ಸೋಮವಾರ, ಫೆಬ್ರವರಿ 27, 2017

ಮುಸ್ಲಿಮನಾಗುವುದೆಂದರೆ ಪುಟ೧

"ಮುಸ್ಲಿಮನೆಂದರೆ ಸಮಾಜದ ನೊಗ ಹೊರುವುದು"  -ಪ್ರಥಮ  ಪುಟ-1

"ಅರ್ರಹ್ಮಾನಿರ್ರಹೀಮ್" ಅವನು ವಿಶ್ವಾಸವಿಡುವವರಿಗೂ ,ವಿಶ್ವಾಸ ಇರಿಸದವರಿಗೂ ಒಂದೇ ರೀತಿಯಾಗಿ ಕರುಣೆ ತೋರುವವನು, ಅರ್ಥಾತ್ ಅಣ್ಣ,ನೀರು,ಗಾಳಿ ಒದಗಿಸಿಕೊಡುವವನು ಎಂದಾಗಿದೆ ದೇವನ ಕುರಿತು ಇಸ್ಲಾಂ ವಿವರಿಸುವುದು. ಅಲ್ಲಾಹನೇ ಮಾಡದ ಬೇಧ ಭಾವ ಅತನನ್ನು ದೇವನಾಗಿ ಸ್ವೀಕರಿಸಿದ ಮುಸ್ಲಿಮನೊಬ್ಬ ಹೇಗೆ ತಾನೆ ಮಾಡಬಹುದು ? ಹಾಗಿದ್ದರೆ ಪರಧರ್ಮೀಯರ ಬಗ್ಗೆ  ಅಸಹಿಷ್ಣುತೆಯನ್ನು ಹೊಂದುವುದು, ಕಂದರಗಳನ್ನು ಸ್ರಷ್ಟಿಸುವುದು ಇಸ್ಲಾಂ ನ ಅನುಯಾಯಿಯೊಬ್ಬನ ಕೆಲಸವಂತೂ ಅಲ್ಲವೇ ಅಲ್ಲ.
   ತನ್ನ ಸುತ್ತ ಮುತ್ತಲಿನ ನಲವತ್ತು ಮನೆಗಳ ವ್ಯಾಪ್ತಿಯಲ್ಲಿ ಯಾರಾದರೊಬ್ಬರು ಹಸಿವಿನಿಂದ ಮಲಗಿರುವುದರ ಹೊರತಾಗಿಯೂ, ಹೊಟ್ಟೆ ತುಂಬ ತಿನ್ನುವವನು ಮಸ್ಲಿಮರಲ್ಲಿ ಒಳಪಟ್ಟವನಲ್ಲ ಎನ್ನುವ ಇಸ್ಲಾಂ, ಎಲ್ಲಿಯೂ ತನ್ನ ಸುತ್ತ ಮುತ್ತಲಿನ ಮನೆಗಳವರ ಧರ್ಮಗಳ ಬಗ್ಗೆ ಮಾತನಾಡುವುದಿಲ್ಲ. ಇಲ್ಲಾ ಮುಸ್ಲಿಮರಿಗೆ ಹಸಿವಾಗಿದ್ದರೆ ಉಣಿಸದಿದ್ದರೆ ಮಾತ್ರ ನೀನು ಇಸ್ಲಾಂ ನ ಅನುಯಾಯಿಯಾಗಲು ಅರ್ಹನಲ್ಲ ಎಂದು ಹೇಳುವುದಿಲ್ಲ. ಬದಲಾಗಿ ಹಸಿವಿನ ಅಪಮಾನಕರ ನೋವು ಧರ್ಮ ನಂಬಿಕೆಗಳಾಚೆಗೆ ಎಲ್ಲರಿಗೂ ಒಂದೇ ಎನ್ನುವುದನ್ನು ಸಾರುವ ಇಸ್ಲಾಂ, ಆ ಬೋಧನೆಯ ಆಳದಲ್ಲಿ ಮತ್ತೆ ಮತ್ತೆ ಮನುಷ್ಯರ ನಡುವೆ ಇರಬೇಕಿರುವ ಸಮಾನತೆ, ಮನುಷ್ಯಪ್ರೇಮ, ಮಮತೆ, ಕರುಣೆಗಳನ್ನೇ ಕಠಿಣವಾಗಿ ಬೋಧಿಸಿಬಿಡುತ್ತದೆ. ಆ ಮೂಲಕ ಸಮಾಜದ ಸೌಹಾರ್ದತೆ, ಸಹಬಾಳ್ವೆ ಯ ಜವಾಬ್ದಾರಿಯನ್ನು ಮುಸ್ಲಿಮನಾಗುವವನ ಹೆಗಲಿಗೆ ಇಸ್ಲಾಂ ವಹಿಸಿಬಿಡುತ್ತದೆ.   ಮುಂದುವರಿಯುವುದು.....
    
