ಶುಕ್ರವಾರ, ಜೂನ್ 9, 2017

ಮಾಧ್ಯಮ ಪಿನ್ನೆ ಬ್ಯಾರಿ ಸಮುದಾಯ


📝ಉಮರ್ ಯು. ಹೆಚ್.

“1947ಲ್ ವಾಟ್ಸಾಪ್ ಇಲ್ಲಾಂತ್. ಇದ್ ನಲ್ಲೆದ್‍ಗೆ. ಇನ್ನ್ ರೆಂಗ್ ಸ್ವಾತಂತ್ರ್ಯ ಹೋರಾಟತ್ತ್ ಗ್ ಆರುಂ ಬೀದಿಗ್ ಬರಲಾಂತ್. ಎಲ್ಲಾರುಂ ಔತುಲು ದಿಚ್ಚಿತ್ತ್  ‘ಈ ಸಂದೇಶ ಬ್ರಿಟಿಷ್‍ರಂಕ್ ಎತ್ತುಂ ತೋಲೊ ಫೋರ್ವಾರ್ಡ್ ಆಕೊರು’ ಚೆಂತ್ ಮೆಸೇಜ್ ಕಡ್ತಿಯೋಂಟಿಕ್ಕಾತಾರ್.” ಇದ್ ಇಪರತ್ತ್‍ಗ್ ವಾಟ್ಸಾಪ್‍ಲು ವೈರಲ್ ಆಯೋ ಒರು ಜೋಕು.

ಬ್ಯಾರಿ ಸಮುದಾಯತ್ತ್‍ಲ್ ಪ್ರತಿಭಾವಂತ, ಸೃಜನಶೀಲ ಎಲ್ತ್ ಗಾರ್ ಚಮ್ಮೆ ಉಲ್ಲಾರ್. ಆಯೆಂಗಾ ಒರ್ಕೊರ್ಕ ಅಙ ಎಲ್ದ್ ರೊ ಎಲ್ತ್ ಙ ನೋಕುಂಬೊ ನಿರಾಸೆ ಆವುರು. ದಿಕ್ಕ್ ದೆಸೆ ಇಲ್ಲಾಮಾರ್ ಮನಸ್ಸ್ ಗ್ ಬನ್ನೆದೆಲ್ಲಾ ಎಲ್ದಿತ್ತ್ ವಾಟ್ಸಾಪ್‍ಲು ಕಡ್ತ್‍ರೊ ಒರು ಹಾದತ್ತ್ ನಙಲೊ ಕೊರಿಯ ಬಾಲಕ್ಕಾರ್‍ಗ್ ಉಂಡು. ಆರಾ ಕಡ್ತಿಯೊ ಮೆಸೇಜ್‍ರೊ ಸಮಾ ಓದಾಮಾರ್, ಅದ್ ನೇರಾ ಕಲವಾ ಚೆಂತ್ ನೋಕಾಮಾರ್, ಅದ್ ಕಡ್ತಿಯೆದ್ಲ್ ನಕ್ಕಾವಟ್ಟ್, ನಂಡೊ ಸಮುದಾಯತ್ತ್ ಗಾವಟ್ಟ್ ಎಂದೆಂಗುಂ ಕೊನ ಉಂಡಾ ಚೆಲ್ರೊ ವಿಮರ್ಶೆ ಆಕ್ಯಾಮಾರ್....ಬ್ಯಾರೆ ಆಲ್‍ಗಾ ಅಲ್ಲೆಂಗ್ ಗ್ರೂಪುಗಾ ಅಙನೆಮೆ ಕಡ್ತಿಕೊಡುಕೊರು ಚಮ್ಮೆ ಆಲ್ಮಾರ್ ಸಮುದಾಯತ್ತ್ ಲ್ ಉಲ್ಲಾರ್.  

ಪೊರ್ರಾಯತುಲ್ಲೊ ಬಾಲಕ್ಕಾರ್ ಈ ಬಿಸಯತ್ತ್ ಲ್ ತೆಲ್ಲ್ ಮುನ್ನೊಲೆ. ಗಲ್ಫ್‌ ಲುಲ್ಲೊ ಬ್ಯಾರಿಂಕ್ ಸ್ವಾಭಾವಿಕಮಾಯಿಟ್ಟ್ ತಂಡೊ ರಾಯ ಪಿನ್ನೆ ಊಡ್ತೊ ಆಲ್ಮಾರೊಟ್ಟುಗು ಭಾವನಾತ್ಮಕ ಸಂಬಂಧ ಉಂಡು. ರಾಯತ್ತ್ ನಡಕ್‍ರೊ ಒರು ಚೆರಿಯೊ ಘಟನೆಂ ಅಙಲೊ ಬೇಗ ಸ್ಪಂದನೆ ಆಕೊಗು, ಅಙಲೊ ಭಾವನೆರೊ ಕೆರಳಿಸೊಗು ಈ ಸಂಬಂಧ ಪ್ರೇರಣೆ ಆಕ್ರೆದ್ ಸಹಜ. ಆಯೆಂಗಾ ರಾಯತ್ತ್ ನಡನ್ನೊ ಏದೆಂಗುಂ ಘಟನೆರೊ ವಾಸ್ತವಾಂಶ ತೆರಿಯಾಮಾರ್ ಅರ್ಸತ್ತೊ ಸಿಪ್ಪತ್ತ್ ಲ್ ಎಂದೆಂಗುಂ ಎಲ್ದಿಯೆಂಗ್ ಅದ್‍ಲ್ ಲಾಬತ್ತೊ ಕಾನ ಯಾರ ನಷ್ಟಮೇ ಆವುರೊ.”ಮಾಧ್ಯಮ ಪಿನ್ನೆ ಬ್ಯಾರಿ ಸಮುದಾಯ” ಚೆಲ್ರೆ ತಲೆ ಕೆಟ್ಟ್ ಗ್ ಈ ಪೀಠಿಕೆ ಎಂದಿಗ್ ಚೆನ್ನೆಂಗ್, ಇಂಡ್ ಮಾಧ್ಯಮ ಚೆಲ್ರೆದ್ ಪೇಪರ್ ಪಿನ್ನೆ ಟಿವಿ ಮಾತ್ರ ಅಲ್ಲ. ಸಾಮಾಜಿಕ ಜಾಲತಾಣ ಆಯೊ ವೆಬ್ ಪೋರ್ಟಲ್, ಫೇಸ್ಬುಕ್, ಟ್ವೀಟರ್, ವಾಟ್ಸಾಪ್.... ಎಲ್ಲೊಂ ಸಂವಹನ ಮಾಧ್ಯಮತ್ತ್ ಗ್ ಸೇರಿಯೊಂಡ್ರು.

*ಪೇಪರ್ ಪಿನ್ನೆ ಟಿವಿ:* ಒರು ಪ್ರಜಾಪ್ರಭುತ್ವ ದೇಶತ್ತೊ ನಡಪಾಟ್‍ರೊ ಮೂನು ಅಂಗಮಾಯೊ ನ್ಯಾಯಾಂಗ, ಕಾರ್ಯಾಂಗ ಪಿನ್ನೆ ಶಾಸಕಾಂಗ ಇನ್ನೊ ಪೋಲೆ ‘ಮಾಧ್ಯಮ’ ಅದ್ರೊ ನಾಲಮತ್ತೊ ಅಂಗ ಚೆಲ್ಡಾರ್. ಮಾಧ್ಯಮ ಚೆಲ್ಡೆದ್ ನ್ಯಾಯಾಂಗ, ಕಾರ್ಯಾಂಗ ಪಿನ್ನೆ ಶಾಸಕಾಂಗ ತಪ್ಪು ಆಕಾತೊ ಪೋಲೆ ಕಾಕ್‍ರೊ ‘ವಾಚ್ ಡಾಗ್’ ಅಲ್ಲೆಂಗ್ ಕಾವಲು ನಾಯಿಂಟುಂ ಚೆಲ್ಡಾರ್. ಮಾಧ್ಯಮ ನಿಶ್ಪಕ್ಷಪಾತ ಧೋರಣೆ ಎಡ್ಕೊನೂಂಟುಂ ಚೆಲ್ಡಾರ್. ಏದೆಂಗುಂ ಮಾಧ್ಯಮತ್ತ್‍ಗ್ ನಿಶ್ಪಕ್ಷಪಾತ ಧೋರಣೆ ಎಡ್ಕೊಗಾವುಲ್ಲೆ, ಅದ್‍ಲಾಯಿಟ್ಟ್ ಪಾವತ್ತಙಲೊ, ಗತಿ ಇಲ್ಲಾತಙಲೊ, ಅನ್ಯಾಯ, ಶೋಷಣೆ, ದಬ್ಬಾಳಿಕೆ, ಅವಮಾನ, ದೌರ್ಜನ್ಯತ್ತ್ ಗ್ ಒಳಗಾಯಙಲೊ ಪರಮೈತ್ ನಿಕ್ಕ್ ರೊ ‘ಪಕ್ಷಪಾತಿ’ ಆವುನೂಂಟು ಚೆಲ್ಡೆಙೊಂ ಉಲ್ಲಾರ್.

ಮಾಧ್ಯಮ ಚೆಲ್ಡೆದ್ ಒರು ಸಮಾಜತ್ತೊ ಮೇಲ್ ನೇರ ಪರಿಣಾಮ ಬೀರೊಕಾವುರೊ ಅದ್‍ರೊಟ್ಟುಗು ಜನಾಭಿಪ್ರಾಯ ಉಂಡಾಕೊಗಾವುರೊ ಒರು ಕ್ಷೇತ್ರ. ಅದ್‍ಲಾಯಿಟ್ಟೆ ಇಂಡ್ ಮಾಧ್ಯಮ ಬಂಡವಾಳಶಾಹಿಮಾರ್, ರಾಜಕೀಯ ಪಕ್ಷಙ, ಬೇರೆ ಬೇರೆ ಧರ್ಮ, ಜಾತಿ, ಸಿದ್ಧಾಂತತ್ತೊ ಆಲ್ಮಾರ್ ಅಙಲೊ ಹಿತಾಶಕ್ತಿರೊ ಒಲ್ಚೊಲೊಗು/ಪ್ರಚಾರ ಆಕೊಗು ಪೇಪರ್ ಅಲ್ಲೆಂಗ್ ಟಿವಿ ಚಾನಲ್ ತೊಡಙಿರಾರ್. ಕೊರಿಯ ಆಲ್ಮಾರ್ ಕಾಸಾಕೊಗಾವುರೊ ಒರು ಕಚ್ಚೋಡ ಚೆಲ್ರೆ ನೆಲೆಲುಂ ಎನಿ ಕೊರಿಯ ಆಲ್ಮಾರ್ ಒರು ಸೇವಾಕ್ಷೇತ್ರ ಚೆಲ್ರೆ ನಲೆಲುಂ ಮಾಧ್ಯಮರಂಗತ್ತ್‍ಗ್ ಪ್ರವೇಶ ಆಯಿರಾರ್.

