ಗುರುವಾರ, ಅಕ್ಟೋಬರ್ 19, 2017

ಬೇಡವೆಂದರೂ ಬಿಡದೀ ಮಾಯೆ-11

ಬೇಡವೆಂದರೂ ಬಿಡದೀ ಮಾಯೆ-11
------- ------- -------
ಸಂಬಂಧಗಳನ್ನು ರಕ್ಷಿಸುವುದು ಸ್ತ್ರೀತ್ವದ ವೈಶಿಷ್ಟ್ಯ, ಅದು ಕುಟುಂಬವೇ ಆಗಿರಬಹುದು ಇಲ್ಲವೇ ಜೀವನ ಆಗಿರಬಹುದು. ಸರ್ವೆಕಲ್‌ ಕ್ಯಾನ್ಸರ್‌ ವಿಷಯಕ್ಕೆ ಬಂದಾಗ ಇದು ಇನ್ನು ತೀವ್ರವಾಗುತ್ತದೆ. ಭಾರತದಲ್ಲಿ ಕ್ಯಾನ್ಸರ್‌ ಸಂಬಂಧಿತ ಕಾಯಿಲೆಯಿಂದ ಸಾವಿಗೆ ಈಡಾಗುವ ಮಹಿಳೆಯರಲ್ಲಿ ಸರ್ವೆಕಲ್‌ ಕ್ಯಾನ್ಯರಿಗೆ (ಸ್ತನ ಕ್ಯಾನ್ಸರ್‌ಗಿಂತಲೂ ಹೆಚ್ಚು) ಬಲಿಯಾಗುತ್ತಿರುವವರೇ ಹೆಚ್ಚು.
ಸರ್ವೆಕ್ಸ್‌ (ಗರ್ಭಕೊರಳು) ನಲ್ಲಿ ಉಂಟಾಗುವ ಕ್ಯಾನ್ಸರ್‌ಗೆ ಸರ್ವೆಕಲ್‌ ಕ್ಯಾನ್ಸರ್‌ ಎನ್ನುತ್ತಾರೆ. ಗರ್ಭಾಶಯದ ಮುಂಭಾಗದಲ್ಲಿರುವ ಭಾಗಕ್ಕೆ ಸರ್ವೆಕ್ಸ್‌ ಎನ್ನುತ್ತಾರೆ.ಯಾವುದೇ ಬಗೆಯ ಸೋಂಕು ಗರ್ಭಾಶಯವನ್ನು ಸೇರುವುದನ್ನು ಈ ಸರ್ವೆಕ್ಸ್‌ ತಡೆಯುತ್ತದೆ.
ಈ ಬಗೆಯ ಕ್ಯಾನ್ಸರ್‌ ವಂಶಪಾರಂಪರ್ಯವಾಗಿ ಬರುವುದಿಲ್ಲ. ಹ್ಯೂಮನ್‌ ಪ್ಯಾಪಿಲೊಮ ವೈರಸ್‌ ಈ  ಕ್ಯಾನ್ಸರಿಗೆಕಾರಣ.
ಎಳೆಯ ಯುವತಿಯರು ಈ ಎಚ್‌ಪಿವಿ ಸೋಂಕಿಗೆ ಈಡಾಗುವ ಸಾಧ್ಯತೆ ಹೆಚ್ಚು. ಭವಿಷ್ಯದಲ್ಲಿ ಇದು ಸರ್ವೆಕಲ್‌ ಕ್ಯಾನ್ಸರ್‌ ಆಗುವ ಸಾಧ್ಯತೆ ಹೆಚ್ಚು. ಆದರೆ ಯಾವುದೇ ವಯೋಮಿತಿಯಿಲ್ಲದೆ ಪ್ರತಿ ಮಹಿಳೆಯೂ ಈ ಕ್ಯಾನ್ಸರಿನ ಅಪಾಯಕ್ಕೆ ಒಳಗಾಗಬಹುದು. ಹಾಗಾಗಿಯೇ ಹುಡುಗಿಯರನ್ನು ಆದಷ್ಟು ಬೇಗ ಇದರಿಂದ ರಕ್ಷಿಸುವುದು ಒಳಿತು.
