ಶನಿವಾರ, ಜುಲೈ 8, 2017

ಕರಾವಳಿ

ರಸ್ತೆ ಅಪಘಾತವಾದರೆ, ಪ್ರಕೃತಿ ವಿಕೋಪ ಘಟಿಸಿದರೆ, ನೆರೆಮನೆಯಲ್ಲಿ ಅನಾಹುತ ಸಂಭವಿಸಿದರೆ ಅಪ್ಪಿತಪ್ಪಿಯೂ ಧರ್ಮದ ಐಡಿ ಕಾರ್ಡ್ ಕೇಳದೆ ಸಹಾಯಕ್ಕೆ ನುಗ್ಗುವ  ಹೃದಯವಂತ ನಾಗರಿಕರಿರುವ ಕರಾವಳಿಯ ಬಗ್ಗೆ ಹೆಮ್ಮೆ ಎನಿಸುತ್ತದೆ...

ಆದರೆ ವಾಸಕ್ಕೆ ದೇಶದಲ್ಲೇ ಸುರಕ್ಷಿತ ಪ್ರದೇಶ ಎಂಬ ಬಿರುದು ಪಡೆದಿರುವ ಇದೇ ಕರಾವಳಿಯಲ್ಲಿ ಯಾರೆ ಒಬ್ಬನ ಮೇಲೆ ದಾಳಿ ನಡೆದರೆ ದಾಳಿಗೊಳಗಾದವನ ಧರ್ಮದ ಐಡಿ ಕಾರ್ಡ್ ಮೇಲೆ ನಮ್ಮ ಮುಂದಿನ ಪ್ರತಿಕ್ರಿಯೆ ನಿರ್ಭರವಾಗಿರುವುದು ವಿಪರ್ಯಾಸವಾಗಿದೆ.

ಇಂತಹ ಘಟನೆ ನಡೆದ ಕೂಡಲೆ ಪರಸ್ಪರ ಇನ್ನೊಂದು ಧರ್ಮದವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ತುದಿಗಾಲಲ್ಲಿ ಕೆಲವು ಅಬ್ಬೇಪಾರಿ (ಪದ ಬಳಕೆಗೆ ಕ್ಷಮೆ ಇರಲಿ) ರಾಜಕಾರಣಿಗಳು ಮತ ಎಣಿಕೆಗೆ ಕ್ಯಾಲಕ್ಯುಲೇಟರ್ ನೊಂದಿಗೆ ಪ್ರತ್ಯಕ್ಷರಾಗಿ ಬೂದಿ ಮುಚ್ಚಿದ ಕೆಂಡಕ್ಕೆ ಪೆಟ್ರೋಲ್ ಸುರಿದು ಮಾಯವಾಗುತ್ತಾರೆ.

ಅನ್ನ ಬೇಯಿಸಲು ನೀರು ಬಿಸಿ ಮಾಡು, ದಿನವಿಡಿ ದುಡಿದು ಅಕ್ಕಿ ತರುವೆ ಎಂದು ಹೊರಟ ಅಮಾಯಕ ರಿಕ್ಷಾ, ಟೆಂಪೋ ಚಾಲಕರ ವಾಹನಗಳ (ಅನ್ನದ ತಟ್ಟೆಯ) ಗಾಜುಗಳು ಪುಡಿಯಾಗುತ್ತವೆ. ಪುಡಿಯಾದ ಗಾಜಿನ ಚೂರುಗಳ ಮೇಲಿಂದ ಪೆಟ್ರೋಲ್ ಸುರಿದವರ ಕಾರುಗಳು ರೊಯ್ಯನೆ ಸಾಗುತ್ತವೆ. ದಾಳಿಗೊಳಗಾದ ಬಡ ವಾಹನ ಮಾಲಕ ತನ್ನ ಒಡೆದ ಗಾಜುಗಳ ಮೇಲಿಂದ ಸಾಗಿದ ಕಾರನ್ನೇ ಅಸಹಾಯಕನಾಗಿ ದಿಟ್ಟಿಸುತ್ತಾನೆ...

ಸಶೇಷ...

ಮುಖ್ತಾರ್ ಉಚ್ಚಿಲ.

ಶನಿವಾರ, ಜುಲೈ 1, 2017

ಯುವ ಶಕ್ತಿ

ಯವ್ವನ ಎಂಬ ಪದವೇ ಮೈಯನ್ನು ರೋಮಾಂಚನಗೊಳಿಸುತ್ತದೆ. ಪ್ರೌಡ ಹಂತವು ಕಳೆದು ಚಿಗುರು ಮೀಸೆ ಮೊಳಕೆಯೊಡೆಯುವ ಸನ್ನಿವೇಶದಲ್ಲಿ ಮನಷ್ಯ ಭಯವೆಂಬ ಗುಣವನ್ನೇ ಮರೆತು ತಾನು ಬಯಸಿದ್ದನ್ನು ಮಾಡಿಯೇ ತೀರುವೆನೆಂಬ ದೃಡವಾದ ಸಂಕಲ್ಪವನ್ನು ಹೊಂದಿರುತ್ತಾನೆ. ಯುವ ಶಕ್ತಿ ಎಂದರೆ ಪರಮಾಣು ಶಕ್ತಿಗಿಂತಲೂ ಮಿಗಿಲು. “Atomic Power is not than Youth Power” ಎಂಬ ಅನುಭವ ನುಡಿಯು ಕೇವಲ ಉತ್ಪ್ರೇಕ್ಷೆಯಲ್ಲ.
