ಭಾನುವಾರ, ಏಪ್ರಿಲ್ 22, 2018

*ನಾನೇಕೆ ಬಿಜೆಪಿಯನ್ನು ವಿರೋಧಿಸುತ್ತೇನೆ*…..

*ನಾನೇಕೆ ಬಿಜೆಪಿಯನ್ನು ವಿರೋಧಿಸುತ್ತೇನೆ*…..
----------------------
*1. ಭಾರತ ಎಂದರೆ ಅನೇಕತೆ. ಅನೇಕತೆಯಲ್ಲಿ ಏಕತೆ. ಅನೇಕತೆಯ ಮೂಲಕ ಏಕತೆ. ಬಹುತ್ವವೇ ಭಾರತದ ಬುನಾದಿ. ಆದರೆ ಬಿಜೆಪಿಗೆ ಈ ಬಹುತ್ವದಲ್ಲಿ ನಂಬಿಕೆಯಿಲ್ಲ. ಅದಕ್ಕೆ ಎಲ್ಲವೂ ‘ಏಕ’ವಾಗಬೇಕು. ‘ಏಕ ಮತಧರ್ಮ’, ‘ಏಕ ಭಾಷೆ’, ‘ಏಕ ಸಂಸ್ಕೃತಿ’, ‘ಏಕ ರಾಜಕೀಯ ಪಕ್ಷ’, ‘ಏಕ ನಾಯಕ’… ದೇಶವನ್ನು ಕಾಂಗ್ರೆಸ್ ನಿಂದ ಮುಕ್ತಗೊಳಿಸುವ ಬಯಕೆ, ದೇಶವನ್ನು ಪ್ರತಿಪಕ್ಷಗಳಿಂದ ಮುಕ್ತಗೊಳಿಸುವ ಬಯಕೆ. ಸ್ಪಷ್ಟವಾಗಿ ಇವೆಲ್ಲ ಫ್ಯಾಸಿಸ್ಟ್ ನಿಲುವುಗಳು.*

*2. ಬಿಜೆಪಿಗೆ ಪ್ರಜಾತಾಂತ್ರಿಕ ಮೌಲ್ಯಗಳಲ್ಲಿ ನಂಬಿಕೆಯಿಲ್ಲ. ಸೌಜನ್ಯದಿಂದ ಕೂಡಿದ, ಸಭ್ಯತೆಯಿಂದ ಕೂಡಿದ ವಾದದಲ್ಲಿ, ಸಂವಾದದಲ್ಲಿ ನಂಬಿಕೆಯಿಲ್ಲ. ಪ್ರಶ್ನಿಸುವುದನ್ನು ಮಾನ್ಯ ಮಾಡಿದ ಸಂಸ್ಕೃತಿ ನಮ್ಮದು. ಚಾರ್ವಾಕನಿಗೂ ಜಾಗ ಕೊಟ್ಟ ಸಂಸ್ಕೃತಿ ನಮ್ಮದು. ಆದರೆ ಭಾರತೀಯ ಸಂಸ್ಕೃತಿಯ ಉತ್ತರಾಧಿಕಾರಿ ಎಂದು ಹೇಳಿಕೊಳ್ಳುವ ಈ ಪಕ್ಷಕ್ಕೆ ಈ ಉದಾರ ಪರಂಪರೆಯಲ್ಲಿ ನಂಬಿಕೆಯಿಲ್ಲ. ಭಿನ್ನ ಅಭಿಪ್ರಾಯವನ್ನು ಅದು ಒಪ್ಪಿಕೊಳ್ಳುವುದಿಲ್ಲ. ವಾದದಿಂದ ಗೆಲ್ಲುವ ಬದಲು ಎದುರಾಳಿಗಳ ಬಾಯಿ ಮುಚ್ಚಿಸುವ, ದೈಹಿಕ ಹಲ್ಲೆ ಮಾಡುವ, ಕೊಂದು ಮುಗಿಸುವ ಸಿದ್ಧಾಂತದಲ್ಲಿ ಅದಕ್ಕೆ ನಂಬಿಕೆ. ಮಹಾತ್ಮಾಗಾಂಧಿಯ ಹತ್ಯೆಯಿಂದ ಹಿಡಿದು ದಾಬೋಲ್ಕರ್, ಪನ್ಸಾರೆ, ಕಲಬುರ್ಗಿ, ಗೌರಿ ಎಲ್ಲರ ಹತ್ಯೆಯ ಹಿಂದೆಯೂ ಇದ್ದುದು ಇದೇ ವಿಚಾರಧಾರೆ.*

*3. ಭಾರತವು ಅನೇಕ ಮತಧರ್ಮಗಳ ಬೀಡು. ನಾನಾ ಮತಧರ್ಮಗಳಿಗೆ ಸೇರಿದವರು ಶತ ಶತಮಾನಗಳಿಂದ ಇಲ್ಲಿ ಪರಸ್ಪರರ ಧರ್ಮವನ್ನು ಗೌರವಿಸುತ್ತ ಸೌಹಾರ್ದದಿಂದ ಬದುಕಿದ್ದಾರೆ. ಆದರೆ ಅನ್ಯಮತದ್ವೇಷವೇ ಬಿಜೆಪಿಯ ಮೂಲ ಅಜೆಂಡಾ. ಹಿಂದೂಧರ್ಮಿಯವರನ್ನು ಹೊರತು ಪಡಿಸಿ ಬೇರೆ ಧರ್ಮದವರೆಲ್ಲರೂ ಹೊರಗಿನಿಂದ ಬಂದವರು, ಅವರು ನಮ್ಮವರಲ್ಲ ಎಂದೇ ಅದು ಭಾವಿಸುತ್ತದೆ. ಅದರ ಪ್ರಕಾರ ಮುಸ್ಲಿಮರೆಲ್ಲರೂ ಭಯೋತ್ಪಾದಕರು. ಕ್ರೈಸ್ತರೆಲ್ಲರೂ ಮತಾಂತರಿಗಳು. ಪ್ರತಿಯೊಂದು ಸಮಸ್ಯೆಯನ್ನೂ, ಪ್ರತಿಯೊಂದು ಘಟನೆಯನ್ನೂ ಅದು ಮತೀಯ ನೆಲೆಯಲ್ಲಿಯೇ ನೋಡುತ್ತದೆ.*

*4. ಜನಸಾಮಾನ್ಯರಿಗೆ ಯಾವತ್ತೂ ತಮ್ಮ ಬದುಕಿನ ಸಮಸ್ಯೆಗಳ ಪರಿಹಾರದ್ದೇ ಚಿಂತೆ. ಅವರು ರಾಜಕೀಯ ಪಕ್ಷಗಳಿಂದ, ಸರಕಾರಗಳಿಂದ ನಿರೀಕ್ಷಿಸುವುದು ಆಹಾರ, ಆರೋಗ್ಯ, ಶಿಕ್ಷಣ, ಉದ್ಯೋಗ, ವಸತಿ ಇತ್ಯಾದಿಗಳನ್ನು. ನೆಮ್ಮದಿಯ ಬದುಕನ್ನು. ಹೊರತು ದೇವರು ಮತಧರ್ಮದಂತಹ ಭಾವನಾತ್ಮಕ ವಿಷಯಗಳಲ್ಲ. ಆದರೆ ಬಿಜೆಪಿಗೆ ಭಾವನಾತ್ಮಕ ವಿಷಯಗಳೇ ಮುಖ್ಯ. ಧಾರ್ಮಿಕ ಭಾವನೆಗಳನ್ನು ಕೆರಳಿಸಿ, ಸಮಾಜವನ್ನು ಒಡೆದು ಅದರ ಮೂಲಕ ತಮ್ಮ ಗುರಿ ಸಾಧಿಸುವುದು. ಜನಸಾಮಾನ್ಯರ ಸಮಸ್ಯೆಗಳನ್ನು ಹಿಡಿದುಕೊಂಡು ಅದು ಬೀದಿಗಿಳಿದ ಉದಾಹರಣೆಗಳು ಕಡಿಮೆ. ಅದು ಬೀದಿಗಿಳಿಯುವುದು ಹೆಚ್ಚಾಗಿ ಕೋಮುವಾದಿ ವಿಷಯಗಳನ್ನು ಹಿಡಿದುಕೊಂಡೇ. ಅವರು ಹತ್ಯೆಯನ್ನು, ಒಂದು ಲೈಂಗಿಕ ಅತ್ಯಾಚಾರವನ್ನು ಕೂಡಾ ಮತೀಯ ನೆಲೆಯಲ್ಲಿಯೇ ನೋಡುತ್ತಾರೆ. ಮಾನವೀಯತೆ ಮರೆತು ಅಲ್ಲಿಯೂ ಹಿಂದೂ ಮುಸ್ಲಿಂ ವಿಷಯ ತಂದು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಾರೆ.*