ಅದ್‍ಲಾಯಿಟ್ಟೆ ಬ್ಯಾರಿ ಸಮುದಾಯತ್ತೊ ಚಮ್ಮೆ ಆಲ್ಮಾರ್ ಎಪ್ಪೋಲೊಂ ದೂರಿಯೋಂಟಿಕ್ಕ್ ರೊ ಇದ್ರೊಮೇ. “ಆ ಟಿವಿ ಸಮ ಇಲ್ಲೆ, ಈ ಪೇಪರ್ ಸಮ ಇಲ್ಲೆ”. ತಾರ್ಕಿಕಮಾಯಿಟ್ಟ್ ಇದ್ರೊ ಒಪ್ಪಿಯೊಲ. ಅಪೆಂಗ್ ಇದ್ರೊ ಸಮ ಆಕ್ರೊ ಆರ್? ಆಯಾ ಪೇಪರ್ ಪಿನೆ ಟಿವಿರಙಮಾ ಅಲ್ಲ ಸರಕಾರಮಾ? ಸರಕಾರ ಸಮ ಆಕ್ರೊ ಎಙನೆ? ವಾಟ್ಸಾಪ್‍ಲು ಒರು ಸಂದೇಶ ಎಲ್ದಿತ್ತ್ ಬ್ಯಾರೆ ಬ್ಯಾರೆ ಗ್ರೂಪುಗು ಕಡ್ತಿಕೊಡ್ಕುರೆಮಾ? ಅಲ್ಲ ಸರಕಾರತ್ತೊ ಗಮನತ್ತ್ ಗ್ ಇದ್ರೊ ಕೊಂಬಂಡೆಮಾ? ಸರಕಾರ ಚೆನ್ನೆಂಗ್ ಪಾರ್ಲಿಮೆಂಟ್ ಪಿನ್ನೆ ವಿಧಾನಸೌಧತ್ತೊ ಮದ್ಲ್ ಅಲ್ಲಲ್ಲೆ? ಸರಕಾರ ಚೆನ್ನೆಂಗ್ ಅದ್ರೊ ಬ್ಯಾರೆ ಬ್ಯಾರೆ ಇಲಾಖೆಙ ಪಿನ್ನೆ ಅದ್‍ಲುಲ್ಲೊ ಅಧಿಕಾರಿಮಾರ್.

ಪೇಪರ್ ಪಿನ್ನೆ ಟಿವಿ ಚೆನ್ನೆಂಗುಂ ಅದ್‍ಲುಲ್ಲೊ ಆಲ್‍ಮಾರೆ. ಈ ದೇಶತ್ತ್ ಲ್ ಮಾತ್ರ ಅಲ್ಲ ನಙಲೊ ರಾಯತ್ತ್‍ಲುಂ ಪತ್ರಿಕಾಧರ್ಮತ್ತೊ ಪಾಲನೆ ಆಕ್ರೊ ಅಲ್ಲೆಂಗ್ ಅದ್ರೊ ಪಾಲನೆ ಆಕೊಗು ಒದ್ದಾಡ್‍ರೊ ಚೆಮ್ಮೆ ನಲ್ಲೊ ಪತ್ರಕರ್ತಮಾರ್, ಅಂಕಣಕಾರ್, ಕಾರ್ಟೂನಿಸ್ಟ್, ಫೊಟೋ ಜರ್ನಲಿಸ್ಟ್, ಪೇಪರ್, ಟಿವಿರಙ ಉಲ್ಲಾರ್. ಅದ್ ಚೆಮ್ಮೆ ಆಲ್ಮಾರ್ಗ್ ಪಿಡಿಲ್ಲೆ. ಅದ್‍ಲಾಯಿಟ್ಟ್ ಎಲ್ಲ ಪೇಪರ್, ಟಿವಿ, ಪತ್ರಕರ್ತಮಾರೊ ಒರೇ ತಿರಾಸ್‍ಲ್ ಇಟ್ಟ್ ತ್ತ್ ತೂಕುರೆದ್ ನಿಪ್ಪಾಟೊನು. ಈ ಬಿಸಯತ್ತ್ ಲ್ ಬ್ಯಾರಿ ಸಮುದಾಯತ್ತ್ ಲ್ ಒರು ಜನಜಾಗೃತಿರೊ ಅಗತ್ಯ ಉಂಡೂಂಟು ಕಾಂಡ್.

ಪೇಪರ್ ಪಿನ್ನೆ ಟಿವಿ ಚಾನಲ್‍ಲ್ ಮುಸ್ಲಿಮ್ ವಿರೋಧಿ, ಇಸ್ಲಾಮ್ ವಿರೋಧಿ, ಜನವಿರೋಧಿ ಸುದ್ಧಿ ಇಲ್ಲೆಂಗ್ ಲೇಖನ ಪ್ರಕಟ ಆಯೋಂಟಿಕ್ಕ್ ರೆದ್ ನೇರೆ. ಅದ್ ಪ್ರಕಟ ಆಯೆಪ್ಪ ಸುರೂಕು ಆಕೊನಾಯೊ ಪನಿ ಆಯಾ ಪೇಪರ್, ಟಿವಿರೊ ಸಂಪಾದಕ ಅಲ್ಲೆಂಗ್ ಸಂಬಂಧಪಟ್ಟೊ ಆಲ್ಮಾರೊ ಗಮನತ್ತ್ ಗ್ ಆ ಬಿಸಯ ಕೊಂಬರೊನು. ಅದ್ ಫೋನ್ ಆಕಿತ್ತ್ ಆಯಿಟಿಕ್ಕ ಅಲ್ಲೆಂಗ್ ಅಙಲೊ ಆಫೀಸ್‍ಗ್ ಸಮುದಾಯತ್ತೊ ಜವಾಬ್ಧಾರಿಯುತ ಆಲ್ಮಾರೊ ನಿಯೋಗ ಭೇಟಿ ಕೊಡ್ಕುರೆದ್ ಆಯಿಟಿಕ್ಕ. ಬ್ಯಾರಿ ಸಮುದಾಯ ಮಾಧ್ಯಮತೊಟ್ಟುಗು ಇಙನೆ ನಿರಂತರ ಸಂಪರ್ಕತ್ತ್ ಲ್ ಇನ್ನೆಂಗ್ ತಪ್ಪುಙ ತಿದ್ದ್ ರೊ, ಮನ್ನೊಲ್ಗು ಅಙಂತೊ ತಪ್ಪು ಆವಾತೊ ಪೋಲೆ ನೋಕ್ಯೊಲುರೊ ಅದ್‍ರೊಟ್ಟುಗು ಇಸ್ಲಾಮ್ ಪಿನ್ನೆ ಮುಸ್ಲಿಮಿಞಲ್ಲೊ ಮೇಲ್‍ಲ್ಲೊ ಚಮ್ಮೆ ತಪ್ಪುಕಲ್ಪನೆಙ ದೂರ ಆವುರೊ ಸಾಧ್ಯತೆ ಉಂಡು.

ಎಲ್ಲ ಪೇಪರ್‍ಲ್ ಸಂಪಾದಕರಿಗೆ ಪತ್ರ ಚೆಲ್ಡೊ ಒರು ಕಾಲಂ ಉಂಡು. ಅದ್ ಉಲ್ಲೊ ಪೇಪರ್ ಓದುರಙಲೊ ಅಭಿಪ್ರಾಯ ಚೆಲ್ಲೊಗು. ವಾಟ್ಸಾಪ್, ಫೇಸ್ಬುಕ್‍ಲು ಗೀಚ್‍ರೊ ಬದಲ್ಗ್ ನಙಲೊ ಬಾಲಕ್ಕಾರ್ ಪೇಪರ್ ಪಿನ್ನೆ ಟಿವಿರೊ ಸಂಪಾದಕ ಮಾರ್ಗ್ ಕಡ್ಲಾಸ್ ಎಲ್ದ್ ರೊ ಹಾದತ್ತ್ ಉಂಡಾಕೊನು. ಒರು ಬಿಸಯತ್ತ್ ಲ್ ಒನ್ನುರೊ ಕಾನ ಯಾರ ಕಡ್ಲಾಸ್ ಒರು ಪೇಪರ್ರೊ ಆಫೀಸ್‍ಗ್ ಪೋಯೆಂಗ್ ಆ ಪೇಪರ್‍ರೊ ಸಂಪಾದಕೀಯ ಮಂಡಳಿರೊ ಮೀಟಿಂಗ್ ಆವುರು. ಎಂದಿಗ್ ಚೆನ್ನೆಂಗ್ ಪೇಪರ್ ಓದುರಙ ಅದ್ರೊ ಗ್ರಾಹಕಮಾರ್. ಓದುರಙಲೊ ಅಭಿಪ್ರಾಯತ್ತ್ ಗ್ ಅತ್ತೆರ್ ಮಹತ್ವ ಉಂಡು.

