ಶುಕ್ರವಾರ, ಜನವರಿ 27, 2017

ಅಪಘಾತದ ಮರಣ ಆತ್ಮಹತ್ಯೆ ಮತ್ತು ಹತ್ಯೆ

*ಅಪಘಾತದ ಮರಣ ಆತ್ಮಹತ್ಯೆ ಮತ್ತು ಹತ್ಯೆ ಪಾಪವನ್ನೂ ಹೊತ್ತುಕೊಳ್ಳುವ ಸಾಧ್ಯತೆ ಇದೆ: ಅಬುಬಕ್ಕರ್ ಸಿದ್ದೀಕ್ ಜಲಾಲಿ*


*ಸುನ್ನೀಟುಡೇ*

ಸಂಚಾರಿ ಪೋಲೀಸರು ವಿಧಿಸುವ ದಂಡಕ್ಕೆ ಭಯಪಟ್ಟು ನಿಯಮಗಳನ್ನು ಪಾಲಿಸುವ ಅಗತ್ಯವಿಲ್ಲ ಹೊರತಾಗಿ ತಮ್ಮ ಅಮೂಲ್ಯ ಜೀವ ರಕ್ಷಣೆಗಾಗಿ ಸಂಚಾರಿ ನಿಭಂದನೆಗಳನ್ನು ಪಾಲಿಸಿರಿ.ಜಿಲ್ಲೆಯಲ್ಲಿ ನಿರಂತರ ನಡೆಯುತ್ತಿರುವ ಹೆಚ್ಚಿನ ಅಪಘಾತಗಳಿಗೆ ಅಜಾಗರೂಕತೆ ಮತ್ತು ಜಂಭದ ವಾಹನ ಸಂಚಾರವೇ ಕಾರಣ.ವಾಹನದಲ್ಲಿ ಪಾಲಿಸಬೇಕಾದ ಶಿಸ್ತು ಮತ್ತು ಗೌರವ ಪಾಲಿಸಿ ಅಮೂಲ್ಯ ಜೀವ ರಕ್ಷಿಸಿ ಎಂದು ಕೂರ್ನಡ್ಕ ಖತೀಬರಾದ ಅಬುಬಕ್ಕರ್ ಸಿದ್ದೀಕ್ ಜಲಾಲಿ ಜನರಲ್ಲಿ ವಿನಂತಿಸಿದರು. ಅವರಿಂದು ಜುಮ್ಮಾ ಭಾಷಣದಲ್ಲಿ ಮಾತನಾಡುತ್ತಾ ಅತೀ ಹೆಚ್ಚು ಯುವಕರು ಇಂದು ವಾಹನ ಅಪಘಾತದಲ್ಲಿ ಬಲಿಯಾಗುತ್ತಿದ್ದಾರೆ.ಹೆತ್ತವರು ಮತ್ತು ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ. *ಬೈಕ್ ರೈಡ್ ಮಾಡುವಾಗ ಹೆಲ್ಮೆಟ್ಟ್ ಹಾಕುವುದು ಪ್ಯಾಶನ್ ಇಲ್ಲಾ ಎನ್ನುವ ಯುವಕರ ಮಯ್ಯತ್ತ್ ಗಳು ಮುಖ ಮೂತಿ ಜಜ್ಜಿ ವಿಕಾರವಾಗಿ ಹೋಗಿರುತ್ತದೆ.ಪ್ಯಾಶನ್ ಮತ್ತು ಮೋಜಿಗಿಂತ ಮಹತ್ವ ಜೀವಕ್ಕೆ ಇದೆ ಎಂದು ಯುವಕರು ತಿಳಿಯಬೇಕಾಗಿದೆ ಎಂದವರು ಹೇಳಿದರು*.

ಅಪಘಾಯಕ್ಕೀಡಾದ ಯುವಕರ ದೇಹವನ್ನು ಸಾಗಿಸುವ ವ್ಯಕ್ತಿಗೆ ಅದು ತನ್ನ ಮಕ್ಕಳ ಜೀವ ಎಂದು ತಿಳಿಯದಷ್ಟು ಭೀಕರ ಅಪಘಾತಗಳು.ಕಾರಿನ ಸವಾರ ಮಡಿಲಲ್ಲಿ ಕುಳ್ಳಿರಿಸಿ ಮೋಜು ತೋರಿಸುವ ಸಾಹಸಕ್ಕೆ ಮಗು ಬಲಿಯಾದ ಘಟನೆ.ವೇಗದ ಮಿತಿ ಇರುವ ಪಟ್ಟಣ ಪ್ರದೇಶ ಮತ್ತು ಸರ್ಕಲ್ಲ್ ಗಳಲ್ಲಿ ಯುವಕರು ಬೈಕ್ ಅಪಘಾತಕ್ಕೆ ಬಲಿಯಾದ ವರದಿ ಕೇಳುವಾಗ ದುಃಖವಾಗುತ್ತಿದೆ ಎಂದ ಖತೀಬರು ಪವಿತ್ರ ಕುರ್ ಅನ್ ನಲ್ಲಿ ಅಲ್ಲಾಹನು ಹೇಳುತ್ತಾನೆ *ನಿಮ್ಮ ಕೈಗಳನ್ನು ನೀವೇ ವಿನಾಶದೆಡೆಗೆ ತಳ್ಳದಿರಿ ಎಂದು(2-195)*.ವಾಹನವು ಅಲ್ಲಾಹನ ಅನುಗ್ರಹವಾಗಿದೆ.ಅದನ್ನು ನಾವು ದುಡುಕು ಮತ್ತು ಅತಿರೇಕದ ಸವಾರಿ ಮೂಲಕ ನಮ್ಮ ವಿನಾಶಕ್ಕೆ ಬಳಸಿದರೆ ಆತ್ಮಹತ್ಯೆಯ ಪಾಪವಿದೆ ಎಂದು ಖತೀಬರು ಹೇಳಿದರು.

*ಅಲ್ಲಾಹನು ನಮ್ಮನ್ನು ಪರೀಕ್ಷಿಸಬಹುದು ಆದರೆ ಅಲ್ಲಾಹನ ವಿಧಿಯನ್ನು ನಾವು ಪರೀಕ್ಷಿಸುವಂತಿಲ್ಲ*.ಅಪಘಾತಗಳು ಕೆಲವೊಮ್ಮೆ ಅನಿರೀಕ್ಷಿತವಾಗಿ ನಡೆಯುತ್ತದೆ ಅದು ಅಲ್ಲಾಹನ ತೀರ್ಮಾಣವಾಗಿದೆ.ಆದರೆ ನಾವೇ ಬೇಕಾಬಿಟ್ಟಿ ವಾಹನದಲ್ಲಿ ಸರ್ಕಸ್ಸ್ ಮಾಡಿ ಸಂಭವಿಸುವ ಅಪಘಾತಗಳ ಮರಣದಿಂದ ನಮಗೆ ಹತ್ಯೆಯ ಪಾಪ ತಟ್ಟಬಹುದು.ಕೆಲವೊಂದು ಬೈಕ್ ಸವಾರರನ್ನು ಕಾಣುವಾಗ ಅವರಿಗೆ ಸಿಗುವ ಶುಭ ಹಾರೈಕೆ ಏನಂದರೆ *ಎಂದ್ ವಡುಕತ್ತೆ ಪೋಕು ಎಂದಾಗಿದೆ*. ಇನ್ನು ಕೆಲವರು ಕಾರಿನಲ್ಲಿ ಪ್ರತಿಷ್ಟೆ ಮತ್ತು ಮೋಜಿಗಾಗಿ ಕುಟುಂಬವನ್ನೇ ತುಂಬಿಸಿ ಹೊರಡುವುದಿದೆ. ಒಂದು ಸ್ಕೂಟಿಯಲ್ಲಿ ತನ್ನ ಸಂಸಾರವನ್ನೆಲ್ಲಾ ಹೊತ್ತೊಯ್ಯುವ ಸಾಹಸ ಮಾಡುವರು.ಮಕ್ಕಳ ಕೈಯಲ್ಲಿ ದ್ವಿಚಕ್ರ ವಾಹನ ಕೊಡುವವರೂ ತಮ್ಮ ಮೇಲೆ ಅಪಾಯವನ್ನು ಎಳೆದು ಹಾಕುತ್ತಾರೆ.ವಾಹನದ ಮಿತಿ ಮತ್ತು ಸಂಚಾರಿ ನೀತಿ ಪಾಲಿಸದ ನಮ್ಮ ತೀರ್ಮಾಣಗಳು ನಮಗೇ ಮಾರಕವಾಗುತ್ತದೆ.ಅನಂತರ ದುಃಖಿಸಿ ಫಲವಿಲ್ಲ.ಯುವಕರ ಮರಣವು ಅಲ್ಲಾಹನ ರಹಮ್ ಆಗಲಾರದು.ಅದು ನಮ್ಮ ಅಜಾಗರೂಕತೆ ಮತ್ತು ಅಕ್ರಮದ ಫಲವೂ ಅಗಿರಬಹುದು ಎಂದು ಖತೀಬರು ಹೇಳಿದರು.