    (ಅಚಾತುರ್ಯದ ತಪ್ಪುಗಳನ್ನು ಲೇಖನಿಯ ಮೂಲಕ ಬರೆಯಲು ಓದಲು ಕಲಿಸಿಕೊಟ್ಟವನು ಮನ್ನಿಸಲಿ)

ಭಾನುವಾರ, ಫೆಬ್ರವರಿ 26, 2017

ಮುಸ್ಲಿಮನಾಗುವುದೆಂದರೆ......ಮುನ್ನುಡಿ

"ಮುಸ್ಲಿಮನಾಗುವುದೆಂದರೆ ಸಮಾಜದ ನೊಗ ಹೊರುವುದು" - ಮುನ್ನುಡಿ

ದಾರಿಯಲ್ಲಿ ಬಿದ್ದ ಮುಳ್ಳನ್ನು ಸರಿಸುವುದನ್ನು ಮುಸ್ಲಿಮನಾಗುವ ಕನಿಷ್ಠ ಅರ್ಹತೆಗಳಲ್ಲಿ ಒಂದು ಎಂದು ಕಲಿಸಲಾಗಿದೆ. ಅರ್ಥಾತ್ ಇಸ್ಲಾಮನ್ನು ಅನುಸರಿಸಲು ಬಯಸುವುದಾದರೆ ಆತ ತನ್ನ ಸುತ್ತಲಿನ ಸಮಾಜದಲ್ಲಿ ಒಳಿತನ್ನು ಖಾತ್ರಿಪಡಿಸುವ  ಹೊಣೆಯನ್ನು ಹೊರಬೇಕು ಎಂಬ ಸ್ಪಷ್ಟ ನಿರ್ದೇಶನ. ಮುಂದುವರಿದು "ಅನಾಥರನ್ನು ದೂರ ತಳ್ಳುವವರನ್ನು, ನಿರ್ಗತಿಕರನ್ನು ಅಸಹಾಯಕರನ್ನು ಉಣಿಸದವರನ್ನು, ಧರ್ಮದಲ್ಲಿ ಸುಳ್ಳಾಡುವವರು ಎಂದು ಕರೆಯುವ ಮೂಲಕ, ಇಸ್ಲಾಂ ಮುಸ್ಲಿಮರಿಗೆ ತನ್ನ ಸುತ್ತ ಮುತ್ತಲಿನ ಅನಾಥರನ್ನು ನಿರ್ಗತಿಕರನ್ನು ದತ್ತು ವಹಿಸಿಬಿಡುತ್ತದೆ. ಇನ್ನೊಂದು ಅರ್ಥದಲ್ಲಿ, ಅನಾಥರು,ನಿರ್ಗತಿಕರು,ಅಸಹಾಯಕರಿಗೆ ಹೆಗಲಾಗದ ಮುಸ್ಲಿಮರು, ತಾನು