ಚರಿತ್ರೆಯನ್ನು ಕೆದಕುವಾಗ ಅದೆಷ್ಟೋ ಸಾಹಸಗಳ, ಯುದ್ದಗಳ, ವೀರ ಕ್ರೂರ ಪರಾಕ್ರಮಗಳ, ಹಿಂದೆ ಯುವಕರಲ್ಲದೆ ಇನ್ಯಾರು.?
ಬಿಸಿ ರಕ್ತವು ನರನಾಡಿಗಳಲ್ಲಿ ಸಂಚರಿಸುವ ತಾರುಣ್ಯವು ಯಾವತ್ತೂ ಅಂಜಿಕೆಗಳಿಗೆ ಶರಣಾಗದು. ಹಿಮಾಲಯ ಪರ್ವತದ ತುತ್ತ ತುದಿಯನ್ನೇರಿ ನಿರಾಳವಾದ ನಿಟ್ಟುಸಿರನ್ನು ಬಿಟ್ಟ ತೇನ್‌ಸಿಂಗ್ ನೋರ್ಕೆ ಒಬ್ಬ ಯುವಕನಾಗಿದ್ದನು. ದೈತ್ಯವಾದ ಕಡಲಿನ ತೆರೆಮಾಲೆಗಳನ್ನು ಸೀಳಿ ಯುರೋಪ್‌ನಿಂದ ಜಲಮಾರ್ಗವಾಗಿ ಹಲವಾರು ತಿಂಗಳುಗಳ ಯಾನ ಮಾಡಿ ದಕ್ಷಿಣ ಭಾರತದ ಕಲ್ಲಿಕೋಟೆಯಲ್ಲಿ ಬಂದಿಳಿದ ನಾವಿಕ ಕೊಲಂಬಸನೂ ಬಿಸಿರಕ್ತ ಹರಿಯುವ ತರುಣನಾಗಿದ್ದನು. ದೇಶದ ಗಡಿಗಳನ್ನು ಹಗಲು ರಾತ್ರಿ ಎನ್ನದೆ ಪಹರೆ ಕಾಯುತ್ತಿರುವ ಸೇನಾಪಡೆಗಳು ಯುವಕರ ದಂಡುಗಳಾಗಿವೆ. ಪ್ರಾಣವನ್ನೇ ಒತ್ತೆಯಿಟ್ಟು ಗಣಿಗಳ ಆಳಕ್ಕಿಳಿದು ಕಚ್ಚಾ ವಸ್ತುಗಳನ್ನು ಹೊರತೆಗೆಯುವ ಸಾಹಸಿಗಳೂ ಯುವಕರಾಗಿದ್ದಾರೆ. ಒಟ್ಟಿನಲ್ಲಿ ಯವ್ವನವು ಅದ್ಭುತವಾದ ಕಾಲ.
ಪ್ರವಾದಿ(ಸ.ಅ) ಹೇಳುತ್ತಾರೆ, ನಾಳೆ ಪರಲೋಕದಲ್ಲಿ ಅಲ್ಲಾಹನ ಮುಂದೆ ಎಲ್ಲರೂ ಸಂಗಮಿಸುವ ವೇಳೆಯಲ್ಲಿ ಅಲ್ಲಾಹನ ವಿಚಾರಣೆಯು ಬಹಳ ಗೌರವ ಪೂರ್ಣವಾಗಿರುತ್ತದೆ. ಪ್ರಮುಖವಾಗಿ ನಮ್ಮ ಯವ್ವನದ ಬಗ್ಗೆ ಅಲ್ಲಾಹು ಕೇಳುವನು. ಓ ಮನುಷ್ಯ ನಿನಗೆ ನಾನು ಆರೋಗ್ಯಪೂರ್ಣ ಯವ್ವನವನ್ನು ನೀಡಲಿಲ್ಲವೇ? ಅದನ್ನು ನೀನು ಹೇಗೆ ವ್ಯಯಿಸಿದೆ.?”
ಈ ಪ್ರಶ್ನೆಗೆ ಉತ್ತರಿಸದೇ ನಿಂತಲ್ಲಿಂದ ಒಂದು ಹೆಜ್ಜೆಯನ್ನು ಮುಂದಿಡಲು ಸಾದ್ಯವಿಲ್ಲ. ಎಲ್ಲರೂ ಕೈಕಟ್ಟಿ ಉತ್ತರಿಸಬೇಕಾದ ದಿನವದು. ಲಹರಿ ಪದಾರ್ಥಗಳ ದಾಸರಾಗಿ ಸುಂದರ ಭವಿಷ್ಯವನ್ನು ಬಲಿಕೊಡುತ್ತಿರುವ ಮುಗ್ದ ಯುವಕರು ಆಲೋಚಿಸಲು ಈ ಪವಿತ್ರ ಹದೀಸ್ ಸಾಕಾಗಿದೆ. ಆಡಂಭರದ ಜೀವನವನ್ನು ಕನಸು ಕಂಡು ಅದರ ನೆನಪಿಗಾಗಿ ಏನನ್ನು ಮಾಡಲೂ ಹೇಸದ ಲಜ್ಜಗೆಟ್ಟ ಯುವ ಸಮೂಹವೊಂದು ಬೆಳೆದು ಬರುತ್ತಿರುವಾಗ ಅದರ ವಿರುದ್ದ ಧಾರ್ಮಿಕ ಚಿಂತನೆಗಳಿಂದ ನೈತಿಕತೆಯ ಹಾದಿಯನ್ನು ತುಳಿಯುವ ಯುವಕರ ತಂಡವೂ ಸೃಷ್ಟಿಯಾಗಬೇಕಿದೆ.