ಜಂಡಾಮತ್ತೊ ಆಯ್ಕೆ ಉಲ್ಲೊ ಪೊಲೀಸ್ ಇಲಾಖೆಗ್ ದೂರು ಕೊಡ್ಕುರೊ, ಕೇಸ್ ದಾಖಲ್ ಆಕ್ರೊ. ಪೇಪರ್, ಟಿವಿರಙಲೊ ನ್ಯಾಯಾಲಯತ್ತ್ ಗ್ ಬಿಲಿಪಾಟ್ರೊ. ಮೂನಾಮತ್ತೊ ಆಯ್ಕೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾತ್ತ್ ಗ್ ದೂರು ಕೊಡ್ಕುರೊ. ಒರು ಸಮುದಾಯ ಚೆಲ್ಡೊ ನೆಲೆಲ್ ಆದ್ಯತೆರೊ ಪಿನ್ನೆ ಮಹತ್ವ ಕೊಡ್ಕೊನಾಯೊ ಆಯ್ಕೆ ಮಾಧ್ಯಮ ರಂಗತ್ತ್ ಗ್ ಪ್ರವೇಶ ಆವುರೊ. ಸೃಜನಶೀಲ ಬಾಲಕ್ಕಾರ್ ಪತ್ರಿಕೋಧ್ಯಮ ಪಡ್ಚಿತ್ತ್ ಪೇಪರ್ ಪಿನ್ನೆ ಟಿವಿ ಚಾನೆಲ್‍ಗ್ ಸೇರ್‍ರೊ. ಪ್ರಕಟ ಆವಟ್ಟ್ ಆವಾಟಿಕ್ಕಟ್ಟ್ ಬ್ಯಾರೆ ಬ್ಯಾರೆ ಪೇಪರ್‍ಗ್ ಲೇಖನ, ಕವನ. ಕತೆ ಎಲ್ದ್ರೊ. ನಙಲೆದೇ ಆಯೊ ಪೇಪರ್, ಟಿವಿ ಚಾನೆಲ್, ವೆಬ್ ಪೋರ್ಟಲ್ ತೊಡಂಞïರೊ. ಉಲ್ಲೊ ಪೇಪರ್, ಚಾನೆಲ್, ಪೋರ್ಟಲ್, ಎಲ್ತ್ ಗಾರ್ ಗ್ ಪ್ರೋತ್ಸಾಹ ಆಕ್ರೊ.

*ಎಲ್ತ್ ಗಾರ್‍ಗ್ ಸೂಚನೆ:* ಯಾರಮೈತ್ ಬ್ಯಾರಿಙ ಎಲ್ದ್ ರೊ ದೀನ್‍ರೊ ಬಗ್ಗೆ. ದೀನ್‍ರೊ ಬಿಸಯ ಎಲ್ದೊನೆ. ಅದ್‍ರೊಟ್ಟುಗು ಫಿರ್ಕ, ಗ್ರೂಪಿಸಂ, ನಿಸ್ಸಾರಮಾಯೊ ಭಿನ್ನಾಭಿಪ್ರಾಯತ್ತೊ ಬಿಸಯ ಎಲ್ದ್ ರೊ ಅಗತ್ಯ ಉಂಡಾ ಚೆಂತ್ ನಙಲೊ ಎಲ್ತ್ ಗಾರ್ ಆತ್ಮಾವಲೋಕನ ಆಕ್ರೊ ಅಗತ್ಯ ಉಂಡು. ಜೀವಂತ ಸಮುದಾಯತ್ತ್ ಲ್ ಎಪ್ಪೊಂ ಭಿನ್ನಾಭಿಪ್ರಾಯ ಇಕ್ಕ್ ರ್, ಇಕ್ಕೊನೆ. ನಙ ಎಂದ್ ಪ್ರಯತ್ನ ಆಕಿಯೆಂಗುಂ, ಎತ್ತರೆ ಎಲ್ದಿಯೆಂಗುಂ ದೀನ್‍ರೊ ಕೊರಿಯ ಬಿಸಯತ್ತ್ ಲ್ ಏಕಾಭಿಪ್ರಾಯತ್ತ್ ಗ್ ಬರೊಗು ಕಯಾಮನ್ನಾಲ್ ತೋಲೊ ಸಾಧ್ಯಮೇ ಇಲ್ಲೆ ಚೆಲ್ರೆದ್ ನಂಕ್ ಪಿಡಿಕ್ಕೊನು.
ನಙಲೊ ಸಂಘಟನೆ, ನೇದಾವುರೊ ಎತ್ತರೆ ಬೇನೆಂಗುಂ ಪೊಗಲ, ಸಮರ್ಥನೆ ಆಕ. ಅದ್‍ಗ್ ಇನೊರು ಸಂಘಟನೆ, ಅದ್ರೊ ನಾಯಕರೊ ಅವಮಾನ, ತಮಾಷೆ ಆಕ್ರೊ ಅಗತ್ಯ ಉಂಡಾ ಚೆಲ್ರೊ ಚಿಂತನೆ ಆಕೊನು. ಸಮುದಾಯತ್ತೊ ಒತ್ತೊರುಮೆಪ್ಪಾಡ್‍ಗ್ ನಷ್ಟ ಆವುಂಪೋಲ್ತೊ ಎಂದುಂ ಎಲ್ತ್ ಲ್ ಬರಾತೊ ಪೋಲೆ ಜಾಗೃತೆ ಆಕೊನು.

ಉದಯೋನ್ಮುಖ ಬ್ಯಾರಿ ಎಲ್ತ್ ಗಾರೊ ಲೇಖನ, ಕವನ, ಕತೆ ಓದುಂಬೊ ಅಂಕ್ ತರಬೇತಿರೊ ಕೊರತೆ ಉಲ್ಲೊ ಪೋಲೆ ಕಾಂಡ್. ಅಙ ಓದುರೊ ಕೊರೋಡಿಯುಂ ಎಲ್ದ್ವರೊ ಯಾರ ಪೋಲೆ ಕಾಂಡ್. ಎಲ್ತ್ ಲ್ ಸೃಜನಶೀಲತೆ ಬರೊನು, ನಙಲೊ ಎಲ್ತ್ ಓದುರಙಲೊ ಕಲ್ಬುಗು ತಟ್ಟೊನೂಂಟಾಯೆಂಗ್ ಚಮ್ಮೆ ಓದೊನು, ಪಡಿಕೊನು, ಅಧ್ಯಯನ ಆಕೊನು. ಕೊರೋಡಿ ಎಲ್ದೊನು. “ನಂಡೊ ಲೇಖನ ಆ ಪೇಪರ್‍ಗ್ ಕಡ್ತಿರೆ, ಅಙ ಪ್ರಕಟ ಆಕಿತಿಲ್ಲೆ. ಅದ್ ಇಪ್ಪ ಚೆಡ್ಡಿ ಪೇಪರ್ ಐರ್! ನಿಂಕ್ ತೆಲ್ಲ್ ಕೇಕೊಗಾವುಲ್ಲೆ” ಚೆಂತ್ ದೂರು ಚೆಲ್ರೊ ಕೊರಿಯ ಎಲ್ತ್ ಗಾರ್ ಉಲ್ಲಾರ್. ಅಂಕೆಲ್ಲಾ ನಂಡೊ ಜವಾಬು ಇದ್. “ನಂಕ್ ಕುರ್‍ಆನ್, ಹದೀಸ್ ಚೆಲ್ಲಾಮಾರ್ ಲೇಖನ ಎಲ್ದೊಗು ಆವುಲ್ಲೆ. ಸಮಮಾ ತಪ್ಪಾ ಎಲ್ಲ ಪೇಪರ್‍ಗ್ ಅಙಲೆದೇ ಆಯೊ ಒರು ಸ್ಟಾಂಡರ್ಡ್ ಉಂಡು. ನಙಲೊ ಲೇಖನ ಆ ಮಟ್ಟತ್ತ್ ಲ್ ಇಲ್ಲೆಂಗ್ ಅಙ ಅದ್ರೊ ಪ್ರಕಟ ಆಕೊಗಾವುರಾ?”

ಸಾಮಾಜಿಕ ಸಮಸ್ಯೆರೊ ಬಿಸಯತ್ತ್ ಲ್, ಸಮಾಜತ್ತೊ ಎಲ್ಲ ವರ್ಗ, ಜಾತಿ, ಜನಾಂಗತ್ತೊ ಮೇಲ್ ಆಯೋಂಟುಲ್ಲೊ ದಬ್ಬಾಳಿಕೆ, ದೌರ್ಜನ್ಯ, ಶೋಷಣೆರೊ ವಿರುದ್ಧ ಬ್ಯಾರಿ ಎಲ್ತ್ ಗಾರ್ ಪೆನ್ನ್ ಉಪಯೋಗ ಆಕೊನು. ಕನಿಷ್ಠ ನಙಲೊ ಔತುರೊ ಮುಟ್ಟ ಮೋರಿ ಸಮ ಇಲ್ಲೆ, ರೋಡ್ ಸಮ ಇಲ್ಲೆ...ಚೆಲ್ರೊ ಸಂಪಾದಕರಿಗೆ ಪತ್ರ ಎಲ್ದೊಗು ಸುರಾಕೊನು. ಈ ಅವಕಾಶ ಎಲ್ಲ ಮಾಧ್ಯಮತ್ತ್ ಲ್ ಇಂಡುಂ ಉಂಡು. ಅದ್ರೊ ಸದುಪಯೋಗ ಆಕೊನು.