ಮುಸ್ಲಿಮನು ಎಂದು ಘೋಷಿಸಿಕೊಳ್ಳುವುದು ಶುದ್ಧ ಸುಳ್ಳು ಘೋಷಣೆಯಾಗಿದೆ ಎಂದು ಹೇಳುವ ಮೂಲಕ ಇಸ್ಲಾಂ ಮನುಷ್ಯರ ನಡುವಿನ ತಾರತಮ್ಯವನ್ನು, ಅಸಮಾನತೆಯನ್ನು, ಮೇಲು ಕೀಳಿನ ಅಹಂಮನ್ನು ಮುಸ್ಲಿಮನೊಬ್ಬ ಮೆಟ್ಟಿ ನಿಲ್ಲಬೇಕಿರುವ, ನೆರೆಹೊರೆಯ ಹಸಿವು ಆಕ್ರಂದನಗಳಿಗೆ ಕರಗುವ ಮಾನವೀಯತೆ, ಕರುಣೆಯನ್ನು ತನ್ನಲ್ಲಿ ಕಡ್ಡಾಯವಾಗಿ ಹೊಂದಿರಬೇಕಿರುವ ಅವಶ್ಯಕತೆಯನ್ನು, ಅಷ್ಟೇ ಗಂಭೀರವಾಗಿ ಆತನಿಗೆ ಬೋಧಿಸುತ್ತದೆ.
  ಅನಾಥರ ನಿರ್ಗತಿಕರ ಕಾಳಜಿ ವಹಿಸದವರನ್ನು ಧರ್ಮದಲ್ಲಿ ಸುಳ್ಳಾಡುವವರು ಎಂದು ಹೇಳುವ ಸೂಕ್ತದ ಮರುಕ್ಷಣವೇ,  ನಮಾಜು ಮಾಡುವವರ ಮೇಲೆ ಶಾಪವಿರಲಿ, ಅವರು ತೋರಿಕೆಯ ನಮಾಜು ಮಾಡುವವರಾಗಿದ್ದಾರೆ  ಎಂಬ  ವಿಸ್ಮಯಕಾರಿಯಾದ ಬೋಧನೆಗಳು , ,ಕಣ್ಣುಕಟ್ಟಿನ ದಾನವನ್ನು ಮಾಡಿ, ಪಡಕೊಳ್ಳುವವನ ಆತ್ಮಗೌರವಕ್ಕೆ ಬೆಲೆಕೊಡದೆ ಹೆಸರಿನ ವ್ಯಾಮೋಹಕ್ಕೆ ತೋರಿಕೆಯ ದಾನಗೈದು ಬಂದು ನಮಾಜಿಗೆ ನಿಲ್ಲುವವರೊಂದಿಗೆ ಚಾಟಿ ಬೀಸಿದಷ್ಟು ತೀಕ್ಷ್ಣವಾಗಿ ಮಾತನಾಡಿದಂತೆ ಅನ್ನಿಸಿಬಿಡುವುದೂ ಇದೆ.

