ಒಂದು ದಿನ ಧರ್ಮ ನಿಷ್ಟೆಯುಳ್ಳ ವ್ರದ್ದರೊಬ್ಬರು ತನ್ನ ಮಗನನ್ನು ಕರೆದು 'ಮಗ ನನಗೆ ವಯಸ್ಸಾಗಿದೆ ಇನ್ನು ಹೆಚ್ಚು ಕಾಲ ಬದುಕಲು ನನ್ನಿಂದ ಸಾಧ್ಯವಿಲ್ಲ.ಆದುದರಿಂದ ನಮ್ಮ ವ್ಯವಹಾರ,ಸಂಪತ್ತು ಎಲ್ಲವನ್ನು ನನ್ನ ಮರಣಾ ನಂತರ ನೀನು ನೋಡಬೇಕು.ನಾನು ಮರಣ ಹೊಂದಿದ ದಿನ ನನ್ನ ಮಯ್ಯತ್ ಕಫಾನ್ ಮಾಡುವ ಸಂದರ್ಭ ನನ್ನದೊಂದು socks(ಕಾಲು ಚೀಲ )ನನ್ನ ಕಾಲಿಗೆ ಹಾಕಬೇಕು.ಈ ಕಾರ್ಯ ನೀನು ಮರೆಯಬಾರದು.ಇದು ನಿನಗೆ ನನ್ನ ವಸಿಯ್ಯಥ್' ಎಂದು ಹೇಳಿ ಮರಣಹೊಂದಿದರು.
ಹಾಗೆ ಸಂಬಂದಿಕರು ಊರವರು ಸೇರಿ ಆ ಮಯ್ಯತ್ಥನ್ನು ಕಫಾನ್ ಮಾಡುವ ಸಂದರ್ಭ ಮಗ socksನ್ನು ಕಾಲಿಗೆ ಅಳವಡಿಸಲು ಪ್ರಯತ್ನಿಸುವ ಸಮಯ ಅಲ್ಲಿ ನೆರೆದವರು ನಿರಾಕರಿಸುತ್ತಾರೆ.ಆದರೆ ಮಗ ಹೇಳುತ್ತಾನೆ ಇದು ನನ್ನ ತಂದೆಯ ವಸಿಯ್ಯಥ್ ಇದನ್ನು ನಿರಾಕರಿಸಲು ಸಾದ್ಯವಿಲ್ಲ...ಮೂರು ತುಂಡು ಬಟ್ಟೆಯಲ್ಲದೆ ಬೇರೆ ಏನನ್ನು ಇಡಲು ಸಾಧ್ಯವಿಲ್ಲ ಒಂದು ವೇಳೆ ಇಟ್ಟರೆ ಅದು ನಮ್ಮ ಇಸ್ಲಾಂ ಧರ್ಮದ ತತ್ವಕ್ಕೆ ವಿರುದ್ಧವಾಗುತ್ತದೆ ಎಂದಾಗಿತ್ತು ನೆರೆದವರ ಅಭಿಪ್ರಾಯ .