*5. ಬಿಜೆಪಿಯ ಹಿಂದಿರುವ ವಿಚಾರಧಾರೆಗೆ ಅಹಿಂಸೆಯಲ್ಲಿ ಪ್ರಜಾಸತ್ತಾತ್ಮಕ ಹೋರಾಟದಲ್ಲಿ ನಂಬಿಕೆಯಿಲ್ಲ. ಮಹಾತ್ಮಾಗಾಂಧಿಯವರ ನಿಲುವು ಸರಿ ಇಲ್ಲ ಅನಿಸಿತು. ತಕ್ಷಣ ಅವರನ್ನು ಗುಂಡು ಹಾರಿಸಿ ಕೊಂದುಬಿಟ್ಟರು. ದೇಶದ ಜನತೆಯ ಪಾಲಿಗೆ ಏನೇನೂ ಪ್ರಸ್ತುತವಲ್ಲದ ರಾಮಜನ್ಮಭೂಮಿ ಬಾಬರಿ ಮಸೀದಿ ವಿಷಯ ಎತ್ತಿಕೊಂಡರು, ಬಾಬರಿ ಮಸೀದಿಗೆ ಹಾನಿ ಮಾಡುವುದಿಲ್ಲ ಎಂದು ಸುಪ್ರೀಂ ಕೋರ್ಟಿಗೆ ಮುಚ್ಚಳಿಕೆ ಬರೆದುಕೊಟ್ಟರು. ಬಳಿಕ ಮಸೀದಿಯನ್ನು ಒಡೆದು ಹಾಕಿದರು. ದೇಶದಾದ್ಯಂತ ರಕ್ತಪಾತಕ್ಕೆ ಕಾರಣರಾದರು. ಗುಜರಾತಿನಲ್ಲಿ, ಕಂದಮಾಲ್ ನಲ್ಲಿ, ಮುಝಫರ್ ನಗರದಲ್ಲಿ ಹತ್ಯಾಕಾಂಡ ನಡೆಸಿದರು. ದೇಶದ ಯಾವುದೇ ಕೋಮು ಗಲಭೆ ತೆಗೆದುಕೊಳ್ಳಿ ಅಲ್ಲಿ ಅವರಿದ್ದಾರೆ.*

*6. ಬಿಜೆಪಿ ಒಂದು ಮಹಿಳಾ ವಿರೋಧಿ ಪಕ್ಷ. ದಲಿತ ವಿರೋಧಿ ಪಕ್ಷ. ಬಹಿರಂಗವಾಗಿ ಹೇಳುವುದಿಲ್ಲ, ಆದರೆ ಮಹಿಳೆಯರು ಮನೆಯೊಳಗಿದ್ದು ದೇಶಭಕ್ತ ಮಕ್ಕಳನ್ನು ಹೆರುತ್ತಿರಬೇಕು, ಅವರು ಹೊಸಿಲು ದಾಟಿ ಹೊರ ಬರಬಾರದು ಎಂಬುದು ಅದರ ಮೂಲ ನಿಲುವು. ಆರ್ ಎಸ್ ಎಸ್ ನ ಮುಖ್ಯಸ್ಥರು ಇದನ್ನು ಪರೋಕ್ಷವಾಗಿ ಅನೇಕ ಬಾರಿ ಹೇಳಿದ್ದಾರೆ. ಬಿಜೆಪಿ ಪಕ್ಷ ಮಹಿಳೆಯರಿಗೆ ಪ್ರಾತಿನಿಧ್ಯ ಕೊಡುವುದು ತುಂಬ ಕಡಿಮೆ. ಈಗ ನೋಡಿ ಕಳೆದ 40 ವರ್ಷದಲ್ಲಿ ಇರದಂತಹ ಪರಿಸ್ಥಿತಿ ಲೋಕಸಭೆಯಲ್ಲಿದ್ದು ಬಿಜೆಪಿ ಸ್ಪಷ್ಟ ಬಹುಮತವನ್ನು ಹೊಂದಿದೆ. ಆದರೆ ಅದು 'ಮಹಿಳಾ ಮೀಸಲಾತಿ ಮಸೂದೆ'ಯನ್ನು ಪಾಸ್ ಮಾಡುವುದಿಲ್ಲ. ಮಹಿಳೆಯರ ರಕ್ಷಣೆ, ಏಳಿಗೆಯ ಬಗೆಗಿನ ಅದರ ಎಲ್ಲ ಮಾತುಗಳೂ ಕೇವಲ ಬೂಟಾಟಿಕೆಯವು. ಸಾಲದೆಂಬಂತೆ ಮಹಿಳೆಯರ ಮೇಲಿನ ದೌರ್ಜನ್ಯದ ಅನೇಕ ಪ್ರಕರಣಗಳಲ್ಲಿ ಬಿಜೆಪಿಯವರ ಹೆಸರು ಕೇಳಿಬಂದಿದೆ. ಆದರೆ ಅವರನ್ನು ಶಿಕ್ಷಿಸಿಲ್ಲ, ಬದಲಿಗೆ ರಕ್ಷಿಸಲು ಯತ್ನಿಸಲಾಗಿದೆ. ಅವರಿಗೆ ಪ್ರೊಮೋಶನ್ ನೀಡಿ ಮಂತ್ರಿ ಮಾಡಿದ ಉದಾಹರಣೆಯೂ ಇದೆ. ಅತ್ಯಾಚಾರಿಗಳನ್ನೂ ಬಿಜೆಪಿ ಹೇಗೆ ಬೆಂಬಲಿಸುತ್ತದೆ ಎಂಬುದಕ್ಕೆ ಇತ್ತೀಚಿನ ಕಠುವಾ ಮತ್ತು ಉನ್ನಾವ್ ಅತ್ಯಾಚಾರ ಹತ್ಯೆ ಪ್ರಕರಣಗಳೇ ಸಾಕ್ಷಿ. ದಲಿತರ ವಿಷಯದಲ್ಲಿಯೂ ಬಿಜೆಪಿ ಉದಾರವಾಗಿಲ್ಲ. ಅವರನ್ನು ತುಳಿಯುವ ಅವಕಾಶ ಸಿಕ್ಕಾಗಲೆಲ್ಲ ಬಳಸಿಕೊಂಡಿದೆ. ಇತ್ತೀಚೆಗೆ ನಡೆದ ದಲಿತ ದಂಗೆಯ ಸಮಯದಲ್ಲಿ ಚಳುವಳಿಗಾರರ ಮೇಲೆ ಅದು ನಿರ್ದಯವಾಗಿ ದೌರ್ಜನ್ಯ ನಡೆಸಿತು. ಅನೇಕ ಮಂದಿ ಜೀವ ಕಳೆದುಕೊಂಡು. ಅಸಂಖ್ಯ ಮಂದಿ ಜೈಲು ಸೇರಿದರು. ಉತ್ತರಪ್ರದೇಶದ ದಲಿತ ನಾಯಕ ಚಂದ್ರಶೇಖರ್ ಅಝಾದ್ ದಲಿತಪರ ಹೋರಾಟದ ನಾಯಕತ್ವ ವಹಿಸಿದ್ದಕ್ಕೆ ಅಲ್ಲಿನ ಬಿಜೆಪಿ ಸರಕಾರ ಆತನನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿಯಲ್ಲಿ ಅನೇಕ ತಿಂಗಳಿಂದ ಜೈಲಿನಲ್ಲಿಟ್ಟಿದೆ.*

*7. ಬಿಜೆಪಿ ಸುಳ್ಳಿನ ಮೇಲೆ ನಿಂತ ಒಂದು ರಾಜಕೀಯ ಪಕ್ಷ. ಸುಳ್ಳು ಅದರ ಮನೆದೇವರು. ಹೇಳುವುದು ಸದಾ ಸುಳ್ಳು. ಸೃಷ್ಟಿಸುವುದು ಕೇವಲ ಭ್ರಮೆಗಳನ್ನು. ಇತಿಹಾಸದಿಂದ ಹಿಡಿದು ವಿಜ್ಞಾನದವರೆಗೂ ಯಾವ ಲಜ್ಜೆಯೂ ಇಲ್ಲದೆ ಅವರು ಸುಳ್ಳು ಹೇಳ ಬಲ್ಲರು. ಅವರ ಬೆಂಬಲಿಗರೂ ಅಷ್ಟೇ.. ಸುಳ್ಳು ಸುದ್ದಿಗಳನ್ನು ಹರಡುವುದರಲ್ಲಿ ನಿಸ್ಸೀಮರು. ಲವ್ ಜಿಹಾದ್.. ಮತಾಂತರ.. ಗೋಹತ್ಯೆ…. ಒಂದೇ ಎರಡೇ.. ಈಗಂತೂ ಸುಳ್ಳು ಸುದ್ದಿಯ ಫ್ಯಾಕ್ಟರಿಗಳನ್ನೇ ವೆಬ್ ಸೈಟುಗಳ ಮೂಲಕ ಸ್ಥಾಪಿಸಿಕೊಂಡಿದ್ದಾರೆ. ಅವರು ತಮ್ಮ ಗುರಿ ಸಾಧನೆಗಾಗಿ ರಾಷ್ಟ್ರಪಿತನಿಂದ ಹಿಡಿದು ದೇಶವನ್ನು ಆಳಿದ ಅನೇಕ ಪ್ರಧಾನಿಗಳ ತೇಜೊವಧೆ ಮಾಡಲೂ ಹೇಸದವರು.*

*8. “ಸಬ್ ಕಾ ಸಾತ್…” ಎನ್ನುವ ಈ ಪಕ್ಷ ಸ್ಪಷ್ಟವಾಗಿ ಒಂದು ಧರ್ಮಕ್ಕೆ ಮೀಸಲಾದ ಪಕ್ಷ. ಸ್ಪಷ್ಟವಾಗಿ ಮುಸ್ಲಿಂ ವಿರೋಧಿಯಾದ ಪಕ್ಷ. ಸಂವಿಧಾನದ ಆಶಯಕ್ಕೆ ಸಂಪೂರ್ಣ ಮತ್ತು ಬಹಿರಂಗವಾಗಿಯೇ ನಡೆದುಕೊಳ್ಳುವ ಈ ಪಕ್ಷಕ್ಕೆ ಒಂದು ರಾಜಕೀಯ ಪಕ್ಷ ಎಂದು ಅದು ಹೇಗೆ ಚುನಾವಣಾ ಆಯೋಗ ಮಾನ್ಯತೆ ನೀಡಿದೆ ಎನ್ನುವುದೇ ಅಚ್ಚರಿಯ ಸಂಗತಿ.*

