ಇವರನ್ನೇ ಆರಿಸಿ ಎಂದು ಆದೇಶ ಮಾಡುವ ಸಮುದಾಯದ ಶ್ರೀಮಂತರು ಹಾಗೇ ವೈಟ್ ಕಾಲರ್ ಧುರೀಣರು ನಮ್ಮ ಮೇಲೆ ಅನ್ಯಾಯವಾಗಿದ್ದಾಗ ಎಲ್ಲಿ ಅಡಗಿದ್ದರು ?
ಉಳ್ಳಾಲ ದರ್ಗಾ ಕಮೀಟಿ ರಾಹುಲ್ ಗಾಂಧಿಯ ಹರಕೆ ಸಂದಾಯ ಮಾಡಿತೇ ?
ಸುನ್ನೀಟುಡೇ
ಭಾಗ - 1
ರಾಜ್ಯದ ಹಲವು ಕಡೆ ಮುಸ್ಲಿಮ್ ವಿದ್ವಾಂಸರು - ಸಾಮಾಜಿಕ ಹೋರಾಟಗಾರರು- ಶ್ರೀಮಂತರು ಹಾಗೇ ಸಂಘಸಂಸ್ಥೆಗಳ ಸಾಮಾಜಿಕ
ಧುರೀಣರು ಸಭೆಸೇರಿ ಮುಂದಿನ ಚುನಾವಣೆಯಲ್ಲಿ ತಮ್ಮ ರಾಜಕೀಯ ನಿಲುವುಗಳ ಕುರಿತು ಚರ್ಚಿಸಿದರು. ಅವರಲ್ಲಿ ಆಯ್ಕೆಗಳು ಇರಲಿಲ್ಲ. ದೂರದೃಷ್ಠಿಯ ಉದ್ದೇಶವೂ ಇರಲಿಲ್ಲ. ಮುಸ್ಲಿಮರಿಗೆ ಮುಂದಿನ ಸರಕಾರ ನೀಡಬೇಕಾದ ಕೊಡುಗೆಗಳ ಪಟ್ಟಿ ಇರಲಿಲ್ಲ. ಆಗ್ರಹಗಳಿಗಿಂತ ಹೆಚ್ಚಾಗಿ ಅವರಲ್ಲಿ ಇದ್ದದ್ದು ಆದೇಶವಾಗಿತ್ತು. ಭವಿಷ್ಯದ ಹಿತ ಚಿಂತನೆಗಿಂತ ಹೆಚ್ಚಾಗಿ ಕಾಣಿಸಿದ್ದು ಅಸ್ತಿತ್ವದ ಅಂಜಿಕೆಯಾಗಿತ್ತು. ಧ್ರಡತೆಗಿಂತ ಮಿಗಿಲಾಗಿ ಅವರನ್ನು ಸಾಧ್ಯತೆಗಳು ಭಯಪಡಿಸುತ್ತಿತ್ತು. ನಿರ್ಧಾರ ಮಾಡಿಯೇ ಬಂದಿರುವ ಹೃದಯಗಳಿಗೆ ಕನಸುಗಳಿರಲಿಲ್ಲ. ತನ್ನ ಶಕ್ತಿ ಸಾಮರ್ಥ್ಯವನ್ನು ಆತಂಕದ ಗುಬ್ಬಿಕತೆಗಳಿಗೆ ಮೀಸಲಿಟ್ಟು ಕೊನೆಗೆ ದಶಕಗಳ ಮೋಸಕ್ಕೆ ಸಮುದಾಯವನ್ನು ಬಲಿಕೊಡುವ ಅಭಿಪ್ರಾಯಗಳೇ ಎಲ್ಲರಿಗೂ ಇಷ್ಟವಾಯಿತು.