*ವಾಟ್ಸಾಪ್, ಫೇಸ್ಬುಕ್....:*
ಬ್ಯಾರಿ ಬಾಲಕ್ಕಾರ್ ವಾಟ್ಸಾಪ್, ಫೇಸ್ಬುಕ್ ಪಿನ್ನೆ ವೆಬ್ ಪೋರ್ಟಲ್‍ಲ್ ಯಾರ ಎಲ್ದಿಯೋಂಟಿಕ್ಕ್ ರಾರ್. ಇದ್ ನಲ್ಲೊ ಬಿಸಯಮೇ. ಆಯೆಂಗಾ ನಙ ಏದೆಂಗುಂ ಬಿಸಯತ್ತ್ ಲ್ ತಕ್ಷಣತ್ತೊ ಪ್ರತಿಕ್ರಿಯೆ ಕೊಡ್ಕುಂಬೊ ನಙಲೊ ಎಲ್ತ್ ಅಲ್ಲೆಂಗ್ ಅಭಿಪ್ರಾಯತ್ತ್ ಲ್  ತಪ್ಪು ಆವುರೊ ಸಾಧ್ಯತೆ ಉಂಡು. ಅದ್ ಆವಾತೊ ಪೋಲೆ ಜಾಗ್ರತೆ ಆಕೊನು. ಎಲ್ತ್ ಲ್ ಬಳಸ್‍ರೊ ಪ್ರತಿಯೊರು ಶಬ್ಧಂ ಇಂಡ್ ಚೆಮ್ಮೆ ಖಯಾಲ್ ಆಕಿತ್ತೇ ಎಲ್ದೊನಾವುರು. ನಾನ್ ಚೆಲ್ರೊ ಅಭಿಪ್ರಾಯ ಅದ್ ನಂಡೆ ವೈಯಕ್ತಿಕ ಅಭಿಪ್ರಾಯ ಮಾತ್ರ ಚೆಲ್ರೊ ಕಾಲ ಇದಲ್ಲ. ಅದ್ ನಂಡೊ ಸಮುದಾಯತ್ತೊ ಒಟ್ಟು ಅಭಿಪ್ರಾಯಟುಂ, ಇಸ್ಲಾಮ್ ದೀನೇ ಅಙನೇಂಟುಂ ತೀರ್ಮಾನತ್ತ್ ಗ್ ಬಂಡೊ ಸಹೋದರ ಧರ್ಮತ್ತೊ ಓದುರಙ ಉಲ್ಲಾರ್.
ನಙಲೊ ಭಾವನೆರೊ ಕೆರಳಿಸ್‍ತ್ತ್, ಅರ್ಸ ಬರ್ಪಾಟಿತ್ತ್ ರಾಜಕೀಯ ಲಾಭ ಎಡ್ಕ್‍ರೊ ಷಢ್ಯಂತ್ರ ನಡನೋಂಟುಂಡು. ನಙ ಅದ್‍ಗ್ ಬಲಿ ಆವೊಗು ತೀರ. ನಙಲೊ ಶತ್ರು ಆರ್ ಮಿತ್ರ ಆರ್ ಚೆಲ್ರೊ ಫರಕ್ ನಂಕ್ ಪಿಡಿಕ್ಕೊನು. ಶತ್ರುಮಾರ್ ನಂಕ್ ತಂಡೊ ಅಜೆಂಡಾತ್‍ಗ್ ನಙ ಪ್ರತಿಕ್ರಿಯೆ, ಪ್ರತಿಭಟನೆ ಆಕ್ರೆದ್ ನಿಪ್ಪಾಟೊನು. ಅಜೆಂಡಾ ನಙ ತಯಾರ್ ಆಕೊನು. ನಙಲೊ ವಿರೋಧಿಮಾರ್ ಅದ್‍ಗ್ ಜವಾಬ್ ತಂಡೊ ಪೊಲ್ತೊ ವಾತಾವರಣ ನಿರ್ಮಾಣ ಆವೊನು.

ಏದ್ ಸಂದರ್ಭತ್ತ್ ಲುಂ ನಂಕ್ ಅರ್ಸ ಬರಾತೊ ಪೋಲೆ, ಬಾಲಕ್ಕಾರ್ ಉದ್ರೇಕ ಆವಾತೊ ಪೋಲೆ ನೋಕ್ಯೊಲೊನು. ಸಬುರು ನಂಕಿಕ್ಕೊನು. ವಿಮರ್ಶೆ, ದೂರದೃಷ್ಠಿ ಚಿಂತನೆ, ಸಮುದಾಯತ್ತೊ ಅಭಿವೃದ್ದಿಗ್ ಸಲಹೆಙ ನಙಲೊ ಎಲ್ತ್ ಲ್ ಬರೊನು. ಏ ಕಾರಣತ್ತ್ ಗುಂ ಆರೊ ಮನಸ್ಸ್ ಗುಂ ನೊಂಬಲ ಆವಾತೊ ಪೋಲೆ ಜಾಗ್ರತೆ ಆಕೊನು. ಪೆನಙಿಟ್ಟ್, ಅವಮಾನ ಆಕಿಟ್ಟ್ ಆರೊ ಮನಸುಂ ಗೆಂದೊಗು ಸಾಧ್ಯ ಇಲ್ಲೆ, ಸಮಾಜ ಸುಧಾರಣೆ ಆಕೊಗುಂ ಆವಲೆ ಚೆಲ್ರೆದ್ ನಂಕ್ ಪಿಡಿ ಇಕ್ಕೊನು. ಪಿರ್ಸಮೇ ನಙಲೊ ಎಲ್ತ್ ಗಾರೊ ಅಸ್ತ್ರ ಆವೊನು. ನಙಲೊ ದೀನ್ ನಂಕ್ ಪಡಿಪಾಟಿರೊಂ ಅದುವೇ.

ಮಂಗಳವಾರ, ಜೂನ್ 6, 2017

ಧರ್ಮ ಮತ್ತು ನಾವು..*

  *ಹಿಂದೂ ಮುಸಲ್ಮಾನ್ ಅಲಗ್ ಹೈ;ದೋನೋ ಕಾ ಭಗವಾನ್ ಏಕ್ ಹೈ* ಎಂದು ಕವಿಯೊಬ್ಬರು ಬರೆದಿದ್ದಾರೆ.ಹೆಸರುಗಳು ಬೇರೆ ಬೇರೆ ಇರಬಹುದು.ಆದರೆ ದೇವನು ಮಾತ್ರ ಒಬ್ಬನೇ.ಒಂದೊಂದು ಧರ್ಮವೂ ಒಂದೊಂದು ಹೆಸರಿನಿಂದ ಕರೆದುಕೊಂಡಿದೆ.

  ಇಸ್ಲಾಂ ಧರ್ಮದಲ್ಲಿ ಖುರ್'ಆನ್,ಹಿಂದೂ ಧರ್ಮದಲ್ಲಿ ಭಗವದ್ಗೀತೆ,ಕ್ರೈಸ್ತರು ಬೈಬಲ್,ಸಿಖ್ಖರಿಗೆ ಗ್ರಂಥ ಸಾಹೇಬ್....ಅಧಿಕೃತ ಗ್ರಂಥಗಳು.ಯಾವುದೇ ಧಾರ್ಮಿಕ ಗ್ರಂಥವೂ ಪರ-ಧರ್ಮಗಳನ್ನು ಅವಹೇಳನ ಮಾಡುವಂತೆ ಹೇಳುವುದಿಲ್ಲ.ಎಲ್ಲರಿಗೂ ಅವರವರ ಧರ್ಮದ ಮೇಲೆ ಗೌರವ,ಅಭಿಮಾನಗಳಿರುತ್ತದೆ.ಇದು ಸಹಜವೂ ಸಹ.ತನ್ನ ಧರ್ಮದ ಉನ್ನತಿಯನ್ನು ಪ್ರತಿಯೊಬ್ಬನೂ ಬಯಸುತ್ತಾನೆ.ಕೆಲವರು ಕ್ರಿಯಾತ್ಮಕವಾಗಿಯೂ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ.ಇದು ಖಂಡಿತಾ ತಪ್ಪಲ್ಲ.ಆದರೆ ತನ್ನ ಧರ್ಮದ ಉಳಿವಿಗಾಗಿ,ಸಂಘಟನೆಗಾಗಿ ಪರ ಧರ್ಮವನ್ನು ಕೀಳಾಗಿ ಕಾಣುವುದು ತಪ್ಪು. *ಇತರ ಧರ್ಮಗಳ ಮೇಲೆ ನಿಂತು ನಾವು ನಮ್ಮ ಧರ್ಮವನ್ನು ಮೇಲೆತ್ತುವೆವು* ಎಂದು ಹೇಳಿಕೆ ನೀಡುವ ಪ್ರಜ್ಞಾವಂತರು ಎತ್ತ ಸಾಗುತ್ತಿದ್ದಾರೆಂದು ಚಿಂತಿಸಬೇಕಾಗಿದೆ.

  *_ಕೆಲವು ಪೂರ್ವಿಕ ರಾಜರುಗಳಿಗೆ ಇಂದು ಇತಿಹಾಸದಲ್ಲಿ ಉನ್ನತ ಸ್ಥಾನವಿದೆ.ಅವರು ಧರ್ಮ ಸಹಿಷ್ಣುಗಳು.ಇತರ ಧರ್ಮಗಳನ್ನು ಗೌರವ,ಅಭಿಮಾನಗಳಿಂದ ಕಂಡವರು.ಪರ ಧರ್ಮಗಳ ಮೇಲೆ ಆಕ್ರಮಣ ನಡೆಸಿದ ಕಾರಣಕ್ಕೆ ಕೆಲವರು ಚರಿತ್ರೆಯಲ್ಲಿ ಕಪ್ಪು ಚುಕ್ಕೆಯಾಗಿದ್ದಾರೆ.ಇನ್ನು ಕೆಲವು ರಾಜರ,ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆಯನ್ನು ತಿರುಚಿದ ಮತಾಂಧರು ನೈಜ ಚರಿತ್ರೆಯನ್ನೇ ನಾಶ ಮಾಡಿದವರಾಗಿದ್ದಾರೆ._*

   ಜಾತ್ಯಾತೀತ ರಾಷ್ಟ್ರದಲ್ಲಿ ಇಂದು ಕೋಮುವಾದಿ ಪಕ್ಷಗಳು ಮೆರೆಯುತ್ತಿವೆ.ಧರ್ಮ ಮತ್ತು ರಾಜಕೀಯ ಬೇರೆ ಬೇರೆಯೇ ಇರಬೇಕೆಂದು ವಾದಿಸುತ್ತಿದ್ದ ಮಂದಿ ಇಂದು ನಿರ್ದಿಷ್ಟ ಕೋಮುಗಳ ಜನರನ್ನು ಓಲೈಸುತ್ತಿದ್ದಾರೆ.ದೇಶದ ಶಾಂತಿ ಕ್ಷುಲ್ಲಕ ಕಾರಣಗಳಿಗಾಗಿ ಹದಗೆಡುತ್ತಿವೆ.ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಅಖಂಡ ಭಾರತ ವಿಭಜನೆವಾದಿಗಳಿಗೆ ಮಣಿದು ತುಂಡು ತುಂಡಾಗಿ ಹರಿದು ಹೋಗುವುದರಲ್ಲಿ ಸಂಶಯವಿಲ್ಲ.ರಾಷ್ಟ್ರದಲ್ಲಿರುವ ಕೋಮುವಾದಿ ಪಕ್ಷಗಳನ್ನು ನಿರ್ದಾಕ್ಷಿಣ್ಯವಾಗಿ ಬಹಿಷ್ಕರಿಸಿದರೇನೇ ಧರ್ಮ ರಾಜಕೀಯದಿಂದ ದೂರ ಉಳಿದೀತು.