ಸತ್ಯಮಾರ್ಗದಲ್ಲಿ ನಿರಂತರವಾಗಿ ಹೋರಾಡುವ ಒಂದು ವಿಭಾಗವು ನನ್ನ ಸಮುದಾಯದಲ್ಲಿದೆ. ಎಂಬ ಪ್ರವಾದಿ ವಚನದಡಿಯಲ್ಲಿ ಒಗ್ಗೂಡುವ ಮಾದರಿ ಯುವಕರ ಗುಂಪನ್ನು ನಾವು ರೂಪಿಸುವುದು ಅನಿವಾರ್ಯವಾಗಿದೆ.
ಚಿಕ್ಕಾಸಿನ ಆಮಿಷಕ್ಕೆ ಯುವಕರನ್ನು ಬಲಿ ನೀಡುವ ಭ್ರಷ್ಟ ಅಧಿಕಾರಿಗಳ ಕಪಟ ನಾಟಕವನ್ನು ಅರ್ಥೈಸುವಂತಹ ಪ್ರಜ್ಷೆಯುಳ್ಳ ಯುವಕರು ಸೃಷ್ಟಿಯಾಗಬೇಕು. ಪಕ್ಷ, ಹಣ, ಕೋಮು ಮುಂತಾದ ವಿಷಪ್ರಾಶನ ನೀಡಿ ಯುವಕರ ಬ್ರೈನ್‌ವಾಶ್ ನಡೆಸುವ ದುರುಳರನ್ನು ಗುರುತಿಸುವ ಯುವಕರು ಸಮಾಜಕ್ಕೆ ಅವಶ್ಯವಾಗಿದೆ.
ಮೇಯಿಸುವವನಿಲ್ಲದ ಮೇಕೆಗಳಂತೆ” ನಾಯಕತ್ವವಿಲ್ಲದೆ ನಮ್ಮ ಯುವ ಪೀಳಿಗೆ ಚೆಲ್ಲಾಪಿಲ್ಲಿಯಾಗಿದೆ. ಸುಭದ್ರವಾದ ನಾಯಕತ್ವ ಮತ್ತು ಉತ್ತಮವಾದ ಮಾರ್ಗದರ್ಶನ ಲಭಿಸಿದರೆ ಖಂಡಿತಾ ಯುವಶಕ್ತಿಯನ್ನು ಸರಿದಾರಿಯಲ್ಲಿ ಮುನ್ನಡೆಸಬಹುದು.
ಸಮುದಾಯದಲ್ಲಿರುವ ಅನೈಕ್ಯತೆ, ಪಕ್ಷಪಾತ ಧೋರಣೆಗಳನ್ನು ಕಂಡು ಯುವಶಕ್ತಿಯು ಮುಜುಗರ ಪಟ್ಟುಕೊಳ್ಳುತ್ತಿವೆ. ದರ್ಮದ ಹೆಸರಿನಲ್ಲಿ ಆಂತರಿಕ ಕಚ್ಚಾಟ ನಡೆಸುವವರಿಗೆ ಕುಮ್ಮಕ್ಕು ನೀಡಿ ತಮ್ಮ ಬೇಳೆ ಬೇಯಿಸಲು ಬಾಹ್ಯ ವೈರಿಗಳಿಗೆ ಬಹಳ ಸುಲಭವಾಗುತ್ತದೆ.
ಚಿಲ್ಲರೆ ವಿಷಯಗಳಿಗಾಗಿ ಮುಖ ತಿರುಗಿಸಿ ನಡೆಯುತ್ತಿರುವ, ಸಂಕುಚಿತ ಮುನೋಭಾವಗಳನ್ನು ಕೊನೆಗೊಳಿಸಬೇಕು. ಸ್ವ-ಹಿತಾಶಕ್ತಿಗಳನ್ನು ಬದಿಗಿರಿಸಿ ಸಮುದಾಯಕ್ಕಾಗಿ ದುಡಿಯುವ ವಿಶಾಲ ಮನಸನ್ನು ಬೆಳೆಸಬೇಕು. ವೇದಿಕೆಗಳನ್ನು ಕಟ್ಟಿ ಪರಸ್ಪರ ದೂಷಣೆಗಳನ್ನು ಮಾಡುವ ವಿಷಕಾರಿ ಭಾಷಣಗಳನ್ನು ಕೊನೆಗೊಳಿಸಿ ನಮ್ಮ ನಾಲಗೆ ಮತ್ತು ಕೈಗಳಿಂದ ಒಳಿತನ್ನು ಮಾತ್ರವೇ ಮಾಡುವ ಪ್ರತಿಜ್ಞೆಗಳನ್ನು ಕೈಗೊಳ್ಳಬೇಕು.
