ಬರೆದವರು ಯಾರು ಅರಿಯದು,ಆದರೂ ಗಂಭೀರವಾದ ಪ್ರಶ್ನೆಗಳು. .
ಏನೇ ಆದರೂ ಹಗ್ಗ ಜಗ್ಗಾಟದಲ್ಲಿ ಅಪ್ಪಚ್ಚಿಯಾಗಿದ್ದು ಮಾತ್ರ ಜನ ಸಾಮಾನ್ಯ 😑
#ಇಟ್ಟ ಗುರಿ ತಲುಪದ ಮೋದಿಯವರು....
ಮೋದಿ ನೀವು ಹೀಗೇಕೆ…?
1. ನಿಮ್ಮ ಪಕ್ಷ, 23 ಜನವರಿ 2014ರಂದು ಕರೆನ್ಸಿ ನೋಟುಗಳ ಬದಲಾವಣೆಯನ್ನು ಪ್ರಬಲವಾಗಿ ವಿರೋಧಿಸುತ್ತದೆ..
ಆದರೆ,
8ನೇ ನವೆಂಬರ್ 2016 ರಂದು, 500 ಮತ್ತು 1000 ರೂಗಳ ನೋಟುಗಳನ್ನು ನೀವೇ ಅಮಾನ್ಯ ಮಾಡುತ್ತೀರಿ...
2. ನಿಮ್ಮ ಪಕ್ಷ, 2013ರಲ್ಲಿ 1 ಕೇ.ಜಿ ತೊಗರಿ ಬೇಳೆ 85ರೂಗಳಿಗೆ ಮಾರಾಟವಾಗುತ್ತಿದ್ದುದ್ದನ್ನು ಬೆಲೆ ಏರಿಕೆ ಎಂದು ರಾಷ್ಟ್ರಾದ್ಯಂತ ಪ್ರತಿಭಟಿಸುತ್ತದೆ...
ಆದರೆ,
ನಿಮ್ಮ ಅಧಿಕಾರಾವಧಿಯಲ್ಲಿ ತೊಗರಿ ಬೇಳೆ ಕಿಲೋ ಒಂದಕ್ಕೆ ರೂ 150 ರಿಂದ 200ರ ವರೆಗೆ ಮಾರಾಟವಾಗುತ್ತಿದೆ…
3. ನಿಮ್ಮ ಪಕ್ಷ ಗೋ ಹತ್ಯೆಯನ್ನು ವಿರೋಧಿಸುತ್ತದೆ. ಮನಮೋಹನ್ ಸಿಂಗರ ಸಮಯದಲ್ಲಿ ಭಾರತದಿಂದ ವಿದೇಶಕ್ಕೆ ಗೋಮಾಂಸ ರಪ್ತಿನ ಬಗ್ಗೆ "ಎದೆ ಕಿವುಚಿದಂತೆ ಆಗುತ್ತಿದೆ" ಎಂದು ಅತ್ತು ಭಾಷಣ ಮಾಡುತ್ತೀರಿ.
ಆದರೆ,
ನೀವು ಅಧಿಕಾರಕ್ಕೆ ಬರುತ್ತಿದ್ದಂತೆಯೇ, ಭಾರತ ಗೋ ಮಾಂಸವನ್ನು ರಫ್ತು ಮಾಡುತ್ತಿರುವ ಜಾಗತಿಕ ಮಟ್ಟದಲ್ಲಿ ದಾಖಲೆಪ್ರಮಾಣದಲ್ಲಿ ಏರಿಕೆ ಆಗುತ್ತದೆ
ನಂ.1 ದೇಶವಾಗಿದೆ.
4. ಅಂದು, ಪ್ರಧಾನ ಮಂತ್ರಿಗಳಾಗಿದ್ದ ಮನ ಮೋಹನ್ ಸಿಂಗ್ ಅವರು ವಿದೇಶದಲ್ಲಿ ನವಾಜ್ ಷರೀಫ್ ಅವರೋಂದಿಗೆ ಕೈ ಕುಲುಕಿದಾಗ, ಹಳ್ಳಿ ಹೆಂಗಸು ಎಂದು ಮೂದಲಿಸುತ್ತೀರಿ…
ಅದರೆ,
ನೀವು, ಆಮಂತ್ರಣವಿಲ್ಲದಿದ್ದರೂ ನವಾಜ್ ಶರೀಫರ ಜನ್ಮದಿನದಂದು ‘ಕೋಕ್ ಮತ್ತು ಬಿರಿಯಾನಿ’ಯನ್ನು ತಿನ್ನಲು ಪಾಕಿಸ್ಥಾನವನ್ನು ತಲುಪುತ್ತೀರಿ...