ಹೀಗೆ ಇಸ್ಲಾಂ ನ ಹಲವಾರು ಬೋಧನೆಗಳು ಒಬ್ಬ ಮುಸ್ಲಿಮನು ಸಮಾಜದಿಂದ  ಬೇರೆಯಾಗಿರಲು ಸಾಧ್ಯವಿಲ್ಲದಷ್ಟು ಆತನ ಮೇಲೆ ಹೊಣೆಗಾರಿಕೆಗಳನ್ನು ವಹಿಸುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋದಾಗ, "ಮುಸ್ಲಿಮನಾಗುವುದೆಂದರೆ ಸಮಾಜದ ನೊಗ ಹೊರುವುದು" ಎಂಬ ಟಿಪ್ಪಣಿಯೊಂದನ್ನು ಕಂತುಗಳಲ್ಲಿ ಬರೆಯಬೇಕು ಅಂದುಕೊಂಡಿದ್ದೆ. ಆದರೆ ಇಸ್ಲಾಂ ನ ಕುರಿತು ಸಕಾರಾತ್ಮಕವೇ ಆಗಲಿ,ನಕಾರಾತ್ಮಕವೇ ಆಗಲಿ, ಯೋಚಿಸಿದಷ್ಟು ಬರವಣಿಗೆ ಸುಲಭವಲ್ಲ ಎಂಬ ಶಕ್ತ ಅರಿವಿರುವ ಕಾರಣ ಅದು ಮುಂದೂಡುತ್ತಾ ಹೋಯಿತು. ಸಾಧ್ಯವಾದರೆ ಬರೆಯುತ್ತೇನೆ.  ಸಹನೆಯಿರುವ ಯುವ ಮನಸ್ಸುಗಳಿಗೆ ತಲುಪಲು ಈ ಅಕ್ಷರಗಳಿಗೆ ಸಾಧ್ಯವಾಗಲಿ. ಇಸ್ಲಾಂ ಸಮಾಜದ ಒಳಿತಿಗಾಗಿ ಇರುವುದು ಮಾತ್ರ ಸತ್ಯ , ಮಿಕ್ಕೆಲ್ಲ ಕೆಟ್ಟ ಹೆಸರುಗಳೂ ಮುಸ್ಲಿಮರು ಇಸ್ಲಾಮನ್ನು ಅರಿಯದೇ ಹೋದುದರ ಕಾರಣಕ್ಕೆ, ಇಲ್ಲಾ ಅರಿತೂ ಇಸ್ಲಾಮನ್ನು ಅದರ ಬೋಧನೆಗೆ ವಿರುದ್ಧವಾಗಿ ಅಪಹಾಸ್ಯಗೈದುದರ ಕಾರಣಕ್ಕೆ ಪಡೆದುಕೊಂಡವುಗಳು ಎಂಬ ನಂಬಿಕೆಯೊಂದಿಗೆ ಮುಂದಿನ ಕಂತುಗಳಲ್ಲಿ, ನೀವೆಲ್ಲರೂ ತಾರ್ಕಿಕವಾಗಿ ಒಪ್ಪಬಹುದಾದ, ನನ್ನ  ಸರಳ ಭಾಷೆಯಲ್ಲಿ ನಿಲುಕುವಷ್ಟು, ಇಸ್ಲಾಂ, ತನ್ನ ಅನುಯಾಯಿಗಳನ್ನು,  ಸ್ವಸ್ಥ ನ್ಯಾಯಬದ್ಧ ನೈತಿಕ ಸಮಾಜದ ಧ್ವಜವಾಹಕರಾಗಿಸುವ ಅದ್ಭುತವನ್ನು ಅಕ್ಷರಗಳಲ್ಲಿ ಕಟ್ಟಿಕೊಡಲಿದ್ದೇನೆ‌. ಅವನು ಇಚ್ಚಿಸಿದರೆ ಅದು ನಿಮಗೂ ಅಷ್ಟೇ ಸರಳವಾಗಿ ಒಳಗಿಳಿಯಬಹುದು.

ಒಂದು ಪ್ರಾರ್ಥನೆಯಷ್ಟೇ, ಸಹನೆ ಇಲ್ಲದವರು, ಕುತರ್ಕಗಳನ್ನು ಮಾಡುವ ಅಲ್ಪ ಜ್ಙಾನಿಗಳು ಹೇಳುವ ,ಕಲಿಯುವ ನಮ್ಮ ಪ್ರಯತ್ನಗಳಿಗೆ ತೊಡಕಾಗದಿರಲಿಯಷ್ಟೇ. 