ಪರಸ್ಪರ ಮೈ ಪರಚಿಕೊಳ್ಳುವ ಕಾರ್ಯಕ್ರಮಗಳನ್ನು ಯುವಕರು ತಣ್ಣೀರೆರಚಿ ನೀರಸಗೊಳಿಸಬೇಕು. ವಿದ್ಯಾಭ್ಯಾಸದ ವಿಷಯದಲ್ಲಿ ಮುಂದುವರಿಯುವ ಉನ್ನತ ಸಮುದಾಯವಾಗಿ ರೂಪುಗೊಳ್ಳಬೇಕು. ಮೋರಿಗಳ ಮೇಲೆ, ಅಂಗಡಿ ಬದಿಯಲ್ಲಿ, ಬೀದಿಗಳಲ್ಲಿ ನಿಂತು ಸಮಯವನ್ನು ಕೊಲ್ಲುವ ಬೀದಿ ಬೀಕಾರಿಗಳ ಸಂಘಗಳಲ್ಲಿ ನಮ್ಮ ಹೆಸರು ಶಾಮಿಲಾಗದಂತೆ ನೋಡಿಕೊಳ್ಳಬೇಕು. ಪ್ರವಾದಿ (ಸ.ಅ) ಹೇಳುತ್ತಾರೆ. ’ರಸ್ತೆಯಲ್ಲಿ ನಡೆದುಕೊಂಡು ಹೋಗುವವರಿಗೆ ಅವರ ಅವಕಾಶಗಳನ್ನು ಬಿಟ್ಟುಕೊಡಿ. ಅವರಿಗೆ ತೊಂದರೆ ಕೀಟಲೆಗಳನ್ನು ನೀಡಬಾರದು. ವಿನಾಕಾರಣ ದಾರಿಹೋಕರನ್ನು ನಿಂದಿಸಿ ಛೇಡಿಸಿ ಅವರ ತೇಜೋವಧೆ ನಡೆಸುವ ಯುವಕರ ಕೆಲವು ಸಂಘಗಳನ್ನು ಕಾಣಬಹುದು. ಕೆಲವರಂತೂ ಮುಗ್ದ ಹೆಂಗಸರನ್ನು ಈ ರೀತಿ ಕೀಟಲೆ ಮಾಡುವುದುಂಟು. ನಿಜವಾಗಿಯು ಇದು ಮಹಾ ಅಪರಾಧ. ರಸ್ತೆಯಲ್ಲಿರುವ ಮುಳ್ಳುಗಳನ್ನು ಬದಿಗೆ ಸರಿಸಿರಿ ಅದು ಮಹತ್ತರವಾದ ದಾನ ಧರ್ಮವಾಗಿದೆ. ಎಂದು ಸಾರಿ ಹೇಳಿದ ಪ್ರವಾದಿ ಅನುಯಾಯಿಗಳಿಗೆ ಇದು ಭೂಷಣವಲ್ಲ.
ಸಮುದಾಯ ನಿರಂತರವಾಗಿ ಅನುಭವಿಸಿಕೊಂಡು ಬರುತ್ತಿರುವ ಹಲವಾರು ಸಮಸ್ಯೆಗಳನ್ನು ಬೊಟ್ಟುಮಾಡಿ ಅದರ ನಿವಾರಣೆಗಾಗಿ ಪರಿಹಾರ ಮಾರ್ಗವನ್ನು ಕಂಡು ಹಿಡಿಯಲು ಯುವಶಕ್ತಿ ಮುಂದಾಗಬೇಕು. ಸಮುದಾಯದ ಉಲಮಾಗಳಿಂದ ಮಾರ್ಗದರ್ಶನ ಪಡೆದು ಮುಂದುವರಿದರೆ ಖಂಡಿತಾ ಯಶಸ್ಸನ್ನು ಸಾಧಿಸಬಹುದು.