ಅಲ್ಲಾಹನ ಕರುಣೆ ಮತ್ತು ಕೃಪೆ ನಮ್ಮ ಮೇಲಿರಲಿ.ಈ ವಾಹನವನ್ನು ನಮಗೆ ವಿಧೇಯವಾಗಿಸಿದವನು.ಸಂಚಾರಕ್ಕೆ ಯೋಗ್ಯವಾಗಿಸಿದವನು.ಇದರ ಆರಂಭ ಮತ್ತು ಗುರಿಯ ಬಗ್ಗೆ ಸರಿಯಾದ ಜ್ನಾನ ಇರುವ ಅಲ್ಲಾಹನಿಗೆ ಸರ್ವಸ್ತುತಿ.ಈ ವಾಹನವನ್ನು ನಮ್ಮ ಪಾಲಿಗೆ ಕೊಡುಗೆ ಮತ್ತು ಗುರಿ ತಲುಪುವ ಸಾಧನವನ್ನಾಗಿಸು ಎಂದು ಅಲ್ಲಾಹನಲ್ಲಿ ಪ್ರಾರ್ಥಿಸಿ ವಾಹನ ಚಲಾಯಿಸಬೇಕು. *ವಾಹನದ ಪ್ರಯಾಣದಲ್ಲಿ ಝಿಕ್ರ್ ಹೇಳಬೇಕು.ನೂಹ್ ನಭಿಯವರು ಹಡಗನ್ನು ಹತ್ತುವಾಗ ಮತ್ತು ಅನಂತರ ಪ್ರಯಾಣದುದ್ದಕ್ಕೂ ಅಲ್ಲಾಹನಲ್ಲಿ ಪ್ರಾರ್ಥಿಸುತ್ತಲೇ ಇದ್ದರು.ನಾವು ಸಂಗೀತ ಮತ್ತು ವಿನೋದವನ್ನು ಸಂಚಾರದ ಭಾಗವಾಗಿಸಿದ್ದೇವೆ.ಸಂಗೀತ ಕೇಳುತ್ತಾ ಮರಣ ಹೊಂದಿದರೆ ಈಮಾನ್ ಸುರಕ್ಷಿತವಾಗಿರಲು ಸಾಧ್ಯವಿಲ್ಲ*ಎಂದ ಖತೀಬರು ಕೆಲವೊಮ್ಮೆ ಅಪಘಾತ ಸಂಭವಿಸಿದ ಕಡೆ ಹೇಳುವ ಐದು ನಿಮಿಷ ತಡವಾಗಿದ್ದರೆ ಬದುಕುತ್ತಿರಲಿಲ್ಲ ಮತ್ತು ಐದು ನಿಮಿಷ ಬೇಗ ಆಸ್ಪತ್ರೆ ತಲುಪಿಸುತ್ತಿದ್ದರೆ ಬದುಕುತ್ತಿದ್ದ ಎಂಬ ಅವಿಶ್ವಾಸಿಗಳ ಅಭಿಪ್ರಾಯ ಹೇಳುವುದನ್ನು ನಿಲ್ಲಿಸಿ.ಅಲ್ಲಾಹನು ವಿಧಿಸಿದ ನಿರ್ಣಯಕ್ಕೆ ನಾವು ನಿಮಿತ್ತ ಮಾತ್ರ.ಅವನ ಅಪ್ಪಣೆಯಂತೆ ಜಗತ್ತು ಮತ್ತು ಘಟನೆಗಳು ನಡೆಯುತ್ತದೆ.ನಾವು ನಾವಾಗಿಯೇ ವಿಪತ್ತನ್ನು ಎಳೆದುಕೊಳ್ಳದೆ ಸುರಕ್ಷಿತ ಮತ್ತು ಜಾಗರೂಕರಾಗಿ ಬದುಕಿದರೆ ಅದುವೇ ಸರ್ವಶ್ರೇಷ್ಟ ಎಂದು ಖತೀಬರು ಹೇಳುತ್ತಾ ಅಪಘಾತದಲ್ಲಿ ಮರಣ ಹೊಂದಿದ ಎಲ್ಲರಿಗೂ ಪ್ರಾರ್ಥಿಸಿದರು.

*ಹನೀಫ್ ಪುತ್ತೂರ್*
   *ಸುನ್ನೀಟುಡೇ*

ಗುರುವಾರ, ಜನವರಿ 26, 2017

ಗೆಳೆಯನಿರಲಿ....

ಮನೆ ತುಂಬಾ ಮಕ್ಕಳು..
ಕಿತ್ತು 
ತಿನ್ನುವ ಬಡತನ...
ಹಸಿವು...

ಬದುಕಿನ
ನಿಜವಾದ ಬಣ್ಣವನ್ನು ಪರಿಚಯ ಮಾಡಿಸುವದೇ ಈ ಹಸಿವು... !

ಹೆಂಡತಿಗೆ ಸಹಿಸಲಾಗಲಿಲ್ಲ...

"ನಿಮ್ಮ 
ಸ್ನೇಹಿತ ಶ್ರೀಕೃಷ್ಣ..
ಈಗ ರಾಜನಾಗಿದ್ದಾನೆ...

ಹೋಗಿ..
ಒಮ್ಮೆ ಭೇಟಿಯಾಗಿ ಬನ್ನಿ..."

ಸುಧಾಮನಿಗೆ ಸಂಕೋಚವಾಯಿತು...

"ಹೇಗೆ ಹೋಗಲಿ.. ?

ಆತ ಚಕ್ರವರ್ತಿ...
ಶ್ರೀಮಂತ..
ಲೋಕವೇ ಅವನನ್ನು ಪೂಜಿಸುತ್ತಿದೆ...

ನನ್ನ 
ವೇಷ ಭೂಷಣಕ್ಕೂ ಅವನ ಭೇಟಿಯಾಗುವ ಯೋಗ್ಯತೆ ಇಲ್ಲ...

ನಾವು ಸಣ್ಣವರಿದ್ದಾಗ ಸ್ನೇಹವಿತ್ತು...

ಈಗ
ಆತನಿಗೆ ನನ್ನ ನೆನಪು ಇದೆಯೋ.. ಇಲ್ಲವೋ ಗೊತ್ತಿಲ್ಲ..."...

ಸುಧಾಮನ ಮಡದಿ ಬಿಡಲಿಲ್ಲ..

"ಸ್ನೇಹಕ್ಕೆ 
ಅಂತಸ್ತು... ಶ್ರೀಮಂತಿಕೆ..ಇವುಗಳ ಅಗತ್ಯವೇ ಇಲ್ಲ..

ಸ್ನೇಹಕ್ಕೆ 
ಕೇವಲ ಭಾವನೆ.. ನೆನಪುಗಳು... ಹೃದಯ ಶ್ರೀಮಂತಿಕೆ ಸಾಕು..
ಹೋಗಿ ಬನ್ನಿ..."

ಸುಧಾಮನಿಗೆ ಮತ್ತೆ ಸಂಕೋಚ..

"ಖಾಲಿ ಕೈಯ್ಯಲ್ಲಿ ಹೇಗೆ ಹೋಗಲಿ ?....

ಏನಾದರೂ 
ತೆಗೆದುಕೊಂಡು ಹೋಗಲು ನಮ್ಮ ಬಳಿ ಏನೂ ಇಲ್ಲವಲ್ಲ.."....

ಮಡದಿ ಹಠವಾದಿ...

ಮನೆಯ ಡಬ್ಬಗಳನ್ನೆಲ್ಲ ಹುಡುಕಾಡಿದಳು..

ಎರಡು ಮುಷ್ಟಿ "ಅವಲಕ್ಕಿ" ಸಿಕ್ಕಿತು... !

ಅವನ 
ಪಂಚೆಯ ತುದಿಗೆ ಅದನ್ನು ಕಟ್ಟಿ..

"ಹೋಗಿ ಬನ್ನಿ...
ಶ್ರೀಕೃಷ್ಣ ಕೇಳಿದರೆ ಇದನ್ನು ಕೊಡಿ...

ಅರ್ಥವಾಗುವ ಮನಸ್ಸಿಗೆ 
ಹೃದಯಕ್ಕೆ
ವಸ್ತುಸ್ಥಿತಿಯನ್ನು ಹೇಳುವ ಅಗತ್ಯವಿರುವದಿಲ್ಲ... ಅರ್ಥವಾಗುತ್ತದೆ..."...

ಸುಧಾಮ 
ಬಲು ದೂರ ನಡೆದು..
ಬಳಲಿ.. ಬೆಂಡಾಗಿ..
ಹಸಿವೆಯಿಂದ
ಶ್ರೀಕೃಷ್ಣನ ಮನೆಯ ದ್ವಾರದ ಬಳಿ ಬಂದ....

ದ್ವಾರ ಪಾಲಕ ಒಳಗೆ ಬಿಡಲಿಲ್ಲ...

"ನಾನು
ಶಿಕೃಷ್ಣನ ಗೆಳೆಯ...
ಬಾಲ್ಯ ಸ್ನೇಹಿತ..."....

ದ್ವಾರ ಪಾಲಕ ನಕ್ಕ... !

ಬಡತನಕ್ಕೆ 
ಕಣ್ಣೀರು...
ಹಸಿವೆಯನ್ನು ಬಿಟ್ಟು...
ಸುಲಭವಾಗಿ ಮತ್ತೆ ಯಾವುದೂ ದಕ್ಕುವದಿಲ್ಲ...

"ಪುಣ್ಯಾತ್ಮ...
ಒಳಗೆ ಹೋಗಿ ಶ್ರೀಕೃಷ್ಣನಿಗೆ "ಸುಧಾಮ ಬಂದಿದ್ದಾನೆ" ಅಂತಾದರೂ ಹೇಳು...

ಆತನಿಗೆ ನೆನಪು ಇಲ್ಲವಾದಲ್ಲಿ ತಿರುಗಿ ಹೋಗುವೆ... "....

ದ್ವಾರಪಾಲಕ
ಒಳಗೆ ಹೋಗಿ ಕೃಷ್ಣನಿಗೆ ಸುಧಾಮನ ಹೆಸರು ಹೇಳಿದ..

ಕೃಷ್ಣ
ಓಡೋಡಿ ದ್ವಾರದವರೆಗೆ ಬಂದ...

ತನ್ನ ಬಾಲ್ಯದ ಗೆಳೆಯನನ್ನು ತಬ್ಬಿಕೊಂಡ..

ಕಣ್ಣಲ್ಲಿ ನೀರು ಇಳಿಯುತ್ತಿತ್ತು...

ಸುಧಾಮನನ್ನು
ಒಳಗೆ ಕರೆತಂದು ತಾನು ಕುಳಿತುಕೊಳ್ಳುವ ಆಸನದಲ್ಲಿ ಕುಳ್ಳಿರಿಸಿದ...

ಅವನ ಪಾದ ತೊಳೆದ..
ಬಿಸಿಲಲ್ಲಿ 
ಬರಿಗಾಲಲ್ಲಿ ನಡೆದು ಬೊಬ್ಬೆಗುಳ್ಳೆಗಳಾಗಿದ್ದ ಗೆಳೆಯನ ಕಾಲುಗಳನ್ನು ನೋಡಿ ಮರುಗಿದ...
ದುಃಖಿಸಿದ...

ತಮ್ಮ ಬಾಲ್ಯದ ತುಂಟಾಟಗಳನ್ನು ನೆನಪಿಸಿದ...