*9. ಬಹಿರಂಗವಾಗಿ ಹೇಳುವುದಿಲ್ಲ, ಆದರೆ ಬಿಜೆಪಿಗೆ ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ನಂಬಿಕೆಯಿಲ್ಲ. ಜಾತಿ ಶ್ರೇಣೀಕರಣಕ್ಕೆ ಆದ್ಯತೆ ನೀಡುವ ಮನುಸಂವಿಧಾನದಲ್ಲಿಯೇ ಅದಕ್ಕೆ ಹೆಚ್ಚಿನ ನಂಬಿಕೆ. ಸಂವಿಧಾನ ರಚನೆಯ ಕಾಲದಲ್ಲಿಯೂ ಆರ್ ಎಸ್ ಎಸ್ ಅಸಮಾಧಾನ ವ್ಯಕ್ತಪಡಿಸಿತ್ತು ಮತ್ತು ಈಗಲೂ ಅವರು ಸಂವಿಧಾನ ಬದಲಾಯಿಸುವ ಬಗ್ಗೆ ಮಾತನಾಡುತ್ತಲೇ ಇದ್ದಾರೆ (ಅಕುಹೆಗಡೆ ಸುಮ್ಮನೆ ಹೇಳಿದ್ದಲ್ಲ ನೆನಪಿರಲಿ). ಇದರ ಹಿಂದಿನ ಉದ್ದೇಶ ಎಲ್ಲರಿಗೂ ಗೊತ್ತಿರುವಂಥದ್ದೇ. ಅವಕಾಶ ಸಿಕ್ಕರೆ ಬಿಜೆಪಿ ಸಂವಿಧಾನ ಬದಲಿಸಿಯೇ ಬದಲಿಸುತ್ತದೆ.*

*10. ಬಿಜೆಪಿಗೆ ಸೆಕ್ಯುಲರ್ ಸಿದ್ಧಾಂತದಲ್ಲಿ ನಂಬಿಕೆಯಿಲ್ಲ. ಭಾರತವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡುವುದು ಅದರ ಅಜೆಂಡಾದಲ್ಲಿಲ್ಲ. ಹಿಂದೂ ರಾಷ್ಟ್ರ ಸ್ಥಾಪನೆಯೇ ಅದರ ಅಂತಿಮ ಗುರಿ.*

*ಈ ಎಲ್ಲ ಕಾರಣಗಳಿಂದ ನಾನು ಬಿಜೆಪಿಯನ್ನು ವಿರೋಧಿಸುತ್ತೇನೆ.*

✍🏻  *ಶ್ರೀನಿವಾಸ ಕಾರ್ಕಳ*

ಶುಕ್ರವಾರ, ಏಪ್ರಿಲ್ 6, 2018

ಸುನ್ನಿ ಟುಡೇ ೩

ಬಿಜೆಪಿಯನ್ನು ಮತ್ತು ಮೋದಿಯನ್ನು ವಿರೋಧಿಸುವುದನ್ನು ಬಿಟ್ಟು ಬಿಡಿ. ನಿಮ್ಮ ವಿರೋಧವೇ ಅವರ ಆಯುಧ......

🌾
ಸುನ್ನೀಟುಡೇ

     ಭಾಗ -3

ಮುಸ್ಲಿಮ್ ರಾಜಕೀಯ ನಿಲುವುಗಳ ಕುರಿತು ಜಾಗೃತಿ ಮೂಡಿಸಲು ಕಳೆದ ಎರಡು ಭಾಗದಲ್ಲಿ ನಾವು ಹಲವಾರು ವಿಚಾರಗಳನ್ನು ಜನರ ಮುಂದಿಟ್ಟೆವು. ಅದಕ್ಕೆ ಪೂರಕವಾಗಿ ಹಲವರು ನಮ್ಮಲ್ಲಿ ಅಭಿಪ್ರಾಯ ಹಂಚಿಕೊಂಡರು. ನಮ್ಮ ವಿಚಾರವನ್ನು ಸಮರ್ಥಿಸುವ ಮತ್ತು ಅದಕ್ಕೆ ಬಲನೀಡುವ ಹಲವು ವೀಡಿಯೋಗಳು - ವಾಯ್ಸ್ ಮೆಸೇಜ್ ಮತ್ತು ಹೇಳಿಕೆಗಳು ನಮಗೆ ಸಿಕ್ಕಿತು. ಅದರಿಂದಲೇ ನಾವು ಈ ಲೇಖನವನ್ನು ಬರೆಯುತ್ತಿದ್ದೇವೆ....

ಲೋಕಪ್ರಸಿದ್ದ ವಿದ್ವಾಂಸ ಎಪಿ ಅಬುಬಕ್ಕರ್ ಮುಸ್ಲಿಯಾರ್ ರವರ ಮಾತುಗಳಿರುವ ಒಂದು ವೀಡಿಯೋ ನನಗೆ ಹೆಚ್ಚು ಇಷ್ಟವಾಯಿತು ಅವರು ಹೇಳುತ್ತಾರೆ " ಯಾವುದೋ ಒಬ್ಬ ವ್ಯಕ್ತಿ ಅಸೆಂಬ್ಲಿ ಪ್ರವೇಶಿಸುವುದಕ್ಕೆ ನಾವೇಕೆ ಇಮಾನ್ ಮಾರಬೇಕು, ನಾವೇಕೆ ಪರಸ್ಪರ ದ್ವೇಷಕಾರಬೇಕು ? ನಮ್ಮ ಸ್ಥಾಪನೆಗಳಿಗೆ , ಸಮುದಾಯಕ್ಕೆ , ಸಮಾಜಕ್ಕೆ ಹಾಗೂ ರಾಜ್ಯಕ್ಕೆ ಪ್ರಯೋಜನವಾಗುವ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ. ಬಹಳವಾಗಿ ಚಿಂತಿಸಿ ಮತದಾನ ಮಾಡಿ. 100% ಪೂರ್ತಿಯಾಗಿ ಯಾರೂ ಕೂಡ ನಮ್ಮ ಸಮಾಜದ ಹಿತವನ್ನು ಬಯಸಿದವರಲ್ಲ. ಅಲ್ಪಸ್ವಲ್ಪವಾದರೂ ನಮಗೆ ಹಿತವಾಗುವ ಪಕ್ಷವನ್ನು ನಾವು ಬೆಂಬಲಿಸಬೇಕು. ನಮ್ಮಲ್ಲಿ ಅಭಿಪ್ರಾಯ ವ್ಯತ್ಯಾಸವಿರ ಬಹುದು. ಮಸೀದಿಯ ಅಧ್ಯಕ್ಷ ಒಂದು ಪಕ್ಷವಾದರೆ ಕಾರ್ಯದರ್ಶಿಯು ಇನ್ನೊಂದು ಪಕ್ಷದವನಾಗಿರ ಬಹುದು. ನಾವು ಅದಕ್ಕಾಗಿ ಪರಸ್ಪರ ಕಾದಾಟ ಮಾಡಿ ವೈಷಮ್ಯದಿಂದ ಒಟ್ಟು ಸಮುದಾಯವನ್ನು ನಾಶಕ್ಕೆ ಕೊಡುವುದಕ್ಕಿಂತ ಪ್ರತೀಯೊಬ್ಬರ ಆಯ್ಕೆಯನ್ನು ನಾವು ಸ್ವಾಗತಿಸಿಕೊಂಡು ಚುನಾವಣೆಯ ನಂತರವೂ ಆ ಮಸೀದಿ ಆಡಳಿತವನ್ನು ಸಮುದಾಯಕ್ಕೆ ಪ್ರಯೋಜನವಾಗುವ ರೀತಿಯಲ್ಲಿ ಮುನ್ನಡೆಸಬೇಕು.  ರಾಜಕೀಯಕ್ಕಾಗಿ ನಮ್ಮ ವಿಶ್ವಾಸ ಮತ್ತು ಸಮುದಾಯವನ್ನು ಛಿದ್ರಮಾಡದಿರಿ. ಯಾರದೋ ಲಾಭಕ್ಕೆ ಬಲಿಯಾಗದಿರಿ. ಪರಸ್ಪರ ದ್ವೇಷ ದೂಷಣೆ ಮತ್ತು ಹಿಯಾಲಿಸುವ ಮೂಲಕ ಮುಸ್ಲಿಮರ ಹೃದಯ ಒಡೆಯುವ ಕಾರ್ಯ ಮಾಡದಿರಿ. ರಾಜಕೀಯ ಅಭಿಪ್ರಾಯ ವ್ಯತ್ಯಾಸ ಮತ್ತು ಪಕ್ಷಗಳ ಆಯ್ಕೆಗಳಲ್ಲಿ ಸ್ವತಂತ್ರವಿದೆ. ಆದರೆ ಅದು ಸಮುದಾಯದ ಐಕ್ಯತೆ ಮತ್ತು ಸಹೋದರತ್ವಕ್ಕೆ ಹಾನಿ ಉಂಟು ಮಾಡಬಾರದು.