  ನಮ್ಮ ಧರ್ಮದ ಹೆಸರಲ್ಲಿ ರಾಷ್ಟ್ರ ಗುರುತಿಸಲ್ಪಡಬೇಕು.ಅದು ಬಿಟ್ಟರೆ ನಮ್ಮ ಜೀವನದಲ್ಲಿ ಸಾಧಿಸಲು ಏನೇನೂ ಇಲ್ಲ ಎನ್ನುವ *ಮನೋಧರ್ಮಿಗಳು* ನಮ್ಮ ಜೊತೆ ಇರುವುದರಿಂದಲೇ ದೇಶವು ಪ್ರಕ್ಷುಬ್ಧ ಸ್ಥಿತಿಯಲ್ಲಿದೆ.ನಮ್ಮದೇ ಸಹೋದರರ ನೆತ್ತರು ಕ್ಷುಲ್ಲಕ ಕಾರಣಗಳಿಗಾಗಿ ಚೆಲ್ಲುತ್ತಿದೆ.ಕೋಮು ಸೌಹಾರ್ದತೆಯ ಬಗ್ಗೆ ಚಿಂತನಶೀಲರು *ಮಾನವ ಸರಪಳಿ*ಗಳನ್ನು ಬಿಗಿಯುವ ಪರಿಸ್ಥಿತಿ ತಲೆದೋರಿದೆ.

*ಯಾವ ಧರ್ಮವೂ ದೇಶದ ಅಖಂಡತೆಯನ್ನು ಒಡೆದು ರಕ್ತದೋಕುಳಿ ಹರಿಸಿ,ಶಾಂತಿ ಕೆಡಿಸಿ ತಮ್ಮ ಧರ್ಮಕ್ಕೆ ತಳಹದಿ ಹಾಸಬೇಕೆಂದು ಹೇಳುತ್ತಿಲ್ಲ.ವಿಶಾಲ ಧರ್ಮ ಸಹಿಷ್ಣುತೆ ಮತ್ತು ಸಮುದಾಯ ಮೈತ್ರಿಯನ್ನೇ ಎಲ್ಲಾ ಧರ್ಮಾಚಾರ್ಯರೂ, ಪ್ರವಾದಿಗಳೂ ಬೋಧಿಸಿದ್ದು.*

   ಇಸ್ಲಾಮಿನ ಕುರಿತು ತಿಳಿಯದ ಮುಸಲ್ಮಾನ, ಹಿಂದೂ ಧರ್ಮದ ಕುರಿತು ತಿಳಿಯದ ಹಿಂದು,ಕ್ರೈಸ್ತ ಧರ್ಮದ ಬಗ್ಗೆ ತಿಳಿಯದ ಕ್ರೈಸ್ತ ಈ ದೇಶದ ವೈರಿಗಳು.ಇಂದಿನ ಕೋಮು ವಿದ್ವೇಷಿಗಳಿಗೂ ವಿಭಾಜಕ ಕೃತ್ಯಗಳಿಗೂ ಇವರೇ ಮುಖ್ಯ ಕಾರಣ. ಕೋಮುವಾದಿ ಸ್ಪರ್ಧೆಯನ್ನು ಪುಷ್ಟೀಕರಿಸಿ ಪರಸ್ಪರ ಕಚ್ಚಾಡುವಂತೆ ಮಾಡಲು ಈ ಮಂದಿ ಸಮಯ ಕಾಯುತ್ತಿರುತ್ತಾರೆ.ಎಲ್ಲ ಧರ್ಮಗಳಿಗೆ ಸೇರಿದ ನಿರಪರಾಧಿ ಜನರು ಇಂಥ ದುಷ್ಕರ್ಮಿಗಳ ಮತಾಂಧ ಅಗ್ನಿ ಜ್ವಾಲೆಗೆ ಸಿಲುಕಿ ಸಜೀವ ದಹನ ಹೊಂದುತ್ತಾರೆ.

   *ಪಟ್ಟ ಭದ್ರತೆ ಮತ್ತು ಸ್ವಾರ್ಥ ಹಿತಾಸಕ್ತಿಯ ರಕ್ಷಣೆಯು ವಿಜೃಂಭಿಸುತ್ತಿರುವ ಇಂದಿನ ರಾಜಕೀಯದಲ್ಲಿ ಪ್ರಜಾಸತ್ತೆ,ಧರ್ಮ ನಿರಪೇಕ್ಷತೆ,ದೇಶೀಯ ಅಖಂಡತೆ ಮುಂತಾದ ಸಾಂವಿಧಾನಿಕ ಮೌಲ್ಯಗಳು ಕೇವಲ ನಿರರ್ಥಕ ಶಬ್ಧಗಳಾಗಿ ಉಳಿಯುವುದರಿಂದ ದೇಶವು ವ್ಯಾಪಕ ಕೋಮು ದಳ್ಳುರಿಯಿಂದ ತತ್ತರಿಸಲು ಕಾರಣವಾಗುತ್ತದೆ.ಸಕಲರೊಂದಿಗೂ ಅತ್ಯಂತ ಪ್ರೀತಿ-ವಿಶ್ವಾಸಗಳೊಂದಿಗೆ ವರ್ತಿಸಬೇಕೆಂದು ಎಲ್ಲಾ ಧರ್ಮಗಳೂ ಸಾರುತ್ತವೆ.ತಮ್ಮ ಧರ್ಮಗಳ ಆದೇಶಕ್ಕಿಂತ ಮಿಗಿಲಾಗಿ ಆವೇಶ-ಆಕ್ರೋಶಗಳನ್ನು ತೋರ್ಪಡಿಸುವವರು ತಮ್ಮ ಧರ್ಮಕ್ಕೇ ಗಂಡಾಂತರವಾಗಿದ್ದಾರೆ.ದೇಶೀಯ ಐಕ್ಯತೆ ಮತ್ತು ಕೋಮುವಾರು ಮೈತ್ರಿಗೆ ಹೆಚ್ಚಿನ ಮಹತ್ವ ನೀಡಿ ಸಾಮಾಜಿಕ ಒಗ್ಗಟ್ಟು ಮತ್ತು ಭದ್ರತೆಯನ್ನು ಕಾಪಾಡಿಕೊಂಡು ಬಂದ ಬಹಳಷ್ಟು ಮುಸ್ಲಿಂ ಆಡಳಿತಗಾರರು ಇಂದಿನ ತಥಾಕತಿಥ ಇತಿಹಾಸಗಾರರ ದೃಷ್ಟಿಯಲ್ಲಿ ಕೋಮುವಾದಿಗಳಾಗಿ ಚಿತ್ರೀಕರಿಸಲ್ಪಟ್ಟಿರುವುದು ಇತಿಹಾಸದ ಮೇಲೆ ನಡೆದ ಕ್ರೂರ ಅತ್ಯಾಚಾರವಾಗಿದೆ ಮಾತ್ರವಲ್ಲ; ಕೋಮುವಾದಿಗಳನ್ನಾಗಿ ಚಿತ್ರೀಕರಿಸುವುದರಲ್ಲಿ ಪೈಪೋಟಿ ನಡೆಸುತ್ತಿರುವುದು ಇಂದಿನ ಅಶಾಂತಿಗೆ ಮೂಲ ಕಾರಣಗಳಲ್ಲೊಂದಾಗಿದೆ.*

   ಮತಾಂಧತೆಯ ಕುರುಡು ನಿಷ್ಠೆಯಿಂದ ಮಾನವರೊಂದಿಗೆ ಕ್ರೌರ್ಯ ತೋರುವುದನ್ನು ಇಸ್ಲಾಂ ಸಹಿಸುವುದಿಲ್ಲ.ಇತರ ಧರ್ಮಗಳೂ ಅಪವಾದವೇನಲ್ಲ.ಯಾವುದೇ ಕ್ಷುಲ್ಲಕ ಸಮಸ್ಯೆಗಳನ್ನು ಹುಟ್ಟು ಹಾಕಲು ಕೆಲವು ಕಿಡಿಗೇಡಿಗಳು ಸಮಯ ಕಾಯುತ್ತಿರುತ್ತಾರೆ.ವಾಸ್ತವವಾಗಿ ಇದು ನಿರಪರಾಧಿಗಳಾದ ಹಿಂದು-ಮುಸ್ಲಿಮ್ ಸಮುದಾಯಗಳೆರಡರಲ್ಲೂ ಆಳವಾಗಿ ಬೇರು ಬಿಟ್ಟು ಅವರೊಳಗಿದ್ದ ಸ್ನೇಹ-ವಿಶ್ವಾಸಗಳ ಪರಂಪರೆಯನ್ನು ಭಗ್ನಗೊಳಿಸುತ್ತದೆ.ಪರಿಣಾಮವಾಗಿ ಪರಸ್ಪರ ದ್ವೇಷ-ವಿರಸ ಮತ್ತು ಸಂಶಯ ಪ್ರವೃತ್ತಿಗಳಿಗೆ ಇದು ನಾಂದಿಯಾಗುತ್ತದೆ.ಮುಂದೆ ಯಾವುದಾದರೂ ಸಂಶಯದ ಗಾಳಿ ಬೀಸಿತೆಂದಾದರೆ ಒಳಗೇ ಕುದಿಯುತ್ತಿದ್ದ ದ್ವೇಷದ ಕಿಚ್ಚಿಗೆ ತಗಲಿ ಇಡೀ ಸಮಾಜವನ್ನೇ ಬೂದಿ ಮಾಡುತ್ತದೆ.ದೇಶವನ್ನು ಆವರಿಸಿರುವ ಈ ಧಾರ್ಮಿಕ ಉನ್ಮಾದಕ್ಕೆ ಸರಕಾರವು ತನ್ನಿಂದಾದ ಕೊಡುಗೆಯನ್ನು ನೀಡುತ್ತಲೇ ಇದೆ;ಜೊತೆಗೆ ರಾಜಕೀಯ ಸ್ಥಾಪಿತ ಹಿತಾಸಕ್ತಿಗಳು ಮತ್ತು ಕೆಲವು ಭದ್ರತಾಗಾರರ ರಕ್ಷಣೆಯ ಮರೆಯಲ್ಲಿ ವಂಚನೆಯನ್ನು ಪುಷ್ಠೀಕರಿಸುವ ಕರ್ತವ್ಯ ಮರೆತವರೂ ಇದ್ದಾರೆ.

