಿವಾದವೆಬ್ಬಿಸುವ ಕೆಲಸವನ್ನು ಮಾಡಬೇಡಿ. ನಿಮ್ಮ ಧರ್ಮದ ನಿಯಮಗಳನ್ನು ನೀವು ಪಾಲಿಸಿ. ನಮ್ಮ ಧರ್ಮದ ನಿಯಮಗಳನ್ನು ನಾವು ಪಾಲಿಸ್ತೇವೆ.
*"ನಮ್ಮ ಧರ್ಮ ನಮಗೆ-ನಿಮ್ಮ ಧರ್ಮ ನಿಮಗೆ."*
(ಸೂಚನೆ: ಈ ಲೇಖನವು ಹಿಂದೂಗಳ ಭಾವನೆಗಳನ್ನು ವಿರೋಧಿಸಲು ಬರೆದುದಲ್ಲ. ಇಸ್ಲಾಮ್ ಇತರರ ಭಾವನೆಗಳನ್ನು ಅವಹೇಳಿಸುವುದನ್ನು ವಿರೋಧಿಸುತ್ತದೆ. ಮೇಲಿನ ವಿಚಾರದಲ್ಲಿ ಅನವಶ್ಯಕವಾಗಿ ಇಸ್ಲಾಮನ್ನು ಎಳೆದು ತಂದುದಕ್ಕಾಗಿ ಪ್ರತಿಕ್ರಿಯೆ ನೀಡಲು ಬರೆದುದಾಗಿದೆ.)