ಹದಿಹರೆಯದ ಹೆಣ್ಣುಮಕ್ಕಳಿಗೆ ಆದಷ್ಟು ಶೀಘ್ರದಲ್ಲಿ  ಸರ್ವೆಕಲ್‌ ಕ್ಯಾನ್ಸರ್‌ ರೋಗನಿರೋಧಕ ಲಸಿಕೆಯನ್ನು ನೀಡುವುದರಿಂದ ಇದನ್ನು ತಡೆಯಬಹುದು.ಈ ರೋಗ ನಿರೋಧಕ ಲಸಿಕೆಯು ದೇಹದಲ್ಲಿ ಸೋಂಕನ್ನು ತಡೆಯುವ ಆಂಟಿಬಾಡಿಗಳನ್ನು ಉತ್ಪತ್ತಿ ಮಾಡುತ್ತದೆ. ಎಚ್‌ಪಿವಿ ಸೋಂಕು ತಗುಲಿದಾಗ ಈ ಆಂಟಿಬಾಡಿಗಳು ಆ ಸೋಂಕಿನಿಂದ ನಮ್ಮನ್ನು ಕಾಪಾಡುತ್ತವೆ. ವೈರಸ್‌ ಸರ್ವೆಕ್ಸ್ ನ ಮೇಲೆ ದಾಳಿ ಮಾಡಿದಾಗ ,ಅವು ವೈರಸ್‌ಗಳ ಮೇಲೆ ದಾಳಿ ಮಾಡುತ್ತವೆ.
ಎಚ್‌ಪಿವಿ ಸೋಂಕಿನಿಂದ ಸರ್ವೆಕ್ಸ್‌ ಅನ್ನು ರಕ್ಷಿಸುವ ಮೂಲಕ ರೋಗನಿರೋಧಕ ಲಸಿಕೆಯು ಸರ್ವೆಕಲ್‌ ಕ್ಯಾನ್ಸರಿನಿಂದ ರಕ್ಷಣೆ ನೀಡುತ್ತದೆ.ಈ ರೋಗನಿರೋಧಕ ಲಸಿಕೆಯನ್ನು ಆರು ತಿಂಗಳಲ್ಲಿ ಮೂರು ಡೋಸ್‌ಗಳಲ್ಲಿ ನೀಡಲಾಗುತ್ತದೆ. ಇದು ಸುರಕ್ಷಿತ ಮತ್ತು ತಡೆದುಕೊಳ್ಳಬಹುದಾಗಿದೆ. ಲಸಿಕೆ ನೀಡಿದ ನಂತರ ಎಲ್ಲ ರೋಗ ನಿರೋಧಕ ಲಸಿಕೆಗಳಿಗಿರುವಂತೆ ಇದರಲ್ಲೂ ತುಂಬ ಕಡಿಮೆ ತೀವ್ರತೆಯ ಅಡ್ಡಪರಿಣಾಮಗಳು ಆಗಬಹುದು ಉದಾ: ಸ್ವಲ್ಪ ಜ್ವರ, ಸ್ವಲ್ಪ ಊತ ಕಾಣಬಹುದು.
            *                        *                        *
ಭೂತಕಾಲ- ಪತ್ರಿಕೆಯೊಂದರಲ್ಲಿ ಪ್ರಕಟಿತ ಮತ್ತು ಪ್ರತಿಲಿಪಿಯಲ್ಲೂ ಲಭ್ಯವಿರುವ ಈ ಹಳೆಯ ಕಥೆಯನ್ನು ಡೌನ್ ಲೋಡ್ ಮಾಡಲಾಗುತ್ತಿಲ್ಲ, ಇಲ್ಲೇ ಪ್ರಕಟಿಸಿ ಎಂದು ಹಲವರು ಹೇಳಿದ್ದರಿಂದ  ಪ್ರಕಟಿಸುತ್ತಿದ್ದೇನೆ.ನೋಡಿ..ಹ್ಮಾಂ. ಇದೊಂದು ಸತ್ಯಕಥೆ.