*ಇಂದು ನಮಗೆ ಬೇಕಾಗಿರುವುದು ಮಸೀದಿ,ಮಂದಿರ,ಇಗರ್ಜಿಗಳ ಹೆಸರಿನಲ್ಲಿ ಕಾದಾಟವಲ್ಲ.ಶಾಂತಿ,ಸೌಹಾರ್ದ,ನೆಮ್ಮದಿಗಳೇ ನಮ್ಮ ಮೂಲಭೂತ ಅವಶ್ಯಕತೆಗಳು.ಅದನ್ನು ದುರ್ಬಲಗೊಳಿಸುವ ಯಾರು ಕೂಡಾ ಶ್ರೇಷ್ಠತೆಯನ್ನು ಮೆರೆಸಲು ಸಾಧ್ಯವಿಲ್ಲ. ನಾವು ಆಯಾ ಧರ್ಮದವರೆಂಬ ಭಿನ್ನತೆಯನ್ನು ಮರೆತು ನಾವು ಭಾರತೀಯರೆಂಬ ಐಕ್ಯ ಮಂತ್ರವನ್ನು ಸಾರಬೇಕು.ದೇಶ ನನಗೇನು ನೀಡಿದೆ ಎಂದು ಯೋಚಿಸುವ ಬದಲು ದೇಶಕ್ಕಾಗಿ ನಾನೇನು ಮಾಡಿದೆ ಎಂಬುವುದನ್ನು ಚಿಂತಿಸಬೇಕು.ಇತಿಹಾಸವನ್ನು ವಿಕೃತವಾಗಿ ವ್ಯಾಖ್ಯಾನಿಸಿ ಆದರ್ಶ ವ್ಯಕ್ತಿಗಳನ್ನು ಮತಾಂಧರೆಂದು ಚಿತ್ರೀಕರಿಸಿ ವೈಭವೀಕರಿಸುವ ಕುರುಡು ಮತಾಂಧರು ಎಲ್ಲಾ ಧರ್ಮಗಳ ಬಗ್ಗೆ ಆಳವಾಗಿ ಅಭ್ಯಸಿಸಿ ಧರ್ಮದ ತಾತ್ವಿಕ ಮೌಲ್ಯಗಳನ್ನು ವೈಯುಕ್ತಿಕ ಬದುಕಿನಲ್ಲೂ,ಸಮಾಜದ ಏರಿಳಿತಗಲ್ಲೂ ಅಳವಡಿಸಿಕೊಳ್ಳುವುದೇ ಇಂದಿನ ಮತೀಯ ಸಾಂಕ್ರಾಮಿಕ ಪಿಡುಗಿಗೆ ಮುಖ್ಯ ಚಿಕಿತ್ಸೆ...*
〰〰〰〰〰〰〰〰
✒Ⓜ💲 *ಜಲ್ಲಿ...*