ಸಮಾಜದಲ್ಲಿ ಪೆಡಂಭೂತವಾಗಿ ವಕ್ಕರಿಸುತ್ತಿರುವ ವರದಕ್ಷಿಣೆ, ಮೌಢ್ಯ, ನೂತನವಾದಗಳು ಕೊನೆಗೊಳ್ಳದೆ ಸಮುದಾಯ ತಲೆ ಎತ್ತಿ ನಿಲ್ಲಲು ಸಾದ್ಯವಿಲ್ಲ. ಆಲೋಚನಾ ಶಕ್ತಿಯುಳ್ಳ ಯುವಶಕ್ತಿ ಒಂದು ನಾಡಿನಲ್ಲಿದ್ದರೆ ಆ ನಾಡನ್ನು ಅಭಿವೃದ್ಧಿಗೊಳಿಸಲು ಬಹಳ ಸುಲಭ. ಮಸೀದಿಗಳ ಮುಂದೆ ಇನ್ನೊಂದು ಮಸೀದಿ ಕಟ್ಟುವ ಸಂಪ್ರದಾಯವನ್ನು ಕೊನೆಗೊಳಿಸಬೇಕು. ಧರ್ಮದ ಪ್ರಚಾರ ಅವಶ್ಯಕತೆ ಇರುವ ಅದೆಷ್ಟೋ ಊರು ಕೇರಿಗಳು ನಮ್ಮ ಕರ್ನಾಟಕದಲ್ಲೇ ಇದೆ. ಧರ್ಮದ ಸಂದೇಶಗಳು ಅತ್ತ ರವಾನಿಸಬೇಕು. ಮಾಡುವ ಕಾರ್ಯಗಳೆಲ್ಲವೂ ಅಲ್ಲಾಹನಿಗಾಗಿ ಎಂಬ ನಿಯ್ಯತ್ತಿನಲ್ಲಿರಬೇಕು. ಬಡತನ ನಿರುದ್ಯೋಗ ಮುಂತಾದ ಹಲವಾರು ಸಮಸ್ಯೆಗಳು ಸಮುದಾಯವನ್ನು ತಲ್ಲಣಗೊಳಿಸಿದೆ. ಇವುಗಳನ್ನು ತೊಡೆದು ಹಾಕಿ ಸಮುದಾಯವನ್ನು ಮೇಲಕ್ಕೆತ್ತುವ ಕಾರ್ಯಗಳನ್ನು ರೂಪಿಸಿಕೊಂಡು ನಿರಂತರವಾಗಿ ಸಮುದಾಯ ತ್ಯಾಗಿಗಳಾಗಿ ಬಾಳುವ ಪ್ರತಿಜ್ಞೆಯನ್ನು ಕೈಗೊಳೋಣ…

ವಿ.ಟಿ ಅಬ್ದುಲ್ಲಾ ಕೋಯ ತಂಙಲ್ ರವರ ಭಾಷಣದ ಸಾರಾಂಶ.

ಹಬ್ಬ ಆಚರಿಸಲು ಹೋಗುತ್ತಿದ್ದ ಜುನೈದ್ ಎಂಬ ಹುಡುಗನನ್ನು ಬೀದಿ ನಾಯಿಯಂತೆ ಹೊಡೆದು ಕೊಲ್ಲಲಾಯಿತು.
ನಮ್ಮ ದೇಶದಲ್ಲಿ ಮನುಷ್ಯನಿಗಿಂತ ಪಶುವನ್ನು ಮೃಗವನ್ನು ಹೆಚ್ಚು ಪ್ರೀತಿಸಲಾಗುತ್ತಿದೆ. ಅಂತಹವರ ಕೈಯಲ್ಲಿ ಅಧಿಕಾರ ಇದೆ. ಅಂತಹ ಹಲವು ಘಟನೆಗಳು ನಡೆಯತ್ತಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ನಡೆಯುತ್ತಿರುವ ಚರ್ಚೆಗಳು ಆರೋಗ್ಯಕರವಲ್ಲ ಎಂದು ಪರಿಶೀಲನೆ ನಡೆಸಿದಾಗ ಮನವರಿಕೆಯಾಯಿತು.
ಸಮಸ್ಯೆಗಳು ಇಂದು ಪ್ರಾರಂಭವಾದದ್ದೇ?
ಸಂಘಪರಿವಾರವನ್ನು ಸಮರ್ಥಿಸಲು ಆ ಭಾಷೆಯಲ್ಲಿ ಹೇಳುತ್ತಿಲ್ಲ.  ಬಹಳ ಶಾಂತಚಿತ್ತದೊಂದಿಗೆ ನೀವು ಚಿಂತಿಸಲು ಹೇಳುತ್ತಿದ್ದೇನೆ.
ಇದಕ್ಕಿಂತ ದೊಡ್ಡ ದೊಡ್ಡ ಕೋಮುಗಲಭೆಗಳು ಈ ಭಾರತದಲ್ಲಿ ನಡೆದಿಲ್ಲವೇ?  ಭಾರತ ಸ್ವಾತಂತ್ರ್ಯ ಗೊಂಡ ನಂತರ ಕೋಮುಗಲಭೆಯ ಒಂದು ಭೂಪಟವೇ ನಮ್ಮ ಕೈಯಲ್ಲಿದೆ.ಥಾಣೆ, ಪೂನ,ಮುರ್ಷಿದಾಬಾದ್,ಬಾಗಲ್ಪುರ, ಜಮ್ಶೆಡ್ಪುರದ ಕೋಮು ಗಲಭೆಯಲ್ಲಿ ಹೀಗೆ ದೊಡ್ಡ ದೊಡ್ಡ ನರಮೇಧಗಳು ನಡೆದಿವೆ‌. ಒಂದು ಪ್ರದೇಶವನ್ನೇ ಸುಟ್ಟ ಭಸ್ಮಗೊಳಿಸಿ, ಜನರ ಕೊಲೆ ನಡೆಸಿದ ಕೋಮು ಗಲಭೆಯಗಳನ್ನು ನಾವು ಕಂಡಿಲ್ಲವೇ?
ಆಗೆಲ್ಲಾ ನಾವು ಬಹಳ ಸಮಾಧಾನದೊಂದಿಗೆ ನಾವು ಈದ್ ಆಚರಿಸಿದ್ದೇವೆ. ಯಾಕೆಂದರೆ ಅಂದು ಸೋಶಿಯಲ್ ಮಿಡಿಯಾ ಇರಲಿಲ್ಲ.