ವಿದ್ಯಾರ್ಥಿ ಶಕ್ತಿ-
=======
ಇಲ್ಲ ,ಇದಕ್ಕೊಂದು ಮುಕ್ತಾಯ ಹೇಳಲೇಬೇಕು ಎಂದು ನನಗನಿಸಿಬಿಟ್ಟಿತ್ತು.ಯಾವುದೇ ಕ್ರೀಡೆಯಲ್ಲಾಗಲೀ,ಸಾಂಸ್ಕೃತಿಕ ಚಟುವಟಿಕೆಯಲ್ಲಾಗಲೀ ಪತ್ರಿಕೆಗಳಲ್ಲಿ ಹೆಸರು ಮಾಡದ ಕಾಲೇಜು ಇಂದು ಮುಖಪುಟದಲ್ಲಿ ರಾರಾಜಿಸುತ್ತಿತ್ತು.ಒಬ್ಬ ವಿದ್ಯಾರ್ಥಿಯ ತಲೆಯಿಂದ ನೆತ್ತರು ಬಸಿದಿದ್ದರೆ,ಇನ್ನೊಬ್ಬನ ಮುಖಕ್ಕೆ ರೇಜರ್ ಹಾಕಲಾಗಿತ್ತು.
ಹೊಸ ವಿದ್ಯಾರ್ಥಿ ಸಂಘದ ರಚನೆಗೆ ಪ್ರಕ್ರಿಯೆ ಆರಂಭವಾದಾಗಲೇ ಮುಂದಿನ ಅನಾಹುತದ ಲಕ್ಷಣಗಳು ಸ್ಪಷ್ಟವಾಗಿದ್ದವು.ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಭರ್ಜರಿ ಪೈಪೋಟಿಯಿತ್ತು.ಎಂದಿನ ಚುನಾವಣೆಗಿಂತ ದೊಡ್ಡ ರಂಗುರಂಗಾದ ಬ್ಯಾನರ್ ಗಳಿಂದ ಕ್ಯಾಂಪಸ್ ತುಂಬಿತ್ತು.
ಅಂದೇ ಒಬ್ಬ ಹುಡುಗನನ್ನು ಕೇಳಿದ್ದೆ, ಯಾರ್ಯಾರು ಸ್ಪರ್ಧಿಸಿದ್ದಾರೆ ಅಂತ.
"ಅದೇ ಸಾರ್..ಆ ನಿಖಿಲ್ ಶೆಟ್ಟಿ ಮತ್ತು ಅಮಿತ್,ಜಿ.ಎಸ್ ಪೋಸ್ಟ್ ಗೆ ಕಂಟೆಸ್ಟ್ ಮಾಡ್ತಿದಾರೆ ಸಾರ್.ನಿಖಿಲ್ ಗೆ ತನ್ನ ಜಾತಿ ಓಟು ಮತ್ತು ಸೌತ್ ಕೆನರಾ ಸ್ಟೂಡೆಂಟ್ಸ್ ಸಪೋರ್ಟ್ ಇದೆ.ಅಮಿತ್ ಲೋಕಲ್,ಜೊತೆಗೆ ದುಡ್ಡು ಇರೋ ದೊಡ್ಡ ಕುಳ ಸಾರ್".