ಹರಟಿದ... ನಗಿಸಿದ...
ಒಂದು
ಕ್ಷಣಕ್ಕಾದರೂ ಸುಧಾಮನ ನೋವುಗಳನ್ನು ಮರೆಸಿದ... !

ಹೊಟ್ಟೆ ತುಂಬಾ ಮೃಷ್ಟಾನ್ನ ಭೋಜನ ಬಡಿಸಿದ...

"ಗೆಳೆಯಾ...
ನನಗಾಗಿ ಏನು ತಂದಿರುವೆ...?..".... 

ಸುಧಾಮ 
ನಾಚಿ.. ಸಂಕೋಚದ ಮುದ್ದೆಯಾದ..

ಎಲ್ಲಿಯ ಶ್ರೀಕೃಷ್ಣ.. !
ಆವನ ಅರಮನೆಯ ವೈಭವ... ಮೃಷ್ಟಾನ್ನ ಭೋಜನ..!

ಎಲ್ಲಿಯ 
ಕುಚೇಲ
ಸುಧಾಮನ ಎರಡು ಹಿಡಿ ಮುಷ್ಟಿಯ ಒಣ ಅವಲಕ್ಕಿ ?...

ಕೃಷ್ಣ ಬಿಡಲಿಲ್ಲ...

ಪಂಚೆಯ ತುದಿಯಲ್ಲಿ ಕಟ್ಟಿದ ಅವಲಕ್ಕಿ ಕಾಣಿಸಿತು...

ಗಂಟು ಬಿಚ್ಚಿ...
ಅವಲಕ್ಕಿಯನ್ನು ಬಾಯಲ್ಲಿ ಹಾಕಿಕೊಂಡು ಬಾಯಿ ಚಪ್ಪರಿಸಿದ...

ಸುಧಾಮನ ಕಣ್ಣಲ್ಲಿ 
ನೀರಿಳಿಯುತ್ತಿತ್ತು..

ಒಂದೆರಡು ದಿನ ಅಲ್ಲಿದ್ದು 
ಶ್ರೀಕೃಷ್ಣನಿಂದ ಬಿಳ್ಕೊಟ್ಟು ಮನೆಯ ಕಡೆ ಹೊರಟ..

ಮನೆಯ 
ಬಳಿ ಬಂದಾಗ ಅವನ ಮನೆ ಅಲ್ಲಿರಲಿಲ್ಲ...
ದೊಡ್ಡ ಅರಮನೆಯಿತ್ತು...

ಅವನ ಮಕ್ಕಳು ಒಳ್ಳೆಯ ಉಡುಪುಗಳನ್ನು ಧರಿಸಿ ಅಪ್ಪನನ್ನು ಸ್ವಾಗತಿಸಿದರು..

ಮಡದಿ
ರೇಷ್ಮೆ ಸೀರೆ ಉಟ್ಟು... ಮೈ ತುಂಬಾ ಆಭರಣ ಧರಿಸಿ ನಗು ನಗುತ್ತಾ ಸ್ವಾಗತಿಸಿದಳು....

ಕೃಷ್ಣನ ಭೇಟಿಯಲ್ಲಿ
ಸುಧಾಮನಿಗೆ ನಾಲಿಗೆ ಕಟ್ಟಿತ್ತು...

ಸಹಾಯ ಕೇಳಿರಲಿಲ್ಲ...

ಆದರೆ 
ಶ್ರಿಕೃಷ್ಣ 
ತನ್ನ ಗೆಳೆಯನನ್ನು..

ಗೆಳೆತನವನ್ನು ಮರೆತಿರಲಿಲ್ಲ...

ಒಮ್ಮೆ
ಶುರುವಾದ ಸ್ನೇಹಕ್ಕೆ "ಮರೆವು" ಎನ್ನುವದು ಇರುವದಿಲ್ಲ...

ದೂರ..
ಹತ್ತಿರ...
ಮಾತು.. ಮೌನ 
ಎಲ್ಲವನ್ನೂ ಮೀರಿದ ಭಾವ ಸಂಬಂಧ ಇದು.. !
:::::::::::::::::::

ನಮ್ಮ

ಪ್ರತಿ ಮಾತಿನಲ್ಲಿ...
ಮೌನದಲ್ಲಿ... 
ಪವಿತ್ರವಾದ ಸ್ನೇಹ ಪರಿಮಳವಿರಲಿ....

ನಮ್ಮ ಪ್ರತಿ ಸಂಬಂಧಗಳಲ್ಲಿ "ಭಾವನೆಗಳಿರಲಿ"...

ನಮ್ಮ
ಪ್ರತಿಯೊಂದು ಸಂಬಂಧಗಳು
ಭಾವ
ಭಾಂಧವ್ಯಗಳಾಗಲಿ..
ಅವುಗಳನ್ನು ನಿಭಾಯಿಸುವ ಶಕ್ತಿ ನಮಗಿರಲಿ...

ನಮ್ಮ
ಪ್ರತಿಯೊಂದೂ ಸಂಬಂಧಗಳಲ್ಲಿ ಒಬ್ಬ ನಗುವ ಗೆಳೆಯನಿರಲಿ....share wit ur best frndzzಮನೆ ತುಂಬಾ ಮಕ್ಕಳು..
ಕಿತ್ತು 
ತಿನ್ನುವ ಬಡತನ...
ಹಸಿವು...

ಬದುಕಿನ
ನಿಜವಾದ ಬಣ್ಣವನ್ನು ಪರಿಚಯ ಮಾಡಿಸುವದೇ ಈ ಹಸಿವು... !

ಹೆಂಡತಿಗೆ ಸಹಿಸಲಾಗಲಿಲ್ಲ...

"ನಿಮ್ಮ 
ಸ್ನೇಹಿತ ಶ್ರೀಕೃಷ್ಣ..
ಈಗ ರಾಜನಾಗಿದ್ದಾನೆ...

ಹೋಗಿ..
ಒಮ್ಮೆ ಭೇಟಿಯಾಗಿ ಬನ್ನಿ..."

ಸುಧಾಮನಿಗೆ ಸಂಕೋಚವಾಯಿತು...

"ಹೇಗೆ ಹೋಗಲಿ.. ?

ಆತ ಚಕ್ರವರ್ತಿ...
ಶ್ರೀಮಂತ..
ಲೋಕವೇ ಅವನನ್ನು ಪೂಜಿಸುತ್ತಿದೆ...

ನನ್ನ 
ವೇಷ ಭೂಷಣಕ್ಕೂ ಅವನ ಭೇಟಿಯಾಗುವ ಯೋಗ್ಯತೆ ಇಲ್ಲ...

ನಾವು ಸಣ್ಣವರಿದ್ದಾಗ ಸ್ನೇಹವಿತ್ತು...

ಈಗ
ಆತನಿಗೆ ನನ್ನ ನೆನಪು ಇದೆಯೋ.. ಇಲ್ಲವೋ ಗೊತ್ತಿಲ್ಲ..."...

ಸುಧಾಮನ ಮಡದಿ ಬಿಡಲಿಲ್ಲ..

"ಸ್ನೇಹಕ್ಕೆ 
ಅಂತಸ್ತು... ಶ್ರೀಮಂತಿಕೆ..ಇವುಗಳ ಅಗತ್ಯವೇ ಇಲ್ಲ..

ಸ್ನೇಹಕ್ಕೆ 
ಕೇವಲ ಭಾವನೆ.. ನೆನಪುಗಳು... ಹೃದಯ ಶ್ರೀಮಂತಿಕೆ ಸಾಕು..
ಹೋಗಿ ಬನ್ನಿ..."

ಸುಧಾಮನಿಗೆ ಮತ್ತೆ ಸಂಕೋಚ..

"ಖಾಲಿ ಕೈಯ್ಯಲ್ಲಿ ಹೇಗೆ ಹೋಗಲಿ ?....

ಏನಾದರೂ 
ತೆಗೆದುಕೊಂಡು ಹೋಗಲು ನಮ್ಮ ಬಳಿ ಏನೂ ಇಲ್ಲವಲ್ಲ.."....

ಮಡದಿ ಹಠವಾದಿ...

ಮನೆಯ ಡಬ್ಬಗಳನ್ನೆಲ್ಲ ಹುಡುಕಾಡಿದಳು..

ಎರಡು ಮುಷ್ಟಿ "ಅವಲಕ್ಕಿ" ಸಿಕ್ಕಿತು... !

ಅವನ 
ಪಂಚೆಯ ತುದಿಗೆ ಅದನ್ನು ಕಟ್ಟಿ..

"ಹೋಗಿ ಬನ್ನಿ...
ಶ್ರೀಕೃಷ್ಣ ಕೇಳಿದರೆ ಇದನ್ನು ಕೊಡಿ...

ಅರ್ಥವಾಗುವ ಮನಸ್ಸಿಗೆ 
ಹೃದಯಕ್ಕೆ
ವಸ್ತುಸ್ಥಿತಿಯನ್ನು ಹೇಳುವ ಅಗತ್ಯವಿರುವದಿಲ್ಲ... ಅರ್ಥವಾಗುತ್ತದೆ..."...

ಸುಧಾಮ 
ಬಲು ದೂರ ನಡೆದು..
ಬಳಲಿ.. ಬೆಂಡಾಗಿ..
ಹಸಿವೆಯಿಂದ
ಶ್ರೀಕೃಷ್ಣನ ಮನೆಯ ದ್ವಾರದ ಬಳಿ ಬಂದ....

ದ್ವಾರ ಪಾಲಕ ಒಳಗೆ ಬಿಡಲಿಲ್ಲ...

"ನಾನು
ಶಿಕೃಷ್ಣನ ಗೆಳೆಯ...
ಬಾಲ್ಯ ಸ್ನೇಹಿತ..."....

ದ್ವಾರ ಪಾಲಕ ನಕ್ಕ... !

ಬಡತನಕ್ಕೆ 
ಕಣ್ಣೀರು...
ಹಸಿವೆಯನ್ನು ಬಿಟ್ಟು...
ಸುಲಭವಾಗಿ ಮತ್ತೆ ಯಾವುದೂ ದಕ್ಕುವದಿಲ್ಲ...

"ಪುಣ್ಯಾತ್ಮ...
ಒಳಗೆ ಹೋಗಿ ಶ್ರೀಕೃಷ್ಣನಿಗೆ "ಸುಧಾಮ ಬಂದಿದ್ದಾನೆ" ಅಂತಾದರೂ ಹೇಳು...

