ಶುಕ್ರವಾರ, ಏಪ್ರಿಲ್ 6, 2018

ಸುನ್ನಿ ಟುಡೇ ೨

ಮುಸ್ಲಿಮರಿಗೆ ಬೇಕಿರುವುದು ಬಿಜೆಪಿಯ ಅಜೆಂಡಾದ ಜಾಗೃತಿಯಲ್ಲ, ಕಾಂಗ್ರೇಸ್ಸ್ ಪಕ್ಷದ ಅನಿವಾರ್ಯತೆಯ ಮಾಹಿತಿಯಲ್ಲ.....

🤔
ಸುನ್ನೀಟುಡೇ
ಭಾಗ -2

2006ರಲ್ಲಿ ಸಾಚಾರ್ ಕಮೀಟಿ ವರದಿಯನ್ನು ಯುಪಿಎ ಸರಕಾರ ಬಿಡುಗಡೆಗೊಳಿಸಿದಾಗ ಭಾರತದ ಮುಸ್ಲಿಮ್ ಸಮುದಾಯ ಧನ್ಯವಾಗಿತ್ತು. ಮುಸ್ಲಿಮರ ಕುರಿತು ರಿಪೋರ್ಟ್ ತಯಾರಿಸುವಲ್ಲಿ ಎಕ್ಸ್ ಪರ್ಟ್ ಆಗಿರುವ ಕಾಂಗ್ರೇಸ್ಸ್ ಗೆ ಈ ವರದಿಯು ತನ್ನ ವಿಫಲತೆಗೆ ಹಿಡಿದ ಕನ್ನಡಿ ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಆದರೂ ಮೂರ್ಖ ಮುಸ್ಲಿಮರು ಅದರ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರಿತು ಬಹಳ
ಧೈರ್ಯದಿಂದಲೇ ವರದಿಯ ಸಮಗ್ರ ಚಿತ್ರಣವನ್ನು ದೇಶದ ಮುಂದಿಟ್ಟಿತು. ಹಿಂದುಳಿದ ವರ್ಗಕ್ಕಿಂತ ಹಿಂದುಳಿದಿರುವ ಮುಸ್ಲಿಮರನ್ನು ದೇಶದ ಅತ್ಯಂತ ನತದೃಷ್ಠ ಸಮೂಹವೆಂದು ತೋರಿಸಿದ ವರದಿಯ ಬಗ್ಗೆ ಮುಸ್ಲಿಮ್ ಸಮುದಾಯ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಬಿಜೆಪಿ ಮತ್ತು ಆರ್ ಎಸ್ಸ್ ಎಸ್ಸ್ ನ್ನು ಇಲ್ಲಿ ಅಪರಾಧಿ ಮಾಡುವ ಯಾವುದೇ ಅವಕಾಶ ಇಲ್ಲದಾಗ ಸಮುದಾಯವು 'ಇದ್ ನಂಗಲೆ ಬಿದಿ' ಎಂದು ಹೇಳುತ್ತಾ ಅಲ್ಲೂ ತಮ್ಮ ಅಯೋಗ್ಯತನವನ್ನು (ಅಸಾಹಯಕತನ) ಪ್ರದರ್ಶಿಸಿತು.