ಒಂದೇ ಉಸಿರಿನಲ್ಲಿ ಆತ ನಾನು ಕೇಳಿದ್ದಕ್ಕಿಂತ ಹೆಚ್ಚಿನ ವಿಷಯ ಹೇಳಿಬಿಟ್ಟಿದ್ದ.ನನಗೆ ಆ ಎಲೆಕ್ಷನ್ ,ಓಟು,ಜಾತಿ,ಧರ್ಮ ಅಂದ್ರೆ ಅಲರ್ಜಿ.ಏನಾಗಿದೆ ಈ ಬಿಸಿರಕ್ತದ ಹುಡುಗ್ರಿಗೆ.ಎಂಥೆಂಥ ರ್ಯಾಂಕ್ ಸ್ಟೂಡೆಂಟ್ಸ್ ಈ ಎಂಜಿನಿಯರಿಂಗ್ ಕಾಲೇಜಿನಿಂದ ಹೊರಬಿದ್ದು ದೇಶ- ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ.ಅವರನ್ನ ಯಾಕೆ ಇವರು ಆದರ್ಶವಾಗಿ ತೆಗೆದುಕೊಳ್ಳಲ್ಲ?.ಹೊಲಸು ರಾಜಕೀಯ ಸಂಸ್ಕೃತಿಯನ್ನು,ರೌಡಿಗಳನ್ನು ಅದೆಷ್ಟು ಬೇಗ ಅನುಕರಿಸುತ್ತಾರೆ ! ಅನ್ನಿಸಿತು.ಇವೆಲ್ಲ ನೆನಪಿಗೆ ಬಂದಿದ್ದು ಇವತ್ತಿನ ಪೇಪರ್ ಓದುತ್ತಿದ್ದಾಗಲೇ.ಇನ್ನು ತಡ ಮಾಡಕೂಡದು.ಪ್ರಾಂಶುಪಾಲರ ಬಳಿ ಮಾತಾಡಿ ಪರಿಹರಿಸಲೇಬೇಕು ಅಂದುಕೊಳ್ಳುತ್ತಾ ಕಾರಿನ ಇಗ್ನೀಷನ್ ತಿರುವಿದೆ.
* * * *
ಕಾಲೇಜಿನಲ್ಲಿ ಆಗಲೇ ಗುಸುಗುಸು ಸುದ್ದಿ ಶುರುವಾಗಿಬಿಟ್ಟಿತ್ತು.ನಿನ್ನೆ ರಾತ್ರಿ ಕುಡಿದ ನಶೆಯಲ್ಲಿ ಅಮಿತ್ ಗ್ಯಾಂಗು ನಿಖಿಲ್ ನ ಕಡೆಯವನಿಗೆ ನೆತ್ತಿ ಬಿಚ್ಚುವಂತೆ ಹಾಕಿ ಸ್ಟಿಕ್ ನಲ್ಲಿ ಬಡಿಯಿತಂತೆ.ಆಗ ಸಿಟ್ಟಾದ ನಿಖಿಲ್ ಗ್ರೂಪ್ ಅಮಿತನ ಗೆಳೆಯನ ಮುಖಕ್ಕೆ ರೇಜರ್ ಹಾಕಿತಂತೆ..ಇತ್ಯಾದಿ,ಇತ್ಯಾದಿ.ನಾನು ನೇರವಾಗಿ ಪ್ರಿನ್ಸಿಪಾಲ್ ಚೇಂಬರಿಗೆ ಹೋದೆ.
"ಬನ್ನಿ ಪ್ರೊ. ನಾಗರಾಜು .ಈಗ ತಾನೆ ನಮ್ಮ ಸಂಸ್ಥೆಯ ಅಧ್ಯಕ್ಷರು ಫೋನ್ ಮಾಡಿದ್ರು.ಚುನಾವಣೆ ರದ್ದು ಮಾಡಿ ಮೆರಿಟ್ ಮೇಲೆ ಯೂನಿಯನ್ ಗೆ ಆಯ್ಕೆ ಮಾಡಿ ಅಂತಂದ್ರು.ಎನಂತೀರ ?".
"ತಮಗೆ ತಿಳಿದ ಹಾಗೆ ಮಾಡಿ ಸರ್.ಒಟ್ಟಿನಲ್ಲಿ ಸಮಸ್ಯೆ ಪರಿಹಾರ ಆದರೆ ಸಾಕು" ಅಂದೆ.
