ಮೊತ್ತ ಮೊದಲು ಕುರಾನಿನ ಬಗ್ಗೆ ಕೆಲವು ಮಾತುಗಳು ..!
ಕುರಾನ್ ಅಂದರೆ ಪಠಿಸುವುವದಾಗಿದೆ
ಅದನ್ನು ಬಾಯಿಪಾಠ ಮಾಡಿ ಪಠಿಸಿರಿ ಬರೆದು ಪಠಿಸಿರಿ ಹೇಗೂ ಪಠಿಸಿರಿ
ಅದು ಮೊತ್ತ ಮೊದಲು ತನ್ನನ್ನು ತಾನೇ ಮನುಕುಲದ ಮಾರ್ಗದರ್ಶನಕ್ಕೆ ಅವತೀರ್ಣ ಗೊಳಿಸಲಾಗಿದೆ ಎಂದು ಸಾರಿದೆ ಅಧ್ಯಾಯ 2 , ಸೂಕ್ತ 2
ಇಲ್ಲಿ ಅವತೀರ್ಣ ಮತ್ತು ಮಾರ್ಗದರ್ಶನ ಎರಡೂ ತಿಳಿಯಬೇಕಾದ ವಿಷಯ
ಅದಕ್ಕಾಗಿ ಅಂದಿನ ಕಾಲದ ಲೋಕದ ಅವಸ್ಥೆಯ ಮೇಲೆ ತುಸು ಕಣ್ಣಾಡಿಸಬೇಕಾಗಿದೆ .
ಇಡೀ ಲೋಕದಲ್ಲಿ ಜನರು ಆರು ವಿಭಾಗದಲ್ಲಿ ವಿಂಗಡಿಸಿ ಹೋಗಿದ್ದರು
ಐ ರಿಪೀಟ್
ಇಡೀ ಲೋಕದಲ್ಲಿ ಜನರು ಆರು ವಿಭಾಗದಲ್ಲಿ ವಿಂಗಡಿಸಿ ಹೋಗಿದ್ದರು .
೧. ಜನರು ತಮ್ಮ ಮನ ಬಂದಂತೆ ಯಾರ ಕೈಯಲ್ಲಿ ದೊಣ್ಣೆಯೊ ಅವರದೇ ಎಮ್ಮೆ ಎಂದು ಅಟ್ಟಹಾಸದಲ್ಲಿ ಎಲ್ಲ ದೌರ್ಜನ್ಯಗಳನ್ನು ಮಾಡುತ್ತ ಮೆರೆಯುತ್ತಿದ್ದರು
೨. ಜನರು ಆ ದೌರ್ಜನ್ಯಕ್ಕೆ ಒಳಗಾಗಿ ಶೋಷಣೆಯ ಹೀನಾಯ ಗುಲಾಮ ಜೀವನ ನಡೆಸುತ್ತಿದ್ದರು
೩. ಜನರು ಈ ದೌರ್ಜನ್ಯವನ್ನು ನೋಡಿ ಬೇಸತ್ತು ಪರ್ವತಗಳ ಮೇಲೆ ಗುಹೆಗಳೊಳಗೆ ನೆಮ್ಮದಿ ಶಾಂತಿ ಅರಸಿ ಹೋಗಿ ತಮಗೆ ಮನ ಬಂದ ರೀತಿಯಲ್ಲಿ ಸರಿಯಾದ ಜ್ಞಾನವಿಲ್ಲದಿದ್ದರೂ ದೇವಧ್ಯಾನದಲ್ಲಿ ಅಳವಡಿಸಿ ಕೊಂಡಿದ್ದರು
೪. ಈ ಮೂರೂ ವಿಧದ ಜನರನ್ನು ನೋಡಿ ಓ ದೇವನೇ ನೀನು ಇರುವಿ ಎಂದಾದರೆ ನಮಗೆ ನಿನ್ನ ಅರಿವನ್ನು ನೀಡು
ಎಂದು ತಾವಾಗಿಯೇ ಆಕಾಶದೆಡೆ ಮುಖ ಮಾಡಿ ಬೇಡುತ್ತಿದರು .