ಆತನಿಗೆ ನೆನಪು ಇಲ್ಲವಾದಲ್ಲಿ ತಿರುಗಿ ಹೋಗುವೆ... "....

ದ್ವಾರಪಾಲಕ
ಒಳಗೆ ಹೋಗಿ ಕೃಷ್ಣನಿಗೆ ಸುಧಾಮನ ಹೆಸರು ಹೇಳಿದ..

ಕೃಷ್ಣ
ಓಡೋಡಿ ದ್ವಾರದವರೆಗೆ ಬಂದ...

ತನ್ನ ಬಾಲ್ಯದ ಗೆಳೆಯನನ್ನು ತಬ್ಬಿಕೊಂಡ..

ಕಣ್ಣಲ್ಲಿ ನೀರು ಇಳಿಯುತ್ತಿತ್ತು...

ಸುಧಾಮನನ್ನು
ಒಳಗೆ ಕರೆತಂದು ತಾನು ಕುಳಿತುಕೊಳ್ಳುವ ಆಸನದಲ್ಲಿ ಕುಳ್ಳಿರಿಸಿದ...

ಅವನ ಪಾದ ತೊಳೆದ..
ಬಿಸಿಲಲ್ಲಿ 
ಬರಿಗಾಲಲ್ಲಿ ನಡೆದು ಬೊಬ್ಬೆಗುಳ್ಳೆಗಳಾಗಿದ್ದ ಗೆಳೆಯನ ಕಾಲುಗಳನ್ನು ನೋಡಿ ಮರುಗಿದ...
ದುಃಖಿಸಿದ...

ತಮ್ಮ ಬಾಲ್ಯದ ತುಂಟಾಟಗಳನ್ನು ನೆನಪಿಸಿದ...

ಹರಟಿದ... ನಗಿಸಿದ...
ಒಂದು
ಕ್ಷಣಕ್ಕಾದರೂ ಸುಧಾಮನ ನೋವುಗಳನ್ನು ಮರೆಸಿದ... !

ಹೊಟ್ಟೆ ತುಂಬಾ ಮೃಷ್ಟಾನ್ನ ಭೋಜನ ಬಡಿಸಿದ...

"ಗೆಳೆಯಾ...
ನನಗಾಗಿ ಏನು ತಂದಿರುವೆ...?..".... 

ಸುಧಾಮ 
ನಾಚಿ.. ಸಂಕೋಚದ ಮುದ್ದೆಯಾದ..

ಎಲ್ಲಿಯ ಶ್ರೀಕೃಷ್ಣ.. !
ಆವನ ಅರಮನೆಯ ವೈಭವ... ಮೃಷ್ಟಾನ್ನ ಭೋಜನ..!

ಎಲ್ಲಿಯ 
ಕುಚೇಲ
ಸುಧಾಮನ ಎರಡು ಹಿಡಿ ಮುಷ್ಟಿಯ ಒಣ ಅವಲಕ್ಕಿ ?...

ಕೃಷ್ಣ ಬಿಡಲಿಲ್ಲ...

ಪಂಚೆಯ ತುದಿಯಲ್ಲಿ ಕಟ್ಟಿದ ಅವಲಕ್ಕಿ ಕಾಣಿಸಿತು...

ಗಂಟು ಬಿಚ್ಚಿ...
ಅವಲಕ್ಕಿಯನ್ನು ಬಾಯಲ್ಲಿ ಹಾಕಿಕೊಂಡು ಬಾಯಿ ಚಪ್ಪರಿಸಿದ...

ಸುಧಾಮನ ಕಣ್ಣಲ್ಲಿ 
ನೀರಿಳಿಯುತ್ತಿತ್ತು..

ಒಂದೆರಡು ದಿನ ಅಲ್ಲಿದ್ದು 
ಶ್ರೀಕೃಷ್ಣನಿಂದ ಬಿಳ್ಕೊಟ್ಟು ಮನೆಯ ಕಡೆ ಹೊರಟ..

ಮನೆಯ 
ಬಳಿ ಬಂದಾಗ ಅವನ ಮನೆ ಅಲ್ಲಿರಲಿಲ್ಲ...
ದೊಡ್ಡ ಅರಮನೆಯಿತ್ತು...

ಅವನ ಮಕ್ಕಳು ಒಳ್ಳೆಯ ಉಡುಪುಗಳನ್ನು ಧರಿಸಿ ಅಪ್ಪನನ್ನು ಸ್ವಾಗತಿಸಿದರು..

ಮಡದಿ
ರೇಷ್ಮೆ ಸೀರೆ ಉಟ್ಟು... ಮೈ ತುಂಬಾ ಆಭರಣ ಧರಿಸಿ ನಗು ನಗುತ್ತಾ ಸ್ವಾಗತಿಸಿದಳು....

ಕೃಷ್ಣನ ಭೇಟಿಯಲ್ಲಿ
ಸುಧಾಮನಿಗೆ ನಾಲಿಗೆ ಕಟ್ಟಿತ್ತು...

ಸಹಾಯ ಕೇಳಿರಲಿಲ್ಲ...

ಆದರೆ 
ಶ್ರಿಕೃಷ್ಣ 
ತನ್ನ ಗೆಳೆಯನನ್ನು..

ಗೆಳೆತನವನ್ನು ಮರೆತಿರಲಿಲ್ಲ...

ಒಮ್ಮೆ
ಶುರುವಾದ ಸ್ನೇಹಕ್ಕೆ "ಮರೆವು" ಎನ್ನುವದು ಇರುವದಿಲ್ಲ...

ದೂರ..
ಹತ್ತಿರ...
ಮಾತು.. ಮೌನ 
ಎಲ್ಲವನ್ನೂ ಮೀರಿದ ಭಾವ ಸಂಬಂಧ ಇದು.. !
:::::::::::::::::::

ನಮ್ಮ

ಪ್ರತಿ ಮಾತಿನಲ್ಲಿ...
ಮೌನದಲ್ಲಿ... 
ಪವಿತ್ರವಾದ ಸ್ನೇಹ ಪರಿಮಳವಿರಲಿ....

ನಮ್ಮ ಪ್ರತಿ ಸಂಬಂಧಗಳಲ್ಲಿ "ಭಾವನೆಗಳಿರಲಿ"...

ನಮ್ಮ
ಪ್ರತಿಯೊಂದು ಸಂಬಂಧಗಳು
ಭಾವ
ಭಾಂಧವ್ಯಗಳಾಗಲಿ..
ಅವುಗಳನ್ನು ನಿಭಾಯಿಸುವ ಶಕ್ತಿ ನಮಗಿರಲಿ...

ನಮ್ಮ
ಪ್ರತಿಯೊಂದೂ ಸಂಬಂಧಗಳಲ್ಲಿ ಒಬ್ಬ ನಗುವ ಗೆಳೆಯನಿರಲಿ....