ಮೆರಿಟ್ ಪ್ರಕಾರ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಆರಿಸಿದರು.ಕು.ದೀಪಾಳನ್ನು ಜಿ.ಎಸ್ ಆಗಿ ಆಯ್ಕೆ ಮಾಡಿದರು.ಸಂಘದ ಉದ್ಘಾಟನಾ ದಿನಾಂಕವನ್ನು ನಿಗದಿಪಡಿಸಿ ಆಹ್ವಾನ ಪತ್ರಿಕೆಯನ್ನು ಅಚ್ಚಿಗೆ ಕಳುಹಿಸಿದರು.
* * * *
ಅಂದು ಸಮಾರಂಭದ ಹಿಂದಿನ ದಿನ ದೀಪಾ ಪ್ರಿನ್ಸಿಪಾಲ್ ಚೇಂಬರಿಗೆ ಬಂದು ಕಣ್ಣೀರಿಡುತ್ತಾ, "ನಂಗೆ ಈ ಪೋಸ್ಟೂ ಬೇಡ ಎನೂ ಬೇಡ ಸರ್ " ಅಂದಳು.
"ಈಗ ಹಿಂಗಂದ್ರೆ ಹೇಗಮ್ಮ ,ಕಾರ್ಡ್ ಪ್ರಿಂಟಾಗಿದೆ,ಗೆಸ್ಟ್ ಗಳಿಗೆ ಹೇಳಿಯಾಗಿದೆ.ಏನಾಯ್ತು ?" ,ಪ್ರಿನ್ಸಿಪಾಲರು ಆತಂಕಗೊಂಡಿದ್ದರು.
"ಸರ್ ಯಾರೋ ನಿನ್ನೆ ರಾತ್ರಿ ಫೋನ್ ಮಾಡಿ ಅವಾಚ್ಯ ಶಬ್ದಗಳಲ್ಲಿ ನಿಂದಿಸಿ ,ರಾಜಿನಾಮೆ ಕೊಡದಿದ್ರೆ ಪರಿಣಾಮ ನೆಟ್ಟಗಿರೋಲ್ಲ ಅಂದ್ರು.ಜೊತೆಗೆ ನಾಳೆ ಸಮಾರಂಭದಿಂದ ವಿದ್ಯಾರ್ಥಿಗಳನ್ನ ವಾಕ್ ಔಟ್ ಮಾಡಿಸಿ ಅದು ನಡೀದೆ ಇರೋ ಹಂಗೆ ಮಾಡ್ಸಿ ಎಲ್ಲರಿಗೂ ಅವಮಾನ ಆಗೋ ಹಾಗೆ ಮಾಡ್ತೀವಿ ಅಂದರು.ಅಲ್ದೇ ಈ ಪ್ರಜಾಪ್ರಭುತ್ವ ಯುಗದಲ್ಲಿ ಸರ್ವಾಧಿಕಾರಿಯಾಗಿರುವ ಪ್ರಿನ್ಸಿಪಾಲರ ವಿರುದ್ಧ ವಿದ್ಯಾರ್ಥಿ ಸಂಘಟನೆ ಬೆಂಬಲ ತಗೊಂಡು ಚಳುವಳಿ ಮಾಡ್ತೀವಿ ಅಂತಾನು ಅಂದ್ರು ಸರ್."
ಆಗ ಅಲ್ಲಿದ್ದ ನಾನು ಎದ್ದು ನಿಂತು,"ಸರ್, ಈ ವಿಷಯ ನನಗೆ ಬಿಡಿ ,ನೋಡಿ ಮಿಸ್ ದೀಪಾ ನಾಳೆಯ ಸಮಾರಂಭಕ್ಕೆ ಸಿದ್ಧತೆ ನಡೆಸಿ.ನಿಮಗೆ ಮತ್ತು ಈ ಸಮಾರಂಭಕ್ಕೆ ಒಂಚೂರು ಧಕ್ಕೆ ಆಗದೆ ಇರೋ ಹಾಗೆ ನೋಡಿಕೊಳ್ಳೋ ಜವಾಬ್ದಾರಿ ನಂದು" ಅಂತ ಹೇಳಿ ಹೊರಬಂದೆ.