ಯುಕ್ತಿಯ ಮಹತ್ವವನ್ನು ನಾವು ಅರಿತಿಲ್ಲ. ಇಂತಹ ಘಟನೆಗಳನ್ನು ಎದುರಿಸುವುದು ನಾವು ಸಂಘ ಪರಿವಾರದ ಅಜೆಂಡಾಗಳಿಗೆ ಜಯ, ಯಶಸ್ಸು ನೀಡಿ ಅಲ್ಲ.
ಹಿಂದೂ ಮುಸ್ಲಿಂ ಪರಸ್ಪರ ಬೇರ್ಪಟ್ಟು ನಿಲ್ಲಬೇಕು ಎಂಬುದು ಅವರ ಉದ್ದೇಶ. ಈಗ ನಮ್ಮ ಜೀವನ ಹಿಂದೂ ಮುಸ್ಲಿಂ ಪರಸ್ಪರ ಬೇರ್ಪಟ್ಟು ಈಗ ಜೀವಿಸುತ್ತಿಲ್ಲ. ಕೋಮುವಾದಿಗಳು ಅಲ್ಪ ಪ್ರಮಾಣದಲ್ಲಿ ಇದ್ದಾರೆ. ಕೇವಲ ೩೩ ಶೇಕಡಾ ಮತ ಅವರಿಗೆ ಲಭಿಸಿದೆ. ಬಾಕಿ ಅವರಿಗೆ ವಿರುದ್ಧ ಮತಗಳು ಹರಿಹಂಚಾಗಿ ಹೋದ ಕಾರಣ ಅವರಿಗೆ ಶಕ್ತಿ ಲಭಿಸಿತು. ಅಂದರೆ  ಇತರರ ಒಡಕು ಅವರ ಶಕ್ತಿಯಾಗಿದೆ. ನಮ್ಮ ದೌರ್ಬಲ್ಯ ಅವರ ಶಕ್ತಿ ಎಂಬುದು ನಾವು ಅರಿಯಬೇಕು.
ಸೋಶಿಯಲ್ ಮಿಡಿಯಾದಲ್ಲಿ ಇಂತಹ ಅಂಶಗಳನ್ನು ನಾವು ಪಸರಿಸಿ ಭಯ ಉತ್ಪಾದಿಸಿ, ಇಂತಹ ಅಂಶಗಳನ್ನು ಹೆಚ್ಚು ಹೆಚ್ಚು ಪಸ್ತಾಪಿಸಿ, ಇಲ್ಲಿ ಮುಸ್ಲಿಮರು ಸುರಕ್ಷಿತರಾಗಬೇಕಾದರೆ ಮುಸ್ಲಿಮರು ಮುಸ್ಲಿಮರ ವಿಷಯಗಳನ್ನು ಮಾತ್ರ ನೋಡಿಕೊಳ್ಳಬೇಕು ಎಂಬ ಚಿಂತನೆ ನಾವು ಪಸರಿಸಿದರೆ, ಸಾಮುದಾಯಿಕವಾಗಿ ಹೀಗೆ ಮಾಡಿದರೆ ಹಿಂದೂ ಮುಸ್ಲಿಂ ಧ್ರುವೀಕರಣ ಎಂಬ ಸಂಘಪರಿವಾರದ ಅಜೆಂಡಾವನ್ನು ನಾವೇ ಕಾರ್ಯಗತಗೊಳಿಸುತ್ತಿದ್ದೇವೆ ಎಂಬುದು ಅದರ ಪರಿಣಾಮವಾಗಿದೆ. ಅದರಿಂದ ನಮಗೆ ಪ್ರಯೋಜನಕ್ಕಿಂತ ಅಪಾಯ ಹೆಚ್ಚು.  ಈ ದೇಶದ ಜಾತ್ಯತೀತ ಮನಸ್ಸಿನವರೂ ನಮಗೆ ವಿರೋಧಿಗಳಾದರೆ ನಂತರ ಅವಸ್ಥೆ ಏನಾಗಬಹುದು.
ನಮ್ಮ ಮುಂದೆ ಎರಡು ದೌತ್ಯಗಳಿವೆ.
1. ನಿಜವಾಗಿ ಮುಸ್ಲಿಮರನ್ನು ನೈಜ ಮುಸ್ಲಿಮರಾಗಿ ಮಾಡಬೇಕು. ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ  ನೀವು ನೋಡಬೇಕು. ಉತ್ತರ ಭಾರತದಲ್ಲಿ ಅವರು ಅಲ್ಲಾಹ್ ರಸೂಲರು ಹೇಳಿದಂತೆ ಜೀವನ ನಡೆಸುತ್ತಿದ್ದಾರೆಯೇ ಎಂದು ನೋಡಬೇಕು. ಆದ್ದರಿಂದ ಅವರನ್ನು ಈಮಾನ್ ಉಳ್ಳವರಾಗಿ ಪರಿವರ್ತನೆ ಮಾಡಬೇಕು. ಅದು ಅಲ್ಲಾಹನ ವಾಗ್ದಾನ ಆಗಿದೆ. ಗೌರವದ ವಾಗ್ದಾನ ಅದಾಗಿದೆ.
