*“ಖಾಸಗಿ ಶಿಕ್ಷಣ ಸಂಸ್ಥೆಗಳು ಡೊನೇಶನ್ ಪಡೆಯುವಂತಿಲ್ಲ” ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿರುವುದು ಸ್ವಾಗತಾರ್ಹ – ಎಸ್.ಐ.ಓ ಕರ್ನಾಟಕ*
ಖಾಸಗಿ ಶಾಲೆಗಳು ತಾವು ಡೊನೇಶನ್ ತೆಗೆದುಕೊಳ್ಳುವುದಿಲ್ಲ, ಎಂದು ಶಾಲೆಯ ಆಡಳಿತ ಮಂಡಳಿ ಬೋರ್ಡ್ ಹಾಕುವುದರ ಜತೆಗೆ ನಿಯಮದ ಪ್ರಕಾರ ಶಾಲೆಯ ಬೋಧಕ ಮತ್ತು ಬೋಧಕೇತರ ನಿಬ್ಬಂದಿಗಳ ಒಟ್ಟು ಸಂಬಳದ ಖರ್ಚು ಹಾಗೂ ೩೦% ಹೆಚ್ಚುವರಿ ವೆಚ್ಚವನ್ನು ಒಟ್ಟು ಮಕ್ಕಳ ಸಂಖ್ಯೆಯಿಂದ ಭಾಗಿಸಿ ಬರುವ ಮೊತ್ತದ ಹೊರತು ಹೆಚ್ಚುವರಿ ಮೊತ್ತವನ್ನು ಪಡೆಯುವಂತಿಲ್ಲವೆಂದು ಹಾಗೂ ಅದನ್ನು ಶಾಲಾ ನೋಟಿಸ್ ಬೋರ್ಡ್ ನಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕೆಂದು ನ್ಯಾ. ಅರವಿಂದ ಕುಮಾರ್ ರಾಜ್ಯ ಸರಕಾರಕ್ಕೆ ನಿರ್ದೇಶಿಸಿರುವುದನ್ನು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯ ಎಸ್.ಐ.ಓ ಕರ್ನಾಟಕ ಸ್ವಾಗತಿಸುತ್ತದೆ.
ರಾಜ್ಯ ಸರಕಾರವು ನ್ಯಾಯಾಲಯದ ಈ ನಿರ್ದೇಶವನ್ನು ಗೌರವಿಸುದರ ಜತೆಗೆ ಅದನ್ನು ಶೀಘ್ರವೇ ಜಾರಿಗೊಳಿಸಿ ಶಿಕ್ಷಣ ರಂಗದಲ್ಲಿ ನಡೆಯುವ ಇಂತಹ ದೌರ್ಜನ್ಯವನ್ನು ತಡೆಯಲು ಮುಂದಾಗಬೇಕೆಂದು ಎಸ್.ಐ.ಓ ಆಗ್ರಹಿಸುತ್ತದೆ.
