ಶುಕ್ರವಾರ, ಜನವರಿ 11, 2019

ಕುರಾನಿನ ಅವತರಣ ೨

ಪಾರ್ಟ್ 2

ಇನ್ನುಕುರಾನಿನ  ಮಾರ್ಗದರ್ಶನದ ಬಗ್ಗೆ ಕೆಲವು ಮಾತುಗಳು

ಸಾಮಾನ್ಯವಾಗಿ ಮಾರ್ಗದರ್ಶನ ಮೂರು ಬಗೆಗಳನ್ನು ವಿವರಿಸಲಾಗುತ್ತದೆ .

೧. ಅಲ್ಲಾಹನ ಕಡೆಯಿಂದ ಎಲ್ಲಾ ಸ್ರಷ್ಠಿಗಳಿಗೆ ಮಾನವನಿಗೂ ಸೇರಿದಂತೆ  ನೀಡಿದ ಮೂಲ ಮಾರ್ಗದರ್ಶನ
ಪ್ರತಿಯೋರ್ವ ಮಾನವನಲ್ಲಿ ಪ್ರಾಣಿಗಳಲ್ಲಿ ಅದನ್ನು ಕಾಣಬಹುದು

೨. ಅದು ಹಿರಿಯರು ಕಿರಿಯರಿಗೆ ಕೊಡುವಂತಹ ಮಾರ್ಗದರ್ಶನ , ತಮ್ಮ ಅನುಭವನ್ನು ಹಸ್ತಾಂತರಿಸುವುದು  ಎನ್ನಬಹುದು ಅದು ಸರಿಯಾಗಿರಲೂ ಬಹುದು ತಪ್ಪಾಗಿರಲೂ ಬಹುದು

೩. ಮಾನವ ಸ್ರಷ್ಟಿಗೆ ಸ್ರಷ್ಟಿಕರ್ತನ ಕಡೆಯಿಂದ ಅವನ ಸ್ರಷ್ಟಿಯ ಉದ್ದೇಶ ಜೀವನದಲ್ಲಿ  ಶಾಂತಿ ನೆಮ್ಮದಿಯ ಬಾಳಿಗಾಗಿ ಪ್ರತಿ ಕಾಲದಲ್ಲಿ ಓರ್ವ ಪ್ರವಾದಿಯನ್ನು  ನಿಯಮಿಸಿ ಅವನ ಮೂಲಕ ಸಮಾಜ ತಿದ್ದಿ ಒಂದು ಉತ್ತಮ ವ್ಯಕ್ತಿ ಒಂದು ಉತ್ತಮ  ಸಮಾಜ ನಿರ್ಮಾಣಕ್ಕೆ ನೀಡುವ ಮಾರ್ಗದರ್ಶನ .

ಇಲ್ಲಿ ಕುರಾನ್ ಮಾತಾಡುತ್ತಿರುವುದು ಅಧ್ಯಾಯ 2  ಸೂಕ್ತ 2 ರಲ್ಲಿ  ಈ ಮೂರನೇ ಮಾರ್ಗದರ್ಶನದ ಬಗ್ಗೆ .

ಆದರೆ ಈ ಮಾರ್ಗದರ್ಶನ ಪಡೆಯಲು ಅದರಂತೆ ನಡೆದು ಜೀವನ ನಡೆಸಲು ಬೇಕಾದ ಅರ್ಹತೆಗಳನ್ನು ಕೂಡ ಅದ್ಯಾಯ 2  ಸೂಕ್ತ 3  4  5  ರಲ್ಲಿಯೇ  ಪಟ್ಟಿ ಮಾಡಲಾಗಿದೆ .

೧. ''ತಕ್ವಾ'' ಎಂಬ ಒಂದು ಹೃದಯದಲ್ಲಿ ಬೆಳೆಯಬೇಕಾದ '' ಗಾಡ್ ಕೊನ್ಷಿಯಸ್ನೆಸ್ '' ದೇವ ಭಯ , ದೇವ ನಿಷ್ಠೆ
ಇತ್ಯಾದಿ ಹೆಸರಲ್ಲಿ ಹೇಳಬಹುದು ... ಆದರೆ ಅದನ್ನು ವಿವರಿಸಲು ಅದೆಷ್ಟೋ ವಿವರಣೆ ಅಗತ್ಯವಿದೆ ಆದರೆ
ಸಂಕ್ಷಿಪ್ತವಾಗಿ ಇಷ್ಟು ಸಾಕು