ಸೋಮವಾರ, ಜನವರಿ 23, 2017

ಕಂಬಳ - ಜಲ್ಲಿಕಟ್ಡು - ಮಡೆಸ್ನಾನ - ಎಡೆಸ್ನಾನ

ಕಂಬಳ - ಜಲ್ಲಿಕಟ್ಡು - ಮಡೆಸ್ನಾನ - ಎಡೆಸ್ನಾನ - ಬೆತ್ತಲೆ ಸೇವೆ - ಎದೆಬಡಿದುಕೊಳ್ಳುವುದು ಎಲ್ಲವನ್ನೂ ಬೆಂಬಲಿಸೋಣ ಕಣ್ರೀ . ಯಾವಾಗೆಂದರೆ,
ಎಲ್ಲಾ MLA ಮಂತ್ರಿಗಳೂ,  IAS IPS IFS KAS ಅಧಿಕಾರಿಗಳು,  ಸಿನಿಮಾ ಧಾರವಾಹಿಗಳ ನಟನಟಿ ನಿರ್ದೇಶಕರೂ, ಮಠಾದೀಶರು , ಬುದ್ದಿಜೀವಿಗಳು,  ಧರ್ಮಾಧಿಕಾರಿಗಳು,  ಎಲ್ಲಾ ಹೋರಾಟಗಾರರೂ,  ಇಂಜಿನಿಯರ್ ಡಾಕ್ಟರ್ ಲಾಯರ್ ಟೀಚರ್ ಪ್ರೊಫೆಸರ್, ವಿಜ್ಙಾನಿಗಳು , ಕೋಟ್ಯಾಧಿಪತಿ ಉದ್ಯಮಿಗಳು, ಸಾಹಿತಿ ಬರಹಗಾರರು,  ಜ್ಯೋತಿಷಿಗಳು ,  ಮುಖ್ಯವಾಗಿ ಎಲ್ಲಾ ಮಾಧ್ಯಮದ ಪ್ರಖಾಂಡ ಪಂಡಿತರು ತಮ್ಮ ಕುಟುಂಬ ಸಮೇತ ಈ ಚಟುವಟಿಕೆಗಳಲ್ಲಿ ಪಾತ್ರಧಾರಿಗಳಾಗಿ ಭಾಗವಹಿಸಿದಾಗ.
                       ಇದು ಸಾಧ್ಯವೇ ಇಲ್ಲ ಕಣ್ರೀ. ಅವರುಗಳು ಯಾವತ್ತಾದರೂ ಹಳೆಯ ಹರಿದ ಮಾಸಲು ಬಟ್ಟೆ ಹಾಕಿಕೊಂಡಿರುವುದನ್ನು ನೋಡಿದ್ದೀರಾ. ಯಾವನಾದರೂ ಕೈ ಕಾಲು ಮಣ್ಣು ಮಾಡಿಕೊಂಡಿರುವುದನ್ನು ಕಂಡಿರುವಿರಾ. ಕೆಸರಲ್ಲಿ ಹೊರಳಾಡುವುದನ್ನು ಗಮನಿಸಿದ್ದೀರಾ.
ಅವರು ನಮ್ಮಷ್ಟು ಮೂರ್ಖರಲ್ಲಾ ಕಣ್ರೀ. ಕೊಬ್ಬಿದ ಕೊಂಬಿನ ಹೋರಿಯನ್ನು ಹಿಡಿಯಲು ಹೋಗಿ ಅವರು ಅಥವಾ ಅವರ ಮಕ್ಕಳು ಗಾಯ ಮಾಡಕೊಳ್ಳುವುದೋ ಸಾಯವುದನ್ನೋ ಅನುಭವಿಸಲು  ಅವರಿಗೇನು ಹುಚ್ಚೇ. ಇದೊಂದು ಮಹಾನ್ ಸಂಪ್ರದಾಯ. ಇದು ನಡೆಯದಿದ್ದರೆ ನಮ್ಮ ಬದುಕು ನಮ್ಮ ಸಂಸ್ಕೃತಿ ನಾಶವಾಗಿ ನಾವು ನರಕಕ್ಕೆ ಹೋಗುತ್ತೇವೆ ಎಂದು ಭಾವಿಸಲು ಅವರಿಗೇನು ಹುಚ್ಚುನಾಯಿ ಕಚ್ದಿದೆಯೇ.
ಬೇಡ ಕಣ್ರೀ,  ಇದು ಮೂರ್ಖರು,  ಮುಗ್ಧರು,  ಮೂಢರು,  ಸ್ವತಂತ್ರ ಚಿಂತನೆ ಇಲ್ಲದ ಗುಲಾಮ ಮನಸ್ಥಿತಿಯವರು , ಬಡವರು, ಶೋಷಿತರು ಆಚರಿಸುವ ಸಂಪ್ರದಾಯಗಳು ಕಣ್ರೀ.
                  ಗ್ರಾಮಗಳಲ್ಲಿ ಎಂತೆಂತಹ ಅದ್ಭುತ ಆಟಗಳಿವೆ. ಇಬ್ಬರು ಆಡುವ - ಗುಂಪಾಗಿ ಆಡುವ ದೈಹಿಕ ಮಾನಸಿಕ ಸಾಮರ್ಥ್ಯಕ್ಜೆ ಸವಾಲಾಗುವ ವೈವಿಧ್ಯಮಯ ಕ್ರೀಡೆಗಳಿವೆ. ಯಾವುದೇ ಅಪಾಯವಿಲ್ಲದ ಯಾರಿಗೂ ತೊಂದರೆ ಕೊಡದ ಯಾರ ಅನುಮತಿಯೂ ಬೇಕಿಲ್ಲದ ಸಂಭ್ರಮದ ಆಟಗಳಿಗೆ ಭಾರತದಂತ ಅತ್ಯುತ್ತಮ ಸಾಂಸ್ಕೃತಿಕ ಇತಿಹಾಸ ಹೊಂದಿರುವ ದೇಶದಲ್ಲಿ ಬರವೇ.
                ಈ ಸಿದ್ದರಾಮಯ್ಯ, ಯಡಿಯೂರಪ್ಪ,  ಕುಮಾರಸ್ವಾಮಿ, ಶಶಿಕಲಾ,   ಪನ್ನೀರ್ ಸೆಲ್ವಂ, ನರೇಂದ್ರ ಮೋದಿ, ಪ್ರಣವ್ ಮುಖರ್ಜಿ , ಟಿವಿಗಳ ಬಾಯಿಬುಡುಕರು ಯಾರೂ ಇದರಲ್ಲಿ ಭಾಗವಹಿಸುವುದಿರಲಿ ಚಪ್ಪಾಳೆ ತಟ್ಟಲು ಬರುವುದೂ ಅನುಮಾನ. ಏನಾದರೂ ಅನಾಹುತ ನಡೆದರೆ ಟಿವಿಗಳಲ್ಲಿ ನೋಡಿ ಪರಿಹಾರ ಘೋಷಿಸಿ ಹೊಟ್ಟೆತುಂಬ ಮೃಷ್ಟಾನ್ನ ಭೋಜನ ಮಾಡಿ Oxygen bed ನಲ್ಲಿ ಮಲಗಿಕೊಂಡು ಬಿಡ್ತಾರೆ ಕಣ್ರೀ.ರಾತ್ರೋ ರಾತ್ರಿ ಒಂದು ಸಣ್ಣ ಮುಷ್ಕರಕ್ಕೆ ಹೆದರಿ ಸುಪ್ರೀ೦ಕೋರ್ಟ್ ನ ಆದೇಶಕ್ಕೆ ವಿರುಧ್ಧವಾಗಿ ಸುಗ್ರೀವಾಜ್ಞೆ ಹೊರಡಿಸಿದರು  ಪಾಪ ಸಂಪ್ರದಾಯ ಅಂತ ಹೇಳಿ ಈ ಹುಚ್ಚಾಟಕ್ಕೆ ಸತ್ತವನ ಹೆಂಡತಿ ಮಕ್ಕಳು ಬೀದಿಪಾಲಾಗ್ತಾರೆ ಕಣ್ರೀ.
           ಇನ್ನೊಂದು ವಿಪರ್ಯಾಸ ಗೊತ್ತೆ.  ಯಾರು ಈ Digital India, online trading,  cashless economy,  smart city, smart village, advanced technology  global leader, ಅಂತೆಲ್ಲಾ ಮಾತನಾಡುತ್ತಾರೋ ಅವರೇ ಹೆಚ್ಚಾಗಿ ಇದನ್ನು ಬೆಂಬಲಿಸುವುದು ಕಾಣುತ್ತಿದೆ. ಇದು ನನಗೆ ಗೊಂದಲ ಮೂಡಿಸಿದೆ. ಇವರು ಭಾವನಾತ್ಮಕವಾಗಿ ಮಾತ್ರ ಯೋಚಿಸುತ್ತಿದ್ದಾರೆಯೇ ಎಂದು.
ಬೇಡ ಕಣ್ರೀ ... ನಿಮ್ಮ ದಮ್ಮಯ್ಯ ...... ಧರ್ಮ ಜಾತಿ ಎಡ ಬಲ ಪಂಥ ಆ ಪಕ್ಷ ಈ ಪಕ್ಷ ಎಲ್ಲಾ ಸ್ವಲ್ಪ ಪಕ್ಕಕ್ಕಿಟ್ಟು ಭಾರತೀಯತೆಯನ್ನು ಮೈಗೂಡಿಸಿಕೊಂಡು ನಾಗರೀಕ ಸಮಾಜ ಕಟ್ಟೋಣ. ಮಾಡಲು ಇದಕ್ಕಿಂತ ಬಹುಮುಖ್ಯ ಕೆಲಸಗಳಿವೆ. ದಯವಿಟ್ಡು ಈ ಓಟಿನ ರಾಜಕೀಯಕ್ಕೆ ಬಲಿಯಾಗಬೇಡಿ. ವಿಶ್ವ ಬದಲಾಗುತ್ತಿರುವಾಗ ನಾವು ಹಿಮ್ಮುಖವಾಗಿ ಚಲಿಸುವುದು ಬೇಡ. ನಾವೆಲ್ಲಾ ಒಂದೇ ದೋಣಿಯ ಪಯಣಿಗರು. ಇನ್ನಷ್ಟು ವಿಶಾಲ ಮನಸ್ಸಿನಿಂದ ಮತ್ತೊಮ್ಮೆ ಯೋಚಿಸಿ.
ನಿಮ್ಮ ಸ್ವಾತಂತ್ರ್ಯ ನಿಮಗಿದ್ದೇ ಇದೆ.

ಪ್ರಬುಧ್ಧ ಮನಸ್ಸು ಪ್ರಬುಧ್ಧ ಸಮಾಜ,
ಇದು ಮನಸ್ಸುಗಳ ಅಂತರಂಗದ ಚಳುವಳಿ,
ವಿವೇಕಾನ೦ದ. ಹೆಚ್.ಕೆ.

ಖಾಲಿ ಹೊಟ್ಟೆಯಲ್ಲಿ ನೀರು

*ಖಾಲಿ ಹೊಟ್ಟೆಯಲ್ಲಿ ನೀರು 💧ಕುಡಿದರೆ ಆಗುವ ದಶ ಲಾಭಗಳು:...*

ನೀರು ನಿಮ್ಮ ಹೆಚ್ಚಿನೆಲ್ಲಾ ಸಮಸ್ಯೆಗಳಿಗೆ ಪರಿಹಾರವಾಗ ಬಲ್ಲದು. ಮುಂಜಾನೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಹಲವಾರು ರೋಗಗಳನ್ನು ಗುಣ ಪಡಿಸ ಬಹುದು ಎಂದು ತಿಳಿದಿದೆಯಾ?

ಹೆಚ್ಚಿನ ರೋಗಗಳು ಹೊಟ್ಟೆಯಿಂದಲೇ ಆರಂಭವಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗ ನಿಮ್ಮ ಹೊಟ್ಟೆಯನ್ನು ಆರೋಗ್ಯವಾಗಿ ಇರಿಸಲು ಇದು ನೆರವಾಗಲಿದೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವ ಯೋಚನೆಯು ಮೊದಲು ಆರಂಭವಾಗಿದ್ದು ಜಪಾನ್ ನಲ್ಲಿ. ಜಪಾನಿನಲ್ಲಿ ಜನರು ಹಲ್ಲುಜ್ಜುವ ಮೊದಲು ನಾಲ್ಕು ಲೋಟ ನೀರು ಕುಡಿದು ಇದರ ಬಳಿಕ ಅವರು ಅರ್ಧ ಗಂಟೆ ಏನೂ ತಿನ್ನುವುದಿಲ್ಲ ಅಥವಾ ಕುಡಿಯುವುದಿಲ್ಲ. ಈ ನೀರಿನ ಥೆರಪಿ ನಿಮ್ಮನ್ನು ಆರೋಗ್ಯಕರ ಹಾಗೂ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ.

ಜಪಾನ್ ನ ಜನರು ವಿಶ್ವದಲ್ಲೇ ಅತ್ಯಂತ ಹೆಚ್ಚು ಚಟುವಟಿಕೆ ಹಾಗೂ ದಕ್ಷತೆಯನ್ನು ಹೊಂದಿರುವರೆಂಬ ಹೆಗ್ಗಳಿಕೆಯಿದೆ.