5. 2004 ರಿಂದ 2014ರ ವರೆಗೆ ನಿಮ್ಮ ಪಕ್ಷ, ರೈಲ್ವೆಯು ಟಿಕೆಟ್ ಧರವನ್ನು 1 ರೂ ಹೆಚ್ಚು ಮಾಡಿದರೂ ರೈಲುಗಳನ್ನು ತಡೆದು ಪ್ರತಿಭಟಿಸುತ್ತಿದ್ದಿರಿ...
ಆದರೆ,
ನೀವು ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ, ರೈಲ್ವೆ ಪ್ರಯಾಣದ ದರಗಳನ್ನು ಶೇ 60 ರಿಂದ 70ರಷ್ಟು ಹೆಚ್ಚಿಸಿರುವಿರಿ…
6. ನಿಮ್ಮ ಪಕ್ಷ 2004 ರಿಂದ 2014ರವರೆಗೆ FDI, GST, AADHAR, MNREGA ಯೋಜನೆಗಳನ್ನು ತೀವ್ರವಾಗಿ ವಿರೋಧಿಸುತ್ತಿದ್ದಿರಿ…
ಆದರೆ,
ನೀವು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಈ ಯೋಜನೆಗಳ ಗುಣಗಾನ ಮಾಡುತ್ತಾ ಅನುಷ್ಠಾನಗೊಳಿಸುತ್ತಿದ್ದೀರಿ…
7. ನಿರ್ಭಯಳ ಮೇಲಿನ ದೌರ್ಜನ್ಯವನ್ನು ಖಂಡಿಸಿ, ನಿಮ್ಮ ಪಕ್ಷ 3 ತಿಂಗಳುಗಳ ಕಾಲ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು...
ಆದರೆ,
ಇಂದು ಬಿಜೆಪಿ ಆಡಳಿತವಿರುವ ಉತ್ತರಪ್ರದೇಶದಲ್ಲಿ ಎರಡೇ ತಿಂಗಳಲ್ಲಿ ನೂರಾರು, ಮಧ್ಯ ಪ್ರದೇಶದಲ್ಲಿ ದಿನಕ್ಕೆ 12 ಮತ್ತು ದಿಲ್ಲಿಯಲ್ಲಿ ದಿನಕ್ಕೆ 7 ಅತ್ಯಾಚಾರ ಪ್ರಕರಣಗಳು ನಡೆಯತ್ತಿವೆ, ಅವುಗಳು ನಿಮ್ಮ ಕಣ್ಣು, ಕಿವಿಗೆ ಬೀಳುತ್ತಿಲ್ಲ…
8. ಯು ಪಿ ಎ ಸರ್ಕಾರವು ಅಂತಾರಾಷ್ಟ್ರೀಯ ಮಾರುಕಟ್ಟಯಲ್ಲಿ ಪೆಟ್ರೋಲಿಯಂ ಕಚ್ಛಾತೈಲವನ್ನು ಬ್ಯಾರಲ್ ಒಂದಕ್ಕೆ 125 ರಿಂದ 140 ಡಾಲರ್ ನಂತೆ ಖರೀಧಿಸಿ ಸ್ಥಳೀಯವಾಗಿ ಲೀಟರ್ 1 ಕ್ಕೆ 70 ರಿಂದ 75 ರೂಗಳಿಗೆ ದೊರಕಿಸುತ್ತಿತ್ತು. ಈ ದರಗಳನ್ನೂ ವಿರೋಧಿಸಿ ನಿಮ್ಮ ಪಕ್ಷ ಎತ್ತಿನ ಗಾಡಿಗಳ ಮೆರವಣಿಗೆಯನ್ನು ಮಾಡಿ ಪ್ರತಿಭಟಿಸಿತ್ತು...