ಸೋಮವಾರ, ಜೂನ್ 5, 2017

ಗಿಡದ ವೃತ್ತಾಂತ

ಗಿಡದ ವೃತ್ತಾಂತ

ನಾನು ಹೈಸ್ಕೂಲ್ ಕಲಿತದ್ದು ಪುತ್ತಿಲ ಪ್ರೌಢ ಶಾಲೆಯಲ್ಲಿ. ಶಾಲೆಯ ಅಕ್ಕ ಪಕ್ಕ ತುಂಬಾ ಅಕೇಶಿಯಾ ಗಿಡಗಳು ಹೇರಳವಾಗಿ ತುಂಬಿಕೊಂಡಿದೆ. ಆಗಷ್ಟೇ ಬೆಳೆದು ಬರುತ್ತಿದ್ದ ಆ ಗಿಡಗಳು ನಮ್ಮ ಹುಡುಗಾಟಿಕೆಯ ವಯಸ್ಸಿಗೆ ಹೇರಳವಾಗಿ ಬಲಿಯಾಗಿದ್ದವು ಕೂಡ. ನಾನಾಗ ಎಸ್ಸೆಲ್ಸಿಯಲ್ಲಿದ್ದೆ. ಸಂಭ್ರಮದ ರಂಝಾನಿನ ಸಮಯ ನಾಲ್ಕಾರು ಅಕೇಶಿಯಾದ ಗಿಡಗಳನ್ನು ಬಗ್ಗಿಸಿ ಕಟ್ಟಿ "ದೊಂಪ" ಮಾಡಿ ಮದ್ಯಾಹ್ನದ ಬಿಡುವಿನ ಹೊತ್ತು ನಾವು ಹುಡುಗರೆಲ್ಲ ಅದರ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದವು. ಹೀಗೆ ವಿಶ್ರಾಂತಿ ಪಡೆದ ಅತಿರೇಕಕ್ಕೆ ಶಾಲೆಯ ಗುಡ್ಡೆಯಲ್ಲಿರುವ ಅಕೇಶಿಯಾ ಗಿಡಗಳೆಲ್ಲ ಭರತ ನಾಟ್ಯ ಮಾಡತೊಗಿದ್ದವು. ಕೆಲವಂತೂ ಸೊಂಟ ಮುರಿದ ಮುದಿಯಜ್ಜಿಯ ತರಹ ಅತ್ತ ಮೇಲೇಳಲೂ ಆಗದೆ ಕೆಳಗೆ ಬೀಳಲೂ ಆಗದೆ ಚಡಪಡಿಸುತ್ತಿದ್ದವು. ನಮ್ಮ ಈ ಹುಚ್ಚಾಟ ಎಷ್ಟು ದಿನ ಸಾಗೀತು? ದೌರ್ಜನ್ಯಕ್ಕೊಳಗಾದ ಅಕೇಶಿಯಾ ಗಿಡಗಳೆಲ್ಲ ಒಂದು ದಿನ ಹೈಸ್ಕೂಲ್ ಹೆಡ್ ಮಾಸ್ತರರಲ್ಲಿ ತಮ್ಮ ಅಹವಾಲು ತೋಡಿಕೊಂಡವು. ಹೆಡ್ ಮಾಸ್ತರರೋ ಖಡಕ್ಕಿನ ಮನುಷ್ಯ. ಮುಖ ಮುತಿ ನೋಡದೆ ಬಾರಿಸಿದ ಏಟಿಗೆ ಆಕಾಶಕ್ಕೆ ತಲುಪಲು ಹೊರಟ ಗಾಳಿಯ ಮರದ ಬೆತ್ತಗಳು ನಮ್ಮ ಅಗೈ ಮೇಲೆ ಅಪ್ಪಚ್ಚಿಯಾಗಿ ಬಿದ್ದಿದ್ದವು. ನಾವೇನು ಸುಮ್ಮನಿರುವವರೇ? ಒಟ್ಟಾರೆ ಏಟು ತಿಂದ ಕೋಪಕ್ಕಕೆ ಆಟದ ಸಮಯ ಮೈದಾನದಲ್ಲಿ "ರಂಝಾನ್ ತಿಂಗಳ ಉಪವಾಸ ಶಾಲೆಯ ಪರಿಸರ ಸರ್ವನಾಶ" ಅಂತ ಘೋಷಣೆಗಳನ್ನು ಕೂಗಿ ಸೇಡು ತೀರಿಸಿಕೊಂಡಿದ್ದೆವು.
               ನನಗೆ ಬಾಲ್ಯದಲ್ಲಿ ಗಿಡ ಬೆಳೆಸುವ ಹುಚ್ಚು ಸ್ವಲ್ಪ ಜಾಸ್ತಿಯೇ ಇತ್ತು. ಎಲ್ಲಾದರೂ ಹೊಸ ಬಗೆಯ ಗಿಡಗಳನ್ನು ಕಂಡರೆ ಅದನ್ನು ಕಿತ್ತು ತಂದು ನಮ್ಮ ಮನೆಯ ಹಿತ್ತಲಲ್ಲಿ ನೆಟ್ಟು ಅದರ ಬೆಳವಣಿಗೆಯನ್ನೇ ನೋಡುತ್ತಿದ್ದೆ. ಶಾಲೆಯ ಸುತ್ತ ಮುತ್ತ ಬೆಳೆಯುತ್ತಿದ್ದ ಒಂದೆರಡು ಅಕೇಶಿಯಾ ಗಿಡಗಳೂ ಅದೇ ಕಾರಣದಿಂದ ನಮ್ಮ ಹಿತ್ತಲಿಗೆ ಬಂದಿದ್ದವು. ಅದೂ ಕೂಡ ಮುಂಗಾರಿನ ವೇಳೆ. ಬಹುಷ ಅವಕ್ಕೆ ನಮ್ಮ ಹಿತ್ತಲಿಗೆ ಬಂದುದು ಸ್ವರ್ಗಕ್ಕೆ ಬಂದಂತೆ ಆಗಿರಬೇಕು ನಿರೀಕ್ಷೆಗೂ ಮೀರಿ ಬೆಳೆಯತೊಡಗಿತ್ತು. ಒಂದೆರಡು ವರ್ಷಗಳಲ್ಲೇ ಅವುಗಳು ಸರಸ ಸಲ್ಲಾಪಕ್ಕೊಳಗಾಗಿ ಹಿತ್ತಲಿನ ತುಂಬೆಲ್ಲಾ ತಮ್ಮ ಮಕ್ಕಳನ್ನು ಸಾಕತೊಡಗಿದ್ದವು. ಕೆಲವು ವರ್ಷಗಳಲ್ಲಿ ಹಿತ್ತಲ ತುಂಬಾ ಅಕೇಶಿಯಾ ಸಾಮ್ರಾಜ್ಯ...
                 ಯಾವುದೂ ಅತಿಯಾಗಬಾರದು ಅನ್ನುತ್ತಾರಲ್ಲಾ ಹಾಗೆಯೇ ಆಯಿತು. ಓರೆಕೋರೆ ಬೆಳೆದವುಗಳೆಲ್ಲ ಅಪ್ಪನ ಕಟ್ಟಿಗೆಯ ಆಸೆಗೆ ಬಲಿಯಾದವು. ಮನೆಯ ಸುತ್ತ ಮುತ್ತ ಕೂಡ ಒಪ್ಪ ಓರಣವಾಯಿತು. ಹಾಗೆಯೇ ಬಲಿಯಾಗಿ ಬಲಿಯಾಗಿ ಕೊನೆಯಲ್ಲಿ ಬೆರಳೆಣಿಕೆಯಷ್ಟು ದಷ್ಟಪುಷ್ಟವಾದ ಮರಗಳು ಮಾತ್ರ ಉಳಿದಿದ್ದವು.ನಾನು ಊರಿಗೆ ಹೋದಾಗಲೆಲ್ಲ ಅವುಗಳನ್ನು ನೋಡಿ ಸಂಭ್ರಮಪಡುತ್ತಿದ್ದೆ. ಶಾಲಾ ದಿನಗಳ ಮೆರೆಯದ ಕುರುಹಾಗಿ ಅವುಗಳು ನನಗೆ ನೆನಪುಗಳನ್ನು ಹೇರಳವಾಗಿ ಕಟ್ಟಿಕೊಡುತ್ತಿದ್ದವು. ಈಗ ಇತ್ತೀಚೆಗೆ ಗೆಳೆಯ ಪ್ರಗತ್ ಬರೆದ ಸಾಮಾಜಿಕ ಕಳಕಳಿಯ ಲೇಖನವೊಂದು ಭಾರಿ ಸುದ್ದಿಮಾಡಿತು. ಅದೇನೆಂದರೆ ಆ ಲೇಖನದಲ್ಲಿ ಅಕೇಶಿಯಾ ಗಿಡಗಳು ಪರಿಸರಕ್ಕೆ ಮಾರಕ ಅನ್ನುವುದು! ಅಕೇಶಿಯ ಗಿಡಗಳು ಯಥೇಚ್ಛವಾಗಿ ನೀರನ್ನು ಕುಡಿಯುತ್ತವಂತೆ. ಆದ್ದರಿಂದ ಅಕೇಶಿಯಾ ಗಿಡಗಳನ್ನು ಕಡಿಯಬೇಕೆಂದೂ ಮತ್ತು ಆ ಗಿಡಗಳನ್ನು ಬೆಳೆಸಬಾರದೆಂದೂ ಸಾಕ್ಷಿ ಸಮೇತ ನಿರ್ದೇಶನವಿತ್ತು.
ಈಗ ಚಿಂತೆಗೆ ಬೀಳಬೇಕಾದ ಸಂದರ್ಭ ನನ್ನದು. ಮನೆಯ ಸುತ್ತ ಇರುವ ನಾಲ್ಕಾರು ಮರಗಳನ್ನು ಕಡಿಯುವುದಾ ಬಿಡುವುದಾ? ದ್ವಂದ್ವದಲ್ಲಿಯೇ ವರ್ಷವೂ ಕಳೆಯಿತು. ಇತ್ತೀಚೆಗೆ ಅಣ್ಣ ಜಾಗವನ್ನು ಸಮತಟ್ಟು ಮಾಡಲು ಬುಲ್ಡೋಝರ್ ನುಗ್ಗಿಸಿದಾಗ ಎರಡ್ಮೂರು ಮರಗಳು ಢಮಾರ್ ಆಯಿತು ಅಂದ್ಕೊಂಡಿದ್ದೆ ಆದರೆ ಅವು ಬದುಕಿದೆಯಾ ಬಡಜೀವವೇ ಎಂಬಂತೆ ಬಚಾವ್ ಆಗಿದ್ದವು.
       ನಮ್ಮ ಮನೆಯಲ್ಲಿ ಮಳೆಗಾಲದ ಕಟ್ಟಿಗೆಯನ್ನು ಬೇರೆ ಕಡೆಯಿಂದ ಕ್ರಯಕ್ಕೆ ಕೊಂಡು ಪಿಕಪ್ಪಿನಲ್ಲಿ ತುಂಬಿಸಿ ತರುವುದು ವಾಡಿಕೆ. ಆದರೆ ಕಳೆದ ವಾರ ಉಮ್ಮನಿಗೆ ಕರೆ ಮಾಡಿದಾಗ ಕಟ್ಟಿಗೆ ರೆಡಿ ಮಾಡುವ ಸುದ್ದಿ ಸಿಕ್ಕಿತು. ಗ್ಯಾಸ್ ಒಲೆಯ ಜೊತೆ ಎಲೆಕ್ಟ್ರಿಕ್ ಒಲೆಯೂ ಮನೆಯ ಅಡುಗೆ ಕೋಣೆಯಲ್ಲಿ ಜಾಗ ಪಡೆದ ಮೇಲೆ ಕಟ್ಟಿಗೆಯ ಜರೂರತ್ತು ಕಮ್ಮಿ ಆದರೂ ಕೂಡ ಒಂದಷ್ಟು ಕಟ್ಟಿಗೆಯನ್ನು ಕುಯ್ದು ಒಡೆದು ಜೋಡಿಸಿ ಇಡದಿದ್ದರೆ ಮನೆಯ ಎರಡು ಜೀವಗಳಿಗಂತೂ ಕಮ್ಮಿ ತೃಪ್ತಿಯೇ. ಉಮ್ಮನೊಂದಿಗೆ ಕುಶಲೋಪರಿಯ ನಡುವೆ ಕಟ್ಟಿಗೆ ಎಲ್ಲಿಂದ ಅಂದೆ. "ಇತ್ತಲ್ಲ ನಾಲ್ಕು ಏಕೆಸಿ ಮರಗಳು" ಉಮ್ಮನ ಒಮ್ಮತದ ಉತ್ತರಕ್ಕೆ ಎದೆ ಝಲ್ ಎಂದಿತು. ಒಂದೆರಡು ನಿಮಿಷ ಸೂತಕಕ್ಕಾಗಿ ಮೌನವಾಗಿ ಕುಳಿತೆ. ಎಷ್ಟು ಮರಗಳು ಉರುಳಿದವೋ? ಬಾಕಿಯೆಷ್ಟೋ ಇನ್ನಷ್ಟೇ ಹೋಗಿ ನೋಡಬೇಕು. ಮಕಾಡೆ ಮಲಗಿದ ಅಕೇಶಿಯಾ ಮರಗಳು ಅಂತ್ಯ ಸಂಸ್ಕಾರಕ್ಕೆ ಸಿದ್ದಗೊಂಡಿರುವುದನ್ನಾದರೂ ಒಮ್ಮೆ ಹೋಗಿ ನೋಡಿ ಬರಲೇಬೇಕು. ಇರಲಿ ಇವತ್ತು ಪರಿಸರ ದಿನ! ಯಾರು ಎಷ್ಟು ಗಿಡ ನೆಟ್ಟರೋ ಅದರಲ್ಲಿ ಎಷ್ಟು ಬದುಕು ಪಡೆದಾವೋ? ಗಿಡನೆಡುವುದೂ ಕೂಡ ಪ್ರಚಾರದ ಅಮಲೇರಿಸಿಕೊಂಡ ಈ ಕಾಲಕ್ಕೆ ನನ್ನ ಅಂಗಡಿಯ ಓನರಮ್ಮನವರ ಮಹಡಿ ಮೇಲಿನ ಕೈತೋಟಕ್ಕೆ ಈಗಷ್ಟೇ ಒಂದು ಸುತ್ತು ಬಂದೆ, ಎರಡು ವಾರದ ಹಿಂದೆ ನಮ್ಮ ಮನೆಯಿಂದ ತಂದು ಹಾಕಿದ ಕರಿ ಬೇವಿನ ಗಿಡ ಒಂದೆರಡು ಚಿಗುರೊಡೆದು ಹಾಲುಗಲ್ಲದ ಕಂದನಂತೆ ಕಣ್ಣಾಮುಚ್ಚಾಲೆಯಲ್ಲಿ ತೊಡಗಿದ ಮೋಡ ಮತ್ತು ಭಾಸ್ಕರನೊಂದಿಗೆ ನಗು ಹಂಚಿಕೊಂಡು ಮೇಲೇಳುವ ಭರವಸೆಯಲ್ಲಿದೆ.