ಬೆಳಗ್ಗೆ ಎದ್ದು ನೀರು ಕುಡಿಯುವುದರಿಂದ ಹಲವಾರು ರೀತಿಯ ಉಪಯೋಗಗಳಿವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ನೀರು ಜಾದು ಮಾಡ ಬಲ್ಲದು. ನೀವು ಊಟವಾದ ಬಳಿಕ ಬಿಸಿ ನೀರು ಕುಡಿಯಿರಿ. ಇದರಿಂದ ನೀವು ತಿಂದ ಆಹಾರದಲ್ಲಿರುವ ಎಣ್ಣೆ ಕೊಬ್ಬಾಗಿ ಪರಿವರ್ತಿತವಾಗುವುದಿಲ್ಲ. ಬೆಳಗ್ಗಿನ ಅವಧಿಯಲ್ಲಿ ಬಿಸಿನೀರು ಕುಡಿಯಲು ಪ್ರಯತ್ನಿಸಿ. ಬೆಳಗ್ಗಿನ ವೇಳೆ ಬಿಸಿ ನೀರು ಕುಡಿದರೆ ಆಗುವ ಅದ್ಭುತ ಆರೋಗ್ಯ ಲಾಭಗಳು ಇಲ್ಲಿವೆ:

*🔹 ಕರುಳಿನ ಕ್ರಿಯೆ ಸರಾಗ:* ಬೆಳಗ್ಗೆ ಎದ್ದು ನೀವು ನೀರು ಕುಡಿದ ಕೂಡಲೇ ಮಲ ವಿಸರ್ಜನೆ ಮಾಡುವ ಅಗತ್ಯತೆ ಕಾಣಿಸುತ್ತದೆ. ಇದರಿಂದ ನಿಮ್ಮ ಕರುಳಿನ ಕ್ರಿಯೆಯು  ಸದಾ ನಿಯಮಿತವಾಗುತ್ತದೆ. ನೀವು ಪ್ರತೀ ಸಲ ಮಲ ವಿಸರ್ಜನೆ ಮಾಡಿದಾಗ ದೇಹವು ತ್ಯಾಜ್ಯದಿಂದ ಮುಕ್ತಿ ಪಡೆಯುತ್ತದೆ.

*🔹ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ:* ಪ್ರತೀ ದಿನ ನಾವು ಆಹಾರ ಅಥವಾ ಉಸಿರಾಟದ ಮೂಲಕ ಸೇವನೆ ಮಾಡುವಂತಹ ವಿಷಕಾರಿ ಅಂಶಗಳನ್ನು ನೀರು ಹೊರ ಹಾಕುತ್ತದೆ. ನೀವು ನೀರು ಕುಡಿದು ಮೂತ್ರ ವಿಸರ್ಜನೆ ಮಾಡಿದಾಗ ದೇಹದಲ್ಲಿನ ವಿಷಕಾರಿ ಅಂಶ ಹೊರ ಹೋಗುತ್ತದೆ.

*🔹ಹಸಿವು ಹೆಚ್ಚಿಸುತ್ತದೆ:* ಆಗಾಗ ನಾವು ನೀರು ಕುಡಿಯುವುದರಿಂದ ಮತ್ತು ನಿಮ್ಮ ಕರುಳನ್ನು ಸ್ವಚ್ಛಗೊಳಿಸುವುದರಿಂದ ದೇಹದ ಆಯಾಸ ಕಡಿಮೆಯಾಗುತ್ತದೆ. ಬೆಳಗ್ಗೆ ಬೇಗನೆ ಹಸಿವಾಗುತ್ತದೆ ಮತ್ತು ಇದರಿಂದ ಸರಿಯಾಗಿ ಉಪಹಾರ ಮಾಡ ಬಹುದು.

*🔹ತಲೆನೋವು ನಿವಾರಿಸುತ್ತದೆ:* ನಮಗೆ ನಿರ್ಜಲೀಕರಣದಿಂದಾಗಿ ಹೆಚ್ಚಿನ ಸಲ ತಲೆನೋವು ಕಾಣಿಸಿ ಕೊಳ್ಳುತ್ತದೆ. ಬೆಳಗ್ಗೆ ನೀರು ಕುಡಿಯುವುದರಿಂದ ನಿಮ್ಮ ದೇಹವನ್ನು ನಿರ್ಜಲೀಕರಣದಿಂದ ದೂರವಿಡ ಬಹುದು.

*🔹ಕರುಳನ್ನು ಸ್ವಚ್ಛಗೊಳಿಸುತ್ತದೆ:* ಕರುಳಿನಲ್ಲಿ ಸಂಗ್ರಹವಾಗಿರುವ ಜಿಡ್ಡನ್ನು ನೀರು ಸ್ವಚ್ಛಗೊಳಿಸುತ್ತದೆ. ಇದರಿಂದ ದೇಹವು ಪೌಷ್ಠಿಕಾಂಶಗಳನ್ನು ಬೇಗನೆ ಹೀರಿ ಕೊಳ್ಳಲು ನೆರವಾಗುತ್ತದೆ.

*🔹ಚಯಾಪಚಯ ಕ್ರಿಯೆಗೆ ವೇಗ :* ಬಿಸಿ ನೀರನ್ನು ಕುಡಿಯುವುದರಿಂದ ನಿಮ್ಮ ಚಯಾಪಚಯ ಕ್ರಿಯೆಯು ಸುಮಾರು ಶೇ.24ರಷ್ಟು ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಆಹಾರವು ಬೇಗನೆ ಜೀರ್ಣವಾಗಿ, ಆಹಾರ ಸಮೀಕರಿಸಿ ತೂಕ ಕಳೆದು ಕೊಳ್ಳಲು ನೆರವಾಗುತ್ತದೆ.

*🔹ರಕ್ತ ಕಣಗಳ ಸೃಷ್ಟಿ:* ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ನಿಮ್ಮ ದೇಹವು ಕೆಂಪುರಕ್ತದ ಕಣಗಳನ್ನು ವೇಗವಾಗಿ ಉತ್ಪತ್ತಿ ಮಾಡಲು ನೆರವಾಗುತ್ತದೆ. ಇದು ಆಮ್ಲಯುಕ್ತ ರಕ್ತವಾಗಿರುವ ಕಾರಣ ನಿಮ್ಮ ಹೆಚ್ಚು ಕ್ರಿಯಾಶೀಲವಾಗಿರುವಂತೆ ಮಾಡುತ್ತದೆ.

*🔹 ತೂಕ ಕಳೆದು ಕೊಳ್ಳಲು:* ನೀವು ತೂಕ ಕಳೆದು ಕೊಳ್ಳಲು ಪ್ರಯತ್ನಿಸುತ್ತಿದ್ದರೆ ಆಗ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ. ಇದರಿಂದ ನೀವು ವಿಷಕಾರಿ ಟ್ರಾನ್ಸ್ ಫ್ಯಾಟ್ಸ್ ನ್ನು ಹೊರ ಹಾಕಲು ನೆರವಾಗುತ್ತದೆ ಮತ್ತು ದೇಹದಲ್ಲಿ ಕೊಬ್ಬಿನ ಚಯಾಪಚಯ ಕ್ರಿಯೆಯ ಮಟ್ಟ ಹೆಚ್ಚುತ್ತದೆ.

*🔹ಹೊಳೆಯುವ ತ್ವಚ್ಛೆಗೆ:* ನಿಮ್ಮ ಕರುಳಿನ ಕ್ರಿಯೆ ಸರಿಯಾಗಿ ಇರದ ಸಂದರ್ಭದಲ್ಲಿ ಮೊಡವೆ ಸಮಸ್ಯೆ ಕಾಣಿಸಿ ಕೊಳ್ಳುತ್ತದೆ. ನಿಮ್ಮ ಕರುಳಿನ ಕ್ರಿಯೆ ನಿಯಮಿತವಾಗಿದ್ದರೆ ನಿಮ್ಮ ಮುಖದಲ್ಲಿ ಮೊಡವೆಗಳು ಕಡಿಮೆಯಿರುತ್ತದೆ.

*🔹ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ:* ನಿಮ್ಮ ದೇಹದಲ್ಲಿ ನೀರಿನ ಅಂಶವನ್ನು ಕಾಯ್ದು ಕೊಳ್ಳಲು ನೀರು ತುಂಬಾ ಮುಖ್ಯ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದಾಗ ಸೋಂಕಿನ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಹೆಣ್ಣು ಮಕ್ಕಳು ತಾಳ್ಮೆ ಕಳಕೊಳ್ಳುತ್ತಿರುವುದು ಯಾಕೆ?*

ನಿಮ್ಮಲ್ಲಿ ಎಷ್ಟು ಮಂದಿ ಇದನ್ನು ಒಪ್ಪುತ್ತೀರೋ ಗೊತ್ತಿಲ್ಲ. ಆದರೆ ನನ್ನ ಗಮನಕ್ಕೆ ಬಂದಿರುವ, ನ್ಯಾಯ ಕೇಳಿ ನನಗೆ ದೂರು ನೀಡಲಾಗಿರುವ ಮತ್ತು ಆಪ್ತ ಸಮಾಲೋಚನೆ ನಡೆಸಿರುವ ಗಂಡ-ಹೆಂಡತಿ ಮನಸ್ತಾಪಗಳ ಹಿನ್ನೆಲೆಯಲ್ಲಿ ಈ ನಿಲುವಿಗೆ ಬರುತ್ತಿದ್ದೇನೆ. ನಮ್ಮ ಹೆಣ್ಣು ಮಕ್ಕಳು ತಾಳ್ಮೆ ಕಳಕೊಳ್ಳುತ್ತಿದ್ದಾರೆ. ಚಿಕ್ಕ ಪುಟ್ಟ ವಿಚಾರಗಳಿಗೂ ವಿವಾಹ ವಿಚ್ಛೇದನದ ತೀರ್ಮಾನಕ್ಕೆ ಬಂದು ಬಿಡುತ್ತಾರೆ!

ಅನುಪಾತದ ಲೆಕ್ಕಾಚಾರ ಹಾಕಿದರೆ ಕಾಲೇಜು ಮೆಟ್ಟಲು ಹತ್ತಿರುವ ಅಥವಾ ನಾಲ್ಕಕ್ಷರ ತಿಳಿದಿರುವ ಹೆಣ್ಣು ಮಕ್ಕಳಿಗೆ ತಾಳ್ಮೆ ತುಂಬಾ ಕಡಿಮೆ. ಹಾಗಾದರೆ ಅವರಿಗೆ ಶಿಕ್ಷಣ ನೀಡಿದ್ದೇ ತಪ್ಪಾಯಿತೇ? ಧಾರ್ಮಿಕ ಶಿಕ್ಷಣ ನೀಡಿದರೆ ಎಲ್ಲ ಸರಿ ಹೋಗುತ್ತೆ ಎನ್ನುವವರಿದ್ದಾರೆ. ಆದರೆ, ಏನೂ ವ್ಯತ್ಯಾಸ ಕಾಣುತ್ತಿಲ್ಲ!