೨. ತಕ್ವಾ ಬೆಳೆಯಲು ಅಗತ್ಯ ವಾದ ಗುಣಗಳನ್ನು ಕೂಡ ವಿವರಿಸಲಾಗಿದೆ .
ಅದಾಗಿದೆ

a..  ಅಗೋಚರ ವಿಷಯ ಗಳ ಮೇಲೆ ನಂಬಿಕೆ
ಈ ಅಗೋಚರ ವಿಷಯಗಳು ಯಾವು ಅದಕ್ಕೆ ಕುರಾನ್ ಅಧ್ಯಾಯ 4 ಸೂಕ್ತ 136 ರಲ್ಲಿಯೂ ಬೇರೆ ಕಡೆಗಲ್ಲಿಯೂ ವಿವರಿಸಿದೆ . ಇದನ್ನು ವಿವರಿಸುವ ಅದೆಷ್ಟೋ ಪ್ರವಾದಿ ವಚನಗಳು ಕೂಡ ಲಭ್ಯವಿದೆ .
ಇಲ್ಲಿ ಡಿಟೈಲ್ ಬರೆಯುವುದಿಲ್ಲ
b . ನಮಾಜಿನ ಸಂಸ್ಥಾಪನೆ .. ನಮಾಜ್ ಎಂದರೇನು ಅದರ ಬಗ್ಗೆ ವಿವರಣೆ ಗಾಗಿ ಒಂದು ಪುಸ್ತಕವನ್ನೇ ಓದಬೇಕಾಗುವುದು . ಸಂಕ್ಷಿಪ್ತ ವಾಗಿ ಹೇಳ ಬೇಕಾದರೆ ದಿನದಲ್ಲಿ ಐದು ಹೊತ್ತಿನ ನಮಾಜ್ ಪ್ರವಾದಿ ನೆರವೇರಿಸಿದಂತೆ ಅದರ ಎಲ್ಲಾ ಕಡ್ಡಾಯ  ವಿಧಿಗಳನ್ನು ಪಾಲಿಸುತ್ತ ಸಂಸ್ಥಾಪಿಸುವುದಾಗಿದೆ .
c. ಅಲ್ಲಾಹನು ನೀಡಿದ ಸಂಪತಸೌಕರ್ಯಗಳನ್ನು ಇತರರಿಗೆ ಹಂಚುವುದು ವ್ಯಯಿಸುವುದು ವಿತರಿಸುವುದು
ಇದರಲ್ಲಿ ಎಲ್ಲಾ ಸಂಪತಸೌಕರ್ಯಗಳು ಬರುತ್ತವೆ .
d. ಈ ಕುರಾನಿನ ಮೇಲೂ ಇದಕ್ಕಿಂತ ಮೊದಲು ಕಳುಹಿಸಲಾದ ಎಲ್ಲಾ ಅಲ್ಲಾಹನ ಪ್ರವಾದಿ ಮತ್ತು  ಪ್ರವಾದಿಗಳ ಗ್ರಂಥಗಳ ಮೇಲೆ ಕಡ್ಡಾಯವಾಗಿ ವಿಶ್ವಾಸ ವಿರಿಸುವುದು
ಈ ಬಗ್ಗೆಯೂ ಕುರಾನ್ ಇತರ ಕಡೆಗಳಲ್ಲಿ ನೀಡಿದ ವಿವರಣೆಯಂತೆ ಮತ್ತು ಕುರಾನಿನ ಮೇಲೆ ಯಾವ ರೀತಿಯಲ್ಲಿ ವಿಶ್ವಾಸ ವಿರಿಸಬೇಕು ಎಂಬುವುದನ್ನು ತಿಳಿದು ಅದರಂತೆ ವಿಶ್ವಾಸವಿರಿಸಬೇಕಾಗಿದೆ .
e . ಅದರ ನಂತರ ಮಾನವನ  ಈ ಜೀವನ ಮುಗಿದು ಸತ್ತ ಮೇಲೆ  ಮತ್ತೊಮ್ಮೆ ಎಬ್ಬಿಸಿ ಕುರಾನ್ ಇತರ ಕಡೆಗಳಲ್ಲಿ ವಿವರಿಸಿದ ಆ ಎಲ್ಲ ಮರಣಾನಂತರದ ಒಂದೊಂದು ಹೆಜ್ಜೆಯನ್ನು ಅರಿತು ಅದರ ಮೇಲೆ ದ್ರಢ ವಿಶ್ವಾಸ ವಿರಿಸಿ  ಒಂದಿಷ್ಟು ಸಂದೇಹವಿಲ್ಲದೆ ಯಾಕೀನ್ ಮಾಡುವುದಾಗಿದೆ .