ಎರಡನೆಯದ್ದಾಗಿ ನಮಗೆ ಬಂದ ವಾಯ್ಸ್ ಮೆಸೇಜ್ ಹೀಗೆ ಹೇಳುತ್ತದೆ. ' ನೀವು ಬರೆಯುತ್ತಿರುವುದು ಚಿಂತಿಸುವಂತದ್ದೇ. ಆದರೆ ಅದು ಈ ವಿಷಮಯ ಸನ್ನಿವೇಶದಲ್ಲಿ ಜನರ ಮೆದುಳು ಪ್ರವೇಶಿಸುತ್ತದೆ ಎಂದು ನಾನು ಭಾವಿಸುವುದಿಲ್ಲ. ಮುಸ್ಲಿಮರಿಗೆ ಆಯ್ಕೆಗಳಿಲ್ಲ. ಸಮುದಾಯವನ್ನು ಒಂದು ಕಡೆಯಿಂದ ಬಿಜೆಪಿಯವರು - ಕಾಂಗ್ರೇಸ್ಸ್ ನವರು - ಎಸ್ಡೀಪಿ ಐನವರು - ಸಮುದಾಯ ಪ್ರೇಮಿ ಎಂದು ಹೇಳುವವರು ಹರಿದು ತಿನ್ನಲು ಹವಣಿಸುತ್ತಿದ್ದಾರೆ.  ಅವರಿಗೆ ಸಮುದಾಯದ ಪ್ರಯೋಜನ ಮತ್ತು ಭವಿಷ್ಯಕ್ಕಿಂತ ಹೆಚ್ಚಾಗಿ ತಮ್ಮ ಅಸ್ತಿತ್ವ ಮತ್ತು ಪ್ರತಿಷ್ಠೆಯು ಮಿಗಿಲಾಗಿದೆ.

ಇನ್ನೊಂದು ಬರಹದಲ್ಲಿ ನಮಗೆ ಹಿತವಚನವಿತ್ತು. "ನೀನು ಸಮಾಜಕ್ಕೆ ಏನು ಕೊಡುಗೆ ಕೊಟ್ಟಿದ್ದೀ ? ಮನೆಯಲ್ಲಿ ಕೂತು ಬರೆದು ವಾಟ್ಸಾಪ್ ನಲ್ಲಿ ಹಾಕಿದ ತಕ್ಷಣ ಹೀರೋ ಆಗುತ್ತೀಯಾ ?  ನಿನಗಿಂತ ದೊಡ್ಡವರು ನಮ್ಮ ನಾಯಕರು ಇರುವಾಗ ನಿನ್ನ ಲೇಖನದಿಂದ ಏನೂ ಬದಲಾಗುವುದಿಲ್ಲ..! ನಮ್ಮ ನಾಯಕರಿಗೆ ಗೊತ್ತುಂಟು ಸಮುದಾಯಕ್ಕೆ ಏನು ಕೊಡಬೇಕು ಮತ್ತು ಮಾಡಬೇಕು ಎಂದು....

ಕೊನೆಯದಾಗಿ ನನಗೆ ಇಷ್ಟವಾಗಿದ್ದು ಎನ್ ಡೀ ಟೀವಿಯ ರವೀಶ್ ಕುಮಾರ್ ರವರ ಅಭಿಪ್ರಾಯವಾಗಿತ್ತು. "ಮುಸ್ಲಿಮರೇ ಸುಮ್ಮನಿರಿ. ನೀವು ಆರ್ ಎಸ್ಸ್ ಎಸ್ಸ್ ಮತ್ತು ಬಿಜೆಪಿಯನ್ನು ವಿರೋಧಿಸಲು ಮತ್ತು ನಿಂಧಿಸಲು ಹೋಗಬೇಡಿ. ಅವರು ಈಗ ಬಲಿಷ್ಠರಾಗಿದ್ದಾರೆ. ಬಿಜೆಪಿ ಮತ್ತು ಆರ್ ಎಸ್ಸ್ ಎಸ್ಸ್ ನ್ನು ಟೀಕಿಸುವುದನ್ನು ನಿಲ್ಲಿಸಿ. ಮುಸ್ಲಿಮರ ವಿರೋಧವೇ ಬಿಜೆಪಿಯ ಸಾಮರ್ಥ್ಯ.  ಕಾಶ್ಮೀರ ಹೊರತು ಪಡಿಸಿ ನೀವು ಎಲ್ಲಿಯೂ ಮುಖ್ಯಮಂತ್ರಿಯಾಗಬಾರದು ಎಂಬುವುದೇ ಅವರ ತೀರ್ಮಾನ. ದೇಶದ ಕೇವಲ ಮೂರು ಭಾಗದಷ್ಟು ಜನರು ವ್ಯವಸ್ಥಿತವಾದ ತಂತ್ರದ ಮೂಲಕ ಅಧಿಕಾರ ಪಡೆದಿದ್ದಾರೆ. ಅವರು 80% ಹಿಂದೂಗಳಲ್ಲಿ 18% ಮುಸ್ಲಿಮರ ಭಯವನ್ನು ಸೃಷ್ಠಿಸಿ ಒಗ್ಗಟ್ಟಾಗಿದ್ದಾರೆ. ನಿಮ್ಮ ವಿರೋಧ ಹೆಚ್ಚಿದಾಗಲೆಲ್ಲಾ ಅವರು ಬಲಶಾಲಿಗಳಾಗುತ್ತಿದ್ದಾರೆ. ಅದಕ್ಕಾಗಿ ಅವರು ನಿಮ್ಮನ್ನು ಕೆರಳಿಸುತ್ತಾರೆ.

ಎಂಐಎಂ ನಂತಹ ಪಕ್ಷಗಳು ಅವರಿಗೆ ಲಾಭದಾಯಕವಾಗಿದೆ. ಅವರು 30 ಅಥವಾ 40 ವರ್ಷಗಳ ನಂತರ ಬಲಿಷ್ಠರಾಗಿ ಅದನ್ನೂ ನಿಷೇಧಿಸುತ್ತಾರೆ. ನೀವು ಇಷ್ಟಪಡುವ ಯಾವುದೇ ಪಕ್ಷಕ್ಕೂ ನೀವು ಮತ ನೀಡಿ. ಆದರೆ ಎಂದಿಗೂ ಬಿಜೆಪಿಗೆ - ಆರ್ ಎಸ್ಸ್ ಎಸ್ಸ್ ಗೆ ಮತ್ತು ಮೋದಿಗೆ ಟೀಕಿಸಬೇಡಿ. ಅವರನ್ನು ವಿರೋಧಿಸಬೇಡಿ. ಆರ್ ಎಸ್ಸ್ ಎಸ್ಸ್ ಸಂಘಟನೆ ಇದೆ ಎಂಬುವುದನ್ನು ಮರೆತು ಬಿಡಿ. ಬಿಜೆಪಿ ಎಂಬ ಪಕ್ಷ ಇದೆ ಎಂಬುವುದನ್ನೂ ಮರೆತು ಬಿಡಿ. ಮೋದಿಯೆಂಬ ನಾಯಕ ಇರುವುದನ್ನೂ ಮರೆತು ಬಿಡಿ. ನಿಮ್ಮನ್ನು ಕಾಂಗ್ರೇಸ್ಸ್ - ಬಿಎಸ್ಪಿ - ಎಸ್ಪೀ ಎಲ್ಲರೂ ದೂರ ಮಾಡುವ ಕಾಲ ಸಮೀಪದಲ್ಲಿದೆ. ಕಾರಣ ಬಿಜೆಪಿ ನಿಮ್ಮನ್ನು ರಾಜಕೀಯವಾಗಿ ಅಸ್ಪ್ರಷ್ಯ ಮಾಡುವ ಎಲ್ಲಾ ತಂತ್ರಗಳನ್ನೂ ಪ್ರಯೋಗಿಸುತ್ತಿದೆ.