ಯಂಶ ಬೇಂಗಿಲ ಬೆಂಗಳೂರು

ಶನಿವಾರ, ಜೂನ್ 3, 2017

ಝಕಾತ್

ಭ್ರಷ್ಟಾಚಾರದ ಪ್ರಥಮ ಪಾಠ ದೇವರಿಗೆ ಲಂಚ ಕೊಡುವುದರ ಮೂಲಕ ನಮ್ಮೊಳಗೆ ಇಳಿಯುತ್ತದೆ. ಒಂಥರಾ ಕೆಲಸ ಮಾಡಿಕೊಡು ಇಷ್ಟು ಕೊಡ್ತೀನಿ ಅನ್ನುವ ಮನಸ್ಥಿತಿಯ ಮೂಲ ರೂಪವೇ ಅದು. ಅದರದೇ ಮುಂದುವರಿದ ಭಾಗ ಅಥವಾ ಗಾಢ ಪರಿಣಾಮದ ಕಾರಣ ಸಮಾಜದ ಎಲ್ಲ ಕಡೆಯೂ ಲಂಚ ಕೊಡುವ ಪಡಕೊಳ್ಳುವ ಆಚರಣೆಗೆ ನಾವು ತಳ್ಳಲ್ಪಟ್ಟಿದ್ದೇವೆ.  ಇಲ್ಲಿ ನೈತಿಕತೆ ಅನೈತಿಕತೆಯ ಪ್ರಶ್ನೆಯಿಲ್ಲ, ನ್ಯಾಯ ಅನ್ಯಾಯಗಳ ತಲೆಬಿಸಿಯಿಲ್ಲ. ಒಂದಿಷ್ಟು ದೇವರ ಹುಂಡಿಗೆ ಹಾಕಿದರಾಯಿತು ಎಂಬ ಸುಲಭದ ಪರಿಹಾರದ ಹಾದಿ ಇದ್ದೇ ಇದೆ. ಹೀಗಿರುವ ಸಮಾಜ ಭ್ರಷ್ಟಾಚಾರದಿಂದ ವಿಮುಖವಾಗುವುದು, ಅಥವಾ ವಿಮುಖಗೊಳಿಸುವುದು ಸುಲಭವಲ್ಲ.
    ಮೊತ್ತ ಮೊದಲನೆಯದಾಗಿ ಜನರಿಗೆ ಶಿಕ್ಷಣ ಬೇಕಿರುವುದು ದೇವರು ಅಂದರೆ ನಮ್ಮ ಲೋನ್ ಪಡೆದು ಬದುಕುವವರ ಕೂಟವಲ್ಲ. ನಮ್ಮಿಂದ ಪಡೆದು ಹೊಟ್ಟೆ ತುಂಬಿಸುಕೊಳ್ಳುವ ಅವಶ್ಯಕತೆ ಇರುವವರು ದೇವರು ಎನ್ನುವ ಪರಿಕಲ್ಪನೆ ಅಲ್ಲ. ನಮ್ಮ ಹರಕೆ, ನೈವೇದ್ಯ ,ದರ್ಗಾಗಳ ಮೇಲೆ ಸುರಿವ ಮಲ್ಲಿಗೆ, ಬಕ್ರೀದ್ ನ ಬಲಿ ಯಾವುದೂ ದೇವರನ್ನು ತಲುಪುವುದಿಲ್ಲ. ನಕಲಿ ಬಾಬಾಗಳ ,ಊದುಗಡ್ಡಿ ಸ್ವಾಮೀಜಿಗಳ ಬಳಿ ಜೀವನವೆಂಬ ಊಹಿಸಲಾಗದ ಜಂಜಡದಿಂದ ಬಳಲಿ ಪರಿಹಾರ ಹುಡುಕುವ ಮನುಷ್ಯರಿಗೆ ಇವೆಲ್ಲವನ್ನೂ ಅರ್ಥೈಸುವುದು ಅಷ್ಟು ಸುಲಭವಲ್ಲ ನಿಜ. ಪ್ರತಿಯೊಂದು ಧರ್ಮವೂ ಬಡ ಬಗ್ಗರಿಗೆ ಅಸಹಾಯಕರಿಗೆ ನಿರ್ಗತಿಕರಿಗೆ ನೆರವಾಗುವ ಮೂಲಕ ಧರ್ಮವನ್ನು ಸಂಸ್ಥಾಪಿಸಿ ಎಂದು ಬೋಧಿಸುತ್ತದೆಯೇ ಹೊರತು ನನಗೆ ಕೊಡಿ ಎಂದು ಕೇಳುವಷ್ಟು ಯಾವ ದೇವನೂ ಫಕೀರನಲ್ಲ ಎಂದು ವಿವರಿಸುವುದು ಕಷ್ಟ ಸಾಧ್ಯವಾದಷ್ಟೂ ಕಾಲ ‌ನಮ್ಮ ಭ್ರಷ್ಟತೆ ಹೀಗೆಯೇ ಉಳಿಯುತ್ತದೆ. ಮನುಷ್ಯನ ಸ್ವಾರ್ಥದ ಬೇಲಿಗಳು ದೇವರಿಗೂ ಬಿದ್ದು ಅವನನ್ನೂ ತನ್ನ ಅನುಕೂಲಕ್ಕೆ ಇರುವಂತೆ ಮಾಡಲು ಮನುಷ್ಯನೆಂಬ ಮೂರ್ಖ ಕಂಡುಕೊಂಡಿರುವ ದಾರಿಗಳು ಈ ಹಲವು ತರದ ದೇವರಿಗೆ ಲಂಚ ಕೊಡುವ ವಿಧಾನಗಳು.
   ಬದಲಿಗೆ ಮನುಷ್ಯ ತನ್ನ ಬಳಿಯಿರುವುದನ್ನು ಹೇಗೆ ವ್ಯಯಿಸಬೇಕಿರುವುದು ಎಂದು ಕೇಳುವುದಾದರೆ ಇಸ್ಲಾಂ ಕಲಿಸಿಕೊಡುವ ಝಕಾತ್ ನ ಒಂದು ಉದಾಹರಣೆ ಕೊಡಬಹುದು. ಒಬ್ಬ ವ್ಯಕ್ತಿ ತನ್ನ ಬಳಿಯಿರುವ ಸ್ಥಿರ ಸಂಪತ್ತಿನಿಂದ ಎರಡೂವರೆ ಶತಮಾನದಷ್ಟು ವಾರ್ಷಿಕವಾಗಿ ಕಡ್ಡಾಯ ದಾನ ಮಾಡಬೇಕು. ಅದರ ಅವಕಾಶಿಗಳು ಯಾರು ಎಂದು ಕೇಳಿದರೆ, ಫಕೀರ್, ಮಿಸ್ಕೀನ್, ಸಾಲಗಾರ, ಯಾತ್ರಿಕ ಮತ್ತು ಹೊಸದಾಗಿ ಧರ್ಮ ಸ್ವೀಕರಿಸಿದವರು. ಫಕೀರ್ ಅಂದರೆ ಯಾಚಿಸಿ ಬದುಕುವ ತೀರಾ ಬಡವ, ಮಿಸ್ಕೀನ್ ಅಂದರೆ ಅತ್ತ ಬೇಡಲೂ ಆಗದ ಇತ್ತ ಬದುಕಲೂ ಹೆಣಗುವ ವರ್ಗ, ಸಾಲಗಾರ ,ರೋಗಕ್ಕೆ ಮದ್ದು ಮಾಡಲೋ, ಮಗಳ ಮದುವೆಗೋ ,ನಷ್ಟ ಹೊಂದಿದ ವ್ಯಾಪಾರ ಅಥವಾ ಇನ್ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಲದ ಸುಳಿಗೆ ಸಿಲುಕಿದವನು, ಯಾತ್ರಿಕನೆಂದರೆ ಬದುಕಿನ ಅವಶ್ಯಕತೆ ಗಾಗಿ ಯಾತ್ರೆ ಹೊರಡುವವ, ಕೂಲಿ ದುಡಿಯಲು ಬೆಂಗಳೂರಿಗೆ ಹೋಗಲು ಬಸ್ಸಿಗೆ ದುಡ್ಡಿಲ್ಲದ ಸಂಕಷ್ಟಕ್ಕೀಡಾದವನು ಅಂತನೇ ಇಟ್ಟುಕೊಳ್ಳಿ ಇಲ್ಲಾ ಎಲ್ಲಿಂದಲೋ ಯಾತ್ರೆ ಹೊರಟು ಬಂದು ನಡು ದಾರಿಯಲ್ಲಿ ಸಂಕಷ್ಟಕ್ಕೀಡಾದವನು, ಕೊನೆಯದ್ದನ್ನು ಚರ್ಚಿಸುವುದು ಬೇಡ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅದರ ಸಾರ್ವಜನಿಕ ಚರ್ಚೆ ಅನವಶ್ಯಕವಾದರೂ ನಾಲಕ್ಕು ವರ್ಗಕ್ಕೆ ಸೀಮಿತಗೊಳಿಸಿ ತಪ್ಪು ಮಾಹಿತಿ ನೀಡುವುದು ಬೇಡ ಎಂಬ ಕಾರಣಕ್ಕಾಗಿಯಷ್ಟೇ ಸೇರಿ ಸಿದ್ದೇನೆ.  ಇಲ್ಲಿ ಈ ಮೇಲಿನ ನಾಲಕ್ಕು ವರ್ಗಗಳು ಪ್ರತಿನಿಧಿಸುವ ಸಮಾಜದ ವಿವಿಧ ಸ್ತರಗಳನ್ನು ಒಮ್ಮೆ ಯೋಚಿಸಿ ನೋಡಿ. ದೇವರ ಹುಂಡಿಯಿಂದ, ದರ್ಗಾಗಳ ಚಾದರ ಮಲ್ಲಿಗೆಗಳಿಂದ ನಮ್ಮ ಸಂಪತ್ತು ಹೀಗೆ ವಿನಿಯೋಗಿಸಲ್ಪಟ್ಟರೆ ಸಮಾಜದಲ್ಲಿ ಆಗುವ ಪ್ರೀತಿಯ ಕೊಡುಕೊಳ್ಳುವಿಕೆ ಹೇಗಿರಬಹುದು ? ಅದು ನಮ್ಮ ನಡುವಿನ ಬೇಲಿಗಳನ್ನು ಹೇಗೆ ಕಿತತೆಸೆಯಬಹುದು ? ನಮ್ಮ ಭ್ರಷ್ಟ ಹ್ರದಯಗಳನ್ನು ಹೇಗೆ ಶುಚಿಗೊಳಿಸಬಹುದು ?
  ಇಲ್ಲಾ ಇದೆಲ್ಲಾ ಸಾಧ್ಯವಿದೆ ಎಂದು ಬರೆದೆ ಎಂದಲ್ಲ. ಝಕಾತ್ ಕಡ್ಡಾಯವಾಗಿರುವ ಮುಸ್ಲಿಮನೇ ಪ್ರಾಮಾಣಿಕವಾಗಿ ಪಾಲಿಸದ ವಿಚಾರ ಆಚರಣೆಗೆ ಬಂದೀತು ಎಂಬ ಭ್ರಮೆಯೂ ಅಲ್ಲ. ನನ್ನ ದೇಶ ದೇವರಿಗೆ ಲಂಚ ಕೊಡುವ ಪ್ರಮಾಣಕ್ಕೆ ಬಡವನ ಬದುಕು ಹಸನಾಗಿಸುವ ಸಾಮರ್ಥ್ಯ ವಿದೆ ಎಂಬುದರ ಕಡೆಗೆ ಒಂದು ಆಸೆ ಹೊತ್ತ ನೋಟವಷ್ಟೇ.

(ನನಗೆ ಜ್ಞಾನವಿರುವುದರಿಂದ ನನ್ನ ಧರ್ಮದ ಉದಾಹರಣೆ ಬಳಸಿದೆ. ದಯವಿಟ್ಟು ಅಪಾರ್ಥಗಳು ಬೇಡ. ವೇದಗಳಿಂದ ,ಗೀತೆಗಳಿಂದ, ಬೈಬಲ್ ನಿಂದ ಇಂತಹ ಸತ್ಯಗಳನ್ನು ತೆರೆದು ಮಾತನಾಡುವ ಸಹೋದರರು ಮುಂದೆ ಬರಲಿ ಎಂಬುವುದು ನನ್ನ ಆಸೆಯೂ ಕೂಡ)