ನಿರ್ದೇಶನದಲ್ಲಿ ಸೂಚಿಸಿರುವಂತೆ ೧೫ ರ ಒಳಗೆ ಎಲ್ಲಾ ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳು ತಮ್ಮ ಪ್ರತೀ ಕೋರ್ಸಿನ ಶುಲ್ಕ ವಿವರವನ್ನು ಡಿಡಿಪಿಐಗೆ ಸಲ್ಲಿಸಬೇಕು. ಅದೇ ಅವಧಿಯೊಳಗೆ ಶುಲ್ಕ ವಿವರಗಳನ್ನು ತಮ್ಮ ಸಂಸ್ಥೆಯ ನೋಟೀಸ್ ಬೋರ್ಡ್ ನಲ್ಲಿ ಹಾಕಬೇಕು. ಈ ಶುಲ್ಕದ ಹೊರತು ಬೇರೆ ಯಾವ ಶುಲ್ಕವನ್ನು ಪಡೆಯುವಂತಿಲ್ಲವೆಂದು ಎದ್ದು ಕಾಣುವ ಹಾಗೆ ನೋಟೀಸ್ ಬೋರ್ಡ್ ನಲ್ಲಿ ಹಾಕಬೇಕು. ಪ್ರತೀ ವರ್ಷ ೧೫ ರೊಳಗೆ ಶಾಲೆಯ ಎಲ್ಲಾ ಸಿಬ್ಬಂದಿಯ ವೇತನ ವಿವರ, ಒಟ್ಟು ವಿದ್ಯಾರ್ಥಿಗಳ ವಿವರ ಹಾಗೂ ಅನುಮತಿ ನೀಡಲಾಗಿರುವ ವಿದ್ಯಾರ್ಥಿಗಳ ವಿವರಗಳನ್ನು ಡಿಡಿಪಿಐಗೆ ಸಲ್ಲಿಸಬೇಕು. ಪ್ರತೀ ವರ್ಷ ಮಾರ್ಚ್ ೩ ರ ಒಳಗೆ ಸಂಸ್ಥೆಯ ಮುಂದಿನ ಯೋಜನೆಗಳ ಬಗ್ಗೆ ವರದಿ ಸಲ್ಲಿಸಬೇಕು. ಶಾಲೆಯು ಹೆಚ್ಚುವರಿ ಶುಲ್ಕ ಪಡೆಯುತ್ತಿದೆ ಎಂದು ಶುಲ್ಕ ನಿಯಂತ್ರಣಾ ಪ್ರಾಧಿಕಾರಕ್ಕೆ ತಿಳಿದು ಬಂದಲ್ಲಿ ಅದನ್ನು ಒಂದು ವಾರದ ಒಳಗೆ ಇತ್ಯರ್ಥ ಪಡಿಸಬೇಕೆಂಬ ಹೈಕೋರ್ಟ್ ನ ಆದೇಶ ನಿಜಕ್ಕೂ ಶ್ಲಾಂಘನೀಯವಾಗಿದೆ. ಶೈಕ್ಷಣಿಕ ರಂಗದ ಖಾಸಗೀಕರಣ ಮತ್ತು ವ್ಯಾಪಾರೀಕರಣದಿಂದಾಗಿ ಪರದಾಡುವ ವಿದ್ಯಾರ್ಥಿಗಳಿಗೂ ಪೋಷಕರಿಗೂ ಈ ಆದೇಶ ಆಶಾದಾಯಕವಾಕವಾಗಿದೆ. ಉಚಿತ ಮತ್ತು ಕಡ್ಡಾಯ ಶಿಕ್ಷಣ ಪ್ರತಿಯೊಂದು ಮಗುವಿಗೆ ದೊರಕಿದೆ ಎಂದು ಖಾತ್ರಿಪಡಿಸಲು ನ್ಯಾಯಾಂಗವು ಇನ್ನಷ್ಟು ಮುಂದಾಗಬೇಕಿದೆ. ಸರಕಾರಿ ಶಾಲೆಗಳನ್ನು ಬಲಗೊಳಿಸುವ ಸಲುವಾಗಿ ಮತ್ತು ಶಿಕ್ಷಣದ ವ್ಯಾಪಾರೀಕರಣವನ್ನು ನಿಯಂತ್ರಿಸುವ ಸಲುವಾಗಿ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗ ಒಗ್ಗಟ್ಟಾಗಿ ಪ್ರಯತ್ನಿಸಬೇಕಾಗಿದೆ. ವಿದ್ಯಾರ್ಥಿ ಸ್ನೇಹಿಯಾದ ಈ ಎಲ್ಲಾ ನಿರ್ದೇಶನಗಳನ್ನು ಜಾರಿಗೊಳಿಸಲು ಶಿಕ್ಷಣ ಇಲಾಖೆ ತಕ್ಷಣ ಮುಂದಾಗಬೇಕೆಂದು ಎಸ್.ಐ.ಓ ಬಲವಾಗಿ ಒತ್ತಾಯಿಸುತ್ತದೆ.