ಕೊನೆಗೆ ಮಸೀದಿಯ ಇಮಾಂ ಬಳಿ ಸಮಸ್ಯೆಗೆ ಪರಿಹಾರ ಕೇಳಲಾಯಿತು.ಇಮಾಂ ಕೂಡ ಕಡಾಕಂಡಿಥವಾಗಿ ನಿರಾಕರಿಸಿದರು.ಆ ಸಮಯದಲ್ಲಿ ಮೃತರ ಗೆಳೆಯರಾದ ವೃದ್ದರೊಬ್ಬರು ಆ ಮನೆಗೆ ಬೇಟಿ ನೀಡುತ್ತಾರೆ.ಅಲ್ಲಿನ ಸಮಸ್ಯೆ ಅವರಿಗೆ ತಿಳಿಯುತ್ತದೆ.ಆಗ ಅವರು ಹೇಳುತ್ತಾರೆ ಈ ಮರಣಹೊಂದಿದ ನನ್ನ ಗೆಳೆಯ ಸ್ವಲ್ಪ ದಿನಗಳ ಹಿಂದೆ ನನ್ನನ್ನು ಕರೆದು ನನ್ನಲ್ಲಿ ಒಂದು ಪತ್ರವನ್ನು ನೀಡಿ,ಈ ಪತ್ರವನ್ನು ನನ್ನ ಮರಣದ ದಿನ ನನ್ನ ಮಗನ ಕೈಗೆ ನೀಡಬೇಕು ಎಂದು ಹೇಳಿದ್ದಾನೆ ಆದುದರಿಂದ ಅಲ್ಲಾಹುವಿನ ಭಯದಿಂದ ಜೀವಿಸಿ ಇವತ್ತು ಮರಣ ಹೊಂದಿದ ನನ್ನ ಗೆಳೆಯ
ಇಲ್ಲಿನ ಸಮಸ್ಯೆಗೆ ಏನಾದರು ಪರಿಹಾರ ಈ ಪತ್ರದಲ್ಲಿ ಬರೆದಿರಬಹುದು ಎಂದು ಹೇಳುತ್ತಾ ಆ ಪತ್ರವನ್ನು ಮಗನ ಕೈಗೆ ನೀಡುತ್ತಾರೆ....!
ಆ ಪತ್ರದಲ್ಲಿ ಈಗೆ ಬರೆದಿತ್ತು.
ಪ್ರಿಯ ಮಗನೆ,ಇವತ್ತಿಗೆ ನನ್ನ ಇಹದ ಜೀವನ ಮುಗಿಯಿತು.ನಾನು ಸಿಕ್ಕಾಪಟ್ಟೆ ಆಸ್ತಿ ಅಂತಸ್ತು ಎಲ್ಲಾ ಮಾಡಿದ್ದೇನೆ.ಇನ್ನು ಮುಂದೆ ಅದೆಲ್ಲ ನಿನಗೆ ಸೇರಿದ್ದಾಗಿರುತ್ತದೆ.ಇನ್ನು ನನ್ನದು ಅಂತ ಏನು ಇಲ್ಲ.ನಾನು ಉಪಯೋಗಿಸಿದ ಒಂದು socks ಕೂಡ ನನಗೆ ಕೊಂಡೋಯ್ಯಲು ಅನುಮತಿ ಇಲ್ಲ.ಒಂದಲ್ಲ ಒಂದು ದಿನ ನನಗೆ ಬಂದ "ಈದಿನ"ನಿನಗೆ ಕೂಡ ಬಂದೇ ಬರುತ್ತದೆ ಯಾವುದೇ ಸಂಶಯ ಇಲ್ಲ.ಅಂದು ನಿನಗೆ ಕೂಡ ಮೂರು ತುಂಡು ಬಟ್ಟೆಯಲ್ಲದೆ ಬೇರೆ ಏನನ್ನೂ ಕೊಂಡೊಯ್ಯಲು ಸಾದ್ಯವಿಲ್ಲ.ಆದುದರಿಂದ ನಾನು ಬಿಟ್ಟೋಗುತ್ತಿರುವ ಆಸ್ತಿ ಅಂತಸ್ತನ್ನು ಸರ್ವಶಕ್ತನಾದ ಅಲ್ಲಾಹುವಿನ ಮಾರ್ಗದಲ್ಲಿ ಉಪಯೋಗಿಸು.ಧಾನ ಧರ್ಮಗಳನ್ನು ಮಾಡಿ ಪರಲೋಕಕ್ಕೆ ಬೇಕಾದ ಸತ್ಕರ್ಮಗಳೊಂದಿಗೆ ಬರಲು ತಯಾರಾಗು.ನನ್ನದು ಅಂತ ಹೇಳಲು ಮೂರು ತುಂಡು ಬಟ್ಟೆ ಮಾತ್ರ ಇರುವುದು...ಸರಿ ಒಳ್ಳೆಯದಾಗಲಿ