೫ , ಇಲ್ಲಿ ದೇವರ ಆಪ್ತರು ಗ್ರಂಥದವರೆಂದು ಕೊಚ್ಚಿ ಕೊಂಡು ನಮ್ಮ ಕೊನೆಯ ಮಾರ್ಗದರ್ಶಕ ಬರುವ ಸ್ಥಳ ವಿದೆಂದು ಸಾರಿ ಜನರ ಮಧ್ಯೆ ಕೊಚ್ಚಿ ಕೊಳ್ಳುತ್ತಾ ಕ್ರೈಸ್ತರು ಯಹೂದಿಗಳೂ , ತಮ್ಮ ತಮ್ಮ ಅಳಿದು ಉಳಿದ ರೀತಿ ನೀತಿಗಳನ್ನು ಅಳವಡಿಸುತ್ತಾ ಪಾದ್ರಿಗಳ ಮತ್ತು ರಬ್ಬಿಗಳ ಮಾತಿನಂತೆ ನಡೆಯುತ್ತಿದ್ದರು .
೬. ಆರನೇ ಗುಂಪಿನ ಜನರು , ಯಾವುದೇ ದೇವರುಗಳಿಲ್ಲ , ಮಜಾ ಮಾಡಿ ಜೀವಿಸಿ ಎಂಬ ರೀತಿಯಲ್ಲಿರುತ್ತಿದ್ದರು
ಆಗ ಅರಬರಲ್ಲಿ ಕೂಡ ಈ ಆರು ರೀತಿಯ ಜನರು ಒಟ್ಟಾಗಿ ಇದ್ದರು ಇವರ ಮಧ್ಯೆ ಯಾವುದೇ ವೈಶಮ್ಯವಿರದೇ ಅಂಧಕಾರದಲ್ಲಿ ಜೀವಿಸುತ್ತಿದ್ದರು .
ಯಾರೂ ಯಾರ ಮೇಲೆ ದೌರ್ಜನ್ಯ ವೆಸಗಲಿ ಅದಕ್ಕೆ ನ್ಯಾಯ ನೀಡುವ ಮಟ್ಟಿಗೂ ಚಿಂತಿಸುತ್ತಿರಲಿಲ್ಲ
ಅಂತಹ ಸಮಯದಲ್ಲಿ ಪ್ರವಾದಿ ಮೊಹಮ್ಮದರು ಮೂರನೇ ಗುಂಪಿಗೆ ಸೇರಿದವರಾಗಿದ್ದರು
ಒಂದು ಅತ್ಯುತ್ತಮ ನಲ್ವತ್ತು ವರ್ಷಗಳ ಜೀವನ ನಡೆಸಿ ಜನರಿಂದ ಮನ್ನಣೆ ಪಡೆದು ಸತ್ಯವಂತ ನಂಬಿಗಸ್ಥ ನೆಂಬ ಬಿರುದು ಪಡೆದಿದ್ದರೂ ದೇವ, ಧರ್ಮ, ಉತ್ತಮ ಸಮಾಜದ ರೀತಿ ನೀತಿಗಳ ಬಗ್ಗೆಯೂ ಅರಿವಿರಲಿಲ್ಲ .
ಇಂತಹ ಸಮಾಜದಿಂದ ದೂರ ಹೋಗಿ ತಮ್ಮ ಮನ ಬಂದಂತೆ ಅಲ್ಲಾಹ್ ನ ಧ್ಯಾನದಲ್ಲಿ ನೂರ್ ಪರ್ವತದ ಹಿರಾ ಗುಹೆಯಲ್ಲಿ ತಮ್ಮದೇ ರೀತಿಯಲ್ಲಿ ಧ್ಯಾನದಲ್ಲಿ ಕುಳಿತಿದ್ದರು . ಇದೊಂದು ರೂಢಿ ಯಾಗಿ ಮಾಡಿಕೊಂಡಿದ್ದರು .