ನೀವು ಸುರಕ್ಷಿತರಾಗುವುದಕ್ಕೆ ಯಾವುದೇ ಮೀಸಲಾತಿ ಅಥವಾ ಪಕ್ಷಗಳ ಅಗತ್ಯವಿಲ್ಲ. ನಿಮ್ಮ ಗುರುತುಗಳನ್ನು ದೇಶದಲ್ಲಿ ಸ್ಥಿರಪಡಿಸಲು ನೀವು ಆಧುನಿಕ ತಂತ್ರಜ್ಞಾನ ಮತ್ತು ಶಿಕ್ಷಣದತ್ತ ಹೆಚ್ಚು ಗಮನ ಹರಿಸಿರಿ. ಸರಕಾರಿ ಇಲಾಖೆಗಳಲ್ಲಿ ಸ್ಥಾನ ಪಡೆಯುವ ಅಂಕಗಳನ್ನು ಪಡೆಯಲು ಪ್ರಯತ್ನಿಸಿ. ಮೀಸಲಾತಿ ಇಲ್ಲದೇ ನೀವು ನಿಮ್ಮ ಝಾಕಾತ್ ಮತ್ತು ಸದಕಾವನ್ನು ಶೈಕ್ಷಣಿಕ ಪ್ರಗತಿಗಾಗಿ ವಿನಿಯೋಗಿಸಲು ಪ್ರಯತ್ನಿಸಿ. ಇದು ಸ್ಪರ್ಧಾತ್ಮಕ ಯುಗ ಇಲ್ಲಿ ಗೆಲ್ಲುವುದು ಅಧ್ಯಯನಶೀಲ ಮತ್ತು ಜಗತ್ತಿಗೆ ಕೊಡುಗೆ ನೀಡುವ ಸಮುದಾಯ ಮಾತ್ರ. ನೀವು ಮೋದಿಯನ್ನು - ಆರ್ ಎಸ್ಸ್ ಎಸ್ಸ್ ನ್ನು ವಿರೋಧಿಸುವುದರಲ್ಲೇ ಸಮಯ ವ್ಯರ್ಥ ಮಾಡಿ ಅವರನ್ನು ಬೆಳೆಸುತ್ತಿದ್ದೀರಿ. ನೀವು ನಿಮ್ಮ ಸಮಾಜವನ್ನು ಬೆಳೆಸಿ - ನಿಮ್ಮ ಸಮುದಾಯವನ್ನು ಎಲ್ಲಾ ಕ್ಷೇತ್ರದಲ್ಲೂ ಪ್ರಬುದ್ದರನ್ನಾಗಿಸಿ. ಸ್ವಾತಂತ್ರ ಪೂರ್ವದಲ್ಲಿ ನೀವು 35% ಜನಸಂಖ್ಯೆ ಹೊಂದಿದ್ದೀರಿ. ಆಗ ಯಾವುದೇ ರಿಸರ್ವೇಶನ್ ಇಲ್ಲದೇ ನಿಮ್ಮ ಸಮುದಾಯ 35% ಸರಕಾರಿ ಕೆಲಸದಲ್ಲಿ ಪಾಲು ಪಡೆದಿತ್ತು. ಈಗ ನಿಮ್ಮ ಸ್ಥಿತಿ ಹೀಗೆ ಆಗಲು ನೀವೇ ಕಾರಣರು. ನೀವು ಮೋದಿಯನ್ನು - ಆರ ಎಸ್ಸ್ ಎಸ್ಸ್ ನ್ನು ಬದಲಾಯಿಸಲು ಆಗುವುದಿಲ್ಲ. ನೀವು ನಿಮ್ಮನ್ನು ಬದಲಾಯಿಸಿ ಆಗ ದೇಶಕ್ಕೆ ನಿಮ್ಮ ಅನಿವಾರ್ಯತೆಯ ಅರಿವಾಗುತ್ತದೆ.

ಈ ನಾಲ್ಕು ಅಭಿಪ್ರಾಯಗಳು ನಮ್ಮ ಮಟ್ಟಿಗೆ ಅಮೂಲ್ಯವಾಗಿದೆ.  ಒಂದನೇ ಅಭಿಪ್ರಾಯದ ಜನರು 10% ಇದ್ದಾರೆ, ಎರಡನೇ ಅಭಿಪ್ರಾಯದ ಜನರು 30% ಇದ್ದಾರೆ, ಮೂರನೇ ಅಭಿಪ್ರಾಯದ ಜನರು 60% ಇದ್ದಾರೆ, ನಾಲ್ಕನೇ ಅಭಿಪ್ರಾಯದ ಜನರನ್ನು ನಾವು ಸೃಷ್ಟಿಸಬೇಕಾಗಿದೆ. ಅದಕ್ಕಾಗಿರುವ ವಿಚಾರವನ್ನು ಹರಡುವುದು ನಮ್ಮ ಬಾಧ್ಯತೆಯಾಗಿದೆ.  ಸಮುದಾಯಕ್ಕೆ ನಾವು ಏನು ಮಾಡಿದ್ದೇವೆ ಎಂಬುವುದರ ಜೊತೆಗೆ ಅಲ್ಲಾಹನು ನಾಳೆ ನಮ್ಮಲ್ಲಿ "ನಿನಗೆ ನಾನು ನೀಡಿದ ಜ್ಞಾನವನ್ನು ನೀನು ಯಾವುದಕ್ಕೆ ಉಪಯೋಗಿಸಿದೆ ಎಂದು ಕೇಳುವಾಗ ನಮಗೆ ಉತ್ತರಿಸುವ ಅವಕಾಶಕ್ಕಾಗಿ ಈ ವಿಚಾರ ಜಾರಿಯಲ್ಲಿರಿಸುತ್ತೇವೆ".
🌾
ಸುನ್ನೀಟುಡೇ

(ಮುಂದುವರಿಯುವುದು)

ಸುನ್ನಿ ಟುಡೇ ೨

ಮುಸ್ಲಿಮರಿಗೆ ಬೇಕಿರುವುದು ಬಿಜೆಪಿಯ ಅಜೆಂಡಾದ ಜಾಗೃತಿಯಲ್ಲ, ಕಾಂಗ್ರೇಸ್ಸ್ ಪಕ್ಷದ ಅನಿವಾರ್ಯತೆಯ ಮಾಹಿತಿಯಲ್ಲ.....

🤔
ಸುನ್ನೀಟುಡೇ
ಭಾಗ -2

2006ರಲ್ಲಿ ಸಾಚಾರ್ ಕಮೀಟಿ ವರದಿಯನ್ನು ಯುಪಿಎ ಸರಕಾರ ಬಿಡುಗಡೆಗೊಳಿಸಿದಾಗ ಭಾರತದ ಮುಸ್ಲಿಮ್ ಸಮುದಾಯ ಧನ್ಯವಾಗಿತ್ತು. ಮುಸ್ಲಿಮರ ಕುರಿತು ರಿಪೋರ್ಟ್ ತಯಾರಿಸುವಲ್ಲಿ ಎಕ್ಸ್ ಪರ್ಟ್ ಆಗಿರುವ ಕಾಂಗ್ರೇಸ್ಸ್ ಗೆ ಈ ವರದಿಯು ತನ್ನ ವಿಫಲತೆಗೆ ಹಿಡಿದ ಕನ್ನಡಿ ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಆದರೂ ಮೂರ್ಖ ಮುಸ್ಲಿಮರು ಅದರ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರಿತು ಬಹಳ
ಧೈರ್ಯದಿಂದಲೇ ವರದಿಯ ಸಮಗ್ರ ಚಿತ್ರಣವನ್ನು ದೇಶದ ಮುಂದಿಟ್ಟಿತು. ಹಿಂದುಳಿದ ವರ್ಗಕ್ಕಿಂತ ಹಿಂದುಳಿದಿರುವ ಮುಸ್ಲಿಮರನ್ನು ದೇಶದ ಅತ್ಯಂತ ನತದೃಷ್ಠ ಸಮೂಹವೆಂದು ತೋರಿಸಿದ ವರದಿಯ ಬಗ್ಗೆ ಮುಸ್ಲಿಮ್ ಸಮುದಾಯ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಬಿಜೆಪಿ ಮತ್ತು ಆರ್ ಎಸ್ಸ್ ಎಸ್ಸ್ ನ್ನು ಇಲ್ಲಿ ಅಪರಾಧಿ ಮಾಡುವ ಯಾವುದೇ ಅವಕಾಶ ಇಲ್ಲದಾಗ ಸಮುದಾಯವು 'ಇದ್ ನಂಗಲೆ ಬಿದಿ' ಎಂದು ಹೇಳುತ್ತಾ ಅಲ್ಲೂ ತಮ್ಮ ಅಯೋಗ್ಯತನವನ್ನು (ಅಸಾಹಯಕತನ) ಪ್ರದರ್ಶಿಸಿತು.

2014ರ ವರೆಗೆ ಯುಪಿಎ ಸರಕಾರ ಆಡಳಿತ ನಡೆಸಿದ್ದರೂ ಈ ವರದಿಯ ಇಂಪ್ಲಿಮೆಂಟೇಶನ್ ಗೆ ಯಾವುದೇ ಕಾರ್ಯಕ್ರಮ ಅನುಷ್ಠಾನ ಗೊಳಿಸಲಿಲ್ಲ. ಸಾಚಾರ್ ವರದಿ ದೂಳು ಹಿಡಿದು ಹೋಯಿತು. ಸಮುದಾಯದ ಕೆಲವು ಸಾಮಾನ್ಯ ಜನರು ಇದಕ್ಕೆ ಪರಿಹಾರ ಹುಡುಕುವ ಪ್ರಯತ್ನ ಮಾಡಿದರು. ಹಲವು ಸಂಘಸಂಸ್ಥೆಗಳು ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿ ಸುಧಾರಣೆಗಾಗಿ ಅವಿರತ ಶ್ರಮಿಸಿದರು. ಝಕಾತ್ ಪೌಂಡೇಶನ್ ಆಫ್ ಇಂಡಿಯಾ ಎಂಬ ಸಂಘಟನೆಯು ಸಿವಿಲ್ ಸರ್ವಿಸ್ ನಲ್ಲಿ ಮುಸ್ಲಿಮರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಮಹತ್ವದ ಕಾರ್ಯಾಚರಣೆ ನಡೆಸಿತು. ಇದರ ಫಲ 2006 ಸಿವಿಲ್ ಸರ್ವಿಸ್ ನಲ್ಲಿ 3% ಇದ್ದ ಮುಸ್ಲಿಮರ ಭಾಗವಹಿಸುವಿಕೆ 2018ಕ್ಕೆ 4% ಕ್ಕೆ ಏರಿತು. ಬಿಜೆಪಿ ಸರಕಾರ ಇರುವ ಈ ಭಯಪೀಡಿತ ( ಭಪಪಡುವವರಿಗೆ) ಅವದಿಯಲ್ಲಿ ಅಂದರೆ 2016 ರಲ್ಲಿ ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ 50 ಮುಸ್ಲಿಮ್ ಅಭ್ಯರ್ಥಿಗಳು ಐ ಎ ಎಸ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಟಾಪ್ 100 ರಲ್ಲಿ ಗುರುತಿಸಿಕೊಂಡು ಮಹಾ ಸಾಧನೆ ಮಾಡಿದ್ದರು. ವಿಶೇಷವಾಗಿ 50 ಅಭ್ಯರ್ಥಿಗಳೂ ದೇಶಸೇವೆಯ ಕರ್ತವ್ಯದಲ್ಲಿ ತೊಡಗಿಕೊಂಡಿದ್ದು ಸರಕಾರದ ಆಡಳಿತ ಯಂತ್ರದಲ್ಲಿ ಪಾಲು ನೀಡುತ್ತಿದ್ದಾರೆ.