2014ರ ವರೆಗೆ ಯುಪಿಎ ಸರಕಾರ ಆಡಳಿತ ನಡೆಸಿದ್ದರೂ ಈ ವರದಿಯ ಇಂಪ್ಲಿಮೆಂಟೇಶನ್ ಗೆ ಯಾವುದೇ ಕಾರ್ಯಕ್ರಮ ಅನುಷ್ಠಾನ ಗೊಳಿಸಲಿಲ್ಲ. ಸಾಚಾರ್ ವರದಿ ದೂಳು ಹಿಡಿದು ಹೋಯಿತು. ಸಮುದಾಯದ ಕೆಲವು ಸಾಮಾನ್ಯ ಜನರು ಇದಕ್ಕೆ ಪರಿಹಾರ ಹುಡುಕುವ ಪ್ರಯತ್ನ ಮಾಡಿದರು. ಹಲವು ಸಂಘಸಂಸ್ಥೆಗಳು ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿ ಸುಧಾರಣೆಗಾಗಿ ಅವಿರತ ಶ್ರಮಿಸಿದರು. ಝಕಾತ್ ಪೌಂಡೇಶನ್ ಆಫ್ ಇಂಡಿಯಾ ಎಂಬ ಸಂಘಟನೆಯು ಸಿವಿಲ್ ಸರ್ವಿಸ್ ನಲ್ಲಿ ಮುಸ್ಲಿಮರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಮಹತ್ವದ ಕಾರ್ಯಾಚರಣೆ ನಡೆಸಿತು. ಇದರ ಫಲ 2006 ಸಿವಿಲ್ ಸರ್ವಿಸ್ ನಲ್ಲಿ 3% ಇದ್ದ ಮುಸ್ಲಿಮರ ಭಾಗವಹಿಸುವಿಕೆ 2018ಕ್ಕೆ 4% ಕ್ಕೆ ಏರಿತು. ಬಿಜೆಪಿ ಸರಕಾರ ಇರುವ ಈ ಭಯಪೀಡಿತ ( ಭಪಪಡುವವರಿಗೆ) ಅವದಿಯಲ್ಲಿ ಅಂದರೆ 2016 ರಲ್ಲಿ ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ 50 ಮುಸ್ಲಿಮ್ ಅಭ್ಯರ್ಥಿಗಳು ಐ ಎ ಎಸ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಟಾಪ್ 100 ರಲ್ಲಿ ಗುರುತಿಸಿಕೊಂಡು ಮಹಾ ಸಾಧನೆ ಮಾಡಿದ್ದರು. ವಿಶೇಷವಾಗಿ 50 ಅಭ್ಯರ್ಥಿಗಳೂ ದೇಶಸೇವೆಯ ಕರ್ತವ್ಯದಲ್ಲಿ ತೊಡಗಿಕೊಂಡಿದ್ದು ಸರಕಾರದ ಆಡಳಿತ ಯಂತ್ರದಲ್ಲಿ ಪಾಲು ನೀಡುತ್ತಿದ್ದಾರೆ.

ಈ ಯುವಕ ಮತ್ತು ಯುವತಿಯರ ಸಾಧನೆ ಯಾವುದೇ ಸರಕಾರದ ಕೃಪೆಯ ಕೊಡುಗೆಯಲ್ಲ. ಸಮುದಾಯದ ಯುವ ತಲೆಮಾರಿನ ಇಚ್ಚಾಶಕ್ತಿ ಹಾಗೇ ಸಂಘಸಂಸ್ಥೆಗಳ ಕಾರ್ಯತಂತ್ರದ ಫಲವಾಗಿದೆ. ಸಾಧಿಸುವ ಛಲವಿದ್ದರೆ ಸಂವಿಧಾನಿಕವಾಗಿ ನಮಗಿರುವ ಅವಕಾಶವನ್ನು ನ್ಯಾಯಯುತವಾಗಿ ಪಡೆದುಕೊಳ್ಳಬಹುದು. 3% ಇದ್ದಿದ್ದು 4% ಹೆಚ್ಚಿಸಲು ಇಲ್ಲಿ ಯಾರೂ ಬೀದಿಗೆ ಇಳಿಯಲಿಲ್ಲ, ವೇದಿಕೆ ಕಟ್ಟಲಿಲ್ಲ, ಹೋರಾಟ ಮಾಡಲಿಲ್ಲ. ಹೊರತಾಗಿ ಪ್ರತಿಭಾನ್ವಿತರನ್ನು ಗುರುತಿಸಿ ಅವರಿಗೆ ಮಾರ್ಗದರ್ಶನ ಮಾಡಿ ಸೌಲಭ್ಯ ನೀಡುವ ಸೇವೆ ಒದಗಿಸಲಾಯಿತು.
ಕಾಂಗ್ರೇಸ್ಸ್ ಪಕ್ಷವನ್ನು ಕಾಯಲಿಲ್ಲ, ಬಿಜೆಪಿಯನ್ನು ಭಯಪಡಲಿಲ್ಲ, ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರವಿಲ್ಲದೇ ಝಕಾತ್ ಪೌಂಡೇಶನ್ ನಂತಹ ಸಂಸ್ಥೆಗಳು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿದರು. ಮುಸ್ಲಿಮರಿಗೆ ಅತೀ ಅಗತ್ಯವಾಗಿ ಬೇಕಿರುವುದು ಬಿಜೆಪಿಯ ಅಜೆಂಡಾದ ಮಾಹಿತಿಯಲ್ಲ, ಕಾಂಗ್ರೇಸ್ಸ್ ನ ಅನಿವಾರ್ಯತೆ ಜಾಗೃತಿಯಲ್ಲ ಹೊರತಾಗಿ ಯಾವುದೇ ಪಕ್ಷವೂ ಅಧಿಕಾರಕ್ಕೆ ಬಂದರೂ ಸಂವಿಧಾನಿಕವಾಗಿ ನಮ್ಮ ಹಕ್ಕು ಮತ್ತು ನ್ಯಾಯವನ್ನು ಹೇಗೆ ಪಡೆಯಬಹುದು ಎಂಬ ಕುರಿತ ಕಾರ್ಯಾಗಾರವಾಗಿದೆ.