ಅಂತಹ ಧ್ಯಾನ ಮಗ್ನ ರಾಗಿದ್ದಾಗ ಅಲ್ಲಾಹನು ಆತನ ದೇವಚರರ ಸರದಾರ ಜಿಬ್ರಿಲರನ್ನು ಕಳುಹಿಸಿ ಮೊದಲ ಸಂದೇಶವನ್ನು ಅವತೀರ್ಣ ಗೊಳಿಸಿದ್ದನು
ಅದು ಅಧ್ಯಾಯ 96 ರ ಮೊದಲ ಐದು ಸೂಕ್ತಗಳಾಗಿದ್ದುವು .
ಅದರ ನಂತರ ಸಂಧರ್ಭಕ್ಕನುಗುಣವಾಗಿ ಅಲ್ಲಾಹನು ಜಿಬ್ರಿಲ್ ಅವರ ಮೂಲಕ ಪ್ರವಾದಿಯವರ ಹೃದಯದಲ್ಲಿ ಈ ಸೂಕ್ತಗಳನ್ನು ಅವತೀರ್ಣ ಗೊಳಿಸುವ ಏರ್ಪಾಡು ಮಾಡಿದ್ದನು
ಪ್ರವಾದಿಯವರು ಬೇಗ ಬೇಗನೆ ಪಠಿಸುವುದನ್ನು ತಡೆದು ಅಲ್ಲಾಹನು ಸಾರಿದನು ಇದು ನಿಮ್ಮ ಹೃದಯದಲ್ಲಿ ಸಂರಕ್ಷಿಸಲಾಗುತ್ತದೆ ಬೇಗ ಬೇಗನೆ ಪಠಿಸುವ ಅಗತ್ಯವಿಲ್ಲ .
ಇದು ಅವತೀರ್ಣ ಗೊಂಡಂತೆ ಅದನ್ನು ಸಹಬಾ ವರ್ಯರಿಗೂ ಬಾಯಿಪಾಠ ಮಾಡಿಸಲಾಗುತ್ತಿತ್ತು
ಕೆಲವು ಸಹಬಿವರ್ಯರು ಬಾಯಿಪಾಠ ಮಾಡುವುದರೊಂದಿಗೆ ಬರೆದಿಡುತ್ತಿದ್ದರು . ಅದನ್ನು ಪ್ರವಾದಿಯವರು ಉತ್ತೇಜಿಸುತ್ತಿದ್ದರು , ಅವರಿಗೆ ಮಾರ್ಗದರ್ಶನ ನೀಡುತ್ತಿದ್ದರು
ಅದು ಓದು ಬರಹ ತಿಳಿದಿದ್ದ ಸಹಾಬಿಗಳಾಗಿದ್ದರು .
ಈ ಕುರಾನಿನ ಮೊದಲ ಸೂಕ್ತಗಳು ರಂಜಾನ್ ತಿಂಗಳ ಕೊನೆಯಲ್ಲಿ ಅವತೀರ್ಣ ಗೊಂಡಿತ್ತು
ಅದರ ನಂತರ ಪ್ರತಿ ರಂಜಾನಿನಲ್ಲಿ ಜಿಬ್ರಿಲ್ ಬಂದು ಪ್ರವಾದಿಯವರಿಂದ ಕುರಾನಿನ ಅವತೀರ್ಣ ಗೊಂಡಿದ್ದ ಭಾಗವನ್ನು ಕೇಳುತ್ತಿದ್ದರು
ಕುರಾನಿನ 90 ಅಧ್ಯಾಯ ಮಕ್ಕಾದಲ್ಲೂ 24 ಅಧ್ಯಾಯ ಮದಿನದಲ್ಲೂ ಅವತೀರ್ಣ ಗೊಂಡಿವೆ .
ಕುರಾನಿನ ಸೂಕ್ತಗಳನ್ನು ಅವತೀರ್ಣ ಗೊಂಡಾಗ ಅದನ್ನು ಕುರಾನಿನ ಯಾವ ಭಾಗದಲ್ಲಿ ಇರಿಸಬೇಕೆಂಬ ಆದೇಶವನ್ನು ಜಿಬ್ರಿಲ್ ನೀಡುತ್ತಿದ್ದರು .