ಅದರೆ,
ಈಗ ನಿಮ್ಮ ಆಡಳಿತಾವಧಿಯಲ್ಲಿ ಕಚ್ಛಾತೈಲ ಬ್ಯಾರಲ್ ಒಂದಕ್ಕೆ 50 ರಿಂದ 60 ಡಾಲರ್ಗಳಿಗೆ ದೊರೆಯುತ್ತಿದ್ದು, ಸ್ಥಳೀಯವಾಗಿ 1 ಲೀಟರ್ ಪೆಟ್ರೋಲ್ಅನ್ನು 70 ರೂಗಳಿಗೆ ಮಾರಾಟ ಮಾಡುತ್ತಿದ್ದೀರಿ...
9. ನಿಮ್ಮ ಪಕ್ಷದ ರಾಷ್ಟ್ರೀಯ ನಾಯಕರಾದ ಬಂಗಾರು ಲಕ್ಷ್ಮಣ್ ಅವರು ಭ್ರಷ್ಟಾಚಾರದಲ್ಲಿ ಸಾಕ್ಷ್ಯಾಧಾರಗಳ ಸಹಿತ ಸಿಕ್ಕಿಬಿದ್ದಿರುತ್ತಾರೆ. ಆದರೂ,
ನಿಮ್ಮ ಪಕ್ಷವನ್ನು ಅತ್ಯಂತ ಪ್ರಾಮಾಣಿಕ ಪಕ್ಷವೆನ್ನುತ್ತೀರಿ…
10. ನಿಮ್ಮ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಅವರ ಆಡಳಿತದಲ್ಲಿ ವ್ಯಾಪಂ ಹಗರಣ, ವಸುಂದರರಾಜೆ ಹಾಗೂ ಲಲಿತ್ ಮೋದಿಯವರ ಹಗರಣ, ರಮಣ ಸಿಂಗ್ ಅವರ 34000 ಕೋಟಿ ಅನ್ನ ವಿತರಣಾ ಹಗರಣ ಸಂಭವಿಸಿದೆ...
ಆದರೂ,
ನೀವು ನಿಮ್ಮ ಪಕ್ಷದ ಮುಖ್ಯ ಮಂತ್ರಿಯವರ ರಾಜೀನಾಮೆಯನ್ನು ಕೇಳುವುದಿಲ್ಲ. ಆದರೆ, ಇತರ ಪಕ್ಷಗಳ ಆಡಳಿತದಲ್ಲಿ ದಿನಂಪ್ರತಿ ಒಬ್ಬರಲ್ಲ ಒಬ್ಬರ ರಾಜೀನಾಮೆಗೆ ಆಗ್ರಹಿಸುತ್ತೀರಿ...
11. ಪ್ರತಿದಿನ ನೀವು 18 ಗಂಟೆಗಳ ಕಾಲ ಕೆಲಸ ಮಾಡುತ್ತೀರೆಂದು ನಿಮ್ಮ ಭಕ್ತರು ಕೊಂಡಾಡುತ್ತಾರೆ...
ಆದರೆ,
ನಿಮ್ಮ ಅಧಿಕಾರಾವಧಿಯ ಕಳೆದ ಮೂರು ವರ್ಷಗಳಲ್ಲಿ ನಿಮ್ಮಿಂದ ಯಾವ ವಿಕಾಸವಾಗಿದೆ ಎನ್ನುವುದು ಕಾಣುತ್ತಿಲ್ಲ.!
12. ನೀವು ಕೇವಲ 100 ದಿನಗಳಲ್ಲಿ ವಿದೇಶದಲ್ಲಿರುವ ಕಪ್ಪು ಹಣವನ್ನೆಲ್ಲಾ ತರುತ್ತೇನೆ ಎಂದು ಮಾತು ಕೊಟ್ಟಿದ್ದಿರಿ...
ಆದರೆ,
1000 ದಿನಗಳು ಕಳೆದರೂ ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪು ಹಣವನ್ನು ತರಲಾಗಲಿಲ್ಲ..
13. ನೀವು ರೈತರ ಉತ್ಪಾದನಾ ವೆಚ್ಛದ ಕನಿಷ್ಠ ಶೇ 50 ರಷ್ಟು ಲಾಭವನ್ನು ನೀಡುತ್ತೇನೆಂದು ವಚನ ನೀಡಿದ್ದಿರಿ...
ಆದರೆ,
ಕಳೆದ ಮೂರು ವರ್ಷಗಳಲ್ಲಿ ಸರ್ಕಾರದಿಂದ ರೈತರಿಗೆ ಅವರ ಉತ್ಪಾದನಾ ವೆಚ್ಛದ ಒಂದು ರೂಪಾಯಿಯನ್ನೂ ನೀಡಲಿಲ್ಲ.