ಒಂದು ಸಮುದಾಯವು ತನ್ನನ್ನು ತಾನು
ಬದಲಾಯಿಸುವವರೆಗೆ ಅಲ್ಲಾಹನು ಕೂಡ ಅದರ ಸ್ಥಿತಿಯನ್ನು ಬದಲಾಯಿಸುವುದಿಲ್ಲ ಹೀಗೆ ಕುರ್ ಅನಿನಲ್ಲಿ ಇದೆ ಎಂದು ಗುರುಗಳು ಹೇಳಿದ್ದು ಕೇಳಿದ್ದೆ. ಆದರೆ ಕಾಂಗ್ರೇಸ್ಸಿಗೇ ಮತವನ್ನು ಕೊಡುತ್ತೇವೆ ಎಂದು ನೀಯತ್ತು ಮಾಡಿ ಬಂದವರಿಂದ ಬದಲಾವಣೆಯ ಉದ್ದೇಶ ನಿರೀಕ್ಷಿಸಲು ಸಾಧ್ಯವಿಲ್ಲ. ಅಲ್ಲಾಹನು ಹೇಳುತ್ತಾನೆ "ನೀವು ನನ್ನನ್ನು ಭಯಪಡಿರಿ ನಾನು ನಿಮಗೆ ಸಾಕು". ಆದರೆ ಬಿಜೆಪಿಯ ಭಯದಿಂದ ಬದುಕುವವರಿಗೆ ಮುಸ್ಲಿಮ್ ಸಂಘಶಕ್ತಿಯ ನಿರ್ಣಯಗಳನ್ನು ಮಾಡುವ ನೈತಿಕತೆ ಖಂಡಿತಾ ಇಲ್ಲ. ಮೋದಿ ಬರಬಾರದು ಎಂದು ಪ್ರಾರ್ಥಿಸಿದವರಿಗೆ ಅಲ್ಲಾಹನು ನಿರಾಶೆ ಕೊಟ್ಟಿಲ್ಲವೇ ? ಅಧಿಕಾರ ತಾನು ಇಚ್ಚಿಸಿದವರಿಗೆ ಕೊಡುತ್ತೇನೆ ಎಂದು ಹೇಳಿದ ದೇವನು ಗೆದ್ದಿಲ್ಲವೇ ? ಒಂದು ನಿರ್ಧಾರ ಒಟ್ಟು ಸಮುದಾಯ ಹಾಗೂ ಸಮಾಜದ ಸ್ಥಿತಿಯನ್ನು ಬದಲಾಯಿಸುತ್ತದೆ ಎಂದು ಗೊತ್ತಿದ್ದೂ ಮತ್ತೆ ಅದೇ ತಪ್ಪಿನ ನಿರ್ಧಾರವನ್ನು ಮಾಡುವುದು ಸ್ವಾರ್ಥ ಸಾಧನೆಯ ಹಸಿವು ತಣಿಸುವ ಹುನ್ನಾರವಲ್ಲವೇ ? ಬಲಿಯಾಗುವುದು ನೀವಲ್ಲ, ಒಟ್ಟು ಸಮುದಾಯ ಎಂದು ಗೊತ್ತಿದ್ದರೂ ತನ್ನ ಅಸ್ತಿತ್ವ - ಉಧ್ಯಮ - ಸಂಘಸಂಸ್ಥೆ - ಕಾರ್ಯಾಚರಣೆಗಳನ್ನು ಉಳಿಸಲು ಒಂದು ಪಕ್ಷವನ್ನು ಗೆಲ್ಲಿಸುವ ನಿಲುವುಗಳಿಗೆ ಸಮುದಾಯದ ಸಭೆ ಎಂದು ಕರೆಯುವುದಿಲ್ಲ. ಅಲ್ಲಾಹನು ನನ್ನಲ್ಲಿ ಭರವಸೆ ಇಡಿ ಎಂದು ಹೇಳುವಾಗ ನೀವು ಕಾಂಗ್ರೇಸ್ಸ್ ಮೇಲೆ ಇಟ್ಟ ಭರವಸೆ ಮೆಚ್ಚಲೇ ಬೇಕು...!