ಈ ಯುವಕ ಮತ್ತು ಯುವತಿಯರ ಸಾಧನೆ ಯಾವುದೇ ಸರಕಾರದ ಕೃಪೆಯ ಕೊಡುಗೆಯಲ್ಲ. ಸಮುದಾಯದ ಯುವ ತಲೆಮಾರಿನ ಇಚ್ಚಾಶಕ್ತಿ ಹಾಗೇ ಸಂಘಸಂಸ್ಥೆಗಳ ಕಾರ್ಯತಂತ್ರದ ಫಲವಾಗಿದೆ. ಸಾಧಿಸುವ ಛಲವಿದ್ದರೆ ಸಂವಿಧಾನಿಕವಾಗಿ ನಮಗಿರುವ ಅವಕಾಶವನ್ನು ನ್ಯಾಯಯುತವಾಗಿ ಪಡೆದುಕೊಳ್ಳಬಹುದು. 3% ಇದ್ದಿದ್ದು 4% ಹೆಚ್ಚಿಸಲು ಇಲ್ಲಿ ಯಾರೂ ಬೀದಿಗೆ ಇಳಿಯಲಿಲ್ಲ, ವೇದಿಕೆ ಕಟ್ಟಲಿಲ್ಲ, ಹೋರಾಟ ಮಾಡಲಿಲ್ಲ. ಹೊರತಾಗಿ ಪ್ರತಿಭಾನ್ವಿತರನ್ನು ಗುರುತಿಸಿ ಅವರಿಗೆ ಮಾರ್ಗದರ್ಶನ ಮಾಡಿ ಸೌಲಭ್ಯ ನೀಡುವ ಸೇವೆ ಒದಗಿಸಲಾಯಿತು.
ಕಾಂಗ್ರೇಸ್ಸ್ ಪಕ್ಷವನ್ನು ಕಾಯಲಿಲ್ಲ, ಬಿಜೆಪಿಯನ್ನು ಭಯಪಡಲಿಲ್ಲ, ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರವಿಲ್ಲದೇ ಝಕಾತ್ ಪೌಂಡೇಶನ್ ನಂತಹ ಸಂಸ್ಥೆಗಳು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿದರು. ಮುಸ್ಲಿಮರಿಗೆ ಅತೀ ಅಗತ್ಯವಾಗಿ ಬೇಕಿರುವುದು ಬಿಜೆಪಿಯ ಅಜೆಂಡಾದ ಮಾಹಿತಿಯಲ್ಲ, ಕಾಂಗ್ರೇಸ್ಸ್ ನ ಅನಿವಾರ್ಯತೆ ಜಾಗೃತಿಯಲ್ಲ ಹೊರತಾಗಿ ಯಾವುದೇ ಪಕ್ಷವೂ ಅಧಿಕಾರಕ್ಕೆ ಬಂದರೂ ಸಂವಿಧಾನಿಕವಾಗಿ ನಮ್ಮ ಹಕ್ಕು ಮತ್ತು ನ್ಯಾಯವನ್ನು ಹೇಗೆ ಪಡೆಯಬಹುದು ಎಂಬ ಕುರಿತ ಕಾರ್ಯಾಗಾರವಾಗಿದೆ.

ಸಿದ್ದರಾಮಯ್ಯ ಸರಕಾರ ಅಕ್ಕಿ ಕೊಟ್ಟಿದೆ, ಕ್ಯಾಂಟೀನ್ ಕೊಟ್ಟಿದೆ ಹಾಗಾಗಿ ನಾನು ಕಾಂಗ್ರೇಸ್ಸ್ ಗೆ ಓಟು ಹಾಕುತ್ತೇನೆ ಎಂಬ ಮೂರ್ಖರ ಬರಹವನ್ನು ಪ್ರಸಾರ ಮಾಡುವ ಮೊದಲು ನಾವು ಚಿಂತಿಸಬೇಕಾದ್ದು ಈ ಅಕ್ಕಿ ಮತ್ತು ಕ್ಯಾಂಟೀನ್ ಸಮುದಾಯದ ಸಬಲೀಕರಣಕ್ಕೆ ಎಷ್ಟರ ಮಟ್ಟಿಗೆ ಉಪಕಾರಿ ಎಂದಾಗಿದೆ. ಅಕ್ಕಿ ಕೊಡುವುದು ಮುಸ್ಲಿಮರಿಗೆ ಮಾತ್ರವಲ್ಲ ರಾಜ್ಯದ ಎಲ್ಲಾ ಬಡವರಿಗೂ ಅಕ್ಕಿ ಸಿಗುತ್ತದೆ ಆದರೆ ಈ ಅಕ್ಕಿಗೂ ನಮ್ಮ ಓಟಿನ ಹಕ್ಕಿಗೂ ಏನು ಸಂಬಂಧ ? ಸರಕಾರ ಜನಪರವಾಗ ಬೇಕಾದರೆ ಇಂತಹಾ ಕಾರ್ಯಕ್ರಮ ಅನಿವಾರ್ಯ ಹಾಗೇ ನೋಡುವುದಾದರೆ ನಾವು ಯಡಿಯೂರಪ್ಪರನ್ನು ಬೆಂಬಲಿಸಬೇಕು. ಮೈನಾರಿಟೀ ನಿಗಮಕ್ಕೆ ಅನುದಾನವನ್ನು ನೂರು ಕೋಟಿ ದಾಟಿಸಿದ್ದು ಕೊನೆಗೆ ಅದು 500 ಕೋಟಿಯಾಗಿ ಏರಿಕೆಯಾಗಿದ್ದು ಬಿಜೆಪಿ ಸರಕಾರದಲ್ಲಾಗಿತ್ತು. ನಾವು ಯುಟೀ ಖಾದರ್ ಸೂರ್ಯ , ರಮಾನಾಥ ರೈ ಚಂದ್ರ , ಕಾರ್ಯಕರ್ತ ನಕ್ಷತ್ರ ಎಂದು ನಕ್ಷತ್ರ ಎಣಿಸುವುದರಲ್ಲೇ ಇದ್ದೇವೆ. ಈ ಸೂರ್ಯ ಚಂದ್ರ ರ ಮೂಲಕ ನಾವು ಸಮುದಾಯಕ್ಕೆ ಯಾವ ಪ್ರಯೋಜನ ಪಡೆದುಕೊಂಡಿದ್ದೇವೆ ? ಇವರ ಮಂತ್ರಿ ಪಧವಿಯ ಪ್ರಯೋಜನ ಪಡೆದು ನಾವೆಷ್ಟು ಶಿಕ್ಷಣ ಸಂಸ್ಥೆ ಅಥವಾ ಸರಕಾರೀ ಸೌಲಭ್ಯ ಪಡೆದುಕೊಂಡಿದ್ದೇವೆ ? ನಮ್ಮ ಸಂವಿಧಾನಿಕ ಹಕ್ಕು ಮತ್ತು ರಕ್ಷಣೆಯಲ್ಲಿ ಇವರ ನಿಲುವಿಗಳು ಯಾವುದು ?

ವೇದಿಕೆಯಲ್ಲಿ ಮೊಯಿಲಾಯ ಸಲ್ಲಿ ವಾ ಸಲ್ಲಿ ಹಾಡಿದ್ದಾ ? ಮದುವೆಗೆ ಬಂದು ಮದುಮಗನ ಜೊತೆ ಪೊಟೋ ತೆಗೆದದ್ದಾ ? ಅದೇ ನಮಗೂ ನಾನು ಮೇಲೆ ಹೇಳಿದ ಝಕಾತ್ ಪೌಂಡೇಶನ್ ನ ಮುಸ್ಲಿಮರಿಗೂ ಇರುವ ವ್ಯತ್ಯಾಸ. ನಾವು ಕ್ಷಣಿಕ ಲಾಭಕ್ಕಾಗಿ ಇಲ್ಲವೇ ಪ್ರತಿಷ್ಠೆಯ ಪ್ರದರ್ಶನಕ್ಕಾಗಿ ಈ ಸೂರ್ಯ
ಚಂದ್ರನನ್ನು ಬಳಸಿದೆವು ಆದರೆ ಝಕಾತ್ ಪೌಂಡೇಶನ್ ಸಂಸ್ಥೆಯು ದೂರದೃಷ್ಠಿಯ ಉದ್ದೇಶ ಇಟ್ಟು ಕಾರ್ಯಾಚರಿಸಿತು ಅದರ ಫಲ ಅಂಕಿಅಂಶ 3 ರಿಂದ 4 ಕ್ಕೆ ಏರಿತು.......