ಈ ರೀತಿ ಪ್ರವಾದಿ ಮೊಹಮ್ಮದರು ಸಹಬಾವರ್ಯರಿಗೆ ಬಾಯಿಪಾಠ ಮಾಡಿಸುತ್ತಿದ್ದರು .
ಪ್ರವಾದಿ ಜೀವನದ ಕೊನೆಯ ರಾಮಜಾನಿನಲ್ಲಿ ಜಿಬ್ರಿಲ್ ಬಂದು ಪ್ರವಾದಿಯವರಿಂದ ಎರಡು ಸಲ ಕುರಾನ್ ಕೇಳಿ ಹೋಗಿದ್ದರು .
ಅದರ ನಂತರ ಕುರ್ಆನ್ ಅದೇ ರೀತಿಯಲ್ಲಿ ಬಾಯಿ ಪಾಠ ಮಾಡುವ ಕಾರ್ಯವು ಅಂದಿನಿಂದಲೇ ಮೊದಲ್ಗೊಂಡಿತು.
ಇಂದಿನ ವರೆಗೂ ಅದೇ ಜಾರಿಯಲ್ಲಿದೆ .ಲೋಕದಾದ್ಯಂತ ಮುಸ್ಲಿಮರಿರುವ ಎಲ್ಲಾ ದೇಶಗಳಲ್ಲಿ ಈ ಕುರಾನ್ ಬಾಯಿ ಪಾಠ ಮಾಡುವ ಮದ್ರಸ ಗಳು ಹರಡಿ ಕೊಂಡಿವೆ .ನಮ್ಮ ಮಂಗಳೂರಲ್ಲೇ ಅದೆಷ್ಟೋ ಕಡೆಗಳಲ್ಲಿ ಬಾಯಿ ಪಾಠ ಮಾಡುವ ಮದ್ರಸಾಗಲಿವೆ . ಇದು ಲೋಕಾಂತ್ಯದ ವರೆಗೂ ಮುಗಿಯದ ಒಂದು ಕಾರ್ಯಕ್ರಮ .
ಯಾವರೀತಿಯಲ್ಲಿ ಅವತೀರ್ಣ ರೀತಿ ಕುರಾನಿನ ನಿರೂಪಿಸಲಾಗಿದೆಯೋ ಅದೇ ರೀತಿ ಅದನ್ನು ಬಾಯಿಪಾಠ ಮಾಡುವ ರೀತಿಯನ್ನೂ ಅಲ್ಲಾಹನು ಜಿಬ್ರಿಲ್ ರವರ ಮೂಲಕ ಕಲಿಸಿ ಕೊಟ್ಟಿದ್ದನು.
ಅದೇ ರೀತಿಯಲ್ಲಿ ಬರಹ ರೂಪದಲ್ಲೂ ಬರೆಯಲಾಗುತ್ತಿತ್ತು
ಹಾಗಾಗಿ ಕುರಾನಿನ ಮೊದಲ ಅದ್ಯಾಯ ಮಕ್ಕ ದಲ್ಲಿ ಒಂದು ಸಂಪೂರ್ಣ ಅದ್ಯಯವಾಗಿ ಮೊತ್ತ ಮೊದಲು ಅವತೀರ್ಣ ಗೊಂಡ ಅದ್ಯಾಯ ವಾಗಿದೆ .
ಎರಡು , ಮೂರು. ನಾಲ್ಕು , ಐದು ಇವು ಮದೀನದಲ್ಲಿ ಪ್ರವಾದಿತ್ವದ ಹದಿನೈದು ವರ್ಷಗಳ ನಂತರ ಅವತೀರ್ಣ ಗೊಂಡ ಅಧ್ಯಾಯಗಳು .