ಮಹಿಳಾ ಶೋಷಣೆಯ ವಿರುದ್ಧ ಹೋರಾಡಲು ಅನೇಕ ಸಂಸ್ಥೆಗಳಿವೆ. ಪುರುಷ ಶೋಷಣೆಯ ವಿರುದ್ಧ ಇನ್ನು ಸಂಘ-ಸಂಸ್ಥೆಗಳು ಹುಟ್ಟಿಕೊಂಡರೆ ಅಚ್ಚರಿ ಪಡಬೇಕಾಗಿಲ್ಲ.

ಯಾಕೆಂದರೆ ಪೊಲೀಸ್ ಇಲಾಖೆ, ನ್ಯಾಯಾಲಯಗಳು ಅನೇಕ ಸಲ ಭಾವನಾತ್ಮಕವಾಗಿ ಮಹಿಳಾ ಪರವಾಗಿರುತ್ತೆ. ಈ ಕಾರಣಕ್ಕಾಗಿಯೇ ಇರಬಹುದೇನೋ, ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯವು "ವರದಕ್ಷಿಣೆ ವಿಚಾರವಾಗಿ ಗಂಡ-ಹೆಂಡತಿ ಜಗಳದ ಕೇಸುಗಳನ್ನು ದೂರು ಬಂದ ಕೂಡಲೇ  ದಾಖಲಿಸಬೇಡಿ. ಸಾಕಷ್ಟು ತನಿಖೆ ನಡೆಸಿದ ಬಳಿಕವೇ ಅಗತ್ಯವಿದ್ದಲ್ಲಿ ಕೇಸು ದಾಖಲಿಸಿ. ನ್ಯಾಯಾಲಯಗಳ ಸಮಯ ಉಳಿಸಿ" ಎಂದು ಪೋಲಿಸ್ ಇಲಾಖೆಗೆ ಆದೇಶಿಸಿದೆ.

ಗಂಡ, ಆತನ ತಂದೆ,ತಾಯಿ ಮತ್ತು ಇಡೀ ಕುಟುಂಬದ ಮೇಲೆ ಸುಳ್ಳು ಕೇಸು ಹಾಕಿ ವರ್ಷಗಟ್ಟಲೆ ಅವರು ಪೊಲೀಸ್ ಠಾಣೆ, ನ್ಯಾಯಾಲಯಗಳಿಗೆ ಅಲೆದಾಡುವಂತೆ ಮಾಡುವ ಹೆಣ್ಣು ಮಕ್ಕಳಿಗೆ ಬುದ್ಧಿ ಹೇಳುವವರು ಯಾರು?

ಮಹಿಳಾ ಶೋಷಣೆ, ಪುರುಷ ಪ್ರಧಾನ ಸಮಾಜ ಎಂದೆಲ್ಲಾ ಕಿರುಚಾಡುವ ಮಂದಿ ಇದಕ್ಕೆ ಉತ್ತರ ನೀಡುತ್ತಾರೆಯೇ?

ತಾಯಿಯ ಬಗ್ಗೆ ಅತಿಯಾದ ಗೌರವ ನಮಗೆ, ಆದರೆ ತಂದೆಯನ್ನು ಯಾಕೆ ಮರೆಯುತ್ತೇವೆ? ನಮ್ಮ ಬೆಳವಣಿಗೆಗೆ ಆತನ ಕೊಡುಗೆ ಏನೂ ಇಲ್ಲವೇ?

ಕುಟುಂಬ, ಮನೆ, ಊರು, ದೇಶ ಬಿಟ್ಟು ಪರವೂರು/ವಿದೇಶಗಳಲ್ಲಿ ಬೆವರು, ರಕ್ತ ಸುರಿಸುತ್ತಾ ಸಂಸಾರಕ್ಕೆ ಬೆಂಗಾವಲಾಗಿ ನಿಂತು ಜೀವ ಸವೆಸುತ್ತಿರುವ ನಮ್ಮ ಹುಡುಗರು ಒಂದರ್ಥದಲ್ಲಿ ಶೋಷಣೆಗೆ ಒಳಪಟ್ಟವರಲ್ಲವೇ?

ಪ್ರಸಕ್ತ ಸಮಾಜದ ಹುಡುಗಿಯರಿಗೆ ಹೋಲಿಸಿದರೆ, ಹುಡುಗರು ಎಷ್ಟೋ ವಾಸಿ ಅನಿಸುತ್ತಿದೆ. ನನ್ನ ನಿಲುವು ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ!

*ಉಮರ್ ಯು.ಹೆಚ್.*

ಗುರುವಾರ, ಜನವರಿ 12, 2017

ಅಜಿನಾಮೋಟೊ ಎಂಬ ಮೌನಿ ಕೊಲೆಗಾರ

ಡಾ.ಮುರಳೀಮೋಹನ್

*ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ* ಎಂಬುದು ನಿಮ್ಮ ಹಿರಿಯರು ಯಾವತ್ತೂ ಹೇಳುವ ಹಿತನುಡಿ.
ಆದರೆ ಇದನ್ನು ಅನುಕರಣೆ ಮಾಡುವವರ ಸಂಖ್ಯೆ ಮಾತ್ರ ಬಹಳ ಕಡಿಮೆ ಎನ್ನುವುದೇ ಈ ಶತಮಾನದ ಬಹುದೊಡ್ಡ ದುರಂತ ಎಂದರೂ ತಪ್ಪಲ್ಲ.
ನಮ್ಮ ದೇಹಕ್ಕೆ ಬರುವ ಹೆಚ್ಚಿನ ರೋಗಗಳು ತಡೆಗಟ್ಟಬಹುದಾದ ರೋಗಗಳೇ.
ನಾವು ಏನ್ನನ್ನು ತಿನ್ನುತ್ತೇವೆ ಎನ್ನುವ ಪರಿಜ್ಞಾನ ಇಲ್ಲದೆ, ನಾಲಗೆಯ ದಾಸನಾಗಿ ಸಿಕ್ಕಿ ಸಿಕ್ಕಿದ್ದನ್ನೆಲ್ಲಾ ತಿನ್ನುವ ಕಾರಣದಿಂದಲೇ ದಿನಕ್ಕೊಂದರಂತೆ ಹೊಸ ಹೊಸ ರೋಗಗಳು ಉದ್ಭವಿಸುತ್ತದೆ.
ಬದುಕುವುದಕ್ಕಾಗಿ ತಿನ್ನಿ, ತಿನ್ನುವುದಕ್ಕಾಗಿ ಬದುಕಬೇಡಿ ಎಂದು ಹಿರಿಯರು ಸಾರಿ ಹೇಳಿದರೂ, ಕೇವಲ ನಾಲಿಗೆಯ ಚಾಪಲ್ಯಕ್ಕೆ ಬಲಿಯಾಗಿ ಏನು ತಿನ್ನಬಾರದೊ ಅದನ್ನೇ ತಿಂದು ರೋಗರುಜಿನಗಳಿಗೆ ದಾಸರಾಗುತ್ತೀರುವುದೇ ಬಹುದೊಡ್ಡ ವಿಪರ್ಯಾಸ.
ಇತ್ತೀಚಿನ ದಿನಗಳಲ್ಲಿ ದಿಢೀರ್ ತಿಂಡಿಗಳು, ಸಿದ್ಧ ಆಹಾರಗಳು ಮತ್ತು ಚೈನೀಸ್ ತಿಂಡಿಗಳ ಹಾವಳಿ ತಾರಕಕ್ಕೇರಿದೆ.
ಅತೀ ಹೆಚ್ಚು ಕೊಬ್ಬು, ಕ್ಯಾಲರಿ ಮತ್ತು ಲವಣಗಳಿಂದ ಕೂಡಿದ, ಕನಿಷ್ಠ ಪೋಷಕಾಂಶ ಮತ್ತು ಪೌಷ್ಟಿಕಾಂಶ ಹೊಂದಿರುವ ಈ  ಆಹಾರವನ್ನು  ಹಾಳೂಮೂಳೂ (ಜಂಕ್ ಫುಡ್) ಎಂದು ಕರೆಯಲಾಗುತ್ತದೆ.
ಈ ಎಲ್ಲಾ ಆಹಾರಗಳನ್ನು ರುಚಿಕರ ವಾಗಿರಿಸಲು ಬಳಸುವ ರಾಸಾಯನಿಕವೇ ನಮ್ಮ ಈಗಿನ ಮಕ್ಕಳ ಮತ್ತು ಯುವ ಜನರ ಆರೋಗ್ಯಕ್ಕೆ ಮಾರಕವಾದ ಅಜಿನಾಮೊಟೊ ಎನ್ನುವ ಮೌನಿ ಕೊಲೆಗಾರ.