-ಕಂದ

ಗುರುವಾರ, ಫೆಬ್ರವರಿ 2, 2017

ಮಿನಿ ಕಥೆ ೮೦

ಮಿನಿಕಥೆ - 80

ಅವರಿಬ್ಬರೂ ನಗರದ ಬಸ್ ಸ್ಟಾಂಡ್ ಹತ್ತಿರ ಇದ್ದ ಹೋಟೆಲ್ ಗೆ ಹೋಗಿ ಚಹಾ ಕುಡಿಯಲು ಕೂತರು. ಹೋಟೆಲ್‌ ತುಂಬಿ ತುಳುಕುತ್ತಿತ್ತು. ಹೋಟೆಲ್ ಮಾಲಕರ ಹೊಟ್ಟೆ ತುಂಬಿದೆ ಎನ್ನಬಹುದು.
ಚಹಾ ತಿಂಡಿಗಳನ್ನು ಕುಡಿದ ಇವರು ಹಣ ಪಾವತಿಸುವಾಗ ಪೇಪರ್ ಟಿಷ್ಯೂ ಕೇಳಿದರು. ಮಾಲಕ ಹತ್ತಿರ ಇದ್ದ ದಿನಪತ್ರಿಕೆಯ ಕತ್ತರಿಸಿಟ್ಟಿದ್ದ ತುಂಡುಗಳನ್ನು ನೀಡಿದರು. ಅಂತೂ ಒಲ್ಲದ ಮನಸ್ಸಿನಿಂದ ಅವರಿಬ್ಬರೂ ಅದರಿಂದ ಕೈ ಒರೆಸಿದ ಮತ್ತು ಅದರ ಮಸಿಯನ್ನೂ ಸಹಿಸಿಕೊಂಡ. ನಂತರ ಮಾಲಕನಲ್ಲಿ ಟಿಷ್ಯೂ ಇಡಲು ಹೇಳಿದ. ಮಾಲಕನ ಉತ್ತರದಿಂದ ಇಬ್ಬರಿಗೂ ಅಸಮಾಧಾನ ಆಗಿತ್ತು.
ಹೊರಬಂದು ಒಬ್ಬಾತ ಹೇಳಿದ, ಇಷ್ಟು ವ್ಯಾಪಾರ ಇದ್ದರೂ ಒಂದು ಟಿಷ್ಯೂ ಪೇಪರ್ ಇಡಲು ಮನಸ್ಸು ಬರುವುದಿಲ್ಲ ಅವನಿಗೆ"
ಅದಕ್ಕೆ ಮತ್ತೊಬ್ಬ ಉತ್ತರಿಸಿದ, ನಾಯಿಯ ಮುಂದೆ ಸಮುದ್ರ  ಇದ್ದರೂ ಅದು ನಾಲಗೆ ಹೊರಗೆ ಹಾಕಿ ನಕ್ಕಿ ನೀರು ಕುಡಿಯುತ್ತದೆ."

ಅಬೂಕುತುಬ್
ಅವರಿಬ್ಬರೂ ನಗರದ ಬಸ್ ಸ್ಟಾಂಡ್ ಹತ್ತಿರ ಇದ್ದ ಹೋಟೆಲ್ ಗೆ ಹೋಗಿ ಚಹಾ ಕುಡಿಯಲು ಕೂತರು. ಹೋಟೆಲ್‌ ತುಂಬಿ ತುಳುಕುತ್ತಿತ್ತು. ಹೋಟೆಲ್ ಮಾಲಕರ ಹೊಟ್ಟೆ ತುಂಬಿದೆ ಎನ್ನಬಹುದು.
ಚಹಾ ತಿಂಡಿಗಳನ್ನು ಕುಡಿದ ಇವರು ಹಣ ಪಾವತಿಸುವಾಗ ಪೇಪರ್ ಟಿಷ್ಯೂ ಕೇಳಿದರು. ಮಾಲಕ ಹತ್ತಿರ ಇದ್ದ ದಿನಪತ್ರಿಕೆಯ ಕತ್ತರಿಸಿಟ್ಟಿದ್ದ ತುಂಡುಗಳನ್ನು ನೀಡಿದರು. ಅಂತೂ ಒಲ್ಲದ ಮನಸ್ಸಿನಿಂದ ಅವರಿಬ್ಬರೂ ಅದರಿಂದ ಕೈ ಒರೆಸಿದ ಮತ್ತು ಅದರ ಮಸಿಯನ್ನೂ ಸಹಿಸಿಕೊಂಡ. ನಂತರ ಮಾಲಕನಲ್ಲಿ ಟಿಷ್ಯೂ ಇಡಲು ಹೇಳಿದ. ಮಾಲಕನ ಉತ್ತರದಿಂದ ಇಬ್ಬರಿಗೂ ಅಸಮಾಧಾನ ಆಗಿತ್ತು.
ಹೊರಬಂದು ಒಬ್ಬಾತ ಹೇಳಿದ, ಇಷ್ಟು ವ್ಯಾಪಾರ ಇದ್ದರೂ ಒಂದು ಟಿಷ್ಯೂ ಪೇಪರ್ ಇಡಲು ಮನಸ್ಸು ಬರುವುದಿಲ್ಲ ಅವನಿಗೆ"
ಅದಕ್ಕೆ ಮತ್ತೊಬ್ಬ ಉತ್ತರಿಸಿದ, ನಾಯಿಯ ಮುಂದೆ ಸಮುದ್ರ  ಇದ್ದರೂ ಅದು ನಾಲಗೆ ಹೊರಗೆ ಹಾಕಿ ನಕ್ಕಿ ನೀರು ಕುಡಿಯುತ್ತದೆ."