ಸಿದ್ದರಾಮಯ್ಯ ಸರಕಾರ ಅಕ್ಕಿ ಕೊಟ್ಟಿದೆ, ಕ್ಯಾಂಟೀನ್ ಕೊಟ್ಟಿದೆ ಹಾಗಾಗಿ ನಾನು ಕಾಂಗ್ರೇಸ್ಸ್ ಗೆ ಓಟು ಹಾಕುತ್ತೇನೆ ಎಂಬ ಮೂರ್ಖರ ಬರಹವನ್ನು ಪ್ರಸಾರ ಮಾಡುವ ಮೊದಲು ನಾವು ಚಿಂತಿಸಬೇಕಾದ್ದು ಈ ಅಕ್ಕಿ ಮತ್ತು ಕ್ಯಾಂಟೀನ್ ಸಮುದಾಯದ ಸಬಲೀಕರಣಕ್ಕೆ ಎಷ್ಟರ ಮಟ್ಟಿಗೆ ಉಪಕಾರಿ ಎಂದಾಗಿದೆ. ಅಕ್ಕಿ ಕೊಡುವುದು ಮುಸ್ಲಿಮರಿಗೆ ಮಾತ್ರವಲ್ಲ ರಾಜ್ಯದ ಎಲ್ಲಾ ಬಡವರಿಗೂ ಅಕ್ಕಿ ಸಿಗುತ್ತದೆ ಆದರೆ ಈ ಅಕ್ಕಿಗೂ ನಮ್ಮ ಓಟಿನ ಹಕ್ಕಿಗೂ ಏನು ಸಂಬಂಧ ? ಸರಕಾರ ಜನಪರವಾಗ ಬೇಕಾದರೆ ಇಂತಹಾ ಕಾರ್ಯಕ್ರಮ ಅನಿವಾರ್ಯ ಹಾಗೇ ನೋಡುವುದಾದರೆ ನಾವು ಯಡಿಯೂರಪ್ಪರನ್ನು ಬೆಂಬಲಿಸಬೇಕು. ಮೈನಾರಿಟೀ ನಿಗಮಕ್ಕೆ ಅನುದಾನವನ್ನು ನೂರು ಕೋಟಿ ದಾಟಿಸಿದ್ದು ಕೊನೆಗೆ ಅದು 500 ಕೋಟಿಯಾಗಿ ಏರಿಕೆಯಾಗಿದ್ದು ಬಿಜೆಪಿ ಸರಕಾರದಲ್ಲಾಗಿತ್ತು. ನಾವು ಯುಟೀ ಖಾದರ್ ಸೂರ್ಯ , ರಮಾನಾಥ ರೈ ಚಂದ್ರ , ಕಾರ್ಯಕರ್ತ ನಕ್ಷತ್ರ ಎಂದು ನಕ್ಷತ್ರ ಎಣಿಸುವುದರಲ್ಲೇ ಇದ್ದೇವೆ. ಈ ಸೂರ್ಯ ಚಂದ್ರ ರ ಮೂಲಕ ನಾವು ಸಮುದಾಯಕ್ಕೆ ಯಾವ ಪ್ರಯೋಜನ ಪಡೆದುಕೊಂಡಿದ್ದೇವೆ ? ಇವರ ಮಂತ್ರಿ ಪಧವಿಯ ಪ್ರಯೋಜನ ಪಡೆದು ನಾವೆಷ್ಟು ಶಿಕ್ಷಣ ಸಂಸ್ಥೆ ಅಥವಾ ಸರಕಾರೀ ಸೌಲಭ್ಯ ಪಡೆದುಕೊಂಡಿದ್ದೇವೆ ? ನಮ್ಮ ಸಂವಿಧಾನಿಕ ಹಕ್ಕು ಮತ್ತು ರಕ್ಷಣೆಯಲ್ಲಿ ಇವರ ನಿಲುವಿಗಳು ಯಾವುದು ?