ಯುಟೀ ಖಾದರ್ ಮತ್ತು ರಮನಾಥ ರೈ ಯಿಂದ ನಾವು ಬಯಸಿದ್ದು ನಮ್ಮ ಬೀದಿರಂಪಾಟಕ್ಕೆ ನೇತೃತ್ವವನ್ನು, ಸ್ಟೇಷನಿಗೆ ಹೋದ ಯುವಕರನ್ನು ಬಿಡಿಸುವುದನ್ನು, ಪ್ರಭಾಕರ ಭಟ್ಟ್ ನ್ನು ಬಂದಿಸುವುದನ್ನು, ಅವ ಗುಳಿಗೆ ಪೂಜೆ ಮಾಡದಂತೆ ತಡೆಯುವುದನ್ನು,
ಕೇಸರಿ ಶಾಲು ನಿಷೇಧಿಸುವುದನ್ನು ಈಗ ನಮಗೂ ಆ ಸಂಘಪರಿವಾರಕ್ಕೂ ಏನೂ ವ್ಯತ್ಯಾಸವಿಲ್ಲ. ಅವರು ಮುಸ್ಲಿಮರ ಮೇಲಿನ ದ್ವೇಷಕ್ಕೆ ನಮ್ಮ ಮೇಲೆ ಕೋಮುವಾದಿ ಆಗುತ್ತಾರೆ ನಾವು ಕೇಸರಿ ಪಡೆಯ ಮೇಲಿನ ದ್ವೇಷಕ್ಕೆ ಕೋಮುವಾದಿಗಳಾಗುತ್ತೇವೆ. ನಮ್ಮ ಈ ವರ್ತನೆ ಯುಟೀ ಖಾದರ್ ಹಾಗೂ ರಮಾನಾಥ ರೈ ಗೆ ಕಂಟಕವಾಗಿದೆ. ಅವರಿಗೆ ಕಾಂಗ್ರೇಸ್ಸ್ ಆಗುವ ಅನಿವಾರ್ಯತೆ ಇದೆ. ಇಲ್ಲವಾದರೆ ಅವರು ಜಾತ್ಯಾತೀತರು ಆಗುವುದು ಹೇಗೆ ?.....ಇವರ ಜಾತ್ಯಾ ತೀ ಕಥೆ ಮುಂದೆ ಹೇಳುವೆ...!

ಮುಂದುವರಿಯುವುದು....
ಸುನ್ನೀಟುಡೇ

ಸುನ್ನಿ ಟುಡೇ ೧

ಇವರನ್ನೇ ಆರಿಸಿ ಎಂದು ಆದೇಶ ಮಾಡುವ ಸಮುದಾಯದ ಶ್ರೀಮಂತರು ಹಾಗೇ ವೈಟ್ ಕಾಲರ್ ಧುರೀಣರು ನಮ್ಮ ಮೇಲೆ ಅನ್ಯಾಯವಾಗಿದ್ದಾಗ ಎಲ್ಲಿ ಅಡಗಿದ್ದರು ?

ಉಳ್ಳಾಲ ದರ್ಗಾ ಕಮೀಟಿ ರಾಹುಲ್ ಗಾಂಧಿಯ ಹರಕೆ ಸಂದಾಯ ಮಾಡಿತೇ ?

ಸುನ್ನೀಟುಡೇ
ಭಾಗ - 1

ರಾಜ್ಯದ ಹಲವು ಕಡೆ ಮುಸ್ಲಿಮ್ ವಿದ್ವಾಂಸರು - ಸಾಮಾಜಿಕ ಹೋರಾಟಗಾರರು- ಶ್ರೀಮಂತರು ಹಾಗೇ ಸಂಘಸಂಸ್ಥೆಗಳ ಸಾಮಾಜಿಕ
ಧುರೀಣರು ಸಭೆಸೇರಿ ಮುಂದಿನ ಚುನಾವಣೆಯಲ್ಲಿ ತಮ್ಮ ರಾಜಕೀಯ ನಿಲುವುಗಳ ಕುರಿತು ಚರ್ಚಿಸಿದರು. ಅವರಲ್ಲಿ ಆಯ್ಕೆಗಳು ಇರಲಿಲ್ಲ. ದೂರದೃಷ್ಠಿಯ ಉದ್ದೇಶವೂ ಇರಲಿಲ್ಲ. ಮುಸ್ಲಿಮರಿಗೆ ಮುಂದಿನ ಸರಕಾರ ನೀಡಬೇಕಾದ ಕೊಡುಗೆಗಳ ಪಟ್ಟಿ ಇರಲಿಲ್ಲ. ಆಗ್ರಹಗಳಿಗಿಂತ ಹೆಚ್ಚಾಗಿ ಅವರಲ್ಲಿ ಇದ್ದದ್ದು ಆದೇಶವಾಗಿತ್ತು. ಭವಿಷ್ಯದ ಹಿತ ಚಿಂತನೆಗಿಂತ ಹೆಚ್ಚಾಗಿ ಕಾಣಿಸಿದ್ದು ಅಸ್ತಿತ್ವದ ಅಂಜಿಕೆಯಾಗಿತ್ತು. ಧ್ರಡತೆಗಿಂತ ಮಿಗಿಲಾಗಿ ಅವರನ್ನು ಸಾಧ್ಯತೆಗಳು ಭಯಪಡಿಸುತ್ತಿತ್ತು. ನಿರ್ಧಾರ ಮಾಡಿಯೇ ಬಂದಿರುವ ಹೃದಯಗಳಿಗೆ ಕನಸುಗಳಿರಲಿಲ್ಲ. ತನ್ನ ಶಕ್ತಿ ಸಾಮರ್ಥ್ಯವನ್ನು ಆತಂಕದ ಗುಬ್ಬಿಕತೆಗಳಿಗೆ ಮೀಸಲಿಟ್ಟು ಕೊನೆಗೆ ದಶಕಗಳ ಮೋಸಕ್ಕೆ ಸಮುದಾಯವನ್ನು ಬಲಿಕೊಡುವ ಅಭಿಪ್ರಾಯಗಳೇ ಎಲ್ಲರಿಗೂ ಇಷ್ಟವಾಯಿತು.

ಒಂದು ಸಮುದಾಯವು ತನ್ನನ್ನು ತಾನು
ಬದಲಾಯಿಸುವವರೆಗೆ ಅಲ್ಲಾಹನು ಕೂಡ ಅದರ ಸ್ಥಿತಿಯನ್ನು ಬದಲಾಯಿಸುವುದಿಲ್ಲ ಹೀಗೆ ಕುರ್ ಅನಿನಲ್ಲಿ ಇದೆ ಎಂದು ಗುರುಗಳು ಹೇಳಿದ್ದು ಕೇಳಿದ್ದೆ. ಆದರೆ ಕಾಂಗ್ರೇಸ್ಸಿಗೇ ಮತವನ್ನು ಕೊಡುತ್ತೇವೆ ಎಂದು ನೀಯತ್ತು ಮಾಡಿ ಬಂದವರಿಂದ ಬದಲಾವಣೆಯ ಉದ್ದೇಶ ನಿರೀಕ್ಷಿಸಲು ಸಾಧ್ಯವಿಲ್ಲ. ಅಲ್ಲಾಹನು ಹೇಳುತ್ತಾನೆ "ನೀವು ನನ್ನನ್ನು ಭಯಪಡಿರಿ ನಾನು ನಿಮಗೆ ಸಾಕು". ಆದರೆ ಬಿಜೆಪಿಯ ಭಯದಿಂದ ಬದುಕುವವರಿಗೆ ಮುಸ್ಲಿಮ್ ಸಂಘಶಕ್ತಿಯ ನಿರ್ಣಯಗಳನ್ನು ಮಾಡುವ ನೈತಿಕತೆ ಖಂಡಿತಾ ಇಲ್ಲ. ಮೋದಿ ಬರಬಾರದು ಎಂದು ಪ್ರಾರ್ಥಿಸಿದವರಿಗೆ ಅಲ್ಲಾಹನು ನಿರಾಶೆ ಕೊಟ್ಟಿಲ್ಲವೇ ? ಅಧಿಕಾರ ತಾನು ಇಚ್ಚಿಸಿದವರಿಗೆ ಕೊಡುತ್ತೇನೆ ಎಂದು ಹೇಳಿದ ದೇವನು ಗೆದ್ದಿಲ್ಲವೇ ? ಒಂದು ನಿರ್ಧಾರ ಒಟ್ಟು ಸಮುದಾಯ ಹಾಗೂ ಸಮಾಜದ ಸ್ಥಿತಿಯನ್ನು ಬದಲಾಯಿಸುತ್ತದೆ ಎಂದು ಗೊತ್ತಿದ್ದೂ ಮತ್ತೆ ಅದೇ ತಪ್ಪಿನ ನಿರ್ಧಾರವನ್ನು ಮಾಡುವುದು ಸ್ವಾರ್ಥ ಸಾಧನೆಯ ಹಸಿವು ತಣಿಸುವ ಹುನ್ನಾರವಲ್ಲವೇ ? ಬಲಿಯಾಗುವುದು ನೀವಲ್ಲ, ಒಟ್ಟು ಸಮುದಾಯ ಎಂದು ಗೊತ್ತಿದ್ದರೂ ತನ್ನ ಅಸ್ತಿತ್ವ - ಉಧ್ಯಮ - ಸಂಘಸಂಸ್ಥೆ - ಕಾರ್ಯಾಚರಣೆಗಳನ್ನು ಉಳಿಸಲು ಒಂದು ಪಕ್ಷವನ್ನು ಗೆಲ್ಲಿಸುವ ನಿಲುವುಗಳಿಗೆ ಸಮುದಾಯದ ಸಭೆ ಎಂದು ಕರೆಯುವುದಿಲ್ಲ. ಅಲ್ಲಾಹನು ನನ್ನಲ್ಲಿ ಭರವಸೆ ಇಡಿ ಎಂದು ಹೇಳುವಾಗ ನೀವು ಕಾಂಗ್ರೇಸ್ಸ್ ಮೇಲೆ ಇಟ್ಟ ಭರವಸೆ ಮೆಚ್ಚಲೇ ಬೇಕು...!