*ಏನಿದು ಅಜಿನಾಮೊಟೊ?*

ದಿನವೊಂದರಲ್ಲಿ ಬೀದಿಗೆರಡರಂತೆ ನಾಯಿ ಕೊಡೆಗಳ ರೀತಿಯಲ್ಲಿ ಹುಟ್ಟಿಕೊಳ್ಳುವ ಫಾ಼ಸ್ಟ್ ಪ಼ುಡ್ ಅಥವಾ ಚೈನೀಸ್ ಫು಼ಡ್ ಜಾಯಿಂಟ್ ಗಳಲ್ಲಿ ರುಚಿಗಾಗಿ ಬಳಸುವ ಮೋನೋ ಸೋಡಿಯಂ ಗ್ಲುಟಾಮೇಟ್ ಎಂಬ ರಾಸಾಯನಿಕವೇ ನಮ್ಮ ಕತೆಯ ಖಳನಾಯಕ.
ಇದೊಂದು ಆಹಾರವನ್ನು ರುಚಿಯಾಗಿರಿಸುವ ಪದಾರ್ಥ.
ಚೈನೀಸ್ ಫಾಸ್ಟ್ ಫುಡ್ಗಂತೂ ಇದನ್ನು ಬೆರೆಸಿಲ್ಲದಿದ್ದರೆ, ನಮ್ಮ ನಾಲಗೆಗೆ ಆ ಫ್ರೈಡ್ ರೈಸಿನ ರುಚಿ, ನೂಡಲ್ಸಿನ ರುಚಿ ಖಂಡಿತ ಬರುವುದೇ ಇಲ್ಲ.
ಎಂಎಸ್ ಜಿ ಎಂದು ಕರೆಸಿಕೊಳ್ಳುವ ಈ ಮೌನಿ ಕೊಲೆಗಾರ, ಎಲ್ಲ ಸಿದ್ಧ ಮತ್ತು ದಿಢೀರ್ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.
ಮಾಲ್ ಗಳಲ್ಲಿ, ಬೇಕರಿಗಳಲ್ಲಿ, ಫಾಸ್ಟ್ ಫುಡ್ ಗಳಲ್ಲಿ ದೊರೆಯುವ, ಮುಚ್ಚಿದ ತಗಡಿನ ಡಬ್ಬಗಳಲ್ಲಿ ಮಾರಾಟವಾಗುವ ಎಲ್ಲಾ ಪದಾರ್ಥಗಳಲ್ಲಿ ಅಧಿಕವಾಗಿ ಎಂಎಸ್ ಜಿ ಬಳಸುತ್ತಾರೆ.
೧೯೦೮ರಲ್ಲಿ ಜಪಾನಿ ಸಂಶೋಧಕ ಕಿಕುನೆ ಇಕೆಡಾ ಎಂಬಾತ ಈ ರಾಸಾಯನಿಕವನ್ನು ಕಂಡು ಹಿಡಿದ.
ಆ್ಯಂಕ್ಸೆಂಟ್ ಎಂದು ಕರೆಯಲಾದ ಕಡಲೊಳಗಿನ ಸಸ್ಯ ಬಳ್ಳಿಗಳ ರಸದಿಂದ ತಯಾರಿಸಿದ ಈ ರಾಸಾಯನಿಕ, ನೈಸರ್ಗಿಕ ರುಚಿ ತರಿಸುವ ಪದಾರ್ಥವಾಗಿರುತ್ತದೆ.
ಇದನ್ನು ಆವಿಷ್ಕರಿಸಿ ಹೊಸದಾದ ರುಚಿ ತರುವ ಪದಾರ್ಥವನ್ನು ಸೃಷ್ಟಿಸಿ ಅದಕ್ಕೆ ಅಜಿನಾಮೋಟೊ ಎಂದು ನಾಮಕರಣ ಮಾಡಿದ.
ಇದರಲ್ಲಿ ಶೇ. ೭೮ ಗ್ಲುಟಾಮಿಕ್ ಆ್ಯಸಿಡ್ ಮುಕ್ತ ರೂಪದಲ್ಲಿ ಇದೆ. ಶೇ. ೨೧ ಸೋಡಿಯಂ ಮತ್ತು ಶೇ. ೧ ಕಲ್ಮಶಗಳಿವೆ.
ಇವುಗಳ ಒಟ್ಟು ರುಚಿಗೆ ಉಮಾಮಿ ಎನ್ನುತ್ತಾರೆ.
ಒಟ್ಟಿನಲ್ಲಿ ಎಂಎಸ್ ಜಿ ಎಂಬ ಗುಪ್ತ ನಾಮದಿಂದ ಕರೆಯುವ ಈ ರಾಸಾಯನಿಕ, ರುಚಿ ಹೆಚ್ಚಿಸುವುದರ ಜೊತೆಗೆ ನಮ್ಮ ದೇಹದ ಒಂದೊಂದೇ ಅಂಗಗಳನ್ನು ನುಂಗಿ ನೀರು ಕುಡಿದು ಆಪೋಷನ ತೆಗೆದುಕೊಳ್ಳುತ್ತದೆ.
ಹೆಸರೇ ಸೂಚಿಸಿದಂತೆ ಎಂಎಸ್ ಜಿ ಒಂದು ಎಕ್ಸೆಟೋ ಟಾಕ್ಸಿನ್.
ಖ್ಯಾತ ನರತಜ್ಞ ಡಾ॥ ರಸೆಲ್ಲ ಬ್ಲೆಲಾಕ್ ಈ ಎಂಎಸ್ ಜಿ  ಮೊದಲಾಗಿ ನರಮಂಡಲವನ್ನೇ ದಾಳಿ ಮಾಡುತ್ತದೆ.
ಎಂಎಸ್ ಜಿ ಸೇವಿಸಿದ ಬಳಿಕ ಕೊಬ್ಬು ಶೇಖರಣೆಗೊಂಡು ದಪ್ಪಗಾಗುತ್ತಾರೆ.
ಆ ಬಳಿಕ ಕಣ್ಣು ನೋವು, ತಲೆನೋವು, ಸುಸ್ತು, ಆಯಾಸ, ನಿರಾಶಕ್ತಿ, ಊಟ ಸೇರದಿರುವುದು, ಅಜೀರ್ಣ, ಖಿನ್ನತೆಯಿಂದ ಬಳಲುತ್ತಾರೆ.
ಗರ್ಭಿಣಿಯರಂತೂ ಈ ತೆರವಾದ ಅಜಿನಾಮೋಟೊ ಪದಾರ್ಥದಿಂದ ಮಾರು ದೂರವಿದ್ದರೆ ಆಕೆಗೂ ಮತ್ತು ಆಕೆಗೆ ಹುಟ್ಟುವ ಮಗುವಿಗೂ ಒಳಿತಾಗಬಹುದು.
ಹೆಸರು ಸೂಚಿಸಿದಂತೆ ಖಎಯಲ್ಲಿ ಇರುವ ಸೋಡಿಯಂ ಅಥವಾ ಉಪ್ಪು, ಅಧಿಕ ಪ್ರಮಾಣದಲ್ಲಿ ಇರುತ್ತದೆ. ಅಧಿಕ ಎಂಎಸ್ ಜಿ ಬಳಸುವುದರಿಂದ ಮೆದುಳು ಶಕ್ತಿಹೀನವಾಗುತ್ತದೆ.
ಸದಾ ಬಳಕೆಯಿಂದ ದೇಹದೊಳಗಿನ ಸಹಜ ನೀರಿನ ಅಂಶ ಕಡಿಮೆಯಾಗಿ ಸದಾ ತಲೆನೋವು, ಅತಿಯಾಗಿ ಬೆವರುವಿಕೆ, ತಲೆ ಸುತ್ತುವಿಕೆಯಿಂದ ಬಳಲಿ ಬೆಂಡಾಗುತ್ತಾನೆ. ಮುಖ ಊದುವುದು, ಕಣ್ಣು ಸೆಳೆತ, ಚರ್ಮ ಬಿಗಿಯಾಗುವುದು, ಅತಿಯಾದ ಹೊಟ್ಟೆ ಹುರಿ, ಮೂತ್ರಬಾಧೆ, ಕಿಬ್ಬೊಟ್ಟೆನೋವು, ವಾಂತಿ ಭೇದಿ, ವಾಕರಿಕೆ, ಹಸಿವಿಲ್ಲದಿರಿವುದು, ಮೂಳೆ ಮತ್ತು ಸ್ನಾಯುಗಳಲ್ಲಿ ಕಾಣಿಸಿಕೊಳ್ಳುವ ನೋವು ಕ್ಯಾಲ್ಸಿಯಂ ಕೊರತೆ, ರಕ್ತಹೀನತೆ, ರಕ್ತದೊತ್ತಡ, ಎದೆ ಬಡಿತ ಜಾಸ್ತಿಯಾಗುವುದು ಹೀಗೆ ಒಂದೊಂದಾಗಿ ಎಲ್ಲಾ ಅಂಗಾಂಗಳನ್ನು ನುಂಗಿ ನೀರು ಕುಡಿಯುತ್ತದೆ.

ಕೊನೆ ಮಾತು

ನಾವು ತಿನ್ನುವ ಆಹಾರ ಎನ್ನುವುದು ನಮ್ಮ ದೇಹದ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಿರಬೇಕೇ ಹೊರತು ಮಾರಕವಾಗ ಬಾರದು.
ಕ್ಯಾಲ್ಸಿಯಂ, ಪ್ರೊಟೀನ್ ಶರ್ಕರಪಿಷ್ಠ, ಲವಣಾಂಶ, ಕೊಬ್ಬು ಹೇಗೆ ಎಲ್ಲವನ್ನು ಹಿತಮಿತವಾಗಿ ಹೊಂದಿರುವ ಸಮತೋಲನವಿರುವ ಆಹಾರವನ್ನು ನಾವು ಸೇವಿಸಬೇಕು.
ಇದನ್ನು ಬಿಟ್ಟು ಬರೀ ರುಚಿಗೆ ಮಾತ್ರ ಆದ್ಯತೆ ನೀಡುವ, ಅತಿಯಾದ ಕೊಬ್ಬು ಕ್ಯಾಲರಿಯಿರುವ ಸಿದ್ಧ ಆಹಾರವನ್ನು ಸೇವಿಸುವುದು ನಮ್ಮ ದೇಹದ ಆರೋಗ್ಯಕ್ಕೆ ಖಂಡಿತವಾಗಿಯೂ ಒಳ್ಳೆಯದಲ್ಲ.
ಯಥೇಚ್ಛವಾದ ನೀರಿನ ಬಳಕೆಯೊಂದಿಗೆ ಹಸಿ ತರಕಾರಿ, ತಾಜಾಹಣ್ಣು ಹಂಪಲುಗಳು, ನೈಸರ್ಗಿಕ ಪೇಯಗಳು ಇವೆಲ್ಲವನ್ನು ಮಾತ್ರ ನಾವು ಬಳಸಬೇಕು.
ಇಲ್ಲವಾದಲ್ಲಿ ಆಹಾರವನ್ನು ಔಷಧಿಯಂತೆ ಮತ್ತು ಔಷಧಿಯನ್ನು ಆಹಾರದಂತೆ ತಿನ್ನಬೇಕಾದ ದಿನವೂ ಬರಬಹುದು.

ಸೌಜನ್ಯ : ವಾಭಾ ೧೩.೧.೨೦೧೭