ಕಾಲೇಜ್ ಕ್ಯಾಂಟೀನ್ ಬಳಿ ಅಮಿತ್,ನಿಖಿಲ್ ಗ್ಯಾಂಗ್ ಮರುದಿನದ ಪ್ರೊಗ್ರಾಮ್ ಹಾಳುಮಾಡಲು ಬಲೆ ಹಣೀತಿದ್ರು ಅಂತ ಕಾಣುತ್ತೆ.ನನ್ನ ಕಂಡವರೇ ಮುಖ ತಿರುಗಿಸಿದ್ರು.ಕರೆದು ಅವರಿಬ್ಬರನ್ನೂ ಕಾರು ಹತ್ತಿಸಿಕೊಂಡೆ.ಮಧು ಬನ ಹೋಟೇಲ್ ಗೆ ಹೋದೆವು.ಫ್ಯಾಮಿಲಿಗೆ ರೂಮಿಗೆ ಹೋಗಿ ಕುಳಿತು ಕೊಂಡು ಕಾಫಿ ಆರ್ಡರ್ ಮಾಡಿ ಇಬ್ಬರನ್ನೂ ಕೇಳಿದೆ.ಇದು ಯಾವ ರೂಮು ಗೊತ್ತಾ ಅಂತ.’ಫ್ಯಾಮಿಲಿ ರೂಮು ಸರ’ ಅಂದರು.
"ಟೀಚರ್ಸ್,ಸ್ಟೂಡೆಂಟ್ಸ್ ಅಂದ್ರೆ ಫ್ಯಾಮಿಲಿ ಮೆಂಬರ್ಸ್ ಇದ್ದ ಹಾಗೆ,ಫ್ಯಾಮಿಲಿಯಲ್ಲಿ ಯಾರೇ ತಪ್ಪು ಮಾಡಿದ್ರೂ ಕೆಟ್ಟ ಹೆಸರು ಇಡೀ ಫ್ಯಾಮಿಲಿಗೆ ,ಅಲ್ವಾ"
ಇಬ್ರೂ ತಲೆ ತಗ್ಗಿಸಿ ಕುಳಿತಿದ್ರು.ನಾನು ಏನು ಹೆಳ್ತಾ ಇದೀನಿ ಅನ್ನೋ ವಿಷಯ ಅವರಿಗೆ ಅರಿವಾಗಿತ್ತು.
"ಅಲ್ಲಾ..ರ್‍ಯಾಂಕ್ ಪಡೆದು ಪತ್ರಿಕೇಲಿ ಸುದ್ದಿ ಮಾಡಬಹುದಿತ್ತಲ್ರೋ.ಇಬ್ರೂ ಬಡಿದಾಡಿಕೊಂಡು ಮುಖಪುಟದಲ್ಲಿ ಮಿಂಚಿಬಿಟ್ಟಿರಲ್ಲೋ,ಏನು ಸಿಗ್ತು ನಿಮಗೆ ?,ಈಗ ಫಂಕ್ಷನ್ ಹಾಳುಮಾಡೋಕೆ ಹೊರಟಿದಿರಲ್ಲಾ,ಇದೇನಾ ’ವಿದ್ಯಾರ್ಥಿ ಶಕ್ತಿ’ ?.ನಿಮ್ಮ ಪವರ್ನೆಲ್ಲಾ ಇದಕ್ಕೆ ವೇಸ್ಟ್ ಮಾಡ್ತಿದಿರಲ್ಲಾ.ಈ ಯುವಶಕ್ತಿಯನ್ನ ಸರಿಯಾದ ಚಾನೆಲ್ ನಲ್ಲಿ ಹರಿಬಿಡ್ರೋ.ಭಾವಿ ಎಂಜಿನಿಯರಗಳಾದ ನೀವು ರಾಷ್ಟ್ರ ಕಟ್ಟೊ ಒಳ್ಳೆ ದೃಷ್ಠಿಕೋನ ಇಟ್ಟುಕೊಳ್ಳಿ.ನಿಖಿಲ್ ನಾಳೆ ಕಾರ್ಯಕ್ರಮ ನಿರ್ವಹಣೆ ನಿನ್ನದು.ಅಮಿತ್,ನೀನು ವಂದನಾರ್ಪಣೆ ಮಾಡಬೇಕು, ತಿಳೀತಾ?,
ನಿಮ್ಮ ಮೇಲೆ ನಂಬಿಕೆ ಇದೆ".ಅವರಿಬ್ಬರ ಬೆನ್ನನ್ನೂ ಹಿತವಾಗಿ ಸ್ಪರ್ಶಿಸಿ ಬೀಳ್ಕೊಟ್ಟೆ.