ಚುನಾವಣೆಗೆ ತಿಂಗಳುಗಳು ಇರುವಾಗ ನಿಮಗೆ ಸಮುದಾಯದ ರಾಜಕೀಯ ಅಸ್ತಿತ್ವ ಮತ್ತು ನಿಲುವುಗಳ ಕುರಿತು ನೆನಪು ಬಂದಿದ್ದು ಯಾಕೆ ? ಮತದಾನದ ಮಹತ್ವ ಅರಿವಾದದ್ದು ಹೇಗೆ ? ಸಮುದಾಯದ ಮತಕ್ಕೆ ಇರುವ ಸಾಮರ್ಥ್ಯದ ಅರಿವು ಮೂಡಿದ್ದು ಹೇಗೆ ? ನಿಮ್ಮ ಸಭೆಗಳಲ್ಲಿ ಬರುವ ಶ್ರೀಮಂತರು ಹಾಗೇ ಸಮುದಾಯದ ವೈಟ್ ಕಾಲರ್ ಧುರೀಣರು ಈ ಮೊದಲು ಸಮುದಾಯಕ್ಕೆ ಅನ್ಯಾಯವಾದಾಗ ಎಲ್ಲಿ ಅಡಗಿದ್ದರು ? ಇವರು ನಡೆಸುವ ಬಿಲ್ಡಿಂಗ್ ಹಾಗೇ ಜಮೀನು ವ್ಯವಹಾರಕ್ಕೆ ಕುತ್ತು ಬಂದಿದೆ, ಕಳ್ಳ ವ್ಯಾಪಾರ ಹಾಗೇ ವಹಿವಾಟು ನೆಗೆದು ಬಿದ್ದಿದೆ ಅದಕ್ಕಾಗಿ ಇವರು ಒಂದು ಪಕ್ಷವನ್ನೇ ಗೆಲ್ಲಿಸಬೇಕು ಎಂದು ನಿಮ್ಮನ್ನು ಅಂಗಲಾಚುತ್ತಾರೆ. ಇವರ ಸಂಘಸಂಸ್ಥೆಗಳ ಮೇಲೆ ನಿಗಾ ಇರಿಸಲಾಗಿದೆ. ಸರಕಾರದಿಂದ ಅಲ್ಪಸಂಖ್ಯಾತರ ಹೆಸರಿನಲ್ಲಿ ದೋಚಿದ್ದು ಹಾಗೇ ವಕ್ಫ್ ಆಸ್ತಿ ನುಂಗಿ ಹಾಕಿದ್ದು ಬಯಲಾಗಬಾರದು ಎಂದು ಇವರು ತಮ್ಮ ರಕ್ಷಣೆಗಾಗಿ ಸಬೆ ಕರೆದಿದ್ದಾರೆ ಎಂದು ನಾನು ಹೇಳಿದರೆ ನಿಮಗೆ ಕೆಂಡದಂತ ಕೋಪ ಬರಬಹುದು.

ನಿಮಗೆ ದಕ್ಷಿಣ ಕನ್ನಡದ ಶ್ರೀಮಂತ ಮುಸ್ಲಿಮರ ಕಥೆ ಗೊತ್ತಿದೆಯೇ ? ಅವರಿಗೆ ಸಮುದಾಯದ ಮೇಲೆ ಎಷ್ಟು ಪ್ರೀತಿ ಇದೆಯೋ ಅದಕ್ಕಿಂತ ಮಿಗಿಲಾಗಿ ಕಾಂಗ್ರೇಸ್ಸಿನ ಭ್ರಷ್ಟತೆಯಲ್ಲಿ ಪಾಲು ಇದೆ. ಇವರು ಸಮುದಾಯಕ್ಕಾಗಿ ಏನು ಮಾಡಿದ್ದಾರೆ ಎಂದು ಒಮ್ಮೆ ಲೆಕ್ಕ ಹಾಕಿ ನೋಡಿ. ಇವರ ಮನೆ - ಕಾರು -ಉದ್ಯಮ ಎಷ್ಟು ವಿಸ್ತಾರವಾಗಿದೆ. ಆದರೆ ಮಂಗಳೂರಿನ ಖಾಝಿ ಇಂದಿಗೂ ಒಂದು ಹಂಚಿನ ಮನೆಯಲ್ಲಿ ಕಚೇರಿ ಹೊಂದಿದ್ದಾರೆ. ನಿಮಗೆ ಬಿಷಫ್ ಹೌಸ್ ಹಾಗೇ ಸ್ವಾಮೀಜಿಗಳ ಮಠಗಳ ಪರಿಚಯ ಇದೆಯಾ ? ಒಮ್ಮೆ ಯಾಕೆ ನೋಡಿ ಬರಬಾರದು ? ಹಾಗೇ ನಿಮ್ಮ ಖಾಝಿಯ ಹರುಕಳು ಗುಡಿಸಲನ್ನೂ. ಎಲ್ಲಿದೆ ಮುಸ್ಲಿಮ್ ಸಮುದಾಯ ಕೇಂದ್ರ ? ಎಲ್ಲಿದೆ ಇಸ್ಲಾಮಿಕ್ ಸೆಂಟರ್ ? ಎಲ್ಲಿದೆ ಮುಸ್ಲಿಮ್ ಕಮ್ಯುನಿಟೀ ಡೆವಲಪ್ ಮೆಂಟ್ ಸೆಂಟರ್ ? ಮುಸ್ಲಿಮ್ ಕಲ್ಯಾಣ ಕೇಂದ್ರದ ಉದ್ಘಾಟನೆಗೆ ಸಿಎಂ ಬಂದಂತಹ ವರದಿಯನ್ನು ಓದಿದ್ದೀರಾ ? 500 ಕೋಟಿಯಲ್ಲಿ ನಿರ್ಮಾಣವಾಗಿತ್ತಿರುವ ಭಂಟ್ಸ್ ಸಮುದಾಯ ಭವನ ನೋಡಿ ಅಲ್ಲಿ ಅವರ ಸಾಮಾಜಿಕ ಶೈಕ್ಷಣಿಕ ಕಲ್ಯಾಣಗಳು ನಡೆಯುತ್ತದೆ. ನಮ್ಮಲ್ಲಿ ನಮ್ಮ ರಕ್ತವನ್ನೇ ಹೀರುವ ಹಾಸ್ಪಿಟಲ್ ಗಳು, ನಮ್ಮನ್ನು ಬೋಳಿಸುವ 500 ಕೋಟಿಯ ವಾಣಿಜ್ಯ ಮಾಲ್ ಗಳು ಇದೆ. ಅಲ್ಪಸಂಖ್ಯಾತರ ಹೆಸರಿನಿಂದ ಸರಕಾರದಿಂದ ಮತ್ತು ವಕ್ಫ್ ನಿಂದ ಕಬಳಿಸಿದ ಕೇಂದ್ರಗಳು. ಒಬ್ಬ ಮುಖ್ಯಮಂತ್ರಿ ಬಂದರೆ ಮುಸ್ಲಿಮರ ಕೇಂದ್ರವನ್ನು ಭೇಟಿ ಮಾಡಲು ಎಲ್ಲಿ ಅವಕಾಶ ಇದೆ ? ಆಗ ಉಳ್ಳಾಲ ದರ್ಗಾಕ್ಕೆ ಚಪ್ಪರ ಹಾಕಬೇಕು ...! ಅ ಚಪ್ಪರದ ನೆರಳಲ್ಲಿ ಕಾಂಗ್ರೇಸ್ಸ್ ನವನಿಗೆ ಮಾತ್ರವೇ ನೆರಳು ಎಂದು ಬೈಲಾ ಬರೆಯಾಗಿದೆಯೇ ? ಅಥವಾ ರಾಹುಲ್ ಗಾಂದಿಯ ಹರಕೆಯನ್ನು ಯಾರಾದರೂ ತೀರಿಸಿದ್ದೇ ?ಎಸ್ಡೀಪಿಐನವನಿಗೆ ಉಳ್ಳಾಲ ದರ್ಗಾದಲ್ಲಿ ವೇದಿಕೆ ಮಾಡಿ ಕೊಡಬಹುದೇ ? ನರೇಂದ್ರ ಮೋದಿಗೆ ಅಲ್ಲಿ ರೆಡ್ ಕಾರ್ಪೆಟ್ ಸ್ವಾಗತ ಸಿಗಬಹುದೇ ? ನೀವು ರಾಹುಲ್ ಗಾಂಧಿಯನ್ನು ಬೇಟಿ ಆಗಲು
ಹಾಗೂ ಆ ಪುಣ್ಯ ಕೈ ಸ್ಪರ್ಶಿಸಲು ತೋರಿಸಿದ ತಖ್ವಾ ಮೆಚ್ಚಲೇ ಬೇಕು...
🐜
Sunnitoday
ಮುಂದುವರಿಯುವುದು.....