ಅಬೂಕುತುಬ್

ನಾನು ಹಲೀಮ ೨

*"ನಾನು ಹಲೀಮ"*
   *ಆತ್ಮಕಥೆ*   
      ಭಾಗ 0⃣2⃣
......
ಸಿರಿವಂತರಾದ ಅರಬಿಗಳು ತಮ್ಮ ಮಕ್ಕಳನ್ನು ಬೇರೆ ಸ್ತ್ರೀಗಳಿಗೆ ಮೊಲೆಯಾಲುಣಿಸಲು ನೀಡುವುದರಲ್ಲಿ ಹಲವು ಗುಣಗಳನ್ನು ಕಂಡಿರಬಹುದು.
ಶುಧ್ದವಾದ ಅರಬಿ ಭಾಷೆ ಕಲಿಯಲು ಈ ದಾರಿಯಾಗಿದೆ ಅವರು ಕಂಡು ಕೊಂಡದ್ದು.
ಪಟ್ಟಣ ಪ್ರದೇಶಗಳಲ್ಲಿ ಮಾತೃ್ ಭಾಷೆ ಅರಬಿಯಾದರೂ
ಹಲವು ಭಾಗದಿಂದ ಬಂದು ಅಲ್ಲಿ ವಾಸ ಮಾಡುವುದರಿಂದ ಹಲವು ಭಾಷೆಗಳು ಅವರ ಮಾತುಗಳಲ್ಲಿ ಮಿಶ್ರಿತವಾಗುತ್ತಿತ್ತು.
ಸಾಹಿತ್ಯಕ್ಕೂ,ಭಾಷೆಗೂ ಬಹಳವಾಗಿ ಪ್ರಾಧಾನ್ಯತೆ ನೀಡುತ್ತಿದ್ದ ನಾಡಿನ ಬಹುಮುಖ ಜನರು ತಮ್ಮ ಮಕ್ಕಳು ನೈಜವಾದ ಅರಬಿ ಭಾಷೆ ಕಲಿಯಬೇಕೆಂದು ಆಶಿಸುವುದರಲ್ಲಿ ಅದ್ಭುತವಿಲ್ಲ ತಾನೇ..?
ಮಕ್ಕಳು ಸಂಶುಧ‍್ದವಾದ ಪ್ರಕೃತಿಯ ವಾತಾವರಣದ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯವಂತರಾಗಿ ಬೆಳೆಯಲಿ ಎಂದು ಸಹ ಅವರ ಆಗ್ರಹವಾಗಿರಲೂ ಬಹುದು.!?
ಏನಿದ್ದರೂ ನಮಗದು ಬಹಳ ಉಪಕಾರವಾಯಿತ್ತು.
ಕಾರಣ ಅದು ಕ್ಷಾಮ ಕಾಲವಾಗಿತ್ತು.
ನಾನು ಅಬ್ದುಲ್ಲಾಹ್ ಎಂಬ ಮಗುವಿಗೆ ಜನ್ಮವಿತ್ತ ಸಮಯ.
ಅತಿ ಶಕ್ತವಾದ ಉಷ್ಣತೆಯಲ್ಲಿ ಸಸ್ಯಾದಿಗಳೆಲ್ಲವು ಒಣಗಿ ಹೋಗಿದ್ದವು.
ಆಡುಗಳಿಗೆ ತಿನ್ನಲು  ಹುಲ್ಲಿರಲಿಲ್ಲ.
ಕುಡಿಯಲು ನೀರು ಸಹ ಇಲ್ಲದ ಅವಸ್ಥೆ ...
ಆದ ಕಾರಣ ಆಡಿನ ಹಾಲು ಇಲ್ಲವಾದವು.
ನಮ್ಮ ಜೀವನ ಮಾರ್ಗ ತಟಸ್ಥಗೊಂಡಿತ್ತು.
.
ಮಕ್ಕ, ಅಥವಾ ಇತರ ಪ್ರದೇಶಕ್ಕೆ ಹೋಗಿ  ನಮಗೊಂದು ಮಗುವನ್ನು ಮೊಲೆಯುಣಿಸಲು ಪಡೆದರೆ ಹೇಗೆ?