* * * *
ಇಡೀ ಕಾಲೇಜೇ ಸಡಗರದಿಂದ ಇವತ್ತು ಸಿದ್ಧವಾಗಿತ್ತು.ಇದರ ಹಿಂದೆ ಕೇವಲ ವಿದ್ಯಾರ್ಥಿ ಸಂಘದ ಸದಸ್ಯರಲ್ಲದೆ ಇಡೀ ವಿದ್ಯಾರ್ಥಿ ಸಮೂಹದ ಪರಿಶ್ರಮ ಎದ್ದುಕಾಣುತ್ತಿತ್ತು.ಸಮಾರಂಭ ಅದ್ದೂರಿಯಾಗಿ ,ಶಿಸ್ತಿನಿಂದ ನಡೆದು ಕೊನೆಯ ಹಂತ ಮುಟ್ಟಿತು.ನಿಖಿಲ್ ಸುಂದರವಾಗಿ ಕಾರ್ಯಕ್ರಮ ನಿರ್ವಹಿಸಿದ್ದ.ಕೊನೆಯ ಸರದಿ ಅಮಿತ್ ನದು.ಎಲ್ಲರಿಗೂ ವಂದನೆ ಹೇಳಿ ಕೊನೆಗೆ " ಇದು ವಿದ್ಯಾರ್ಥಿ ಸಂಘದ ಉದ್ಘಾಟನೆ ಮಾತ್ರ,ವಾರ್ಷಿಕೋತ್ಸವ ಇದಕ್ಕಿಂತ ಗ್ರ್ಯಾಂಡಾಗಿರುತ್ತೆ." ಆವೇಶದಿಂದ ಹೇಳಿದ್ದ.
ಆಗಲೇ ಸಭಿಕರ ಮಧ್ಯದಿಂದ ಧ್ವನಿಯೊಂದು ತೂರಿಬಂತು.
"ಸ್ಟೂಡೆಂಟ್ಸ್ ಪವರ್"......."ನೇಷನ್ಸ್ ಪವರ್,,,"ಒಕ್ಕೊರಲಿಂದ ಬಂದ ಧ್ವನಿ ಸಭಾಭವನದ ತುಂಬೆಲ್ಲ ಮಾರ್ದನಿಸಿತ್ತು.
ಅಮಿತ್,ನಿಖಿಲ್,ದೀಪಾರ ಕಣ್ಣುಗಳಲ್ಲಿ ಅದೇನೋ ಹೊಳಪಿತ್ತು,ಆನಂದ ಭಾಷ್ಪವಿತ್ತು,ಪ್ರತಿಯೊಬ್ಬರ ಕಣ್ಣುಗಳಲ್ಲಿ ಕೂಡಾ...
= = =
..ಮುಂದುವರೆಯುವುದು..
-ಡಾ.ಅಜಿತ್ ಹರೀಶಿ.