ಚುನಾವಣೆಗೆ ತಿಂಗಳುಗಳು ಇರುವಾಗ ನಿಮಗೆ ಸಮುದಾಯದ ರಾಜಕೀಯ ಅಸ್ತಿತ್ವ ಮತ್ತು ನಿಲುವುಗಳ ಕುರಿತು ನೆನಪು ಬಂದಿದ್ದು ಯಾಕೆ ? ಮತದಾನದ ಮಹತ್ವ ಅರಿವಾದದ್ದು ಹೇಗೆ ? ಸಮುದಾಯದ ಮತಕ್ಕೆ ಇರುವ ಸಾಮರ್ಥ್ಯದ ಅರಿವು ಮೂಡಿದ್ದು ಹೇಗೆ ? ನಿಮ್ಮ ಸಭೆಗಳಲ್ಲಿ ಬರುವ ಶ್ರೀಮಂತರು ಹಾಗೇ ಸಮುದಾಯದ ವೈಟ್ ಕಾಲರ್ ಧುರೀಣರು ಈ ಮೊದಲು ಸಮುದಾಯಕ್ಕೆ ಅನ್ಯಾಯವಾದಾಗ ಎಲ್ಲಿ ಅಡಗಿದ್ದರು ? ಇವರು ನಡೆಸುವ ಬಿಲ್ಡಿಂಗ್ ಹಾಗೇ ಜಮೀನು ವ್ಯವಹಾರಕ್ಕೆ ಕುತ್ತು ಬಂದಿದೆ, ಕಳ್ಳ ವ್ಯಾಪಾರ ಹಾಗೇ ವಹಿವಾಟು ನೆಗೆದು ಬಿದ್ದಿದೆ ಅದಕ್ಕಾಗಿ ಇವರು ಒಂದು ಪಕ್ಷವನ್ನೇ ಗೆಲ್ಲಿಸಬೇಕು ಎಂದು ನಿಮ್ಮನ್ನು ಅಂಗಲಾಚುತ್ತಾರೆ. ಇವರ ಸಂಘಸಂಸ್ಥೆಗಳ ಮೇಲೆ ನಿಗಾ ಇರಿಸಲಾಗಿದೆ. ಸರಕಾರದಿಂದ ಅಲ್ಪಸಂಖ್ಯಾತರ ಹೆಸರಿನಲ್ಲಿ ದೋಚಿದ್ದು ಹಾಗೇ ವಕ್ಫ್ ಆಸ್ತಿ ನುಂಗಿ ಹಾಕಿದ್ದು ಬಯಲಾಗಬಾರದು ಎಂದು ಇವರು ತಮ್ಮ ರಕ್ಷಣೆಗಾಗಿ ಸಬೆ ಕರೆದಿದ್ದಾರೆ ಎಂದು ನಾನು ಹೇಳಿದರೆ ನಿಮಗೆ ಕೆಂಡದಂತ ಕೋಪ ಬರಬಹುದು.
ನಿಮಗೆ ದಕ್ಷಿಣ ಕನ್ನಡದ ಶ್ರೀಮಂತ ಮುಸ್ಲಿಮರ ಕಥೆ ಗೊತ್ತಿದೆಯೇ ? ಅವರಿಗೆ ಸಮುದಾಯದ ಮೇಲೆ ಎಷ್ಟು ಪ್ರೀತಿ ಇದೆಯೋ ಅದಕ್ಕಿಂತ ಮಿಗಿಲಾಗಿ ಕಾಂಗ್ರೇಸ್ಸಿನ ಭ್ರಷ್ಟತೆಯಲ್ಲಿ ಪಾಲು ಇದೆ. ಇವರು ಸಮುದಾಯಕ್ಕಾಗಿ ಏನು ಮಾಡಿದ್ದಾರೆ ಎಂದು ಒಮ್ಮೆ ಲೆಕ್ಕ ಹಾಕಿ ನೋಡಿ. ಇವರ ಮನೆ - ಕಾರು -ಉದ್ಯಮ ಎಷ್ಟು ವಿಸ್ತಾರವಾಗಿದೆ. ಆದರೆ ಮಂಗಳೂರಿನ ಖಾಝಿ ಇಂದಿಗೂ ಒಂದು ಹಂಚಿನ ಮನೆಯಲ್ಲಿ ಕಚೇರಿ ಹೊಂದಿದ್ದಾರೆ. ನಿಮಗೆ ಬಿಷಫ್ ಹೌಸ್ ಹಾಗೇ ಸ್ವಾಮೀಜಿಗಳ ಮಠಗಳ ಪರಿಚಯ ಇದೆಯಾ ? ಒಮ್ಮೆ ಯಾಕೆ ನೋಡಿ ಬರಬಾರದು ? ಹಾಗೇ ನಿಮ್ಮ ಖಾಝಿಯ ಹರುಕಳು ಗುಡಿಸಲನ್ನೂ. ಎಲ್ಲಿದೆ ಮುಸ್ಲಿಮ್ ಸಮುದಾಯ ಕೇಂದ್ರ ? ಎಲ್ಲಿದೆ ಇಸ್ಲಾಮಿಕ್ ಸೆಂಟರ್ ? ಎಲ್ಲಿದೆ ಮುಸ್ಲಿಮ್ ಕಮ್ಯುನಿಟೀ ಡೆವಲಪ್ ಮೆಂಟ್ ಸೆಂಟರ್ ? ಮುಸ್ಲಿಮ್ ಕಲ್ಯಾಣ ಕೇಂದ್ರದ ಉದ್ಘಾಟನೆಗೆ ಸಿಎಂ ಬಂದಂತಹ ವರದಿಯನ್ನು ಓದಿದ್ದೀರಾ ? 500 ಕೋಟಿಯಲ್ಲಿ ನಿರ್ಮಾಣವಾಗಿತ್ತಿರುವ ಭಂಟ್ಸ್ ಸಮುದಾಯ ಭವನ ನೋಡಿ ಅಲ್ಲಿ ಅವರ ಸಾಮಾಜಿಕ ಶೈಕ್ಷಣಿಕ ಕಲ್ಯಾಣಗಳು ನಡೆಯುತ್ತದೆ. ನಮ್ಮಲ್ಲಿ ನಮ್ಮ ರಕ್ತವನ್ನೇ ಹೀರುವ ಹಾಸ್ಪಿಟಲ್ ಗಳು, ನಮ್ಮನ್ನು ಬೋಳಿಸುವ 500 ಕೋಟಿಯ ವಾಣಿಜ್ಯ ಮಾಲ್ ಗಳು ಇದೆ. ಅಲ್ಪಸಂಖ್ಯಾತರ ಹೆಸರಿನಿಂದ ಸರಕಾರದಿಂದ ಮತ್ತು ವಕ್ಫ್ ನಿಂದ ಕಬಳಿಸಿದ ಕೇಂದ್ರಗಳು. ಒಬ್ಬ ಮುಖ್ಯಮಂತ್ರಿ ಬಂದರೆ ಮುಸ್ಲಿಮರ ಕೇಂದ್ರವನ್ನು ಭೇಟಿ ಮಾಡಲು ಎಲ್ಲಿ ಅವಕಾಶ ಇದೆ ? ಆಗ ಉಳ್ಳಾಲ ದರ್ಗಾಕ್ಕೆ ಚಪ್ಪರ ಹಾಕಬೇಕು ...! ಅ ಚಪ್ಪರದ ನೆರಳಲ್ಲಿ ಕಾಂಗ್ರೇಸ್ಸ್ ನವನಿಗೆ ಮಾತ್ರವೇ ನೆರಳು ಎಂದು ಬೈಲಾ ಬರೆಯಾಗಿದೆಯೇ ? ಅಥವಾ ರಾಹುಲ್ ಗಾಂದಿಯ ಹರಕೆಯನ್ನು ಯಾರಾದರೂ ತೀರಿಸಿದ್ದೇ ?ಎಸ್ಡೀಪಿಐನವನಿಗೆ ಉಳ್ಳಾಲ ದರ್ಗಾದಲ್ಲಿ ವೇದಿಕೆ ಮಾಡಿ ಕೊಡಬಹುದೇ ? ನರೇಂದ್ರ ಮೋದಿಗೆ ಅಲ್ಲಿ ರೆಡ್ ಕಾರ್ಪೆಟ್ ಸ್ವಾಗತ ಸಿಗಬಹುದೇ ? ನೀವು ರಾಹುಲ್ ಗಾಂಧಿಯನ್ನು ಬೇಟಿ ಆಗಲು
ಹಾಗೂ ಆ ಪುಣ್ಯ ಕೈ ಸ್ಪರ್ಶಿಸಲು ತೋರಿಸಿದ ತಖ್ವಾ ಮೆಚ್ಚಲೇ ಬೇಕು...
🐜
Sunnitoday
ಮುಂದುವರಿಯುವುದು.....