ನನ್ನಲ್ಲಿ ಅಧಿಕವಾಗಿ ಸ್ತನಹಾಲು ಇಲ್ಲದಿದ್ದರೂ,
ನಮ್ಮ ಜೀವನ ಮಾರ್ಗಕ್ಕೆ ಏನಾದರೊಂದು ಸಿಗಬಹುದಲ್ವಾ..?
ನಾನು ನನ್ನ ಪತಿ ಹಾರಿಸಿನೊಂದಿಗೆ ಇದರ ಕುರಿತು ಸಮಾಲೋಚನೆ ನಡೆಸಿದೆ.
ಅವರ ವಿರೋಧವೇನೂ ಇರಲಿಲ್ಲ ..ಅದೇ ರೀತಿ ಒಂದು ಮಗುವನ್ನು ಹುಡುಕ್ಕುತ್ತಾ ಮಕ್ಕಾ ನಾಡಿಗೆ ಮುಖ ಮಾಡಿದೆವು!
............
ಮುಂದುವರಿಯುವುದು

ಮೂಲ ಮಲಯಾಳಂ.
ಅನುವಾದ
✍🏻ಕೆ ಎಂ ಅಶ್ರಫ್ ಸಖಾಫಿ, ಕನ್ಯಾನ.

ನಾನು ಹಲೀಮ 1

*"ನಾನು ಹಲೀಮ"*
ಆತ್ಮಕಥೆ
.
ಭಾಗ 0⃣1⃣
......

ಮಗುವನ್ನು ಹುಡುಕಿ
..........

ನಾನು ಹಲೀಮತ್ತುಸ್ಸಅದಿಯ್ಯ :
ಗೊತ್ತಿಲ್ವಾ?
ಮಸ್ಲಿಂಗಳಲ್ಲಿ ನನ್ನನ್ನು ತಿಳಿಯದವರು ಯಾರು?
ಪುಣ್ಯಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಸಾಕು ತಾಯಿ.
ಅತ್ಯಂತ ಮಹಾಭಾಗ್ಯದ ಸ್ಥಾನವಾಗಿದೆ ಅದು ;
ವಿಶ್ವ ದೂತರ ಮಾತೆ ಎಂಬ ಸ್ಥಾನ!
ಮೊದಲನೇ ಸ್ಥಾನ ಏನಿದ್ದರೂ ಅದು ಹೆತ್ತ ತಾಯಿಗೆ ಮಾತ್ರ ಸೀಮಿತ;
ಅಥವಾ ಬೀವಿ ಆಮಿನಾ (ರ)ರಿಗೆಯಾಗಿದೆ.
ಅವರಿಗೆ ಸಹ ಸಿಗದ ಸೌಭಾಗ್ಯವಾಗಿದೆ ಅವರ ಪುತ್ರನ ಮೂಲಕ ನನಗೆ ಸಿಕ್ಕಿದ್ದು.

ಇದು ಯಾವುದೂ ನನ್ನ ಸ್ಥಾನಮಾನದಿಂದವಲ್ಲ .
ಎಲ್ಲವೂ ಅಲ್ಲಾಹನ ಔದಾರ್ಯ, ಕಾರುಣ್ಯದಿಂದ ಮಾತ್ರ ಸಿಕ್ಕಿದ್ದು.
ಅತ್ಯಾದ್ಭುತವಾದ ಕತೆಯಾಗಿದೆ ನನಗೆ ಹೇಳಲಿಕ್ಕಿರುವುದು.
ಅದನ್ನು ಹೇಳುತ್ತೇನೆ.