ಪ್ರವಾದಿಗಳು ಇಸ್ಲಾಮೀ ಸಂದೇಶದೊಂದಿಗೆ ಮುಂದೆ ಬಂದಾಗ ಶತ್ರುಗಳು ಅವರನ್ನು ಮೂಲೋತ್ಪಾಟನೆ ಮಾಡಲು ಹೊರಟಾಗ ಅವರು ಹೇಳಿದ ಮಾತು " ನೀವು ಈ ಪ್ರದೇಶ ಬಿಟ್ಟು ಹೋಗಬೇಕು ಇಲ್ಲವೇ ನಮ್ಮ ಧರ್ಮಕ್ಕೆ ಮರಳಿ ಬರಬೇಕು " (ಈಗ ನಮ್ಮೊಂದಿಗೆ ಹೇಳಿದಂತೆ). ನಿಮಗೆ ಸಂಶಯ ಇದ್ದರೆ ಇಬ್ರಾಹೀಮ್ ಅ ರವರ ಚರಿತ್ರೆಯನ್ನು ಮನೆಯಲ್ಲಿರುವ ಕುರಾನ್ ತೆಗೆದು ಅರ್ಥ ಸಹಿತ ಓದಿ ನೋಡಿ. ಆಗ ಅಲ್ಲಾಹನ ವಾಗ್ದಾನ. ನಿಮ್ಮನ್ನು ನಾವು ರಕ್ಷಿಸುತ್ತೇವೆ ಎಂಬುದು ಅಲ್ಲಾಹನ ಆಫರ್.  ಈ ಗೌರವ ಅಲ್ಲಾಹನು ಹೇಳಿದಂತೆ ಜೀವಿಸುವವರಿಗೆ ಮಾತ್ರ.  ಆದ್ದರಿಂದ ನಮ್ಮ ಮೊದಲ ಅಜೆಂಡಾ ಈ ಸಮುದಾಯದ ಪ್ರಜ್ಞೆ ಆ ನಿಟ್ಟಿನಲ್ಲಿ ಬೆಳೆಸಬೇಕು.
ಅವರನ್ನು ಸೈದ್ದಾಂತಿಕ ಚಾರಿತ್ಯದ ಮೂಲಕ ಮಾದರಿಗೊಳಿಸಬೇಕು. ಆದ್ದರಿಂದ ಇದು ಸಾಮುದಾಯಿಕ ಭಾವನೆಗಳನ್ನು ಕೆರಳಿಸುವ ಸಮಯವಲ್ಲ ಎಂಬುದು ನಾವು ಚಿಂತಿಸಬೇಕು.
೨.ಎರಡನೇದು ಈಗಾಗಲೇ ಹೇಳಿದ್ದು, ನಾವು ಸೋಶಿಯಲ್ ಮೀಡಿಯಾಗಳ ಮೂಲಕ ಹಲವನ್ನು ಬಡಿಸಲು ಹೊರಟರೆ ಸಂಘಪರಿವಾರದ ಅಜೆಂಡಾ ಸುಲಭ ಆಗುತ್ತದೆ. ಇದರಿಂದ ಶತ್ರುಗಳ ಸಂಖ್ಯೆ ಹೆಚ್ಚಾಗುತ್ತದೆ.
ಪ್ರವಾದಿ ಸ ಮುಂದೆ ಮೂರು ರೀತಿಯ ಜನತೆ ಇತ್ತು.
ಒಂದು ಕಠಿಣ ವಿರೋಧಿಗಳು, ಎರಡನೇಯದು ಪ್ರವಾದಿಯೊಂದಿಗೆ ತಪ್ಪು ಕಲ್ಪನೆ ಇದ್ದವರು ಆದರೆ ಅಷ್ಟೊಂದು ಕಠಿಣರಲ್ಲ. ಮೂರನೇಯವರು ನಿಷ್ಪಕ್ಷಪಾತಿಗಳು.
ಪ್ರವಾದಿ ಸ ನಿಷ್ಪಕ್ಷಪಾತಿಗಳನ್ನು ಶತ್ರುಗಳ ಪಕ್ಷಕ್ಕೆ ಸೇರಿದಂತೆ ಜಾಗ್ರತೆವಹಿಸಿದರು. ತಪ್ಪು ಕಲ್ಪನೆ ಇರುವವರ ತಪ್ಪು ಕಲ್ಪನೆ ದೂರ ಮಾಡಿದರು. ವೈರಿಗಳನ್ನು ಬೇರೆಯೇ ರೀತಿಯಲ್ಲಿ ಯುಕ್ತಿಯಿಂದ ನೋಡಿಕೊಂಡರು. ಆದ್ದರಿಂದ ಶತ್ರುಗಳ ಸಂಖ್ಯೆ ಹೆಚ್ಚಿಸಿ ದ್ವೇಷದ ಮೂಲಕ ಅವರ ಅಜೆಂಡಾಗಳನ್ನು ನಾವು ಈಡೇರಿಸುತ್ತಿದ್ದೇವೆ ಎಂಬುದು ಪ್ರಜ್ಞಾಪೂರ್ವಕ ಅರಿಯಬೇಕು.