ಆರು , ಏಳು ಮೆಕ್ಕಾದಲ್ಲಿ ಅವತೀರ್ಣ ಗೊಂಡದ್ದು
ಎಂಟು ಮದೀನಾದ ಮೊದಲ ಹಂತದ ಮತ್ತು ಒಂಬತ್ತು ಮದೀನಾದ ಕೊನೆಯ ಹಂತದಲ್ಲಿ ಅವತೀರ್ಣ ಗೊಂಡವುಗಳು
ಈ ರೀತಿ ಆ ಅಧ್ಯಾಯಗಳನ್ನು ಇರಿಸುವುದರಲ್ಲಿ ಅಲ್ಲಾಹ ನ ಮಾರ್ಗದರ್ಶದ ಯುಕ್ತಿ ಸಂಪೂರ್ಣ ತಿಳಿಯಬಹುದು .
ಕುರಾನ್ ಅವತೀರ್ಣ ಗೊಂಡಾಗ ಯಾವ ಸತ್ಯ ವಿಶ್ವಾಸಿಯೂ ಇರಲಿಲ್ಲ .. ಅಂತಹ ಸಮಯದಲ್ಲಿ ಆ ಅವತೀರ್ಣ ರೀತಿ ಅತಿ ಅಗತ್ಯವಾಗಿತ್ತು .
ಇನ್ನು ಲೋಕಾಂತ್ಯದ ವರೆಗೆ ಲೋಕದಲ್ಲಿ ಸತ್ಯ ವಿಶ್ವಾಸಿಗಳು ಇರುವುದರಿಂದ ಈ ಕುರಾನಿನ ರೂಪದಲ್ಲಿ ಜನರಿಗೆ ಮಾರ್ಗದರ್ಶನ ನೀಡುವಲ್ಲಿ ಅದು ಯಶಸ್ವಿಯಾಗಿರುತ್ತದೆ .
ಇದಾಯ್ತು ಸಂಕ್ಷಿಪ್ತವಾಗಿ ಕುರಾನಿನ ಅವತೀರ್ಣದ ಬಗ್ಗೆ ಕೆಲವು ಮೂಲ ವಿಷಯಗಳು ಸಂಕ್ಷಿಪ್ತವಾಗಿ .
ಇಡೀ ಲೋಕದಲ್ಲಿರುವ ಕುರಾನ್ ಗ್ರಂಥಗಳನ್ನು ಮತ್ತು ಎಲ್ಲ ಧರ್ಮಗಳ ಗ್ರಂಥಗಳನ್ನು ನಾಶ ಮಾಡಿ ಬಿಟ್ಟರೂ ಅಂದೇ ಮತ್ತೊಮ್ಮೆ ಲೋಕದ ಎಲ್ಲ ಮೂಲೆಗಳಿಂದ ಮೂಲ ರೂಪದಲ್ಲೇ ಕುರಾನ್ ಪ್ರತಿಗಳನ್ನು ಮತ್ತೊಮ್ಮೆ ರಚಿಸಲಾಗುವ ಏಕೈಕ ಗ್ರಂಥವಾಗಿ ಕಾಣಬಹುದು .
ಅದಾಗಿದೆ ಕುರಾನನ್ನು ಲೋಕಾಂತ್ಯದ ವರೆಗೂ ಅಲ್ಲಾಹನ ಕಡೆಯಿಂದ ಸಂರಕ್ಷಿಲಾಗಿರುವ ರೀತಿ .
ಇದಾಗಿದೆ ಅವತೀರ್ಣದ ಬಗ್ಗೆ ಇನ್ನು ಮಾರ್ಗದರ್ಶನದ ಬಗ್ಗೆ ಪಾರ್ಟ್ ೨
ಅದರ ನಂತರ ಹದೀಸ್ ಗಳ ಬಗ್ಗೆ ವಿವರಿಸಿ ಅದು ತಿಳಿದ ಮೇಲೆ ಹದೀಸ್ ಗಳ ಮಹತ್ವ ಅರಿಯಬಹುದಷ್ಟೆ .
ಅಷ್ಟರವರೆಗೆ ಒಣ ಗಂಟಲಲ್ಲಿ ಕಡುಬು ತುರುಕಿಸಿದಂತಾಗುವುದು ಸ್ವಾಭಾವಿಕ .
MMGS