ಇಂತಹ ಗುಣ ಹೊಂದಿದವರಿಗೆ ಮಾತ್ರ ಕುರಾನಿನಿಂದ ನಿಜವಾದ ಉದ್ದೇಶ ಆ  ಮಾರ್ಗದರ್ಶನ  ಪಡೆದು ಇಹ ಪರ ವಿಜಯ ಗಳಿಸಬಹುದಾಗಿದೆ .

ಈ ಕುರಾನನ್ನು ಓದುವವರಿಗೆ ಎರಡನೇ ಅಧ್ಯಾಯದ ಈ ಐದು ಸೂಕ್ತಗಳನ್ನು ಅರ್ಥ ಮಾಡಲು ಅದೆಷ್ಟು ವಿವರಗಳನ್ನು ಅರಿಯಬೇಕಾಗುತ್ತದೆ . ಅದನ್ನು ಅರಿಯಲು ಪ್ರಯತ್ನಿಸದೆ ಮುಂದುವರಿಯುವಂತಿಲ್ಲ .

ಹಾಗಾಗಿ ಅದೆಷ್ಟು ಜನರು ಇಸ್ಲಾಮ್ ಸ್ವೀಕರಿಸಿದ್ದರೋ ಅವರು ಈ ಐದು ಸೂಕ್ತಗಳನ್ನು ಅರ್ಥ ಮಾಡಲು ಕೆಲವು ತಿಂಗಳು ಗಳಂತೂ ತಗಲಿಸಿದ್ದಾರೆ  ಮತ್ತು ಅರ್ಥಮಾಡಿದ ಮೇಲೆ ಅವರಿಗೆಲ್ಲಾ ಈ ಸತ್ಯ ಒಪ್ಪದಿರಲು ಸಾಧ್ಯವೇ ಇಲ್ಲ. .

ಇನ್ನು ನಾನು ಓದಿದೆ ಎಂದು ಹೇಳುವುದು ಅರ್ಥ ಮಾಡದೇ ಓದಿದೆ ಎಂದೇ ಅರ್ಥ .

ಇನ್ನು ಈ ವಿಷಯಗಳನ್ನು ಹದೀಸಿನಲ್ಲಿ ಮತ್ತೂ ಮತ್ತೂ  ಬಿಡಿಸಿ ಬಿಡಿಸಿ ವಿವರಿಸಲಾಗಿದೆ  ..

ಈ ಕುರಾನನ್ನು ಅದೆಷ್ಟೋ ಜನರು ಓದಿ ಲೌಕಿಕ  ಪ್ರಯೋಜನ ಗಳಿಸಿದ್ದಾರೆ , ಅದರಲ್ಲಿ ಅಬ್ರಹಾಂ ಲಿಂಕನ್  ನೆಪೋಲಿಯನ್ , ಬೆರ್ನೆರ್ಡ್ ಷಾ , ಎಲ್ಲಾ ಸೇರಿದ್ದಾರೆ  . ನಮ್ಮಲ್ಲಿ ಗಾಂಧೀಜಿ ಮತ್ತು ವಿನೋದ ಭಾವೆ ಅತಿ ಹೆಚ್ಚು ಓದಿದವರು , ವಿನೋಬಾ ಭಾವೆಯಂತು  ಅದನ್ನು ತರ್ಜುಮೆ ಕೂಡ ಮಾಡಿದ್ದರು .

ಆದರೆ ಆ ಮೇಲಿನ ಕಂಡೀಷನ್ ಪೂರ್ತಿಗೊಳಿಸದ  ಕಾರಣ ನಿಜವಾದ ಮಾರ್ಗದರ್ಶನ ಪಡೆಯಲು ಅನರ್ಹರಾದರು .ಲೌಕಿಕ ಬಿರುದು ಮಾತ್ರ ಅವರಿಗೆ  ಲಭಿಸುವಂತಾಯ್ತು .

ಹಾಗಾಗಿ ಮಾರ್ಗದರ್ಶನ ಪಡೆಯಲು ಬೇಕಾದ ಅರ್ಹತೆಯನ್ನು ಕೂಡ ಪಡೆಯಲು ಇದರ ಅಧ್ಯಯನ ನಡೆಸಬೇಕಾಗುತ್ತದೆ .

ಮಾರ್ಗದರ್ಶನ ಬಯಸದೆ , ಅದನ್ನು ಪಡೆಯದೇ ಅದನ್ನು ವಿರೋಧಿಸುವುದು ಎಷ್ಟು ಸರಿ ಅದು ವಿರೋಧಿಸುವವರಿಗೆ ತಿಳಿದಿರಬೇಕಿತ್ತು .

mmags