ಆದ್ದರಿಂದ ಸಾಮುದಾಯಿಕ ಭ್ರಾಂತಿಯಿಂದ ಭಾರತದಲ್ಲಿ ವಿಭಜನೆ ಈಗಾಗಲೇ ನಡೆದಿದೆ. ಅದಕ್ಕೆ ಮುಸ್ಲಿಮರು ಕಾರಣ ಅಲ್ಲದಿದ್ದರೂ ಅದರಲ್ಲಿ ಸಾಮುದಾಯಿಕ ಭ್ರಾಂತಿಯ ದೊಡ್ಡ ಪಾತ್ರ ಇದೆ. ಆದ್ದರಿಂದ ಆ ಮಾರ್ಗವನ್ನು ಅನುಸರಿಸದೆ ಮಾನವ ಪ್ರೇಮದ ವಕ್ತಾರರಾಗಬೇಕು. ಆದ್ದರಿಂದ ನಿಷ್ಪಕ್ಷಪಾತಿ ಜನ ಸಮೂಹವನ್ನು ನಾವು ಕಳೆಯಬಾರದು. ಅವರ ಸುಖದುಖಗಳಲ್ಲಿ ಪಾಲ್ಗೊಳ್ಳಬೇಕು. ಅವರೊಂದಿಗೆ ಮಾನವ ಸಂಬಂಧವನ್ನು ಬಲಪಡಿಸಬೇಕು. ನೀವು ಅವರ ಭರವಸೆಯಾದರೆ ಅವರೂ ನಿಮ್ಮ ಭರವಸೆಯಾಗುತ್ತಾರೆ‌ ಪರಸ್ಪರ ನಂಬಿಕೆ ವಿಶ್ವಾಸ ಬಲಗೊಳ್ಳುತ್ತದೆ. ಆದ್ದರಿಂದ ಆಗ ಯಾವ ಕೋಮುವಾದಿ ಅಜೆಂಡಾವು ವಿಜಯಗಳಿಸುವುದಿಲ್ಲ.
ಕೊನೆಗೆ ಅಲ್ಲಾಹನ ಮೇಲೆ ಭರವಸೆ ನಷ್ಟ ಹೊಂದ ಬಾರದು. ನಮ್ಮ ಭರವಸೆ ಕೋಮುವಾದದ ಭರವಸೆ ಆಗಬಾರದು. ಹೇಳುವುದನ್ನು ಪ್ರತಿಭಟಿಸುವುದನ್ನು ನಿಲ್ಲಿಸಬೇಕು ಎಂದಲ್ಲ. ಬದಲಾಗಿ ಅದರ ರೀತಿ ನೀತಿಗಳನ್ನು ಯುಕ್ತಿಯನ್ನು ನಾವು ಅರಿಯಬೇಕು.
ಅಲ್ಲಾಹ್ ನಮ್ಮ ರಕ್ಷಕ ಆಗಿರುವಾಗ ಭಯ ಪಡಬೇಕಾದ ಅವಶ್ಯಕತೆ ಇಲ್ಲ. ನಾವು ಅವನಿಗೆ ಸಹಾಯ ಮಾಡಿದರೆ ಅವನು ನಮಗೆ ಸಹಾಯ ಮಾಡುತ್ತಾನೆ. ನಮ್ಮ ಪಾದಗಳಿಗೆ ಸ್ಥೈರ್ಯ ನೀಡುತ್ತಾನೆ. ಆದ್ದರಿಂದ ಶತ್ರುಗಳ ಕುತಂತ್ರಕ್ಕೆ ಬಲಿಯಾಗಬಾರದು. ನಾವು ನಿರಾಶರೂ ಆಗಬಾರದು. ಸೂರ ನೂರ್ ನಲ್ಲಿ ಅಲ್ಲಾಹನು ವಾಗ್ದಾನ ನೀಡುತ್ತಾನೆ. ಇಂದಿನ ಪರಿಸ್ಥಿತಿ ಹೋಗಿ ಒಂದು ಉತ್ತಮ ನಾಳೆ ಬರಲಿದೆ. ಅಲ್ಲಿ ಹೊಸ ಸಮಾಜ ಉಂಟಾಗುತ್ತದೆ. ಅದು ಉತ್ತಮ ದಿನವಾಗಿರುತ್ತದೆ. ಆ ಧೈರ್ಯ ಸ್ಥೈರ್ಯ ವಿಶ್ವಾಸ ನಮಗಿರಬೇಕು. ನಾವು ವಾಮ ಮಾರ್ಗ ಅನುಸರಿಸಿದರೆ ಅಪಾಯ ಇದೆ. ಅದಕ್ಕೆ ದೊಡ್ಡ ಬೆಲೆ ತೆರಬೇಕಾಗಬಹುದು. ಆ ನಾಶದಿಂದ ನಮಗೆ ಹಿಂದಿರುಗಲು ಸಾಧ್ಯವಾಗದು. ಈ ಬಗ್ಗೆ ಶಾಂತವಾಗಿ ಚಿಂತಿಸಬೇಕು‌. ನಮ್ಮ ಪ್ರತಿರೋಧ ಹೇಗಿರಬೇಕು ಎಂಬ ಬಗ್ಗೆ ಚಿಂತಿಸಿ. ಅಲ್ಲಾಹನು ನಮಗೆ ಮಾರ್ಗದರ್ಶನ ಮಾಡಲಿ ಆಮೀನ್.