ಶನಿವಾರ, ಜೂನ್ 11, 2016

ಜಡ್ಜ್

ಈಗಷ್ಟೇ ಓದಿದ್ದು...

ಅದೊಂದು ಪುಟ್ಟ ಊರು. ಕೋರ್ಟ್ ನಲ್ಲಿ ಒಂದು ಕೇಸ್ ನ ವಿಚಾರಣೆ ನಡೆಯುತ್ತಾ ಇರುತ್ತೆ. ಆ ಕೇಸ್ ನಲ್ಲಿ ನಮ್ಮ ಗುಂಡಮ್ಮಜ್ಜಿಯನ್ನು ಸಾಕ್ಷಿಯಾಗಿ ಕರೆದಿದ್ದರು.

ಅಷ್ಟೊಂದು ವಯಸ್ಸಾಗಿದೆ ಅಂದ ಮೇಲೆ ಅಷ್ಟು ವಯಸ್ಸಾಗಿದ್ದರೂ ಅವರು ಹುಷಾರಾಗಿ ಇದ್ದಾರೆ .. ಅವರಿಗೆ ಎಲ್ಲ ವಿಷಯ ಗೊತ್ತು.. ಯಡವಟ್ಟಾಗೋದಿಲ್ಲ ಅಂತ ಜಡ್ಜ್ ಗೆ ಮನವರಿಕೆ ಮಾಡಿ ಕೊಡಬೇಕಾಗುತ್ತೆ ಅಲ್ವಾ?

ಹಾಗಾಗಿ ಅಜ್ಜಿಯನ್ನು ಕಟಕಟೆಯಲ್ಲಿ ನಿಲ್ಲಿಸಿದ ನ್ಯಾಯವಾದಿಗಳು ಕೇಳಿದರು "ಅಜ್ಜಿ, ನಿಮಗೆ ನಾನು ಯಾರು ಅಂತ ಗೊತ್ತಾ?"

ಗುಂಡಮ್ಮಜ್ಜಿ ಕೂಲ್ ಆಗಿ ಉತ್ತರಿಸಿದರು "ಗೊತ್ತಿಲ್ಲದೆ ಏನು? ನೀನು ಮೂರ್ತಿ ಅಲ್ವಾ? ಮುಂಡೇದೆ... ನೀನು ಕೂಸಿದ್ದಾಗಿನಿಂದ ನಿನ್ನ ನೋಡಿದ್ದೀನಿ. ಹೇತು ಕೊಳ್ತಾ ಇದ್ದ್ಯ. ಎಷ್ಟು ಸಲ ತೊಳೆದಿಲ್ಲ! ದೊಡ್ಡೋನಾದ್ ಮೇಲೆ ಕಮ್ಮೀನಾ? ಬರೀ ಸುಳ್ಳು ಹೇಳೋದು.. ಹೆಂಡತಿಗೆ ಮೋಸ ಮಾಡಿರೋದು.. ಜನರ ಬೆನ್ನ ಹಿಂದೆ ಮಾತಾಡೋದು.. ನಿನ್ನ ಬಗ್ಗೆ ನನಗೆ ಗೊತ್ತಿಲ್ವಾ? ಪಾಪಿ ಮುಂಡೇದೆ.." ಅಂದರು.

ಮೂರ್ತಿ ತಬ್ಬಿಬ್ಬಾದ. ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ. ಸರಿ.. ಅಲ್ಲಿಯೇ ಇದ್ದ ಡಿಫೆನ್ಸ್ ಲಾಯರ್ ಕಡೆ ಕೈ ತೋರಿಸಿ ಕೇಳಿದ:

"ಹೋಗಲಿ.. ಅಜ್ಜಿ.. ಇವರು ಯಾರು ಅಂತ ಗೊತ್ತಾ?"

"ಅಯ್ಯೋ.. ಇವನು ನಮ್ಮ ಕೃಷ್ಣಸ್ವಾಮಿ ಅಲ್ವೇ... ಕಿಟ್ಟಪ್ಪ ಅಂತ ಇದ್ದೇ.. ಈ ಮುಂಡೇದು ಗೊತ್ತಿಲ್ಲ ಅಂದರೆ ಏನು? ಇವನ್ನೂ ಕೂಸಿದ್ದಾಗನಿಂದ ನೋಡಿದ್ದೀನಿ. ನಮ್ಮ ವಠಾರ ದಲ್ಲಿಯೇ ಇದ್ದಿದ್ದು. ಮುಂಡೇದು.. ಬರೀ ಸೊಂಭೇರಿ.. ಇನ್ನೊಬ್ಬರು ಹೇಳಿದ್ದು ಕೇಳೋದಿಲ್ಲ. ತನ್ನದೇ ತನಗೆ... ಕೆಟ್ಟ ಕುಡುಕ ಬೇರೆ.. ಯಾರ ಹತ್ತ್ರಾನೂ ಸಂಬಂಧ ನೆಟ್ಟಗಿರೋದಿಲ್ಲಾ. ಇಡೀ ಊರಲ್ಲಿರೋ ದರಿದ್ರ ಲಾಯರ್ ಅಂದರೆ ಇವನೇ.. ಹೆಂಡತಿಗೆ ಮೋಸ ಮಾಡಿ 3 ಜನ ಹೆಂಗಸರ ಜೊತೆ ಸಂಬಂಧ ಇಟ್ತ್ಕೊಂಡಿದಾನೆ. ಅದರಲ್ಲಿ ಒಬ್ಬಳು ನಿನ್ನ ಹೆಂಡತಿ.. ಈ ಮುಂಡೆದಾ? ಗೊತ್ತಿಲ್ಲದೆ ಏನು?" ಅಂದರು.

ವಕೀಲ ಮೂರ್ಛೆ ಬೀಳೋದೊಂದೇ ಬಾಕಿ.

ಅಲ್ಲಿಯೇ ಕೂತಿದ್ದ ಜಡ್ಜ್ ಸಾವರಿಸಿಕೊಂಡು ಇಬ್ಬರು ವಕೀಲರನ್ನೂ ಕರೆದರು.. "ನೀವಿಬ್ಬರೂ ಈಡಿಯಟ್ ಗಳು ಈ ಅಜ್ಜೀನ ಏನಾದ್ರೂ "ಈ ಜಡ್ಜ್ ಗೊತ್ತಾ?" ಅಂತ ನನ್ನ ಬಗ್ಗೆ ಕೇಳಿದರೆ.. ನಿಮ್ಮಿಬ್ಬರಿಗೂ ಎಲೆಕ್ಟ್ರಿಕ್ ಕುರ್ಚಿ ಮೇಲೆ ಕೂರಿಸಿಬಿಡ್ತೀನಿ.. ಹುಷಾರು!"

😂😂😂