ವೇದಿಕೆಯಲ್ಲಿ ಮೊಯಿಲಾಯ ಸಲ್ಲಿ ವಾ ಸಲ್ಲಿ ಹಾಡಿದ್ದಾ ? ಮದುವೆಗೆ ಬಂದು ಮದುಮಗನ ಜೊತೆ ಪೊಟೋ ತೆಗೆದದ್ದಾ ? ಅದೇ ನಮಗೂ ನಾನು ಮೇಲೆ ಹೇಳಿದ ಝಕಾತ್ ಪೌಂಡೇಶನ್ ನ ಮುಸ್ಲಿಮರಿಗೂ ಇರುವ ವ್ಯತ್ಯಾಸ. ನಾವು ಕ್ಷಣಿಕ ಲಾಭಕ್ಕಾಗಿ ಇಲ್ಲವೇ ಪ್ರತಿಷ್ಠೆಯ ಪ್ರದರ್ಶನಕ್ಕಾಗಿ ಈ ಸೂರ್ಯ
ಚಂದ್ರನನ್ನು ಬಳಸಿದೆವು ಆದರೆ ಝಕಾತ್ ಪೌಂಡೇಶನ್ ಸಂಸ್ಥೆಯು ದೂರದೃಷ್ಠಿಯ ಉದ್ದೇಶ ಇಟ್ಟು ಕಾರ್ಯಾಚರಿಸಿತು ಅದರ ಫಲ ಅಂಕಿಅಂಶ 3 ರಿಂದ 4 ಕ್ಕೆ ಏರಿತು.......

ಯುಟೀ ಖಾದರ್ ಮತ್ತು ರಮನಾಥ ರೈ ಯಿಂದ ನಾವು ಬಯಸಿದ್ದು ನಮ್ಮ ಬೀದಿರಂಪಾಟಕ್ಕೆ ನೇತೃತ್ವವನ್ನು, ಸ್ಟೇಷನಿಗೆ ಹೋದ ಯುವಕರನ್ನು ಬಿಡಿಸುವುದನ್ನು, ಪ್ರಭಾಕರ ಭಟ್ಟ್ ನ್ನು ಬಂದಿಸುವುದನ್ನು, ಅವ ಗುಳಿಗೆ ಪೂಜೆ ಮಾಡದಂತೆ ತಡೆಯುವುದನ್ನು,
ಕೇಸರಿ ಶಾಲು ನಿಷೇಧಿಸುವುದನ್ನು ಈಗ ನಮಗೂ ಆ ಸಂಘಪರಿವಾರಕ್ಕೂ ಏನೂ ವ್ಯತ್ಯಾಸವಿಲ್ಲ. ಅವರು ಮುಸ್ಲಿಮರ ಮೇಲಿನ ದ್ವೇಷಕ್ಕೆ ನಮ್ಮ ಮೇಲೆ ಕೋಮುವಾದಿ ಆಗುತ್ತಾರೆ ನಾವು ಕೇಸರಿ ಪಡೆಯ ಮೇಲಿನ ದ್ವೇಷಕ್ಕೆ ಕೋಮುವಾದಿಗಳಾಗುತ್ತೇವೆ. ನಮ್ಮ ಈ ವರ್ತನೆ ಯುಟೀ ಖಾದರ್ ಹಾಗೂ ರಮಾನಾಥ ರೈ ಗೆ ಕಂಟಕವಾಗಿದೆ. ಅವರಿಗೆ ಕಾಂಗ್ರೇಸ್ಸ್ ಆಗುವ ಅನಿವಾರ್ಯತೆ ಇದೆ. ಇಲ್ಲವಾದರೆ ಅವರು ಜಾತ್ಯಾತೀತರು ಆಗುವುದು ಹೇಗೆ ?.....ಇವರ ಜಾತ್ಯಾ ತೀ ಕಥೆ ಮುಂದೆ ಹೇಳುವೆ...!

ಮುಂದುವರಿಯುವುದು....
ಸುನ್ನೀಟುಡೇ