......

ಮಕ್ಕಾದಿಂದ ಸರಿ ಸುಮಾರು ಎಪ್ಪತ್ತರಷ್ಟು ಕಿಲೋ ಮೀಟರ್ ದೂರವಾಗಿದೆ
ನಮ್ಮ "ಬನೂ ಸಅದ್" ಗ್ರಾಮ.
ಅದೊಂದು ಕುಗ್ರಾಮವಾಗಿದೆ.
ಜನ ವಾಸ ಕಡಿಮೆ ಇರುವ ಕುಗ್ರಾಮ.
ಅದೂ ಸಹ ಅತ್ಯಂತ ಬಡವರು ವಾಸ ಮಾಡುವ ನಾಡು.
ಆಡು ಮೇಯಿಸುವುದನ್ನೇ ತಮ್ಮ ಕಾಯಕಮಾಡಿ ಜೀವಿಸುವ ಗ್ರಾಮ.
ಮಂದ ಮಾರುತದ ಮರುಭೂಮಿಯಲ್ಲಿ
ಪಯಣಿಸಿ.
ಗುಡ್ಡಗಾಡುಗಳಲ್ಲಿ ,ಅಲ್ಲಿನ ಪರ್ವತಶ್ರೇಣಿಗಳಲ್ಲಿ ಅದನ್ನು ಮೇಯಲು ಬಿಟ್ಟು
ಅದಕ್ಕೆ ಬೇಕಾದಷ್ಟು ನೀರು ಕುಡಿಸಿ ಸಂಜೆ ಹೊತ್ತಾಗುವಾಗ ಆಡಿನ ಹಿಂಡಿನೊಂದಿಗೆ
ಮನೆಗೆ ಮರಳುವುದಾಗಿದ್ದವು ಅಲ್ಲಿನ ಸ್ತ್ರೀ, ಪುರಷರ ದೈನಂದಿನ ಕಸುಬು.
ಅದರ ಹಾಲು ಕುಡಿದು,ಮಾಂಸ ತಿಂದಾಗಿದ್ದವು ನಮ್ಮ ಜೀವನವು..
......
ಮತ್ತೆ ,ನಾವು -- ಸ್ತ್ರೀಗಳು ಮತ್ತೊಂದು ರೀತಿಯಲ್ಲಿ ಕುಟುಂಬವನ್ನು ಸಹಾಯ ಮಾಡುತ್ತಿದ್ದವು.
ಮಕ್ಕಾ, ಅದೇ ರೀತಿ ಇತರ ಪಟ್ಟಣಗಳಿಗೆ  ತೆರಳಿ ನಾವು  ಮೊಲೆಯುಣಿಸಲು ಪುಟ್ಟ ಮಕ್ಕಳನ್ನು ಸ್ವೀಕರಿಸುತ್ತಿದ್ದವು.
ಸಂಪನ್ನರಾದ ಅರಬಿಗಳ ಶೈಲಿಯಾಗಿದ್ದವು ತಮ್ಮ ಮಕ್ಕಳಿಗೆ ಮೊಲೆಯುಣಿಸಲು ಬೇರೆ ಸ್ತ್ರೀಗಳಿಗೆ ನೀಡುವುದು.
ಅದು ಅವರ ಪ್ರತಾಪದ ಬಾಗವೂ ಆಗಿತ್ತು.
ಅಭಿಮಾನದ ಪ್ರಶೆಯು..
ನಮಗಾದರೆ ಉಪಜೀವನದ ಒಂದು ಭಾಗವೂ ಅದೇ.

....
ಮೂಲ ಮಲಯಾಳಂ.

ಅನುವಾದ
📝ಕೆ ಎಂ ಅಶ್ರಫ್ ಸಖಾಫಿ ,ಕನ್ಯಾನ.
....

ಮುಂದುವರಿಯುವುದು