14. ನೀವು, ಹುತಾತ್ಮನಾಗುವ ಒಬ್ಬ ಭಾರತೀಯ ಯೋಧನ ತಲೆಯ ಬದಲಿಗೆ 10 ಪಾಕೀಸ್ತಾನಿ ಯೋಧರ ತಲೆಗಳನ್ನು ತರುತ್ತೇನೆಂದು ಜಂಬ ಕೊಚ್ಚಿಕೊಂಡಿದ್ದಿರಿ...
ಆದರೆ,
ವರ್ಷಗಳೇ ಕಳೆದರೂ ಒಂದರ ಬದಲಿಗೆ ಆರ್ಧ ತಲೆಯನ್ನೂ ತರಲಿಲ್ಲ.
15. ನಿಮ್ಮ ಪಕ್ಷ ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರಗಳ ಬಗ್ಗೆ ಬಹಳ ಮಾತನಾಡುತ್ತದೆ...
ಆದರೆ,
ನಿಮ್ಮ ಪಕ್ಷದ ಕಾರ್ಯಕರ್ತರು, ಮಂತ್ರಿಗಳು ಮತ್ತು ಭಕ್ತರು ಮಾತ್ರ....ಮಾತೃ ಮತ್ತು ಸಹೋದರಿಯರನ್ನು ಕುರಿತು ಬೈಯ್ಯದೆ ದಿನ ಕಳೆಯಲಾರರು.
16. ಕಡ್ಲೆ ಹಿಟ್ಟಿನ ಬೆಲೆ ಕೇಜಿಗೆ 60 ರೂಪಾಯಿಗಳಿದ್ದಾಗ ನಿಮ್ಮ ಬಿಜೆಪಿ ಕಾರ್ಯಕರ್ತರು ಕೈ ತಟ್ಟುವ ಆಂದೋಲನವನ್ನು ಹಮ್ಮಿಕೊಂಡಿದ್ದರು...
ಆದರೆ,
ಇಂದು ಕಿಲೋ ಒಂದಕ್ಕೆ 250 ರಂತೆ ಕೊಳ್ಳುವಂತಾಗಿದೆ. ಈಗ ಏನನ್ನು ತಟ್ಟುತ್ತೀರಿ…?
17. ನಿಮ್ಮ ಪಕ್ಷ ಸೇವಾತೆರಿಗೆ ವಿಧಿಸುವುದನ್ನು ಕಟುವಾಗಿ ವಿರೋಧಿಸುತ್ತಿತ್ತು...
ಆದರೆ,
ನೀವು ಅಧಿಕಾರವನ್ನು ಹಿಡಿದಾಕ್ಷಣ 2.5% ಸೇವಾ ತೆರಿಗೆಯನ್ನು ಹೆಚ್ಚಿಸಿದಿರಿ.
ಏಕೆ ಮೋದಿಯವರೆ ಏಕೆ…? ಜನತೆಯ ಸಂಯಮವನ್ನು ಪರೀಕ್ಷಿಸ ಬೇಡಿ…!
18. ನೀವು ಕಪ್ಪು ಹಣದ ಬಗ್ಗೆ ಉದ್ದುದ್ದ ಮಾತನಾಡುತ್ತೀರಿ...
ಆದರೆ,
ನಿಮ್ಮ ಚುನಾವಣೆಗೆ ಹನ್ನೊಂದುಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದೀರಿ.
ನಾನು ಕಾಂಗ್ರೇಸ್ ಅಥವಾ ಇನ್ಯಾವುದೇ ಪಕ್ಷಕ್ಕೆ ಸೇರಿದವನಲ್ಲ.
ಆದರೆ,
ಸತ್ಯವನ್ನು ಒಪ್ಪಿಕೊಳ್ಳಲೇ ಬೇಕಲ್ವೆ…?
ಭಾರತ ದೇಶದ ಆಣೆಯಾಗಿಯೂ ಈ ಸಂದೇಶವನ್ನು ಹೆಚ್ಚೆಚ್ಚು ಜನರಿಗೆ ತಲುಪಿ...
(ವಾಟ್ಸಪ್ ನಲ್ಲಿ ದೊರೆತ ಹಿಂದಿ ಬರಹದ ಭಾಷಾಂತರ)
—ಮಾನವ